Homeಮುಖಪುಟಮುದುಕರು ಎನೊ ಇದ್ದೀವಿ, ಮೂರ್ಖರು ಹೌದೊ ಅಲ್ಲವೋ ಅವರವರ ಗ್ರಹಿಕೆಗೆ ಬಿಟ್ಟದ್ದು ಅಂದಿದ್ದ ಬ್ರಿಟನ್ ನ್ಯಾಯಾಧೀಶ

ಮುದುಕರು ಎನೊ ಇದ್ದೀವಿ, ಮೂರ್ಖರು ಹೌದೊ ಅಲ್ಲವೋ ಅವರವರ ಗ್ರಹಿಕೆಗೆ ಬಿಟ್ಟದ್ದು ಅಂದಿದ್ದ ಬ್ರಿಟನ್ ನ್ಯಾಯಾಧೀಶ

ಬ್ರಿಟಿಷ್ ನ್ಯಾಯಾಂಗ ವ್ಯವಸ್ಥೆಯಲ್ಲಿ ಬರೀ ರಾಜಕಾರಣಿಗಳು ತುಂಬಿದಾರ. ಅದು ಬ್ಯಾಡ. ನಾವು ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ಹೊಂದೋಣ ಅಂತ ಹೇಳಿ, ಡಾ. ಅಂಬೇಡ್ಕರ್ ಹಾಗೂ ಸಂವಿಧಾನ ಸಮಿತಿಯ ಇತರ ರಾಷ್ಟ್ರ ಪ್ರೇಮಿಗಳು ನಮಗ ಬೇರೆ ಪದ್ಧತಿ ಮಾಡಿಕೊಟ್ಟರು.

- Advertisement -
- Advertisement -

ಬ್ರಿಟನ್‌ನ ಪ್ರಜೆಗಳಿಗೆ 2009 ಅನ್ನುವುದು ಐತಿಹಾಸಿಕ ವರ್ಷ. ಅದು ಯಾಕ ಅಂದ್ರ, ಅಲ್ಲಿ ಒಂದು ಐತಿಹಾಸಿಕ ಘಟನೆ ನಡೀತು.

ಆ ವರ್ಷದ ಸುರುವಾತಿಗೆ ಅಲ್ಲಿನ ರಾಜ ವಂಶಸ್ಥ ರಾಜಕುಮಾರ ವಿಲಿಯಮ್ ಅವರು ತಮ್ಮ ಪದವಿ ಮುಗಿಸಿ ಬ್ರಿಟಿಷ್ ವಾಯುಸೇನೆ ಸೇರಿಕೊಂಡರು, ಅದರ ತುರ್ತು ಸೇವೆ ಹಾಗೂ ರಕ್ಷಣೆ ವಿಭಾಗದ ಹುಡುಕು- ಮತ್ತು – ಉಳಿಸು ವಿಭಾಗದ ಫ್ಲೈಟ್ ಲೆಫ್ಟ್ ನೆಂಟ್ ಆಗಿ ಕೆಲಸ ಮಾಡಿದರು.

ಆ ವರ್ಷದ ಕೊನೆಗೆ ಅವರು ತಮ್ಮ ಹೇರ್‌ಸ್ಟೈಲ್ ಬದಲಾಯಿಸಿಕೊಂಡರು.

ನಮ್ಮ ಧಾರವಾಡ ಕಡೆ ಇಂಥವುಕ್ಕೆಲ್ಲಾ ಯಾಕ ಐತಿಹಾಸಿಕ ಘಟನೆ ಅಂತೇವಿ ಅಂದ್ರ, ನಾವು ಆ ಕಾಲದ ಬಗ್ಗೆ ಮಾತಾಡೋವಾಗ, ನಾವು ಆ ಕಾಲಕ್ಕ ಹೋಗಿ- ನೋಡರೆಪಾ ಇದು ಹಿಂಗ ಐತಿ, ಅದು ಹಂಗ ಐತಿ ಅಂತ ಹೇಳತೇವಿ. ಅದಕ್ಕ ಅದು ಐತಿಹಾಸಿಕ.

