Homeಕರ್ನಾಟಕಭೂ ಸುಧಾರಣಾ ಕಾನೂನಿನ ತಿದ್ದುಪಡಿ ಮತ್ತು ಅದರ ಪರಿಣಾಮಗಳು - ಡಾ.ಎ.ಆರ್ ವಾಸವಿ

ಭೂ ಸುಧಾರಣಾ ಕಾನೂನಿನ ತಿದ್ದುಪಡಿ ಮತ್ತು ಅದರ ಪರಿಣಾಮಗಳು – ಡಾ.ಎ.ಆರ್ ವಾಸವಿ

ಈ ಕಾನೂನು ರೈತರ ಹಿತಾಸಕ್ತಿಗಳನ್ನು ರಕ್ಷಿಸುವ ಬದಲು ಬೇಗುದಿಯನ್ನು ಹೆಚ್ಚಿಸಿತೆಂಬುದಕ್ಕೆ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಸಾವಿರಾರು ದಾವೆಗಳೇ ಸಾಕ್ಷಿ. ಎಷ್ಟೋ ನಾಗರಿಕರು ಈ ಕೊನೆಗಾಣದ ಕಾನೂನಾತ್ಮಕ ಬಲೆಯಲ್ಲಿ ಇನ್ನೂ ಒದ್ದಾಡುತ್ತಿದ್ದಾರೆ.

- Advertisement -
- Advertisement -

ಇತ್ತೀಚೆಗಿನ ಕರ್ನಾಟಕ ಸರಕಾರದ ಭೂಸುಧಾರಣಾ ಕಾನೂನಿನ ತಿದ್ದುಪಡಿ ಮತ್ತು ಅದರ ಸುತ್ತ ನಡೆಯುತ್ತಿರುವ ಚರ್ಚೆ ಈ ಹಿಂದಿನ ಕಾನೂನು ಮತ್ತು ಈಗ ತರಲಿಚ್ಛಿಸುತ್ತಿರುವ ತಿದ್ದುಪಡಿಯ ಪರಿಣಾಮಗಳೇನು ಎಂಬುದನ್ನು ವಿಶ್ಲೇಷಿಸಲು ನಮ್ಮನ್ನು ಒತ್ತಾಯಿಸುತ್ತದೆ.

ಗ್ರಾಮಾಂತರ ಪ್ರದೇಶಗಳು ವಿಸ್ತೃತ ಸಂಕಷ್ಟಕ್ಕೆ ಸ್ಪಂದಿಸಲು ಗಮನಾರ್ಹ ಪ್ರಯತ್ನಗಳಾಗುತ್ತಿದ್ದ ಕಾಲದಲ್ಲಿ, ಅಂದರೆ 1961 ರಲ್ಲಿ ಕರ್ನಾಟಕ ಭೂಸುಧಾರಣಾ ಕಾನೂನು 1961 ನ್ನು ಜಾರಿಗೊಳಿಸಲಾಯಿತು. ತದನಂತರದ ತಿದ್ದುಪಡಿಗಳು, ಅದರಲ್ಲೂ 1974ರ ತಿದ್ದುಪಡಿಯು, ಸಣ್ಣ ಮತ್ತು ಅತಿಸಣ್ಣ ರೈತರನ್ನೂ, ಕೃಷಿ ಆರ್ಥಿಕತೆಯನ್ನೂ ರಕ್ಷಿಸಲು ಜಾರಿಗೆಬಂದಿತು. ತನ್ಮೂಲಕ ರೈತಾಪಿ ಭೂಮಿ ಕಬಳಿಸಿ ಅವರನ್ನು ದಿವಾಳಿಯೆಬ್ಬಿಸುವ ಭಕ್ಷಕ ಬಂಡವಾಳ- ಅದರಲ್ಲೂ ಕೈಗಾರಿಕಾ, ನಗರ ಜನ್ಯ ಬಂಡವಾಳದಿಂದ ರಕ್ಷಿಸಲು ಅನುವಾಯಿತು. ಇದು ಮಿಶ್ರ ಫಲಿತಾಂಶವನ್ನು ನೀಡಿದೆ. ಒಂದೆಡೆ ಭೂಹಿಡುವಳಿಯ ಸಂರಚನೆ ಬಹಳಷ್ಟೇನೂ ಬದಲಾಗದಿದ್ದರೂ ಸಣ್ಣ ಮತ್ತು ಅತಿಸಣ್ಣ ರೈತರ ಭೂ-ನಷ್ಟ ಮತ್ತು ಸ್ಥಳಾಂತರ ನಡೆಯಲಿಲ್ಲ. ಆದರೆ ಈ ಕಾನೂನು ಮತ್ತು ತದನಂತರದ ತಿದ್ದುಪಡಿಗಳ ನೇತ್ಯಾತ್ಮಕ ಪರಿಣಾಮಗಳು ಮತ್ತು ವಿಕೃತಿಗಳು ಕಣ್ಣ ಮುಂದಿವೆ.

