Homeಮುಖಪುಟಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ : ದೇಶವ್ಯಾಪಿ ಅಸಹಕಾರ ಚಳವಳಿಯ ಅಗತ್ಯವಿದೆ

ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ : ದೇಶವ್ಯಾಪಿ ಅಸಹಕಾರ ಚಳವಳಿಯ ಅಗತ್ಯವಿದೆ

- Advertisement -
- Advertisement -

ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿ ಮಾಡುವ ಹುನ್ನಾರಕ್ಕೆ ಬಿಜೆಪಿ ಸರ್ಕಾರ ಕೈ ಹಾಕಿದೆ. ಮೋದಿ ಸರ್ಕಾರದ ಅಣತಿಯಂತೆ ಈ ರೈತ ವಿರೋಧೀ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ.

ದೊಡ್ಡ ದೊಡ್ಡ ಜಮೀನ್ದಾರರು ಕರ್ನಾಟಕದಲ್ಲಿ ನಿರ್ಗತಿಕರಿಗೆ 2-3 ಎಕರೆ ಜಮೀನು ಮಾಡಲು ಕೊಟ್ಟು ಅವರನ್ನು ನಿರಂತರ ಗುಲಾಮಗಿರಿಗೆ ನೂಕಿದ್ದರು. ಬಡವರನ್ನು ಖಾಯಂ ಆಗಿ ಬಡವರನ್ನಾಗಿಡುವ ಕೆಲಸ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿತ್ತು. ಈ ಬಡ ಗೇಣಿದಾರರನ್ನು ಸಂಘಟನೆ ಮಾಡಿದ ಮೊದಲಿಗರಲ್ಲಿ ಕಡಿದಾಳ್ ಮಂಜಪ್ಪನವರು, ಬಸವಾನಿ ರಾಮಶರ್ಮರು ಮತ್ತು ಗಣಪತಿಯಪ್ಪ ಮೊದಲಿಗರು. ಆನಂತರ ಶಾಂತವೇರಿ ಗೋಪಾಲಗೌಡರು ಮುಂತಾದ ಸೋಷಿಯಲಿಸ್ಟ್ ಮುಖಂಡರು ಗೇಣೀದಾರರರನ್ನು ಸಂಘಟನೆ ಮಾಡಿ, ಜಮೀನ್ದಾರರ ವಿರುದ್ಧವಾಗಿ, ಗೇಣೀ ಪದ್ದತಿ ರದ್ದತಿಗಾಗಿ ಚಳವಳಿ ಮಾಡಿದರು. ಮುಂದೆ ದೇವರಾಜ ಅರಸರು ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಂದರ್ಭದಲ್ಲಿ ಗೇಣಿ ಪದ್ದತಿ ರದ್ದುಗೊಳಿಸುವ ಶಾಸನ ಜಾರಿಗೆ ತಂದರು. ಈ ಜಮೀನ್ದಾರರ ಜಮೀನುಗಳಲ್ಲಿ ದುಡಿಯುತ್ತಿದ್ದ ಬಡ ರೈತರನ್ನು ಅವರು ಮಾಡುತ್ತಿದ್ದ ಜಮೀನುಗಳಿಗೆ ಒಡೆಯರನ್ನಾಗಿ ಮಾಡಿದರು. ಉಳುವವನಿಗೆ ಭೂಮಿ ಎಂದು ಘೋಷಣೆ ಮಾಡಿದರು. ಈ Slogan ದೊಡ್ಡ ಜಮೀನ್ದಾರರ ಭೂಮಿಗೆ ಮಾತ್ರ ಸೀಮಿತವಾಗಿತ್ತು.

ಅದೇ ದೇವರಾಜ ಅರಸರು ಕರ್ನಾಟಕದ ಎಲ್ಲ ಕಡೆಗೂ ಅನ್ವಯಿಸುವ ಭೂ ಸುಧಾರಣಾ ಕಾಯ್ದೆಯನ್ನೂ ಅದೇ ಕಾಲಕ್ಕೆ ಜಾರಿಗೆ ತಂದರು ಈ ಕಾಯ್ದೆಯ ಪ್ರಕಾರ ಭೂಮಿತಿ ಶಾಸನವನ್ನು ಜಾರಿಗೆ ತಂದರೆ, ಎಲ್ಲಾ ಉಳುವರಿಗೂ ಭೂಮಿ ಎಂದು ಘೋಷಿಸಲಿಲ್ಲ. ಅಷ್ಟೇ ಅಲ್ಲ ಅವರು ಕೈಗೊಂಡ ಭೂಮಿತಿ ಶಾಸನ ಅವೈಜ್ಞಾನಿಕವೂ, ಅವಾಸ್ತವಿಕವೂ ಆಗಿತ್ತು. ಹಾಗಾಗಿ ಈ ಭೂಮಿತಿ ಶಾಸನದಿಂದ ಬಡವರಿಗೆ ಭೂಹೀನರಿಗೆ ಜಮೀನು ಸಿಕ್ಕಲಿಲ್ಲ.

