Homeಮುಖಪುಟಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ : ದೇಶವ್ಯಾಪಿ ಅಸಹಕಾರ ಚಳವಳಿಯ ಅಗತ್ಯವಿದೆ

ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ : ದೇಶವ್ಯಾಪಿ ಅಸಹಕಾರ ಚಳವಳಿಯ ಅಗತ್ಯವಿದೆ

- Advertisement -
- Advertisement -

ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿ ಮಾಡುವ ಹುನ್ನಾರಕ್ಕೆ ಬಿಜೆಪಿ ಸರ್ಕಾರ ಕೈ ಹಾಕಿದೆ. ಮೋದಿ ಸರ್ಕಾರದ ಅಣತಿಯಂತೆ ಈ ರೈತ ವಿರೋಧೀ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ.

ದೊಡ್ಡ ದೊಡ್ಡ ಜಮೀನ್ದಾರರು ಕರ್ನಾಟಕದಲ್ಲಿ ನಿರ್ಗತಿಕರಿಗೆ 2-3 ಎಕರೆ ಜಮೀನು ಮಾಡಲು ಕೊಟ್ಟು ಅವರನ್ನು ನಿರಂತರ ಗುಲಾಮಗಿರಿಗೆ ನೂಕಿದ್ದರು. ಬಡವರನ್ನು ಖಾಯಂ ಆಗಿ ಬಡವರನ್ನಾಗಿಡುವ ಕೆಲಸ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿತ್ತು. ಈ ಬಡ ಗೇಣಿದಾರರನ್ನು ಸಂಘಟನೆ ಮಾಡಿದ ಮೊದಲಿಗರಲ್ಲಿ ಕಡಿದಾಳ್ ಮಂಜಪ್ಪನವರು, ಬಸವಾನಿ ರಾಮಶರ್ಮರು ಮತ್ತು ಗಣಪತಿಯಪ್ಪ ಮೊದಲಿಗರು. ಆನಂತರ ಶಾಂತವೇರಿ ಗೋಪಾಲಗೌಡರು ಮುಂತಾದ ಸೋಷಿಯಲಿಸ್ಟ್ ಮುಖಂಡರು ಗೇಣೀದಾರರರನ್ನು ಸಂಘಟನೆ ಮಾಡಿ, ಜಮೀನ್ದಾರರ ವಿರುದ್ಧವಾಗಿ, ಗೇಣೀ ಪದ್ದತಿ ರದ್ದತಿಗಾಗಿ ಚಳವಳಿ ಮಾಡಿದರು. ಮುಂದೆ ದೇವರಾಜ ಅರಸರು ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಂದರ್ಭದಲ್ಲಿ ಗೇಣಿ ಪದ್ದತಿ ರದ್ದುಗೊಳಿಸುವ ಶಾಸನ ಜಾರಿಗೆ ತಂದರು. ಈ ಜಮೀನ್ದಾರರ ಜಮೀನುಗಳಲ್ಲಿ ದುಡಿಯುತ್ತಿದ್ದ ಬಡ ರೈತರನ್ನು ಅವರು ಮಾಡುತ್ತಿದ್ದ ಜಮೀನುಗಳಿಗೆ ಒಡೆಯರನ್ನಾಗಿ ಮಾಡಿದರು. ಉಳುವವನಿಗೆ ಭೂಮಿ ಎಂದು ಘೋಷಣೆ ಮಾಡಿದರು. ಈ Slogan ದೊಡ್ಡ ಜಮೀನ್ದಾರರ ಭೂಮಿಗೆ ಮಾತ್ರ ಸೀಮಿತವಾಗಿತ್ತು.

ಅದೇ ದೇವರಾಜ ಅರಸರು ಕರ್ನಾಟಕದ ಎಲ್ಲ ಕಡೆಗೂ ಅನ್ವಯಿಸುವ ಭೂ ಸುಧಾರಣಾ ಕಾಯ್ದೆಯನ್ನೂ ಅದೇ ಕಾಲಕ್ಕೆ ಜಾರಿಗೆ ತಂದರು ಈ ಕಾಯ್ದೆಯ ಪ್ರಕಾರ ಭೂಮಿತಿ ಶಾಸನವನ್ನು ಜಾರಿಗೆ ತಂದರೆ, ಎಲ್ಲಾ ಉಳುವರಿಗೂ ಭೂಮಿ ಎಂದು ಘೋಷಿಸಲಿಲ್ಲ. ಅಷ್ಟೇ ಅಲ್ಲ ಅವರು ಕೈಗೊಂಡ ಭೂಮಿತಿ ಶಾಸನ ಅವೈಜ್ಞಾನಿಕವೂ, ಅವಾಸ್ತವಿಕವೂ ಆಗಿತ್ತು. ಹಾಗಾಗಿ ಈ ಭೂಮಿತಿ ಶಾಸನದಿಂದ ಬಡವರಿಗೆ ಭೂಹೀನರಿಗೆ ಜಮೀನು ಸಿಕ್ಕಲಿಲ್ಲ.

