Homeಮುಖಪುಟಅಮೃತಾ ರಕ್ಷಿದಿಯವರ ಐದು ಪುಸ್ತಕಗಳ ಗುಚ್ಛ ಅಮೃತಯಾನ...

ಅಮೃತಾ ರಕ್ಷಿದಿಯವರ ಐದು ಪುಸ್ತಕಗಳ ಗುಚ್ಛ ಅಮೃತಯಾನ…

ಒಂಟಿ ಮನೆಯ ಪುಟಾಣಿ, ಪುಟ್ಟ ಮಗುವಿನ ಶಾಲಾ ದಿನಗಳು, ತನ್ನೊಳಗಿನ ಪ್ರಪಂಚ, ಕನಸುಗಳ ಲೋಕದಲ್ಲಿ ಮತ್ತು ಅಂತರಂಗದ ಪಯಣ. ಈ ಪುಸ್ತಕಗಳು ಏನನ್ನು ಹೇಳುತ್ತವೆ ಎಂದು ಶೀರ್ಷಿಕೆಗಳು ನೇರವಾಗಿಯೇ ಧ್ವನಿಸುತ್ತವೆ.

- Advertisement -
- Advertisement -

ಪುಟಕಿಟ್ಟ ಪುಟಗಳು

  • ಯೋಗೇಶ್‌ ಮಾಸ್ಟರ್‌

‍“ನಾವು ಹೈಟೆಕ್ ಯುಗದಲ್ಲಿದ್ದೇವೆ. ಇಷ್ಟೊಂದು ಮುಂದುವರಿದಿದ್ದೇವೆ. ಹಳ್ಳಿಹಳ್ಳಿಗೂ ಸ್ಮಾರ್ಟ್‌ ಫೋನ್‌ಗಳು ಬಂದಿವೆ” ಎಂದು ತನ್ನ ಮಾತನ್ನು ಪ್ರಾರಂಭಿಸುವ ಲೇಖಕಿ ಎತ್ತುವ ಪ್ರಶ್ನೆ ಎಂದರೆ ಮಾನಸಿಕ ಖಾಯಿಲೆಯಿಂದ ನರಳುತ್ತಿರುವವರನ್ನು ಸಮಾಜ ಹೇಗೆ ನೋಡುತ್ತದೆ ಎಂದು. ಮಾನಸಿಕ ಖಾಯಿಲೆ ಇರುವವರೊಂದಿಗೆ ಯಾವ ರೀತಿ ವರ್ತಿಸಬೇಕು, ಅವರನ್ನು ಹೇಗೆ ನೋಡಬೇಕು ಎಂಬ ಅರಿವು ನಮ್ಮ ಸಮಾಜಕ್ಕಿಲ್ಲ ಎಂಬುದು ಲೇಖಕಿಯ ಕೊರಗು ಮತ್ತು ಅದು ನಿಜವೂ ಕೂಡ. ಸ್ಥೂಲವಾಗಿ ಕಾಣುವ ದೈಹಿಕ ಅಸಮರ್ಥತೆಯನ್ನು ಗುರುತಿಸಲು ಸಾಧ್ಯ ಮತ್ತು ಸಿಗುವಂತಹ ಪ್ರೋತ್ಸಾಹದಿಂದ ಅವರಿಗೆ ಆತ್ಮವಿಶ್ವಾಸವನ್ನು ಗಳಿಸಿಕೊಳ್ಳಲೂ ಸಾಧ್ಯ. ಆದರೆ ಮಾನಸಿಕ ಸಮಸ್ಯೆ ಇರುವವರು ಹಾಗೆ ಆತ್ಮವಿಶ್ವಾಸವನ್ನು ಗಳಿಸಿಕೊಂಡು ಜೀವನ್ಮುಖಿಯಾಗಿ ಹೋರಾಡಬೇಕೆಂದರೆ ಗುಣಮುಖವಾಗುವ ಲಕ್ಷಣಗಳನ್ನು ತೋರಬೇಕು ಎಂದು ಅಮೃತಾ ರಕ್ಷಿದಿ ಹೇಳುವ ಕಾರಣವೇನೆಂದರೆ ತಾನೇ ಸ್ವತಃ ಪಾರಾನಾಯ್ಡ್ ಸ್ಕೀಜೋಫ್ರೇನಿಯಾದಿಂದ ಬಳಲಿದ್ದ ಅನುಭವಗಳು.