ಕರ್ನಾಟಕದಲ್ಲಿ ಒಂದು ಎಕರೆ 2 ಎಕರೆ ಜಮೀನುಳ್ಳವರು ಶೇ.60 ಮಂದಿ ಇದ್ದಾರೆ. ಇವರು ಜಮೀನಿನಲ್ಲಿ ಸ್ವತಃ ದುಡಿದು ತಿನ್ನುವವರು. ಹೆಚ್ಚಿಗೆ ಜಮೀನು ಇರುವವರೆಲ್ಲ ದಿನಕ್ಕೆ 500 ರೂ ಕೂಲಿ ಕೊಟ್ಟು ಜಮೀನು ಮಾಡಿಸುವವರು. ಇವರೆಲ್ಲ ತಮಗಿರುವ ಎಲ್ಲಾ ಜಮೀನನ್ನೂ ಆಹಾರಧಾನ್ಯ ಬೆಳೆಯುವುದಕ್ಕೆ ಉಪಯೋಗಿಸುತ್ತಿಲ್ಲ. ಇವರು ತಿಂಗಳು ತಿಂಗಳು ಹಣ ನೀಡುವ ತರಕಾರಿ, ಹೂವು, ಶುಂಠಿ, ಅರಿಸಿನ, ಹಣ್ಣಿನ ಗಿಡಗಳನ್ನು ಬೆಳೆಸುವವರು ಮತ್ತು ಪರಾವಲಂಬಿಗಳು. ಒಂದು ಎರಡು ಎಕರೆ ಜಮೀನುಳ್ಳವರು ಸ್ವತಃ ವ್ವವಸಾಯ ಮಾಡುವರಾದರೂ ಅವರಿಗೆ ಇರುವ ಸಣ್ಣ ಜಮೀನಿನಲ್ಲಿ ತಮ್ಮ ಹೊಟ್ಟೆಗೆ ಬೇಕಾದಷ್ಟನ್ನು ಬೆಳೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಬಡ ರೈತರಿಗೆ ಕನಿಷ್ಟ 5 ಎಕರೆ ಖುಷ್ಕಿ ಜಮೀನು ಬೇಕು. ಹೀಗೆ ಮಾಡುವುದರಿಂದ ಅವರು ತಾವೇ ದುಡಿದು ತಮ್ಮ ಉಪಜೀವನ ನಡೆಸಿಕೊಳ್ಳುವುದರ ಜೊತೆಗೆ ಸಮಾಜಕ್ಕೂ ಅಷ್ಟೂ ಇಷ್ಟೋ ಆಹಾರ ಒದಗಿಸಿಯಾರು.

ಆದ್ದರಿಂದ ಈಗ ಭೂಮಿತಿ ಶಾಸನವನ್ನು ಪರಿಷ್ಕರಿಸಿ ಒಂದು ಎಕರೆಯಿಂದ ೩ ಎಕರೆ ಜಮೀನು ಕೊಳ್ಳಲು ಬಡ ರೈತರಿಗೂ ಭೂ ಕಾರ್ಮಿಕರಿಗೂ ತಲಾ 5 ಎಕರೆ ಜಮೀನು ದೊರೆಯುವಂತೆ ಶಾಸನ ಮಾಡಬೇಕು. ಹಾಗೆ ಮಾಡದಿದ್ದರೆ ಈ ಅಪಾರ ಸಂಖ್ಯೆಯ ಬಡವರೂ ಕೂಡ ವಲಸಿಗ ಕಾರ್ಮಿಕರಾಗಿ ಪಟ್ಟಣ ಸೇರುವುದು ಖಚಿತ. ಸರ್ಕಾರಗಳು 70 ವರ್ಷದಿಂದ ಒಂದೇ ಸಮನೆ ಬೆಳೆ ಬೆಳೆಯುವ ಜಮೀನುಗಳನ್ನು ರಸ್ತೆ ನಿರ್ಮಿಸುವ, ಅಗಲ ಮಾಡುವ ಉದ್ಯಮಗಳಿಗಾಗಿ ವಶ ಪಡಿಸಿಕೊಂಡು ವ್ಯವಸಾಯದ ಭೂಮಿಯನ್ನು ನುಂಗಿ ಹಾಕುತ್ತಿವೆ.

