Homeಫ್ಯಾಕ್ಟ್‌ಚೆಕ್ಮೋದಿ ಭಾಷಣದ ಅಡಚಣೆಗೆ ಟೆಲಿಫ್ರಾಮ್ಟರ್‌ ಕಾರಣವಲ್ಲ: ಆಲ್ಟ್‌ ನ್ಯೂಸ್‌ ಬಿಚ್ಚಿಟ್ಟ ಸತ್ಯ ಇಲ್ಲಿದೆ!

ಮೋದಿ ಭಾಷಣದ ಅಡಚಣೆಗೆ ಟೆಲಿಫ್ರಾಮ್ಟರ್‌ ಕಾರಣವಲ್ಲ: ಆಲ್ಟ್‌ ನ್ಯೂಸ್‌ ಬಿಚ್ಚಿಟ್ಟ ಸತ್ಯ ಇಲ್ಲಿದೆ!

- Advertisement -
- Advertisement -

“ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ವೇಳೆ ಟೆಲಿಪ್ರಾಮ್ಟರ್‌‌ ನಿಂತು ಹೋಗಿದೆ. ಹೀಗಾಗಿ ಭಾಷಣಕ್ಕೆ ಅಡಚಣೆಯಾಗಿದೆ” ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿರುವ ವಿಡಿಯೊದ ಸತ್ಯಾಸತ್ಯತೆಯನ್ನು ‘ಆಲ್ಟ್‌ ನ್ಯೂಸ್’ ಬಯಲಿಗೆಳೆದಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜನವರಿ 17ರಂದು ವಿಶ್ವ ಆರ್ಥಿಕ ವೇದಿಕೆಯ (WEF) ದಾವೋಸ್ ಅಜೆಂಡಾ 2022 ಆನ್‌ಲೈನ್ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮೋದಿ ತಮ್ಮ ಭಾಷಣದ ಮಧ್ಯದಲ್ಲಿ ಮಾತನಾಡುವುದನ್ನು ನಿಲ್ಲಿಸಿದ ಸುತ್ತಲೇ ಶೃಂಗಸಭೆಯ ಮುಖ್ಯಾಂಶಗಳು ಮತ್ತು ಸಾಮಾಜಿಕ ಮಾಧ್ಯಮದ ಟ್ರೆಂಡ್‌ಗಳು ಗಿರಿಕಿಹೊಡೆಯುತ್ತಿವೆ. ವಿರೋಧ ಪಕ್ಷಗಳ ನಾಯಕರು ಸೇರಿದಂತೆ ಸಾಮಾಜಿಕ ಮಾಧ್ಯಮ ಬಳಕೆದಾರರ ದೊಡ್ಡ ಗುಂಪು ಟೆಲಿಪ್ರಾಮ್ಟರ್‌‌ ವೈಫಲ್ಯವನ್ನು ಎತ್ತಿ ತೋರಿಸಿದ್ದಾರೆ. ” ಟೆಲಿಪ್ರಾಮ್ಟರ್‌‌ ಇಲ್ಲದೆ ಭಾಷಣ ಮಾಡಲು ಸಾಧ್ಯವಿಲ್ಲ” ಎಂದು ಪ್ರಧಾನಿ ಮೋದಿಯವರನ್ನು ಲೇವಡಿ ಮಾಡಲಾಗಿದೆ.

#TelepromptorPM ಹ್ಯಾಶ್‌ಟ್ಯಾಗ್‌‌ನೊಂದಿಗೆ ಲೈವ್ ಸ್ಟ್ರೀಮ್ ಸಮಯದಲ್ಲಿ ಅಡಚಣೆಯಾದ 37 ಸೆಕೆಂಡುಗಳ ವೀಡಿಯೊವನ್ನು ಕಾಂಗ್ರೆಸ್‌ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. #TelepromptorPM ಎಂಬ ಹ್ಯಾಶ್‌ಟ್ಯಾಗ್ ವೆರಿಫೈ ಮಾಡಲಾದ ಕಾಂಗ್ರೆಸ್ ಖಾತೆಗಳು ಬಳಸಿವೆ. ಕಾಂಗ್ರೆಸ್ ವಕ್ತಾರರಾದ ಶಾಮಾ ಮೊಹಮ್ಮದ್, ಪಶ್ಚಿಮ ಬಂಗಾಳ ಕಾಂಗ್ರೆಸ್, ಪಶ್ಚಿಮ ಬಂಗಾಳ ಪ್ರದೇಶ ಮಹಿಳಾ ಕಾಂಗ್ರೆಸ್, ಮಣಿಪುರ ಪ್ರದೇಶ ಕಾಂಗ್ರೆಸ್ ಸೇವಾದಳ ಮತ್ತು ತಮಿಳುನಾಡು ಪ್ರದೇಶ ಕಾಂಗ್ರೆಸ್ ಸೇವಾದಳ ಖಾತೆಗಳಲ್ಲೂ ಇದನ್ನೇ ಪ್ರತಿಪಾದನೆ ಮಾಡಲಾಗಿದೆ.