ಅಮೃತಯಾನ ಐದು ಪುಸ್ತಕಗಳ ಗುಚ್ಛ. ಒಂಟಿ ಮನೆಯ ಪುಟಾಣಿ, ಪುಟ್ಟ ಮಗುವಿನ ಶಾಲಾ ದಿನಗಳು, ತನ್ನೊಳಗಿನ ಪ್ರಪಂಚ, ಕನಸುಗಳ ಲೋಕದಲ್ಲಿ ಮತ್ತು ಅಂತರಂಗದ ಪಯಣ. ಈ ಪುಸ್ತಕಗಳು ಏನನ್ನು ಹೇಳುತ್ತವೆ ಎಂದು ಶೀರ್ಷಿಕೆಗಳು ನೇರವಾಗಿಯೇ ಧ್ವನಿಸುತ್ತವೆ.

ನಮ್ಮ ಮನೆಯ ಅಥವಾ ನೆರೆಮನೆಯ ಹೆಣ್ಣುಮಗುವೊಂದು ನಮ್ಮೊಡನೆ ಕುಳಿತುಕೊಂಡು ಆಪ್ತವಾಗಿ ತನ್ನ ಅನುಭವಗಳನ್ನು, ಕನಸುಗಳನ್ನು, ತನ್ನ ಬಾಧೆಗಳನ್ನು ಹಂಚಿಕೊಂಡಷ್ಟು ಸಹಜವಾದ ಬರವಣಿಗೆ. ಈ ಲೇಖಕಿ ಚಿತ್ರಕಲಾವಿದೆಯೂ ಆಗಿರುವ ಛಾಯೆಯನ್ನು ತನ್ನ ಬರಹದಲ್ಲಿ ಓದುಗರಿಗೆ ಚಿತ್ರಣವನ್ನು ಕಟ್ಟಿಕೊಡುವುದು ಬರಹವನ್ನು ಆಪ್ತವಾಗಿಸುತ್ತದೆ, ನಮ್ಮನ್ನೂ ಆ ಕಾಲಕ್ಕೆ, ದೇಶಕ್ಕೆ, ಸಂಗತಿಗಳಿಗೆ ಕರೆದೊಯ್ಯುತ್ತದೆ.

ರಕ್ಷಿದಿಯಲ್ಲಿರುವ ತಮ್ಮ ಮನೆ, ಪರಿಸರ, ಅದರ ವಿವರಣೆಗಳೆಲ್ಲವೂ ತೆರೆದುಕೊಳ್ಳುತ್ತಾ ಬರಿಯ ಚಿತ್ರಗಳನ್ನು ಮಾತ್ರವಲ್ಲದೇ ಗಾಳಿಗಂಧವನ್ನು ಉಸಿರಾಡುವಂತೆ ಮಾಡುತ್ತದೆ. ತನ್ನ ಅಪ್ಪ, ಅಮ್ಮ, ಅಣ್ಣಯ್ಯ, ಅಜ್ಜಿ, ಅಜ್ಜಯ್ಯನ ಜೊತೆ ಜೊತೆಗೆ ಇತರ ಸಹಜೀವಿಗಳನ್ನು ಪರಿಚಯಿಸುವಾಗ ಅವರ ವ್ಯಕ್ತಿತ್ವದ ಪರಿಚಯವು ಸ್ಥೂಲವಾಗಿರದೇ ಭಾವುಕವಾಗಿಯೂ ಮತ್ತು ಪದರಗಳಾಚೆ ನೋಡಿದರೆ ಮಾನಸಿಕ ವ್ಯಕ್ತಿತ್ವಗಳನ್ನೂ ಸೂಚಿಸಿರುವುದನ್ನು ಕಾಣಬಹುದು. ಸಣ್ಣದು ಎನಿಸಬಹುದಾದ ಸಂಗತಿಗಳೆಲ್ಲವೂ ಮನನಕ್ಕೆ ಒಳಗಾಗಿ, ಚಿಂತನದಲ್ಲಿ ಎರಕ ಹೊಯ್ದು ಸೂಕ್ಷ್ಮ ಸಂವೇದನೆಯಲ್ಲಿ ಅಚ್ಚುಹೊಯ್ದಂತೆ ಮನದೊಳಗೆ ಪ್ರವೇಶಿಸುತ್ತದೆ. ಅಮೃತಾ ತನ್ನನ್ನು ತಾನು ಸಾಕ್ಷೀಕರಿಸಿಕೊಳ್ಳುವಂತೆ ಸಂಗತಿಗಳನ್ನು ವಿವರಿಸಿರುವುದು ಅನನ್ಯ.

