Homeಕರ್ನಾಟಕ ‘ಮೇಘ ಸಂದೇಶವೇ ನಮ್ಮ ಇಮೇಲ್’. ಎನ್.ಐ.ಎ ಪ್ರಗ್ಯಾ ಮೇಲಿನ ಕೇಸ್ ಕೈಬಿಟ್ಟಿದ್ದು ಹೀಗೆ

 ‘ಮೇಘ ಸಂದೇಶವೇ ನಮ್ಮ ಇಮೇಲ್’. ಎನ್.ಐ.ಎ ಪ್ರಗ್ಯಾ ಮೇಲಿನ ಕೇಸ್ ಕೈಬಿಟ್ಟಿದ್ದು ಹೀಗೆ

ಠಕ್ಕರ್: ಭೋಪಾಲದಲ್ಲಿ ವಿಷಾನಿಲದೊಂದಿಗೆ ಮುಖಾಮುಖಿ

- Advertisement -
- Advertisement -

| ಮಲ್ಲಿ |

‘ಉಜ್ಜೋಣ ಉಜ್ಜೋಣ ಅಂಬಾ ಬೆನ್ನು ಉಜ್ಜೋಣ’

ಪ್ರಗ್ಯಾ ಮನೆ ಸಮೀಪ ಹೋದಂತೆ ಒಂಥರಾ ವಿಷಾನಿಲದ ವಾಸನೆ…. ತೀರಾ ಸಮೀಪವೇ ಹೋದಾಗ ಸೆಗಣಿ ವಾಸನೆ.. ಹಾಂ, ಇದು ಪ್ರಗ್ಯಾ ಮನೆಯೇ ಎಂದು ಪಕ್ಕಾ ಆಗುತ್ತಿದ್ದಂತೆ, ಅಂಗಳದಲ್ಲಿ ಅಂಬಾ ಬೆನ್ನು ಉಜ್ಜುತ್ತ ನಿಂತಿದ್ದ ಪ್ರಗ್ಯಾ ಕಂಡೇಬಿಟ್ಟರು.

ಅಕ್ಕೋ, ಕರ್ನಾಟಕದಿಂದ ಬಂದೀನಿ… ಲೂಜಾವರ ಸ್ವಾಮೀಜಿ ತಮ್ಮ ಇಂಟರ್‍ವ್ಯೂ ಮಾಡಾಕೆ ಕಳಿಸಿದ್ದಾರೆ.
‘ಓಹ್, ಮೊನ್ನೆನೇ ಅವರ ವ್ಯಾಟ್ಸಪ್ ಬಂದಿತ್ತು, ನಿನ್ನೆ ಇಮೇಲ್ ಕೂಡ ಕಳಿಸಿದ್ದರು… ಬಾರಪ್ಪ ಬಾ’ ಎಂದು ಗೋವಿನ ಹಿಂಭಾಗದ ತುದಿಯಿಂದ ಮುಂದಕ್ಕೆ ಉಜ್ಜತೊಡಗಿದರು.
‘ಅಲ್ಲ ಅಕ್ಕವ್ವ, ನೀವೇನೋ ವ್ಯಾಟ್ಸಪ್, ‘ಮೇಲ್’ ಬಳಸಬಹುದು. ಆದರೆ, ಲೂಜಾವರರು ಬಳಸ್ತಾರಾ?’
‘ಅವ್ರು, ನಾನು ಎಲ್ಲ 1988ರಿಂದಾನೇ ಬಳಸ್ತಾ ಇದೀವಿ…’
‘ಮೋದಿ ಹಂಗೆ ಹೇಳಿದ್ದಕ್ಕೆ ಜನ ನಗ್ತಾ ಅವ್ರೆ ಅಕ್ಕಾ’
‘ದಡ್ಡರು ನೀವೆಲ್ಲ…. ನಮ್ಮ ‘ಮೇಲು’ ಅಂದ್ರೆ ಅದು ಮೇಘ ಸಂದೇಶ… ಮೋಡದ ಮೂಲಕವೇ ಸಂದೇಶ ರವಾನಿಸಿಕೊಳ್ತೀವಿ…ಅದನ್ನು ಬೇರೆಯವರು ನೋಡಾಕಾಗಲ್ಲ…ಮೋಡಗಳ ರಕ್ಷಣೆಯಲ್ಲಿ ಅದು ಹರಿದು ನಮ್ಮವರನ್ನ ತಲುಪುತ್ತೆ’
‘ಅದಿರ್ಲಿ ಅಕ್ಕಾ, ‘ಮೇಲು’ ಬಂದು ಇನ್‍ಬಾಕ್ಸ್‍ಗೆ ಬೀಳ್ತಾವೆ. ಆದ್ರೆ ನಿಮ್ಮ ಮೇಘ ಸಂದೇಶ ಎಲ್ಲಿ ಬೀಳತ್ತೆ? ನಿಮ್ಗೆ, ಲೂಜಾವರರಿಗೆ ಬಕ್ಕಣ (ಕಿಸೆ, ಪಾಕೆಟ್) ಬೇರೆ ಇಲ್ವಲ್ಲ?’
‘ಮೂರ್ಖ. ಆ ಸಂದೇಶಗಳು ಸೀದಾ ಆತ್ಮವನ್ನ ತಲುಪ್ತಾವೆ’
‘ಹಂಗಾದ್ರೆ ನಿಂಗೆ ಶಿಕ್ಷೆ ಆಗಲ್ಲಕ್ಕ… ತನಿಖೆ ಮಾಡೋರಿಗೆ ನಿಮ್ಮ ಮೇಘ ಸಂದೇಶ ಸಿಗೋದೇ ಇಲ್ವಲ್ಲ?’
‘ಇದು ಆಫ್ ದಿ ರೆಕಾರ್ಡ್ ಇರಲಿ..’

