Homeಅಂತರಾಷ್ಟ್ರೀಯಅಫ್ಘಾನಿಸ್ತಾನದಲ್ಲಿ ಮೈತ್ರಿಗಳು: ಇಲ್ಲಿಂದ ಮುಂದೇನು?

ಅಫ್ಘಾನಿಸ್ತಾನದಲ್ಲಿ ಮೈತ್ರಿಗಳು: ಇಲ್ಲಿಂದ ಮುಂದೇನು?

- Advertisement -
- Advertisement -

ಅಫ್ಘಾನಿಸ್ತಾನದ ಆಡಳಿತವನ್ನು ತಾಲಿಬಾನ್ ಮರಳಿ ಪಡೆದಿದೆ. ಈ ಹೊತ್ತಿನಲ್ಲಿ ಅಫ್ಘಾನಿಸ್ತಾನದ ಹೊಸ ಪ್ರಭುತ್ವದ ಬಗ್ಗೆ ಭಾರತದ ಮುಂದಿನ ಹೆಜ್ಜೆಗಳು ಹೇಗಿರಬೇಕು ಎಂದು ಕೇಳಿಕೊಳ್ಳಬಹುದು. ಭಾರತವು ಆರಂಭದಲ್ಲಿ ಅಫ್ಘಾನಿಸ್ತಾನದೊಂದಿಗೆ ಬಹಳ ಆತ್ಮೀಯ ಸಂಬಂಧವನ್ನು ಹೊಂದಿತ್ತು. ಆದರೆ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ತಲೆ ಎತ್ತುತ್ತಿದ್ದಂತೆ, ಭಾರತದ ನಿಲುವು ಹೆಚ್ಚು ತಂತ್ರಗಾರಿಕೆಯತ್ತ ತಿರುಗಿದೆ.

ಅಫ್ಘಾನಿಸ್ತಾನದಲ್ಲಿ ಭಾರತದ ಮಿತ್ರರು!

ತಾಲಿಬಾನ್ ಆಕ್ರಮಣಕ್ಕೂ ಮೊದಲು, ಅಫ್ಘಾನಿಸ್ತಾನದ ಬಿಡುಗಡೆಗಾಗಿ ಯುನೈಟೆಡ್ ಇಸ್ಲಾಮಿಕ್ ಫ್ರಂಟ್ ಅಥವಾ ಉತ್ತರ ಮೈತ್ರಿಕೂಟವನ್ನು (ನದರನ್ ಅಲಾಯನ್ಸ್) ಭಾರತ ಬೆಂಬಲಿಸಿತ್ತು. ಉತ್ತರ ಮೈತ್ರಿಕೂಟವು ತಾಲಿಬಾನ್ ವಿರುದ್ಧ ಹೋರಾಡಿದ ತುಕಡಿಗಳ ಒಂದು ಸಡಿಲವಾದ ಒಕ್ಕೂಟವಾಗಿತ್ತು. ಅಫ್ಘಾನಿಸ್ತಾನದ ಮೇಲೆ ಅಮೆರಿಕದ ಆಕ್ರಮಣಕ್ಕೂ ಮುನ್ನ ಉತ್ತರ ಮೈತ್ರಿಕೂಟವು (ನದರನ್ ಅಲಿಯನ್ಸ್) ಉತ್ತರ ಮತ್ತು ಪೂರ್ವ ಗಡಿಗಳಲ್ಲಿ ತನ್ನ ಪ್ರಾಬಲ್ಯ ಹೊಂದಿತ್ತು. ತಾಲಿಬಾನ್ ಕಾಬೂಲ್‌ಅನ್ನು ವಶಪಡಿಸಿಕೊಂಡ ನಂತರ ಮತ್ತು 1996ರಲ್ಲಿ ಉತ್ತರ ಮೈತ್ರಿಕೂಟವು ಒಗ್ಗೂಡಿ ಅಫ್ಘಾನಿಸ್ತಾನದ ಆಡಳಿತಗಾರರಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿತು.

