Homeಮುಖಪುಟನ್ಯಾಯಾಂಗ ವ್ಯವಸ್ಥೆಗೆ ಮಾರಕವಾಗುತ್ತಿದೆ ‘ಪಂಚಾಂಗ’!

ನ್ಯಾಯಾಂಗ ವ್ಯವಸ್ಥೆಗೆ ಮಾರಕವಾಗುತ್ತಿದೆ ‘ಪಂಚಾಂಗ’!

- Advertisement -
- Advertisement -

ರಾಜಪ್ರಭುತ್ವದ ಸಂಕೇತವಾದ ಸೆಂಗೋಲ್ ಈಗ ನಮ್ಮ ಸಂಸತ್ತಿನ ಭಾಗವಾಗಿದೆ. ಇದರಂತೆಯೇ ಜಾಮೀನು ಅರ್ಜಿಗಳನ್ನು ಪರಿಶೀಲಿಸುವ, ನ್ಯಾಯ ತೀರ್ಮಾನ ಮಾಡುವ ನ್ಯಾಯಾಲಯ ಕೂಡ ‘ಮಂಗಳ’ನ ಪ್ರಭಾವಕ್ಕೆ ಒಳಗಾಗಿದೆಯೇ ಎಂಬ ಪ್ರಶ್ನೆ ಸ್ವತಂತ್ರ ನ್ಯಾಯಾಂಗವನ್ನು ಬಯಸುವ ನಮ್ಮೆಲ್ಲರಿಗೂ ಕಾಡುತ್ತಿದೆ.

ಮೊಘಲರು ಬಂದನಂತರ ಸನಾತನ ನ್ಯಾಯವ್ಯವಸ್ಥೆಯಲ್ಲಿ ಬದಲಾವಣೆಯಾಯಿತು. ಅಂದಿಗೆ ಸಾಮ್ರಾಟರ ಕಾನೂನು ಅತ್ಯುನ್ನತವಾಗಿತ್ತು. ‘ಸುನ್ನಿ ಹನಿಫಿ ಸಂಪ್ರದಾಯ’ ಅಧಿಕೃತ ನ್ಯಾಯಿಕ ವ್ಯವಸ್ಥೆಯಾಗಿತ್ತು. ಇದರ ಜೊತೆಗೆಯೇ ‘ಶಿಯಾ ಮತ್ತು ಹಿಂದೂ’ ಕಾನೂನು ವ್ಯವಸ್ಥೆ ಸಹ ಆಚರಣೆಯಲ್ಲಿತ್ತು.

ಬ್ರಿಟಿಷರು ಬಂದನಂತರ ಕಾನೂನು ಸುವ್ಯವಸ್ಥೆ ಸಾಂಸ್ಥಿಕ ರೂಪ ಪಡೆಯುತ್ತಾ, ಧಾರ್ಮಿಕ ಕಟ್ಟುಪಾಡುಗಳು ಕೂಡ ವಿಕಸನ ಹೊಂದುತ್ತಾ ಸಾಗಿದವು. ದೇಶದೊಳಗಿನ ಕಾನೂನುಗಳನ್ನು ಸಂಹಿತೆಯಾಗಿಸಿ ಐಸಿಪಿ ಮತ್ತು ಸಿಆರ್‌ಪಿಸಿ ಕಾನೂನುಗಳ ಕರಡು ಬಂತು. ದೇಶ ಸ್ವತಂತ್ರಗೊಂಡ ನಂತರ, ‘ವಸಾಹತು ಕಾನೂನನ್ನು’ ಬದಲಿಸುವ ಮೂಲಕ ಸಂವಿಧಾನಾತ್ಮಕ ಕಾನೂನು ಮುನ್ನಲೆಗೆ ಬಂತು. ಇದು ಭಾರತೀಯ ಕಾನೂನು ಆಗಿ ಜೀವಂತವಾಗಿದೆ. ಇದು ‘ಧರ್ಮನಿರಪೇಕ್ಷ’ ಅಂಶಗಳನ್ನು ಒಳಗೊಂಡಿದೆ. ಇದು ದುರ್ಬಲವರ್ಗದ ವ್ಯಕ್ತಿಯನ್ನು ಸಬಲೀಕರಿಸುವ ಇರಾದೆಯನ್ನು ಒಳಗೊಂಡಿದೆ.

