Homeಮುಖಪುಟನ್ಯಾಯಾಂಗ ವ್ಯವಸ್ಥೆಗೆ ಮಾರಕವಾಗುತ್ತಿದೆ ‘ಪಂಚಾಂಗ’!

ನ್ಯಾಯಾಂಗ ವ್ಯವಸ್ಥೆಗೆ ಮಾರಕವಾಗುತ್ತಿದೆ ‘ಪಂಚಾಂಗ’!

- Advertisement -
- Advertisement -

ರಾಜಪ್ರಭುತ್ವದ ಸಂಕೇತವಾದ ಸೆಂಗೋಲ್ ಈಗ ನಮ್ಮ ಸಂಸತ್ತಿನ ಭಾಗವಾಗಿದೆ. ಇದರಂತೆಯೇ ಜಾಮೀನು ಅರ್ಜಿಗಳನ್ನು ಪರಿಶೀಲಿಸುವ, ನ್ಯಾಯ ತೀರ್ಮಾನ ಮಾಡುವ ನ್ಯಾಯಾಲಯ ಕೂಡ ‘ಮಂಗಳ’ನ ಪ್ರಭಾವಕ್ಕೆ ಒಳಗಾಗಿದೆಯೇ ಎಂಬ ಪ್ರಶ್ನೆ ಸ್ವತಂತ್ರ ನ್ಯಾಯಾಂಗವನ್ನು ಬಯಸುವ ನಮ್ಮೆಲ್ಲರಿಗೂ ಕಾಡುತ್ತಿದೆ.

ಮೊಘಲರು ಬಂದನಂತರ ಸನಾತನ ನ್ಯಾಯವ್ಯವಸ್ಥೆಯಲ್ಲಿ ಬದಲಾವಣೆಯಾಯಿತು. ಅಂದಿಗೆ ಸಾಮ್ರಾಟರ ಕಾನೂನು ಅತ್ಯುನ್ನತವಾಗಿತ್ತು. ‘ಸುನ್ನಿ ಹನಿಫಿ ಸಂಪ್ರದಾಯ’ ಅಧಿಕೃತ ನ್ಯಾಯಿಕ ವ್ಯವಸ್ಥೆಯಾಗಿತ್ತು. ಇದರ ಜೊತೆಗೆಯೇ ‘ಶಿಯಾ ಮತ್ತು ಹಿಂದೂ’ ಕಾನೂನು ವ್ಯವಸ್ಥೆ ಸಹ ಆಚರಣೆಯಲ್ಲಿತ್ತು.

ಬ್ರಿಟಿಷರು ಬಂದನಂತರ ಕಾನೂನು ಸುವ್ಯವಸ್ಥೆ ಸಾಂಸ್ಥಿಕ ರೂಪ ಪಡೆಯುತ್ತಾ, ಧಾರ್ಮಿಕ ಕಟ್ಟುಪಾಡುಗಳು ಕೂಡ ವಿಕಸನ ಹೊಂದುತ್ತಾ ಸಾಗಿದವು. ದೇಶದೊಳಗಿನ ಕಾನೂನುಗಳನ್ನು ಸಂಹಿತೆಯಾಗಿಸಿ ಐಸಿಪಿ ಮತ್ತು ಸಿಆರ್‌ಪಿಸಿ ಕಾನೂನುಗಳ ಕರಡು ಬಂತು. ದೇಶ ಸ್ವತಂತ್ರಗೊಂಡ ನಂತರ, ‘ವಸಾಹತು ಕಾನೂನನ್ನು’ ಬದಲಿಸುವ ಮೂಲಕ ಸಂವಿಧಾನಾತ್ಮಕ ಕಾನೂನು ಮುನ್ನಲೆಗೆ ಬಂತು. ಇದು ಭಾರತೀಯ ಕಾನೂನು ಆಗಿ ಜೀವಂತವಾಗಿದೆ. ಇದು ‘ಧರ್ಮನಿರಪೇಕ್ಷ’ ಅಂಶಗಳನ್ನು ಒಳಗೊಂಡಿದೆ. ಇದು ದುರ್ಬಲವರ್ಗದ ವ್ಯಕ್ತಿಯನ್ನು ಸಬಲೀಕರಿಸುವ ಇರಾದೆಯನ್ನು ಒಳಗೊಂಡಿದೆ.

