Homeಮುಖಪುಟಅಮೃತಾ ರಕ್ಷಿದಿಯವರ ಐದು ಪುಸ್ತಕಗಳ ಗುಚ್ಛ ಅಮೃತಯಾನ...

ಅಮೃತಾ ರಕ್ಷಿದಿಯವರ ಐದು ಪುಸ್ತಕಗಳ ಗುಚ್ಛ ಅಮೃತಯಾನ…

ಒಂಟಿ ಮನೆಯ ಪುಟಾಣಿ, ಪುಟ್ಟ ಮಗುವಿನ ಶಾಲಾ ದಿನಗಳು, ತನ್ನೊಳಗಿನ ಪ್ರಪಂಚ, ಕನಸುಗಳ ಲೋಕದಲ್ಲಿ ಮತ್ತು ಅಂತರಂಗದ ಪಯಣ. ಈ ಪುಸ್ತಕಗಳು ಏನನ್ನು ಹೇಳುತ್ತವೆ ಎಂದು ಶೀರ್ಷಿಕೆಗಳು ನೇರವಾಗಿಯೇ ಧ್ವನಿಸುತ್ತವೆ.

- Advertisement -
- Advertisement -

ಪುಟಕಿಟ್ಟ ಪುಟಗಳು

  • ಯೋಗೇಶ್‌ ಮಾಸ್ಟರ್‌

‍“ನಾವು ಹೈಟೆಕ್ ಯುಗದಲ್ಲಿದ್ದೇವೆ. ಇಷ್ಟೊಂದು ಮುಂದುವರಿದಿದ್ದೇವೆ. ಹಳ್ಳಿಹಳ್ಳಿಗೂ ಸ್ಮಾರ್ಟ್‌ ಫೋನ್‌ಗಳು ಬಂದಿವೆ” ಎಂದು ತನ್ನ ಮಾತನ್ನು ಪ್ರಾರಂಭಿಸುವ ಲೇಖಕಿ ಎತ್ತುವ ಪ್ರಶ್ನೆ ಎಂದರೆ ಮಾನಸಿಕ ಖಾಯಿಲೆಯಿಂದ ನರಳುತ್ತಿರುವವರನ್ನು ಸಮಾಜ ಹೇಗೆ ನೋಡುತ್ತದೆ ಎಂದು. ಮಾನಸಿಕ ಖಾಯಿಲೆ ಇರುವವರೊಂದಿಗೆ ಯಾವ ರೀತಿ ವರ್ತಿಸಬೇಕು, ಅವರನ್ನು ಹೇಗೆ ನೋಡಬೇಕು ಎಂಬ ಅರಿವು ನಮ್ಮ ಸಮಾಜಕ್ಕಿಲ್ಲ ಎಂಬುದು ಲೇಖಕಿಯ ಕೊರಗು ಮತ್ತು ಅದು ನಿಜವೂ ಕೂಡ. ಸ್ಥೂಲವಾಗಿ ಕಾಣುವ ದೈಹಿಕ ಅಸಮರ್ಥತೆಯನ್ನು ಗುರುತಿಸಲು ಸಾಧ್ಯ ಮತ್ತು ಸಿಗುವಂತಹ ಪ್ರೋತ್ಸಾಹದಿಂದ ಅವರಿಗೆ ಆತ್ಮವಿಶ್ವಾಸವನ್ನು ಗಳಿಸಿಕೊಳ್ಳಲೂ ಸಾಧ್ಯ. ಆದರೆ ಮಾನಸಿಕ ಸಮಸ್ಯೆ ಇರುವವರು ಹಾಗೆ ಆತ್ಮವಿಶ್ವಾಸವನ್ನು ಗಳಿಸಿಕೊಂಡು ಜೀವನ್ಮುಖಿಯಾಗಿ ಹೋರಾಡಬೇಕೆಂದರೆ ಗುಣಮುಖವಾಗುವ ಲಕ್ಷಣಗಳನ್ನು ತೋರಬೇಕು ಎಂದು ಅಮೃತಾ ರಕ್ಷಿದಿ ಹೇಳುವ ಕಾರಣವೇನೆಂದರೆ ತಾನೇ ಸ್ವತಃ ಪಾರಾನಾಯ್ಡ್ ಸ್ಕೀಜೋಫ್ರೇನಿಯಾದಿಂದ ಬಳಲಿದ್ದ ಅನುಭವಗಳು.

