Homeನೂರರ ನೋಟಕೊರೋನಾ ಕೊನೆಗೊಳ್ಳಲಿ : ಮೋದಿ ಷಾ ವಿರುದ್ಧ ಹೋರಾಟ ಆರಂಭವಾಗಲಿ

ಕೊರೋನಾ ಕೊನೆಗೊಳ್ಳಲಿ : ಮೋದಿ ಷಾ ವಿರುದ್ಧ ಹೋರಾಟ ಆರಂಭವಾಗಲಿ

- Advertisement -
- Advertisement -

ಮೋದಿ ಷಾ ಅವರ ಮಟ್ಟಿಗೆ ಕೊರೋನಾ ಒಂದು ವರವಾಗಿ ಪರಿಣಮಿಸಿತು. ಅವರ ಮೇಲಿನ ಹೋರಾಟ ಮುಂದಕ್ಕೆ ಹೋಯಿತು. ಮುಂದಕ್ಕೆ ಹೋಯಿತೇ ಹೊರತು ನಿಲ್ಲುವುದಲ್ಲ. ಕೊರೋನಾ ಬರದಿದ್ದರೆ ಈ ವೇಳೆಗೆ ಮೋದಿ ಮತ್ತು ಷಾ ಜನಗಣತಿ ಆರಂಭಿಸುತ್ತಿದ್ದರು. ಯಾರು ಯಾರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಬಹುದೆಂದು home work ಆರಂಭಿಸುತ್ತಿದ್ದರು. ಇದರ ಜೊತೆಜೊತೆಗೇ ಮೋದಿ ಸರ್ಕಾರದ ವಿರುದ್ಧ ಘರ್ಷಣೆ ಆರಂಭವಾಗುತ್ತಿತ್ತು. ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಇತ್ಯಾದಿಗಳನ್ನು ಹಿಂಪಡೆಯಿರಿ ಎಂದು ದಲಿತರು, ಅದಿವಾಸಿಗಳು, ಮುಸ್ಲಿಮರು ದೇಶವ್ಯಾಪ್ತಿ ಚಳುವಳಿ ಆರಂಭಿಸುತ್ತಿದ್ದರು. ಕೊರೋನಾ ಸೈತಾನನ ಸಲುವಾಗಿ ಹಿಂದುತ್ವ ಮಂತಾಧರ ವಿರುದ್ಧ, ನಿಷ್ಕ್ರಿಯ ಸರ್ಕಾರದ ವಿರುದ್ಧ ನಡೆಯಬೇಕಿದ್ದ ಧರ್ಮಯುದ್ದವನ್ನು ಮುಂದೂಡಬೇಕಾದ ಅನಿವಾರ್ಯ ಸೃಷ್ಟಿಯಾಯಿತು.

