Homeಕರ್ನಾಟಕಭೂ ಸುಧಾರಣಾ ಕಾನೂನಿನ ತಿದ್ದುಪಡಿ ಮತ್ತು ಅದರ ಪರಿಣಾಮಗಳು - ಡಾ.ಎ.ಆರ್ ವಾಸವಿ

ಭೂ ಸುಧಾರಣಾ ಕಾನೂನಿನ ತಿದ್ದುಪಡಿ ಮತ್ತು ಅದರ ಪರಿಣಾಮಗಳು – ಡಾ.ಎ.ಆರ್ ವಾಸವಿ

ಈ ಕಾನೂನು ರೈತರ ಹಿತಾಸಕ್ತಿಗಳನ್ನು ರಕ್ಷಿಸುವ ಬದಲು ಬೇಗುದಿಯನ್ನು ಹೆಚ್ಚಿಸಿತೆಂಬುದಕ್ಕೆ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಸಾವಿರಾರು ದಾವೆಗಳೇ ಸಾಕ್ಷಿ. ಎಷ್ಟೋ ನಾಗರಿಕರು ಈ ಕೊನೆಗಾಣದ ಕಾನೂನಾತ್ಮಕ ಬಲೆಯಲ್ಲಿ ಇನ್ನೂ ಒದ್ದಾಡುತ್ತಿದ್ದಾರೆ.

- Advertisement -
- Advertisement -

ಇತ್ತೀಚೆಗಿನ ಕರ್ನಾಟಕ ಸರಕಾರದ ಭೂಸುಧಾರಣಾ ಕಾನೂನಿನ ತಿದ್ದುಪಡಿ ಮತ್ತು ಅದರ ಸುತ್ತ ನಡೆಯುತ್ತಿರುವ ಚರ್ಚೆ ಈ ಹಿಂದಿನ ಕಾನೂನು ಮತ್ತು ಈಗ ತರಲಿಚ್ಛಿಸುತ್ತಿರುವ ತಿದ್ದುಪಡಿಯ ಪರಿಣಾಮಗಳೇನು ಎಂಬುದನ್ನು ವಿಶ್ಲೇಷಿಸಲು ನಮ್ಮನ್ನು ಒತ್ತಾಯಿಸುತ್ತದೆ.

ಗ್ರಾಮಾಂತರ ಪ್ರದೇಶಗಳು ವಿಸ್ತೃತ ಸಂಕಷ್ಟಕ್ಕೆ ಸ್ಪಂದಿಸಲು ಗಮನಾರ್ಹ ಪ್ರಯತ್ನಗಳಾಗುತ್ತಿದ್ದ ಕಾಲದಲ್ಲಿ, ಅಂದರೆ 1961 ರಲ್ಲಿ ಕರ್ನಾಟಕ ಭೂಸುಧಾರಣಾ ಕಾನೂನು 1961 ನ್ನು ಜಾರಿಗೊಳಿಸಲಾಯಿತು. ತದನಂತರದ ತಿದ್ದುಪಡಿಗಳು, ಅದರಲ್ಲೂ 1974ರ ತಿದ್ದುಪಡಿಯು, ಸಣ್ಣ ಮತ್ತು ಅತಿಸಣ್ಣ ರೈತರನ್ನೂ, ಕೃಷಿ ಆರ್ಥಿಕತೆಯನ್ನೂ ರಕ್ಷಿಸಲು ಜಾರಿಗೆಬಂದಿತು. ತನ್ಮೂಲಕ ರೈತಾಪಿ ಭೂಮಿ ಕಬಳಿಸಿ ಅವರನ್ನು ದಿವಾಳಿಯೆಬ್ಬಿಸುವ ಭಕ್ಷಕ ಬಂಡವಾಳ- ಅದರಲ್ಲೂ ಕೈಗಾರಿಕಾ, ನಗರ ಜನ್ಯ ಬಂಡವಾಳದಿಂದ ರಕ್ಷಿಸಲು ಅನುವಾಯಿತು. ಇದು ಮಿಶ್ರ ಫಲಿತಾಂಶವನ್ನು ನೀಡಿದೆ. ಒಂದೆಡೆ ಭೂಹಿಡುವಳಿಯ ಸಂರಚನೆ ಬಹಳಷ್ಟೇನೂ ಬದಲಾಗದಿದ್ದರೂ ಸಣ್ಣ ಮತ್ತು ಅತಿಸಣ್ಣ ರೈತರ ಭೂ-ನಷ್ಟ ಮತ್ತು ಸ್ಥಳಾಂತರ ನಡೆಯಲಿಲ್ಲ. ಆದರೆ ಈ ಕಾನೂನು ಮತ್ತು ತದನಂತರದ ತಿದ್ದುಪಡಿಗಳ ನೇತ್ಯಾತ್ಮಕ ಪರಿಣಾಮಗಳು ಮತ್ತು ವಿಕೃತಿಗಳು ಕಣ್ಣ ಮುಂದಿವೆ.