‘ಅಕ್ಕಾ ಹಿಂಗ ಉಜುತ್ತೀರಲ್ಲ ಆಕಳ ಬೆನ್ನನ್ನ… ಬಿಪಿ ಕಂಟ್ರೋಲ್‍ಗೆ ಬರೋದು ಆಕಳದ್ದೋ, ನಿಮ್ದೋ ಅಕ್ಕಾ’
‘ಪೆದ್ದ, ಗೋಮಾತೆಗೆ ಬಿಪಿ, ಶುಗರ್ ಬರಲ್ಲ’
‘ನಾ ಬಂದಾಗಿಂದ ನೋಡತಿನಿ, ಉಜ್ತಾನೇ ಇದ್ದೀರಿ… ಸೋಲೋ ಭಯದಲ್ಲಿ ಬಿಪಿ ಏರುಪೇರಾಗಿದೆಯಾ?
‘ಓವರ್ ಆಯ್ತು… ಶಾಪ ಕೊಡ್ಲಾ?’
‘ಬೇಡಕ್ಕೋ, ಸಾರಿ….ಅಕ್ಕಾ ಅಕ್ಕಾ, ಕ್ಯಾನ್ಸರ್ ಔಷಧಿ ಬೀಳ್ತಾ ಇದೆ…. ಒಂದು ಬಾಟಲ್ ಕೊಡಕ್ಕ’
(ಆಕಳು ಒಂದು ಕೊಡದಷ್ಟು ಸೂಸು ಮಾಡಿತು…)
‘ಹೇಯ್, ನಿಂಗೆ ಬೇಕಾದ್ರೆ ಅಲ್ಲಿ ಕರ್ನಾಟಕದಲ್ಲಿ ಸಿಗುತ್ತೆ… ರಾಮ್ದೇವ್ ನನ್ನ ಫಾರ್ಮುಲಾ ಇಟ್ಗೊಂಡು, ಗೋಮೂತ್ರಗಳ ಪಾಕೆಟ್ ಮಾಡಿ ‘ಹೇತಂಜಲಿ’ಯಲ್ಲಿ ಮಾರ್ತಾನೆ…’

