Homeಮುಖಪುಟಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ : ದೇಶವ್ಯಾಪಿ ಅಸಹಕಾರ ಚಳವಳಿಯ ಅಗತ್ಯವಿದೆ

ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ : ದೇಶವ್ಯಾಪಿ ಅಸಹಕಾರ ಚಳವಳಿಯ ಅಗತ್ಯವಿದೆ

- Advertisement -
- Advertisement -

ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿ ಮಾಡುವ ಹುನ್ನಾರಕ್ಕೆ ಬಿಜೆಪಿ ಸರ್ಕಾರ ಕೈ ಹಾಕಿದೆ. ಮೋದಿ ಸರ್ಕಾರದ ಅಣತಿಯಂತೆ ಈ ರೈತ ವಿರೋಧೀ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ.

ದೊಡ್ಡ ದೊಡ್ಡ ಜಮೀನ್ದಾರರು ಕರ್ನಾಟಕದಲ್ಲಿ ನಿರ್ಗತಿಕರಿಗೆ 2-3 ಎಕರೆ ಜಮೀನು ಮಾಡಲು ಕೊಟ್ಟು ಅವರನ್ನು ನಿರಂತರ ಗುಲಾಮಗಿರಿಗೆ ನೂಕಿದ್ದರು. ಬಡವರನ್ನು ಖಾಯಂ ಆಗಿ ಬಡವರನ್ನಾಗಿಡುವ ಕೆಲಸ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿತ್ತು. ಈ ಬಡ ಗೇಣಿದಾರರನ್ನು ಸಂಘಟನೆ ಮಾಡಿದ ಮೊದಲಿಗರಲ್ಲಿ ಕಡಿದಾಳ್ ಮಂಜಪ್ಪನವರು, ಬಸವಾನಿ ರಾಮಶರ್ಮರು ಮತ್ತು ಗಣಪತಿಯಪ್ಪ ಮೊದಲಿಗರು. ಆನಂತರ ಶಾಂತವೇರಿ ಗೋಪಾಲಗೌಡರು ಮುಂತಾದ ಸೋಷಿಯಲಿಸ್ಟ್ ಮುಖಂಡರು ಗೇಣೀದಾರರರನ್ನು ಸಂಘಟನೆ ಮಾಡಿ, ಜಮೀನ್ದಾರರ ವಿರುದ್ಧವಾಗಿ, ಗೇಣೀ ಪದ್ದತಿ ರದ್ದತಿಗಾಗಿ ಚಳವಳಿ ಮಾಡಿದರು. ಮುಂದೆ ದೇವರಾಜ ಅರಸರು ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಂದರ್ಭದಲ್ಲಿ ಗೇಣಿ ಪದ್ದತಿ ರದ್ದುಗೊಳಿಸುವ ಶಾಸನ ಜಾರಿಗೆ ತಂದರು. ಈ ಜಮೀನ್ದಾರರ ಜಮೀನುಗಳಲ್ಲಿ ದುಡಿಯುತ್ತಿದ್ದ ಬಡ ರೈತರನ್ನು ಅವರು ಮಾಡುತ್ತಿದ್ದ ಜಮೀನುಗಳಿಗೆ ಒಡೆಯರನ್ನಾಗಿ ಮಾಡಿದರು. ಉಳುವವನಿಗೆ ಭೂಮಿ ಎಂದು ಘೋಷಣೆ ಮಾಡಿದರು. ಈ Slogan ದೊಡ್ಡ ಜಮೀನ್ದಾರರ ಭೂಮಿಗೆ ಮಾತ್ರ ಸೀಮಿತವಾಗಿತ್ತು.

ಅದೇ ದೇವರಾಜ ಅರಸರು ಕರ್ನಾಟಕದ ಎಲ್ಲ ಕಡೆಗೂ ಅನ್ವಯಿಸುವ ಭೂ ಸುಧಾರಣಾ ಕಾಯ್ದೆಯನ್ನೂ ಅದೇ ಕಾಲಕ್ಕೆ ಜಾರಿಗೆ ತಂದರು ಈ ಕಾಯ್ದೆಯ ಪ್ರಕಾರ ಭೂಮಿತಿ ಶಾಸನವನ್ನು ಜಾರಿಗೆ ತಂದರೆ, ಎಲ್ಲಾ ಉಳುವರಿಗೂ ಭೂಮಿ ಎಂದು ಘೋಷಿಸಲಿಲ್ಲ. ಅಷ್ಟೇ ಅಲ್ಲ ಅವರು ಕೈಗೊಂಡ ಭೂಮಿತಿ ಶಾಸನ ಅವೈಜ್ಞಾನಿಕವೂ, ಅವಾಸ್ತವಿಕವೂ ಆಗಿತ್ತು. ಹಾಗಾಗಿ ಈ ಭೂಮಿತಿ ಶಾಸನದಿಂದ ಬಡವರಿಗೆ ಭೂಹೀನರಿಗೆ ಜಮೀನು ಸಿಕ್ಕಲಿಲ್ಲ.

