Homeಮುಖಪುಟಮುದುಕರು ಎನೊ ಇದ್ದೀವಿ, ಮೂರ್ಖರು ಹೌದೊ ಅಲ್ಲವೋ ಅವರವರ ಗ್ರಹಿಕೆಗೆ ಬಿಟ್ಟದ್ದು ಅಂದಿದ್ದ ಬ್ರಿಟನ್ ನ್ಯಾಯಾಧೀಶ

ಮುದುಕರು ಎನೊ ಇದ್ದೀವಿ, ಮೂರ್ಖರು ಹೌದೊ ಅಲ್ಲವೋ ಅವರವರ ಗ್ರಹಿಕೆಗೆ ಬಿಟ್ಟದ್ದು ಅಂದಿದ್ದ ಬ್ರಿಟನ್ ನ್ಯಾಯಾಧೀಶ

ಬ್ರಿಟಿಷ್ ನ್ಯಾಯಾಂಗ ವ್ಯವಸ್ಥೆಯಲ್ಲಿ ಬರೀ ರಾಜಕಾರಣಿಗಳು ತುಂಬಿದಾರ. ಅದು ಬ್ಯಾಡ. ನಾವು ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ಹೊಂದೋಣ ಅಂತ ಹೇಳಿ, ಡಾ. ಅಂಬೇಡ್ಕರ್ ಹಾಗೂ ಸಂವಿಧಾನ ಸಮಿತಿಯ ಇತರ ರಾಷ್ಟ್ರ ಪ್ರೇಮಿಗಳು ನಮಗ ಬೇರೆ ಪದ್ಧತಿ ಮಾಡಿಕೊಟ್ಟರು.

- Advertisement -
- Advertisement -

ಬ್ರಿಟನ್‌ನ ಪ್ರಜೆಗಳಿಗೆ 2009 ಅನ್ನುವುದು ಐತಿಹಾಸಿಕ ವರ್ಷ. ಅದು ಯಾಕ ಅಂದ್ರ, ಅಲ್ಲಿ ಒಂದು ಐತಿಹಾಸಿಕ ಘಟನೆ ನಡೀತು.

ಆ ವರ್ಷದ ಸುರುವಾತಿಗೆ ಅಲ್ಲಿನ ರಾಜ ವಂಶಸ್ಥ ರಾಜಕುಮಾರ ವಿಲಿಯಮ್ ಅವರು ತಮ್ಮ ಪದವಿ ಮುಗಿಸಿ ಬ್ರಿಟಿಷ್ ವಾಯುಸೇನೆ ಸೇರಿಕೊಂಡರು, ಅದರ ತುರ್ತು ಸೇವೆ ಹಾಗೂ ರಕ್ಷಣೆ ವಿಭಾಗದ ಹುಡುಕು- ಮತ್ತು – ಉಳಿಸು ವಿಭಾಗದ ಫ್ಲೈಟ್ ಲೆಫ್ಟ್ ನೆಂಟ್ ಆಗಿ ಕೆಲಸ ಮಾಡಿದರು.

ಆ ವರ್ಷದ ಕೊನೆಗೆ ಅವರು ತಮ್ಮ ಹೇರ್‌ಸ್ಟೈಲ್ ಬದಲಾಯಿಸಿಕೊಂಡರು.

ನಮ್ಮ ಧಾರವಾಡ ಕಡೆ ಇಂಥವುಕ್ಕೆಲ್ಲಾ ಯಾಕ ಐತಿಹಾಸಿಕ ಘಟನೆ ಅಂತೇವಿ ಅಂದ್ರ, ನಾವು ಆ ಕಾಲದ ಬಗ್ಗೆ ಮಾತಾಡೋವಾಗ, ನಾವು ಆ ಕಾಲಕ್ಕ ಹೋಗಿ- ನೋಡರೆಪಾ ಇದು ಹಿಂಗ ಐತಿ, ಅದು ಹಂಗ ಐತಿ ಅಂತ ಹೇಳತೇವಿ. ಅದಕ್ಕ ಅದು ಐತಿಹಾಸಿಕ.