ಕಾಂಗ್ರೆಸ್ ನಾಯಕ ರೇವಂತ್ ರೆಡ್ಡಿ ಎರಡು ವೀಡಿಯೊ ಕ್ಲಿಪ್‌ಗಳ ಜೋಡನೆಯನ್ನು ಟ್ವೀಟ್ ಮಾಡಿದ್ದಾರೆ. “ಮೋದಿ ಮಾತನಾಡಲು ಟೆಲಿಪ್ರಾಮ್ಟರ್‌‌ ಬಳಸುತ್ತಾರೆ” ಎಂದು ಆರೋಪಿಸಿರುವ ರಾಹುಲ್ ಗಾಂಧಿಯವರ ಹಳೆಯ ವೀಡಿಯೊ ಮತ್ತು ಬಲಭಾಗದಲ್ಲಿ ದಾವೋಸ್‌ನಲ್ಲಿ ಪ್ರಧಾನಿ ಮೋದಿಯವರ ಅಡ್ಡಿಪಡಿಸಿದ ಭಾಷಣದ ವೀಡಿಯೊವನ್ನು ಇವರ ಟ್ವೀಟ್‌ನಲ್ಲಿ ಕಾಣಬಹುದು. ಈ ವೀಡಿಯೊವನ್ನು ಕಾಂಗ್ರೆಸ್ ನಾಯಕರಾದ ಸಲ್ಮಾನ್ ನಿಜಾಮಿ, ರಾಮ್‌ಕಿಶನ್ ಓಜಾ, ಛತ್ತೀಸ್‌ಗಢ ಪ್ರದೇಶ ಕಾಂಗ್ರೆಸ್ ಸೇವಾದಳ ಮತ್ತು ಪಂಜಾಬ್ ಪ್ರದೇಶ ಕಾಂಗ್ರೆಸ್ ಸೇವಾದಳ ಖಾತೆಗಳೂ ಹಂಚಿಕೊಂಡಿವೆ.

ಎಎಪಿ ನಾಯಕ ಸಂಜಯ್ ಸಿಂಗ್ ಮತ್ತು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಕೂಡ ಇದೇ ಪ್ರತಿಪಾದನೆ ಮಾಡಿದ್ದಾರೆ.

ಮಹುವಾ ಮೊಯಿತ್ರಾ ಅಭಿಮಾನಿಗಳು [4 ಲಕ್ಷಕ್ಕೂ ಹೆಚ್ಚು ಫಾಲೋಯರ್ಸ್], ಪ್ರಿಯಾಂಕಾ ಗಾಂಧಿ ಅಭಿಮಾನಿಗಳ ಪುಟ [7 ಲಕ್ಷಕ್ಕೂ ಹೆಚ್ಚು ಫಾಲೋಯರ್ಸ್]; ಲೈ ಲಾಮಾ [1.5 ಲಕ್ಷಕ್ಕೂ ಹೆಚ್ಚು ‌ಫಾಲೋಯರ್ಸ್]; ವೆಲ್ ಸನ್ನಿ [9 ಸಾವಿರಕ್ಕಿಂತ ಹೆಚ್ಚು ಫಾಲೋಯರ್ಸ್‌ಗಳು] ಖಾತೆಗಳಲ್ಲೂ ಇದೇ ಪ್ರತಿಪಾದನೆ ಮಾಡಲಾಗಿದೆ.

ಟೆಲಿಪ್ರಾಮ್ಟರ್‌‌ ದೋಷದಿಂದಾಗಿ ಅಡೆಚಣೆಯಾಗಿಲ್ಲ

ವರ್ಲ್ಡ್ ಎಕನಾಮಿಕ್ ಫೋರಮ್ (ಡಬ್ಲ್ಯುಇಎಫ್) ಆನ್‌ಲೈನ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರ ಭಾಷಣಕ್ಕೆ ಸಂಬಂಧಿಸಿದ ವಿವಾದವನ್ನು ಅರ್ಥಮಾಡಿಕೊಳ್ಳಲು, ತಾಂತ್ರಿಕ ದೋಷದ ಕಾರಣಗಳ ಅನುಕ್ರಮವನ್ನು ಆಲ್ಟ್‌ ನ್ಯೂಸ್ ಪರಿಶೀಲಿಸಿದೆ.