ಈಗ ಸರ್ಕಾರ ಕೈಗೊಳ್ಳುವ ಭೂ ಸುಧಾರಣೆ ಕಾಯ್ದೆಯೂ ಈ ಬಡ ರೈತರನ್ನೆಲ್ಲ ವಲಸೆ ಹೋಗಬೇಕಾದ ಅನಿವಾರ್ಯತೆಗೆ ಅಣಿಗೊಳಿಸುತ್ತದೆ. ಈ ಸುಧಾರಣೆಯ ಕಾಯ್ದೆ ಜಾರಿಗೆ ಬಂದರೆ ಬಡಜನರ ಜಮೀನೆಲ್ಲ ಶ್ರೀಮಂತರ ಅಥವಾ ಕಾರ್ಪೋರೇಟ್ ಜಗತ್ತಿನವರ ವಶವಾಗುತ್ತದೆ. ಕಾರ್ಪೋರೇಟ್ ಕಂಪನಿಗಳು consolidation holding ಅನ್ನು ಬೆಂಬಲಿಸುತ್ತವೆ. ಬಡವರಿಗೆ ಆಮಿಷವೊಡ್ಡಿ ಅವರ ಜಮೀನನ್ನೆಲ್ಲ ದೊಡ್ಡ ಜಮೀನ್ದಾರರ ಅಥವಾ ಕಾರ್ಪೋರೇಟ್ ಕಂಪನಿಗಳ ವಶಕ್ಕೆ ನೀಡುವ ಹುನ್ನಾರ ಇದು. ಕಾಪೋರೇಟ್ ಕಂಪನಿಗಳು ವ್ಯವಸಾಯಕ್ಕೆ ಬೇಕಾದ ಅತ್ಯುತ್ತಮ ಸಾಧನಗಳನ್ನು ಈ ಶ್ರೀಮಂತ ರೈತರಿಗೆ ಒದಗಿಸಿ ಕೆಲವೇ ಜನ ಕೂಲಿಗಳ ಅವಶ್ಯಕತೆ ಬೀಳುವಂತೆ ಮಾಡುತ್ತಾರೆ. ಭೂಮಿ ಕಳೆದುಕೊಂಡವರೆಲ್ಲ ಗ್ರಾಮಬಿಟ್ಟು ಪಟ್ಟಣ ಸೇರಬೇಕಾದ ಅನಿವಾರ್ಯತೆ ಉಂಟು ಮಾಡುತ್ತಾರೆ. ಹೆಚ್ಚಿನ ಜಮೀನುಳ್ಳ ರೈತರನ್ನು ಹಣವಂತರು, ಕಾರ್ಪೋರೇಟ್‌ಗಳು ಸಂಧಿಸಿ, ತಾವು ಹೇಳುವ ಬೆಳೆ ಬೆಳೆದು ಕೊಟ್ಟರೆ, ಅವರು ನೀರೀಕ್ಷಿಸುವ ದರ ನೀಡುವುದಾಗಿ ಹೇಳುತ್ತಾರೆ. ಅರ್ಥಾತ್ ಈ ಜಮೀನುದಾರರನ್ನು ತಮ್ಮ ಕೂಲಿಯಾಳುಗಳನ್ನಾಗಿ ಪರಿವರ್ತಿಸುತ್ತಾರೆ. ವ್ಯವಸಾಯ ಪ್ರಧಾನವಾದ ಭಾರತ ದೇಶವನ್ನು ಅಮೆರಿಕ ಮಾಡುವ ಸನ್ನಾಹ ಮೋದಿಯವರದು ಯಡಿಯೂರಪ್ಪನವರದು.