ಆದರ ನಾ ಹೇಳ್ತಾ ಇರೋದು ಇಂಗ್ಲಂಡಿನ ಐತಿಹಾಸಿಕ ಘಟನೆ ವಿಲಿಯಮ್ ಅವರ ನೌಕರಿ ಅಥವಾ ತಲೆಗೂದಲು ಬಿಡುವ ಶೈಲಿಯ ಸುದ್ದಿ ಅಲ್ಲ.

ಅಲ್ಲಿ ಮೊದಲ ಬಾರಿಗೆ ಸುಪ್ರೀಂ ಕೋರ್ಟು ಅನ್ನುವುದು ಶುರು ಆಯಿತು. ಹಂಗಅಂದ್ರ ಒಂದು ಸಾವಿರ ವರ್ಷ ಇತಿಹಾಸ ಇರೋ ಇಂಗ್ಲೀಷ್ ನ್ಯಾಯದಾನ ವ್ಯವಸ್ಥೆಗೆ ಮುಖ್ಯಸ್ಥರು ಅನ್ನುವವರು ಇರಲೇ ಇಲ್ಲೇನು? ಮೇಲ್ಮನವಿ ಅನ್ನೋ ಅವಕಾಶ ಇರಲೇ ಇಲ್ಲೇನು?

ವಿಪರೀತ ಶ್ರೇಣೀಕೃತ ನ್ಯಾಯಾಂಗ ವ್ಯವಸ್ಥೆಯ ಒಳಗೆ ಇರೋ ಭಾರತೀಯರಿಗೆ ಈ ಥರ ಸಂದೇಹ ಬರೋದು ಸಹಜ. ಅದರಾಗ ನಾವು ನಮ್ಮ ನ್ಯಾಯಾಂಗ ಬ್ರಿಟಿಷರ ಮಾದರಿಯನ್ನು ಆಧರಿಸಿದ್ದು ಅಂತ ಹೆಮ್ಮೆಯಿಂದ ಹೇಳಿಕೊಳ್ಳೋರು. ಹಂಗಾಗಿ ನಮಗ ಒಂದು ದಾರಿ ತೋರಿಸಿ ಅವರು ಇನ್ನೊಂದು ಹಿಡಿದರೇನಪ್ಪಾ? ಅಂತ ಅನ್ನಿಸಿಯೇ ಅನ್ನಿಸತದ.

ಮಜಾ ಏನು ಅಂದ್ರ, ಇವೆಲ್ಲಾ ಇತ್ತು. ಆದರ ಅದರ ಸ್ವರೂಪ ಬೇರೆ ಇತ್ತು. ಆಶ್ಚರ್ಯಕರ ಸಂಗತಿ ಏನು ಅಂದ್ರ 1065ಇಸವಿಯಲ್ಲಿ ಶುರು ಆದ ಬ್ರಿಟನ್ ನ್ಯಾಯದಾನ ವ್ಯವಸ್ಥೆ ಒಳಗ ಸುಪ್ರೀಂ ಕೋರ್ಟು ಅನ್ನೋ ಪ್ರತ್ಯೇಕ ಅಂಗ ಇರಲೇ ಇಲ್ಲ.

ಅಲ್ಲಿನ ಸಂಸತ್ತಿನ ಮೇಲ್ಮನೆ ಸದಸ್ಯರು ಅಲ್ಲಿನ ಸರ್ವೋಚ್ಚ ನ್ಯಾಯಾಧೀಶರಾಗಿದ್ದರು. ನ್ಯಾಯಾಂಗದ ಸ್ವಾತಂತ್ರ‍್ಯವನ್ನು ಹಾಗೂ ನಮ್ಮ ರಾಜ್ಯಸಭೆಗೆ ನೇಮಕವಾಗುವ ಪುಣ್ಯಾತ್ಮರ ನವರಂಗೀ ವ್ಯಕ್ತಿತ್ವಗಳನ್ನ ಕಂಡ ಭಾರತೀಯರಿಗೆ ಇದನ್ನು ಅರಗಿಸಿಕೊಳ್ಳುವುದು ಕಷ್ಟ.

