Homeಮುಖಪುಟಅಮೃತಾ ರಕ್ಷಿದಿಯವರ ಐದು ಪುಸ್ತಕಗಳ ಗುಚ್ಛ ಅಮೃತಯಾನ...

ಅಮೃತಾ ರಕ್ಷಿದಿಯವರ ಐದು ಪುಸ್ತಕಗಳ ಗುಚ್ಛ ಅಮೃತಯಾನ…

ಒಂಟಿ ಮನೆಯ ಪುಟಾಣಿ, ಪುಟ್ಟ ಮಗುವಿನ ಶಾಲಾ ದಿನಗಳು, ತನ್ನೊಳಗಿನ ಪ್ರಪಂಚ, ಕನಸುಗಳ ಲೋಕದಲ್ಲಿ ಮತ್ತು ಅಂತರಂಗದ ಪಯಣ. ಈ ಪುಸ್ತಕಗಳು ಏನನ್ನು ಹೇಳುತ್ತವೆ ಎಂದು ಶೀರ್ಷಿಕೆಗಳು ನೇರವಾಗಿಯೇ ಧ್ವನಿಸುತ್ತವೆ.

- Advertisement -
- Advertisement -

ಪುಟಕಿಟ್ಟ ಪುಟಗಳು

  • ಯೋಗೇಶ್‌ ಮಾಸ್ಟರ್‌

‍“ನಾವು ಹೈಟೆಕ್ ಯುಗದಲ್ಲಿದ್ದೇವೆ. ಇಷ್ಟೊಂದು ಮುಂದುವರಿದಿದ್ದೇವೆ. ಹಳ್ಳಿಹಳ್ಳಿಗೂ ಸ್ಮಾರ್ಟ್‌ ಫೋನ್‌ಗಳು ಬಂದಿವೆ” ಎಂದು ತನ್ನ ಮಾತನ್ನು ಪ್ರಾರಂಭಿಸುವ ಲೇಖಕಿ ಎತ್ತುವ ಪ್ರಶ್ನೆ ಎಂದರೆ ಮಾನಸಿಕ ಖಾಯಿಲೆಯಿಂದ ನರಳುತ್ತಿರುವವರನ್ನು ಸಮಾಜ ಹೇಗೆ ನೋಡುತ್ತದೆ ಎಂದು. ಮಾನಸಿಕ ಖಾಯಿಲೆ ಇರುವವರೊಂದಿಗೆ ಯಾವ ರೀತಿ ವರ್ತಿಸಬೇಕು, ಅವರನ್ನು ಹೇಗೆ ನೋಡಬೇಕು ಎಂಬ ಅರಿವು ನಮ್ಮ ಸಮಾಜಕ್ಕಿಲ್ಲ ಎಂಬುದು ಲೇಖಕಿಯ ಕೊರಗು ಮತ್ತು ಅದು ನಿಜವೂ ಕೂಡ. ಸ್ಥೂಲವಾಗಿ ಕಾಣುವ ದೈಹಿಕ ಅಸಮರ್ಥತೆಯನ್ನು ಗುರುತಿಸಲು ಸಾಧ್ಯ ಮತ್ತು ಸಿಗುವಂತಹ ಪ್ರೋತ್ಸಾಹದಿಂದ ಅವರಿಗೆ ಆತ್ಮವಿಶ್ವಾಸವನ್ನು ಗಳಿಸಿಕೊಳ್ಳಲೂ ಸಾಧ್ಯ. ಆದರೆ ಮಾನಸಿಕ ಸಮಸ್ಯೆ ಇರುವವರು ಹಾಗೆ ಆತ್ಮವಿಶ್ವಾಸವನ್ನು ಗಳಿಸಿಕೊಂಡು ಜೀವನ್ಮುಖಿಯಾಗಿ ಹೋರಾಡಬೇಕೆಂದರೆ ಗುಣಮುಖವಾಗುವ ಲಕ್ಷಣಗಳನ್ನು ತೋರಬೇಕು ಎಂದು ಅಮೃತಾ ರಕ್ಷಿದಿ ಹೇಳುವ ಕಾರಣವೇನೆಂದರೆ ತಾನೇ ಸ್ವತಃ ಪಾರಾನಾಯ್ಡ್ ಸ್ಕೀಜೋಫ್ರೇನಿಯಾದಿಂದ ಬಳಲಿದ್ದ ಅನುಭವಗಳು.