ತಾಲಿಬಾನ್ ಅಧಿಕಾರಕ್ಕೇರುವ ಮೊದಲು, ಈಗ ಉತ್ತರ ಮೈತ್ರಿಕೂಟದಲ್ಲಿರುವ ಅನೇಕರು ಪರಸ್ಪರ ವಿರೋಧಿಗಳಾಗಿದ್ದರು ಮತ್ತು ಕಾದಾಡುತ್ತಿದ್ದರು. ಅವರು ತಮ್ಮ ಸಾಮಾನ್ಯ ಶತ್ರುವಿನ ವಿರುದ್ಧ ಹೋರಾಡಲು ಒಟ್ಟುಗೂಡಿದರು. ಉತ್ತರ ಮೈತ್ರಿಕೂಟವು ಹೆಚ್ಚಾಗಿ ಜನಾಂಗೀಯ ಅಲ್ಪಸಂಖ್ಯಾತರನ್ನು ಒಳಗೊಂಡಿತ್ತು. ವಿಶೇಷವಾಗಿ ತಾಜಿಕ್‌ಗಳು ಮತ್ತು ಉಜ್ಬೆಕ್‌ಗಳು. ಅಂದಾಜುಗಳು ಬದಲಾಗುತ್ತಿದ್ದರೂ, ಅಮೆರಿಕದ ಆಕ್ರಮಣಕ್ಕೂ ಮೊದಲು ದೇಶದ ಹತ್ತನೇ ಒಂದು ಭಾಗಕ್ಕಿಂತಲೂ ಕಡಿಮೆ ಭಾಗವನ್ನು ಉತ್ತರ ಮೈತ್ರಿಕೂಟ ನಿಯಂತ್ರಿಸುತ್ತಿತ್ತು.

ಅಫ್ಘಾನಿಸ್ತಾನದಲ್ಲಿ ಇತರ ದೇಶಗಳು ಹೇಗೆ ತಮ್ಮ ಯುದ್ಧಗಳನ್ನು ನಡೆಸಿದವು?

ಅಫ್ಘಾನಿಸ್ತಾನವು ಅನೇಕ ಶಕ್ತಿಗಳ ನಡುವಿನ ಶೀತಲ ಸಮರಗಳ ತಾಣವಾಗಿ ಬದಲಾಗಿ ದಶಕಗಳಾಗಿವೆ. ಭಾರತ ಮತ್ತು ಪಾಕಿಸ್ತಾನ, ಇರಾನ್ ಮತ್ತು ಸೌದಿ ಅರೇಬಿಯಾ, ರಷ್ಯಾ ಮತ್ತು ಅಮೆರಿಕಗಳು ಪರೋಕ್ಷವಾಗಿ 2001 ರವರೆಗೆ, ಅಮೆರಿಕ ತಾಲಿಬಾನಿನ ಮೇಲೆ ಯುದ್ಧ ಘೋಷಿಸಿ, ಆಫ್ಘಾನಿಸ್ತಾನವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದಕ್ಕಿಂತ ಮೊದಲು, ಅಲ್ಲಿ ಪರಸ್ಪರ ಯುದ್ಧ ನಡೆಸಿವೆ. ಅಮೆರಿಕನ್ನರು ಉತ್ತರ ಮೈತ್ರಿಕೂಟಕ್ಕೆ ಬೆಂಬಲವಾಗಿ ಹಣ ಸುರಿದರು ಮತ್ತು ಮೊದಲಿನಿಂದಲೂ ತಾಲಿಬಾನ್‌ಅನ್ನು ವಿರೋಧಿಸುತ್ತಿದ್ದ ಅವರನ್ನು ಸ್ವಾತಂತ್ರ್ಯ ಹೋರಾಟಗಾರರು ಎಂದು ಬಣ್ಣಿಸಲು ಪ್ರಾರಂಭಿಸಿದರು.