ಕರ್ನಾಟಕದಲ್ಲಿ ಒಂದು ಎಕರೆ 2 ಎಕರೆ ಜಮೀನುಳ್ಳವರು ಶೇ.60 ಮಂದಿ ಇದ್ದಾರೆ. ಇವರು ಜಮೀನಿನಲ್ಲಿ ಸ್ವತಃ ದುಡಿದು ತಿನ್ನುವವರು. ಹೆಚ್ಚಿಗೆ ಜಮೀನು ಇರುವವರೆಲ್ಲ ದಿನಕ್ಕೆ 500 ರೂ ಕೂಲಿ ಕೊಟ್ಟು ಜಮೀನು ಮಾಡಿಸುವವರು. ಇವರೆಲ್ಲ ತಮಗಿರುವ ಎಲ್ಲಾ ಜಮೀನನ್ನೂ ಆಹಾರಧಾನ್ಯ ಬೆಳೆಯುವುದಕ್ಕೆ ಉಪಯೋಗಿಸುತ್ತಿಲ್ಲ. ಇವರು ತಿಂಗಳು ತಿಂಗಳು ಹಣ ನೀಡುವ ತರಕಾರಿ, ಹೂವು, ಶುಂಠಿ, ಅರಿಸಿನ, ಹಣ್ಣಿನ ಗಿಡಗಳನ್ನು ಬೆಳೆಸುವವರು ಮತ್ತು ಪರಾವಲಂಬಿಗಳು. ಒಂದು ಎರಡು ಎಕರೆ ಜಮೀನುಳ್ಳವರು ಸ್ವತಃ ವ್ವವಸಾಯ ಮಾಡುವರಾದರೂ ಅವರಿಗೆ ಇರುವ ಸಣ್ಣ ಜಮೀನಿನಲ್ಲಿ ತಮ್ಮ ಹೊಟ್ಟೆಗೆ ಬೇಕಾದಷ್ಟನ್ನು ಬೆಳೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಬಡ ರೈತರಿಗೆ ಕನಿಷ್ಟ 5 ಎಕರೆ ಖುಷ್ಕಿ ಜಮೀನು ಬೇಕು. ಹೀಗೆ ಮಾಡುವುದರಿಂದ ಅವರು ತಾವೇ ದುಡಿದು ತಮ್ಮ ಉಪಜೀವನ ನಡೆಸಿಕೊಳ್ಳುವುದರ ಜೊತೆಗೆ ಸಮಾಜಕ್ಕೂ ಅಷ್ಟೂ ಇಷ್ಟೋ ಆಹಾರ ಒದಗಿಸಿಯಾರು.

ಆದ್ದರಿಂದ ಈಗ ಭೂಮಿತಿ ಶಾಸನವನ್ನು ಪರಿಷ್ಕರಿಸಿ ಒಂದು ಎಕರೆಯಿಂದ ೩ ಎಕರೆ ಜಮೀನು ಕೊಳ್ಳಲು ಬಡ ರೈತರಿಗೂ ಭೂ ಕಾರ್ಮಿಕರಿಗೂ ತಲಾ 5 ಎಕರೆ ಜಮೀನು ದೊರೆಯುವಂತೆ ಶಾಸನ ಮಾಡಬೇಕು. ಹಾಗೆ ಮಾಡದಿದ್ದರೆ ಈ ಅಪಾರ ಸಂಖ್ಯೆಯ ಬಡವರೂ ಕೂಡ ವಲಸಿಗ ಕಾರ್ಮಿಕರಾಗಿ ಪಟ್ಟಣ ಸೇರುವುದು ಖಚಿತ. ಸರ್ಕಾರಗಳು 70 ವರ್ಷದಿಂದ ಒಂದೇ ಸಮನೆ ಬೆಳೆ ಬೆಳೆಯುವ ಜಮೀನುಗಳನ್ನು ರಸ್ತೆ ನಿರ್ಮಿಸುವ, ಅಗಲ ಮಾಡುವ ಉದ್ಯಮಗಳಿಗಾಗಿ ವಶ ಪಡಿಸಿಕೊಂಡು ವ್ಯವಸಾಯದ ಭೂಮಿಯನ್ನು ನುಂಗಿ ಹಾಕುತ್ತಿವೆ.