‘ಎಂಪಿ ಆಗೋವಂತ ಮನುಷ್ಯರು ನ್ಯಾಯಾಧೀಶರಾಗುವುದು, ನ್ಯಾಯ ನಿರ್ಣಯ ಮಾಡುವುದು ಹೆಂಗ ಸಾಧ್ಯ’ ಅಂತ ನಾವು ತಲಿ ಕೆರಕೋತ ಕೂಡಬಹುದು.

ಆದರ ಅಲ್ಲಿ ಹಂಗ ಆತು. ಅಷ್ಟ ಅಲ್ಲ, ಅದು ಒಂದು ಸಾವಿರ ವರ್ಷ ನಡೀತು. ಹಂಗ ಅಂತ ಅಲ್ಲಿನ ನ್ಯಾಯಾಧೀಶರು ಆಯೋಗ್ಯರಾಗಿರಲಿಲ್ಲ. ಭಾರತದ ದಿಕ್ಕು ಬದಲಿಸಿದ ಅನೇಕ ತೀರ್ಪುಗಳು ಅಲ್ಲಿಂದ ಹೊರಗಬಿದ್ದವು.

ಮೂರು ನೂರು ವರ್ಷಗಳ ಅವಧಿಯಲ್ಲಿ ಈಸ್ಟ್ ಇಂಡಿಯಾ ಕಂಪನಿಯವರು ಮಾಡಿದ ಅನೇಕ ಜನ ವಿರೋಧಿ ಆದೇಶಗಳನ್ನು ಪ್ರಿವಿ ಕೌನ್ಸಿಲ್ ತಳ್ಳಿಹಾಕಿತು. ಭಾರತೀಯರ ಮೇಲೆ ದಬ್ಬಾಳಿಕೆ ನಡೆಸಬೇಕು ಅಂತ ಬ್ರಿಟಿಷ್ ಸಂಸದರು ಪಾಸು ಮಾಡಿದ ಅನೇಕ ಕ್ರೂರ ಕಾನೂನುಗಳನ್ನ ಸ್ವಾಭಾವಿಕ ನ್ಯಾಯ ಹಾಗೂ ಸಿದ್ಧ ನ್ಯಾಯ ಪ್ರಕ್ರಿಯೆಯ ವಿರುದ್ಧವಾಗಿ ಇರೋ ಕಾರಣಗಳಿಗೆ ರದ್ದು ಮಾಡಿತು.

ಉದಾಹರಣೆಗೆ ರಾಜಾ ರಾಮ್ ಮೋಹನ್ ರಾಯ ಅವರು ಸತಿ ಪದ್ಧತಿ ನಿಷೇಧ ಮಾಡಲು ಹೋರಾಟ ನಡೆಸಿದಾಗ ಅಲ್ಲಿನ ‘ಪ್ರಿವಿ ಕೌನ್ಸಿಲ್’ ಅಂದ್ರ ಅಂದಿನ ಸುಪ್ರೀಂ ಕೋರ್ಟು, ನಿಷೇಧವನ್ನು ಎತ್ತಿ ಹಿಡಿಯಿತು. ರಾಮ್ ಮೋಹನ್ ರಾಯ ಅವರ ಬೆಂಬಲಕ್ಕ ನಿಂತುಕೊಂಡಿತು.