ಕರ್ನಾಟಕದಲ್ಲಿ ಒಂದು ಎಕರೆ 2 ಎಕರೆ ಜಮೀನುಳ್ಳವರು ಶೇ.60 ಮಂದಿ ಇದ್ದಾರೆ. ಇವರು ಜಮೀನಿನಲ್ಲಿ ಸ್ವತಃ ದುಡಿದು ತಿನ್ನುವವರು. ಹೆಚ್ಚಿಗೆ ಜಮೀನು ಇರುವವರೆಲ್ಲ ದಿನಕ್ಕೆ 500 ರೂ ಕೂಲಿ ಕೊಟ್ಟು ಜಮೀನು ಮಾಡಿಸುವವರು. ಇವರೆಲ್ಲ ತಮಗಿರುವ ಎಲ್ಲಾ ಜಮೀನನ್ನೂ ಆಹಾರಧಾನ್ಯ ಬೆಳೆಯುವುದಕ್ಕೆ ಉಪಯೋಗಿಸುತ್ತಿಲ್ಲ. ಇವರು ತಿಂಗಳು ತಿಂಗಳು ಹಣ ನೀಡುವ ತರಕಾರಿ, ಹೂವು, ಶುಂಠಿ, ಅರಿಸಿನ, ಹಣ್ಣಿನ ಗಿಡಗಳನ್ನು ಬೆಳೆಸುವವರು ಮತ್ತು ಪರಾವಲಂಬಿಗಳು. ಒಂದು ಎರಡು ಎಕರೆ ಜಮೀನುಳ್ಳವರು ಸ್ವತಃ ವ್ವವಸಾಯ ಮಾಡುವರಾದರೂ ಅವರಿಗೆ ಇರುವ ಸಣ್ಣ ಜಮೀನಿನಲ್ಲಿ ತಮ್ಮ ಹೊಟ್ಟೆಗೆ ಬೇಕಾದಷ್ಟನ್ನು ಬೆಳೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಬಡ ರೈತರಿಗೆ ಕನಿಷ್ಟ 5 ಎಕರೆ ಖುಷ್ಕಿ ಜಮೀನು ಬೇಕು. ಹೀಗೆ ಮಾಡುವುದರಿಂದ ಅವರು ತಾವೇ ದುಡಿದು ತಮ್ಮ ಉಪಜೀವನ ನಡೆಸಿಕೊಳ್ಳುವುದರ ಜೊತೆಗೆ ಸಮಾಜಕ್ಕೂ ಅಷ್ಟೂ ಇಷ್ಟೋ ಆಹಾರ ಒದಗಿಸಿಯಾರು.

ಆದ್ದರಿಂದ ಈಗ ಭೂಮಿತಿ ಶಾಸನವನ್ನು ಪರಿಷ್ಕರಿಸಿ ಒಂದು ಎಕರೆಯಿಂದ ೩ ಎಕರೆ ಜಮೀನು ಕೊಳ್ಳಲು ಬಡ ರೈತರಿಗೂ ಭೂ ಕಾರ್ಮಿಕರಿಗೂ ತಲಾ 5 ಎಕರೆ ಜಮೀನು ದೊರೆಯುವಂತೆ ಶಾಸನ ಮಾಡಬೇಕು. ಹಾಗೆ ಮಾಡದಿದ್ದರೆ ಈ ಅಪಾರ ಸಂಖ್ಯೆಯ ಬಡವರೂ ಕೂಡ ವಲಸಿಗ ಕಾರ್ಮಿಕರಾಗಿ ಪಟ್ಟಣ ಸೇರುವುದು ಖಚಿತ. ಸರ್ಕಾರಗಳು 70 ವರ್ಷದಿಂದ ಒಂದೇ ಸಮನೆ ಬೆಳೆ ಬೆಳೆಯುವ ಜಮೀನುಗಳನ್ನು ರಸ್ತೆ ನಿರ್ಮಿಸುವ, ಅಗಲ ಮಾಡುವ ಉದ್ಯಮಗಳಿಗಾಗಿ ವಶ ಪಡಿಸಿಕೊಂಡು ವ್ಯವಸಾಯದ ಭೂಮಿಯನ್ನು ನುಂಗಿ ಹಾಕುತ್ತಿವೆ.