ಆದರ ನಾ ಹೇಳ್ತಾ ಇರೋದು ಇಂಗ್ಲಂಡಿನ ಐತಿಹಾಸಿಕ ಘಟನೆ ವಿಲಿಯಮ್ ಅವರ ನೌಕರಿ ಅಥವಾ ತಲೆಗೂದಲು ಬಿಡುವ ಶೈಲಿಯ ಸುದ್ದಿ ಅಲ್ಲ.

ಅಲ್ಲಿ ಮೊದಲ ಬಾರಿಗೆ ಸುಪ್ರೀಂ ಕೋರ್ಟು ಅನ್ನುವುದು ಶುರು ಆಯಿತು. ಹಂಗಅಂದ್ರ ಒಂದು ಸಾವಿರ ವರ್ಷ ಇತಿಹಾಸ ಇರೋ ಇಂಗ್ಲೀಷ್ ನ್ಯಾಯದಾನ ವ್ಯವಸ್ಥೆಗೆ ಮುಖ್ಯಸ್ಥರು ಅನ್ನುವವರು ಇರಲೇ ಇಲ್ಲೇನು? ಮೇಲ್ಮನವಿ ಅನ್ನೋ ಅವಕಾಶ ಇರಲೇ ಇಲ್ಲೇನು?

ವಿಪರೀತ ಶ್ರೇಣೀಕೃತ ನ್ಯಾಯಾಂಗ ವ್ಯವಸ್ಥೆಯ ಒಳಗೆ ಇರೋ ಭಾರತೀಯರಿಗೆ ಈ ಥರ ಸಂದೇಹ ಬರೋದು ಸಹಜ. ಅದರಾಗ ನಾವು ನಮ್ಮ ನ್ಯಾಯಾಂಗ ಬ್ರಿಟಿಷರ ಮಾದರಿಯನ್ನು ಆಧರಿಸಿದ್ದು ಅಂತ ಹೆಮ್ಮೆಯಿಂದ ಹೇಳಿಕೊಳ್ಳೋರು. ಹಂಗಾಗಿ ನಮಗ ಒಂದು ದಾರಿ ತೋರಿಸಿ ಅವರು ಇನ್ನೊಂದು ಹಿಡಿದರೇನಪ್ಪಾ? ಅಂತ ಅನ್ನಿಸಿಯೇ ಅನ್ನಿಸತದ.

ಮಜಾ ಏನು ಅಂದ್ರ, ಇವೆಲ್ಲಾ ಇತ್ತು. ಆದರ ಅದರ ಸ್ವರೂಪ ಬೇರೆ ಇತ್ತು. ಆಶ್ಚರ್ಯಕರ ಸಂಗತಿ ಏನು ಅಂದ್ರ 1065ಇಸವಿಯಲ್ಲಿ ಶುರು ಆದ ಬ್ರಿಟನ್ ನ್ಯಾಯದಾನ ವ್ಯವಸ್ಥೆ ಒಳಗ ಸುಪ್ರೀಂ ಕೋರ್ಟು ಅನ್ನೋ ಪ್ರತ್ಯೇಕ ಅಂಗ ಇರಲೇ ಇಲ್ಲ.

ಅಲ್ಲಿನ ಸಂಸತ್ತಿನ ಮೇಲ್ಮನೆ ಸದಸ್ಯರು ಅಲ್ಲಿನ ಸರ್ವೋಚ್ಚ ನ್ಯಾಯಾಧೀಶರಾಗಿದ್ದರು. ನ್ಯಾಯಾಂಗದ ಸ್ವಾತಂತ್ರ‍್ಯವನ್ನು ಹಾಗೂ ನಮ್ಮ ರಾಜ್ಯಸಭೆಗೆ ನೇಮಕವಾಗುವ ಪುಣ್ಯಾತ್ಮರ ನವರಂಗೀ ವ್ಯಕ್ತಿತ್ವಗಳನ್ನ ಕಂಡ ಭಾರತೀಯರಿಗೆ ಇದನ್ನು ಅರಗಿಸಿಕೊಳ್ಳುವುದು ಕಷ್ಟ.

