Homeಮುಖಪುಟಮುದುಕರು ಎನೊ ಇದ್ದೀವಿ, ಮೂರ್ಖರು ಹೌದೊ ಅಲ್ಲವೋ ಅವರವರ ಗ್ರಹಿಕೆಗೆ ಬಿಟ್ಟದ್ದು ಅಂದಿದ್ದ ಬ್ರಿಟನ್ ನ್ಯಾಯಾಧೀಶ

ಮುದುಕರು ಎನೊ ಇದ್ದೀವಿ, ಮೂರ್ಖರು ಹೌದೊ ಅಲ್ಲವೋ ಅವರವರ ಗ್ರಹಿಕೆಗೆ ಬಿಟ್ಟದ್ದು ಅಂದಿದ್ದ ಬ್ರಿಟನ್ ನ್ಯಾಯಾಧೀಶ

ಬ್ರಿಟಿಷ್ ನ್ಯಾಯಾಂಗ ವ್ಯವಸ್ಥೆಯಲ್ಲಿ ಬರೀ ರಾಜಕಾರಣಿಗಳು ತುಂಬಿದಾರ. ಅದು ಬ್ಯಾಡ. ನಾವು ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ಹೊಂದೋಣ ಅಂತ ಹೇಳಿ, ಡಾ. ಅಂಬೇಡ್ಕರ್ ಹಾಗೂ ಸಂವಿಧಾನ ಸಮಿತಿಯ ಇತರ ರಾಷ್ಟ್ರ ಪ್ರೇಮಿಗಳು ನಮಗ ಬೇರೆ ಪದ್ಧತಿ ಮಾಡಿಕೊಟ್ಟರು.

- Advertisement -
- Advertisement -

ಬ್ರಿಟನ್‌ನ ಪ್ರಜೆಗಳಿಗೆ 2009 ಅನ್ನುವುದು ಐತಿಹಾಸಿಕ ವರ್ಷ. ಅದು ಯಾಕ ಅಂದ್ರ, ಅಲ್ಲಿ ಒಂದು ಐತಿಹಾಸಿಕ ಘಟನೆ ನಡೀತು.

ಆ ವರ್ಷದ ಸುರುವಾತಿಗೆ ಅಲ್ಲಿನ ರಾಜ ವಂಶಸ್ಥ ರಾಜಕುಮಾರ ವಿಲಿಯಮ್ ಅವರು ತಮ್ಮ ಪದವಿ ಮುಗಿಸಿ ಬ್ರಿಟಿಷ್ ವಾಯುಸೇನೆ ಸೇರಿಕೊಂಡರು, ಅದರ ತುರ್ತು ಸೇವೆ ಹಾಗೂ ರಕ್ಷಣೆ ವಿಭಾಗದ ಹುಡುಕು- ಮತ್ತು – ಉಳಿಸು ವಿಭಾಗದ ಫ್ಲೈಟ್ ಲೆಫ್ಟ್ ನೆಂಟ್ ಆಗಿ ಕೆಲಸ ಮಾಡಿದರು.

ಆ ವರ್ಷದ ಕೊನೆಗೆ ಅವರು ತಮ್ಮ ಹೇರ್‌ಸ್ಟೈಲ್ ಬದಲಾಯಿಸಿಕೊಂಡರು.

ನಮ್ಮ ಧಾರವಾಡ ಕಡೆ ಇಂಥವುಕ್ಕೆಲ್ಲಾ ಯಾಕ ಐತಿಹಾಸಿಕ ಘಟನೆ ಅಂತೇವಿ ಅಂದ್ರ, ನಾವು ಆ ಕಾಲದ ಬಗ್ಗೆ ಮಾತಾಡೋವಾಗ, ನಾವು ಆ ಕಾಲಕ್ಕ ಹೋಗಿ- ನೋಡರೆಪಾ ಇದು ಹಿಂಗ ಐತಿ, ಅದು ಹಂಗ ಐತಿ ಅಂತ ಹೇಳತೇವಿ. ಅದಕ್ಕ ಅದು ಐತಿಹಾಸಿಕ.