‘ಮೊಹರಿ ಬೀಬಿ ವಿ. ಧರ್ಮ ದಾಸ ಘೋಷ್’ ಎನ್ನುವ ಪ್ರಕರಣದಾಗ ವಯಸ್ಕರೊಂದಿಗೆ ಮಾತು ಕರಾರು ಸಾಧ್ಯ. ಚಿಕ್ಕ ಮಕ್ಕಳೊಂದಿಗೆ ಕರಾರು ಮಾಡಿಕೊಂಡರೆ ಅದು ಗೈರು ಕಾನೂನಿ ಅಂತ ಹೇಳಿತು. ಇಡೀ ಭಾರತೀಯ ಕರಾರು ಕಾನೂನು ಸಂಹಿತೆ ನಿಂತಿರೋದು ಈ ತೀರ್ಪಿನ ಮೇಲೆಯೇ.

ಬ್ರಿಟಿಷ್ ನ್ಯಾಯಾಂಗ ವ್ಯವಸ್ಥೆಯಲ್ಲಿ ಬರೀ ರಾಜಕಾರಣಿಗಳು ತುಂಬಿದಾರ. ಅದು ಬ್ಯಾಡ. ನಾವು ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ಹೊಂದೋಣ ಅಂತ ಹೇಳಿ, ಡಾ. ಅಂಬೇಡ್ಕರ್ ಹಾಗೂ ಸಂವಿಧಾನ ಸಮಿತಿಯ ಇತರ ರಾಷ್ಟ್ರ ಪ್ರೇಮಿಗಳು ನಮಗ ಬೇರೆ ಪದ್ಧತಿ ಮಾಡಿಕೊಟ್ಟರು.

ನಮ್ಮಲ್ಲಿ ನ್ಯಾಯಾಧೀಶರು ನ್ಯಾಯಾಧೀಶರನ್ನ ನೇಮಿಸುತ್ತಾರೆ. ಅದು ಅಲ್ಲದೇ ನ್ಯ್ಯಾಯಾಧೀಶರ ವಿರುದ್ಧ ಏನಾದರೂ ದೂರು ಬಂದರೆ ಅದನ್ನ ಅವರೇ ವಿಚಾರಣೆ ಮಾಡಿ ಅವರೇ ತೀರ್ಪು ಕೊಡ್ತಾರ. ಇದು ಯಾಕ್ ಅಂದ್ರ, ನ್ಯಾಯಾಂಗ ವ್ಯವಸ್ಥೆಯ ಮೇಲೆ ಆಡಳಿತ ವ್ಯವಸ್ಥೆಯ ನಿಯಂತ್ರಣ ಇರಬಾರದು. ಅವರು ತಮ್ಮ ಆತ್ಮ ನಿರೀಕ್ಷಣೆಯಿಂದ ತಾವೇ ತಮ್ಮನ್ನು ತಿದ್ದಿಕೊಳ್ಳಲಿ, ಅಂತ ಹೇಳಿ ಮಾಡಿರುವ ವ್ಯವಸ್ಥೆ.

ಅವರನ್ನು ರಚನಾತ್ಮಕವಾಗಿ ಟೀಕೆ ಮಾಡಬಹುದು ಆದರೆ ಸಬೂತು ಇಲ್ಲದೇ ಟೀಕೆ ಮಾಡಬಾರದು. ಅವರ ಕೆಲಸದ ಬಗ್ಗೆ ಸದುದ್ದೇಶದ ಟಿಪ್ಪಣಿ ಮಾಡಬಹುದು, ದುರುದ್ದೇಶಪೂರಿತವಾಗಿ ಮಾಡಬಾರದು. ತೀರ್ಪು ಕೊಡುವವನ ಮನಸ್ಸಿನ ಮೇಲೆ ಪರಿಣಾಮ ಬೀರುವಂತೆ, ಪಟ್ಟಭದ್ರ ಹಿತಾಸಕ್ತಿಯಿಂದ ಅಥವಾ ವೃಥಾ ಹಗರಣ ಸೃಷ್ಟಿಸುವಂತೆ ನಿಂದೆ ಮಾಡಬಾರದು ಅನ್ನುವ ನಿಯಮ ಇದೆ.