ಈಗ ಸರ್ಕಾರ ಕೈಗೊಳ್ಳುವ ಭೂ ಸುಧಾರಣೆ ಕಾಯ್ದೆಯೂ ಈ ಬಡ ರೈತರನ್ನೆಲ್ಲ ವಲಸೆ ಹೋಗಬೇಕಾದ ಅನಿವಾರ್ಯತೆಗೆ ಅಣಿಗೊಳಿಸುತ್ತದೆ. ಈ ಸುಧಾರಣೆಯ ಕಾಯ್ದೆ ಜಾರಿಗೆ ಬಂದರೆ ಬಡಜನರ ಜಮೀನೆಲ್ಲ ಶ್ರೀಮಂತರ ಅಥವಾ ಕಾರ್ಪೋರೇಟ್ ಜಗತ್ತಿನವರ ವಶವಾಗುತ್ತದೆ. ಕಾರ್ಪೋರೇಟ್ ಕಂಪನಿಗಳು consolidation holding ಅನ್ನು ಬೆಂಬಲಿಸುತ್ತವೆ. ಬಡವರಿಗೆ ಆಮಿಷವೊಡ್ಡಿ ಅವರ ಜಮೀನನ್ನೆಲ್ಲ ದೊಡ್ಡ ಜಮೀನ್ದಾರರ ಅಥವಾ ಕಾರ್ಪೋರೇಟ್ ಕಂಪನಿಗಳ ವಶಕ್ಕೆ ನೀಡುವ ಹುನ್ನಾರ ಇದು. ಕಾಪೋರೇಟ್ ಕಂಪನಿಗಳು ವ್ಯವಸಾಯಕ್ಕೆ ಬೇಕಾದ ಅತ್ಯುತ್ತಮ ಸಾಧನಗಳನ್ನು ಈ ಶ್ರೀಮಂತ ರೈತರಿಗೆ ಒದಗಿಸಿ ಕೆಲವೇ ಜನ ಕೂಲಿಗಳ ಅವಶ್ಯಕತೆ ಬೀಳುವಂತೆ ಮಾಡುತ್ತಾರೆ. ಭೂಮಿ ಕಳೆದುಕೊಂಡವರೆಲ್ಲ ಗ್ರಾಮಬಿಟ್ಟು ಪಟ್ಟಣ ಸೇರಬೇಕಾದ ಅನಿವಾರ್ಯತೆ ಉಂಟು ಮಾಡುತ್ತಾರೆ. ಹೆಚ್ಚಿನ ಜಮೀನುಳ್ಳ ರೈತರನ್ನು ಹಣವಂತರು, ಕಾರ್ಪೋರೇಟ್‌ಗಳು ಸಂಧಿಸಿ, ತಾವು ಹೇಳುವ ಬೆಳೆ ಬೆಳೆದು ಕೊಟ್ಟರೆ, ಅವರು ನೀರೀಕ್ಷಿಸುವ ದರ ನೀಡುವುದಾಗಿ ಹೇಳುತ್ತಾರೆ. ಅರ್ಥಾತ್ ಈ ಜಮೀನುದಾರರನ್ನು ತಮ್ಮ ಕೂಲಿಯಾಳುಗಳನ್ನಾಗಿ ಪರಿವರ್ತಿಸುತ್ತಾರೆ. ವ್ಯವಸಾಯ ಪ್ರಧಾನವಾದ ಭಾರತ ದೇಶವನ್ನು ಅಮೆರಿಕ ಮಾಡುವ ಸನ್ನಾಹ ಮೋದಿಯವರದು ಯಡಿಯೂರಪ್ಪನವರದು.