ಉತ್ತರ ಮೈತ್ರಿಕೂಟವು ತಾಲಿಬಾನ್ ಜೊತೆಗಿನ ಯುದ್ಧದ ಸಮಯದಲ್ಲಿ ಭಾರತ, ಇರಾನ್ ಮತ್ತು ರಷ್ಯಾಗಳ ಬೆಂಬಲವನ್ನು ಪಡೆದಿತ್ತು. ಅದರ ಕೆಲವು ಸದಸ್ಯರು ಈ ದೇಶಗಳೊಂದಿಗೆ ವಿಶೇಷವಾಗಿ ಆಪ್ತರಾಗಿದ್ದರು. ಉದಾಹರಣೆಗೆ, ಭಾರತದಲ್ಲಿ ಅಧ್ಯಯನ ಮಾಡಿದ ಅವರ ವಿದೇಶಾಂಗ ಸಚಿವ ಅಬ್ದುಲ್ಲಾ ಅಬ್ದುಲ್ಲಾ ಅನೇಕ ಭಾರತೀಯ ಅಧಿಕಾರಿಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದರು. 90ರ ದಶಕದ ಉತ್ತರಾರ್ಧದಲ್ಲಿ ತಾಲಿಬಾನ್ ವಿರುದ್ಧ ಹೋರಾಡಲು ಭಾರತ ಉತ್ತರ ಮೈತ್ರಿಕೂಟಕ್ಕೆ ಹಲವು ರೀತಿಯ ನೆರವು ನೀಡಿತು.

ಅಫ್ಘಾನಿಸ್ತಾನದ ಮೇಲೆ ಅಮೆರಿಕ ಆಕ್ರಮಣ ಮಾಡಿದ ನಂತರ ಭಾರತಕ್ಕೆ ಈ ಸಂಬಂಧಗಳ ಲಾಭ ಪಡೆಯಲು ಸಾಧ್ಯವಾಯಿತು. ಉತ್ತರ ಮೈತ್ರಿಕೂಟವು ಅಮೆರಿಕನ್ ಸರ್ಕಾರದೊಂದಿಗೆ ಕೆಲಸ ಮಾಡುತ್ತಿತ್ತು. ಅದರ ಸದಸ್ಯರಿಗೆ ಹೊಸ ಸರ್ಕಾರದಲ್ಲಿ ಉನ್ನತ ಹುದ್ದೆಗಳನ್ನು ನೀಡಲಾಯಿತು.

ಹೊಸ ಸರ್ಕಾರ ರಚನೆಯಾದಾಗ, ಉತ್ತರ ಮೈತ್ರಿಕೂಟದ ಸದಸ್ಯರು ಪ್ರಬಲ ಸ್ಥಾನಗಳನ್ನು ಪಡೆದರು. ಉತ್ತರ ಮೈತ್ರಿಕೂಟವು ತಾಲಿಬಾನ್‌ನಷ್ಟು ಕ್ರೂರವಾಗಿರದೆ ಇರಬಹುದು ಮತ್ತು ಅವರು ಆ ಮಟ್ಟದ ಮೂಲಭೂತವಾದಿಗಳಾಗಿರದಿದ್ದರೂ, ನಾಗರಿಕ ಜನಸಂಖ್ಯೆಯ ವಿರುದ್ಧ ಅನೇಕ ಯುದ್ಧ ಅಪರಾಧಗಳ ಆರೋಪವನ್ನು ಅದು ಎದುರಿಸುತ್ತಿದೆ. ಅವರೊಂದಿಗೆ ಕೆಲಸ ಮಾಡಿರುವ ಯಾವುದೇ ದೇಶವು ಅಲ್ಲಿನ ಜನರ ಮೇಲಿನ ಹಿಂಸಾಚಾರದಲ್ಲಿ ಭಾಗಶಃ ತಪ್ಪಿತಸ್ಥವಾಗಿರುತ್ತದೆ ಮತ್ತು ಇದು ತಾಲಿಬಾನ್‌ಗೆ ಹೆಚ್ಚಿನ ಬೆಂಬಲಕ್ಕೆ ಕಾರಣವಾಗುತ್ತದೆ.