‘ಎಂಪಿ ಆಗೋವಂತ ಮನುಷ್ಯರು ನ್ಯಾಯಾಧೀಶರಾಗುವುದು, ನ್ಯಾಯ ನಿರ್ಣಯ ಮಾಡುವುದು ಹೆಂಗ ಸಾಧ್ಯ’ ಅಂತ ನಾವು ತಲಿ ಕೆರಕೋತ ಕೂಡಬಹುದು.

ಆದರ ಅಲ್ಲಿ ಹಂಗ ಆತು. ಅಷ್ಟ ಅಲ್ಲ, ಅದು ಒಂದು ಸಾವಿರ ವರ್ಷ ನಡೀತು. ಹಂಗ ಅಂತ ಅಲ್ಲಿನ ನ್ಯಾಯಾಧೀಶರು ಆಯೋಗ್ಯರಾಗಿರಲಿಲ್ಲ. ಭಾರತದ ದಿಕ್ಕು ಬದಲಿಸಿದ ಅನೇಕ ತೀರ್ಪುಗಳು ಅಲ್ಲಿಂದ ಹೊರಗಬಿದ್ದವು.

ಮೂರು ನೂರು ವರ್ಷಗಳ ಅವಧಿಯಲ್ಲಿ ಈಸ್ಟ್ ಇಂಡಿಯಾ ಕಂಪನಿಯವರು ಮಾಡಿದ ಅನೇಕ ಜನ ವಿರೋಧಿ ಆದೇಶಗಳನ್ನು ಪ್ರಿವಿ ಕೌನ್ಸಿಲ್ ತಳ್ಳಿಹಾಕಿತು. ಭಾರತೀಯರ ಮೇಲೆ ದಬ್ಬಾಳಿಕೆ ನಡೆಸಬೇಕು ಅಂತ ಬ್ರಿಟಿಷ್ ಸಂಸದರು ಪಾಸು ಮಾಡಿದ ಅನೇಕ ಕ್ರೂರ ಕಾನೂನುಗಳನ್ನ ಸ್ವಾಭಾವಿಕ ನ್ಯಾಯ ಹಾಗೂ ಸಿದ್ಧ ನ್ಯಾಯ ಪ್ರಕ್ರಿಯೆಯ ವಿರುದ್ಧವಾಗಿ ಇರೋ ಕಾರಣಗಳಿಗೆ ರದ್ದು ಮಾಡಿತು.

ಉದಾಹರಣೆಗೆ ರಾಜಾ ರಾಮ್ ಮೋಹನ್ ರಾಯ ಅವರು ಸತಿ ಪದ್ಧತಿ ನಿಷೇಧ ಮಾಡಲು ಹೋರಾಟ ನಡೆಸಿದಾಗ ಅಲ್ಲಿನ ‘ಪ್ರಿವಿ ಕೌನ್ಸಿಲ್’ ಅಂದ್ರ ಅಂದಿನ ಸುಪ್ರೀಂ ಕೋರ್ಟು, ನಿಷೇಧವನ್ನು ಎತ್ತಿ ಹಿಡಿಯಿತು. ರಾಮ್ ಮೋಹನ್ ರಾಯ ಅವರ ಬೆಂಬಲಕ್ಕ ನಿಂತುಕೊಂಡಿತು.

‘ಮೊಹರಿ ಬೀಬಿ ವಿ. ಧರ್ಮ ದಾಸ ಘೋಷ್’ ಎನ್ನುವ ಪ್ರಕರಣದಾಗ ವಯಸ್ಕರೊಂದಿಗೆ ಮಾತು ಕರಾರು ಸಾಧ್ಯ. ಚಿಕ್ಕ ಮಕ್ಕಳೊಂದಿಗೆ ಕರಾರು ಮಾಡಿಕೊಂಡರೆ ಅದು ಗೈರು ಕಾನೂನಿ ಅಂತ ಹೇಳಿತು. ಇಡೀ ಭಾರತೀಯ ಕರಾರು ಕಾನೂನು ಸಂಹಿತೆ ನಿಂತಿರೋದು ಈ ತೀರ್ಪಿನ ಮೇಲೆಯೇ.

