Homeಮುಖಪುಟಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ : ದೇಶವ್ಯಾಪಿ ಅಸಹಕಾರ ಚಳವಳಿಯ ಅಗತ್ಯವಿದೆ

ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ : ದೇಶವ್ಯಾಪಿ ಅಸಹಕಾರ ಚಳವಳಿಯ ಅಗತ್ಯವಿದೆ

- Advertisement -
- Advertisement -

ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿ ಮಾಡುವ ಹುನ್ನಾರಕ್ಕೆ ಬಿಜೆಪಿ ಸರ್ಕಾರ ಕೈ ಹಾಕಿದೆ. ಮೋದಿ ಸರ್ಕಾರದ ಅಣತಿಯಂತೆ ಈ ರೈತ ವಿರೋಧೀ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ.

ದೊಡ್ಡ ದೊಡ್ಡ ಜಮೀನ್ದಾರರು ಕರ್ನಾಟಕದಲ್ಲಿ ನಿರ್ಗತಿಕರಿಗೆ 2-3 ಎಕರೆ ಜಮೀನು ಮಾಡಲು ಕೊಟ್ಟು ಅವರನ್ನು ನಿರಂತರ ಗುಲಾಮಗಿರಿಗೆ ನೂಕಿದ್ದರು. ಬಡವರನ್ನು ಖಾಯಂ ಆಗಿ ಬಡವರನ್ನಾಗಿಡುವ ಕೆಲಸ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿತ್ತು. ಈ ಬಡ ಗೇಣಿದಾರರನ್ನು ಸಂಘಟನೆ ಮಾಡಿದ ಮೊದಲಿಗರಲ್ಲಿ ಕಡಿದಾಳ್ ಮಂಜಪ್ಪನವರು, ಬಸವಾನಿ ರಾಮಶರ್ಮರು ಮತ್ತು ಗಣಪತಿಯಪ್ಪ ಮೊದಲಿಗರು. ಆನಂತರ ಶಾಂತವೇರಿ ಗೋಪಾಲಗೌಡರು ಮುಂತಾದ ಸೋಷಿಯಲಿಸ್ಟ್ ಮುಖಂಡರು ಗೇಣೀದಾರರರನ್ನು ಸಂಘಟನೆ ಮಾಡಿ, ಜಮೀನ್ದಾರರ ವಿರುದ್ಧವಾಗಿ, ಗೇಣೀ ಪದ್ದತಿ ರದ್ದತಿಗಾಗಿ ಚಳವಳಿ ಮಾಡಿದರು. ಮುಂದೆ ದೇವರಾಜ ಅರಸರು ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಂದರ್ಭದಲ್ಲಿ ಗೇಣಿ ಪದ್ದತಿ ರದ್ದುಗೊಳಿಸುವ ಶಾಸನ ಜಾರಿಗೆ ತಂದರು. ಈ ಜಮೀನ್ದಾರರ ಜಮೀನುಗಳಲ್ಲಿ ದುಡಿಯುತ್ತಿದ್ದ ಬಡ ರೈತರನ್ನು ಅವರು ಮಾಡುತ್ತಿದ್ದ ಜಮೀನುಗಳಿಗೆ ಒಡೆಯರನ್ನಾಗಿ ಮಾಡಿದರು. ಉಳುವವನಿಗೆ ಭೂಮಿ ಎಂದು ಘೋಷಣೆ ಮಾಡಿದರು. ಈ Slogan ದೊಡ್ಡ ಜಮೀನ್ದಾರರ ಭೂಮಿಗೆ ಮಾತ್ರ ಸೀಮಿತವಾಗಿತ್ತು.

ಅದೇ ದೇವರಾಜ ಅರಸರು ಕರ್ನಾಟಕದ ಎಲ್ಲ ಕಡೆಗೂ ಅನ್ವಯಿಸುವ ಭೂ ಸುಧಾರಣಾ ಕಾಯ್ದೆಯನ್ನೂ ಅದೇ ಕಾಲಕ್ಕೆ ಜಾರಿಗೆ ತಂದರು ಈ ಕಾಯ್ದೆಯ ಪ್ರಕಾರ ಭೂಮಿತಿ ಶಾಸನವನ್ನು ಜಾರಿಗೆ ತಂದರೆ, ಎಲ್ಲಾ ಉಳುವರಿಗೂ ಭೂಮಿ ಎಂದು ಘೋಷಿಸಲಿಲ್ಲ. ಅಷ್ಟೇ ಅಲ್ಲ ಅವರು ಕೈಗೊಂಡ ಭೂಮಿತಿ ಶಾಸನ ಅವೈಜ್ಞಾನಿಕವೂ, ಅವಾಸ್ತವಿಕವೂ ಆಗಿತ್ತು. ಹಾಗಾಗಿ ಈ ಭೂಮಿತಿ ಶಾಸನದಿಂದ ಬಡವರಿಗೆ ಭೂಹೀನರಿಗೆ ಜಮೀನು ಸಿಕ್ಕಲಿಲ್ಲ.