ತಾನು ಕೇಳಿದ ಕತೆಗಳು, ತಾನು ಹಾದು ಹೋಗಬೇಕಾದ ಸಾಂಸ್ಕೃತಿಕ ಸಂಗತಿಗಳನ್ನು ಬರಿದೇ ಸಾಕ್ಷೀಕರಿಸುವುದಕ್ಕಿಂತ ಅದನ್ನು ದಾಖಲು ಮಾಡುವಾಗ ವಹಿಸಿರುವ ಎಚ್ಚರದಲ್ಲಿ ಸಾಹಿತ್ಯದ ತಂತ್ರಗಾರಿಕೆಯ ಬಗ್ಗೆ ಹೊಂದಿರುವ ಪರಿಣತಿಯು ಬೆರಗುಗೊಳಿಸುತ್ತದೆ. ಆ ಬೆರಗಿನ ಕಾರಣವೇ ಪ್ರಾಮಾಣಿಕ ನಿವೇದನೆ.

ಅಮೃತಾ ತನ್ನ ತಂದೆಯ ದೆಸೆಯಿಂದ ದೊರಕಿದ ಸಾಹಿತ್ಯದ ಮತ್ತು ಸಾಂಸ್ಕೃತಿಕ ಪರಿಸರವನ್ನು ಉಸಿರಾಡಿರುವುದರ ಉಲ್ಲೇಖಗಳು ಸಾಧಾರಣವಲ್ಲ. ತನಗೆ ಲಭ್ಯವಾದ ಓದು, ಚಿತ್ರಕಲೆಯ ಅಭ್ಯಾಸ, ಸಾಹಿತಿ, ರಂಗಕರ್ಮಿಗಳು ಮತ್ತು ನಿರ್ದೇಶಕರೊಡನೆ ಒಡನಾಟ, ರಂಗಭೂಮಿಯ ಅನುಭವ; ಹೀಗೆ ಎಲ್ಲವನ್ನೂ ಪ್ರಸ್ತುತಪಡಿಸುವ ಆ ಬಗೆಯಲ್ಲಿ ಓದುಗರನ್ನೂ ಜೊತೆಗಿರಿಸಿಕೊಂಡು ಒಂದು ಪಕ್ಕದಲ್ಲಿ ಕೂರಿಸಿಕೊಂಡೋ ಅಥವಾ ಕಿಟಕಿಯಲ್ಲಿ ನಿಂತು ನೋಡಿಕೊಂಡಿರುವ ಹಾಗೆ ಮಾಡಿರುವುದು ಸಾಹಿತ್ಯದ ತಂತ್ರಗಾರಿಕೆ ಎನ್ನುವುದಕ್ಕಿಂತ ಅಮೃತಾ ದೃಷ್ಟಿಯಲ್ಲಿದ್ದ ಸರಳ ಮತ್ತು ಪ್ರಾಮಾಣಿಕ ಧೋರಣೆ ಇರಬಹುದು ಎಂದು ಭಾಸವಾಗುತ್ತದೆ.

ತನ್ನ ಅನುಭವಗಳ ಸೌಂದರ್ಯವನ್ನು ಕಣ್ಣಿಗೆ ಕಟ್ಟಿಕೊಟ್ಟಹಾಗೆ, ತನಗೆ ಬರುತ್ತಿದ್ದ ಕೋಪವನ್ನು, ಅವರಿವರ ಟೀಕೆ ಮತ್ತು ರಗಳೆಗಳು ತಂದೊಡ್ಡುತ್ತಿದ್ದ ಉಪದ್ರವಗಳನ್ನೂ ಹೇಳುತ್ತಲೇ, ಅವರ ಮಾನಸಿಕ ಸ್ಥಿತಿಗಳನ್ನು, ವರ್ತನೆಗಳ ಪ್ರತಿವರ್ತನೆಗಳ ಸೂಕ್ಷ್ಮತೆಗಳನ್ನು ವಿವೇಚಿಸುವರು.

ಭ್ರಮೆ ಮತ್ತು ನಿಜಗಳ ನಡುವಿನ ಸಲ್ಲಾಪ ಮತ್ತು ಸಂಘರ್ಷಗಳು, ಮೂರ್ತ ಮತ್ತು ಅಮೂರ್ತಗಳನ್ನು ಕಾಣುವ ಪ್ರತಿಮೆಗಳಲ್ಲೇ ಎರಕ ಹುಯ್ಯುವಂತಹ ಮನಶಾಸ್ತ್ರೀಯ ದೃಷ್ಟಿಕೋನಗಳು, ಹೊರಗಿನ ಮತ್ತು ಒಳಗಿನ ತಾಕಲಾಟದಲ್ಲಿ ಡೋಲಾಯಮಾನವಾದ ಭಾವನೆಗಳ ಭಿತ್ತಿಗಳು; ಎಲ್ಲವೂ ತನ್ನ ತಾನು ಸಾಕ್ಷೀಕರಿಸಿಕೊಂಡಿರುವ ಒಂದು ಮಹತ್ವದ ದಾಖಲೆ ಈ ಅಮೃತಯಾನ.