ಅಮೃತಯಾನ ಐದು ಪುಸ್ತಕಗಳ ಗುಚ್ಛ. ಒಂಟಿ ಮನೆಯ ಪುಟಾಣಿ, ಪುಟ್ಟ ಮಗುವಿನ ಶಾಲಾ ದಿನಗಳು, ತನ್ನೊಳಗಿನ ಪ್ರಪಂಚ, ಕನಸುಗಳ ಲೋಕದಲ್ಲಿ ಮತ್ತು ಅಂತರಂಗದ ಪಯಣ. ಈ ಪುಸ್ತಕಗಳು ಏನನ್ನು ಹೇಳುತ್ತವೆ ಎಂದು ಶೀರ್ಷಿಕೆಗಳು ನೇರವಾಗಿಯೇ ಧ್ವನಿಸುತ್ತವೆ.

ನಮ್ಮ ಮನೆಯ ಅಥವಾ ನೆರೆಮನೆಯ ಹೆಣ್ಣುಮಗುವೊಂದು ನಮ್ಮೊಡನೆ ಕುಳಿತುಕೊಂಡು ಆಪ್ತವಾಗಿ ತನ್ನ ಅನುಭವಗಳನ್ನು, ಕನಸುಗಳನ್ನು, ತನ್ನ ಬಾಧೆಗಳನ್ನು ಹಂಚಿಕೊಂಡಷ್ಟು ಸಹಜವಾದ ಬರವಣಿಗೆ. ಈ ಲೇಖಕಿ ಚಿತ್ರಕಲಾವಿದೆಯೂ ಆಗಿರುವ ಛಾಯೆಯನ್ನು ತನ್ನ ಬರಹದಲ್ಲಿ ಓದುಗರಿಗೆ ಚಿತ್ರಣವನ್ನು ಕಟ್ಟಿಕೊಡುವುದು ಬರಹವನ್ನು ಆಪ್ತವಾಗಿಸುತ್ತದೆ, ನಮ್ಮನ್ನೂ ಆ ಕಾಲಕ್ಕೆ, ದೇಶಕ್ಕೆ, ಸಂಗತಿಗಳಿಗೆ ಕರೆದೊಯ್ಯುತ್ತದೆ.

ರಕ್ಷಿದಿಯಲ್ಲಿರುವ ತಮ್ಮ ಮನೆ, ಪರಿಸರ, ಅದರ ವಿವರಣೆಗಳೆಲ್ಲವೂ ತೆರೆದುಕೊಳ್ಳುತ್ತಾ ಬರಿಯ ಚಿತ್ರಗಳನ್ನು ಮಾತ್ರವಲ್ಲದೇ ಗಾಳಿಗಂಧವನ್ನು ಉಸಿರಾಡುವಂತೆ ಮಾಡುತ್ತದೆ. ತನ್ನ ಅಪ್ಪ, ಅಮ್ಮ, ಅಣ್ಣಯ್ಯ, ಅಜ್ಜಿ, ಅಜ್ಜಯ್ಯನ ಜೊತೆ ಜೊತೆಗೆ ಇತರ ಸಹಜೀವಿಗಳನ್ನು ಪರಿಚಯಿಸುವಾಗ ಅವರ ವ್ಯಕ್ತಿತ್ವದ ಪರಿಚಯವು ಸ್ಥೂಲವಾಗಿರದೇ ಭಾವುಕವಾಗಿಯೂ ಮತ್ತು ಪದರಗಳಾಚೆ ನೋಡಿದರೆ ಮಾನಸಿಕ ವ್ಯಕ್ತಿತ್ವಗಳನ್ನೂ ಸೂಚಿಸಿರುವುದನ್ನು ಕಾಣಬಹುದು. ಸಣ್ಣದು ಎನಿಸಬಹುದಾದ ಸಂಗತಿಗಳೆಲ್ಲವೂ ಮನನಕ್ಕೆ ಒಳಗಾಗಿ, ಚಿಂತನದಲ್ಲಿ ಎರಕ ಹೊಯ್ದು ಸೂಕ್ಷ್ಮ ಸಂವೇದನೆಯಲ್ಲಿ ಅಚ್ಚುಹೊಯ್ದಂತೆ ಮನದೊಳಗೆ ಪ್ರವೇಶಿಸುತ್ತದೆ. ಅಮೃತಾ ತನ್ನನ್ನು ತಾನು ಸಾಕ್ಷೀಕರಿಸಿಕೊಳ್ಳುವಂತೆ ಸಂಗತಿಗಳನ್ನು ವಿವರಿಸಿರುವುದು ಅನನ್ಯ.