ಗ್ರಹಿಕೆ ಮತ್ತು ವ್ಯಾಖ್ಯಾನಗಳಲ್ಲಿನ ವ್ಯತ್ಯಾಸಗಳು ಹೊರತಾಗಿಯೂ, ಪ್ರಜಾಪ್ರಭುತ್ವ ರಾಷ್ಟ್ರಗಳ ಮೂಲಾಧಾರ ಕಾನೂನು ವ್ಯವಸ್ಥೆಯಾಗಿದೆ ಎಂಬುದನ್ನು ಸಾಂವಿಧಾನಿಕ ತಜ್ಞರು ಒಪ್ಪುತ್ತಾರೆ. ‘ಕಾನೂನಿನ ಆಳ್ವಿಕೆ’ ಎಂದರೆ ಪ್ರತಿಯೊಬ್ಬ ವ್ಯಕ್ತಿಯು ಕಾನೂನಿನ ನಿಯಮಕ್ಕೆ ತಲೆ ಬಾಗಬೇಕು; ಕಾನೂನು ಎಂಬುದು ಎಲ್ಲರಿಗೂ ಒಂದೇ ಆಗಿರುತ್ತದೆ. ಅಂದರೆ ಯಾರು ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ, ಕಾನೂನು ಎಲ್ಲರನ್ನೂ ಮೀರಿದ ನಿಯಮವಾಗಿರುತ್ತದೆ.

ಒಂದು ಪ್ರಜಾಸತ್ತಾತ್ಮಕ ರಾಷ್ಟ್ರ ಕಾನೂನಿನ ಮುಂದೆ ‘ಸಮಾನತೆ ಮತ್ತು ಉದಾರಮೌಲ್ಯ’ಗಳನ್ನು ಹೊಂದಿರಬೇಕೆಂಬುದು ಸಾಮಾನ್ಯ ಪರಿಕಲ್ಪನೆ. ಹೀಗಾಗಿಯೇ ‘ಪರಿಣಾಮಕಾರಿ ಆಡಳಿತ ವ್ಯವಸ್ಥೆ’ ಹಾಗೂ ‘ನ್ಯಾಯದಾನ’ ಇದರೊಳಗಡೆ ಸೇರಿದೆ. ನಮ್ಮಂತಹ ಪ್ರಜಾಸತ್ತಾತ್ಮಕ ರಾಷ್ಟ್ರಗಳು ಇಂತಹ ಚಿಂತನೆಗಳಿಗೆ ಬದ್ಧವಾಗಿರಬೇಕಿದೆ.