ಗ್ರಹಿಕೆ ಮತ್ತು ವ್ಯಾಖ್ಯಾನಗಳಲ್ಲಿನ ವ್ಯತ್ಯಾಸಗಳು ಹೊರತಾಗಿಯೂ, ಪ್ರಜಾಪ್ರಭುತ್ವ ರಾಷ್ಟ್ರಗಳ ಮೂಲಾಧಾರ ಕಾನೂನು ವ್ಯವಸ್ಥೆಯಾಗಿದೆ ಎಂಬುದನ್ನು ಸಾಂವಿಧಾನಿಕ ತಜ್ಞರು ಒಪ್ಪುತ್ತಾರೆ. ‘ಕಾನೂನಿನ ಆಳ್ವಿಕೆ’ ಎಂದರೆ ಪ್ರತಿಯೊಬ್ಬ ವ್ಯಕ್ತಿಯು ಕಾನೂನಿನ ನಿಯಮಕ್ಕೆ ತಲೆ ಬಾಗಬೇಕು; ಕಾನೂನು ಎಂಬುದು ಎಲ್ಲರಿಗೂ ಒಂದೇ ಆಗಿರುತ್ತದೆ. ಅಂದರೆ ಯಾರು ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ, ಕಾನೂನು ಎಲ್ಲರನ್ನೂ ಮೀರಿದ ನಿಯಮವಾಗಿರುತ್ತದೆ.

ಒಂದು ಪ್ರಜಾಸತ್ತಾತ್ಮಕ ರಾಷ್ಟ್ರ ಕಾನೂನಿನ ಮುಂದೆ ‘ಸಮಾನತೆ ಮತ್ತು ಉದಾರಮೌಲ್ಯ’ಗಳನ್ನು ಹೊಂದಿರಬೇಕೆಂಬುದು ಸಾಮಾನ್ಯ ಪರಿಕಲ್ಪನೆ. ಹೀಗಾಗಿಯೇ ‘ಪರಿಣಾಮಕಾರಿ ಆಡಳಿತ ವ್ಯವಸ್ಥೆ’ ಹಾಗೂ ‘ನ್ಯಾಯದಾನ’ ಇದರೊಳಗಡೆ ಸೇರಿದೆ. ನಮ್ಮಂತಹ ಪ್ರಜಾಸತ್ತಾತ್ಮಕ ರಾಷ್ಟ್ರಗಳು ಇಂತಹ ಚಿಂತನೆಗಳಿಗೆ ಬದ್ಧವಾಗಿರಬೇಕಿದೆ.

ನ್ಯಾಯಾಧೀಶರಿಗೂ ‘ನೀತಿಶಾಸ್ತ್ರ’ ಇದೆ. ಇವರು ‘ಸಂವಿಧಾನಿಕ ನೈತಿಕತೆ’ ಮಾತ್ರವಲ್ಲದೆ ‘ವೃತ್ತಿಧರ್ಮದ ನೈತಿಕತೆ’ಗೂ ಬದ್ಧರಾಗಿರಬೇಕು. ಬಹುತೇಕ ನ್ಯಾಯಾಧೀಶರು ನ್ಯಾಯಪೀಠದಲ್ಲಿ ನಿಸ್ಪೃಹತೆಯಿಂದ ‘ನ್ಯಾಯದಾನ’ ಮಾಡುತ್ತಾರೆ. ‘ನ್ಯಾಯದಾನ’ ಮಾಡುವಾಗ ಯಾವುದೇ ಬಗೆಯ ‘ಪೂರ್ವಾಗ್ರಹ ಹಿತಾಸಕ್ತಿ’ಗಳನ್ನು ಇಟ್ಟುಕೊಳ್ಳದೆ ನಿಷ್ಪಕ್ಷಪಾತವಾಗಿ ತೀರ್ಪನ್ನು ನೀಡುತ್ತಾರೆಂಬುದನ್ನು ಗೌರವಿಸಬೇಕು. ಆದರೂ ಇವರುಗಳು ದೇವರಲ್ಲ. ಬದಲಾಗಿ ನಮ್ಮಂತೆಯೇ ಕೆಲವರು, ಕೆಲವೊಮ್ಮೆ ಯೋಚಿಸುತ್ತಾರೆ. ಆದರೆ, ನ್ಯಾಯಾಧೀಶರು ತಮ್ಮ ಅಭಿಪ್ರಾಯ ಹೇಳುವಾಗ ಅದು ಯಾವಾಗಲೂ ‘ಸಂವಿಧಾನಿಕ ತತ್ವಗಳು’ ಮತ್ತು ಅದರ ಆಶಯಕ್ಕೆ ಅನುಗುಣವಾಗಿರಬೇಕು. ಹಾಗೆಯೇ ‘ನ್ಯಾಯದಾನ’ ಪ್ರಕ್ರಿಯೆಯಲ್ಲಿ ಒಂದು ವರ್ಗವನ್ನಾಗಲಿ, ಸಮಾಜವನ್ನಾಗಲಿ ಅಥವಾ ಒಂದು ನಂಬಿಕೆಯ ವ್ಯವಸ್ಥೆಯನ್ನು ಓಲೈಸಬಾರದು. ವಿಶೇಷವಾಗಿ ಯಾರ ಪರವನ್ನೂ ವೈಯಕ್ತಿಕವಾಗಿ ವಹಿಸಬಾರದು ಎಂಬುದು ಆಶಯ.