ಕರ್ನಾಟಕದಲ್ಲಿ ಒಂದು ಎಕರೆ 2 ಎಕರೆ ಜಮೀನುಳ್ಳವರು ಶೇ.60 ಮಂದಿ ಇದ್ದಾರೆ. ಇವರು ಜಮೀನಿನಲ್ಲಿ ಸ್ವತಃ ದುಡಿದು ತಿನ್ನುವವರು. ಹೆಚ್ಚಿಗೆ ಜಮೀನು ಇರುವವರೆಲ್ಲ ದಿನಕ್ಕೆ 500 ರೂ ಕೂಲಿ ಕೊಟ್ಟು ಜಮೀನು ಮಾಡಿಸುವವರು. ಇವರೆಲ್ಲ ತಮಗಿರುವ ಎಲ್ಲಾ ಜಮೀನನ್ನೂ ಆಹಾರಧಾನ್ಯ ಬೆಳೆಯುವುದಕ್ಕೆ ಉಪಯೋಗಿಸುತ್ತಿಲ್ಲ. ಇವರು ತಿಂಗಳು ತಿಂಗಳು ಹಣ ನೀಡುವ ತರಕಾರಿ, ಹೂವು, ಶುಂಠಿ, ಅರಿಸಿನ, ಹಣ್ಣಿನ ಗಿಡಗಳನ್ನು ಬೆಳೆಸುವವರು ಮತ್ತು ಪರಾವಲಂಬಿಗಳು. ಒಂದು ಎರಡು ಎಕರೆ ಜಮೀನುಳ್ಳವರು ಸ್ವತಃ ವ್ವವಸಾಯ ಮಾಡುವರಾದರೂ ಅವರಿಗೆ ಇರುವ ಸಣ್ಣ ಜಮೀನಿನಲ್ಲಿ ತಮ್ಮ ಹೊಟ್ಟೆಗೆ ಬೇಕಾದಷ್ಟನ್ನು ಬೆಳೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಬಡ ರೈತರಿಗೆ ಕನಿಷ್ಟ 5 ಎಕರೆ ಖುಷ್ಕಿ ಜಮೀನು ಬೇಕು. ಹೀಗೆ ಮಾಡುವುದರಿಂದ ಅವರು ತಾವೇ ದುಡಿದು ತಮ್ಮ ಉಪಜೀವನ ನಡೆಸಿಕೊಳ್ಳುವುದರ ಜೊತೆಗೆ ಸಮಾಜಕ್ಕೂ ಅಷ್ಟೂ ಇಷ್ಟೋ ಆಹಾರ ಒದಗಿಸಿಯಾರು.

ಆದ್ದರಿಂದ ಈಗ ಭೂಮಿತಿ ಶಾಸನವನ್ನು ಪರಿಷ್ಕರಿಸಿ ಒಂದು ಎಕರೆಯಿಂದ ೩ ಎಕರೆ ಜಮೀನು ಕೊಳ್ಳಲು ಬಡ ರೈತರಿಗೂ ಭೂ ಕಾರ್ಮಿಕರಿಗೂ ತಲಾ 5 ಎಕರೆ ಜಮೀನು ದೊರೆಯುವಂತೆ ಶಾಸನ ಮಾಡಬೇಕು. ಹಾಗೆ ಮಾಡದಿದ್ದರೆ ಈ ಅಪಾರ ಸಂಖ್ಯೆಯ ಬಡವರೂ ಕೂಡ ವಲಸಿಗ ಕಾರ್ಮಿಕರಾಗಿ ಪಟ್ಟಣ ಸೇರುವುದು ಖಚಿತ. ಸರ್ಕಾರಗಳು 70 ವರ್ಷದಿಂದ ಒಂದೇ ಸಮನೆ ಬೆಳೆ ಬೆಳೆಯುವ ಜಮೀನುಗಳನ್ನು ರಸ್ತೆ ನಿರ್ಮಿಸುವ, ಅಗಲ ಮಾಡುವ ಉದ್ಯಮಗಳಿಗಾಗಿ ವಶ ಪಡಿಸಿಕೊಂಡು ವ್ಯವಸಾಯದ ಭೂಮಿಯನ್ನು ನುಂಗಿ ಹಾಕುತ್ತಿವೆ.