ನ್ಯಾಯಾಧೀಶರಿಗೂ ‘ನೀತಿಶಾಸ್ತ್ರ’ ಇದೆ. ಇವರು ‘ಸಂವಿಧಾನಿಕ ನೈತಿಕತೆ’ ಮಾತ್ರವಲ್ಲದೆ ‘ವೃತ್ತಿಧರ್ಮದ ನೈತಿಕತೆ’ಗೂ ಬದ್ಧರಾಗಿರಬೇಕು. ಬಹುತೇಕ ನ್ಯಾಯಾಧೀಶರು ನ್ಯಾಯಪೀಠದಲ್ಲಿ ನಿಸ್ಪೃಹತೆಯಿಂದ ‘ನ್ಯಾಯದಾನ’ ಮಾಡುತ್ತಾರೆ. ‘ನ್ಯಾಯದಾನ’ ಮಾಡುವಾಗ ಯಾವುದೇ ಬಗೆಯ ‘ಪೂರ್ವಾಗ್ರಹ ಹಿತಾಸಕ್ತಿ’ಗಳನ್ನು ಇಟ್ಟುಕೊಳ್ಳದೆ ನಿಷ್ಪಕ್ಷಪಾತವಾಗಿ ತೀರ್ಪನ್ನು ನೀಡುತ್ತಾರೆಂಬುದನ್ನು ಗೌರವಿಸಬೇಕು. ಆದರೂ ಇವರುಗಳು ದೇವರಲ್ಲ. ಬದಲಾಗಿ ನಮ್ಮಂತೆಯೇ ಕೆಲವರು, ಕೆಲವೊಮ್ಮೆ ಯೋಚಿಸುತ್ತಾರೆ. ಆದರೆ, ನ್ಯಾಯಾಧೀಶರು ತಮ್ಮ ಅಭಿಪ್ರಾಯ ಹೇಳುವಾಗ ಅದು ಯಾವಾಗಲೂ ‘ಸಂವಿಧಾನಿಕ ತತ್ವಗಳು’ ಮತ್ತು ಅದರ ಆಶಯಕ್ಕೆ ಅನುಗುಣವಾಗಿರಬೇಕು. ಹಾಗೆಯೇ ‘ನ್ಯಾಯದಾನ’ ಪ್ರಕ್ರಿಯೆಯಲ್ಲಿ ಒಂದು ವರ್ಗವನ್ನಾಗಲಿ, ಸಮಾಜವನ್ನಾಗಲಿ ಅಥವಾ ಒಂದು ನಂಬಿಕೆಯ ವ್ಯವಸ್ಥೆಯನ್ನು ಓಲೈಸಬಾರದು. ವಿಶೇಷವಾಗಿ ಯಾರ ಪರವನ್ನೂ ವೈಯಕ್ತಿಕವಾಗಿ ವಹಿಸಬಾರದು ಎಂಬುದು ಆಶಯ.

ಇವತ್ತು ಜನ ‘ಅಪರಾಧಿಕ ನ್ಯಾಯ ವ್ಯವಸ್ಥೆ’ಯಲ್ಲಿ ನಂಬಿಕೆ ಕಳೆದುಕೊಳ್ಳದಂತೆ ನೋಡಿಕೊಳ್ಳುವ ಅಗತ್ಯವೂ ಹೆಚ್ಚಾಗಿದೆ. ನಮ್ಮ ದೇಶದಲ್ಲಿ ಅಪರಾಧ ಜರುಗಿದ ಬಳಿಕ, ಅಪರಾಧಿಕ ಪ್ರಕ್ರಿಯೆಗಳು ಆರಂಭವಾದ ಕೂಡಲೇ ‘ಅಪರಾಧಿ’ಯ ಕಡೆಗೆ ಎಲ್ಲರ ಗಮನ ಹರಿಯುತ್ತದೆ. ಆಪಾದಿತನಿಗೆ ಎಲ್ಲಾ ಹಂತದಲ್ಲಿಯೂ ರಕ್ಷಣೆ ಲಭಿಸುತ್ತದೆ. ಅದು ವಿಚಾರಣೆ ಪೂರ್ವದಲ್ಲಿ ಮತ್ತು ‘ಅಪರಾಧಿಕ ನ್ಯಾಯ’ದ ವಿಚಾರಣೆಯ ನಂತರವೂ ಸಿಗುತ್ತದೆ. ಆಪಾದಿತ ಬಂಧನಕ್ಕೆ ಒಳಗಾದರಂತೂ, ಅವನಿಗೆ ಹಕ್ಕುಗಳ ಮಹಾಪೂರವೇ ಹರಿದುಬರುತ್ತದೆ. ಅವುಗಳಲ್ಲಿ ತನ್ನನ್ನು ‘ಪ್ರತಿನಿಧಿಸಿಕೊಳ್ಳುವ ಹಕ್ಕು’, ‘ವೈದ್ಯಕೀಯ ಪರೀಕ್ಷೆಯ ಹಕ್ಕು’, ಬಂಧನವಾದ 24 ಗಂಟೆಯೊಳಗಡೆ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಹಾಗೂ ಬಂಧನಕ್ಕೆ ಕಾರಣಗಳನ್ನು ಕೇಳುವ ಹಕ್ಕು ಲಭಿಸುತ್ತದೆ. ಸಂತ್ರಸ್ತರ ಹಕ್ಕುಗಳು ಮತ್ತು ಅಪರಾಧ ತಡೆಗಟ್ಟಲು ಸಮಾಜ ಸೃಷ್ಟಿಸುವ ವಿಧಾನಗಳ ನಡುವೆ ಸಮತೋಲನ ತರಲು ‘ನ್ಯಾಯಶಾಸ್ತ್ರ’ ಪ್ರಯತ್ನಿಸುತ್ತದೆ. ಕಾರಣ ಅಪರಾಧಿಕ ನ್ಯಾಯ ವ್ಯವಸ್ಥೆ ಎಲ್ಲರಿಗೂ ನ್ಯಾಯ ಒದಗಿಸಲು ರೂಪಿಸಲಾಗಿದೆ.