ಇದರಲ್ಲಿ ಪ್ರಮುಖವೆಂದರೆ ಕೃಷಿಕರಲ್ಲದವರಿಗೆ ಕೃಷಿ ಭೂಮಿ ಕೊಳ್ಳಲಾಗದ ಪರಿಸ್ಥಿತಿ. ಇದು ಅಧಿಕಾರಶಾಹಿಯ ಉರುಳನ್ನು ಸೃಷ್ಟಿ ಮಾಡಿದ್ದಲ್ಲದೇ, ಭೂ ವ್ಯವಹಾರದಲ್ಲಿ ಅನೇಕ ಭ್ರಷ್ಟ ಹಾದಿಗಳನ್ನು ತೆರೆಯಿತು. ಸರಕಾರ ಅಂದರೆ ವಾಸ್ತವದಲ್ಲಿ ವಿವಿಧ ರಾಜಕೀಯ ಸೂತ್ರಧಾರರು ಈ ತಡೆ ಇರುವಾಗಲೇ ಕಾನೂನನ್ನು ದಾಟಿಹೋಗುವ ಹೊಸ ನಿಯಮಗಳನ್ನು ಮತ್ತು ಪ್ರಕ್ರಿಯೆಗಳನ್ನು ಸೃಷ್ಟಿಸಿದರು.

ಭೂಸ್ವಾಧೀನ ಮತ್ತು ನಂತರ ಅದನ್ನು ಕೈಗಾರಿಕೆ, ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಹಂಚುವ ಪ್ರಕ್ರಿಯೆ ಭಟ್ಟಂಗಿ ಬಂಡವಾಳಶಾಹಿಯನ್ನು ಸಶಕ್ತಗೊಳಿಸುವ ಮತ್ತು ಸರಕಾರ ಮತ್ತು ಚುನಾಯಿತ ನಾಯಕರನ್ನು ಭ್ರಷ್ಟಗೊಳಿಸುವ ಹೊಸ ಮೂಲಗಳಾದವು. ಇದರಿಂದಾಗಿ ಸರಕಾರಕ್ಕೆ ಆದಾಯ ನಷ್ಟವಾಗಿದ್ದಷ್ಟೇ ಅಲ್ಲ; ದಢೂತಿ ರಾಜಕೀಯ ಮಂದಿ, ಭಟ್ಟಂಗಿ ಬಂಡವಾಳಿಗರು, ರಿಯಲ್ ಎಸ್ಟೇಟ್ ಕುಳಗಳು, ಭೂ ಮಾಫಿಯಾ ಮತ್ತು ರಾತ್ರೋರಾತ್ರಿ ಓಡಿಹೋಗುವ ಖದೀಮ ಉದ್ಯಮಪತಿಗಳು ಇದರ ಲಾಭ ಪಡೆದರು.

ಇದಕ್ಕಿಂತ ಹೆಚ್ಚಾಗಿ, ರೈತ ಸಮುದಾಯ ಈ ಕಾಯಿದೆಯ ಕಳಪೆ ಅನುಷ್ಠಾನ, ಕಾನೂನಾತ್ಮಕ ವಿಕೃತಿಗಳು ಹಾಗೂ ಅಧಿಕಾರಶಾಹಿಯ ಭಾರದಿಂದ ಬಳಲಿದವು. ನೈಜ ರೈತರಿಗೆ ತಮ್ಮ ಹಿಡುವಳಿಯನ್ನು ಹೆಚ್ಚಿಸಲು ಆಗಲಿಲ್ಲ; ಸಣ್ಣ ಹಿಡುವಳಿದಾರರಿಗೆ ತಮ್ಮ ಜಮೀನನ್ನು ಹೊರಗಿನವರಿಗೆ ಮಾರಲು ಸಾಧ್ಯವಾಗಲಿಲ್ಲ; ಘಾಸಿಗೊಂಡ ಭೂ ಮಾರುಕಟ್ಟೆ ದಲ್ಲಾಳಿಗಳು ಮತ್ತು ಏಜೆಂಟರಿಗಷ್ಟೇ ಲಾಭ ಮಾಡಿಕೊಟ್ಟಿತು.