ಇದರಲ್ಲಿ ಪ್ರಮುಖವೆಂದರೆ ಕೃಷಿಕರಲ್ಲದವರಿಗೆ ಕೃಷಿ ಭೂಮಿ ಕೊಳ್ಳಲಾಗದ ಪರಿಸ್ಥಿತಿ. ಇದು ಅಧಿಕಾರಶಾಹಿಯ ಉರುಳನ್ನು ಸೃಷ್ಟಿ ಮಾಡಿದ್ದಲ್ಲದೇ, ಭೂ ವ್ಯವಹಾರದಲ್ಲಿ ಅನೇಕ ಭ್ರಷ್ಟ ಹಾದಿಗಳನ್ನು ತೆರೆಯಿತು. ಸರಕಾರ ಅಂದರೆ ವಾಸ್ತವದಲ್ಲಿ ವಿವಿಧ ರಾಜಕೀಯ ಸೂತ್ರಧಾರರು ಈ ತಡೆ ಇರುವಾಗಲೇ ಕಾನೂನನ್ನು ದಾಟಿಹೋಗುವ ಹೊಸ ನಿಯಮಗಳನ್ನು ಮತ್ತು ಪ್ರಕ್ರಿಯೆಗಳನ್ನು ಸೃಷ್ಟಿಸಿದರು.

ಭೂಸ್ವಾಧೀನ ಮತ್ತು ನಂತರ ಅದನ್ನು ಕೈಗಾರಿಕೆ, ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಹಂಚುವ ಪ್ರಕ್ರಿಯೆ ಭಟ್ಟಂಗಿ ಬಂಡವಾಳಶಾಹಿಯನ್ನು ಸಶಕ್ತಗೊಳಿಸುವ ಮತ್ತು ಸರಕಾರ ಮತ್ತು ಚುನಾಯಿತ ನಾಯಕರನ್ನು ಭ್ರಷ್ಟಗೊಳಿಸುವ ಹೊಸ ಮೂಲಗಳಾದವು. ಇದರಿಂದಾಗಿ ಸರಕಾರಕ್ಕೆ ಆದಾಯ ನಷ್ಟವಾಗಿದ್ದಷ್ಟೇ ಅಲ್ಲ; ದಢೂತಿ ರಾಜಕೀಯ ಮಂದಿ, ಭಟ್ಟಂಗಿ ಬಂಡವಾಳಿಗರು, ರಿಯಲ್ ಎಸ್ಟೇಟ್ ಕುಳಗಳು, ಭೂ ಮಾಫಿಯಾ ಮತ್ತು ರಾತ್ರೋರಾತ್ರಿ ಓಡಿಹೋಗುವ ಖದೀಮ ಉದ್ಯಮಪತಿಗಳು ಇದರ ಲಾಭ ಪಡೆದರು.

ಇದಕ್ಕಿಂತ ಹೆಚ್ಚಾಗಿ, ರೈತ ಸಮುದಾಯ ಈ ಕಾಯಿದೆಯ ಕಳಪೆ ಅನುಷ್ಠಾನ, ಕಾನೂನಾತ್ಮಕ ವಿಕೃತಿಗಳು ಹಾಗೂ ಅಧಿಕಾರಶಾಹಿಯ ಭಾರದಿಂದ ಬಳಲಿದವು. ನೈಜ ರೈತರಿಗೆ ತಮ್ಮ ಹಿಡುವಳಿಯನ್ನು ಹೆಚ್ಚಿಸಲು ಆಗಲಿಲ್ಲ; ಸಣ್ಣ ಹಿಡುವಳಿದಾರರಿಗೆ ತಮ್ಮ ಜಮೀನನ್ನು ಹೊರಗಿನವರಿಗೆ ಮಾರಲು ಸಾಧ್ಯವಾಗಲಿಲ್ಲ; ಘಾಸಿಗೊಂಡ ಭೂ ಮಾರುಕಟ್ಟೆ ದಲ್ಲಾಳಿಗಳು ಮತ್ತು ಏಜೆಂಟರಿಗಷ್ಟೇ ಲಾಭ ಮಾಡಿಕೊಟ್ಟಿತು.