ಇದನ್ನೂ ಓದಿ: ನೂತನ ಸಂಸತ್ ಭವನ ಉದ್ಘಾಟನೆಯ ಆಚರಣೆಗಳು; ಜಾತ್ಯತೀತ ಮೌಲ್ಯಗಳಿಗೆ ತಿಲಾಂಜಲಿ

ಇವೆಲ್ಲವನ್ನೂ ಏಕೆ ಹೇಳುತ್ತಿರುವೆನೆಂದರೆ, ಅಲಹಾಬಾದ್ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಬ್ರಿಜ್‌ರಾಜ್ ಸಿಂಗ್ ಅವರು ‘ಅತ್ಯಾಚಾರ ಸಂತ್ರಸ್ತೆ ಮಹಿಳೆ’ ಅಂಗಾರಕ ದೋಷ ಹೊಂದಿರುವರೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಲಕ್ನೋ ಜ್ಯೋತಿಷ್ಯ ವಿಶ್ವವಿದ್ಯಾಲಯದಿಂದ ವರದಿ ಕೇಳಿದ್ದರು. ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಲೈಂಗಿಕವಾಗಿ ಬಳಸಿಕೊಂಡ ಆರೋಪಿಯ ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಯುವತಿ ಕುಜ ದೋಷಪೂರಿತಳಾದ್ದರಿಂದ ಮದುವೆಯಾಗಲು ಸಾಧ್ಯವಿಲ್ಲವೆಂದು ಅತ್ಯಾಚಾರಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದ! ಯುವತಿ ಜಾತಕದಲ್ಲಿ ‘ಕುಜ ದೋಷ’ ಹೊಂದಿರುವುದರಿಂದ, ಅದು ಸುಖವೈವಾಹಿಕ ಜೀವನಕ್ಕೆ ಅಡ್ಡಿಯನ್ನುಂಟುಮಾಡುತ್ತದೆ. ಹೀಗಾಗಿ ನನ್ನ ಕಕ್ಷಿದಾರ ಆಕೆಯನ್ನು ವಿವಾಹವಾಗಲು ಬಯಸಿಲ್ಲ ಎಂದು ಆರೋಪಿ ಪರ ವಕೀಲ ವಿವೇಕ್‌ಕುಮಾರ್ ಸಿಂಗ್ ತಿಳಿಸಿದ್ದರು. ಹಿಂದೂ ಸಂಪ್ರದಾಯದಲ್ಲಿ ಮದುವೆಗೆ ಪರಿಪೂರ್ಣ ಜಾತಕ ಹೊಂದಾಣಿಕೆ ನೋಡಲಾಗುತ್ತದೆ. ‘ಕುಂಡಲಿ’ ಅಥವಾ ‘ಜಾತಕ’ ಎಂಬ ಅಂಶಗಳು ಮದುವೆ ಸೇರಿದಂತೆ ಮನುಷ್ಯ ಅಸ್ತಿತ್ವದ ಎಲ್ಲ ಸಂಗತಿಗಳನ್ನೂ ನಿಯಂತ್ರಿಸುತ್ತವೆ. ‘ಮಂಗಳ ಗ್ರಹ’ದ ಪ್ರಭಾವದಡಿಯಲ್ಲಿ ಜನಿಸಿದ ವ್ಯಕ್ತಿಗೆ ‘ಮಂಗಳ ದೋಷ’ವನ್ನು ‘ಅಂಗಾರಕ ದೋಷ’, ‘ಕುಜ ದೋಷ’, ‘ಭೂಮಿ ದೋಷ’ ಎಂದು ಕರೆಯುತ್ತಾರೆ. ‘ಅಂಗಾರಕ ದೋಷ’ ಹೊಂದಿದವರನ್ನು ವಿವಾಹ ಆಗುವುದು ದುರದೃಷ್ಟಕರ ಎಂದು ಭಾವಿಸಲಾಗಿದೆ.