ಇವತ್ತು ಜನ ‘ಅಪರಾಧಿಕ ನ್ಯಾಯ ವ್ಯವಸ್ಥೆ’ಯಲ್ಲಿ ನಂಬಿಕೆ ಕಳೆದುಕೊಳ್ಳದಂತೆ ನೋಡಿಕೊಳ್ಳುವ ಅಗತ್ಯವೂ ಹೆಚ್ಚಾಗಿದೆ. ನಮ್ಮ ದೇಶದಲ್ಲಿ ಅಪರಾಧ ಜರುಗಿದ ಬಳಿಕ, ಅಪರಾಧಿಕ ಪ್ರಕ್ರಿಯೆಗಳು ಆರಂಭವಾದ ಕೂಡಲೇ ‘ಅಪರಾಧಿ’ಯ ಕಡೆಗೆ ಎಲ್ಲರ ಗಮನ ಹರಿಯುತ್ತದೆ. ಆಪಾದಿತನಿಗೆ ಎಲ್ಲಾ ಹಂತದಲ್ಲಿಯೂ ರಕ್ಷಣೆ ಲಭಿಸುತ್ತದೆ. ಅದು ವಿಚಾರಣೆ ಪೂರ್ವದಲ್ಲಿ ಮತ್ತು ‘ಅಪರಾಧಿಕ ನ್ಯಾಯ’ದ ವಿಚಾರಣೆಯ ನಂತರವೂ ಸಿಗುತ್ತದೆ. ಆಪಾದಿತ ಬಂಧನಕ್ಕೆ ಒಳಗಾದರಂತೂ, ಅವನಿಗೆ ಹಕ್ಕುಗಳ ಮಹಾಪೂರವೇ ಹರಿದುಬರುತ್ತದೆ. ಅವುಗಳಲ್ಲಿ ತನ್ನನ್ನು ‘ಪ್ರತಿನಿಧಿಸಿಕೊಳ್ಳುವ ಹಕ್ಕು’, ‘ವೈದ್ಯಕೀಯ ಪರೀಕ್ಷೆಯ ಹಕ್ಕು’, ಬಂಧನವಾದ 24 ಗಂಟೆಯೊಳಗಡೆ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಹಾಗೂ ಬಂಧನಕ್ಕೆ ಕಾರಣಗಳನ್ನು ಕೇಳುವ ಹಕ್ಕು ಲಭಿಸುತ್ತದೆ. ಸಂತ್ರಸ್ತರ ಹಕ್ಕುಗಳು ಮತ್ತು ಅಪರಾಧ ತಡೆಗಟ್ಟಲು ಸಮಾಜ ಸೃಷ್ಟಿಸುವ ವಿಧಾನಗಳ ನಡುವೆ ಸಮತೋಲನ ತರಲು ‘ನ್ಯಾಯಶಾಸ್ತ್ರ’ ಪ್ರಯತ್ನಿಸುತ್ತದೆ. ಕಾರಣ ಅಪರಾಧಿಕ ನ್ಯಾಯ ವ್ಯವಸ್ಥೆ ಎಲ್ಲರಿಗೂ ನ್ಯಾಯ ಒದಗಿಸಲು ರೂಪಿಸಲಾಗಿದೆ.

