Homeಕರ್ನಾಟಕ ‘ಮೇಘ ಸಂದೇಶವೇ ನಮ್ಮ ಇಮೇಲ್’. ಎನ್.ಐ.ಎ ಪ್ರಗ್ಯಾ ಮೇಲಿನ ಕೇಸ್ ಕೈಬಿಟ್ಟಿದ್ದು ಹೀಗೆ

 ‘ಮೇಘ ಸಂದೇಶವೇ ನಮ್ಮ ಇಮೇಲ್’. ಎನ್.ಐ.ಎ ಪ್ರಗ್ಯಾ ಮೇಲಿನ ಕೇಸ್ ಕೈಬಿಟ್ಟಿದ್ದು ಹೀಗೆ

ಠಕ್ಕರ್: ಭೋಪಾಲದಲ್ಲಿ ವಿಷಾನಿಲದೊಂದಿಗೆ ಮುಖಾಮುಖಿ

- Advertisement -
- Advertisement -

| ಮಲ್ಲಿ |

‘ಉಜ್ಜೋಣ ಉಜ್ಜೋಣ ಅಂಬಾ ಬೆನ್ನು ಉಜ್ಜೋಣ’

ಪ್ರಗ್ಯಾ ಮನೆ ಸಮೀಪ ಹೋದಂತೆ ಒಂಥರಾ ವಿಷಾನಿಲದ ವಾಸನೆ…. ತೀರಾ ಸಮೀಪವೇ ಹೋದಾಗ ಸೆಗಣಿ ವಾಸನೆ.. ಹಾಂ, ಇದು ಪ್ರಗ್ಯಾ ಮನೆಯೇ ಎಂದು ಪಕ್ಕಾ ಆಗುತ್ತಿದ್ದಂತೆ, ಅಂಗಳದಲ್ಲಿ ಅಂಬಾ ಬೆನ್ನು ಉಜ್ಜುತ್ತ ನಿಂತಿದ್ದ ಪ್ರಗ್ಯಾ ಕಂಡೇಬಿಟ್ಟರು.