ಇದೇ ಹೊತ್ತಿನಲ್ಲಿ ‘ಜ್ಯೋತಿಷ್ಯ’ ವೈಜ್ಞಾನಿಕವೇ ಎಂಬುದನ್ನು ಪರಿಶೀಲಿಸುವ ಗೋಜಿಗೆ ಹೋಗುವುದಿಲ್ಲವೆಂದು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಮತ್ತು ಪಂಕಜ್ ಮಿತ್ತಲ್ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ರಜಾಕಾಲದ ಪೀಠ ಸ್ಪಷ್ಟಪಡಿಸಿದೆ. ಅಲ್ಲದೆ, ಇದು ಖಾಸಗಿತನದ ಹಕ್ಕಿನ ಉಲ್ಲಂಘನೆ, ಖಗೋಳ ಏನು ಮಾಡಬೇಕಿದೆ ಎಂದು ಚರ್ಚಿಸುವುದಿಲ್ಲ ಎಂದು ನ್ಯಾಯಪೀಠ ಹೇಳಿತ್ತು. ಹಾಗೆಯೇ ಯಾವ ಉದ್ದೇಶದಿಂದ ‘ಜ್ಯೋತಿಷ್ಯ ವರದಿ’ಯನ್ನು ಕರಲಾಗಿದೆ ಎನ್ನುವುದು ಅರ್ಥವಾಗುತ್ತಿಲ್ಲ ಎಂದು ನ್ಯಾಯಾಧೀಶ ಮಿತ್ತಲ್ ನುಡಿದಿದ್ದರು.

ಸುಪ್ರೀಂಕೋರ್ಟ್ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡು, ಮಧ್ಯ ಪ್ರವೇಶಿಸಿದ್ದು ಸ್ವಾಗತಾರ್ಹವಾದದ್ದು. ಇಲ್ಲಿ ಹೈಕೋರ್ಟ್ ನ್ಯಾಯಾಧೀಶರೊಂದಿಗೆ ಒಂದು ಹಂತದಲ್ಲಿ ಸಾಲಿಸಿಟರ್ ಜನರಲ್ ಕೂಡ ಜ್ಯೋತಿಷ್ಯವನ್ನು ವಿಜ್ಞಾನ ಎಂಬುದನ್ನು ಭಾಗಶಃ ಒಪ್ಪಿದ್ದರು. ಇನ್ನೂ ಆಶ್ಚರ್ಯ ಎಂದರೆ, ದೂರುದಾರರ ಪರ ವಕೀಲರ ಒಪ್ಪಿಗೆಯನ್ನು ಪಡೆದು ‘ಅಂಗಾರಕ ದೋಷ’ ಪರೀಕ್ಷೆ ಮಾಡಲು ನ್ಯಾಯಾಲಯ ಆದೇಶಿಸಿದ್ದು ಕೂಡ ಆಶ್ಚರ್ಯ ಮೂಡಿಸುತ್ತದೆ.

ನ್ಯಾಯಾಧೀಶರು ನ್ಯಾಯಾಂಗ ತರಬೇತಿ ಅಕಾಡೆಮಿಗಳಲ್ಲಿ ತರಬೇತಿ ಹೊಂದಿರುತ್ತಾರೆ. ಕೆಲವು ನ್ಯಾಯಾಧೀಶರು ಪಕ್ಷಪಾತಗಳಿಂದಾಗಿ ಜನರ ಮಧ್ಯೆ ಚರ್ಚೆಗೆ ಒಳಗಾಗುತ್ತಿದ್ದಾರೆ. ‘ಕೊಲಿಜಿಯಂ’ ಆಯ್ಕೆಯ ಬಗ್ಗೆ ಸರ್ಕಾರದ ವಾದ ಸರಿಯೇ ಎಂಬುದರ ಬಗ್ಗೆಯೂ ಯೋಚಿಸುವಂತೆ ಮಾಡಿಬಿಡುತ್ತದೆ.

