Homeಅಂಕಣಗಳುಜೈಲಿನಾಗ ರೊಟ್ಟಿ ತಣ್ಣಗೆ ಇರಬಹುದು, ಆದರ ಖಾಸಗಿ ಜೈಲು ಕಂಪನಿಗಳ ಷೇರು ಮಾತ್ರ ಬಿಸಿ ದೋಸೆಯಂತೆ...

ಜೈಲಿನಾಗ ರೊಟ್ಟಿ ತಣ್ಣಗೆ ಇರಬಹುದು, ಆದರ ಖಾಸಗಿ ಜೈಲು ಕಂಪನಿಗಳ ಷೇರು ಮಾತ್ರ ಬಿಸಿ ದೋಸೆಯಂತೆ ಖರ್ಚು ಆದವು

‘ಅಪರಾಧ ಅನ್ನೋದು ಯಾವತ್ತೂ ಕಮ್ಮಿ ಆಗೋದಿಲ್ಲ. ಹಿಂಗಾಗಿ ಖಾಸಗಿ ಜೈಲು ಯಾವತ್ತೂ ಬಂದ್ ಆಗೋದಿಲ್ಲ. ಅವುಗಳ ಒಳಗ ಹಣ ಹೂಡಿದರ ನಷ್ಟ ಇಲ್ಲ’ ಅಂತ. ನಮ್ಮ ಟ್ರಂಪ್ ಅಣ್ಣಾವ್ರು ಅಧ್ಯಕ್ಷರಾದ ಮ್ಯಾಲೆ ಖಾಸಗಿ ಜೈಲುಗಳ ಷೇರು ಮೌಲ್ಯ ಶೇಕಡಾ 100 ರಷ್ಟು ಹೆಚ್ಚು ಆಗೇದ.

- Advertisement -
- Advertisement -

‘ಅಪರಾಧ ಲಾಭದಾಯಕವಲ್ಲ’ (ಕ್ರೈಂ ಡಸ್ ನಾಟ್ ಪೇ) ಎನ್ನುವುದು ಹಳೆಯ ನಾಣ್ಣುಡಿ. ಇಂಥಾ ನಾಣ್ಣುಡಿಗಳ ನಾಡಾದ ಬ್ರಿಟನ್‌ದಾಗ ‘ಅಪರಾಧದಷ್ಟು ಲಾಭದಾಯಕ ಇನ್ನೊಂದು ಇಲ್ಲ’ ಅನ್ನೋ ಗಾದಿ ಮಾತು ಹುಟ್ಟಿಕೊಂಡದ.

ಅದು ಯಾಕಪಾ ಅಂದ್ರ ಅಲ್ಲಿ ಖಾಸಗಿ ಜೈಲು ಅದಾವು. ಬ್ರಿಟನ್ನಿನ ಒಟ್ಟು 130 ಜೈಲುಗಳಲ್ಲಿ 14 ಖಾಸಗಿ ಜೈಲು. ಮೊದಲುಮೊದಲಿಗೆ ಸರ್ಕಾರಿ ಜೈಲಿನ ಕಸ ಗುಡಿಸುವ, ಅಲ್ಲಿ ಊಟ ಒದಗಿಸುವ ಏಜೆನ್ಸಿಗಳಾಗಿ ನೇಮಕವಾದ ಈ ಕಂಪನಿಗಳು ಈಗ ಪೂರ್ಣಪ್ರಮಾಣದ ಖಾಸಗಿ ಜೈಲುಗಳನ್ನು ಕಟ್ಟಿವೆ. ಸರಕಾರದಿಂದ ಒಬ್ಬ ಕೈದಿಗೆ ಇಷ್ಟು ಅಂತ ಖರ್ಚು ಪಡೆಯುವ ಈ ಕಂಪನಿಗಳು ವರ್ಷದಿಂದ ವರ್ಷಕ್ಕೆ ಹೆಚ್ಚು ಆಗಲಿಕ್ಕೆ ಹತ್ತಿದ್ದಾವು.