ಬ್ರಿಟನ್ನಿನಲ್ಲಿ ಗಾರ್ಡಿಯನ್ ಪತ್ರಿಕೆ ಒಮ್ಮೆ ನ್ಯಾಯಾಧೀಶರನ್ನ ಮೂರ್ಖ ಮುದುಕರು ಅಂತ ಮೂದಲಿಸಿತು. ಅದಕ್ಕೆ ಅಲ್ಲಿನ ನ್ಯಾಯಾಧೀಶ ಲಾರ್ಡ್ ಟೆಂಪಲ್ಮ್ಯಾ ಅವರು ‘ನಾವು ಮುದುಕರು ಅನ್ನುವುದು ಸತ್ಯ. ಮೂರ್ಖರು ಹೌದೊ ಅಲ್ಲವೋ ಅನ್ನುವುದು ಅವರವರ ಗ್ರಹಿಕೆಗೆ ಬಿಟ್ಟ ವಿಷಯ’ ಅಂತ ಹೇಳಿದರು. ಸರಕಾರವೇ ದಾಖಲಿಸಿದ ನ್ಯಾಯಾಂಗನಿಂದನೆ ಪ್ರಕರಣವನ್ನು ಕೈ ಬಿಟ್ಟರು. ಗಾರ್ಡಿಯನ್ ಪ್ರಕರಣ 1987ರಲ್ಲಿ ನಡೆದಿತ್ತು.

ರಾಜಕಾರಣಿಗಳೇ ನ್ಯ್ಯಾಯಾಧೀಶರಾಗಿದ್ದ ಬ್ರಿಟಿಷ್ ಸುಪ್ರೀಂ ಕೋರ್ಟು ಅತ್ಯಂತ ನ್ಯಾಯ ನಿಷ್ಟುರವಾಗಿ ನಡೆದುಕೊಂಡಾಗ, ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ಇರೋ ನಮ್ಮ ದೇಶದಾಗ ಯಾಕ ನಮ್ಮ ನ್ಯಾಯಾಧೀಶರು ಶೀಘ್ರ ಕೋಪದವರು ಇದ್ದಾರ?

ಡೇಲಿ ಮಿರರ ಪತ್ರಿಕೆ ನ್ಯಾಯಾಧೀಶರನ್ನ ಪ್ರಜೆಗಳ ವಿರೋಧಿಗಳು ಅಂತ ಕರೆದಾಗ `ಅದನ್ನು ಜನ ನಿರ್ಧರಿಸುತ್ತಾರೆ’, ಅಂತ ನ್ಯಾಯಾಂಗ ನಿಂದನೆ ಕೈ ಬಿಟ್ಟರು. ಇದು ನಡೆದಿದ್ದು 2016ರಾಗ. ಅಂದ್ರ ಹೊಸ ಸುಪ್ರೀಂ ಕೋರ್ಟು ಅಸ್ತಿತ್ವಕ್ಕೆ ಬಂದ ಮ್ಯಾಲೆ.

ಹಿರಿಯ ವಕೀಲ ಪ್ರಶಾಂತ್ ಭೂಷಣ ಅವರು ದಶಕಗಟ್ಟಲೆ ಜನಪರ ಹೋರಾಟ ಮಾಡಿದಾರು. ಹಿಂದೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಡಿ ಬೋಫೋರಸು ಹಗರಣದ ವಿಚಾರಣೆ ಬರುವಂತೆ ಮಾಡಿದರು. ಮೊನ್ನೆ ಮೊನ್ನೆ ಲೋಕಪಾಲ್ ಹೋರಾಟದಾಗ ಭಾಗಿ ಆದರು. ಅದರಿಂದ ಕಾಂಗ್ರೆಸ್ಸು ನಷ್ಟ ಅನುಭವಿಸುವಂತೆ ಆತು. ಆಮ್ ಆದಮಿ ಹಾಗೂ ಬಿಜೆಪಿ ಪಕ್ಷಗಳಿಗೆ ನೇರವಾಗಿ ಇಲ್ಲದಿದ್ದರೂ ಸುತ್ತು ಬಳಸಿ ಅನುಕೂಲವಾಗುವಂತೆ ಆತು. ಅದನ್ನು ಅವರು ರಾಜಕೀಯ ಕಾರಣ ಇಟ್ಟುಕೊಂಡು ಮಾಡಿಲ್ಲ ಅನ್ನೋದಕ್ಕೆ ಸಾಕ್ಷಿ ಏನು ಅಂದ್ರ ಅವರು ಕೇಜರಿವಾಲ್ ಪಕ್ಷ ಅಥವಾ ಸರಕಾರ ಸೇರಲಿಲ್ಲ. ಇನ್ನ ಇಂದಿನ ಸರಕಾರದ ಆಡಳಿತದ ವಿರುದ್ಧ ನಿರಂತರ ಹೋರಾಟ ಮಾಡಲಿಕ್ಕೆ ಹತ್ತ್ಯಾರ.