ಆದರ ನಾ ಹೇಳ್ತಾ ಇರೋದು ಇಂಗ್ಲಂಡಿನ ಐತಿಹಾಸಿಕ ಘಟನೆ ವಿಲಿಯಮ್ ಅವರ ನೌಕರಿ ಅಥವಾ ತಲೆಗೂದಲು ಬಿಡುವ ಶೈಲಿಯ ಸುದ್ದಿ ಅಲ್ಲ.

ಅಲ್ಲಿ ಮೊದಲ ಬಾರಿಗೆ ಸುಪ್ರೀಂ ಕೋರ್ಟು ಅನ್ನುವುದು ಶುರು ಆಯಿತು. ಹಂಗಅಂದ್ರ ಒಂದು ಸಾವಿರ ವರ್ಷ ಇತಿಹಾಸ ಇರೋ ಇಂಗ್ಲೀಷ್ ನ್ಯಾಯದಾನ ವ್ಯವಸ್ಥೆಗೆ ಮುಖ್ಯಸ್ಥರು ಅನ್ನುವವರು ಇರಲೇ ಇಲ್ಲೇನು? ಮೇಲ್ಮನವಿ ಅನ್ನೋ ಅವಕಾಶ ಇರಲೇ ಇಲ್ಲೇನು?

ವಿಪರೀತ ಶ್ರೇಣೀಕೃತ ನ್ಯಾಯಾಂಗ ವ್ಯವಸ್ಥೆಯ ಒಳಗೆ ಇರೋ ಭಾರತೀಯರಿಗೆ ಈ ಥರ ಸಂದೇಹ ಬರೋದು ಸಹಜ. ಅದರಾಗ ನಾವು ನಮ್ಮ ನ್ಯಾಯಾಂಗ ಬ್ರಿಟಿಷರ ಮಾದರಿಯನ್ನು ಆಧರಿಸಿದ್ದು ಅಂತ ಹೆಮ್ಮೆಯಿಂದ ಹೇಳಿಕೊಳ್ಳೋರು. ಹಂಗಾಗಿ ನಮಗ ಒಂದು ದಾರಿ ತೋರಿಸಿ ಅವರು ಇನ್ನೊಂದು ಹಿಡಿದರೇನಪ್ಪಾ? ಅಂತ ಅನ್ನಿಸಿಯೇ ಅನ್ನಿಸತದ.

ಮಜಾ ಏನು ಅಂದ್ರ, ಇವೆಲ್ಲಾ ಇತ್ತು. ಆದರ ಅದರ ಸ್ವರೂಪ ಬೇರೆ ಇತ್ತು. ಆಶ್ಚರ್ಯಕರ ಸಂಗತಿ ಏನು ಅಂದ್ರ 1065ಇಸವಿಯಲ್ಲಿ ಶುರು ಆದ ಬ್ರಿಟನ್ ನ್ಯಾಯದಾನ ವ್ಯವಸ್ಥೆ ಒಳಗ ಸುಪ್ರೀಂ ಕೋರ್ಟು ಅನ್ನೋ ಪ್ರತ್ಯೇಕ ಅಂಗ ಇರಲೇ ಇಲ್ಲ.

ಅಲ್ಲಿನ ಸಂಸತ್ತಿನ ಮೇಲ್ಮನೆ ಸದಸ್ಯರು ಅಲ್ಲಿನ ಸರ್ವೋಚ್ಚ ನ್ಯಾಯಾಧೀಶರಾಗಿದ್ದರು. ನ್ಯಾಯಾಂಗದ ಸ್ವಾತಂತ್ರ‍್ಯವನ್ನು ಹಾಗೂ ನಮ್ಮ ರಾಜ್ಯಸಭೆಗೆ ನೇಮಕವಾಗುವ ಪುಣ್ಯಾತ್ಮರ ನವರಂಗೀ ವ್ಯಕ್ತಿತ್ವಗಳನ್ನ ಕಂಡ ಭಾರತೀಯರಿಗೆ ಇದನ್ನು ಅರಗಿಸಿಕೊಳ್ಳುವುದು ಕಷ್ಟ.