ಹಿಂದಿರುಗಿದ ಅಮೆರಿಕ ಮತ್ತು ಭಾರತದ ಪ್ರತಿಕ್ರಿಯೆ

ಉಳಿದಿರುವ ಉತ್ತರ ಮೈತ್ರಿಕೂಟದ ಬಿಡಿ ಗುಂಪುಗಳು ಈಗ ಮತ್ತೆ ಒಟ್ಟುಗೂಡುತ್ತಿವೆ ಮತ್ತು ಅಫ್ಘಾನಿಸ್ತಾನವನ್ನು ನಾಗರಿಕ ಅಂತರ್ಯುದ್ಧದ ಸ್ಥಿತಿಗೆ ಮರಳಿ ತರಬಹುದು. ಕನಿಷ್ಠ ಪಕ್ಷ, ಉತ್ತರ ಮೈತ್ರಿಕೂಟದ ಪುನರುತ್ಥಾನವು ಮುಂದುವರೆದ ಹಿಂಸೆಗೆ ಕಾರಣವಾಗುತ್ತದೆ. ಉತ್ತರ ಮೈತ್ರಿಕೂಟವನ್ನು ಬೆಂಬಲಿಸುವಲ್ಲಿ ಭಾರತದ ಅನುಭವವು, ಈ ತಂತ್ರಗಾರಿಕೆ ಎಷ್ಟು ದೂರದೃಷ್ಟಿಯಿಲ್ಲದ್ದು ಎಂಬುದನ್ನು ತೋರಿಸಬೇಕು. ಅಮೆರಿಕದ ಆಕ್ರಮಣದ ಸಮಯದಲ್ಲಿ ಭಾರತವು ತಾತ್ಕಾಲಿಕವಾಗಿ ಲಾಭ ಗಳಿಸಿದರೂ, ಅದಕ್ಕಿದ್ದ ಬೆಂಬಲ ಕಡಿಮೆಯಾಗಿತ್ತು. ಈಗ ಅಫ್ಘಾನಿಸ್ತಾನದ ಜನರು ಭಾರತವನ್ನು ಆಕ್ರಮಣದ ಬೆಂಬಲಿಗರು ಮತ್ತು ತಾಲಿಬಾನ್ ಸರ್ಕಾರದ ಶತ್ರುವಿನಂತೆ ಕಾಣುವ ಸಾಧ್ಯತೆ ಇದೆ.

ಜೂನ್ 2021ರಲ್ಲಿ ದೋಹಾದಲ್ಲಿ ತಾಲಿಬಾನ್ ನಿಯೋಗದೊಂದಿಗೆ ಭಾರತವು ಗೌಪ್ಯ ಮಾತುಕತೆ ನಡೆಸಿತು. ಇದು ಅಮೆರಿಕದ ಆಕ್ರಮಣದ ನಂತರ ಭಾರತವು ತಾಲಿಬಾನ್ ಜೊತೆ ನಡೆಸಿದ ಮೊದಲ ಸಂವಹನವಾಗಿದೆ. ಸಭೆಯ ವಿವರಗಳು ತಿಳಿದಿಲ್ಲ. ಅಧಿಕಾರ ವಹಿಸಿಕೊಂಡ ನಂತರ, ತಾಲಿಬಾನ್ ನೇತೃತ್ವದ ಸರ್ಕಾರವು ವ್ಯಾಪಾರವನ್ನು ಕಡಿತಗೊಳಿಸಲಿದೆ ಮತ್ತು ಭಾರತವು ಕಾಬೂಲ್‌ನಿಂದ ತನ್ನ ರಾಯಭಾರ ಕಚೇರಿಯನ್ನು ಹಿಂತೆಗೆದುಕೊಳ್ಳಲಿದೆ.