ಬ್ರಿಟಿಷ್ ನ್ಯಾಯಾಂಗ ವ್ಯವಸ್ಥೆಯಲ್ಲಿ ಬರೀ ರಾಜಕಾರಣಿಗಳು ತುಂಬಿದಾರ. ಅದು ಬ್ಯಾಡ. ನಾವು ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ಹೊಂದೋಣ ಅಂತ ಹೇಳಿ, ಡಾ. ಅಂಬೇಡ್ಕರ್ ಹಾಗೂ ಸಂವಿಧಾನ ಸಮಿತಿಯ ಇತರ ರಾಷ್ಟ್ರ ಪ್ರೇಮಿಗಳು ನಮಗ ಬೇರೆ ಪದ್ಧತಿ ಮಾಡಿಕೊಟ್ಟರು.

ನಮ್ಮಲ್ಲಿ ನ್ಯಾಯಾಧೀಶರು ನ್ಯಾಯಾಧೀಶರನ್ನ ನೇಮಿಸುತ್ತಾರೆ. ಅದು ಅಲ್ಲದೇ ನ್ಯ್ಯಾಯಾಧೀಶರ ವಿರುದ್ಧ ಏನಾದರೂ ದೂರು ಬಂದರೆ ಅದನ್ನ ಅವರೇ ವಿಚಾರಣೆ ಮಾಡಿ ಅವರೇ ತೀರ್ಪು ಕೊಡ್ತಾರ. ಇದು ಯಾಕ್ ಅಂದ್ರ, ನ್ಯಾಯಾಂಗ ವ್ಯವಸ್ಥೆಯ ಮೇಲೆ ಆಡಳಿತ ವ್ಯವಸ್ಥೆಯ ನಿಯಂತ್ರಣ ಇರಬಾರದು. ಅವರು ತಮ್ಮ ಆತ್ಮ ನಿರೀಕ್ಷಣೆಯಿಂದ ತಾವೇ ತಮ್ಮನ್ನು ತಿದ್ದಿಕೊಳ್ಳಲಿ, ಅಂತ ಹೇಳಿ ಮಾಡಿರುವ ವ್ಯವಸ್ಥೆ.

ಅವರನ್ನು ರಚನಾತ್ಮಕವಾಗಿ ಟೀಕೆ ಮಾಡಬಹುದು ಆದರೆ ಸಬೂತು ಇಲ್ಲದೇ ಟೀಕೆ ಮಾಡಬಾರದು. ಅವರ ಕೆಲಸದ ಬಗ್ಗೆ ಸದುದ್ದೇಶದ ಟಿಪ್ಪಣಿ ಮಾಡಬಹುದು, ದುರುದ್ದೇಶಪೂರಿತವಾಗಿ ಮಾಡಬಾರದು. ತೀರ್ಪು ಕೊಡುವವನ ಮನಸ್ಸಿನ ಮೇಲೆ ಪರಿಣಾಮ ಬೀರುವಂತೆ, ಪಟ್ಟಭದ್ರ ಹಿತಾಸಕ್ತಿಯಿಂದ ಅಥವಾ ವೃಥಾ ಹಗರಣ ಸೃಷ್ಟಿಸುವಂತೆ ನಿಂದೆ ಮಾಡಬಾರದು ಅನ್ನುವ ನಿಯಮ ಇದೆ.

ಬ್ರಿಟನ್ನಿನಲ್ಲಿ ಗಾರ್ಡಿಯನ್ ಪತ್ರಿಕೆ ಒಮ್ಮೆ ನ್ಯಾಯಾಧೀಶರನ್ನ ಮೂರ್ಖ ಮುದುಕರು ಅಂತ ಮೂದಲಿಸಿತು. ಅದಕ್ಕೆ ಅಲ್ಲಿನ ನ್ಯಾಯಾಧೀಶ ಲಾರ್ಡ್ ಟೆಂಪಲ್ಮ್ಯಾ ಅವರು ‘ನಾವು ಮುದುಕರು ಅನ್ನುವುದು ಸತ್ಯ. ಮೂರ್ಖರು ಹೌದೊ ಅಲ್ಲವೋ ಅನ್ನುವುದು ಅವರವರ ಗ್ರಹಿಕೆಗೆ ಬಿಟ್ಟ ವಿಷಯ’ ಅಂತ ಹೇಳಿದರು. ಸರಕಾರವೇ ದಾಖಲಿಸಿದ ನ್ಯಾಯಾಂಗನಿಂದನೆ ಪ್ರಕರಣವನ್ನು ಕೈ ಬಿಟ್ಟರು. ಗಾರ್ಡಿಯನ್ ಪ್ರಕರಣ 1987ರಲ್ಲಿ ನಡೆದಿತ್ತು.