‘ಎಂಪಿ ಆಗೋವಂತ ಮನುಷ್ಯರು ನ್ಯಾಯಾಧೀಶರಾಗುವುದು, ನ್ಯಾಯ ನಿರ್ಣಯ ಮಾಡುವುದು ಹೆಂಗ ಸಾಧ್ಯ’ ಅಂತ ನಾವು ತಲಿ ಕೆರಕೋತ ಕೂಡಬಹುದು.

ಆದರ ಅಲ್ಲಿ ಹಂಗ ಆತು. ಅಷ್ಟ ಅಲ್ಲ, ಅದು ಒಂದು ಸಾವಿರ ವರ್ಷ ನಡೀತು. ಹಂಗ ಅಂತ ಅಲ್ಲಿನ ನ್ಯಾಯಾಧೀಶರು ಆಯೋಗ್ಯರಾಗಿರಲಿಲ್ಲ. ಭಾರತದ ದಿಕ್ಕು ಬದಲಿಸಿದ ಅನೇಕ ತೀರ್ಪುಗಳು ಅಲ್ಲಿಂದ ಹೊರಗಬಿದ್ದವು.

ಮೂರು ನೂರು ವರ್ಷಗಳ ಅವಧಿಯಲ್ಲಿ ಈಸ್ಟ್ ಇಂಡಿಯಾ ಕಂಪನಿಯವರು ಮಾಡಿದ ಅನೇಕ ಜನ ವಿರೋಧಿ ಆದೇಶಗಳನ್ನು ಪ್ರಿವಿ ಕೌನ್ಸಿಲ್ ತಳ್ಳಿಹಾಕಿತು. ಭಾರತೀಯರ ಮೇಲೆ ದಬ್ಬಾಳಿಕೆ ನಡೆಸಬೇಕು ಅಂತ ಬ್ರಿಟಿಷ್ ಸಂಸದರು ಪಾಸು ಮಾಡಿದ ಅನೇಕ ಕ್ರೂರ ಕಾನೂನುಗಳನ್ನ ಸ್ವಾಭಾವಿಕ ನ್ಯಾಯ ಹಾಗೂ ಸಿದ್ಧ ನ್ಯಾಯ ಪ್ರಕ್ರಿಯೆಯ ವಿರುದ್ಧವಾಗಿ ಇರೋ ಕಾರಣಗಳಿಗೆ ರದ್ದು ಮಾಡಿತು.

ಉದಾಹರಣೆಗೆ ರಾಜಾ ರಾಮ್ ಮೋಹನ್ ರಾಯ ಅವರು ಸತಿ ಪದ್ಧತಿ ನಿಷೇಧ ಮಾಡಲು ಹೋರಾಟ ನಡೆಸಿದಾಗ ಅಲ್ಲಿನ ‘ಪ್ರಿವಿ ಕೌನ್ಸಿಲ್’ ಅಂದ್ರ ಅಂದಿನ ಸುಪ್ರೀಂ ಕೋರ್ಟು, ನಿಷೇಧವನ್ನು ಎತ್ತಿ ಹಿಡಿಯಿತು. ರಾಮ್ ಮೋಹನ್ ರಾಯ ಅವರ ಬೆಂಬಲಕ್ಕ ನಿಂತುಕೊಂಡಿತು.

‘ಮೊಹರಿ ಬೀಬಿ ವಿ. ಧರ್ಮ ದಾಸ ಘೋಷ್’ ಎನ್ನುವ ಪ್ರಕರಣದಾಗ ವಯಸ್ಕರೊಂದಿಗೆ ಮಾತು ಕರಾರು ಸಾಧ್ಯ. ಚಿಕ್ಕ ಮಕ್ಕಳೊಂದಿಗೆ ಕರಾರು ಮಾಡಿಕೊಂಡರೆ ಅದು ಗೈರು ಕಾನೂನಿ ಅಂತ ಹೇಳಿತು. ಇಡೀ ಭಾರತೀಯ ಕರಾರು ಕಾನೂನು ಸಂಹಿತೆ ನಿಂತಿರೋದು ಈ ತೀರ್ಪಿನ ಮೇಲೆಯೇ.