ಇನ್ನೂ ಬ್ರಿಟನ್‌ನ ಹಳೆ ಮಂದಿ ಬಿಟ್ಟು ಹೋಗಿ ಕಟ್ಟಿಕೊಂಡಿರುವ ನಿರಾಶ್ರಿತರ ಶಿಬಿರ ಅಮೆರಿಕದಾಗ ಪರಿಸ್ಥಿತಿ ಏನೂ ಬ್ಯಾರೆ ಇಲ್ಲ. ಅಲ್ಲಿನ 23 ಲಕ್ಷ ಕೈದಿಗಳ ಪೈಕಿ ಸುಮಾರು ಶೇಕಡಾ ಒಂಬತ್ತು ಕೈದಿಗಳು ಖಾಸಗಿ ಜೈಲಿನ ಒಳಗೆ ಇರ್ತಾರ.

ಏನು ಅಂದರೂ ಅಮೆರಿಕ ಬ್ರಿಟನ್‌ಗಿಂತ ಒಂದು ಕೈ ಮುಂದೆ ಇರೋದು. ಇನ್ನ ಬ್ರಿಟನ್ ಹಾಗೂ ಅಮೆರಿಕದ ಜಗಳ ಇಂದುನಿನ್ನೆಯದಲ್ಲ. ಅದು 1609ರಾಗ ಮೇ ಫ್ಲವರ್ ಹಡಗಿನ ಯಾತ್ರೆಯಿಂದ ಶುರು ಆಗಿದ್ದು. ಇನ್ನೂ ನಿಂತಿಲ್ಲ.

PC : Politico, (ಬೋರಿಸ್ ಜಾನ್ಸನ್ & ಡೊನಾಲ್ಡ್ ಟ್ರಂಪ್)

ಅಲ್ಲಿನ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಸಂಗತೆ ನಮ್ಮ ದೋಸ್ತ ಬಿಳಿಮನೀ ಟ್ರಂಪಣ್ಣನವರ ಅವರು “ನಿನ್ನ ಕೂದಲ ಜಾಸ್ತಿ ಹಳದಿನೋ, ನನ್ನ ಕೂದಲ ಜಾಸ್ತಿ ಹಳದಿನೋ” ಅಂತ ಹೇಳಿ ಜಿದ್ದಿಗೆ ಬಿದ್ದಿರತಾರ. ಟ್ರಂಪ್ ಅವರು ಕಲರು – ಖದರು ಎರಡೂ ಜಾಸ್ತಿ ಅಂತ ಗೊತ್ತ ಆದ ಮ್ಯಾಲೆ ಬೋರಿಸ್ ಅವರು ತಮ್ಮ ಕೂದಲ ಬಾಚಿಕೊಳ್ಳೋದು ಬಿಟ್ಟುಬಿಟ್ಟಾರ. ಅದು ಹೋಗಲಿ ಬಿಡರಿ.

ಇನ್ನ ಬೋರಿಸ್ ಅಣ್ಣಾ ಅವರು ಮೊದಲನೇ ಸಲ ಚುನಾವಣೆ ಎದುರಿಸದೆ ಪ್ರಧಾನಿ ಆಗಿದ್ದು ನೋಡಿ ಹೊಟ್ಯಾಗ್ ಸಂಕಟ ಆಗಿ ಟ್ರಂಪ್ ಅವರು ಚುನಾವಣೆಯಲ್ಲಿ ಸೋತರೂ ಇನ್ನೂ ಅಧಿಕಾರದಲ್ಲಿ ಉಳಕೊಂಡು ಬಿಟ್ಟಾರ. ಜನವರಿ 20ನೇ ತಾರೀಖಿಗೆ ಅವರನ್ನ ಅವರ ಸಾಮಾನು ಸಮೇತ ಹೊರಗ ಹಾಕತಾರ. ಅದುನೂ ಬ್ಯಾರೆ ಮಾತು.