ಸ್ವತಃ ಆರ್ಥಿಕ ಕಷ್ಟದಿಂದಾಗಿ ಬೇಸಾಯ ಮಾಡಲಾಗದ ಸಣ್ಣ ರೈತರು ಭೋಗ್ಯದ ಕೃಷಿಯ ಭಾಗವಾಗುವ ಉದಾಹರಣೆ ಗಮನಿಸಿ. ದೊಡ್ಡ ರೈತರು ಇಲ್ಲಾ ಉದ್ಯಮಶೀಲರ ಜೊತೆ ಈ ಭೋಗ್ಯ ಕರಾರಿಗೆ ಸಹಿಹಾಕಿದ ಮೇಲೆ ಆ ಮಂದಿ ಸೀಮಿತ ಅವಧಿಗೆ ಈ ಜಮೀನಲ್ಲಿ ಭೂಮಿಯ ಸಾರ ಹೀರುವ ಕೃಷಿ ಮಾಡುತ್ತಿದ್ದಾರೆ. ಈ ಉಲ್ಟಾ ಗೇಣಿ ಪದ್ಧತಿಯಲ್ಲಿ ಬಂಡವಾಳಶಾಹಿಗಳು, ಗೇಣಿದಾರರು, ಬಡ ರೈತ ಭೂಮಾಲೀಕ! ಈ ಮಾಲೀಕ ತನ್ನ ಜಮೀನಿನಲ್ಲೇ ಕೂಲಿಯಾಳಾಗಿ ದುಡಿಯುವ ಸನ್ನಿವೇಶ ಉಂಟಾಗಿದೆ. ಈ ಭೋಗ್ಯಕ್ಕೆ ಪಡೆದ ಜಮೀನಿನಲ್ಲಿ ಶುಂಠಿ, ಅರಿಶಿನ, ಬಾಳೆ ಮುಂತಾದ ಬೆಳೆ ಬೆಳೆದು ಪರಿಸರಕ್ಕಾಗಿರುವ ಹಾನಿ ಇನ್ನೊಂದು ಉದಾಹರಣೆ. ಇಂಥ ವಿಷಯಗಳನ್ನು ಪರಿಹರಿಸುವ ಬದಲು ಇಡೀ ಲಕ್ಷ್ಯ ದೊಡ್ಡ ಬಂಡವಾಳಶಾಹಿಗಳಿಗೆ ಮತ್ತು ಶಂಕಾಸ್ಪದ ಉದ್ಯಮಶೀಲರಿಗೆ ಭೂಮಾರುಕಟ್ಟೆಯನ್ನು ಸುಲಭಗೊಳಿಸುವ ಕಡೆಗಿದೆ.

ನಿಜಕ್ಕೂ ಕೃಷಿಭೂಮಿ ಕೊಳ್ಳಬೇಕೆಂದಿದ್ದವರು, ಅದರಲ್ಲೂ ನಗರ ಮತ್ತು ಕೃಷಿಯೇತರ ಹಿನ್ನೆಲೆಯವರು, ಈ ಅಧಿಕಾರಶಾಹಿ ಜಾಲ ಮತ್ತು ದಲ್ಲಾಳಿಗಳ ಮೂಲಕ ಭೂಮಿ ಪಡೆಯಬೇಕಾದ ಸಂದರ್ಭ ಒದಗಿಬಂತು. ಕೃಷಿ ಮಾಡಬೇಕೆಂದಿದ್ದ ಅಥವಾ ಭೂಮಿಯನ್ನು ಇನ್ಯಾವುದೋ ಪ್ರಯೋಜನಕಾರಿ ಉದ್ದಿಶ್ಯಕ್ಕೆ ಬಳಸಬೇಕೆಂದಿದ್ದ ಆಸೆಗೇ ಎಳ್ಳುನೀರು ಬಿಡಬೇಕಾಗಿ ಬಂದ ಪ್ರಕರಣಗಳೂ ಇವೆ.