‘ಅಕ್ಕಾ ಈ ರೇಡಾರ್ ಬಗ್ಗೆ ನಿಂಗೇನಾದ್ರೂ ಗೊತ್ತಾ ಅಕ್ಕ?’
‘ಚಿಕ್ಕಪ್ಪಯ್ಯ ಹೇಳಿದ್ದನ್ನ ಜೋಕ್ ಮಾಡ್ತೀದಿಯಾ? ಆಫ್ ದಿ ರೆಕಾರ್ಡ್ ಕೇಳು: ನಮ್ಮನ್ನೆಲ್ಲ ಜೈಲಿಗೆ ಹಾಕಿದ್ರಾ… ಅಮಿತಣ್ಣಂಗೂ ಜೈಲು ಕಾದಿತ್ತಾ? ಚಿಕ್ಕಪ್ಪ ಮೋಡ ಸೃಷ್ಟಿಸಿಬಿಟ್ಟ… ಎನ್‍ಐಎ ಕಣ್ಣಿನ ಪೊರೆಗೆ ಈ ಮೋಡ ಅಮರಿಕೊಂಡವು… ಅಸೀಮಾನಂದ ಕಾಕಾ ಅದಕ್ಕೇ ರಿಲೀಸ್ ಆಗಲಿಲ್ವಾ… ನಮ್ಮ ಚಿಕ್ಕಪ್ಪ ಹೇಳಿದ್ದು ನಿಮ್ಗೆ ಅರ್ಥ ಆಗಲ್ಲ…’
(ಪ್ರಗ್ಯಕ್ಕ ಎದೆ ಮೇಲೆ ಕೈ ಇಟ್ಟುಕೊಂಡು ಕಣ್ಣು ಮುಚ್ಚಿಕೊಂಡರು….ಆಕಳು ಅಂಬಾ ಅಂದಿತು…)
‘ಏನಾಯ್ತಕ್ಕಾ, ಎದೆನೋವಾ?’
‘ನೋ ನೋ… ಆತ್ಮಕ್ಕೆ ಮೇಘ ಸಂದೇಶವೊಂದು ಬಂದಿದೆ, ಚಿಕ್ಕಪ್ಪಯ್ಯನ ಕಡೆಯಿಂದ’
‘ಆಯ್ತಕ್ಕ ಇನ್‍ಬಾಕ್ಸ್…. ಸಾರಿ… ಆತ್ಮವ ತೆರೆದು ಮೇಲು ನೋಡು… ಬರ್ಲಾ ಅಕ್ಕಾ…ಒಂದೇ ಒಂದು ಸಲ ಉಜ್ಜಲಾ?’
(ಟೊಣಪನೊಬ್ಬ ಬಂದು ಏ ಎಂದು ಗದರಿಸಿದ)
‘ಉಜ್ಜಲಿ ಬಿಡು…. ಗೋಮಾತೆ ಇರೋದೇ ಉಜ್ಜಲು, ಬಿಪಿ ಕಂಟ್ರೋಲ್ ಮಾಡಿಕೊಳ್ಳಲು…’
ನಮ್ಮ ಠಕ್ಕಣ್ಣ ಆಕಳಿನ ಬೆನ್ನು ಉಜ್ಜುವಾಗ ಮತ್ತೆ ವಿಷಾನಿಲದ ವಾಸನೆ… ಭಯ ಬಿದ್ದವನೇ ಅಲ್ಲಿಂದ ಪರಾರಿಯಾಗಿ ಬಂದಿದ್ದಾನೆ…

ದೇಶದೊಳಗಿನ ‘ಬಾಂಬು’ ಪ್ರಗ್ಯಾ ಎಂಬ ಸಾಧ್ವಿಯೂ… ಸುರಕ್ಷತೆ ಬಗ್ಗೆ ಕುಟ್ಟುತ್ತಲೇ ಇರುವ ಮೋದಿಯೂ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...