ರಾಜಕಾರಣಿಗಳೇ ನ್ಯ್ಯಾಯಾಧೀಶರಾಗಿದ್ದ ಬ್ರಿಟಿಷ್ ಸುಪ್ರೀಂ ಕೋರ್ಟು ಅತ್ಯಂತ ನ್ಯಾಯ ನಿಷ್ಟುರವಾಗಿ ನಡೆದುಕೊಂಡಾಗ, ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ಇರೋ ನಮ್ಮ ದೇಶದಾಗ ಯಾಕ ನಮ್ಮ ನ್ಯಾಯಾಧೀಶರು ಶೀಘ್ರ ಕೋಪದವರು ಇದ್ದಾರ?

ಡೇಲಿ ಮಿರರ ಪತ್ರಿಕೆ ನ್ಯಾಯಾಧೀಶರನ್ನ ಪ್ರಜೆಗಳ ವಿರೋಧಿಗಳು ಅಂತ ಕರೆದಾಗ `ಅದನ್ನು ಜನ ನಿರ್ಧರಿಸುತ್ತಾರೆ’, ಅಂತ ನ್ಯಾಯಾಂಗ ನಿಂದನೆ ಕೈ ಬಿಟ್ಟರು. ಇದು ನಡೆದಿದ್ದು 2016ರಾಗ. ಅಂದ್ರ ಹೊಸ ಸುಪ್ರೀಂ ಕೋರ್ಟು ಅಸ್ತಿತ್ವಕ್ಕೆ ಬಂದ ಮ್ಯಾಲೆ.

ಹಿರಿಯ ವಕೀಲ ಪ್ರಶಾಂತ್ ಭೂಷಣ ಅವರು ದಶಕಗಟ್ಟಲೆ ಜನಪರ ಹೋರಾಟ ಮಾಡಿದಾರು. ಹಿಂದೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಡಿ ಬೋಫೋರಸು ಹಗರಣದ ವಿಚಾರಣೆ ಬರುವಂತೆ ಮಾಡಿದರು. ಮೊನ್ನೆ ಮೊನ್ನೆ ಲೋಕಪಾಲ್ ಹೋರಾಟದಾಗ ಭಾಗಿ ಆದರು. ಅದರಿಂದ ಕಾಂಗ್ರೆಸ್ಸು ನಷ್ಟ ಅನುಭವಿಸುವಂತೆ ಆತು. ಆಮ್ ಆದಮಿ ಹಾಗೂ ಬಿಜೆಪಿ ಪಕ್ಷಗಳಿಗೆ ನೇರವಾಗಿ ಇಲ್ಲದಿದ್ದರೂ ಸುತ್ತು ಬಳಸಿ ಅನುಕೂಲವಾಗುವಂತೆ ಆತು. ಅದನ್ನು ಅವರು ರಾಜಕೀಯ ಕಾರಣ ಇಟ್ಟುಕೊಂಡು ಮಾಡಿಲ್ಲ ಅನ್ನೋದಕ್ಕೆ ಸಾಕ್ಷಿ ಏನು ಅಂದ್ರ ಅವರು ಕೇಜರಿವಾಲ್ ಪಕ್ಷ ಅಥವಾ ಸರಕಾರ ಸೇರಲಿಲ್ಲ. ಇನ್ನ ಇಂದಿನ ಸರಕಾರದ ಆಡಳಿತದ ವಿರುದ್ಧ ನಿರಂತರ ಹೋರಾಟ ಮಾಡಲಿಕ್ಕೆ ಹತ್ತ್ಯಾರ.