ಅಮೃತಯಾನ ಐದು ಪುಸ್ತಕಗಳ ಗುಚ್ಛ. ಒಂಟಿ ಮನೆಯ ಪುಟಾಣಿ, ಪುಟ್ಟ ಮಗುವಿನ ಶಾಲಾ ದಿನಗಳು, ತನ್ನೊಳಗಿನ ಪ್ರಪಂಚ, ಕನಸುಗಳ ಲೋಕದಲ್ಲಿ ಮತ್ತು ಅಂತರಂಗದ ಪಯಣ. ಈ ಪುಸ್ತಕಗಳು ಏನನ್ನು ಹೇಳುತ್ತವೆ ಎಂದು ಶೀರ್ಷಿಕೆಗಳು ನೇರವಾಗಿಯೇ ಧ್ವನಿಸುತ್ತವೆ.

ನಮ್ಮ ಮನೆಯ ಅಥವಾ ನೆರೆಮನೆಯ ಹೆಣ್ಣುಮಗುವೊಂದು ನಮ್ಮೊಡನೆ ಕುಳಿತುಕೊಂಡು ಆಪ್ತವಾಗಿ ತನ್ನ ಅನುಭವಗಳನ್ನು, ಕನಸುಗಳನ್ನು, ತನ್ನ ಬಾಧೆಗಳನ್ನು ಹಂಚಿಕೊಂಡಷ್ಟು ಸಹಜವಾದ ಬರವಣಿಗೆ. ಈ ಲೇಖಕಿ ಚಿತ್ರಕಲಾವಿದೆಯೂ ಆಗಿರುವ ಛಾಯೆಯನ್ನು ತನ್ನ ಬರಹದಲ್ಲಿ ಓದುಗರಿಗೆ ಚಿತ್ರಣವನ್ನು ಕಟ್ಟಿಕೊಡುವುದು ಬರಹವನ್ನು ಆಪ್ತವಾಗಿಸುತ್ತದೆ, ನಮ್ಮನ್ನೂ ಆ ಕಾಲಕ್ಕೆ, ದೇಶಕ್ಕೆ, ಸಂಗತಿಗಳಿಗೆ ಕರೆದೊಯ್ಯುತ್ತದೆ.

ರಕ್ಷಿದಿಯಲ್ಲಿರುವ ತಮ್ಮ ಮನೆ, ಪರಿಸರ, ಅದರ ವಿವರಣೆಗಳೆಲ್ಲವೂ ತೆರೆದುಕೊಳ್ಳುತ್ತಾ ಬರಿಯ ಚಿತ್ರಗಳನ್ನು ಮಾತ್ರವಲ್ಲದೇ ಗಾಳಿಗಂಧವನ್ನು ಉಸಿರಾಡುವಂತೆ ಮಾಡುತ್ತದೆ. ತನ್ನ ಅಪ್ಪ, ಅಮ್ಮ, ಅಣ್ಣಯ್ಯ, ಅಜ್ಜಿ, ಅಜ್ಜಯ್ಯನ ಜೊತೆ ಜೊತೆಗೆ ಇತರ ಸಹಜೀವಿಗಳನ್ನು ಪರಿಚಯಿಸುವಾಗ ಅವರ ವ್ಯಕ್ತಿತ್ವದ ಪರಿಚಯವು ಸ್ಥೂಲವಾಗಿರದೇ ಭಾವುಕವಾಗಿಯೂ ಮತ್ತು ಪದರಗಳಾಚೆ ನೋಡಿದರೆ ಮಾನಸಿಕ ವ್ಯಕ್ತಿತ್ವಗಳನ್ನೂ ಸೂಚಿಸಿರುವುದನ್ನು ಕಾಣಬಹುದು. ಸಣ್ಣದು ಎನಿಸಬಹುದಾದ ಸಂಗತಿಗಳೆಲ್ಲವೂ ಮನನಕ್ಕೆ ಒಳಗಾಗಿ, ಚಿಂತನದಲ್ಲಿ ಎರಕ ಹೊಯ್ದು ಸೂಕ್ಷ್ಮ ಸಂವೇದನೆಯಲ್ಲಿ ಅಚ್ಚುಹೊಯ್ದಂತೆ ಮನದೊಳಗೆ ಪ್ರವೇಶಿಸುತ್ತದೆ. ಅಮೃತಾ ತನ್ನನ್ನು ತಾನು ಸಾಕ್ಷೀಕರಿಸಿಕೊಳ್ಳುವಂತೆ ಸಂಗತಿಗಳನ್ನು ವಿವರಿಸಿರುವುದು ಅನನ್ಯ.