ನರೇಂದ್ರ ಮೋದಿ, ದೂರದರ್ಶನ ನ್ಯಾಷನಲ್‌ ಮತ್ತು ವರ್ಲ್ಡ್ ಎಕನಾಮಿಕ್ ಫೋರಮ್ (ಡಬ್ಲ್ಯುಇಎಫ್) ಯೂಟ್ಯೂಬ್‌ ಚಾನೆಲ್‌ಗಳಲ್ಲಿ ಪ್ರಧಾನಿ ಮೋದಿಯವರ ಭಾಷಣ ಲಭ್ಯವಿದೆ. ಡಿಡಿ ಮತ್ತು ಡಬ್ಲ್ಯುಇಎಫ್ ಚಾನೆಲ್‌ಗಳಲ್ಲಿ ಕಾಣಬಹುದಾದ ಅಡಚಣೆಯನ್ನು ನರೇಂದ್ರ ಮೋದಿ ಯೂಟ್ಯೂಬ್‌ ಚಾನೆಲ್‌ನಲ್ಲಿ ಕಾಣಲು ಸಾಧ್ಯವಾಗಿಲ್ಲ.

ಡಿಡಿ ಆವೃತ್ತಿಯ ವೀಡಿಯೊದಲ್ಲಿ ಪ್ರಧಾನಿ ಈಗಾಗಲೇ ಆರು ನಿಮಿಷಗಳ ಕಾಲ ಮಾತನಾಡಿದ ಭಾಗವನ್ನು WEFನ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಲಾಗಿಲ್ಲ ಎಂದು ಆಲ್ಟ್‌ನ್ಯೂಸ್‌ ಗಮನಿಸಿದೆ. ವಾಸ್ತವವಾಗಿ, ಲೈವ್ ಸ್ಟ್ರೀಮ್‌ ಆದ WEFನ ಆವೃತ್ತಿಯ ಮೊದಲ ಎಂಟು ನಿಮಿಷಗಳು ಬ್ಲಾಕ್‌ ಆಗಿವೆ. ಲೈವ್ ಸ್ಟ್ರೀಮ್ ಪ್ರಾರಂಭವಾದಾಗ, PM ಈಗಾಗಲೇ ಭಾಷಣದ ಮಧ್ಯಭಾಗದಲ್ಲಿರುವುದನ್ನು ಕಾಣಬಹುದು. WEFನ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಧಾನಮಂತ್ರಿಯವರ ಭಾಷಣದ ಆರಂಭಿಕ ಭಾಗವನ್ನು ಲೈವ್-ಸ್ಟ್ರೀಮ್ ಮಾಡದ ಕಾರಣ ತಾಂತ್ರಿಕ ದೋಷವಿತ್ತು ಎಂದು ತಿಳಿಯಬಹುದು.

ಆಲ್ಟ್ ನ್ಯೂಸ್ ಜಾಲತಾಣವು WEF ಕಾರ್ಯಕ್ರಮದ ಅನುಕ್ರಮವನ್ನು ಪರಿಶೀಲಿಸಿದ್ದು DD ಮತ್ತು WEF ಯೂಟ್ಯೂಬ್‌ ಚಾನೆಲ್‌ ವೀಡಿಯೊಗಳನ್ನು ಪರಿಶೀಲಿಸಿದೆ.