ಬ್ರಿಟನ್‌ನವರು ಖಾಸಗಿ ಜೈಲು ಪ್ರಾರಂಭ ಮಾಡಿದಾರ ಅಂತ ಗೊತ್ತಾದ ಕೂಡಲೇ ಅಮೆರಿಕದವರು ಇನ್ನೂ ಒಂದು ಹೆಜ್ಜಿ ಮುಂದೆ ಹೋದರು. ತಮ್ಮಲ್ಲಿನ ಖಾಸಗಿ ಜೈಲಿನ ಕಂಪನಿಗಳು ಅಲ್ಲಿನ ಷೇರ್ ಮಾರುಕಟ್ಟೆಯಲ್ಲಿ ಷೇರು ಮಾರಾಟ ಮಾಡಲಿಕ್ಕೆ ಅನುಕೂಲ ಮಾಡಿಕೊಟ್ಟರು.

ಜೈಲಿನಾಗ ರೊಟ್ಟಿ ತಣ್ಣಗೆ ಇರಬಹುದು, ಆದರ ಖಾಸಗಿ ಜೈಲು ಕಂಪನಿಗಳ ಷೇರು ಮಾತ್ರ ಬಿಸಿ ದೋಸೆಯಂತೆ ಖರ್ಚು ಆದವು. ಆ ಕಂಪನಿಗಳಲ್ಲಿ ಹಣ ಹೂಡುವುದು ಲಾಭದಾಯಕ ಆಗಿ ಖಾಸಗಿ ಕಂಪನಿಗಳ ಸಂಖ್ಯೆ ಕಳೆದ 30 ವರ್ಷಗಳಲ್ಲಿ 40 ಶೇಕಡಾ ಹೆಚ್ಚು ಆದವು.

ಭಾಷೆಯ ಬಳಕೆಯೊಳಗ ಭಾಳ ಶಾಣೆ ಇರುವ ಅಮೆರಿಕದವರು ಜೈಲ್ ಅನ್ನು ಜೈಲ್ ಅಂತ ಕರೆಯೋದಿಲ್ಲ. ಅವರು ಅದನ್ನ ‘ಅಪಕೃತ್ಯ ಮಾಡಿದವರ ಮನಪರಿವರ್ತನಾ ಕೇಂದ್ರ, ‘ಪ್ರಮಾದ ಎಸಗಿದವರ ನಿರ್ವಹಣಾ ಘಟಕ’, ‘ಮೊದಲ ಸಲ ತಪ್ಪು ಮಾಡಿದವರ ತಾತ್ಕಾಲಿಕ ಆಶ್ರಯ ತಾಣ’, ‘ನಿರ್ಬಂಧ ಹಾಗೂ ಸುಧಾರಣ ಗೃಹಗಳು’ ಅಂತ ಎಲ್ಲಾ ಮಜಾ ಹೆಸರಿನಿಂದ ಕರಿತಾರ. ಆ ಹೆಸರು ನೋಡಿ, ಅವರು ಗಳಿಸೊ ಲಾಭ ನೋಡಿ, ಅಲ್ಲಿಯ ಜನ ಆ ಕಂಪನಿಗಳ ಷೇರು ಖರೀದಿ ಮಾಡತಾರ. ಅದನ್ನ ಸರಕಾರಪ್ರೇರಿತ ಸಾಮಾಜಿಕ ಉದ್ದಿಮೆ ಅಂತ ಪರಿಗಣಿಸಿಬಿಟ್ಟಾರ.

ಷೇರು ಮಾರುಕಟ್ಟೆ ಒಳಗ ಒಂದು ಮಾತು ಅದ. ‘ಯಾವ ಕಂಪನಿ ಬಂದ್ ಆದರೂ ಕೂಡ ಆಹಾರ, ವಸತಿ, ಮದ್ದುಗುಂಡು, ತಂಬಾಕು, ಹೆಂಡ, ಔಷಧಿ ತಯಾರು ಮಾಡುವ ಕಂಪನಿಗಳು ಮಾತ್ರ ಯಾವತ್ತೂ ಬಂದ್ ಆಗೋದಿಲ್ಲ. ಆ ಕಂಪನಿಗಳ ಒಳಗ ದುಡ್ಡು ಹಾಕಿದರ ನಷ್ಟ ಅನ್ನೂದ ಇಲ್ಲ’ ಅಂತ.