ಇದನ್ನೂ ಓದಿ: ನೂತನ ಸಂಸತ್ ಭವನ ಉದ್ಘಾಟನೆಯ ಆಚರಣೆಗಳು; ಜಾತ್ಯತೀತ ಮೌಲ್ಯಗಳಿಗೆ ತಿಲಾಂಜಲಿ

ಇವೆಲ್ಲವನ್ನೂ ಏಕೆ ಹೇಳುತ್ತಿರುವೆನೆಂದರೆ, ಅಲಹಾಬಾದ್ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಬ್ರಿಜ್‌ರಾಜ್ ಸಿಂಗ್ ಅವರು ‘ಅತ್ಯಾಚಾರ ಸಂತ್ರಸ್ತೆ ಮಹಿಳೆ’ ಅಂಗಾರಕ ದೋಷ ಹೊಂದಿರುವರೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಲಕ್ನೋ ಜ್ಯೋತಿಷ್ಯ ವಿಶ್ವವಿದ್ಯಾಲಯದಿಂದ ವರದಿ ಕೇಳಿದ್ದರು. ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಲೈಂಗಿಕವಾಗಿ ಬಳಸಿಕೊಂಡ ಆರೋಪಿಯ ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಯುವತಿ ಕುಜ ದೋಷಪೂರಿತಳಾದ್ದರಿಂದ ಮದುವೆಯಾಗಲು ಸಾಧ್ಯವಿಲ್ಲವೆಂದು ಅತ್ಯಾಚಾರಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದ! ಯುವತಿ ಜಾತಕದಲ್ಲಿ ‘ಕುಜ ದೋಷ’ ಹೊಂದಿರುವುದರಿಂದ, ಅದು ಸುಖವೈವಾಹಿಕ ಜೀವನಕ್ಕೆ ಅಡ್ಡಿಯನ್ನುಂಟುಮಾಡುತ್ತದೆ. ಹೀಗಾಗಿ ನನ್ನ ಕಕ್ಷಿದಾರ ಆಕೆಯನ್ನು ವಿವಾಹವಾಗಲು ಬಯಸಿಲ್ಲ ಎಂದು ಆರೋಪಿ ಪರ ವಕೀಲ ವಿವೇಕ್‌ಕುಮಾರ್ ಸಿಂಗ್ ತಿಳಿಸಿದ್ದರು. ಹಿಂದೂ ಸಂಪ್ರದಾಯದಲ್ಲಿ ಮದುವೆಗೆ ಪರಿಪೂರ್ಣ ಜಾತಕ ಹೊಂದಾಣಿಕೆ ನೋಡಲಾಗುತ್ತದೆ. ‘ಕುಂಡಲಿ’ ಅಥವಾ ‘ಜಾತಕ’ ಎಂಬ ಅಂಶಗಳು ಮದುವೆ ಸೇರಿದಂತೆ ಮನುಷ್ಯ ಅಸ್ತಿತ್ವದ ಎಲ್ಲ ಸಂಗತಿಗಳನ್ನೂ ನಿಯಂತ್ರಿಸುತ್ತವೆ. ‘ಮಂಗಳ ಗ್ರಹ’ದ ಪ್ರಭಾವದಡಿಯಲ್ಲಿ ಜನಿಸಿದ ವ್ಯಕ್ತಿಗೆ ‘ಮಂಗಳ ದೋಷ’ವನ್ನು ‘ಅಂಗಾರಕ ದೋಷ’, ‘ಕುಜ ದೋಷ’, ‘ಭೂಮಿ ದೋಷ’ ಎಂದು ಕರೆಯುತ್ತಾರೆ. ‘ಅಂಗಾರಕ ದೋಷ’ ಹೊಂದಿದವರನ್ನು ವಿವಾಹ ಆಗುವುದು ದುರದೃಷ್ಟಕರ ಎಂದು ಭಾವಿಸಲಾಗಿದೆ.

ಇದೇ ಹೊತ್ತಿನಲ್ಲಿ ‘ಜ್ಯೋತಿಷ್ಯ’ ವೈಜ್ಞಾನಿಕವೇ ಎಂಬುದನ್ನು ಪರಿಶೀಲಿಸುವ ಗೋಜಿಗೆ ಹೋಗುವುದಿಲ್ಲವೆಂದು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಮತ್ತು ಪಂಕಜ್ ಮಿತ್ತಲ್ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ರಜಾಕಾಲದ ಪೀಠ ಸ್ಪಷ್ಟಪಡಿಸಿದೆ. ಅಲ್ಲದೆ, ಇದು ಖಾಸಗಿತನದ ಹಕ್ಕಿನ ಉಲ್ಲಂಘನೆ, ಖಗೋಳ ಏನು ಮಾಡಬೇಕಿದೆ ಎಂದು ಚರ್ಚಿಸುವುದಿಲ್ಲ ಎಂದು ನ್ಯಾಯಪೀಠ ಹೇಳಿತ್ತು. ಹಾಗೆಯೇ ಯಾವ ಉದ್ದೇಶದಿಂದ ‘ಜ್ಯೋತಿಷ್ಯ ವರದಿ’ಯನ್ನು ಕರಲಾಗಿದೆ ಎನ್ನುವುದು ಅರ್ಥವಾಗುತ್ತಿಲ್ಲ ಎಂದು ನ್ಯಾಯಾಧೀಶ ಮಿತ್ತಲ್ ನುಡಿದಿದ್ದರು.