ಈಗ ಸರ್ಕಾರ ಕೈಗೊಳ್ಳುವ ಭೂ ಸುಧಾರಣೆ ಕಾಯ್ದೆಯೂ ಈ ಬಡ ರೈತರನ್ನೆಲ್ಲ ವಲಸೆ ಹೋಗಬೇಕಾದ ಅನಿವಾರ್ಯತೆಗೆ ಅಣಿಗೊಳಿಸುತ್ತದೆ. ಈ ಸುಧಾರಣೆಯ ಕಾಯ್ದೆ ಜಾರಿಗೆ ಬಂದರೆ ಬಡಜನರ ಜಮೀನೆಲ್ಲ ಶ್ರೀಮಂತರ ಅಥವಾ ಕಾರ್ಪೋರೇಟ್ ಜಗತ್ತಿನವರ ವಶವಾಗುತ್ತದೆ. ಕಾರ್ಪೋರೇಟ್ ಕಂಪನಿಗಳು consolidation holding ಅನ್ನು ಬೆಂಬಲಿಸುತ್ತವೆ. ಬಡವರಿಗೆ ಆಮಿಷವೊಡ್ಡಿ ಅವರ ಜಮೀನನ್ನೆಲ್ಲ ದೊಡ್ಡ ಜಮೀನ್ದಾರರ ಅಥವಾ ಕಾರ್ಪೋರೇಟ್ ಕಂಪನಿಗಳ ವಶಕ್ಕೆ ನೀಡುವ ಹುನ್ನಾರ ಇದು. ಕಾಪೋರೇಟ್ ಕಂಪನಿಗಳು ವ್ಯವಸಾಯಕ್ಕೆ ಬೇಕಾದ ಅತ್ಯುತ್ತಮ ಸಾಧನಗಳನ್ನು ಈ ಶ್ರೀಮಂತ ರೈತರಿಗೆ ಒದಗಿಸಿ ಕೆಲವೇ ಜನ ಕೂಲಿಗಳ ಅವಶ್ಯಕತೆ ಬೀಳುವಂತೆ ಮಾಡುತ್ತಾರೆ. ಭೂಮಿ ಕಳೆದುಕೊಂಡವರೆಲ್ಲ ಗ್ರಾಮಬಿಟ್ಟು ಪಟ್ಟಣ ಸೇರಬೇಕಾದ ಅನಿವಾರ್ಯತೆ ಉಂಟು ಮಾಡುತ್ತಾರೆ. ಹೆಚ್ಚಿನ ಜಮೀನುಳ್ಳ ರೈತರನ್ನು ಹಣವಂತರು, ಕಾರ್ಪೋರೇಟ್‌ಗಳು ಸಂಧಿಸಿ, ತಾವು ಹೇಳುವ ಬೆಳೆ ಬೆಳೆದು ಕೊಟ್ಟರೆ, ಅವರು ನೀರೀಕ್ಷಿಸುವ ದರ ನೀಡುವುದಾಗಿ ಹೇಳುತ್ತಾರೆ. ಅರ್ಥಾತ್ ಈ ಜಮೀನುದಾರರನ್ನು ತಮ್ಮ ಕೂಲಿಯಾಳುಗಳನ್ನಾಗಿ ಪರಿವರ್ತಿಸುತ್ತಾರೆ. ವ್ಯವಸಾಯ ಪ್ರಧಾನವಾದ ಭಾರತ ದೇಶವನ್ನು ಅಮೆರಿಕ ಮಾಡುವ ಸನ್ನಾಹ ಮೋದಿಯವರದು ಯಡಿಯೂರಪ್ಪನವರದು.