ಈಗ ಸರ್ಕಾರ ಕೈಗೊಳ್ಳುವ ಭೂ ಸುಧಾರಣೆ ಕಾಯ್ದೆಯೂ ಈ ಬಡ ರೈತರನ್ನೆಲ್ಲ ವಲಸೆ ಹೋಗಬೇಕಾದ ಅನಿವಾರ್ಯತೆಗೆ ಅಣಿಗೊಳಿಸುತ್ತದೆ. ಈ ಸುಧಾರಣೆಯ ಕಾಯ್ದೆ ಜಾರಿಗೆ ಬಂದರೆ ಬಡಜನರ ಜಮೀನೆಲ್ಲ ಶ್ರೀಮಂತರ ಅಥವಾ ಕಾರ್ಪೋರೇಟ್ ಜಗತ್ತಿನವರ ವಶವಾಗುತ್ತದೆ. ಕಾರ್ಪೋರೇಟ್ ಕಂಪನಿಗಳು consolidation holding ಅನ್ನು ಬೆಂಬಲಿಸುತ್ತವೆ. ಬಡವರಿಗೆ ಆಮಿಷವೊಡ್ಡಿ ಅವರ ಜಮೀನನ್ನೆಲ್ಲ ದೊಡ್ಡ ಜಮೀನ್ದಾರರ ಅಥವಾ ಕಾರ್ಪೋರೇಟ್ ಕಂಪನಿಗಳ ವಶಕ್ಕೆ ನೀಡುವ ಹುನ್ನಾರ ಇದು. ಕಾಪೋರೇಟ್ ಕಂಪನಿಗಳು ವ್ಯವಸಾಯಕ್ಕೆ ಬೇಕಾದ ಅತ್ಯುತ್ತಮ ಸಾಧನಗಳನ್ನು ಈ ಶ್ರೀಮಂತ ರೈತರಿಗೆ ಒದಗಿಸಿ ಕೆಲವೇ ಜನ ಕೂಲಿಗಳ ಅವಶ್ಯಕತೆ ಬೀಳುವಂತೆ ಮಾಡುತ್ತಾರೆ. ಭೂಮಿ ಕಳೆದುಕೊಂಡವರೆಲ್ಲ ಗ್ರಾಮಬಿಟ್ಟು ಪಟ್ಟಣ ಸೇರಬೇಕಾದ ಅನಿವಾರ್ಯತೆ ಉಂಟು ಮಾಡುತ್ತಾರೆ. ಹೆಚ್ಚಿನ ಜಮೀನುಳ್ಳ ರೈತರನ್ನು ಹಣವಂತರು, ಕಾರ್ಪೋರೇಟ್‌ಗಳು ಸಂಧಿಸಿ, ತಾವು ಹೇಳುವ ಬೆಳೆ ಬೆಳೆದು ಕೊಟ್ಟರೆ, ಅವರು ನೀರೀಕ್ಷಿಸುವ ದರ ನೀಡುವುದಾಗಿ ಹೇಳುತ್ತಾರೆ. ಅರ್ಥಾತ್ ಈ ಜಮೀನುದಾರರನ್ನು ತಮ್ಮ ಕೂಲಿಯಾಳುಗಳನ್ನಾಗಿ ಪರಿವರ್ತಿಸುತ್ತಾರೆ. ವ್ಯವಸಾಯ ಪ್ರಧಾನವಾದ ಭಾರತ ದೇಶವನ್ನು ಅಮೆರಿಕ ಮಾಡುವ ಸನ್ನಾಹ ಮೋದಿಯವರದು ಯಡಿಯೂರಪ್ಪನವರದು.