ಸ್ವತಃ ಆರ್ಥಿಕ ಕಷ್ಟದಿಂದಾಗಿ ಬೇಸಾಯ ಮಾಡಲಾಗದ ಸಣ್ಣ ರೈತರು ಭೋಗ್ಯದ ಕೃಷಿಯ ಭಾಗವಾಗುವ ಉದಾಹರಣೆ ಗಮನಿಸಿ. ದೊಡ್ಡ ರೈತರು ಇಲ್ಲಾ ಉದ್ಯಮಶೀಲರ ಜೊತೆ ಈ ಭೋಗ್ಯ ಕರಾರಿಗೆ ಸಹಿಹಾಕಿದ ಮೇಲೆ ಆ ಮಂದಿ ಸೀಮಿತ ಅವಧಿಗೆ ಈ ಜಮೀನಲ್ಲಿ ಭೂಮಿಯ ಸಾರ ಹೀರುವ ಕೃಷಿ ಮಾಡುತ್ತಿದ್ದಾರೆ. ಈ ಉಲ್ಟಾ ಗೇಣಿ ಪದ್ಧತಿಯಲ್ಲಿ ಬಂಡವಾಳಶಾಹಿಗಳು, ಗೇಣಿದಾರರು, ಬಡ ರೈತ ಭೂಮಾಲೀಕ! ಈ ಮಾಲೀಕ ತನ್ನ ಜಮೀನಿನಲ್ಲೇ ಕೂಲಿಯಾಳಾಗಿ ದುಡಿಯುವ ಸನ್ನಿವೇಶ ಉಂಟಾಗಿದೆ. ಈ ಭೋಗ್ಯಕ್ಕೆ ಪಡೆದ ಜಮೀನಿನಲ್ಲಿ ಶುಂಠಿ, ಅರಿಶಿನ, ಬಾಳೆ ಮುಂತಾದ ಬೆಳೆ ಬೆಳೆದು ಪರಿಸರಕ್ಕಾಗಿರುವ ಹಾನಿ ಇನ್ನೊಂದು ಉದಾಹರಣೆ. ಇಂಥ ವಿಷಯಗಳನ್ನು ಪರಿಹರಿಸುವ ಬದಲು ಇಡೀ ಲಕ್ಷ್ಯ ದೊಡ್ಡ ಬಂಡವಾಳಶಾಹಿಗಳಿಗೆ ಮತ್ತು ಶಂಕಾಸ್ಪದ ಉದ್ಯಮಶೀಲರಿಗೆ ಭೂಮಾರುಕಟ್ಟೆಯನ್ನು ಸುಲಭಗೊಳಿಸುವ ಕಡೆಗಿದೆ.

ನಿಜಕ್ಕೂ ಕೃಷಿಭೂಮಿ ಕೊಳ್ಳಬೇಕೆಂದಿದ್ದವರು, ಅದರಲ್ಲೂ ನಗರ ಮತ್ತು ಕೃಷಿಯೇತರ ಹಿನ್ನೆಲೆಯವರು, ಈ ಅಧಿಕಾರಶಾಹಿ ಜಾಲ ಮತ್ತು ದಲ್ಲಾಳಿಗಳ ಮೂಲಕ ಭೂಮಿ ಪಡೆಯಬೇಕಾದ ಸಂದರ್ಭ ಒದಗಿಬಂತು. ಕೃಷಿ ಮಾಡಬೇಕೆಂದಿದ್ದ ಅಥವಾ ಭೂಮಿಯನ್ನು ಇನ್ಯಾವುದೋ ಪ್ರಯೋಜನಕಾರಿ ಉದ್ದಿಶ್ಯಕ್ಕೆ ಬಳಸಬೇಕೆಂದಿದ್ದ ಆಸೆಗೇ ಎಳ್ಳುನೀರು ಬಿಡಬೇಕಾಗಿ ಬಂದ ಪ್ರಕರಣಗಳೂ ಇವೆ.