ಸುಪ್ರೀಂಕೋರ್ಟ್ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡು, ಮಧ್ಯ ಪ್ರವೇಶಿಸಿದ್ದು ಸ್ವಾಗತಾರ್ಹವಾದದ್ದು. ಇಲ್ಲಿ ಹೈಕೋರ್ಟ್ ನ್ಯಾಯಾಧೀಶರೊಂದಿಗೆ ಒಂದು ಹಂತದಲ್ಲಿ ಸಾಲಿಸಿಟರ್ ಜನರಲ್ ಕೂಡ ಜ್ಯೋತಿಷ್ಯವನ್ನು ವಿಜ್ಞಾನ ಎಂಬುದನ್ನು ಭಾಗಶಃ ಒಪ್ಪಿದ್ದರು. ಇನ್ನೂ ಆಶ್ಚರ್ಯ ಎಂದರೆ, ದೂರುದಾರರ ಪರ ವಕೀಲರ ಒಪ್ಪಿಗೆಯನ್ನು ಪಡೆದು ‘ಅಂಗಾರಕ ದೋಷ’ ಪರೀಕ್ಷೆ ಮಾಡಲು ನ್ಯಾಯಾಲಯ ಆದೇಶಿಸಿದ್ದು ಕೂಡ ಆಶ್ಚರ್ಯ ಮೂಡಿಸುತ್ತದೆ.

ನ್ಯಾಯಾಧೀಶರು ನ್ಯಾಯಾಂಗ ತರಬೇತಿ ಅಕಾಡೆಮಿಗಳಲ್ಲಿ ತರಬೇತಿ ಹೊಂದಿರುತ್ತಾರೆ. ಕೆಲವು ನ್ಯಾಯಾಧೀಶರು ಪಕ್ಷಪಾತಗಳಿಂದಾಗಿ ಜನರ ಮಧ್ಯೆ ಚರ್ಚೆಗೆ ಒಳಗಾಗುತ್ತಿದ್ದಾರೆ. ‘ಕೊಲಿಜಿಯಂ’ ಆಯ್ಕೆಯ ಬಗ್ಗೆ ಸರ್ಕಾರದ ವಾದ ಸರಿಯೇ ಎಂಬುದರ ಬಗ್ಗೆಯೂ ಯೋಚಿಸುವಂತೆ ಮಾಡಿಬಿಡುತ್ತದೆ.

ಇದು ಬಹಳ ಹಿಂದೆ ನಡೆದಿದ್ದಲ್ಲ. ಮಧ್ಯ ಪ್ರದೇಶದ ಉಚ್ಚ ನ್ಯಾಯಾಲಯ ಅತ್ಯಾಚಾರಿಗೆ ಜಾಮೀನು ನೀಡಲು ‘ಸಂತ್ರಸ್ತೆಯಿಂದ ರಾಖಿ ಕಟ್ಟಿಸಿಕೊಳ್ಳಬೇಕೆಂಬ ಷರತ್ತು’ ವಿಧಿಸಿತ್ತು. ಇವೆರಡು ಪ್ರಕರಣಗಳನ್ನು ಮಾತ್ರ ಉಲ್ಲೇಖಿಸಿ ಹೇಳುತ್ತಿಲ್ಲ. 7 ತಿಂಗಳ ಭ್ರೂಣವನ್ನು ಗರ್ಭಪಾತ ಮಾಡಲು ಬಯಸಿದ್ದ 16 ವರ್ಷದ ಅಪ್ರಾಪ್ತ ಮಕ್ಕಳ ವಿಚಾರಣೆಯ ಹೊತ್ತಿನಲ್ಲಿ ಗುಜರಾತ್ ಹೈಕೋರ್ಟ್‌ನ ನ್ಯಾಯಾಧೀಶರಾದ ಸಮೀರ್ ದವೆ ಅವರು ‘ಮನುಸ್ಮೃತಿ’ಯನ್ನು ಉಲ್ಲೇಖಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಹುಡುಗಿಯರು 14 ವರ್ಷಕ್ಕೆ ಮದುವೆಯಾಗುವರು; 17 ವರ್ಷಕ್ಕೆ ಮಗುವಿಗೆ ಜನ್ಮ ನೀಡುವುದು ಸಾಮಾನ್ಯ ಎಂದಿದ್ದರು. ಭ್ರೂಣ ಮತ್ತು ತಾಯಿ ಆರೋಗ್ಯವಾಗಿರುವುದರಿಂದ ಗರ್ಭಪಾತಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದರು. ಜೊತೆಗೆ ಸಂತ್ರಸ್ತೆ ಮತ್ತು ಆರೋಪಿಯ ನಡುವೆ ರಾಜಿಯಾಗುವ ಸಾಧ್ಯತೆಯಿದೆಯೇ ಎಂದು ಕೇಳಿದ್ದರು. ಇದರಿಂದ ಮೂರು ಜೀವಗಳನ್ನು ಉಳಿಸಬಹುದೆಂದು ಸೂಚಿಸಿದ್ದರು.

ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿದ್ದ ಹೊತ್ತಲ್ಲಿ ಶರದ್ ಬೊಬ್ಡೆ ಅವರು ಸಂತ್ರಸ್ತೆಯನ್ನು ವಿವಾಹ ಆಗುವಿರಾ ಎಂದು ಸರ್ಕಾರಿ ನೌಕರನಾಗಿದ್ದ ಅತ್ಯಾಚಾರ ಆರೋಪಿಯನ್ನು ಕೇಳಿದ್ದರು. ಆಗ ಮಹಿಳಾ ಗುಂಪುಗಳು ಆಕ್ರೋಶವನ್ನು ಹೊರಹಾಕಿ ಸಿಜೆಐ ರಾಜೀನಾಮೆಗೆ ಒತ್ತಾಯಿಸಿದ್ದವು. ಆರೋಪಿಯ ಮನಸ್ಥಿತಿಯನ್ನು ಕಂಡುಹಿಡಿಯಲು ಸಿಆರ್‌ಪಿಸಿಯಲ್ಲಿ ನಿಗದಿಪಡಿಸಿರುವ ವಿಧಾನವನ್ನು ಅನುಸರಿಸಿದ್ದೇನೆಂದು ಜಡ್ಜ್ ಸ್ಪಷ್ಟಪಡಿಸಿದ್ದರು. ನವಿಲು ಭಾರತದ ರಾಷ್ಟ್ರೀಯ ಪಕ್ಷಿ. ಕಾರಣ ಅದು ‘ಬ್ರಹ್ಮಚಾರಿ ಪಕ್ಷಿ’ ಎಂದು ಜಸ್ಟೀಸ್ ಮಹೇಶ್‌ಚಂದ್ರ ಶರ್ಮ ತಮ್ಮ ಸೇವಾ ವಿದಾಯದ ಸಂದರ್ಭದಲ್ಲಿ ಹೇಳಿದ್ದರು.

ಮೇ 23ರ ಅಲಹಾಬಾದ್ ನ್ಯಾಯಾಲಯದ ಪ್ರಕರಣ ಕಂಡ ನಂತರ ನನ್ನಂತಹ ಹಲವರು ನೋವುಂಡಿರಬಹುದು. ಆದರೆ ಸುಪ್ರೀಂಕೋರ್ಟಿನ ತೀರ್ಪು ನ್ಯಾಯಾಲಯಗಳ ಬಗೆಗಿನ ನಮ್ಮೆಲ್ಲರ ಆಶಾಭಾವನೆಯ ‘ನಂಬಿಕೆ’ಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

ಎಷ್ಟೋ ನ್ಯಾಯಾಲಯಗಳಲ್ಲಿ ಜಾಮೀನು ನೀಡಲು ವಿಧಿಸುತ್ತಿರುವ ಷರತ್ತುಗಳು, ಪ್ರಕರಣಗಳ ವಿಚಾರಣೆಗಳ ನಂತರ ನೀಡುತ್ತಿರುವ ಆದೇಶಗಳು ಪಿತೃಪ್ರಧಾನ ಕಲ್ಪನೆಯನ್ನು ಅವಲಂಬಿಸಿದೆ. ಲೈಂಗಿಕ ಸಂಬಂಧಿತ ಅಪರಾಧಗಳ ವಿಚಾರಣೆಯ ಹೊತ್ತಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ನ್ಯಾಯಾಲಯವೇ ನೀಡಿದೆ. ಜನರ ನಂಬಿಕೆಯನ್ನು ‘ತರ್ಕ’ಕ್ಕೆ ಒಳಪಡಿಸುವುದು ನ್ಯಾಯಾಧೀಶರ ಕೆಲಸವಲ್ಲ. ಇಂತಹವನ್ನು ತಡೆಯಬೇಕು. ಕಾನೂನು ಹೊರತುಪಡಿಸಿ ಇತರೆ ಮಾನದಂಡಗಳನ್ನು ಬಳಸಬಾರದು. ಇಂತಹವು ‘ಬಹುಸಂಸ್ಕೃತಿ’ಯ ದೇಶದಲ್ಲಿ ದುಬಾರಿಯಾಗುತ್ತದೆ.