ತಾನು ಕೇಳಿದ ಕತೆಗಳು, ತಾನು ಹಾದು ಹೋಗಬೇಕಾದ ಸಾಂಸ್ಕೃತಿಕ ಸಂಗತಿಗಳನ್ನು ಬರಿದೇ ಸಾಕ್ಷೀಕರಿಸುವುದಕ್ಕಿಂತ ಅದನ್ನು ದಾಖಲು ಮಾಡುವಾಗ ವಹಿಸಿರುವ ಎಚ್ಚರದಲ್ಲಿ ಸಾಹಿತ್ಯದ ತಂತ್ರಗಾರಿಕೆಯ ಬಗ್ಗೆ ಹೊಂದಿರುವ ಪರಿಣತಿಯು ಬೆರಗುಗೊಳಿಸುತ್ತದೆ. ಆ ಬೆರಗಿನ ಕಾರಣವೇ ಪ್ರಾಮಾಣಿಕ ನಿವೇದನೆ.

ಅಮೃತಾ ತನ್ನ ತಂದೆಯ ದೆಸೆಯಿಂದ ದೊರಕಿದ ಸಾಹಿತ್ಯದ ಮತ್ತು ಸಾಂಸ್ಕೃತಿಕ ಪರಿಸರವನ್ನು ಉಸಿರಾಡಿರುವುದರ ಉಲ್ಲೇಖಗಳು ಸಾಧಾರಣವಲ್ಲ. ತನಗೆ ಲಭ್ಯವಾದ ಓದು, ಚಿತ್ರಕಲೆಯ ಅಭ್ಯಾಸ, ಸಾಹಿತಿ, ರಂಗಕರ್ಮಿಗಳು ಮತ್ತು ನಿರ್ದೇಶಕರೊಡನೆ ಒಡನಾಟ, ರಂಗಭೂಮಿಯ ಅನುಭವ; ಹೀಗೆ ಎಲ್ಲವನ್ನೂ ಪ್ರಸ್ತುತಪಡಿಸುವ ಆ ಬಗೆಯಲ್ಲಿ ಓದುಗರನ್ನೂ ಜೊತೆಗಿರಿಸಿಕೊಂಡು ಒಂದು ಪಕ್ಕದಲ್ಲಿ ಕೂರಿಸಿಕೊಂಡೋ ಅಥವಾ ಕಿಟಕಿಯಲ್ಲಿ ನಿಂತು ನೋಡಿಕೊಂಡಿರುವ ಹಾಗೆ ಮಾಡಿರುವುದು ಸಾಹಿತ್ಯದ ತಂತ್ರಗಾರಿಕೆ ಎನ್ನುವುದಕ್ಕಿಂತ ಅಮೃತಾ ದೃಷ್ಟಿಯಲ್ಲಿದ್ದ ಸರಳ ಮತ್ತು ಪ್ರಾಮಾಣಿಕ ಧೋರಣೆ ಇರಬಹುದು ಎಂದು ಭಾಸವಾಗುತ್ತದೆ.

ತನ್ನ ಅನುಭವಗಳ ಸೌಂದರ್ಯವನ್ನು ಕಣ್ಣಿಗೆ ಕಟ್ಟಿಕೊಟ್ಟಹಾಗೆ, ತನಗೆ ಬರುತ್ತಿದ್ದ ಕೋಪವನ್ನು, ಅವರಿವರ ಟೀಕೆ ಮತ್ತು ರಗಳೆಗಳು ತಂದೊಡ್ಡುತ್ತಿದ್ದ ಉಪದ್ರವಗಳನ್ನೂ ಹೇಳುತ್ತಲೇ, ಅವರ ಮಾನಸಿಕ ಸ್ಥಿತಿಗಳನ್ನು, ವರ್ತನೆಗಳ ಪ್ರತಿವರ್ತನೆಗಳ ಸೂಕ್ಷ್ಮತೆಗಳನ್ನು ವಿವೇಚಿಸುವರು.