ಬ್ರಿಟಿಷ್ ನ್ಯಾಯಾಂಗ ವ್ಯವಸ್ಥೆಯಲ್ಲಿ ಬರೀ ರಾಜಕಾರಣಿಗಳು ತುಂಬಿದಾರ. ಅದು ಬ್ಯಾಡ. ನಾವು ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ಹೊಂದೋಣ ಅಂತ ಹೇಳಿ, ಡಾ. ಅಂಬೇಡ್ಕರ್ ಹಾಗೂ ಸಂವಿಧಾನ ಸಮಿತಿಯ ಇತರ ರಾಷ್ಟ್ರ ಪ್ರೇಮಿಗಳು ನಮಗ ಬೇರೆ ಪದ್ಧತಿ ಮಾಡಿಕೊಟ್ಟರು.

ನಮ್ಮಲ್ಲಿ ನ್ಯಾಯಾಧೀಶರು ನ್ಯಾಯಾಧೀಶರನ್ನ ನೇಮಿಸುತ್ತಾರೆ. ಅದು ಅಲ್ಲದೇ ನ್ಯ್ಯಾಯಾಧೀಶರ ವಿರುದ್ಧ ಏನಾದರೂ ದೂರು ಬಂದರೆ ಅದನ್ನ ಅವರೇ ವಿಚಾರಣೆ ಮಾಡಿ ಅವರೇ ತೀರ್ಪು ಕೊಡ್ತಾರ. ಇದು ಯಾಕ್ ಅಂದ್ರ, ನ್ಯಾಯಾಂಗ ವ್ಯವಸ್ಥೆಯ ಮೇಲೆ ಆಡಳಿತ ವ್ಯವಸ್ಥೆಯ ನಿಯಂತ್ರಣ ಇರಬಾರದು. ಅವರು ತಮ್ಮ ಆತ್ಮ ನಿರೀಕ್ಷಣೆಯಿಂದ ತಾವೇ ತಮ್ಮನ್ನು ತಿದ್ದಿಕೊಳ್ಳಲಿ, ಅಂತ ಹೇಳಿ ಮಾಡಿರುವ ವ್ಯವಸ್ಥೆ.

ಅವರನ್ನು ರಚನಾತ್ಮಕವಾಗಿ ಟೀಕೆ ಮಾಡಬಹುದು ಆದರೆ ಸಬೂತು ಇಲ್ಲದೇ ಟೀಕೆ ಮಾಡಬಾರದು. ಅವರ ಕೆಲಸದ ಬಗ್ಗೆ ಸದುದ್ದೇಶದ ಟಿಪ್ಪಣಿ ಮಾಡಬಹುದು, ದುರುದ್ದೇಶಪೂರಿತವಾಗಿ ಮಾಡಬಾರದು. ತೀರ್ಪು ಕೊಡುವವನ ಮನಸ್ಸಿನ ಮೇಲೆ ಪರಿಣಾಮ ಬೀರುವಂತೆ, ಪಟ್ಟಭದ್ರ ಹಿತಾಸಕ್ತಿಯಿಂದ ಅಥವಾ ವೃಥಾ ಹಗರಣ ಸೃಷ್ಟಿಸುವಂತೆ ನಿಂದೆ ಮಾಡಬಾರದು ಅನ್ನುವ ನಿಯಮ ಇದೆ.

ಬ್ರಿಟನ್ನಿನಲ್ಲಿ ಗಾರ್ಡಿಯನ್ ಪತ್ರಿಕೆ ಒಮ್ಮೆ ನ್ಯಾಯಾಧೀಶರನ್ನ ಮೂರ್ಖ ಮುದುಕರು ಅಂತ ಮೂದಲಿಸಿತು. ಅದಕ್ಕೆ ಅಲ್ಲಿನ ನ್ಯಾಯಾಧೀಶ ಲಾರ್ಡ್ ಟೆಂಪಲ್ಮ್ಯಾ ಅವರು ‘ನಾವು ಮುದುಕರು ಅನ್ನುವುದು ಸತ್ಯ. ಮೂರ್ಖರು ಹೌದೊ ಅಲ್ಲವೋ ಅನ್ನುವುದು ಅವರವರ ಗ್ರಹಿಕೆಗೆ ಬಿಟ್ಟ ವಿಷಯ’ ಅಂತ ಹೇಳಿದರು. ಸರಕಾರವೇ ದಾಖಲಿಸಿದ ನ್ಯಾಯಾಂಗನಿಂದನೆ ಪ್ರಕರಣವನ್ನು ಕೈ ಬಿಟ್ಟರು. ಗಾರ್ಡಿಯನ್ ಪ್ರಕರಣ 1987ರಲ್ಲಿ ನಡೆದಿತ್ತು.