ಇದು ಬಹಳ ಹಿಂದೆ ನಡೆದಿದ್ದಲ್ಲ. ಮಧ್ಯ ಪ್ರದೇಶದ ಉಚ್ಚ ನ್ಯಾಯಾಲಯ ಅತ್ಯಾಚಾರಿಗೆ ಜಾಮೀನು ನೀಡಲು ‘ಸಂತ್ರಸ್ತೆಯಿಂದ ರಾಖಿ ಕಟ್ಟಿಸಿಕೊಳ್ಳಬೇಕೆಂಬ ಷರತ್ತು’ ವಿಧಿಸಿತ್ತು. ಇವೆರಡು ಪ್ರಕರಣಗಳನ್ನು ಮಾತ್ರ ಉಲ್ಲೇಖಿಸಿ ಹೇಳುತ್ತಿಲ್ಲ. 7 ತಿಂಗಳ ಭ್ರೂಣವನ್ನು ಗರ್ಭಪಾತ ಮಾಡಲು ಬಯಸಿದ್ದ 16 ವರ್ಷದ ಅಪ್ರಾಪ್ತ ಮಕ್ಕಳ ವಿಚಾರಣೆಯ ಹೊತ್ತಿನಲ್ಲಿ ಗುಜರಾತ್ ಹೈಕೋರ್ಟ್‌ನ ನ್ಯಾಯಾಧೀಶರಾದ ಸಮೀರ್ ದವೆ ಅವರು ‘ಮನುಸ್ಮೃತಿ’ಯನ್ನು ಉಲ್ಲೇಖಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಹುಡುಗಿಯರು 14 ವರ್ಷಕ್ಕೆ ಮದುವೆಯಾಗುವರು; 17 ವರ್ಷಕ್ಕೆ ಮಗುವಿಗೆ ಜನ್ಮ ನೀಡುವುದು ಸಾಮಾನ್ಯ ಎಂದಿದ್ದರು. ಭ್ರೂಣ ಮತ್ತು ತಾಯಿ ಆರೋಗ್ಯವಾಗಿರುವುದರಿಂದ ಗರ್ಭಪಾತಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದರು. ಜೊತೆಗೆ ಸಂತ್ರಸ್ತೆ ಮತ್ತು ಆರೋಪಿಯ ನಡುವೆ ರಾಜಿಯಾಗುವ ಸಾಧ್ಯತೆಯಿದೆಯೇ ಎಂದು ಕೇಳಿದ್ದರು. ಇದರಿಂದ ಮೂರು ಜೀವಗಳನ್ನು ಉಳಿಸಬಹುದೆಂದು ಸೂಚಿಸಿದ್ದರು.

ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿದ್ದ ಹೊತ್ತಲ್ಲಿ ಶರದ್ ಬೊಬ್ಡೆ ಅವರು ಸಂತ್ರಸ್ತೆಯನ್ನು ವಿವಾಹ ಆಗುವಿರಾ ಎಂದು ಸರ್ಕಾರಿ ನೌಕರನಾಗಿದ್ದ ಅತ್ಯಾಚಾರ ಆರೋಪಿಯನ್ನು ಕೇಳಿದ್ದರು. ಆಗ ಮಹಿಳಾ ಗುಂಪುಗಳು ಆಕ್ರೋಶವನ್ನು ಹೊರಹಾಕಿ ಸಿಜೆಐ ರಾಜೀನಾಮೆಗೆ ಒತ್ತಾಯಿಸಿದ್ದವು. ಆರೋಪಿಯ ಮನಸ್ಥಿತಿಯನ್ನು ಕಂಡುಹಿಡಿಯಲು ಸಿಆರ್‌ಪಿಸಿಯಲ್ಲಿ ನಿಗದಿಪಡಿಸಿರುವ ವಿಧಾನವನ್ನು ಅನುಸರಿಸಿದ್ದೇನೆಂದು ಜಡ್ಜ್ ಸ್ಪಷ್ಟಪಡಿಸಿದ್ದರು. ನವಿಲು ಭಾರತದ ರಾಷ್ಟ್ರೀಯ ಪಕ್ಷಿ. ಕಾರಣ ಅದು ‘ಬ್ರಹ್ಮಚಾರಿ ಪಕ್ಷಿ’ ಎಂದು ಜಸ್ಟೀಸ್ ಮಹೇಶ್‌ಚಂದ್ರ ಶರ್ಮ ತಮ್ಮ ಸೇವಾ ವಿದಾಯದ ಸಂದರ್ಭದಲ್ಲಿ ಹೇಳಿದ್ದರು.

ಮೇ 23ರ ಅಲಹಾಬಾದ್ ನ್ಯಾಯಾಲಯದ ಪ್ರಕರಣ ಕಂಡ ನಂತರ ನನ್ನಂತಹ ಹಲವರು ನೋವುಂಡಿರಬಹುದು. ಆದರೆ ಸುಪ್ರೀಂಕೋರ್ಟಿನ ತೀರ್ಪು ನ್ಯಾಯಾಲಯಗಳ ಬಗೆಗಿನ ನಮ್ಮೆಲ್ಲರ ಆಶಾಭಾವನೆಯ ‘ನಂಬಿಕೆ’ಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

ಎಷ್ಟೋ ನ್ಯಾಯಾಲಯಗಳಲ್ಲಿ ಜಾಮೀನು ನೀಡಲು ವಿಧಿಸುತ್ತಿರುವ ಷರತ್ತುಗಳು, ಪ್ರಕರಣಗಳ ವಿಚಾರಣೆಗಳ ನಂತರ ನೀಡುತ್ತಿರುವ ಆದೇಶಗಳು ಪಿತೃಪ್ರಧಾನ ಕಲ್ಪನೆಯನ್ನು ಅವಲಂಬಿಸಿದೆ. ಲೈಂಗಿಕ ಸಂಬಂಧಿತ ಅಪರಾಧಗಳ ವಿಚಾರಣೆಯ ಹೊತ್ತಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ನ್ಯಾಯಾಲಯವೇ ನೀಡಿದೆ. ಜನರ ನಂಬಿಕೆಯನ್ನು ‘ತರ್ಕ’ಕ್ಕೆ ಒಳಪಡಿಸುವುದು ನ್ಯಾಯಾಧೀಶರ ಕೆಲಸವಲ್ಲ. ಇಂತಹವನ್ನು ತಡೆಯಬೇಕು. ಕಾನೂನು ಹೊರತುಪಡಿಸಿ ಇತರೆ ಮಾನದಂಡಗಳನ್ನು ಬಳಸಬಾರದು. ಇಂತಹವು ‘ಬಹುಸಂಸ್ಕೃತಿ’ಯ ದೇಶದಲ್ಲಿ ದುಬಾರಿಯಾಗುತ್ತದೆ.

ಡಾ. ಎಂ.ಎಸ್. ಮಣಿ

ಡಾ. ಎಂ.ಎಸ್. ಮಣಿ
ಸಾಮಾಜಿಕ ಮತ್ತು ಸಂಶೋಧನಾತ್ಮಕ ಲೇಖನಗಳನ್ನು ಬರೆಯುವ ಡಾ.ಎಂ.ಎಸ್.ಮಣಿ ಅವರು ಪತ್ರಕರ್ತರ ಸಂಘಟನೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಇವರ ತಲ್ಲಣ, ಹರಿವು, ಒಡಲಾಗ್ನಿ, ಭಾವಭಿತ್ತಿ, ಮನುಭಾರತ ಪುಸ್ತಕಗಳು ಪ್ರಕಟವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...