ಡಾ. ಎಂ.ಎಸ್. ಮಣಿ

ಡಾ. ಎಂ.ಎಸ್. ಮಣಿ
ಸಾಮಾಜಿಕ ಮತ್ತು ಸಂಶೋಧನಾತ್ಮಕ ಲೇಖನಗಳನ್ನು ಬರೆಯುವ ಡಾ.ಎಂ.ಎಸ್.ಮಣಿ ಅವರು ಪತ್ರಕರ್ತರ ಸಂಘಟನೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಇವರ ತಲ್ಲಣ, ಹರಿವು, ಒಡಲಾಗ್ನಿ, ಭಾವಭಿತ್ತಿ, ಮನುಭಾರತ ಪುಸ್ತಕಗಳು ಪ್ರಕಟವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಧಾರವಾಡ | ಪ್ರಕಾಶ್ ರಾಜ್ ಭಾಗವಹಿಸಿದ್ದ ಸಮುದಾಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನ : ದೂರು ದಾಖಲು

ಭಾನುವಾರ (ಆ.30) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾ ಭವನದಲ್ಲಿ ಆಯೋಜಿಸಿದ್ದ ಸಮುದಾಯ ಸಂಘಟನೆಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿ ಗಲಾಟೆ ಎಬ್ಬಿಸಿದ ಬಿಜೆಪಿ-ಸಂಘಪರಿವಾರದ ಬೆಂಬಲಿಗರ ವಿರುದ್ಧ ದೂರು ದಾಖಲಿಸಲಾಗಿದೆ. ಸಮುದಾಯ ಸಂಘಟನೆಯ ಧಾರವಾಡದ...

ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ : ಚಾಲಕ, ಕಂಡಕ್ಟರ್ ಬಂಧನ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2012ರಲ್ಲಿ ನಡೆದ ನಿರ್ಭಯಾ ಪ್ರಕರಣವನ್ನು ನೆನಪಿಸುವಂತಹ ಆಘಾತಕಾರಿ ಘಟನೆಯೊಂದು ನಡೆದಿದೆ. ಸ್ಲೀಪರ್‌ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. indiatoday.in ವರದಿಯ ಪ್ರಕಾರ, ಈ ಘಟನೆಯು ಆಗಸ್ಟ್ 4ರ...

ಜಗತ್ತಿನ ಪ್ರತಿಯೊಬ್ಬರಿಗೂ ಲ್ಯಾಪ್‌ಟಾಪ್ ಕೊಳ್ಳುವಷ್ಟು ಕಪ್ಪು ಹಣ ಪ್ರಪಂಚದಲ್ಲಿದೆ: ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್

ಅಕ್ರಮ ಹಣ ವರ್ಗಾವಣೆ (Money Laundering) ಮತ್ತು 'ಡಿಜಿಟಲ್ ಅರೆಸ್ಟ್' ನಂತಹ ಆನ್‌ಲೈನ್ ವಂಚನೆಗಳ ಪ್ರಮಾಣದ ಕುರಿತು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ರೀತಿಯ...

ಪೆಟ್ರೋಲ್‌ನಲ್ಲಿ ಎಥನಾಲ್ ಪ್ರಮಾಣ ಬಹಿರಂಗಪಡಿಸುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಪೆಟ್ರೋಲ್‌ನಲ್ಲಿ ಬೆರೆಸಲಾಗುವ ಎಥನಾಲ್ ಪ್ರಮಾಣವನ್ನು ಕಡ್ಡಾಯವಾಗಿ ನಮೂದಿಸಬೇಕು ಮತ್ತು ವಾಹನಗಳಿಗೆ ಎಥನಾಲ್ ಮಿಶ್ರಿತ ಇಂಧನದ ಹೊಂದಾಣಿಕೆಯ ಬಗ್ಗೆ ಹೆಚ್ಚಿನ ಪಾರದರ್ಶಕತೆ ತರಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ವಿಚಾರಣೆ...

ದೆಹಲಿ| ಜಮಾ ಮಸೀದಿ ಸುತ್ತಮುತ್ತಲಿನ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದ ಎಂಸಿಡಿ

ದೆಹಲಿ ಹೈಕೋರ್ಟ್ ನಿರ್ದೇಶನದಂತೆ, ಮೊಘಲರ ಕಾಲದ ಐತಿಹಾಸಿಕ ಜಮಾ ಮಸೀದಿ ಸುತ್ತಮುತ್ತಲಿನ ಅಕ್ರಮ ನಿರ್ಮಾಣಗಳನ್ನು ಸಮೀಕ್ಷೆ ಮಾಡಿ, ಒತ್ತುವರಿಯನ್ನು ತೆರವುಗೊಳಿಸುವ ಬೃಹತ್ ಕಾರ್ಯಾಚರಣೆಯನ್ನು ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಸೋಮವಾರ (ಆ.31) ಪ್ರಾರಂಭಿಸಿದೆ...