ರಾಜಕಾರಣಿಗಳೇ ನ್ಯ್ಯಾಯಾಧೀಶರಾಗಿದ್ದ ಬ್ರಿಟಿಷ್ ಸುಪ್ರೀಂ ಕೋರ್ಟು ಅತ್ಯಂತ ನ್ಯಾಯ ನಿಷ್ಟುರವಾಗಿ ನಡೆದುಕೊಂಡಾಗ, ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ಇರೋ ನಮ್ಮ ದೇಶದಾಗ ಯಾಕ ನಮ್ಮ ನ್ಯಾಯಾಧೀಶರು ಶೀಘ್ರ ಕೋಪದವರು ಇದ್ದಾರ?

ಡೇಲಿ ಮಿರರ ಪತ್ರಿಕೆ ನ್ಯಾಯಾಧೀಶರನ್ನ ಪ್ರಜೆಗಳ ವಿರೋಧಿಗಳು ಅಂತ ಕರೆದಾಗ `ಅದನ್ನು ಜನ ನಿರ್ಧರಿಸುತ್ತಾರೆ’, ಅಂತ ನ್ಯಾಯಾಂಗ ನಿಂದನೆ ಕೈ ಬಿಟ್ಟರು. ಇದು ನಡೆದಿದ್ದು 2016ರಾಗ. ಅಂದ್ರ ಹೊಸ ಸುಪ್ರೀಂ ಕೋರ್ಟು ಅಸ್ತಿತ್ವಕ್ಕೆ ಬಂದ ಮ್ಯಾಲೆ.

ಹಿರಿಯ ವಕೀಲ ಪ್ರಶಾಂತ್ ಭೂಷಣ ಅವರು ದಶಕಗಟ್ಟಲೆ ಜನಪರ ಹೋರಾಟ ಮಾಡಿದಾರು. ಹಿಂದೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಡಿ ಬೋಫೋರಸು ಹಗರಣದ ವಿಚಾರಣೆ ಬರುವಂತೆ ಮಾಡಿದರು. ಮೊನ್ನೆ ಮೊನ್ನೆ ಲೋಕಪಾಲ್ ಹೋರಾಟದಾಗ ಭಾಗಿ ಆದರು. ಅದರಿಂದ ಕಾಂಗ್ರೆಸ್ಸು ನಷ್ಟ ಅನುಭವಿಸುವಂತೆ ಆತು. ಆಮ್ ಆದಮಿ ಹಾಗೂ ಬಿಜೆಪಿ ಪಕ್ಷಗಳಿಗೆ ನೇರವಾಗಿ ಇಲ್ಲದಿದ್ದರೂ ಸುತ್ತು ಬಳಸಿ ಅನುಕೂಲವಾಗುವಂತೆ ಆತು. ಅದನ್ನು ಅವರು ರಾಜಕೀಯ ಕಾರಣ ಇಟ್ಟುಕೊಂಡು ಮಾಡಿಲ್ಲ ಅನ್ನೋದಕ್ಕೆ ಸಾಕ್ಷಿ ಏನು ಅಂದ್ರ ಅವರು ಕೇಜರಿವಾಲ್ ಪಕ್ಷ ಅಥವಾ ಸರಕಾರ ಸೇರಲಿಲ್ಲ. ಇನ್ನ ಇಂದಿನ ಸರಕಾರದ ಆಡಳಿತದ ವಿರುದ್ಧ ನಿರಂತರ ಹೋರಾಟ ಮಾಡಲಿಕ್ಕೆ ಹತ್ತ್ಯಾರ.