ಈ ಕಾನೂನು ರೈತರ ಹಿತಾಸಕ್ತಿಗಳನ್ನು ರಕ್ಷಿಸುವ ಬದಲು ಬೇಗುದಿಯನ್ನು ಹೆಚ್ಚಿಸಿತೆಂಬುದಕ್ಕೆ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಸಾವಿರಾರು ದಾವೆಗಳೇ ಸಾಕ್ಷಿ. ಎಷ್ಟೋ ನಾಗರಿಕರು ಈ ಕೊನೆಗಾಣದ ಕಾನೂನಾತ್ಮಕ ಬಲೆಯಲ್ಲಿ ಇನ್ನೂ ಒದ್ದಾಡುತ್ತಿದ್ದಾರೆ. ಆದ್ದರಿಂದ ಈ ಕಾನೂನನ್ನು ಮರುಪರಿಶೀಲಿಸಿ ಕೃಷಿಲೋಕದ ಅಂಚಿಗೆ ನೂಕಲ್ಪಟ್ಟಿರುವ ಮಂದಿಯ ಹಿತಾಸಕ್ತಿಯನ್ನು ರಕ್ಷಿಸುವುದು, ಗ್ರಾಮೀಣ ಆರ್ಥಿಕತೆಗೆ ಪ್ರೋತ್ಸಾಹ ಮತ್ತು ಆಹಾರ ಭದ್ರತೆಯ ಭರವಸೆಯನ್ನು ಖಚಿತಪಡಿಸುವುದರೊಂದಿಗೆ, ಗ್ರಾಮೀಣೇತರ ನಾಗರಿಕರಿಗೆ ಆರ್ಥಿಕವಾಗಿ ಸುಲಲಿತ ಮತ್ತು ಸಮರ್ಥನೀಯ ರೀತಿಯಲ್ಲಿ ಜಮೀನು ಹೊಂದುವ ವಿಧಿವಿಧಾನಗಳನ್ನು ರೂಪಿಸಬೇಕಾಗಿದೆ.

ಕೃಷಿ ಆರ್ಥಿಕತೆಯೇ ಕಳೆದ ಕೆಲವು ವರ್ಷಗಳಿಂದ ತೀವ್ರ ಹಿಂಜರಿಕೆಯಲ್ಲಿದೆ. ಹವಾಮಾನ ವೈಪರೀತ್ಯದ ಕಾರಣಕ್ಕೇ ದೀರ್ಘಕಾಲದ ಬರ, ಆಗಾಗ್ಗೆ ಪ್ರವಾಹಗಳು ನಮ್ಮ ರಾಜ್ಯದ ಒಳನಾಡಿನ ವಿಸ್ತಾರ ಭೂಪ್ರದೇಶಗಳನ್ನು ಹದಗೆಡಿಸಿವೆ. ಇದರೊಂದಿಗೇ ಕೋವಿಡ್-19 ಪಿಡುಗಿನ ಸಮಸ್ಯೆ; ಲಾಕ್‌ಡೌನ್‌ನಿಂದ ಉಂಟಾದ ಆರ್ಥಿಕ ಮತ್ತು ಸಾಮಾಜಿಕ ಪಲ್ಲಟಗಳು ತುರ್ತು ಗಮನದ ವಿಚಾರಗಳಾಗಬೇಕಿತ್ತು.

ಈ ಪಿಡುಗು ಮತ್ತು ಈ ಹಿಂದಿನ ಪಿಡುಗುಗಳು ಸೂಚಿಸುವುದೇನೆಂದರೆ, ಮಾನವ ಮತ್ತು ಪ್ರಾಕೃತಿಕ ಸಂಪನ್ಮೂಲಗಳ ಮಾಲಿನ್ಯ ಮತ್ತು ಬೃಹತ್ ಕೈಗಾರಿಕಾ ಮಾದರಿಯ ಆಹಾರ ಉತ್ಪಾದನೆಗಳೆರಡೂ ಇಂಥಾ ಪಿಡುಗು ಹುಟ್ಟಿ ಹರಡಲು ಕಾರಣವಾಗಿವೆ. ಸಂಶೋಧನೆಗಳು ಸತತವಾಗಿ ತೋರಿಸಿಕೊಟ್ಟಿರುವಂತೆ, ಸಣ್ಣ ಪ್ರಮಾಣದ, ವೈವಿಧ್ಯಮಯ ಉತ್ಪಾದಕ ವ್ಯವಸ್ಥೆಗಳನ್ನು ಹೊಂದಿರುವ ನಮ್ಮ ಸಣ್ಣ ರೈತರೇ ಜೀವ ವೈವಿಧ್ಯತೆ ಮತ್ತು ಆಹಾರ ಉತ್ಪಾದನೆಯ ರಕ್ಷಕರು.