ಭಾರತವು ತಾಲಿಬಾನ್ ನೇತೃತ್ವದ ಅಫ್ಘಾನಿಸ್ತಾನವನ್ನು ಪಾಕಿಸ್ತಾನದ ಮಿತ್ರ ರಾಷ್ಟ್ರವಾಗಿ ಮತ್ತು ಭಯೋತ್ಪಾದನೆಗೆ ತರಬೇತಿ ನೀಡುವ ನೆಲೆಯಾಗಿ ನೋಡುತ್ತದೆ. ಸರ್ಕಾರದ ಉದ್ದೇಶವು ಮಾನವ ಹಕ್ಕುಗಳ ಕಾಳಜಿ ಅಥವಾ ಮೂಲಭೂತವಾದದ ಭಯದಿಂದ ಪ್ರೇರೇಪಿಸಲ್ಪಟ್ಟಿಲ್ಲ, ಬದಲಾಗಿ ಅಫ್ಘಾನಿಸ್ತಾನವು ಭೌಗೋಳಿಕ ಮಿಲಿಟರಿ ಪರಿಸ್ಥಿತಿಯ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಮತ್ತು ಭಾರತವು ಅದರೊಂದಿಗೆ ಯಾವ ರೀತಿ ವ್ಯಾಪಾರ ವಹಿವಾಟಿನ ಸಂಬಂಧಗಳನ್ನು ಹಂಚಿಕೊಳ್ಳುತ್ತದೆ ಎಂಬುದರ ಬಗ್ಗೆ. ಆ ಕಳವಳಗಳಿಗೆ, ಈ ಪ್ರದೇಶದಲ್ಲಿ ಬಹುಪಕ್ಷೀಯ ಸಹಕಾರವನ್ನು ಖಚಿತಪಡಿಸಿಕೊಳ್ಳಲು, ಶಾಂತಿ ಮತ್ತು ಪರಸ್ಪರ ಲಾಭದಾಯಕತೆಯನ್ನು ಖಚಿತಪಡಿಸಿಕೊಳ್ಳಲು ಭಾರತವು ನಿಜವಾದ ಜಾಗತಿಕ ಮೈತ್ರಿಕೂಟವನ್ನು ನಿರ್ಮಿಸುವ ಕಡೆಗೆ ಕೆಲಸ ಮಾಡಬೇಕು. ಪ್ರಾಕ್ಸಿ ಯುದ್ಧಗಳು ಮತ್ತು ಪ್ರಾದೇಶಿಕ ಮಿಲಿಟರೀಕರಣವು ವ್ಯತಿರಿಕ್ತ ಪರಿಣಾಮ ಬೀರಬಲ್ಲ ಸಾಧ್ಯತೆಯಿರುತ್ತದೆ.

ಬಹಳ ಹಿಂದಿನಿಂದಲೂ ಭಾರತದ ಅಂತಾರಾಷ್ಟ್ರೀಯ ವಿದೇಶಾಂಗ ನೀತಿಯು ವಿದೇಶಗಳ ಸಾರ್ವಭೌಮತ್ವವನ್ನು ಗೌರವಿಸುವುದಾಗಿದೆ. ಭಾರತವು ಧಾರ್ಮಿಕ ಮೂಲಭೂತವಾದದ ವಿರುದ್ಧ ಹೋರಾಡಲು ಮತ್ತು ಮಾನವ ಹಕ್ಕುಗಳನ್ನು ರಕ್ಷಿಸಲು ಬಯಸಿದರೆ, ಬಹುಪಕ್ಷೀಯ ಜಾಗತಿಕ ಮೈತ್ರಿಯನ್ನು ನಿರ್ಮಿಸುವುದು ಮುಖ್ಯವಾಗುತ್ತದೆ. ಅಲ್ಪಾವಧಿಯಲ್ಲಿ, ತಾಲಿಬಾನ್ ನೇತೃತ್ವದ ಅಫ್ಘಾನಿಸ್ತಾನವು ಪಾಕಿಸ್ತಾನದ ಮಿತ್ರರಾಷ್ಟ್ರವಾಗಿರಲಿದೆ ಎಂಬುದನ್ನು ಭಾರತ ನಿರೀಕ್ಷಿಸಬೇಕು.