ತಾನು ಕೇಳಿದ ಕತೆಗಳು, ತಾನು ಹಾದು ಹೋಗಬೇಕಾದ ಸಾಂಸ್ಕೃತಿಕ ಸಂಗತಿಗಳನ್ನು ಬರಿದೇ ಸಾಕ್ಷೀಕರಿಸುವುದಕ್ಕಿಂತ ಅದನ್ನು ದಾಖಲು ಮಾಡುವಾಗ ವಹಿಸಿರುವ ಎಚ್ಚರದಲ್ಲಿ ಸಾಹಿತ್ಯದ ತಂತ್ರಗಾರಿಕೆಯ ಬಗ್ಗೆ ಹೊಂದಿರುವ ಪರಿಣತಿಯು ಬೆರಗುಗೊಳಿಸುತ್ತದೆ. ಆ ಬೆರಗಿನ ಕಾರಣವೇ ಪ್ರಾಮಾಣಿಕ ನಿವೇದನೆ.

ಅಮೃತಾ ತನ್ನ ತಂದೆಯ ದೆಸೆಯಿಂದ ದೊರಕಿದ ಸಾಹಿತ್ಯದ ಮತ್ತು ಸಾಂಸ್ಕೃತಿಕ ಪರಿಸರವನ್ನು ಉಸಿರಾಡಿರುವುದರ ಉಲ್ಲೇಖಗಳು ಸಾಧಾರಣವಲ್ಲ. ತನಗೆ ಲಭ್ಯವಾದ ಓದು, ಚಿತ್ರಕಲೆಯ ಅಭ್ಯಾಸ, ಸಾಹಿತಿ, ರಂಗಕರ್ಮಿಗಳು ಮತ್ತು ನಿರ್ದೇಶಕರೊಡನೆ ಒಡನಾಟ, ರಂಗಭೂಮಿಯ ಅನುಭವ; ಹೀಗೆ ಎಲ್ಲವನ್ನೂ ಪ್ರಸ್ತುತಪಡಿಸುವ ಆ ಬಗೆಯಲ್ಲಿ ಓದುಗರನ್ನೂ ಜೊತೆಗಿರಿಸಿಕೊಂಡು ಒಂದು ಪಕ್ಕದಲ್ಲಿ ಕೂರಿಸಿಕೊಂಡೋ ಅಥವಾ ಕಿಟಕಿಯಲ್ಲಿ ನಿಂತು ನೋಡಿಕೊಂಡಿರುವ ಹಾಗೆ ಮಾಡಿರುವುದು ಸಾಹಿತ್ಯದ ತಂತ್ರಗಾರಿಕೆ ಎನ್ನುವುದಕ್ಕಿಂತ ಅಮೃತಾ ದೃಷ್ಟಿಯಲ್ಲಿದ್ದ ಸರಳ ಮತ್ತು ಪ್ರಾಮಾಣಿಕ ಧೋರಣೆ ಇರಬಹುದು ಎಂದು ಭಾಸವಾಗುತ್ತದೆ.

ತನ್ನ ಅನುಭವಗಳ ಸೌಂದರ್ಯವನ್ನು ಕಣ್ಣಿಗೆ ಕಟ್ಟಿಕೊಟ್ಟಹಾಗೆ, ತನಗೆ ಬರುತ್ತಿದ್ದ ಕೋಪವನ್ನು, ಅವರಿವರ ಟೀಕೆ ಮತ್ತು ರಗಳೆಗಳು ತಂದೊಡ್ಡುತ್ತಿದ್ದ ಉಪದ್ರವಗಳನ್ನೂ ಹೇಳುತ್ತಲೇ, ಅವರ ಮಾನಸಿಕ ಸ್ಥಿತಿಗಳನ್ನು, ವರ್ತನೆಗಳ ಪ್ರತಿವರ್ತನೆಗಳ ಸೂಕ್ಷ್ಮತೆಗಳನ್ನು ವಿವೇಚಿಸುವರು.

ಭ್ರಮೆ ಮತ್ತು ನಿಜಗಳ ನಡುವಿನ ಸಲ್ಲಾಪ ಮತ್ತು ಸಂಘರ್ಷಗಳು, ಮೂರ್ತ ಮತ್ತು ಅಮೂರ್ತಗಳನ್ನು ಕಾಣುವ ಪ್ರತಿಮೆಗಳಲ್ಲೇ ಎರಕ ಹುಯ್ಯುವಂತಹ ಮನಶಾಸ್ತ್ರೀಯ ದೃಷ್ಟಿಕೋನಗಳು, ಹೊರಗಿನ ಮತ್ತು ಒಳಗಿನ ತಾಕಲಾಟದಲ್ಲಿ ಡೋಲಾಯಮಾನವಾದ ಭಾವನೆಗಳ ಭಿತ್ತಿಗಳು; ಎಲ್ಲವೂ ತನ್ನ ತಾನು ಸಾಕ್ಷೀಕರಿಸಿಕೊಂಡಿರುವ ಒಂದು ಮಹತ್ವದ ದಾಖಲೆ ಈ ಅಮೃತಯಾನ.