ಈ ಅಂಶಗಳನ್ನು ಪರಿಗಣಿಸಿದರೆ, ಶಾಸನಾತ್ಮಕ ಕ್ರಮಗಳು ಈ ವಿಷಯಗಳಿಗೆ ಸ್ಪಂದಿಸುವ ನೀತಿ ಮತ್ತು ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವ ರೀತಿಯಲ್ಲಿರಬೇಕಲ್ಲದೇ, ಭೂಮಿಯನ್ನು ಕೈಗಾರಿಕೀಕರಣಗೊಂಡ ಬಂಡವಾಳಶಾಹಿ ಉತ್ಪಾದನೆಗೆ ಬೇಕಾದ ಮಾರಾಟದ ಸರಕೆಂಬಂತೆ ನೋಡಬಾರದು. ಎಲ್ಲರಿಗೂ ಭೂಮಿ ಹೊಂದುವ ಅವಕಾಶ ನೀಡುವ ಇತ್ತೀಚೆಗಿನ ಭೂಸುಧಾರಣಾ ಕಾಯಿದೆಯ ತಿದ್ದುಪಡಿಯು ಈ ಹಿನ್ನೆಲೆಯಲ್ಲಿ ದೂರದೃಷ್ಟಿ ಇಲ್ಲದ, ಹಾದಿ ತಪ್ಪಿಸುವ ತಿದ್ದುಪಡಿಯಾಗಿದೆ. ಊಹಾತ್ಮಕ ಲೆಕ್ಕಾಚಾರಗಳಿಗೆ ಭೂಮಾರುಕಟ್ಟೆ ಪಕ್ಕಾಗುವುದು ಮತ್ತು ಸಣ್ಣ ರೈತರ ದೀರ್ಘಕಾಲಿಕ ಹಿತಾಸಕ್ತಿಗಳನ್ನು ದೈತ್ಯ ಬಂಡವಾಳ ನುಂಗುವ ಕುರಿತಂತೆ ಈ ತಿದ್ದುಪಡಿ ನಿರ್ಲಕ್ಷ ತೋರಿದೆ.

ಸಿಕ್ಕಿದವರಿಗೆ ಸೀರುಂಡೆ ಎಂಬಂತ ನಡೆಯ ಮೂಲಕ ಗ್ರಾಮಾಂತರದ ಸಣ್ಣ ಹಿಡುವಳಿದಾರರನ್ನು ದಿವಾಳಿ ಎಬ್ಬಿಸುವ ನೀತಿಯ ಬದಲು, ಊಹಾತ್ಮಕ ಭೂಮಿ ಆರ್ಥಿಕತೆಯನ್ನು ನಿರುತ್ತೇಜಗೊಳಿಸಿ ಆರ್ಥಿಕ, ಪರಿಸರ ಸಂಬಂಧಿ ಮತ್ತು ಸಾಮಾಜಿಕ ಮಾನದಂಡಗಳನ್ನು ಗೌರವಿಸುವ ಸಾಚಾ ಇರಾದೆ ಇರುವವರಿಗೆ ಭೂಮಿ ಹೊಂದುವ ಅವಕಾಶ ನೀಡುವ ನೀತಿ ಮತ್ತು ಮಾನದಂಡಗಳನ್ನು ಸರಕಾರ ರೂಪಿಸಬೇಕಿದೆ.