ಮೋದಿ ಷಾ ನಮಗೆಲ್ಲ 5, 5 ಸಾವಿರ ಕೊಟ್ಟರು ಎಂದು ಜನ ಅಂದುಕೊಂಡಾರು ಎಂಬ ಬ್ರಾಂತಿ ಮೋದಿ-ಷಾಗಳಿಗಿದೆ. ಕೊರೋನಾ ನಮ್ಮ ಅನ್ನ ಕಿತ್ತುಕೊಂಡಿತು, ನಮ್ಮ ಉದ್ಯೋಗ ಕಿತ್ತು ಕೊಂಡಿತು, ನಾವು ನಮ್ಮೂರಿಗೆ ಹೋಗುತ್ತೇವೆ ಎಂದು ವಲಸೆ ಬಂದ ಕಾರ್ಮಿಕರು, ಅಸಂಖ್ಯಾತ ಅಸಂಘಟಿತ ಕಾರ್ಮಿಕರು ಈ ಸಂದರ್ಭದಲ್ಲಿ ಅನುಭವಿಸಿದ ಕಷ್ಟ ಕೋಟಲೆಗಳನ್ನು ಈ ಜನ್ಮದಲ್ಲಿ ಅವರು ಮರೆಯುವುದಿಲ್ಲ. ಸರ್ಕಾರ ಇವರಿಗೆ ಅಷ್ಟೊ ಇಷ್ಟೋ ಹಣ ನೀಡಿದ್ದರೆ ಅದು ಸರ್ಕಾರದ ಹಣವೇ ಹೊರತು ಅವರ ಔದಾರ್ಯವಲ್ಲ. ಸರ್ಕಾರ ತಾನು ಎರಚಿದ ಪುಡಿಕಾಸಿನ ನೆರವನ್ನು ಮತಗಳಿಕೆಯ ಸಾಧನವನ್ನಾಗಿಸಿಕೊಳ್ಳುವುದರಲ್ಲಿ ಸಂದೇಹವಿಲ್ಲ. ಆದರೆ ಈ ಬಗೆಯ ನೆರವು ನೀಡಿದ ಸರ್ಕಾರ ಶಿಸ್ತುಬದ್ಧನಾಗಿ ಎಲ್ಲ ತರದ ಬಡವರಿಗು ಹಂಚಿದ್ದರೆ ಭೇಷ್ ಅನ್ನಬಹುದಾಗಿತ್ತು. ಮೋದಿಯವರು ನಮ್ಮ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹಣ ಹಂಚಿದಾರಾದರೂ ಅದು ಬಕಾಸುರನ ಬಾಯಿಗೆ ಅರೆ ಮಜ್ಜಿಗೆ ಸುರಿದಂತೆ ಎಲ್ಲ ಜನಕ್ಕೂ ತಲುಪಲಿಲ್ಲ.

ಸರ್ಕಾರದ ವಿಚಾರದಲ್ಲಿ ಬಡಜನರ ಆಕ್ರೋಶ ಇದೆ. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚಿರುವುದು ಇಡೀ ಸಮಾಜಕ್ಕೆ ಗೊತ್ತಾಗಿದೆ. ವಿವಿಧ ರಾಜ್ಯಗಳಿಂದ ಬಂದ ಅಸಂಘಟಿತ ಲಕ್ಷಾಂತರ ಕಾರ್ಮಿಕರು ತಮ್ಮ ಸಂಪಾದನೆ ನಿಂತುಹೋದ ಕಾರಣದಿಂದ ನಮ್ಮನ್ನು ನಮ್ಮ ಊರುಗಳಿಗೆ ಕಳುಹಿಸಿ ಕೊಡಿ ಎಂದು ದುಂಬಾಲು ಬಿದ್ದರು. ಕೊರೋನಾ ಆರಂಭವಾದ ಹೊತ್ತಿನಲ್ಲೆ ಪ್ರಾರ್ಥಿಸಿದರೂ ಸರ್ಕಾರ ಅವರಿಗೆ ಹೋಗಲು ತಡೆಹಾಕಿತು. ಕೊನೆಯ ಪಕ್ಷ ಕೊರೋನಾ ಸೋಂಕಿಲ್ಲದವರನ್ನಾದರು ಕಳುಹಿಸಬೇಕಾಗಿತ್ತು. ಸರ್ಕಾರ ಅವರನ್ನೆಲ್ಲ ಇಲ್ಲೆ ಬಂಧನದಲ್ಲಿಟ್ಟಂತೆ ಇಟ್ಟು ಅವರಿಗೆ ಅತ್ತ ಕೂಲಿಯೂ ಇಲ್ಲ ಇತ್ತ ಪರಿಹಾರವೂ ಇಲ್ಲ ಎಂದು ಸರ್ಕಾರ ಕೈಚೆಲ್ಲಿತು. ಇವರಲ್ಲಿ ಕೆಲವರಿಗೆ ಪರಹಾರ ಸಿಕ್ಕಿರುವುದೂ ಕೊರೋನಾ ಅಮರಿಕೊಂಡ 2-3 ತಿಂಗಳ ಮೇಲೆ? ಅವರು ಅರೆಜೀವ, ಕೊರೆಜೀವ ಇಟ್ಟುಕೊಂಡೆ ಆ ದಿನಗಳನ್ನು ಕಳೆದರು.

