Homeಮುಖಪುಟಅಮೃತಾ ರಕ್ಷಿದಿಯವರ ಐದು ಪುಸ್ತಕಗಳ ಗುಚ್ಛ ಅಮೃತಯಾನ...

ಅಮೃತಾ ರಕ್ಷಿದಿಯವರ ಐದು ಪುಸ್ತಕಗಳ ಗುಚ್ಛ ಅಮೃತಯಾನ…

ಒಂಟಿ ಮನೆಯ ಪುಟಾಣಿ, ಪುಟ್ಟ ಮಗುವಿನ ಶಾಲಾ ದಿನಗಳು, ತನ್ನೊಳಗಿನ ಪ್ರಪಂಚ, ಕನಸುಗಳ ಲೋಕದಲ್ಲಿ ಮತ್ತು ಅಂತರಂಗದ ಪಯಣ. ಈ ಪುಸ್ತಕಗಳು ಏನನ್ನು ಹೇಳುತ್ತವೆ ಎಂದು ಶೀರ್ಷಿಕೆಗಳು ನೇರವಾಗಿಯೇ ಧ್ವನಿಸುತ್ತವೆ.

- Advertisement -
- Advertisement -

ಪುಟಕಿಟ್ಟ ಪುಟಗಳು

  • ಯೋಗೇಶ್‌ ಮಾಸ್ಟರ್‌

‍“ನಾವು ಹೈಟೆಕ್ ಯುಗದಲ್ಲಿದ್ದೇವೆ. ಇಷ್ಟೊಂದು ಮುಂದುವರಿದಿದ್ದೇವೆ. ಹಳ್ಳಿಹಳ್ಳಿಗೂ ಸ್ಮಾರ್ಟ್‌ ಫೋನ್‌ಗಳು ಬಂದಿವೆ” ಎಂದು ತನ್ನ ಮಾತನ್ನು ಪ್ರಾರಂಭಿಸುವ ಲೇಖಕಿ ಎತ್ತುವ ಪ್ರಶ್ನೆ ಎಂದರೆ ಮಾನಸಿಕ ಖಾಯಿಲೆಯಿಂದ ನರಳುತ್ತಿರುವವರನ್ನು ಸಮಾಜ ಹೇಗೆ ನೋಡುತ್ತದೆ ಎಂದು. ಮಾನಸಿಕ ಖಾಯಿಲೆ ಇರುವವರೊಂದಿಗೆ ಯಾವ ರೀತಿ ವರ್ತಿಸಬೇಕು, ಅವರನ್ನು ಹೇಗೆ ನೋಡಬೇಕು ಎಂಬ ಅರಿವು ನಮ್ಮ ಸಮಾಜಕ್ಕಿಲ್ಲ ಎಂಬುದು ಲೇಖಕಿಯ ಕೊರಗು ಮತ್ತು ಅದು ನಿಜವೂ ಕೂಡ. ಸ್ಥೂಲವಾಗಿ ಕಾಣುವ ದೈಹಿಕ ಅಸಮರ್ಥತೆಯನ್ನು ಗುರುತಿಸಲು ಸಾಧ್ಯ ಮತ್ತು ಸಿಗುವಂತಹ ಪ್ರೋತ್ಸಾಹದಿಂದ ಅವರಿಗೆ ಆತ್ಮವಿಶ್ವಾಸವನ್ನು ಗಳಿಸಿಕೊಳ್ಳಲೂ ಸಾಧ್ಯ. ಆದರೆ ಮಾನಸಿಕ ಸಮಸ್ಯೆ ಇರುವವರು ಹಾಗೆ ಆತ್ಮವಿಶ್ವಾಸವನ್ನು ಗಳಿಸಿಕೊಂಡು ಜೀವನ್ಮುಖಿಯಾಗಿ ಹೋರಾಡಬೇಕೆಂದರೆ ಗುಣಮುಖವಾಗುವ ಲಕ್ಷಣಗಳನ್ನು ತೋರಬೇಕು ಎಂದು ಅಮೃತಾ ರಕ್ಷಿದಿ ಹೇಳುವ ಕಾರಣವೇನೆಂದರೆ ತಾನೇ ಸ್ವತಃ ಪಾರಾನಾಯ್ಡ್ ಸ್ಕೀಜೋಫ್ರೇನಿಯಾದಿಂದ ಬಳಲಿದ್ದ ಅನುಭವಗಳು.