ಅದಕ್ಕ ಇನ್ನೊಂದು ಮಾತು ಸೇರಿಕೊಂಡದ. ‘ಅಪರಾಧ ಅನ್ನೋದು ಯಾವತ್ತೂ ಕಮ್ಮಿ ಆಗೋದಿಲ್ಲ. ಹಿಂಗಾಗಿ ಖಾಸಗಿ ಜೈಲು ಯಾವತ್ತೂ ಬಂದ್ ಆಗೋದಿಲ್ಲ. ಅವುಗಳ ಒಳಗ ಹಣ ಹೂಡಿದರ ನಷ್ಟ ಇಲ್ಲ’ ಅಂತ. ನಮ್ಮ ಟ್ರಂಪ್ ಅಣ್ಣಾವ್ರು ಅಧ್ಯಕ್ಷರಾದ ಮ್ಯಾಲೆ ಖಾಸಗಿ ಜೈಲುಗಳ ಷೇರು ಮೌಲ್ಯ ಶೇಕಡಾ 100 ರಷ್ಟು ಹೆಚ್ಚು ಆಗೇದ. ‘ಇದು ಒಂದು ಆಕರ್ಷಕ ಹೂಡಿಕೆಯ ಅವಕಾಶ, ಮರೆಯದಿರಿ, ಮರೆತು ನಿರಾಶರಾಗದಿರಿ’, ಅಂತ ಅವರ ಬೆಂಬಲಿಗರು ಹೇಳಿಕೊಂಡು ಓಡಾಡಲಿಕ್ಕೆ ಹತ್ಯಾರ.

ಭರತ ಭೂಮಿಯ ಎಲ್ಲಾ ಸರಕಾರಿ ಸಂಸ್ಥೆಗಳಿಗೂ ಸಾಮೂಹಿಕ ಕೊನೆಗಾಲ ಬಂದೇತಿ. ಪಂಥ ಪ್ರಧಾನ ಸೇವಕರ ಸರಕಾರ ಛಲೋ ಛಲೋ ಸರ್ಕಾರಿ ಸಂಸ್ಥೆಗಳನ್ನ ಹಿಡಕೊಂಡು ಖಾಸಗಿಗೆ ಮಾರಲಿಕ್ಕೆ ಹೊಂಟೆತಿ. ಅದಾನಿ ಅವರಿಗೆ ಏರಪೋರ್ಟ್ ಅಥಾರಿಟೀ ಅವರ ವಿಮಾನನಿಲ್ದಾಣಗಳನ್ನ, ಅಂಬಾನಿ ಅವರಿಗೆ ಒಎನ್‌ಜಿಸಿ ತೈಲ ಬಾವಿಗಳನ್ನ, ರೈಲ್ವೆ ಇಲಾಖೆಯನ್ನು ಇನ್ಯಾರಿಗೋ ಕೊಡುವ ಹುನ್ನಾರ ಶುರು ಆಗಿಬಿಟ್ಟದ.

ಆದರ ಇದು ಸರಳವಾಗಿ, ಪಾರದರ್ಶಕವಾಗಿ ನಡೆದಿಲ್ಲ. ವಿಮಾನ ನಿಲ್ದಾಣ ನಿರ್ವಹಣೆ ಮಾಡಲಿಕ್ಕೆ ಯಾವ ಅನುಭವ ಬೇಕಾಗಿಲ್ಲ ಅಂತ ಕಾಯಿದೆ ಬದಲಿಸಿ ಅದಾನಿ ಅಣ್ಣಾ ಅವರಿಗೆ ಕೊಟ್ಟಾರ. ತಮಗ ಸಿಕ್ಕ ಗುತ್ತಿಗೆಯನ್ನು ಅವರು ಜರ್ಮನಿ ಕಂಪನಿಗೆ ಕೊಟ್ಟರು. ವಿಮಾನ ತಯಾರಿ ಅನುಭವ ಇಲ್ಲದ ಅನಿಲ್ ಅಣ್ಣಾ ಅವರ ಇನ್ನೂ ಹಲ್ಲು ಮೂಡದ ಕಂಪನಿಗೆ ಯುದ್ಧ ವಿಮಾನ ತಯಾರಿ ಜವಾಬ್ದಾರಿ ಕೊಟ್ಟಾರ. ಅವರು ಇನ್ನೂ ವಿಮಾನದ ಗಾಲಿಸಹಿತ ಮಾಡಿಲ್ಲ.