ಅಮೆರಿಕ ಉದ್ಯಮಗಳ ದೇಶ. ಕೈಗಾರಿಕ ಪ್ರಧಾನ ದೇಶ. ವ್ಯವಸಾಯ ಪ್ರಧಾನ ದೇಶವಲ್ಲ. ಅಲ್ಲಿ ವ್ಯವಸಾಯದಲ್ಲಿ ಜನ ತೊಡಗಿಕೊಳ್ಳುವುದಿಲ್ಲ. ಆದ್ದರಿಂದ ಕೆಲವರು ಮಾತ್ರ ಸಾವಿರ ಸಾವಿರ ಎಕರೆ ಜಮೀನು ಮಾಲಿಕರಾಗಿದ್ದಾರೆ. ಅವರು ಜಮೀನನ್ನೆಲ್ಲ ಪವರ್ ಟಿಲ್ಲರ್‌ನಲ್ಲಿ ಉಳುತ್ತಾರೆ. ಬೀಜವನ್ನು ಹೆಲಿಕಾಪ್ಟರ್‌ನಿಂದ ಬಿತ್ತುತ್ತಾರೆ. ಡ್ರೈಯರ್‌ಗಳನ್ನು ಧಾನ್ಯವನ್ನು ತೂರುವ ಯಂತ್ರಗಳನ್ನು ಬೀಜ ಬಿಡಿಸುವ ಯಂತ್ರಗಳನ್ನು ಇಟ್ಟುಕೊಂಡಿದ್ದಾರೆ. ಮನೆ ಮಂದಿಯೇ 1000 ಎಕರೆ ಜಮೀನಿನ ನಿರ್ವಹಣೆಯನ್ನು ಮಾಡುತ್ತಾರೆ.

ವ್ಯವಸಾಯ ಪ್ರಧಾನವಾದ ಭಾರತದಲ್ಲಿ ಅಮೆರಿಕದ ಪ್ರಯೋಗವನ್ನು ಮಾಡುವುದು ಸರಿಯಲ್ಲ. ಆಹಾರಧಾನ್ಯಕ್ಕಾಗಿ ಭಿಕ್ಷಾಪಾತ್ರೆ ತೆಗೆದುಕೊಂಡು ಅನ್ಯ ದೇಶಗಳಲ್ಲಿ ದೇಹಿ ಎಂದು ಬೇಡುವುದೂ ಅಪಮಾನಕರ. ಇಂತಹ ಅವಿವೇಕದ ಭೂಸುಧಾರಣೆಯನ್ನು ಭಾರತದಲ್ಲಿ ಜಾರಿ ಮಾಡುವುದನ್ನು ತಡೆಗಟ್ಟಬೇಕಾದ್ದು ಈ ದೇಶದ ಎಲ್ಲ ಜನರ ಕರ್ತವ್ಯವೇ ಆಗಿದೆ.

ಮುಖ್ಯವಾಗಿ ಭಾರತದಾದ್ಯಂತ ಇರುವ ಎಲ್ಲ ರೈತ ಸಂಘಟನೆಗಲೂ ಒಂದುಗೂಡಿ ಒಂದು ಸಂಘರ್ಷ ಸಮಿತಿಯನ್ನು ರಚಿಸಬೇಕು. ಭಾರತದ ಬಡ ರೈತರ ಹಿತ ದೃಷ್ಟಿಯುಳ್ಳ ಎಲ್ಲರೂ ಶ್ರೀಮಂತರು ಬಡವರ ಭೂಮಿಯನ್ನು ಕೊಳ್ಳುವುದಕ್ಕೆ ಸರ್ಕಾರ ಅವಕಾಶ ಮಾಡಿಕೊಡುವ ಶಾಸನ ಮಾಡುವುದು ಜನದ್ರೋಹ ಕೆಲಸ ಎಂದು ಸಾರಿ ಹೇಳಬೇಕು. ಅದಕ್ಕಾಗಿ ದೇಶವ್ಯಾಪಿ ಅಸಹಕಾರ ಚಳವಳಿ ಆರಂಭಿಸಬೇಕು ಭಾರತದ ಸ್ವಾಯತ್ತತೆಯನ್ನು ಬಯಸುವ ಎಲ್ಲಾ ಜನರೂ, ರೈತ ಸಂಘಟನೆಗಳ ಜೊತೆಗೆ ಕೈ ಜೋಡಿಸಬೇಕು.

  • ಎಚ್.ಎಸ್‌ ದೊರೆಸ್ವಾಮಿ

ಇದನ್ನೂ ಓದಿ: ಕೋಆಪರೇಟೀಕರಣದತ್ತ ಹೊರಳಬೇಕಿದ್ದ ಕೃಷಿ ಕಾರ್ಪೋರೇಟೀಕರಣದತ್ತ: ಈ ವಿನಾಶದ ಪರಿಣಾಮಗಳೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...