ಆಳುವ ಪಕ್ಷದ ವಿರೋಧಿಗಳು ನಮ್ಮ ವಿರೋಧಿಗಳು ಅಂತ ಎನರ ನ್ಯಾಯಾಂಗದವರು ತಿಳಕೋಂಡ್ರ ಅದು ಅವರ ತಪ್ಪಲ್ಲ. ನಮ್ಮ ತಪ್ಪು.

ಇದರಾಗ ಒಂದು ಸೂಕ್ಷ್ಮ ವಿಚಾರ ಐತಿ ನೋಡ್ರಿ.

ಅದು ಎನಪಾ ಅಂದ್ರ ಭಾರತದಲ್ಲಿ ಆಳುವ ಪಕ್ಷ, ವಿರೋಧ ಪಕ್ಷ ಅನ್ನೋ ಕಲ್ಪನೆ ಇಲ್ಲ. ಇಲ್ಲಿ ಇರೋದು ನಿನ್ನೆಯ ಆಳುವ ಪಕ್ಷ, ಇಂದಿನ ಆಳುವ ಪಕ್ಷ ಹಾಗೂ ನಾಳೆಯ ಆಳುವ ಪಕ್ಷ ಅಂತ ಪತ್ರಿಕೋದ್ಯಮ ತಜ್ಞ ಎಂ. ಎ. ಈಪನ್ ಅವರು ಹೇಳುತ್ತಿದ್ದರು. ನೀವು ನಿನ್ನೆಯ ಆಳುವ ಪಕ್ಷದ ವಿರೋಧ ಮಾಡರಿ, ಅಥವಾ ಇಂದಿನ ಆಳುವ ಪಕ್ಷದ ವಿರೋಧ ಮಾಡ್ರಿ, ನೀವು ಇಬ್ಬರಿಗೂ ವಿರೋಧಿಗಳೇ ಹೊರತು, ಯಾರಿಗೂ ಮಿತ್ರರಲ್ಲ. ಅದಕ್ಕೆ ಬಸವಣ್ಣ ಖಂಡಿತವಾದಿ, ಲೋಕ ವಿರೋಧಿ ಅಂತ ಹೇಳಿದ್ದು ಐತಿ ನೋಡ್ರಿಪಾ.

ಅಂದ ಹಂಗ ಇಲ್ಲೇ ನೋಡ್ರಿ ಮತ್ತೊಮ್ಮೆ `ಐತಿ’ ಅನ್ನೋದು ಬಂತು. ಇದೂ ಕೂಡ ಐತಿಹಾಸಿಕ ಆಗೋ ಲಕ್ಷಣ ಕಾಣಾಕ ಹತ್ಯಾವು. ಅಲ್ಲಾ!


ಇದನ್ನೂ ಓದಿ: ಭೂಷಣ್ ಪ್ರಕರಣ: ರಚನಾತ್ಮಕ ಟೀಕೆಯೊಂದನ್ನು ಸಹಿಸಲಾಗದಷ್ಟು ಸಂಕುಚಿತವೇ ಸುಪ್ರೀಮ್ ಭುಜಗಳು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...