ಸದಾ ಲಾಭದಲ್ಲಿ ಇರುವ, ಸುಮಾರು ಆರು ಲಕ್ಷ ಕೋಟಿ ಮೌಲ್ಯದ ಭಾರತ ಪೆಟ್ರೋಲಿಯಂ ಕಂಪನೀನ ಬರೆ ಒಂದು ಲಕ್ಷ ಕೋಟಿಗೆ ಮಾರಲಿಕ್ಕೆ ಇಟ್ಟಾರ. ಏರ್ ಇಂಡಿಯಾ ಮಾರಾಟ ಮಾಡಬೇಕು ಅಂತ ಹೇಳಿ ಅದರ ಮೇಲಿನ ಸಾಲ ಇನ್ನೊಂದು ಕಂಪನಿಗೆ ವರ್ಗಾವಣೆ ಮಾಡಿಬಿಟ್ಟಾರ. ಮಧ್ಯ ಪ್ರದೇಶ, ಉತ್ತರ ಪ್ರದೇಶ, ಬಿಹಾರ, ಗುಜರಾತ್, ರಾಜಸ್ತಾನದೊಳಗ ಮದ್ದಾನಿ ಕಂಪನಿಗಳು ಆಹಾರ ಸಂಗ್ರಹ, ಸಂಸ್ಕರಣೆ, ಸಾಗಾಣಿಕೆಯ ಸಗಟು ಹಾಗೂ ಚಿಲ್ಲರೆ ಮಾರಾಟ ಕಂಪನಿಗಳನ್ನ ಶುರು ಮಾಡಿ ವ್ಯವಹಾರ ಮಾಡಲಿಕ್ಕೆ ಹತ್ತಿಬಿಟ್ಟಾವು.

ಇವು ಈಗ ಆಗಿ ಹೋದ ಮಾತುಗಳು. ಇನ್ನೂ ಮುಂದ ಏನು ಏನು ಬರ್ತದ ಅಂತ ನೋಡೋಣ.

ಯೋಜನಾ ಆಯೋಗದ ಸಮಾಧಿ ಮ್ಯಾಲೆ ಕಟ್ಟಿರುವ ಎರಡು ಅಂತಸ್ತಿನ ಕಟ್ಟಡದೊಳಗ ಇರೋ ನೀತಿ ಆಯೋಗದ ಸಲಹಾ ಸಮಿತಿ ಎಲ್ಲಾ ಜಿಲ್ಲಾ ಆಸ್ಪತ್ರೆಗಳನ್ನ ಖಾಸಗೀಕರಣ ಮಾಡಬೇಕು ಅಂತ ಹೇಳಿಬಿಟ್ಟದ. ಇದು ಲಗುನ ಲಾಗು ಆಗಬಹುದು. ತಮ್ಮ ಜೀವನದೊಳಗ ಒಂದು ಸಲಾನೂ ಸರ್ಕಾರಿ ಆಸ್ಪತ್ರೆಗೆ ಹೋಗದೆ ನಿವೃತ್ತಿ ಆದ ಮಧ್ಯಮ ವರ್ಗದವರಿಗೆ ಇದು ಸರಿ ಅಂತ ಅನ್ನಿಸಲೂಬಹುದು.

PC: Indian Education Dairy, (ಎನ್‌ಇಪಿ)