ಅಮೃತಯಾನ ಐದು ಪುಸ್ತಕಗಳ ಗುಚ್ಛ. ಒಂಟಿ ಮನೆಯ ಪುಟಾಣಿ, ಪುಟ್ಟ ಮಗುವಿನ ಶಾಲಾ ದಿನಗಳು, ತನ್ನೊಳಗಿನ ಪ್ರಪಂಚ, ಕನಸುಗಳ ಲೋಕದಲ್ಲಿ ಮತ್ತು ಅಂತರಂಗದ ಪಯಣ. ಈ ಪುಸ್ತಕಗಳು ಏನನ್ನು ಹೇಳುತ್ತವೆ ಎಂದು ಶೀರ್ಷಿಕೆಗಳು ನೇರವಾಗಿಯೇ ಧ್ವನಿಸುತ್ತವೆ.

ನಮ್ಮ ಮನೆಯ ಅಥವಾ ನೆರೆಮನೆಯ ಹೆಣ್ಣುಮಗುವೊಂದು ನಮ್ಮೊಡನೆ ಕುಳಿತುಕೊಂಡು ಆಪ್ತವಾಗಿ ತನ್ನ ಅನುಭವಗಳನ್ನು, ಕನಸುಗಳನ್ನು, ತನ್ನ ಬಾಧೆಗಳನ್ನು ಹಂಚಿಕೊಂಡಷ್ಟು ಸಹಜವಾದ ಬರವಣಿಗೆ. ಈ ಲೇಖಕಿ ಚಿತ್ರಕಲಾವಿದೆಯೂ ಆಗಿರುವ ಛಾಯೆಯನ್ನು ತನ್ನ ಬರಹದಲ್ಲಿ ಓದುಗರಿಗೆ ಚಿತ್ರಣವನ್ನು ಕಟ್ಟಿಕೊಡುವುದು ಬರಹವನ್ನು ಆಪ್ತವಾಗಿಸುತ್ತದೆ, ನಮ್ಮನ್ನೂ ಆ ಕಾಲಕ್ಕೆ, ದೇಶಕ್ಕೆ, ಸಂಗತಿಗಳಿಗೆ ಕರೆದೊಯ್ಯುತ್ತದೆ.

ರಕ್ಷಿದಿಯಲ್ಲಿರುವ ತಮ್ಮ ಮನೆ, ಪರಿಸರ, ಅದರ ವಿವರಣೆಗಳೆಲ್ಲವೂ ತೆರೆದುಕೊಳ್ಳುತ್ತಾ ಬರಿಯ ಚಿತ್ರಗಳನ್ನು ಮಾತ್ರವಲ್ಲದೇ ಗಾಳಿಗಂಧವನ್ನು ಉಸಿರಾಡುವಂತೆ ಮಾಡುತ್ತದೆ. ತನ್ನ ಅಪ್ಪ, ಅಮ್ಮ, ಅಣ್ಣಯ್ಯ, ಅಜ್ಜಿ, ಅಜ್ಜಯ್ಯನ ಜೊತೆ ಜೊತೆಗೆ ಇತರ ಸಹಜೀವಿಗಳನ್ನು ಪರಿಚಯಿಸುವಾಗ ಅವರ ವ್ಯಕ್ತಿತ್ವದ ಪರಿಚಯವು ಸ್ಥೂಲವಾಗಿರದೇ ಭಾವುಕವಾಗಿಯೂ ಮತ್ತು ಪದರಗಳಾಚೆ ನೋಡಿದರೆ ಮಾನಸಿಕ ವ್ಯಕ್ತಿತ್ವಗಳನ್ನೂ ಸೂಚಿಸಿರುವುದನ್ನು ಕಾಣಬಹುದು. ಸಣ್ಣದು ಎನಿಸಬಹುದಾದ ಸಂಗತಿಗಳೆಲ್ಲವೂ ಮನನಕ್ಕೆ ಒಳಗಾಗಿ, ಚಿಂತನದಲ್ಲಿ ಎರಕ ಹೊಯ್ದು ಸೂಕ್ಷ್ಮ ಸಂವೇದನೆಯಲ್ಲಿ ಅಚ್ಚುಹೊಯ್ದಂತೆ ಮನದೊಳಗೆ ಪ್ರವೇಶಿಸುತ್ತದೆ. ಅಮೃತಾ ತನ್ನನ್ನು ತಾನು ಸಾಕ್ಷೀಕರಿಸಿಕೊಳ್ಳುವಂತೆ ಸಂಗತಿಗಳನ್ನು ವಿವರಿಸಿರುವುದು ಅನನ್ಯ.