ವಿದೇಶಿ ಸರ್ಕಾರಗಳು ಹೇಗೆ ಪ್ರತಿಕ್ರಿಯಿಸಬೇಕು?

ಅಫ್ಘಾನಿಸ್ತಾನವು ದಶಕಗಳಿಂದ ಪ್ರಾಕ್ಸಿ ಯುದ್ಧಗಳ ದಾಳಿಯಲ್ಲಿದೆ. ಅಸಂಖ್ಯಾತ ಇತರ ಪ್ರಕರಣಗಳಂತೆ, ಪ್ರಾಕ್ಸಿ ಯುದ್ಧಗಳು ಪ್ರಗತಿಪರ ಚಳವಳಿಗಳನ್ನು ಹತ್ತಿಕ್ಕಬಹುದು. ವಿಶ್ವಸಂಸ್ಥೆಯು ಅಫ್ಘಾನಿಸ್ತಾನದಲ್ಲಿ ಯಾವುದೇ ಸಕಾರಾತ್ಮಕ ಪಾತ್ರವನ್ನು ವಹಿಸಬೇಕಾದರೆ, ಅಫ್ಘಾನಿಸ್ತಾನದ ಜನರನ್ನು ವಿದೇಶಿ ಪ್ರಾಯೋಜಿತ ಹಿಂಸೆಯಿಂದ ರಕ್ಷಿಸುವುದು ಮೊದಲು ಆದ್ಯತೆಯಾಗಬೇಕು. ಅಂತಾರಾಷ್ಟ್ರೀಯ ನ್ಯಾಯ ಮಂಡಳಿಯು ಮಾನವ ಹಕ್ಕುಗಳ ಉಲ್ಲಂಘನೆಯ ವಿಷಯಗಳಲ್ಲಿ ಮಧ್ಯಪ್ರವೇಶಿಸಲು ಸಿದ್ಧವಾಗಿರಬೇಕು. ನಾಜಿ ಜರ್ಮನಿ, ವರ್ಣಭೇದ ನೀತಿಯ ದಕ್ಷಿಣ ಆಫ್ರಿಕಾ ಮತ್ತು ಇತರ ಹಲವು ಪ್ರಕರಣಗಳಿಗಿಂತ ಭಿನ್ನವಾಗಿ, ಯುದ್ಧ ಅಪರಾಧಗಳ ಕುರಿತು ಅಂತಾರಾಷ್ಟ್ರೀಯು ವಿಚಾರಣೆಯ ಕೂಗನ್ನು ಅಫ್ಘಾನಿಸ್ತಾನದಲ್ಲಿ ಎಂದಿಗೂ ಕೇಳಲಾಗಿಲ್ಲ.

ಅಫ್ಘಾನಿಸ್ತಾನದ ಆಕ್ರಮಣ ಮತ್ತು ಪ್ರಾಕ್ಸಿ ಯುದ್ಧಗಳು ಅಫ್ಘಾನ್ ಜನರಲ್ಲಿ ತಾಲಿಬಾನ್ ಬೆಂಬಲವನ್ನು ಹೆಚ್ಚಿಸಿದೆ. ಯುದ್ಧದೊಳಗೆ ಸಿಕ್ಕಿಬಿದ್ದಾಗ ಜನರಿಗೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಬದಲು ಯಾರ ಪರವಾದ ನಿಲುವು ತೆಗೆದುಕೊಳ್ಳಬೇಕು ಎಂಬ ಒತ್ತಡ ಏರ್ಪಡುತ್ತದೆ. ಯುದ್ಧಗಳನ್ನು ಅಂತಾರಾಷ್ಟ್ರೀಯ ಶಕ್ತಿಗಳು ನಡೆಸಿವೆ, ಮತ್ತು ಈಗ ಅದನ್ನು ತಡೆಹಿಡಿಯುವ ಜವಾಬ್ದಾರಿಯನ್ನು ಕೂಡ ಅಂತಾರಾಷ್ಟ್ರೀಯ ಶಕ್ತಿಗಳೇ ಹೊಂದಿದೆ.