ಭಾರತದ ಇತಿಹಾಸದೊಳಗ ಮೊದಲ ಬಾರಿಗೆ ಶಿಕ್ಷಣ ಆಯೋಗ ನೇಮಿಸದೆ ತಯಾರು ಮಾಡಿದ ಹೊಸ ಶಿಕ್ಷಣ ನೀತಿಯೊಳಗ (ಹೊಶಿನೀ-ಎನ್‌ಇಪಿ) ಒಂದು ಮಾತು ಅದ. ಈಗ ದೇಶದೊಳಗ ಸುಮಾರು 50,000 ಉನ್ನತ ಶಿಕ್ಷಣ ಸಂಸ್ಥೆಗಳು ಅದಾವು. ಇದು ಭಾಳ ಜಾಸ್ತಿ ಆತು. ಇಷ್ಟೇನು ಬ್ಯಾಡ. ಇವು 2025ರೊಳಗೆ 15,000 ಇದ್ದರ ಸಾಕು. ಎಲ್ಲ ಕ್ಷೇತ್ರದಂತೆ ಶಿಕ್ಷಣದೊಳಗ ಸಹಿತ ಖಾಸಗಿ ಸಹಭಾಗಿತ್ವದಾಗ ಸರಕಾರ ಕೆಲಸ ಮಾಡಬೇಕು. ವಿಶ್ವವಿದ್ಯಾಲಯಗಳು ಸಂಲಗ್ನತೆ, ಮೇಲುಸ್ತುವಾರಿ ಎಲ್ಲಾ ಬಿಟ್ಟು, ಬರೆ ಸಂಶೋಧನೆ – ಸೆಮಿನಾರು, ಮಣ್ಣು ಮಸಿ ಅಂತ ವಿಶೇಷ ಕೆಲಸ ಮಾಡಬೇಕು. ಕಾಲೇಜುಗಳಿಗೆ ಸ್ವಾಯತ್ತತೆ ಕೊಡಬೇಕು ಅಂತ ಹೇಳಿದ್ದಾರ.

ಹೊಶಿನೀ ಆಣತಿಯಂತೆ ನಮ್ಮ ಉನ್ನತ ಶಿಕ್ಷಣ ಸಚಿವ ಚಿಕ್ಕಲ್ಯ ನಾರಾಯಣಪ್ಪ ಅಶ್ವಥನಾರಾಯಣ ಅವರು ನಾವು ಪಿಯುಸಿಯಿಂದ ಹಿಡಿದು ಸ್ನಾತಕೋತ್ತರದವರೆಗೆ ಎಲ್ಲರಿಗೂ ಸ್ವಾಯತ್ತತೆ ಕೊಡ್ತೇವಿ ಅಂತ ಹೇಳಿದ್ದಾರ.

ಸ್ವಾಯತ್ತ ಕಾಲೇಜುಗಳು ತಮಗೆ ಇಷ್ಟ ಬಂದ್ ಹಂಗ ಶುಲ್ಕ ವಸೂಲು ಮಾಡಬಹುದು. ತಮಗೆ ತಿಳಿದ ರೀತಿಯಲ್ಲಿ ಪರೀಕ್ಷೆ ನಡೆಸಬಹುದು. ಅವರ ಮೇಲೆ ವಿಶ್ವವಿದ್ಯಾಲಯ ಅಥವಾ ಉನ್ನತ ಶಿಕ್ಷಣ ಮಂಡಳಿ ಉಸ್ತುವಾರಿ ಮಾಡೋ ಹಂಗ ಇಲ್ಲ. ಸರಕಾರ ನೀಡಿದ ಚೌಕಟ್ಟಿನ ಒಳಗ ಅವರು ಇದ್ದರ ಸಾಕು ಅನ್ನೋದು ನಿಯಮ.

ಇದು ಉಳ್ಳವರಿಗೆ ಸರಿಯಾಗಬಹುದು. ಇಲ್ಲದವರಿಗೆ? ಬಿಜೆಪಿ ಅವರು ವಿರೋಧ ಪಕ್ಷದೊಳಗ ಇದ್ದಾಗ ಸರಕಾರ ಖಾಸಗಿ ಶಿಕ್ಷಣ ಸಂಸ್ಥೆಗಳನ್ನ ನಿಯಂತ್ರಿಸಬೇಕು ಅಂತ ಹೇಳ್ತಾ ಇದ್ದರು. ಹಿಂದೊಮ್ಮೆ ಬಿಜೆಪಿ ನಾಯಕರೊಬ್ಬರು ಬೆಂಗಳೂರಿನಾಗ ಡೊನೇಶನ್ ವಿರುದ್ಧ ಚಳವಳಿ ಮಾಡಿದ್ದರು. ಅಲ್ಲೆ “ಜಾಲಪ್ಪ-ಶಿವಶಂಕರಪ್ಪ ರೊಕ್ಕ ಎಲ್ಲಿಂದ ತರ್ಲೇಪ್ಪ” ಅಂತ ಘೋಷಣೆ ಕೂಗಿದ್ದರು. ಅದು ಹಿಟ್ಟು ಅಗಿಬಿಟ್ಟು ಎಲ್ಲಾ ಕಡೆ ಸುತ್ತಾಡಿತ್ತು. ತಾವು ಅಧಿಕಾರಕ್ಕ ಬಂದಾಗ ಅವರು ಘೋಷಣೆ ಬದಲು ಮಾಡಿಬಿಟ್ಟಾರ.