ಆನಂತರ 2 ತಿಂಗಳ ಮೇಲೆ ಕರ್ನಾಟಕದ ವಲಸೆ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸುವ ನಿರ್ಧಾರಕ್ಕೆ ಸರ್ಕಾರ ಬಂತು. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಡಬಲ್ ಛಾರ್ಜ್ ವಸೂಲಿ ಮಾಡಿ ಎಂದು ಸರ್ಕಾರ ಹೇಳಿತು. ಅದಕ್ಕೆ ಪ್ರತಿಭಟನೆ ಬಂತು. ಆಗ ಸರ್ಕಾರ ಹೋಗುವ ಚಾರ್ಜ್ ಕೊಟ್ಟರೆ ಸಾಕು ಎಂದಿತು. ಕಾರ್ಮಿಕರು ನಾವೆಲ್ಲಿಂದ ತರೋಣ ಹಣ ಎಂದರು. ಸರ್ಕಾರ ತನ್ನ ಪಟ್ಟು ಬಿಡಲಿಲ್ಲ. ಆಗ ಕಾಂಗ್ರೆಸ್ ಸಂಸ್ಥೆಯವರು ನಾವು ಒಂದು ಕೋಟಿ ಚೆಕ್ ನೀಡುತ್ತೇವೆ ಅವರಿಂದ ಹಣ ವಸೂಲಿ ಮಾಡದೆ ಮರ್ಯಾದೆಯಿಂದ ಕಳುಹಿಸಿಕೊಡಿ ಎಂದು ಸವಾಲೊಡ್ಡಿತು. ಸರ್ಕಾರಕ್ಕೆ ಪೀಕಲಾಟ ಬಂತು.

ಟಿಕೆಟ್ ಹಣ ವಸೂಲಿ ಮಾಡದಿದ್ದರೆ ಕಾಂಗ್ರೆಸ್ಸಿನ ಒತ್ತಡಕ್ಕೆ ಸಿಲುಕಿದಂತಾಗುತ್ತದೆ. ವಸೂಲಿ ಮಾಡಿದರೆ ಆ ಜನ ಶಾಪ ಹಾಕುತ್ತಾರೆ. ಮುಂದಿನ ಚುನಾವಣೆಯಲ್ಲಿ ನಮಗೆ ಮತ ಹಾಕದೆಯೂ ಇರಬಹುದು. ಇತ್ತ ಪುಲಿ ಅತ್ತ ದರಿ ಎನ್ನುವ ಸನ್ನಿವೇಶಕ್ಕೆ ಕಾಂಗ್ರೆಸ್ ನಮ್ಮನ್ನು ದೂಡಿದೆ. ಇದರ ಫಲವಾಗಿ ಕಾರ್ಮಿಕ ವರ್ಗ ಚುನಾವಣೆ ವೇಳೆಯಲ್ಲಿ ನಮ್ಮ ಎದುರು ಬಿದ್ದರೆ ಗತಿ ಏನು? ಎಂದು ಯೋಚಿಸಿ ಉಚಿತವಾಗಿ ಅವರನ್ನು ಸಾಗಿಸುವುದೇ ಬುದ್ಧಿವಂತಿಕೆ ಎಂಬ ತೀರ್ಮಾನಕ್ಕೆ ಬಂದರು. ಕಾಂಗ್ರೆಸ್ ಈ ಸಂದರ್ಭದಲ್ಲಿ ಟ್ರಂಪ್‌ಕಾರ್ಡ್ ಹಾಕಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸಿದಲ್ಲದೆ ಕಾರ್ಮಿಕರ ಕೃತಜ್ಞತೆಗೂ ಪಾತ್ರವಾಯಿತು.

ಕೊರೋನಾ ಆದಷ್ಟು ಬೇಗ ಮುಕ್ತಾಯಗೊಳ್ಳಲಿ ನಮ್ಮ ಮೋದಿ ಷಾ ವಿರುದ್ಧ ಹೋರಾಟ ಆರಂಭವಾಗಲಿ ಎಂದು ಆಶಿಸುತ್ತೇನೆ.


ಇದನ್ನೂ ಓದಿ: ಹಸಿದವರ ಮುಂದೆ ಮೃಷ್ಟಾನ್ನದ ಕತೆ ಹೇಳಿದವರು… 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...