ಇರಾಕ್ ಅನುಭವವು ವಿಶ್ವಕ್ಕೆ ಸಿನಿಕತನವನ್ನು ತಂದಿದೆ. ಅಂತಾರಾಷ್ಟ್ರೀಯ ನ್ಯಾಯಮಂಡಳಿಗಳು ಕೇವಲ ನೆಪ ಮತ್ತು ನಾಟಕ ಎಂದು ತೋರಿಸಿ, ಅವು ಪ್ರಬಲ ರಾಷ್ಟ್ರಗಳ ಹಿತಾಸಕ್ತಿಗಳನ್ನು ಕಾಯುತ್ತವೆ ಎಂದು ತಿಳಿಸಿವೆ. ಯುದ್ಧ ಅಪರಾಧಗಳ ವಿರುದ್ಧ ನಿಲ್ಲಲು ಮತ್ತು ಅಫ್ಘಾನಿಸ್ತಾನದ ಜನರನ್ನು ಆಕ್ರಮಣಕಾರರಿಂದ ರಕ್ಷಿಸಲು ಇರುವ ಅಂತಾರಾಷ್ಟ್ರೀಯ ಬದ್ಧತೆಯ ಕೊರತೆಯು ಅಫ್ಘಾನಿಸ್ತಾನಕ್ಕೆ ಮಾತ್ರವಲ್ಲ, ಪ್ರಪಂಚಕ್ಕೆ ಕಾಡುವ ವಿಪತ್ತಿನ ಸಂಗತಿಯಾಗಿದೆ.

ಈ ಹಿಂದೆ ಈ ಪ್ರಯತ್ನಗಳು ಟೀಕೆ ಮತ್ತು ಕೃತ್ರಿಮತೆಯಿಂದ ಕೂಡಿದ್ದವು. ಆದರೆ ಅದು ಅಫ್ಘಾನಿಸ್ತಾನದ ಜನರಿಗೆ ಅತ್ಯುತ್ತಮ ಭರವಸೆಯಾಗಿವೆ. ಹೊರಗಿನ ಪ್ರಪಂಚದೊಂದಿಗಿನ ಸಂಬಂಧಗಳನ್ನು ಒಡೆದುಹೋದ ದೇಶದೊಳಗಿನ ಮಿಲಿಟರಿ ಮೈತ್ರಿಗಳಿಗಿಂತ, ಪ್ರಾಕ್ಸಿ ಯುದ್ಧಗಳನ್ನು ತಡೆಯಲು ಮತ್ತು ಪ್ರಗತಿಪರ ಚಳವಳಿಗಳನ್ನು ಪ್ರೋತ್ಸಾಹಿಸಲು ಮುಂದಾಗುವಂತೆ ಎಚ್ಚರ ವಹಿಸಬೇಕು.

(ಕನ್ನಡಕ್ಕೆ): ಬಿ ಎ ತೇಜಸ್ವಿ

ಕಿಶೋರ್ ಗೋವಿಂದ

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.


ಇದನ್ನೂ ಓದಿ: ಇಸ್ಲಾಮಿಕ್ ಎಮಿರೇಟ್ಸ್ ಆಫ್ ಅಫ್ಘಾನಿಸ್ತಾನ ಮತ್ತು ಶೀತಲ ಸಮರ 2.0

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...