ಸರಕಾರ ಕಮ್ಮಿ ಕೆಲಸ ಮಾಡಬೇಕು. ಖಾಸಗಿ ಸಹಭಾಗಿತ್ವ ಹೆಚ್ಚಬೇಕು. ಇದು ಪಂಥ ಪ್ರಧಾನ ಸೇವಕರ ಕನಸು ಅಂತ ಸಚಿವ ಗಡ್ಕರಿ ಅವರು ಹೇಳಿದ್ದಾರ. ಖಾಸಗೀಕರಣದ ಕನಸು ಕಂಡ ಭಾಳ ಜನ ಪ್ರಧಾನಿ- ರಾಷ್ಟ್ರಪತಿಗಳು ಇತಿಹಾಸದೊಳಗ ಬಂದುಹೋಗಿಬಿಟ್ಟಾರ. ಅವರೊಳಗ ಒಬ್ಬರ ನೆನಪು ಮಾಡಿಕೊಳ್ಳೋಣ.

PC : Biography, (ಮಾರ್ಗರೆಟ್ ಹಿಳದಾ ಥ್ಯಾಚರ)

ಮಾರ್ಗರೆಟ್ ಹಿಳದಾ ಥ್ಯಾಚರ ಅವರು ಎಪ್ಪತ್ತು-ಎಂಬತ್ತರ ದಶಕದೊಳಗ ಬ್ರಿಟನ್ನು ಹಾಗೂ ಉತ್ತರ ಐರ್ಲೆಂಡ್‌ನ ಪ್ರಧಾನಿ ಆಗಿದ್ದರು. ಅವರು ನೀರು, ವಿದ್ಯುತ್, ರೈಲು, ಆಹಾರ ಪೂರೈಕೆ, ಕಬ್ಬಿಣ ಮತ್ತು ಅದಿರು, ಅರಣ್ಯ ನಿರ್ವಹಣೆ, ನದಿ ನೀರು ನಿರ್ವಹಣೆ, ರಸ್ತೆ-ಕಟ್ಟಡ-ಅಣೆಕಟ್ಟು ನಿರ್ಮಾಣ ಎಲ್ಲವನ್ನೂ ಖಾಸಗೀಕರಣ ಮಾಡಿದರು. ಇಡೀ ವಿಶ್ವದಲ್ಲಿಯೇ ಮೊದಲ ಖಾಸಗಿ ಜೈಲು ಉದ್ಘಾಟನೆ ಮಾಡಿದ ನಾಯಕರು ಅವರು. ಉಕ್ಕಿನ ಮಹಿಳೆ ಅನ್ನುವ ಬಿರುದು ಪಡೆದ ಅವರು ಯುವ ವಯಸ್ಸಿನಲ್ಲಿ ರಸಾಯನ ಶಾಸ್ತ್ರ ವಿಜ್ಞಾನಿಯಾಗಿ ಕೆಲಸ ಮಾಡಲಿಕ್ಕೆ ಇಂಪೆರಿಯಲ್ ಕೆಮಿಕಲ್ ಅನ್ನೋ ಕಂಪನಿಗೆ ಆರ್ಜಿ ಹಾಕಿದರು. ಅವರು ಇವರನ್ನು ಸಂದರ್ಶಿಸಿದರು ಆದರೆ ಕೆಲಸ ಕೊಡಲಿಲ್ಲ. ಆ ಸಂದರ್ಶನದ ವಿವರ ಬಹಿರಂಗ ಆದ ಮ್ಯಾಲೆ ಗೊತ್ತಾಯತು. ಅಲ್ಲಿನ ಸಂದರ್ಶಕ ಮಂಡಳಿಯೊಳಗ ಇದ್ದ ಮನೋವಿಜ್ಞಾನಿಯೊಬ್ಬರು, ಈ ಯುವತಿ ‘ತುಂಬ ಹಠಮಾರಿ, ದುರಾಗ್ರಹಿ ಹಾಗೂ ತಾನೇ ಸರ್ವಸ್ವ ಎನ್ನುವ ಸ್ವಭಾವದವಳು. ಇವರು ಒಂದು ತಂಡದ ಸದಸ್ಯರಾಗಿ ಕೆಲಸ ಮಾಡುವುದು ಕಷ್ಟ’ ಅಂತ ವರದಿ ನೀಡಿದ್ದರು.