ಆಳುವ ಪಕ್ಷದ ವಿರೋಧಿಗಳು ನಮ್ಮ ವಿರೋಧಿಗಳು ಅಂತ ಎನರ ನ್ಯಾಯಾಂಗದವರು ತಿಳಕೋಂಡ್ರ ಅದು ಅವರ ತಪ್ಪಲ್ಲ. ನಮ್ಮ ತಪ್ಪು.

ಇದರಾಗ ಒಂದು ಸೂಕ್ಷ್ಮ ವಿಚಾರ ಐತಿ ನೋಡ್ರಿ.

ಅದು ಎನಪಾ ಅಂದ್ರ ಭಾರತದಲ್ಲಿ ಆಳುವ ಪಕ್ಷ, ವಿರೋಧ ಪಕ್ಷ ಅನ್ನೋ ಕಲ್ಪನೆ ಇಲ್ಲ. ಇಲ್ಲಿ ಇರೋದು ನಿನ್ನೆಯ ಆಳುವ ಪಕ್ಷ, ಇಂದಿನ ಆಳುವ ಪಕ್ಷ ಹಾಗೂ ನಾಳೆಯ ಆಳುವ ಪಕ್ಷ ಅಂತ ಪತ್ರಿಕೋದ್ಯಮ ತಜ್ಞ ಎಂ. ಎ. ಈಪನ್ ಅವರು ಹೇಳುತ್ತಿದ್ದರು. ನೀವು ನಿನ್ನೆಯ ಆಳುವ ಪಕ್ಷದ ವಿರೋಧ ಮಾಡರಿ, ಅಥವಾ ಇಂದಿನ ಆಳುವ ಪಕ್ಷದ ವಿರೋಧ ಮಾಡ್ರಿ, ನೀವು ಇಬ್ಬರಿಗೂ ವಿರೋಧಿಗಳೇ ಹೊರತು, ಯಾರಿಗೂ ಮಿತ್ರರಲ್ಲ. ಅದಕ್ಕೆ ಬಸವಣ್ಣ ಖಂಡಿತವಾದಿ, ಲೋಕ ವಿರೋಧಿ ಅಂತ ಹೇಳಿದ್ದು ಐತಿ ನೋಡ್ರಿಪಾ.

ಅಂದ ಹಂಗ ಇಲ್ಲೇ ನೋಡ್ರಿ ಮತ್ತೊಮ್ಮೆ `ಐತಿ’ ಅನ್ನೋದು ಬಂತು. ಇದೂ ಕೂಡ ಐತಿಹಾಸಿಕ ಆಗೋ ಲಕ್ಷಣ ಕಾಣಾಕ ಹತ್ಯಾವು. ಅಲ್ಲಾ!


ಇದನ್ನೂ ಓದಿ: ಭೂಷಣ್ ಪ್ರಕರಣ: ರಚನಾತ್ಮಕ ಟೀಕೆಯೊಂದನ್ನು ಸಹಿಸಲಾಗದಷ್ಟು ಸಂಕುಚಿತವೇ ಸುಪ್ರೀಮ್ ಭುಜಗಳು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಬಳಿಕ ಒಡಿಶಾದ ಕರಡು ಮತದಾರರ ಪಟ್ಟಿ ಪ್ರಕಟ : 20 ಲಕ್ಷ ಹೆಸರುಗಳು ಡಿಲೀಟ್

ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಗಣತಿ ಹಂತದ ಬಳಿಕ ಚುನಾವಣಾ ಆಯೋಗ ಭಾನುವಾರ (ಜು.5) ಒಡಿಶಾದ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ 20 ಲಕ್ಷಕ್ಕೂ ಹೆಚ್ಚು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

SIR: ಟಾರ್ಗೆಟ್ ಮತ್ತು ಒತ್ತಡದ ಕೆಲಸದಿಂದ ಮೂವರು ಸಿಬ್ಬಂದಿ ಸಾವು

ಕರ್ನಾಟಕದಲ್ಲಿ ನಡೆಯುತ್ತಿರುವ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯು ಕೆಳಹಂತದ ನೌಕರರ ಪಾಲಿಗೆ ಮರಣಶಾಸನವಾಗುತ್ತಿದೆಯೇ ಎಂಬ ಗಂಭೀರ ಪ್ರಶ್ನೆಯೊಂದು ಎದ್ದಿದೆ. ಅಧಿಕಾರಿಗಳು ನೀಡುತ್ತಿರುವ ಅತಿಯಾದ ಒತ್ತಡ ಮತ್ತು ಟಾರ್ಗೆಟ್ ಬೆನ್ನತ್ತುವ ಧಾವಂತದಿಂದಾಗಿ...