ಈ ಕಾನೂನು ರೈತರ ಹಿತಾಸಕ್ತಿಗಳನ್ನು ರಕ್ಷಿಸುವ ಬದಲು ಬೇಗುದಿಯನ್ನು ಹೆಚ್ಚಿಸಿತೆಂಬುದಕ್ಕೆ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಸಾವಿರಾರು ದಾವೆಗಳೇ ಸಾಕ್ಷಿ. ಎಷ್ಟೋ ನಾಗರಿಕರು ಈ ಕೊನೆಗಾಣದ ಕಾನೂನಾತ್ಮಕ ಬಲೆಯಲ್ಲಿ ಇನ್ನೂ ಒದ್ದಾಡುತ್ತಿದ್ದಾರೆ. ಆದ್ದರಿಂದ ಈ ಕಾನೂನನ್ನು ಮರುಪರಿಶೀಲಿಸಿ ಕೃಷಿಲೋಕದ ಅಂಚಿಗೆ ನೂಕಲ್ಪಟ್ಟಿರುವ ಮಂದಿಯ ಹಿತಾಸಕ್ತಿಯನ್ನು ರಕ್ಷಿಸುವುದು, ಗ್ರಾಮೀಣ ಆರ್ಥಿಕತೆಗೆ ಪ್ರೋತ್ಸಾಹ ಮತ್ತು ಆಹಾರ ಭದ್ರತೆಯ ಭರವಸೆಯನ್ನು ಖಚಿತಪಡಿಸುವುದರೊಂದಿಗೆ, ಗ್ರಾಮೀಣೇತರ ನಾಗರಿಕರಿಗೆ ಆರ್ಥಿಕವಾಗಿ ಸುಲಲಿತ ಮತ್ತು ಸಮರ್ಥನೀಯ ರೀತಿಯಲ್ಲಿ ಜಮೀನು ಹೊಂದುವ ವಿಧಿವಿಧಾನಗಳನ್ನು ರೂಪಿಸಬೇಕಾಗಿದೆ.

ಕೃಷಿ ಆರ್ಥಿಕತೆಯೇ ಕಳೆದ ಕೆಲವು ವರ್ಷಗಳಿಂದ ತೀವ್ರ ಹಿಂಜರಿಕೆಯಲ್ಲಿದೆ. ಹವಾಮಾನ ವೈಪರೀತ್ಯದ ಕಾರಣಕ್ಕೇ ದೀರ್ಘಕಾಲದ ಬರ, ಆಗಾಗ್ಗೆ ಪ್ರವಾಹಗಳು ನಮ್ಮ ರಾಜ್ಯದ ಒಳನಾಡಿನ ವಿಸ್ತಾರ ಭೂಪ್ರದೇಶಗಳನ್ನು ಹದಗೆಡಿಸಿವೆ. ಇದರೊಂದಿಗೇ ಕೋವಿಡ್-19 ಪಿಡುಗಿನ ಸಮಸ್ಯೆ; ಲಾಕ್‌ಡೌನ್‌ನಿಂದ ಉಂಟಾದ ಆರ್ಥಿಕ ಮತ್ತು ಸಾಮಾಜಿಕ ಪಲ್ಲಟಗಳು ತುರ್ತು ಗಮನದ ವಿಚಾರಗಳಾಗಬೇಕಿತ್ತು.

ಈ ಪಿಡುಗು ಮತ್ತು ಈ ಹಿಂದಿನ ಪಿಡುಗುಗಳು ಸೂಚಿಸುವುದೇನೆಂದರೆ, ಮಾನವ ಮತ್ತು ಪ್ರಾಕೃತಿಕ ಸಂಪನ್ಮೂಲಗಳ ಮಾಲಿನ್ಯ ಮತ್ತು ಬೃಹತ್ ಕೈಗಾರಿಕಾ ಮಾದರಿಯ ಆಹಾರ ಉತ್ಪಾದನೆಗಳೆರಡೂ ಇಂಥಾ ಪಿಡುಗು ಹುಟ್ಟಿ ಹರಡಲು ಕಾರಣವಾಗಿವೆ. ಸಂಶೋಧನೆಗಳು ಸತತವಾಗಿ ತೋರಿಸಿಕೊಟ್ಟಿರುವಂತೆ, ಸಣ್ಣ ಪ್ರಮಾಣದ, ವೈವಿಧ್ಯಮಯ ಉತ್ಪಾದಕ ವ್ಯವಸ್ಥೆಗಳನ್ನು ಹೊಂದಿರುವ ನಮ್ಮ ಸಣ್ಣ ರೈತರೇ ಜೀವ ವೈವಿಧ್ಯತೆ ಮತ್ತು ಆಹಾರ ಉತ್ಪಾದನೆಯ ರಕ್ಷಕರು.