ಥ್ಯಾಚರ ಬಗ್ಗೆ ಇನ್ನೊಂದು ಜೋಕು ಇದೆ. ಅದು ‘ದಿ ವೆಜಿಟೆಬಲಸ್’ ಅನ್ನುವ ಸಿಟ್ ಕಾಂ ಟಿವಿ ಕಾರ್ಯಕ್ರಮದೊಳಗ ಬಂದಿತ್ತು. ಪ್ರಧಾನಿ ಥ್ಯಾಚರ ಅವರು ತಮ್ಮ ಸಂಪುಟ ಸದಸ್ಯರನ್ನ ಹೊಟೇಲ್‌ಗೆ ಊಟಕ್ಕ ಕರಕೊಂಡು ಹೋಗತಾರ. ಅಲ್ಲೆ ವೇಟರ್ ಬಂದು ನೀವು ಏನು ತೊಗೊಳ್ಳುತ್ತೀರಿ ಅಂತ ಕೇಳಿದಾಗ ಫಿಶ್ ಹಾಗೂ ಚಿಪ್ಸ್ ಅಂತ ಹೇಳತಾರ. ಆ ವೇಟರ್ (‘ಅಂಡ್ ದಿ ವೆಜಿಟೆಬಲಸ್’) ಮತ್ತೆ ತರಕಾರಿಗಳು ಅಂತ ಕೇಳತಾನ. ಅಂದ್ರ ನೀವು ಎನರ ತರಕಾರಿ-ಸೂಪು- ಸಾಸು ತೊಗೋತೀರಾ ಅಂತ. ಆಗ ಥ್ಯಾಚರ ಅವರು ಅವರಿಗೂ ಅದನ್ನೇ ಕೊಡರಿ. ಅವರ ಕಡೆ ಇಂಥ ಸಣ್ಣ ನಿರ್ಧಾರ ತೊಗೊಳ್ಳಲಿಕ್ಕೆ ಸಹಿತ ಆಗೋದಿಲ್ಲ ಅಂತ ಆರ್ಡರ್ ಮಾಡತಾರ.

ಇದರಾಗ ಜೋಕು ಎನಪ ಅಂದ್ರ ಯೂರೋಪಿನಾಗ ಸ್ವಂತ ವಿಚಾರ ಶಕ್ತಿ ಇಲ್ಲದ – ಬೇರೆಯವರ ಕೈಗೊಂಬೆ ಅಗಿರೋ ಮನುಷ್ಯರಿಗೆ ವೆಜಿಟೆಬಲಸ್ ಅಂತ ಕರಿತಾರ.

ಯೂರೋಪಿನವರಗಿಂತ ಹೆಚ್ಚು ತರಕಾರಿ ತಿನ್ನೋ ನಮಗೆ ಈ ಜೋಕು ಸರಳವಾಗಿ ಅರ್ಥ ಆಗಬಹುದೇ ಮನೋಲ್ಲಾಸಿನಿ?


ಇದನ್ನೂ ಓದಿ: ಉಪಸಭಾಪತಿ ಧರ್ಮೇಗೌಡರನ್ನು ಕೊಂದವರಾರು?!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...