ಅಮೆರಿಕ ಉದ್ಯಮಗಳ ದೇಶ. ಕೈಗಾರಿಕ ಪ್ರಧಾನ ದೇಶ. ವ್ಯವಸಾಯ ಪ್ರಧಾನ ದೇಶವಲ್ಲ. ಅಲ್ಲಿ ವ್ಯವಸಾಯದಲ್ಲಿ ಜನ ತೊಡಗಿಕೊಳ್ಳುವುದಿಲ್ಲ. ಆದ್ದರಿಂದ ಕೆಲವರು ಮಾತ್ರ ಸಾವಿರ ಸಾವಿರ ಎಕರೆ ಜಮೀನು ಮಾಲಿಕರಾಗಿದ್ದಾರೆ. ಅವರು ಜಮೀನನ್ನೆಲ್ಲ ಪವರ್ ಟಿಲ್ಲರ್‌ನಲ್ಲಿ ಉಳುತ್ತಾರೆ. ಬೀಜವನ್ನು ಹೆಲಿಕಾಪ್ಟರ್‌ನಿಂದ ಬಿತ್ತುತ್ತಾರೆ. ಡ್ರೈಯರ್‌ಗಳನ್ನು ಧಾನ್ಯವನ್ನು ತೂರುವ ಯಂತ್ರಗಳನ್ನು ಬೀಜ ಬಿಡಿಸುವ ಯಂತ್ರಗಳನ್ನು ಇಟ್ಟುಕೊಂಡಿದ್ದಾರೆ. ಮನೆ ಮಂದಿಯೇ 1000 ಎಕರೆ ಜಮೀನಿನ ನಿರ್ವಹಣೆಯನ್ನು ಮಾಡುತ್ತಾರೆ.

ವ್ಯವಸಾಯ ಪ್ರಧಾನವಾದ ಭಾರತದಲ್ಲಿ ಅಮೆರಿಕದ ಪ್ರಯೋಗವನ್ನು ಮಾಡುವುದು ಸರಿಯಲ್ಲ. ಆಹಾರಧಾನ್ಯಕ್ಕಾಗಿ ಭಿಕ್ಷಾಪಾತ್ರೆ ತೆಗೆದುಕೊಂಡು ಅನ್ಯ ದೇಶಗಳಲ್ಲಿ ದೇಹಿ ಎಂದು ಬೇಡುವುದೂ ಅಪಮಾನಕರ. ಇಂತಹ ಅವಿವೇಕದ ಭೂಸುಧಾರಣೆಯನ್ನು ಭಾರತದಲ್ಲಿ ಜಾರಿ ಮಾಡುವುದನ್ನು ತಡೆಗಟ್ಟಬೇಕಾದ್ದು ಈ ದೇಶದ ಎಲ್ಲ ಜನರ ಕರ್ತವ್ಯವೇ ಆಗಿದೆ.

ಮುಖ್ಯವಾಗಿ ಭಾರತದಾದ್ಯಂತ ಇರುವ ಎಲ್ಲ ರೈತ ಸಂಘಟನೆಗಲೂ ಒಂದುಗೂಡಿ ಒಂದು ಸಂಘರ್ಷ ಸಮಿತಿಯನ್ನು ರಚಿಸಬೇಕು. ಭಾರತದ ಬಡ ರೈತರ ಹಿತ ದೃಷ್ಟಿಯುಳ್ಳ ಎಲ್ಲರೂ ಶ್ರೀಮಂತರು ಬಡವರ ಭೂಮಿಯನ್ನು ಕೊಳ್ಳುವುದಕ್ಕೆ ಸರ್ಕಾರ ಅವಕಾಶ ಮಾಡಿಕೊಡುವ ಶಾಸನ ಮಾಡುವುದು ಜನದ್ರೋಹ ಕೆಲಸ ಎಂದು ಸಾರಿ ಹೇಳಬೇಕು. ಅದಕ್ಕಾಗಿ ದೇಶವ್ಯಾಪಿ ಅಸಹಕಾರ ಚಳವಳಿ ಆರಂಭಿಸಬೇಕು ಭಾರತದ ಸ್ವಾಯತ್ತತೆಯನ್ನು ಬಯಸುವ ಎಲ್ಲಾ ಜನರೂ, ರೈತ ಸಂಘಟನೆಗಳ ಜೊತೆಗೆ ಕೈ ಜೋಡಿಸಬೇಕು.

  • ಎಚ್.ಎಸ್‌ ದೊರೆಸ್ವಾಮಿ

ಇದನ್ನೂ ಓದಿ: ಕೋಆಪರೇಟೀಕರಣದತ್ತ ಹೊರಳಬೇಕಿದ್ದ ಕೃಷಿ ಕಾರ್ಪೋರೇಟೀಕರಣದತ್ತ: ಈ ವಿನಾಶದ ಪರಿಣಾಮಗಳೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...