ಪ್ರ್ರಾಸ್ತಾವಿತ ತಿದ್ದುಪಡಿಯಲ್ಲಿ ಈ ಅಂಶಗಳೇ ಮಾಯವಾಗಿವೆ. ಇದರ ಬದಲು ಹೊಸ ರೀತಿಯ ಉತ್ಪಾದಕತೆ, ಐಟಿ, ಬಿಟಿ ಕ್ಷೇತ್ರಗಳವರ ಅಗತ್ಯಕ್ಕೆ ತಕ್ಕಂತೆ ಸರಳೀಕೃತ ಮತ್ತು ಸಾರಾಸಗಟು ಬದಲಾವಣೆಗಳನ್ನು ಪ್ರಸ್ತಾಪಿಸಲಾಗಿದೆ. ಈಗಿರುವ ಆಳ ಕಂದರವನ್ನು ಎದುರಿಸುವ ನಗರ-ಗ್ರಾಮೀಣ; ಕೃಷಿ-ಕೈಗಾರಿಕಾ ಉತ್ಪಾದಕ ವ್ಯವಸ್ಥೆಗಳು ಅಸ್ತಿತ್ವಕ್ಕೆ ಬರಬೇಕು ಎಂಬುದನ್ನು ಈ ತಿದ್ದುಪಡಿ ಆದ್ಯತೆ ಮಾಡಿಕೊಳ್ಳಬೇಕಿತ್ತು.

ಸಣ್ಣ ಮತ್ತು ಅತಿಸಣ್ಣ ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಹಕಾರೀ ತತ್ವಾಧಾರಿತ ಮತ್ತು ರೈತ ಉತ್ಪಾದಕ ಸಂಸ್ಥೆಗಳಿಗೆ ಸಾಮರ್ಥ್ಯವಿದ್ದರೂ, ಹೊಸ ಭೂಮಿನೀತಿಗಳು ಬೃಹತ್ ಬಂಡವಾಳವನ್ನು ಪ್ರೋತ್ಸಾಹಿಸುವಂತಿವೆ. ಇದರೊಂದಿಗೇ, ಈ ತಿದ್ದುಪಡಿಯಲ್ಲಿ ಅರಣ್ಯ, ಶ್ರೀಮಂತ ಜೀವವೈವಿಧ್ಯತಾ ವಲಯಗಳನ್ನು ರಕ್ಷಿಸುವ ಪ್ರಸ್ತಾಪವೇ ಇಲ್ಲ. ಮಾರುಕಟ್ಟೆ ವಿಚಾರದಲ್ಲಿ ವಿವೇಕಯುತವಾಗಿಯೂ ಹವಾಮಾನ ತಾಳಿಕೆಯನ್ನು ಹೊಂದಿರುವಂತಹ ಕೃಷಿ, ಹವಾಮಾನ ವಲಯಾಧಾರಿತ ಕೃಷಿಯನ್ನು ಉತ್ತೇಜಿಸುವ, ಕಾರ್ಮಿಕರನ್ನು ಔಚಿತ್ಯಪೂರ್ಣವಾಗಿ ಗೌರವಿಸುವ ಹೊಸ ಉತ್ಪಾದಕ ವ್ಯವಸ್ಥೆಗೆ ಅನುಕೂಲ ಮಾಡಿಕೊಡುವಂಥಾ ಯಾವ ಪ್ರಸ್ತಾಪವೂ ಈ ತಿದ್ದುಪಡಿಯಲ್ಲಿ ಇಲ್ಲ.

ಇಂಥಾ ಪರ್ಯಾಯ ಮತ್ತು ಸಮಗ್ರ ನೀತಿ ಮತ್ತು ಕಾರ್ಯಕ್ರಮಗಳನ್ನು ಅನ್ವೇಷಿಸುತ್ತಿರುವ ಈ ಸಂದರ್ಭದಲ್ಲಿ ಸದ್ಯದ ರಾಜಕೀಯ ವ್ಯವಸ್ಥೆ ಜನರ ಹಿತಾಸಕ್ತಿಗಳನ್ನು ಪ್ರತಿನಿಧಿಸಲು ಸೋತಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ.