ಖಮೇನಿ ಅಂತ್ಯಕ್ರಿಯೆ ವೇಳೆ ಟ್ರಂಪ್ ಉದ್ಧಟತನದ ಹೇಳಿಕೆ: “ಇತಿಹಾಸ, ಗೌರವವಿಲ್ಲದ ದೇಶ ಅಮೆರಿಕ” ಎಂದು ಇರಾನ್ ತೀಕ್ಷ್ಣ ತಿರುಗೇಟು

ಟೆಹ್ರಾನ್: ಇರಾನ್‌ನ ಮಾಜಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ನಿಧನದ ನಂತರ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಭಾರೀ ವಾಕ್ಸಮರ ಉಂಟಾಗಿದೆ. ಖಮೇನಿ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಒಟ್ಟುಗೂಡಿರುವ ಇರಾನ್‌ನ ಇಡೀ...

ಮ್ಯಾಚ್ ಮಧ್ಯೆ ಕಾಂಡೊಮ್ ಜಾಹೀರಾತು: ಬಿಸಿಸಿಐ ವಿರುದ್ಧ ಕಿಡಿಕಾರಿದ ಮಾಜಿ ಕ್ರಿಕೆಟಿಗ, TMC ಸಂಸದ ಕೀರ್ತಿ ಆಜಾದ್

ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಅಂತರರಾಷ್ಟ್ರೀಯ ಪಂದ್ಯದ ನೇರ ಪ್ರಸಾರದ ವೇಳೆ ಕಾಂಡೊಮ್ ಜಾಹೀರಾತುಗಳನ್ನು ಪ್ರಸಾರ ಮಾಡಿದ್ದನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಮತ್ತು ಮಾಜಿ...

ಒಂದೇ ಒಂದು ಇಟ್ಟಿಗೆ ಇಟ್ಟಿಲ್ಲ : ಕಳೆದ ಆರು ವರ್ಷಗಳಿಂದ ಕಾಗದದ ಮೇಲೆಯೇ ಕಾರ್ಯ ನಿರ್ವಹಿಸುತ್ತಿರುವ 100 ಹಾಸಿಗೆಗಳ ಆಸ್ಪತ್ರೆ!

ಮಧ್ಯ ಪ್ರದೇಶದ ಇಂದೋರ್‌ನ ಖಜರಾನಾದಲ್ಲಿ ಮಂಜೂರಾದ 100 ಹಾಸಿಗೆಗಳ ಸಿವಿಲ್ ಆಸ್ಪತ್ರೆಯು ಕಳೆದ 6 ವರ್ಷಗಳಿಂದ ಕೇವಲ ಕಾಗದದ ಮೇಲಷ್ಟೇ (ದಾಖಲೆಗಳಲ್ಲಿ) ಅಸ್ತಿತ್ವದಲ್ಲಿರುವುದು ವರದಿಯಾಗಿದೆ. ಈ ವಿಲಕ್ಷಣ ಮತ್ತು ಆಘಾತಕಾರಿ ಆಡಳಿತಾತ್ಮಕ ವೈಫಲ್ಯದ ಪ್ರಕರಣವು...

ವೋಟ್‌ಯಿಂದ ಹಿಡಿದು ಮಂದಿರದ ಚಂದಾದವರೆಗೆ ಬಿಜೆಪಿಯದ್ದು ಬರೀ ‘ಚೋರಿ’ ಎಂದ ಕಾಂಗ್ರೆಸ್

ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದಿದೆ ಎನ್ನಲಾದ ದೇಣಿಗೆ ದುರುಪಯೋಗದ ವಿಚಾರವಾಗಿ ಭಾನುವಾರ ಕಾಂಗ್ರೆಸ್ ಪಕ್ಷವು ಬಿಜೆಪಿ-ಆರ್‌ಎಸ್‌ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಇದು ಅವರದೇ ಆದ ಇಕೋ ಸಿಸ್ಟಮ್‌ನ ದೊಡ್ಡ "ಹಗರಣ"ವಾಗಿದ್ದು, ಈ...