ಅಮೃತ ತಾನೇ ಹೇಳಿರುವಂತೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರನ್ನು ಅರಿಯುವ ಮತ್ತು ಉಪಚರಿಸುವ ಬಗೆಯನ್ನು ಸ್ಪಷ್ಟೀಕರಿಸಿಕೊಂಡಿಲ್ಲದ ಸ್ಥಿತಿ ನಮ್ಮ ಭಾರತದಲ್ಲಿದೆ. ಅದಕ್ಕೆಂದು ಇರುವ ವೈಜ್ಞಾನಿಕ ಮತ್ತು ವೈದ್ಯಕೀಯ ಸೌಲಭ್ಯವು ಇರುವ ಸಮಸ್ಯೆಗಳ ಗಾತ್ರದ ಮುಂದೆ ಬಹಳ ಪುಟ್ಟ ಕಣವಾಗಿದೆ. ಅಮೃತಾಳ ಬರಹ ಹಲವು ರೀತಿಗಳಲ್ಲಿ ಕಣ್ಣು ತೆರೆಸುವಂತದ್ದು.

ಬರಿಯ ತನ್ನ ನಲಿವಿನ ಪ್ರದರ್ಶನ ಮತ್ತು ನೋವಿನ ನಿವೇದನೆಯ ದಾಖಲೆಯಾಗಿರದೇ ಆಕೆಯದಂತಹ ಹಲವು ಬದುಕುಗಳ ಮತ್ತು ಜೀವಿಗಳ ಕಡೆಗೆ ಗಮನ ನೀಡಲು ಕೈತೋರುವಂತಿದೆ.

ಅಮೃತಾ ಈಗ ನಮ್ಮೊಡನಿಲ್ಲ. ಅವಳೇ ಹೇಳಿರುವಂತೆ,

“1992ರಲ್ಲಿ ಅಮೃತಾ ಎಂಬ ಕಾಲಯಾನಿ ನಮ್ಮ ಉದರದ ಮೂಲಕ ಭೂಸ್ಪರ್ಶವನ್ನು ಮಾಡಿದಳು. ಅವಳ ಇಪ್ಪತ್ತೈದು ವರ್ಷಗಳ ಸುದೀರ್ಘ ಕಥಾನಕವನ್ನು ಈಗ ನಿಮ್ಮ ಮುಂದಿಟ್ಟಿದ್ದಾಳೆ”. ಪುಸ್ತಕ ಬಿಡುಗಡೆಯ ಸಿದ್ಧತೆಯಾಗುತ್ತಿದ್ದಂತೆ, ಅವಳ ಬದುಕಿನ ಆದ್ಯತೆಯೇ ಬದಲಾಗುತ್ತ ಹೋಯಿತು. ಅವಳ ಕೊನೆಯ ಚಿತ್ರವೂ ಅಪೂರ್ಣ. ಗೆಳೆಯರೊಬ್ಬರ ಮಾತಿನಂತೆ “ಅಪೂರ್ಣತೆಯಲ್ಲಿಯೇ ಆಕೆಯ ಇರುವಿಕೆಯನ್ನು ಕಾಣುವ ಅವಕಾಶವನ್ನು ಉಳಿಸಿ ಹೋಗಿದ್ದಾಳೆ.”

ಆದರೆ ಟೇಬಲ್ಲಿನ ಮೇಲೆ ಸದಾ ಕಾಣುವಂತೆ ಕುಳಿತಿರುವ ಅಮೃತಾಯಾನ ಬರಿಯ ಪುಸ್ತಕಗಳಾಗಿರದೆ ಕೈಗೆಟುಕಿದವರನ್ನೆಲ್ಲಾ ತನ್ನೂರನ್ನು, ಮನೆಯನ್ನು, ಚಟುವಟಿಕೆಗಳನ್ನು, ಆಪ್ತರನ್ನು ತೋರಲು ಕರೆದುಕೊಂಡು ಹೋಗುತ್ತಿರುತ್ತಾಳೆ. ತನ್ನ ಅಂತರಂಗದ ಕದವನ್ನು ತೆರೆದು ತೋರುವ ನೆಪದಲ್ಲಿ ನಮ್ಮಂತರಂಗವನ್ನೂ ಇಣುಕಿ ನೋಡಿಕೊಳ್ಳುವಂತೆ ಮಾಡುತ್ತಾಳೆ. ತುಟಿಯ ಮೇಲೆ ನಗು ತರುತ್ತಾಳೆ. ಕಂಗಳಲ್ಲಿ ಕಂಬನಿ ತರಿಸುತ್ತಾಳೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...