ತಾನು ಕೇಳಿದ ಕತೆಗಳು, ತಾನು ಹಾದು ಹೋಗಬೇಕಾದ ಸಾಂಸ್ಕೃತಿಕ ಸಂಗತಿಗಳನ್ನು ಬರಿದೇ ಸಾಕ್ಷೀಕರಿಸುವುದಕ್ಕಿಂತ ಅದನ್ನು ದಾಖಲು ಮಾಡುವಾಗ ವಹಿಸಿರುವ ಎಚ್ಚರದಲ್ಲಿ ಸಾಹಿತ್ಯದ ತಂತ್ರಗಾರಿಕೆಯ ಬಗ್ಗೆ ಹೊಂದಿರುವ ಪರಿಣತಿಯು ಬೆರಗುಗೊಳಿಸುತ್ತದೆ. ಆ ಬೆರಗಿನ ಕಾರಣವೇ ಪ್ರಾಮಾಣಿಕ ನಿವೇದನೆ.

ಅಮೃತಾ ತನ್ನ ತಂದೆಯ ದೆಸೆಯಿಂದ ದೊರಕಿದ ಸಾಹಿತ್ಯದ ಮತ್ತು ಸಾಂಸ್ಕೃತಿಕ ಪರಿಸರವನ್ನು ಉಸಿರಾಡಿರುವುದರ ಉಲ್ಲೇಖಗಳು ಸಾಧಾರಣವಲ್ಲ. ತನಗೆ ಲಭ್ಯವಾದ ಓದು, ಚಿತ್ರಕಲೆಯ ಅಭ್ಯಾಸ, ಸಾಹಿತಿ, ರಂಗಕರ್ಮಿಗಳು ಮತ್ತು ನಿರ್ದೇಶಕರೊಡನೆ ಒಡನಾಟ, ರಂಗಭೂಮಿಯ ಅನುಭವ; ಹೀಗೆ ಎಲ್ಲವನ್ನೂ ಪ್ರಸ್ತುತಪಡಿಸುವ ಆ ಬಗೆಯಲ್ಲಿ ಓದುಗರನ್ನೂ ಜೊತೆಗಿರಿಸಿಕೊಂಡು ಒಂದು ಪಕ್ಕದಲ್ಲಿ ಕೂರಿಸಿಕೊಂಡೋ ಅಥವಾ ಕಿಟಕಿಯಲ್ಲಿ ನಿಂತು ನೋಡಿಕೊಂಡಿರುವ ಹಾಗೆ ಮಾಡಿರುವುದು ಸಾಹಿತ್ಯದ ತಂತ್ರಗಾರಿಕೆ ಎನ್ನುವುದಕ್ಕಿಂತ ಅಮೃತಾ ದೃಷ್ಟಿಯಲ್ಲಿದ್ದ ಸರಳ ಮತ್ತು ಪ್ರಾಮಾಣಿಕ ಧೋರಣೆ ಇರಬಹುದು ಎಂದು ಭಾಸವಾಗುತ್ತದೆ.

ತನ್ನ ಅನುಭವಗಳ ಸೌಂದರ್ಯವನ್ನು ಕಣ್ಣಿಗೆ ಕಟ್ಟಿಕೊಟ್ಟಹಾಗೆ, ತನಗೆ ಬರುತ್ತಿದ್ದ ಕೋಪವನ್ನು, ಅವರಿವರ ಟೀಕೆ ಮತ್ತು ರಗಳೆಗಳು ತಂದೊಡ್ಡುತ್ತಿದ್ದ ಉಪದ್ರವಗಳನ್ನೂ ಹೇಳುತ್ತಲೇ, ಅವರ ಮಾನಸಿಕ ಸ್ಥಿತಿಗಳನ್ನು, ವರ್ತನೆಗಳ ಪ್ರತಿವರ್ತನೆಗಳ ಸೂಕ್ಷ್ಮತೆಗಳನ್ನು ವಿವೇಚಿಸುವರು.

ಭ್ರಮೆ ಮತ್ತು ನಿಜಗಳ ನಡುವಿನ ಸಲ್ಲಾಪ ಮತ್ತು ಸಂಘರ್ಷಗಳು, ಮೂರ್ತ ಮತ್ತು ಅಮೂರ್ತಗಳನ್ನು ಕಾಣುವ ಪ್ರತಿಮೆಗಳಲ್ಲೇ ಎರಕ ಹುಯ್ಯುವಂತಹ ಮನಶಾಸ್ತ್ರೀಯ ದೃಷ್ಟಿಕೋನಗಳು, ಹೊರಗಿನ ಮತ್ತು ಒಳಗಿನ ತಾಕಲಾಟದಲ್ಲಿ ಡೋಲಾಯಮಾನವಾದ ಭಾವನೆಗಳ ಭಿತ್ತಿಗಳು; ಎಲ್ಲವೂ ತನ್ನ ತಾನು ಸಾಕ್ಷೀಕರಿಸಿಕೊಂಡಿರುವ ಒಂದು ಮಹತ್ವದ ದಾಖಲೆ ಈ ಅಮೃತಯಾನ.