ಆಳುವ ಪಕ್ಷದ ವಿರೋಧಿಗಳು ನಮ್ಮ ವಿರೋಧಿಗಳು ಅಂತ ಎನರ ನ್ಯಾಯಾಂಗದವರು ತಿಳಕೋಂಡ್ರ ಅದು ಅವರ ತಪ್ಪಲ್ಲ. ನಮ್ಮ ತಪ್ಪು.

ಇದರಾಗ ಒಂದು ಸೂಕ್ಷ್ಮ ವಿಚಾರ ಐತಿ ನೋಡ್ರಿ.

ಅದು ಎನಪಾ ಅಂದ್ರ ಭಾರತದಲ್ಲಿ ಆಳುವ ಪಕ್ಷ, ವಿರೋಧ ಪಕ್ಷ ಅನ್ನೋ ಕಲ್ಪನೆ ಇಲ್ಲ. ಇಲ್ಲಿ ಇರೋದು ನಿನ್ನೆಯ ಆಳುವ ಪಕ್ಷ, ಇಂದಿನ ಆಳುವ ಪಕ್ಷ ಹಾಗೂ ನಾಳೆಯ ಆಳುವ ಪಕ್ಷ ಅಂತ ಪತ್ರಿಕೋದ್ಯಮ ತಜ್ಞ ಎಂ. ಎ. ಈಪನ್ ಅವರು ಹೇಳುತ್ತಿದ್ದರು. ನೀವು ನಿನ್ನೆಯ ಆಳುವ ಪಕ್ಷದ ವಿರೋಧ ಮಾಡರಿ, ಅಥವಾ ಇಂದಿನ ಆಳುವ ಪಕ್ಷದ ವಿರೋಧ ಮಾಡ್ರಿ, ನೀವು ಇಬ್ಬರಿಗೂ ವಿರೋಧಿಗಳೇ ಹೊರತು, ಯಾರಿಗೂ ಮಿತ್ರರಲ್ಲ. ಅದಕ್ಕೆ ಬಸವಣ್ಣ ಖಂಡಿತವಾದಿ, ಲೋಕ ವಿರೋಧಿ ಅಂತ ಹೇಳಿದ್ದು ಐತಿ ನೋಡ್ರಿಪಾ.

ಅಂದ ಹಂಗ ಇಲ್ಲೇ ನೋಡ್ರಿ ಮತ್ತೊಮ್ಮೆ `ಐತಿ’ ಅನ್ನೋದು ಬಂತು. ಇದೂ ಕೂಡ ಐತಿಹಾಸಿಕ ಆಗೋ ಲಕ್ಷಣ ಕಾಣಾಕ ಹತ್ಯಾವು. ಅಲ್ಲಾ!


ಇದನ್ನೂ ಓದಿ: ಭೂಷಣ್ ಪ್ರಕರಣ: ರಚನಾತ್ಮಕ ಟೀಕೆಯೊಂದನ್ನು ಸಹಿಸಲಾಗದಷ್ಟು ಸಂಕುಚಿತವೇ ಸುಪ್ರೀಮ್ ಭುಜಗಳು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...

ಹತ್ಯಾಕಾಂಡಕ್ಕೆ ಸಮನಾದ NEET ಹಗರಣ ನಡೆಯಲು ಬಿಟ್ಟ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆದ ನಂತರದ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಜೂನ್ ಆರಂಭದಿಂದ ಇಲ್ಲಿಯವರೆಗೆ ದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ದೇಶದ ಜನತೆ ನೋಡುತ್ತಿದ್ದಾರೆ. ದೇಶದ...

ಸಿಜೆಪಿ ಮತ್ತು ಜೆನ್‌ ಜಿಫಿಕೇಶನ್: ಪ್ರಸ್ತುತ ಬೆಳವಣಿಗೆ, ಭವಿಷ್ಯದ ಸಾಧ್ಯತೆ

ಇತ್ತೀಚಿನ ಬೆಳವಣಿಗೆಗಳು ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಸಿಜೆಪಿ (ಕಾಕ್ರೋಚ್‌ ಜನತಾ ಪಕ್ಷ) ಪ್ರತಿಭಟನೆ ಈಗ ತಾರ್ಕಿಕ ಹಂತಕ್ಕೆ ತಲಪುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ನೀಟ್‌ನ (ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ) ಮೊದಲ...

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...