ಡಿಡಿಯ ಯೂಟ್ಯೂಬ್ ಚಾನೆಲ್‌ನಲ್ಲಿನ ವೀಡಿಯೊದ ಆರಂಭಿಕ ನಾಲ್ಕು ನಿಮಿಷಗಳಲ್ಲಿ, ಪಿಎಂ ಮೋದಿ ಮತ್ತು ಆತಿಥೇಯ ಡಬ್ಲ್ಯುಇಎಫ್ ಎಕ್ಸಿಕ್ಯೂಟಿವ್ ಚೇರ್ಮನ್ ಕ್ಲಾಸ್ ಶ್ವಾಬ್, ಕುಶಲೋಪರಿ ವಿನಿಮಯ ಮಾಡಿಕೊಂಡರು. 5:04 ನಿಮಿಷಗಳಿಗೆ ಪ್ರಧಾನಮಂತ್ರಿಯವರು ತಮ್ಮ ಭಾಷಣವನ್ನು ಪ್ರಾರಂಭಿಸುತ್ತಾರೆ. ಆದಾಗ್ಯೂ, ಕೆಲವು ಸೆಕೆಂಡುಗಳ ಮೊದಲು [5:00 ರಿಂದ 5:01 ನಿಮಿಷ ನೋಡಿ], ಒಬ್ಬ ವ್ಯಕ್ತಿಯು ಇಂಗ್ಲಿಷ್‌ನಲ್ಲಿ “… ಗ್ರಾಫಿಕ್ಸ್… ಸರ್?” ಎನ್ನುವುದನ್ನು ಕೇಳಬಹುದು. ಅದರ ನಂತರ ನರೇಂದ್ರಮೋದಿಯವರು 5:12 ನಿಮಿಷಕ್ಕೆ ತಮ್ಮ ಇಯರ್‌ಫೋನ್‌‌ ತೆಗೆದು ತಮ್ಮ ಭಾಷಣವನ್ನು ಪ್ರಾರಂಭಿಸುತ್ತಾರೆ.

7:07 ನಿಮಿಷದ ಅವಧಿಯಲ್ಲಿ, ಪ್ರಧಾನಿ ಮೋದಿ ಎಡಕ್ಕೆ ನೋಡುತ್ತಾರೆ ಮತ್ತು ಮಾತನಾಡುವುದನ್ನು ನಿಲ್ಲಿಸುತ್ತಾರೆ. ಸುಮಾರು, 7:15ರ ನಿಮಿಷದಲ್ಲಿ ‌ಆತಿಥೇಯರನ್ನು ಮೋದಿ ಸಂಭೋದಿಸುತ್ತಾರೆ. “ನೀವು ನನ್ನನ್ನು ಆಲಿಸುತ್ತಿದ್ದೀರಾ?” ಎಂದು ಕೇಳುತ್ತಾರೆ. ಆಲಿಸುತ್ತಿರುವುದಾಗಿ ಶ್ವಾಬ್‌ ಖಚಿತಪಡಿಸಿದ್ದಾರೆ. ಆಗ ಪ್ರಧಾನಮಂತ್ರಿಯವರು ಕೇಳುತ್ತಾರೆ, “ನಮ್ಮ ಇಂಟರ್ಪ್ರಿಟರ್ ಕೂಡ ಕೇಳಬಲ್ಲರೇ?”. ಶ್ವಾಬ್ ದೃಢೀಕರಿಸುತ್ತಾರೆ. “ಸಂಗೀತದೊಂದಿಗೆ ಒಂದು ಸಣ್ಣ ಪರಿಚಯ…”. ನಂತರ ಅಧಿಕೃತವಾಗಿ ಅಧಿವೇಶನವು ಮತ್ತೆ ಪ್ರಾರಂಭವಾಗುತ್ತದೆ (7:45 ನಿಮಿಷದಲ್ಲಿ ಪರಿಶೀಲಿಸಿ).

10:49 ನಿಮಿಷದ ಅವಧಿಯಲ್ಲಿ ಪ್ರಧಾನಿ ಮೋದಿ ತಮ್ಮ ಭಾಷಣವನ್ನು ಪುನರಾರಂಭಿಸುತ್ತಾರೆ. ಅವರ ಭಾಷಣದ 5:04 ನಿಮಿಷದಲ್ಲಿ ನೋಡಿದ ಹೇಳಿಕೆಯನ್ನು ಮತ್ತೆ ಗಮನಿಸಬಹುದು.