ಭ್ರಮೆ ಮತ್ತು ನಿಜಗಳ ನಡುವಿನ ಸಲ್ಲಾಪ ಮತ್ತು ಸಂಘರ್ಷಗಳು, ಮೂರ್ತ ಮತ್ತು ಅಮೂರ್ತಗಳನ್ನು ಕಾಣುವ ಪ್ರತಿಮೆಗಳಲ್ಲೇ ಎರಕ ಹುಯ್ಯುವಂತಹ ಮನಶಾಸ್ತ್ರೀಯ ದೃಷ್ಟಿಕೋನಗಳು, ಹೊರಗಿನ ಮತ್ತು ಒಳಗಿನ ತಾಕಲಾಟದಲ್ಲಿ ಡೋಲಾಯಮಾನವಾದ ಭಾವನೆಗಳ ಭಿತ್ತಿಗಳು; ಎಲ್ಲವೂ ತನ್ನ ತಾನು ಸಾಕ್ಷೀಕರಿಸಿಕೊಂಡಿರುವ ಒಂದು ಮಹತ್ವದ ದಾಖಲೆ ಈ ಅಮೃತಯಾನ.

ಅಮೃತ ತಾನೇ ಹೇಳಿರುವಂತೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರನ್ನು ಅರಿಯುವ ಮತ್ತು ಉಪಚರಿಸುವ ಬಗೆಯನ್ನು ಸ್ಪಷ್ಟೀಕರಿಸಿಕೊಂಡಿಲ್ಲದ ಸ್ಥಿತಿ ನಮ್ಮ ಭಾರತದಲ್ಲಿದೆ. ಅದಕ್ಕೆಂದು ಇರುವ ವೈಜ್ಞಾನಿಕ ಮತ್ತು ವೈದ್ಯಕೀಯ ಸೌಲಭ್ಯವು ಇರುವ ಸಮಸ್ಯೆಗಳ ಗಾತ್ರದ ಮುಂದೆ ಬಹಳ ಪುಟ್ಟ ಕಣವಾಗಿದೆ. ಅಮೃತಾಳ ಬರಹ ಹಲವು ರೀತಿಗಳಲ್ಲಿ ಕಣ್ಣು ತೆರೆಸುವಂತದ್ದು.

ಬರಿಯ ತನ್ನ ನಲಿವಿನ ಪ್ರದರ್ಶನ ಮತ್ತು ನೋವಿನ ನಿವೇದನೆಯ ದಾಖಲೆಯಾಗಿರದೇ ಆಕೆಯದಂತಹ ಹಲವು ಬದುಕುಗಳ ಮತ್ತು ಜೀವಿಗಳ ಕಡೆಗೆ ಗಮನ ನೀಡಲು ಕೈತೋರುವಂತಿದೆ.

ಅಮೃತಾ ಈಗ ನಮ್ಮೊಡನಿಲ್ಲ. ಅವಳೇ ಹೇಳಿರುವಂತೆ,

“1992ರಲ್ಲಿ ಅಮೃತಾ ಎಂಬ ಕಾಲಯಾನಿ ನಮ್ಮ ಉದರದ ಮೂಲಕ ಭೂಸ್ಪರ್ಶವನ್ನು ಮಾಡಿದಳು. ಅವಳ ಇಪ್ಪತ್ತೈದು ವರ್ಷಗಳ ಸುದೀರ್ಘ ಕಥಾನಕವನ್ನು ಈಗ ನಿಮ್ಮ ಮುಂದಿಟ್ಟಿದ್ದಾಳೆ”. ಪುಸ್ತಕ ಬಿಡುಗಡೆಯ ಸಿದ್ಧತೆಯಾಗುತ್ತಿದ್ದಂತೆ, ಅವಳ ಬದುಕಿನ ಆದ್ಯತೆಯೇ ಬದಲಾಗುತ್ತ ಹೋಯಿತು. ಅವಳ ಕೊನೆಯ ಚಿತ್ರವೂ ಅಪೂರ್ಣ. ಗೆಳೆಯರೊಬ್ಬರ ಮಾತಿನಂತೆ “ಅಪೂರ್ಣತೆಯಲ್ಲಿಯೇ ಆಕೆಯ ಇರುವಿಕೆಯನ್ನು ಕಾಣುವ ಅವಕಾಶವನ್ನು ಉಳಿಸಿ ಹೋಗಿದ್ದಾಳೆ.”