ಮುಸ್ಲಿಮರನ್ನು ಮಾದಕ ದ್ರವ್ಯ, ಭಯೋತ್ಪಾದನೆಗೆ ಲಿಂಕ್ ಮಾಡಿ ಪೋಸ್ಟ್: ಕೇರಳ ಹಿಂದೂ ಐಕ್ಯ ವೇದಿಕೆ ಮುಖ್ಯಸ್ಥ ಆರ್‌ವಿ ಬಾಬು ವಿರುದ್ಧ ಪ್ರಕರಣ ದಾಖಲು

ಕೊಚ್ಚಿ: ಮುಸ್ಲಿಂ ಸಮುದಾಯ ಮತ್ತು ಅದರ ಧಾರ್ಮಿಕ ಮುಖಂಡರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಹಾಗೂ ಕೋಮು ಪ್ರಚೋದನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಕ್ಕಾಗಿ ಕೇರಳದ ಹಿಂದೂ ಐಕ್ಯ ವೇದಿಕೆಯ ರಾಜ್ಯ ಅಧ್ಯಕ್ಷ ಆರ್.ವಿ. ಬಾಬು...

ಇರಾನ್ ಜನರು ಅವರನ್ನು ದ್ವೇಷಿಸುತ್ತಾರೆ ಅಂದುಕೊಂಡಿದ್ದೆ: ಖಮೇನಿ ಅಂತ್ಯಕ್ರಿಯೆಯ ಜನಸಾಗರ ನೋಡಿ ಶಾಕ್ ಆದ ಟ್ರಂಪ್

ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಲಕ್ಷಾಂತರ ಜನರು ಭಾಗವಹಿಸಿ ಕಣ್ಣೀರು ಹಾಕುತ್ತಿರುವುದನ್ನು ನೋಡಿ ತಮಗೆ ತೀವ್ರ ಆಘಾತವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ....

‘ನಿಮ್ಮ ಮೌನ ಯುವಜನರನ್ನು ಕೇವಲ ಕೀಟಗಳಂತೆ ನೋಡುತ್ತೀರಿ ಎಂಬುದಕ್ಕೆ ಒಪ್ಪಿಗೆಯಾಗಿದೆ’: ಮೋದಿಗೆ ಬಹಿರಂಗ ಪತ್ರ ಬರೆದ ಸಿಜೆಪಿ

"ಈ ದೇಶದ ಯುವಜನರನ್ನು ನೀವು ಕೇವಲ ನಿರ್ಲಕ್ಷಿಸಬೇಕಾದ ಕೀಟಗಳಂತೆ ನೋಡುತ್ತಿದ್ದೀರಾ?" ಎಂದು ಪ್ರಶ್ನಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶನಿವಾರ (ಜುಲೈ 4) ಬಹಿರಂಗ ಪತ್ರ ಬರೆದಿದೆ. ದೇಶದ...

ಮಮತಾ ಬ್ಯಾನರ್ಜಿಗೆ ಬಿಗ್ ಶಾಕ್: ನೇಮಕಗೊಂಡ ತಿಂಗಳಲ್ಲೇ ಟಿಎಂಸಿ ರಾಜ್ಯಾಧ್ಯಕ್ಷೆ ಚಂದ್ರಿಮಾ ಭಟ್ಟಾಚಾರ್ಯ ರಾಜೀನಾಮೆ

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಹಿನ್ನೆಲೆಯಲ್ಲಿ, ಅತ್ಯಂತ ನಿರ್ಣಾಯಕವಾದ ಸಾಂಸ್ಥಿಕ ಜವಾಬ್ದಾರಿಗೆ ನೇಮಕಗೊಂಡ ಕೇವಲ ಒಂದು ತಿಂಗಳ ಒಳಗಾಗಿಯೇ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ರಾಜ್ಯ ಘಟಕದ ಅಧ್ಯಕ್ಷೆ ಚಂದ್ರಿಮಾ...