ಅಮೆರಿಕ ಉದ್ಯಮಗಳ ದೇಶ. ಕೈಗಾರಿಕ ಪ್ರಧಾನ ದೇಶ. ವ್ಯವಸಾಯ ಪ್ರಧಾನ ದೇಶವಲ್ಲ. ಅಲ್ಲಿ ವ್ಯವಸಾಯದಲ್ಲಿ ಜನ ತೊಡಗಿಕೊಳ್ಳುವುದಿಲ್ಲ. ಆದ್ದರಿಂದ ಕೆಲವರು ಮಾತ್ರ ಸಾವಿರ ಸಾವಿರ ಎಕರೆ ಜಮೀನು ಮಾಲಿಕರಾಗಿದ್ದಾರೆ. ಅವರು ಜಮೀನನ್ನೆಲ್ಲ ಪವರ್ ಟಿಲ್ಲರ್‌ನಲ್ಲಿ ಉಳುತ್ತಾರೆ. ಬೀಜವನ್ನು ಹೆಲಿಕಾಪ್ಟರ್‌ನಿಂದ ಬಿತ್ತುತ್ತಾರೆ. ಡ್ರೈಯರ್‌ಗಳನ್ನು ಧಾನ್ಯವನ್ನು ತೂರುವ ಯಂತ್ರಗಳನ್ನು ಬೀಜ ಬಿಡಿಸುವ ಯಂತ್ರಗಳನ್ನು ಇಟ್ಟುಕೊಂಡಿದ್ದಾರೆ. ಮನೆ ಮಂದಿಯೇ 1000 ಎಕರೆ ಜಮೀನಿನ ನಿರ್ವಹಣೆಯನ್ನು ಮಾಡುತ್ತಾರೆ.

ವ್ಯವಸಾಯ ಪ್ರಧಾನವಾದ ಭಾರತದಲ್ಲಿ ಅಮೆರಿಕದ ಪ್ರಯೋಗವನ್ನು ಮಾಡುವುದು ಸರಿಯಲ್ಲ. ಆಹಾರಧಾನ್ಯಕ್ಕಾಗಿ ಭಿಕ್ಷಾಪಾತ್ರೆ ತೆಗೆದುಕೊಂಡು ಅನ್ಯ ದೇಶಗಳಲ್ಲಿ ದೇಹಿ ಎಂದು ಬೇಡುವುದೂ ಅಪಮಾನಕರ. ಇಂತಹ ಅವಿವೇಕದ ಭೂಸುಧಾರಣೆಯನ್ನು ಭಾರತದಲ್ಲಿ ಜಾರಿ ಮಾಡುವುದನ್ನು ತಡೆಗಟ್ಟಬೇಕಾದ್ದು ಈ ದೇಶದ ಎಲ್ಲ ಜನರ ಕರ್ತವ್ಯವೇ ಆಗಿದೆ.

ಮುಖ್ಯವಾಗಿ ಭಾರತದಾದ್ಯಂತ ಇರುವ ಎಲ್ಲ ರೈತ ಸಂಘಟನೆಗಲೂ ಒಂದುಗೂಡಿ ಒಂದು ಸಂಘರ್ಷ ಸಮಿತಿಯನ್ನು ರಚಿಸಬೇಕು. ಭಾರತದ ಬಡ ರೈತರ ಹಿತ ದೃಷ್ಟಿಯುಳ್ಳ ಎಲ್ಲರೂ ಶ್ರೀಮಂತರು ಬಡವರ ಭೂಮಿಯನ್ನು ಕೊಳ್ಳುವುದಕ್ಕೆ ಸರ್ಕಾರ ಅವಕಾಶ ಮಾಡಿಕೊಡುವ ಶಾಸನ ಮಾಡುವುದು ಜನದ್ರೋಹ ಕೆಲಸ ಎಂದು ಸಾರಿ ಹೇಳಬೇಕು. ಅದಕ್ಕಾಗಿ ದೇಶವ್ಯಾಪಿ ಅಸಹಕಾರ ಚಳವಳಿ ಆರಂಭಿಸಬೇಕು ಭಾರತದ ಸ್ವಾಯತ್ತತೆಯನ್ನು ಬಯಸುವ ಎಲ್ಲಾ ಜನರೂ, ರೈತ ಸಂಘಟನೆಗಳ ಜೊತೆಗೆ ಕೈ ಜೋಡಿಸಬೇಕು.

  • ಎಚ್.ಎಸ್‌ ದೊರೆಸ್ವಾಮಿ

ಇದನ್ನೂ ಓದಿ: ಕೋಆಪರೇಟೀಕರಣದತ್ತ ಹೊರಳಬೇಕಿದ್ದ ಕೃಷಿ ಕಾರ್ಪೋರೇಟೀಕರಣದತ್ತ: ಈ ವಿನಾಶದ ಪರಿಣಾಮಗಳೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...