ಅಮೃತ ತಾನೇ ಹೇಳಿರುವಂತೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರನ್ನು ಅರಿಯುವ ಮತ್ತು ಉಪಚರಿಸುವ ಬಗೆಯನ್ನು ಸ್ಪಷ್ಟೀಕರಿಸಿಕೊಂಡಿಲ್ಲದ ಸ್ಥಿತಿ ನಮ್ಮ ಭಾರತದಲ್ಲಿದೆ. ಅದಕ್ಕೆಂದು ಇರುವ ವೈಜ್ಞಾನಿಕ ಮತ್ತು ವೈದ್ಯಕೀಯ ಸೌಲಭ್ಯವು ಇರುವ ಸಮಸ್ಯೆಗಳ ಗಾತ್ರದ ಮುಂದೆ ಬಹಳ ಪುಟ್ಟ ಕಣವಾಗಿದೆ. ಅಮೃತಾಳ ಬರಹ ಹಲವು ರೀತಿಗಳಲ್ಲಿ ಕಣ್ಣು ತೆರೆಸುವಂತದ್ದು.

ಬರಿಯ ತನ್ನ ನಲಿವಿನ ಪ್ರದರ್ಶನ ಮತ್ತು ನೋವಿನ ನಿವೇದನೆಯ ದಾಖಲೆಯಾಗಿರದೇ ಆಕೆಯದಂತಹ ಹಲವು ಬದುಕುಗಳ ಮತ್ತು ಜೀವಿಗಳ ಕಡೆಗೆ ಗಮನ ನೀಡಲು ಕೈತೋರುವಂತಿದೆ.

ಅಮೃತಾ ಈಗ ನಮ್ಮೊಡನಿಲ್ಲ. ಅವಳೇ ಹೇಳಿರುವಂತೆ,

“1992ರಲ್ಲಿ ಅಮೃತಾ ಎಂಬ ಕಾಲಯಾನಿ ನಮ್ಮ ಉದರದ ಮೂಲಕ ಭೂಸ್ಪರ್ಶವನ್ನು ಮಾಡಿದಳು. ಅವಳ ಇಪ್ಪತ್ತೈದು ವರ್ಷಗಳ ಸುದೀರ್ಘ ಕಥಾನಕವನ್ನು ಈಗ ನಿಮ್ಮ ಮುಂದಿಟ್ಟಿದ್ದಾಳೆ”. ಪುಸ್ತಕ ಬಿಡುಗಡೆಯ ಸಿದ್ಧತೆಯಾಗುತ್ತಿದ್ದಂತೆ, ಅವಳ ಬದುಕಿನ ಆದ್ಯತೆಯೇ ಬದಲಾಗುತ್ತ ಹೋಯಿತು. ಅವಳ ಕೊನೆಯ ಚಿತ್ರವೂ ಅಪೂರ್ಣ. ಗೆಳೆಯರೊಬ್ಬರ ಮಾತಿನಂತೆ “ಅಪೂರ್ಣತೆಯಲ್ಲಿಯೇ ಆಕೆಯ ಇರುವಿಕೆಯನ್ನು ಕಾಣುವ ಅವಕಾಶವನ್ನು ಉಳಿಸಿ ಹೋಗಿದ್ದಾಳೆ.”

ಆದರೆ ಟೇಬಲ್ಲಿನ ಮೇಲೆ ಸದಾ ಕಾಣುವಂತೆ ಕುಳಿತಿರುವ ಅಮೃತಾಯಾನ ಬರಿಯ ಪುಸ್ತಕಗಳಾಗಿರದೆ ಕೈಗೆಟುಕಿದವರನ್ನೆಲ್ಲಾ ತನ್ನೂರನ್ನು, ಮನೆಯನ್ನು, ಚಟುವಟಿಕೆಗಳನ್ನು, ಆಪ್ತರನ್ನು ತೋರಲು ಕರೆದುಕೊಂಡು ಹೋಗುತ್ತಿರುತ್ತಾಳೆ. ತನ್ನ ಅಂತರಂಗದ ಕದವನ್ನು ತೆರೆದು ತೋರುವ ನೆಪದಲ್ಲಿ ನಮ್ಮಂತರಂಗವನ್ನೂ ಇಣುಕಿ ನೋಡಿಕೊಳ್ಳುವಂತೆ ಮಾಡುತ್ತಾಳೆ. ತುಟಿಯ ಮೇಲೆ ನಗು ತರುತ್ತಾಳೆ. ಕಂಗಳಲ್ಲಿ ಕಂಬನಿ ತರಿಸುತ್ತಾಳೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...