ಈ ಅಂಶಗಳನ್ನು ಪರಿಗಣಿಸಿದರೆ, ಶಾಸನಾತ್ಮಕ ಕ್ರಮಗಳು ಈ ವಿಷಯಗಳಿಗೆ ಸ್ಪಂದಿಸುವ ನೀತಿ ಮತ್ತು ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವ ರೀತಿಯಲ್ಲಿರಬೇಕಲ್ಲದೇ, ಭೂಮಿಯನ್ನು ಕೈಗಾರಿಕೀಕರಣಗೊಂಡ ಬಂಡವಾಳಶಾಹಿ ಉತ್ಪಾದನೆಗೆ ಬೇಕಾದ ಮಾರಾಟದ ಸರಕೆಂಬಂತೆ ನೋಡಬಾರದು. ಎಲ್ಲರಿಗೂ ಭೂಮಿ ಹೊಂದುವ ಅವಕಾಶ ನೀಡುವ ಇತ್ತೀಚೆಗಿನ ಭೂಸುಧಾರಣಾ ಕಾಯಿದೆಯ ತಿದ್ದುಪಡಿಯು ಈ ಹಿನ್ನೆಲೆಯಲ್ಲಿ ದೂರದೃಷ್ಟಿ ಇಲ್ಲದ, ಹಾದಿ ತಪ್ಪಿಸುವ ತಿದ್ದುಪಡಿಯಾಗಿದೆ. ಊಹಾತ್ಮಕ ಲೆಕ್ಕಾಚಾರಗಳಿಗೆ ಭೂಮಾರುಕಟ್ಟೆ ಪಕ್ಕಾಗುವುದು ಮತ್ತು ಸಣ್ಣ ರೈತರ ದೀರ್ಘಕಾಲಿಕ ಹಿತಾಸಕ್ತಿಗಳನ್ನು ದೈತ್ಯ ಬಂಡವಾಳ ನುಂಗುವ ಕುರಿತಂತೆ ಈ ತಿದ್ದುಪಡಿ ನಿರ್ಲಕ್ಷ ತೋರಿದೆ.

ಸಿಕ್ಕಿದವರಿಗೆ ಸೀರುಂಡೆ ಎಂಬಂತ ನಡೆಯ ಮೂಲಕ ಗ್ರಾಮಾಂತರದ ಸಣ್ಣ ಹಿಡುವಳಿದಾರರನ್ನು ದಿವಾಳಿ ಎಬ್ಬಿಸುವ ನೀತಿಯ ಬದಲು, ಊಹಾತ್ಮಕ ಭೂಮಿ ಆರ್ಥಿಕತೆಯನ್ನು ನಿರುತ್ತೇಜಗೊಳಿಸಿ ಆರ್ಥಿಕ, ಪರಿಸರ ಸಂಬಂಧಿ ಮತ್ತು ಸಾಮಾಜಿಕ ಮಾನದಂಡಗಳನ್ನು ಗೌರವಿಸುವ ಸಾಚಾ ಇರಾದೆ ಇರುವವರಿಗೆ ಭೂಮಿ ಹೊಂದುವ ಅವಕಾಶ ನೀಡುವ ನೀತಿ ಮತ್ತು ಮಾನದಂಡಗಳನ್ನು ಸರಕಾರ ರೂಪಿಸಬೇಕಿದೆ.