ಅಮೆರಿಕ ಉದ್ಯಮಗಳ ದೇಶ. ಕೈಗಾರಿಕ ಪ್ರಧಾನ ದೇಶ. ವ್ಯವಸಾಯ ಪ್ರಧಾನ ದೇಶವಲ್ಲ. ಅಲ್ಲಿ ವ್ಯವಸಾಯದಲ್ಲಿ ಜನ ತೊಡಗಿಕೊಳ್ಳುವುದಿಲ್ಲ. ಆದ್ದರಿಂದ ಕೆಲವರು ಮಾತ್ರ ಸಾವಿರ ಸಾವಿರ ಎಕರೆ ಜಮೀನು ಮಾಲಿಕರಾಗಿದ್ದಾರೆ. ಅವರು ಜಮೀನನ್ನೆಲ್ಲ ಪವರ್ ಟಿಲ್ಲರ್‌ನಲ್ಲಿ ಉಳುತ್ತಾರೆ. ಬೀಜವನ್ನು ಹೆಲಿಕಾಪ್ಟರ್‌ನಿಂದ ಬಿತ್ತುತ್ತಾರೆ. ಡ್ರೈಯರ್‌ಗಳನ್ನು ಧಾನ್ಯವನ್ನು ತೂರುವ ಯಂತ್ರಗಳನ್ನು ಬೀಜ ಬಿಡಿಸುವ ಯಂತ್ರಗಳನ್ನು ಇಟ್ಟುಕೊಂಡಿದ್ದಾರೆ. ಮನೆ ಮಂದಿಯೇ 1000 ಎಕರೆ ಜಮೀನಿನ ನಿರ್ವಹಣೆಯನ್ನು ಮಾಡುತ್ತಾರೆ.

ವ್ಯವಸಾಯ ಪ್ರಧಾನವಾದ ಭಾರತದಲ್ಲಿ ಅಮೆರಿಕದ ಪ್ರಯೋಗವನ್ನು ಮಾಡುವುದು ಸರಿಯಲ್ಲ. ಆಹಾರಧಾನ್ಯಕ್ಕಾಗಿ ಭಿಕ್ಷಾಪಾತ್ರೆ ತೆಗೆದುಕೊಂಡು ಅನ್ಯ ದೇಶಗಳಲ್ಲಿ ದೇಹಿ ಎಂದು ಬೇಡುವುದೂ ಅಪಮಾನಕರ. ಇಂತಹ ಅವಿವೇಕದ ಭೂಸುಧಾರಣೆಯನ್ನು ಭಾರತದಲ್ಲಿ ಜಾರಿ ಮಾಡುವುದನ್ನು ತಡೆಗಟ್ಟಬೇಕಾದ್ದು ಈ ದೇಶದ ಎಲ್ಲ ಜನರ ಕರ್ತವ್ಯವೇ ಆಗಿದೆ.

ಮುಖ್ಯವಾಗಿ ಭಾರತದಾದ್ಯಂತ ಇರುವ ಎಲ್ಲ ರೈತ ಸಂಘಟನೆಗಲೂ ಒಂದುಗೂಡಿ ಒಂದು ಸಂಘರ್ಷ ಸಮಿತಿಯನ್ನು ರಚಿಸಬೇಕು. ಭಾರತದ ಬಡ ರೈತರ ಹಿತ ದೃಷ್ಟಿಯುಳ್ಳ ಎಲ್ಲರೂ ಶ್ರೀಮಂತರು ಬಡವರ ಭೂಮಿಯನ್ನು ಕೊಳ್ಳುವುದಕ್ಕೆ ಸರ್ಕಾರ ಅವಕಾಶ ಮಾಡಿಕೊಡುವ ಶಾಸನ ಮಾಡುವುದು ಜನದ್ರೋಹ ಕೆಲಸ ಎಂದು ಸಾರಿ ಹೇಳಬೇಕು. ಅದಕ್ಕಾಗಿ ದೇಶವ್ಯಾಪಿ ಅಸಹಕಾರ ಚಳವಳಿ ಆರಂಭಿಸಬೇಕು ಭಾರತದ ಸ್ವಾಯತ್ತತೆಯನ್ನು ಬಯಸುವ ಎಲ್ಲಾ ಜನರೂ, ರೈತ ಸಂಘಟನೆಗಳ ಜೊತೆಗೆ ಕೈ ಜೋಡಿಸಬೇಕು.

  • ಎಚ್.ಎಸ್‌ ದೊರೆಸ್ವಾಮಿ

ಇದನ್ನೂ ಓದಿ: ಕೋಆಪರೇಟೀಕರಣದತ್ತ ಹೊರಳಬೇಕಿದ್ದ ಕೃಷಿ ಕಾರ್ಪೋರೇಟೀಕರಣದತ್ತ: ಈ ವಿನಾಶದ ಪರಿಣಾಮಗಳೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...