WEFನ ಯೂಟ್ಯೂಬ್ ಚಾನೆಲ್‌ನಲ್ಲಿ ಅದೇ ವೀಡಿಯೊವನ್ನು ವೀಕ್ಷಿಸಿದ ನಂತರ, ಪಿಎಂ ಮೋದಿ ಎಡಕ್ಕೆ ನೋಡಿದ ನಿಖರವಾದ ಸಮಯವನ್ನು ಗುರುತಿಸಬಹುದು. ಕಾರ್ಯಕ್ರಮ ನಿರ್ವಹಣಾ ತಂಡದ ಯಾರೋ ಒಬ್ಬರು, “ಪ್ರಧಾನ ಮಂತ್ರಿಯವರು ಎಲ್ಲರೂ ಸೇರಿದ್ದಾರೆಯೇ ಅಥವಾ ಇಲ್ಲವೇ ಎಂದು ಕೇಳಬೇಕು” ಎಂದು ಸಲಹೆ ನೀಡುತ್ತಾರೆ. ಹಿಂದಿಯಲ್ಲಿ ಒಂದು ಧ್ವನಿಯು ಪ್ರಧಾನಿ ಮೋದಿಯನ್ನು ಉದ್ದೇಶಿಸಿ, “ಸರ್, ಎಲ್ಲರೂ ಸೇರಿದ್ದರೆ ಅವರನ್ನು ಒಮ್ಮೆ ಕೇಳಿ…” ಎನ್ನುವುದನ್ನು ಗಮನಿಸಬಹುದು. ಇದಾದ ನಂತರವೇ ಪ್ರಧಾನಿಯವರು ತಮ್ಮ ಭಾಷಣ ಮತ್ತು ದ್ವಿಭಾಷಿಯ ಧ್ವನಿಯ ಕುರಿತು ವಿಚಾರಿಸುತ್ತಾರೆ. ಹೀಗಾಗಿ, ಪ್ರಧಾನಿ ಮೋದಿ ಮಾತನಾಡುವುದನ್ನು ನಿಲ್ಲಿಸಲು- ಕಾರ್ಯಕ್ರಮವನ್ನು ನಿರ್ವಹಿಸುವ ತಂಡದ ಮಧ್ಯಪ್ರವೇಶವೇ ಕಾರಣವಾಗಿದೆ.

ಅಡಚಣೆ ಇರುವುದನ್ನು ಮನಗಂಡ ಕ್ಲಾಸ್ ಶ್ವಾಬ್ ಪ್ರಧಾನಿಯನ್ನು ಪರಿಚಯಿಸುತ್ತಾರೆ. ಪಿ.ಎಂ. ಮತ್ತೆ ಭಾಷಣ ಆರಂಭಿಸುತ್ತಾರೆ. ಕಾರ್ಯಕ್ರಮದಲ್ಲಿ ಉಂಟಾದ ತಾಂತ್ರಿಕ ದೋಷದಿಂದಾಗಿ ಅಡಚಣೆಯಾಗಿದೆ. ಆದರೆ ಟೆಲಿಪ್ರಾಮ್ಟರ್‌‌ ಸಮಸ್ಯೆಯಾಗಿದೆ ಎಂಬುದು ಸತ್ಯಕ್ಕೆ ದೂರವಾಗಿದೆ.


ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್‌: ಹೈದ್ರಾಬಾದ್‌ನಲ್ಲಿ ಉದ್ಘಾಟನೆಯಾಗಲಿರುವ ರಾಮಾನುಜಾಚಾರ್ಯರ ಪ್ರತಿಮೆ ಪ್ರಧಾನಿ ಮೋದಿ ನಿರ್ಮಿಸಿದ್ದಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

4 COMMENTS

  1. ತಾಂತ್ರಿಕ ಸಮಸ್ಯೆ ಏನೇ ಇರಲಿ, ಮೋದಿ ಟೆಲೆಫ್ರಾಂಪ್ಟರ್ ಬಳಸುತ್ತಾರೆ ಎಂಬುದು ಸಾಬೀತಾಯಿತು. ಡಾ.ಮನಮೋಹನ್ ಸಿಂಗ್ ಎಂದೂ ಟೆಲೆಫ್ರಾಂಪ್ಟರ್ ಬಳಸುತ್ತಲೇ ಇರಲಿಲ್ಲ!
    ನೆಹರು ಸಹಾ ಟೆಲೆ ಫ್ರಾಂಪ್ಟರ್ ಬಳಸುತ್ತಿದ್ದರು ಎಂದು ಭಕ್ತರು ಹೇಳುತ್ತಿದ್ದಾರೆ !!!☺️😊☺️😊😢

  2. ಇಲ್ಲಿಯ ವರೆಗೆ ಜನರು ಮೋದಿ ಅನಕ್ಷರಸ್ಥ ಎಂದು ತಿಳಿದಿದ್ದರು. ಆದರೆ ಮೋದಿಗೆ ಓದಲು ಬರೆಯಲು ಬರುತ್ತದೆ ಎಂದು ಈಗ ದೇಶದ ಜನಕ್ಕೆ ಗೊತ್ತಾಗಿ ಸಂತೋಷವಾಯಿತು !!.
    ಥ್ಯಾಂಕ್ಸ್ ಟೆಲೆಫ್ರಾಂಪ್ಟರ್ ! ☺️😊☺️😊😢

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...