ಪ್ರ್ರಾಸ್ತಾವಿತ ತಿದ್ದುಪಡಿಯಲ್ಲಿ ಈ ಅಂಶಗಳೇ ಮಾಯವಾಗಿವೆ. ಇದರ ಬದಲು ಹೊಸ ರೀತಿಯ ಉತ್ಪಾದಕತೆ, ಐಟಿ, ಬಿಟಿ ಕ್ಷೇತ್ರಗಳವರ ಅಗತ್ಯಕ್ಕೆ ತಕ್ಕಂತೆ ಸರಳೀಕೃತ ಮತ್ತು ಸಾರಾಸಗಟು ಬದಲಾವಣೆಗಳನ್ನು ಪ್ರಸ್ತಾಪಿಸಲಾಗಿದೆ. ಈಗಿರುವ ಆಳ ಕಂದರವನ್ನು ಎದುರಿಸುವ ನಗರ-ಗ್ರಾಮೀಣ; ಕೃಷಿ-ಕೈಗಾರಿಕಾ ಉತ್ಪಾದಕ ವ್ಯವಸ್ಥೆಗಳು ಅಸ್ತಿತ್ವಕ್ಕೆ ಬರಬೇಕು ಎಂಬುದನ್ನು ಈ ತಿದ್ದುಪಡಿ ಆದ್ಯತೆ ಮಾಡಿಕೊಳ್ಳಬೇಕಿತ್ತು.

ಸಣ್ಣ ಮತ್ತು ಅತಿಸಣ್ಣ ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಹಕಾರೀ ತತ್ವಾಧಾರಿತ ಮತ್ತು ರೈತ ಉತ್ಪಾದಕ ಸಂಸ್ಥೆಗಳಿಗೆ ಸಾಮರ್ಥ್ಯವಿದ್ದರೂ, ಹೊಸ ಭೂಮಿನೀತಿಗಳು ಬೃಹತ್ ಬಂಡವಾಳವನ್ನು ಪ್ರೋತ್ಸಾಹಿಸುವಂತಿವೆ. ಇದರೊಂದಿಗೇ, ಈ ತಿದ್ದುಪಡಿಯಲ್ಲಿ ಅರಣ್ಯ, ಶ್ರೀಮಂತ ಜೀವವೈವಿಧ್ಯತಾ ವಲಯಗಳನ್ನು ರಕ್ಷಿಸುವ ಪ್ರಸ್ತಾಪವೇ ಇಲ್ಲ. ಮಾರುಕಟ್ಟೆ ವಿಚಾರದಲ್ಲಿ ವಿವೇಕಯುತವಾಗಿಯೂ ಹವಾಮಾನ ತಾಳಿಕೆಯನ್ನು ಹೊಂದಿರುವಂತಹ ಕೃಷಿ, ಹವಾಮಾನ ವಲಯಾಧಾರಿತ ಕೃಷಿಯನ್ನು ಉತ್ತೇಜಿಸುವ, ಕಾರ್ಮಿಕರನ್ನು ಔಚಿತ್ಯಪೂರ್ಣವಾಗಿ ಗೌರವಿಸುವ ಹೊಸ ಉತ್ಪಾದಕ ವ್ಯವಸ್ಥೆಗೆ ಅನುಕೂಲ ಮಾಡಿಕೊಡುವಂಥಾ ಯಾವ ಪ್ರಸ್ತಾಪವೂ ಈ ತಿದ್ದುಪಡಿಯಲ್ಲಿ ಇಲ್ಲ.

ಇಂಥಾ ಪರ್ಯಾಯ ಮತ್ತು ಸಮಗ್ರ ನೀತಿ ಮತ್ತು ಕಾರ್ಯಕ್ರಮಗಳನ್ನು ಅನ್ವೇಷಿಸುತ್ತಿರುವ ಈ ಸಂದರ್ಭದಲ್ಲಿ ಸದ್ಯದ ರಾಜಕೀಯ ವ್ಯವಸ್ಥೆ ಜನರ ಹಿತಾಸಕ್ತಿಗಳನ್ನು ಪ್ರತಿನಿಧಿಸಲು ಸೋತಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ.