ಅಮೃತ ತಾನೇ ಹೇಳಿರುವಂತೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರನ್ನು ಅರಿಯುವ ಮತ್ತು ಉಪಚರಿಸುವ ಬಗೆಯನ್ನು ಸ್ಪಷ್ಟೀಕರಿಸಿಕೊಂಡಿಲ್ಲದ ಸ್ಥಿತಿ ನಮ್ಮ ಭಾರತದಲ್ಲಿದೆ. ಅದಕ್ಕೆಂದು ಇರುವ ವೈಜ್ಞಾನಿಕ ಮತ್ತು ವೈದ್ಯಕೀಯ ಸೌಲಭ್ಯವು ಇರುವ ಸಮಸ್ಯೆಗಳ ಗಾತ್ರದ ಮುಂದೆ ಬಹಳ ಪುಟ್ಟ ಕಣವಾಗಿದೆ. ಅಮೃತಾಳ ಬರಹ ಹಲವು ರೀತಿಗಳಲ್ಲಿ ಕಣ್ಣು ತೆರೆಸುವಂತದ್ದು.

ಬರಿಯ ತನ್ನ ನಲಿವಿನ ಪ್ರದರ್ಶನ ಮತ್ತು ನೋವಿನ ನಿವೇದನೆಯ ದಾಖಲೆಯಾಗಿರದೇ ಆಕೆಯದಂತಹ ಹಲವು ಬದುಕುಗಳ ಮತ್ತು ಜೀವಿಗಳ ಕಡೆಗೆ ಗಮನ ನೀಡಲು ಕೈತೋರುವಂತಿದೆ.

ಅಮೃತಾ ಈಗ ನಮ್ಮೊಡನಿಲ್ಲ. ಅವಳೇ ಹೇಳಿರುವಂತೆ,

“1992ರಲ್ಲಿ ಅಮೃತಾ ಎಂಬ ಕಾಲಯಾನಿ ನಮ್ಮ ಉದರದ ಮೂಲಕ ಭೂಸ್ಪರ್ಶವನ್ನು ಮಾಡಿದಳು. ಅವಳ ಇಪ್ಪತ್ತೈದು ವರ್ಷಗಳ ಸುದೀರ್ಘ ಕಥಾನಕವನ್ನು ಈಗ ನಿಮ್ಮ ಮುಂದಿಟ್ಟಿದ್ದಾಳೆ”. ಪುಸ್ತಕ ಬಿಡುಗಡೆಯ ಸಿದ್ಧತೆಯಾಗುತ್ತಿದ್ದಂತೆ, ಅವಳ ಬದುಕಿನ ಆದ್ಯತೆಯೇ ಬದಲಾಗುತ್ತ ಹೋಯಿತು. ಅವಳ ಕೊನೆಯ ಚಿತ್ರವೂ ಅಪೂರ್ಣ. ಗೆಳೆಯರೊಬ್ಬರ ಮಾತಿನಂತೆ “ಅಪೂರ್ಣತೆಯಲ್ಲಿಯೇ ಆಕೆಯ ಇರುವಿಕೆಯನ್ನು ಕಾಣುವ ಅವಕಾಶವನ್ನು ಉಳಿಸಿ ಹೋಗಿದ್ದಾಳೆ.”

ಆದರೆ ಟೇಬಲ್ಲಿನ ಮೇಲೆ ಸದಾ ಕಾಣುವಂತೆ ಕುಳಿತಿರುವ ಅಮೃತಾಯಾನ ಬರಿಯ ಪುಸ್ತಕಗಳಾಗಿರದೆ ಕೈಗೆಟುಕಿದವರನ್ನೆಲ್ಲಾ ತನ್ನೂರನ್ನು, ಮನೆಯನ್ನು, ಚಟುವಟಿಕೆಗಳನ್ನು, ಆಪ್ತರನ್ನು ತೋರಲು ಕರೆದುಕೊಂಡು ಹೋಗುತ್ತಿರುತ್ತಾಳೆ. ತನ್ನ ಅಂತರಂಗದ ಕದವನ್ನು ತೆರೆದು ತೋರುವ ನೆಪದಲ್ಲಿ ನಮ್ಮಂತರಂಗವನ್ನೂ ಇಣುಕಿ ನೋಡಿಕೊಳ್ಳುವಂತೆ ಮಾಡುತ್ತಾಳೆ. ತುಟಿಯ ಮೇಲೆ ನಗು ತರುತ್ತಾಳೆ. ಕಂಗಳಲ್ಲಿ ಕಂಬನಿ ತರಿಸುತ್ತಾಳೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...