ವೆನೆಜುವೆಲಾ ಮತ್ತೆ ಎದ್ದು ನಿಲ್ಲಲಿದೆ: ಬಂಧನದಲ್ಲಿರುವ ವೆನೆಜುವೆಲಾ ಮಾಜಿ ಅಧ್ಯಕ್ಷ ಮಡುರೊ ಮೊದಲ ಫೋಟೋ ಹಂಚಿಕೆ

ಜನವರಿಯಲ್ಲಿ ಅಮೆರಿಕ ಪಡೆಗಳಿಂದ ಬಂಧನಕ್ಕೊಳಗಾಗಿದ್ದ ವೆನೆಜುವೆಲಾದ ಮಾಜಿ ಅಧ್ಯಕ್ಷ ನಿಕೋಲಸ್ ಮಡುರೊ, ಅಮೆರಿಕದ ಬಂಧನ ಕೇಂದ್ರದಿಂದ ತಮ್ಮ ಎರಡು ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಬಂಧನದ ಬಳಿಕ ಮಡುರೊ ಅವರ ಫೋಟೋಗಳು ಹೊರಬಂದಿರುವುದು...

‘ಮಹಿಳೆಯರು ಆಭರಣದಂತೆ ಮನೆಯಲ್ಲೇ ಇರಬೇಕು’ ಮುಸ್ಲಿಂ ಧರ್ಮಗುರು ವಿವಾದಾತ್ಮಕ ಹೇಳಿಕೆ

ಮಹಿಳೆಯರು ಮನೆಯಲ್ಲೇ ಇರಬೇಕು ಮತ್ತು ಸಾರ್ವಜನಿಕ ಕ್ಷೇತ್ರಕ್ಕೆ ಪ್ರವೇಶಿಸಬಾರದು ಎಂದು ಕೇರಳದ ಪ್ರಭಾವಿ ಮುಸ್ಲಿಂ ಧರ್ಮಗುರು ಶೇಖ್ ಅಬೂಬಕರ್ ಅಹ್ಮದ್ ನೀಡಿದ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ...

ಹಲ್ದ್ವಾನಿ ‘ಶುದ್ಧೀಕರಣ’ ವಿವಾದ : ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್

ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ರ್‍ಯಾಲಿ ನಡೆದ ಸ್ಥಳದಲ್ಲಿ ಬಿಜೆಪಿ ಬೆಂಬಲಿಗರು 'ಶುದ್ಧೀಕರಣ' ನಡೆಸಿದ ವಿವಾದ ಹೊಸ ರಾಜಕೀಯ ಮತ್ತು ಕಾನೂನು ತಿರುವು ಪಡೆದುಕೊಂಡಿದೆ. ಜಾತಿ ನಿಂದನೆಗೆ ಸಂಬಂಧಿಸಿದಂತೆ...

ಜೈಲಿನಲ್ಲಿದ್ದ KPSC ಅಧ್ಯಕ್ಷರ ಭೇಟಿಯಾಗಿದ್ದೇಕೆ HDK? ಪ್ರಿಯಾಂಕ್ ಖರ್ಗೆ ಪ್ರಶ್ನೆ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳಿಗೆ ಅವರು ತಾರ್ಕಿಕ ಸ್ಪಷ್ಟನೆ ನೀಡುವ ಬದಲು, ಜಾರಿಕೊಳ್ಳುವ ರೀತಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ ಎಂದು...

ನೇಪಾಳ: ಶಿಕ್ಷಕನ ಸಮಯಪ್ರಜ್ಞೆಯಿಂದ ಉಳಿಯಿತು 1643 ಮಕ್ಕಳ ಪ್ರಾಣ

ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಜಲಪ್ರಳಯಕ್ಕೆ ಬಲಿಯಾದವರ ಸಂಖ್ಯೆ 700ರ ಗಡಿ ದಾಟಿದೆ. 2,000ಕ್ಕೂ ಹೆಚ್ಚು ಜನರು ಇಂದಿಗೂ ನಾಪತ್ತೆಯಾಗಿದ್ದು, ರಕ್ಷಣಾ ಪಡೆಗಳು ಅವಿಶ್ರಾಂತವಾಗಿ ಶೋಧ ಕಾರ್ಯ ನಡೆಸುತ್ತಿವೆ. ಪ್ರಕೃತಿ ತನ್ನ...