ಕೃಷಿ ಮತ್ತು ಭೂನೀತಿಗಳ ಮಿತಿಗಳನ್ನು ತಮ್ಮ ಹಿತಾಸಕ್ತಿಗಳಿಗೆ ತಕ್ಕಂತೆ ತಿರುಚಿ ರಾಜಕಾರಣಿಗಳು ತಮ್ಮ ರಾಜಕೀಯ ಮತ್ತು ಬಂಡವಾಳದ ಸಾಮ್ರಾಜ್ಯಗಳನ್ನು ಕಟ್ಟಿದ್ದಾರೆ. ಹೆಚ್ಚಿನ ರೈತ ಸಂಘಟನೆಗಳು ದೂರಗಾಮಿ ದೃಷ್ಟಿಯಿಲ್ಲದೇ, ಸಾಲಮನ್ನಾ, ಉಚಿತ ವಿದ್ಯುತ್, ಕೃಷಿ ಒಳಸುರಿಗಳಿಗೆ ಮತ್ತು ಸಬ್ಸಿಡಿಯಂಥಾ ಬೇಡಿಕೆಗಳಾಚೆ ಹೋಗಿಲ್ಲ. ಆದ್ದರಿಂದಲೇ, ನಾಗರಿಕರು, ರೈತರು, ನಾಗರಿಕ ಸಂಘಟನೆಗಳು, ಕ್ರಿಯಾಶೀಲ ವ್ಯಕ್ತಿಗಳು ಒಟ್ಟಾಗಿ ಬಹುಸಂಖ್ಯಾತ ಜನರ ದೀರ್ಘಕಾಲಿಕ ಹಿತಾಸಕ್ತಿಯ ನೀತಿ ಮತ್ತು ಕಾರ್ಯಕ್ರಮಗಳನ್ನು ರೂಪಿಸುವಂಥಾ ಒಂದು ಪರ್ಯಾಯ ದೃಷ್ಟಿಕೋನವನ್ನು ಪ್ರಸ್ತಾಪಿಸಬೇಕಿದೆ.

ನಮ್ಮ ನಡುವಿರುವ ದೈತ್ಯ ಆರ್ಥಿಕ ಸಂರಚನೆಗಳು, ಮಾದರಿಗಳು ಮತ್ತು ಚಿಂತನೆಗಳನ್ನು ಮರುಪರಿಶೀಲಿಸುವಂತೆ ಮಾಡಿರುವ ಈ ಕೋವಿಡ್-19ರ ಚಾರಿತ್ರಿಕ ಸಂದರ್ಭದಲ್ಲಿ ನಾವಿದ್ದೇವೆ. ಆದ್ದರಿಂದಲೇ ನಾವು ತೀವ್ರ ಆರ್ಥಿಕ ಅಸಮಾನತೆ, ಪರಿಸರ ಬಿಕ್ಕಟ್ಟು, ಆರೋಗ್ಯ ಅಪಾಯಗಳ ಆಳ ಸಮಸ್ಯೆಗಳನ್ನು ಎದುರಿಸುವ ಪರ್ಯಾಯಗಳನ್ನು ಹುಡುಕಬೇಕಿದೆ. ಭೂಮಿಯೆಂಬುದು ಕೇವಲ ಮಾರಾಟದ ಸರಕಲ್ಲ; ಅದರ ಉಪಯೋಗ ಮತ್ತು ನಮಗೆ ಅದರೊಂದಿಗಿರುವ ಸಂಬಂಧವು ಸಾಮಾಜಿಕ ನ್ಯಾಯ, ಪರಿಸರ ಸುಸ್ಥಿರತೆ ಮತ್ತು ಆರ್ಥಿಕ ಸ್ಥಿರತೆಯನ್ನು ಖಚಿತಪಡಿಸುವಂಥಾದ್ದು ಎಂಬುದನ್ನು ನಾವು ಗುರುತಿಸಿ ಗಟ್ಟಿಯಾಗಿ ಸಮರ್ಥಿಸಿಕೊಳ್ಳಬೇಕಿದೆ.


ಇದನ್ನೂ ಓದಿ: ಭೂಸುಧಾರಣೆ ಕಾಯ್ದೆ ತಿದ್ದುಪಡಿಗೆ ಮಹಿಳಾ ರೈತರ ಹಕ್ಕುಗಳ ವೇದಿಕೆಯ ಖಂಡನೆ 

ಕೋಆಪರೇಟೀಕರಣದತ್ತ ಹೊರಳಬೇಕಿದ್ದ ಕೃಷಿ ಕಾರ್ಪೋರೇಟೀಕರಣದತ್ತ: ಈ ವಿನಾಶದ ಪರಿಣಾಮಗಳೇನು?

ಲಾಕ್ ಡೌನ್ ನಂತರದ ಪ್ರಥಮ ಆದ್ಯತೆ – ಕೃಷಿ ಮತ್ತು ಗ್ರಾಮೀಣ ವಲಯಗಳ ಪುನಶ್ಚೇತನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...