ಕೃಷಿ ಮತ್ತು ಭೂನೀತಿಗಳ ಮಿತಿಗಳನ್ನು ತಮ್ಮ ಹಿತಾಸಕ್ತಿಗಳಿಗೆ ತಕ್ಕಂತೆ ತಿರುಚಿ ರಾಜಕಾರಣಿಗಳು ತಮ್ಮ ರಾಜಕೀಯ ಮತ್ತು ಬಂಡವಾಳದ ಸಾಮ್ರಾಜ್ಯಗಳನ್ನು ಕಟ್ಟಿದ್ದಾರೆ. ಹೆಚ್ಚಿನ ರೈತ ಸಂಘಟನೆಗಳು ದೂರಗಾಮಿ ದೃಷ್ಟಿಯಿಲ್ಲದೇ, ಸಾಲಮನ್ನಾ, ಉಚಿತ ವಿದ್ಯುತ್, ಕೃಷಿ ಒಳಸುರಿಗಳಿಗೆ ಮತ್ತು ಸಬ್ಸಿಡಿಯಂಥಾ ಬೇಡಿಕೆಗಳಾಚೆ ಹೋಗಿಲ್ಲ. ಆದ್ದರಿಂದಲೇ, ನಾಗರಿಕರು, ರೈತರು, ನಾಗರಿಕ ಸಂಘಟನೆಗಳು, ಕ್ರಿಯಾಶೀಲ ವ್ಯಕ್ತಿಗಳು ಒಟ್ಟಾಗಿ ಬಹುಸಂಖ್ಯಾತ ಜನರ ದೀರ್ಘಕಾಲಿಕ ಹಿತಾಸಕ್ತಿಯ ನೀತಿ ಮತ್ತು ಕಾರ್ಯಕ್ರಮಗಳನ್ನು ರೂಪಿಸುವಂಥಾ ಒಂದು ಪರ್ಯಾಯ ದೃಷ್ಟಿಕೋನವನ್ನು ಪ್ರಸ್ತಾಪಿಸಬೇಕಿದೆ.

ನಮ್ಮ ನಡುವಿರುವ ದೈತ್ಯ ಆರ್ಥಿಕ ಸಂರಚನೆಗಳು, ಮಾದರಿಗಳು ಮತ್ತು ಚಿಂತನೆಗಳನ್ನು ಮರುಪರಿಶೀಲಿಸುವಂತೆ ಮಾಡಿರುವ ಈ ಕೋವಿಡ್-19ರ ಚಾರಿತ್ರಿಕ ಸಂದರ್ಭದಲ್ಲಿ ನಾವಿದ್ದೇವೆ. ಆದ್ದರಿಂದಲೇ ನಾವು ತೀವ್ರ ಆರ್ಥಿಕ ಅಸಮಾನತೆ, ಪರಿಸರ ಬಿಕ್ಕಟ್ಟು, ಆರೋಗ್ಯ ಅಪಾಯಗಳ ಆಳ ಸಮಸ್ಯೆಗಳನ್ನು ಎದುರಿಸುವ ಪರ್ಯಾಯಗಳನ್ನು ಹುಡುಕಬೇಕಿದೆ. ಭೂಮಿಯೆಂಬುದು ಕೇವಲ ಮಾರಾಟದ ಸರಕಲ್ಲ; ಅದರ ಉಪಯೋಗ ಮತ್ತು ನಮಗೆ ಅದರೊಂದಿಗಿರುವ ಸಂಬಂಧವು ಸಾಮಾಜಿಕ ನ್ಯಾಯ, ಪರಿಸರ ಸುಸ್ಥಿರತೆ ಮತ್ತು ಆರ್ಥಿಕ ಸ್ಥಿರತೆಯನ್ನು ಖಚಿತಪಡಿಸುವಂಥಾದ್ದು ಎಂಬುದನ್ನು ನಾವು ಗುರುತಿಸಿ ಗಟ್ಟಿಯಾಗಿ ಸಮರ್ಥಿಸಿಕೊಳ್ಳಬೇಕಿದೆ.


ಇದನ್ನೂ ಓದಿ: ಭೂಸುಧಾರಣೆ ಕಾಯ್ದೆ ತಿದ್ದುಪಡಿಗೆ ಮಹಿಳಾ ರೈತರ ಹಕ್ಕುಗಳ ವೇದಿಕೆಯ ಖಂಡನೆ 

ಕೋಆಪರೇಟೀಕರಣದತ್ತ ಹೊರಳಬೇಕಿದ್ದ ಕೃಷಿ ಕಾರ್ಪೋರೇಟೀಕರಣದತ್ತ: ಈ ವಿನಾಶದ ಪರಿಣಾಮಗಳೇನು?

ಲಾಕ್ ಡೌನ್ ನಂತರದ ಪ್ರಥಮ ಆದ್ಯತೆ – ಕೃಷಿ ಮತ್ತು ಗ್ರಾಮೀಣ ವಲಯಗಳ ಪುನಶ್ಚೇತನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...