ಆದರೆ ಟೇಬಲ್ಲಿನ ಮೇಲೆ ಸದಾ ಕಾಣುವಂತೆ ಕುಳಿತಿರುವ ಅಮೃತಾಯಾನ ಬರಿಯ ಪುಸ್ತಕಗಳಾಗಿರದೆ ಕೈಗೆಟುಕಿದವರನ್ನೆಲ್ಲಾ ತನ್ನೂರನ್ನು, ಮನೆಯನ್ನು, ಚಟುವಟಿಕೆಗಳನ್ನು, ಆಪ್ತರನ್ನು ತೋರಲು ಕರೆದುಕೊಂಡು ಹೋಗುತ್ತಿರುತ್ತಾಳೆ. ತನ್ನ ಅಂತರಂಗದ ಕದವನ್ನು ತೆರೆದು ತೋರುವ ನೆಪದಲ್ಲಿ ನಮ್ಮಂತರಂಗವನ್ನೂ ಇಣುಕಿ ನೋಡಿಕೊಳ್ಳುವಂತೆ ಮಾಡುತ್ತಾಳೆ. ತುಟಿಯ ಮೇಲೆ ನಗು ತರುತ್ತಾಳೆ. ಕಂಗಳಲ್ಲಿ ಕಂಬನಿ ತರಿಸುತ್ತಾಳೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...

ಆಕಸ್ಮಿಕವಾಗಿ ಗಡಿ ದಾಟಿದ್ದ 7 ಭಾರತೀಯರನ್ನು ಹಸ್ತಾಂತರಿಸಿದ ಪಾಕಿಸ್ತಾನ

2023 ರ ಪ್ರವಾಹದ ಸಮಯದಲ್ಲಿ ಅಜಾಗರೂಕತೆಯಿಂದ ಗಡಿ ದಾಟಿದ ನಂತರ ಬಂಧಿಸಲ್ಪಟ್ಟ ಏಳು ಭಾರತೀಯ ನಾಗರಿಕರನ್ನು ಪಾಕಿಸ್ತಾನ ಶನಿವಾರ ಸ್ವದೇಶಕ್ಕೆ ವಾಪಸ್ ಕಳುಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಂಜಾಬ್‌ನ ಅಟ್ಟಾರಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್‌ನಲ್ಲಿ...

ಮೀರತ್| ಅಪಹರಣ ಪ್ರಕರಣ ಹಿಂಪಡೆಯುವಂತೆ ಪೊಲೀಸರ ಒತ್ತಡ; ‘ಗೃಹಬಂಧನ’ದಲ್ಲಿ ದಲಿತ ಕುಟುಂಬ

ಜನವರಿ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಕಪ್ಸಾದ್ ಗ್ರಾಮದಲ್ಲಿ ತಾಯಿಯ ಕೊಲೆಯ ನಂತರ ಅಪಹರಿಸಲ್ಪಟ್ಟ ದಲಿತ ಹುಡುಗಿಯ ಕುಟುಂಬ ಸದಸ್ಯರು ತಾವು ಗೃಹಬಂಧನದಲ್ಲಿದ್ದು, ಆರೋಪಿಗಳ ವಿರುದ್ಧ ಪ್ರಕರಣವನ್ನು ಮುಂದುವರಿಸದಂತೆ ಪೊಲೀಸರು...

ಉದ್ಯಮಿ ಸಿಜೆ ರಾಯ್ ಮರಣೋತ್ತರ ಪರೀಕ್ಷೆ; ಹೃದಯ-ಶ್ವಾಸಕೋಶದಲ್ಲಿ 6.35 ಎಂಎಂ ಗುಂಡಿನ ಗಾಯ

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರ ಆತ್ಮಹತ್ಯೆಯ ಮರಣೋತ್ತರ ಪರೀಕ್ಷೆಯ ವರದಿಗಯನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅರವಿಂದ್ ಎಂಎನ್ ವಿವರಿಸಿದ್ದಾರೆ. 6.35 ಎಂಎಂ ಗುಂಡಿನ ದಾಳಿಯು ತಕ್ಷಣದ...

ಮುಂಬೈ| ನಿರ್ದೇಶಕ ರೋಹಿತ್ ಶೆಟ್ಟಿ ಮನೆಯ ಹೊರಗೆ 4 ಸುತ್ತು ಗುಂಡು ಹಾರಿಸಿದ ಅಪರಿಚಿತರು

ಶನಿವಾರ ತಡರಾತ್ರಿ, ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂಬೈನ ಜುಹು ನಿವಾಸದ ಹೊರಗೆ ನಾಲ್ಕು ಸುತ್ತು ಗುಂಡು ಹಾರಿಸಲಾಗಿದ್ದು, ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಚಿತ್ರ ನಿರ್ಮಾಪಕ-ನಿರ್ದೇಶಕರ ಕಟ್ಟಡದ ಬಳಿ ಅಪರಿಚಿತ...

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...