ಅಕ್ಕೋ, ಕರ್ನಾಟಕದಿಂದ ಬಂದೀನಿ… ಲೂಜಾವರ ಸ್ವಾಮೀಜಿ ತಮ್ಮ ಇಂಟರ್‍ವ್ಯೂ ಮಾಡಾಕೆ ಕಳಿಸಿದ್ದಾರೆ.
‘ಓಹ್, ಮೊನ್ನೆನೇ ಅವರ ವ್ಯಾಟ್ಸಪ್ ಬಂದಿತ್ತು, ನಿನ್ನೆ ಇಮೇಲ್ ಕೂಡ ಕಳಿಸಿದ್ದರು… ಬಾರಪ್ಪ ಬಾ’ ಎಂದು ಗೋವಿನ ಹಿಂಭಾಗದ ತುದಿಯಿಂದ ಮುಂದಕ್ಕೆ ಉಜ್ಜತೊಡಗಿದರು.
‘ಅಲ್ಲ ಅಕ್ಕವ್ವ, ನೀವೇನೋ ವ್ಯಾಟ್ಸಪ್, ‘ಮೇಲ್’ ಬಳಸಬಹುದು. ಆದರೆ, ಲೂಜಾವರರು ಬಳಸ್ತಾರಾ?’
‘ಅವ್ರು, ನಾನು ಎಲ್ಲ 1988ರಿಂದಾನೇ ಬಳಸ್ತಾ ಇದೀವಿ…’
‘ಮೋದಿ ಹಂಗೆ ಹೇಳಿದ್ದಕ್ಕೆ ಜನ ನಗ್ತಾ ಅವ್ರೆ ಅಕ್ಕಾ’
‘ದಡ್ಡರು ನೀವೆಲ್ಲ…. ನಮ್ಮ ‘ಮೇಲು’ ಅಂದ್ರೆ ಅದು ಮೇಘ ಸಂದೇಶ… ಮೋಡದ ಮೂಲಕವೇ ಸಂದೇಶ ರವಾನಿಸಿಕೊಳ್ತೀವಿ…ಅದನ್ನು ಬೇರೆಯವರು ನೋಡಾಕಾಗಲ್ಲ…ಮೋಡಗಳ ರಕ್ಷಣೆಯಲ್ಲಿ ಅದು ಹರಿದು ನಮ್ಮವರನ್ನ ತಲುಪುತ್ತೆ’
‘ಅದಿರ್ಲಿ ಅಕ್ಕಾ, ‘ಮೇಲು’ ಬಂದು ಇನ್‍ಬಾಕ್ಸ್‍ಗೆ ಬೀಳ್ತಾವೆ. ಆದ್ರೆ ನಿಮ್ಮ ಮೇಘ ಸಂದೇಶ ಎಲ್ಲಿ ಬೀಳತ್ತೆ? ನಿಮ್ಗೆ, ಲೂಜಾವರರಿಗೆ ಬಕ್ಕಣ (ಕಿಸೆ, ಪಾಕೆಟ್) ಬೇರೆ ಇಲ್ವಲ್ಲ?’
‘ಮೂರ್ಖ. ಆ ಸಂದೇಶಗಳು ಸೀದಾ ಆತ್ಮವನ್ನ ತಲುಪ್ತಾವೆ’
‘ಹಂಗಾದ್ರೆ ನಿಂಗೆ ಶಿಕ್ಷೆ ಆಗಲ್ಲಕ್ಕ… ತನಿಖೆ ಮಾಡೋರಿಗೆ ನಿಮ್ಮ ಮೇಘ ಸಂದೇಶ ಸಿಗೋದೇ ಇಲ್ವಲ್ಲ?’
‘ಇದು ಆಫ್ ದಿ ರೆಕಾರ್ಡ್ ಇರಲಿ..’

‘ಅಕ್ಕಾ ಹಿಂಗ ಉಜುತ್ತೀರಲ್ಲ ಆಕಳ ಬೆನ್ನನ್ನ… ಬಿಪಿ ಕಂಟ್ರೋಲ್‍ಗೆ ಬರೋದು ಆಕಳದ್ದೋ, ನಿಮ್ದೋ ಅಕ್ಕಾ’
‘ಪೆದ್ದ, ಗೋಮಾತೆಗೆ ಬಿಪಿ, ಶುಗರ್ ಬರಲ್ಲ’
‘ನಾ ಬಂದಾಗಿಂದ ನೋಡತಿನಿ, ಉಜ್ತಾನೇ ಇದ್ದೀರಿ… ಸೋಲೋ ಭಯದಲ್ಲಿ ಬಿಪಿ ಏರುಪೇರಾಗಿದೆಯಾ?
‘ಓವರ್ ಆಯ್ತು… ಶಾಪ ಕೊಡ್ಲಾ?’
‘ಬೇಡಕ್ಕೋ, ಸಾರಿ….ಅಕ್ಕಾ ಅಕ್ಕಾ, ಕ್ಯಾನ್ಸರ್ ಔಷಧಿ ಬೀಳ್ತಾ ಇದೆ…. ಒಂದು ಬಾಟಲ್ ಕೊಡಕ್ಕ’
(ಆಕಳು ಒಂದು ಕೊಡದಷ್ಟು ಸೂಸು ಮಾಡಿತು…)
‘ಹೇಯ್, ನಿಂಗೆ ಬೇಕಾದ್ರೆ ಅಲ್ಲಿ ಕರ್ನಾಟಕದಲ್ಲಿ ಸಿಗುತ್ತೆ… ರಾಮ್ದೇವ್ ನನ್ನ ಫಾರ್ಮುಲಾ ಇಟ್ಗೊಂಡು, ಗೋಮೂತ್ರಗಳ ಪಾಕೆಟ್ ಮಾಡಿ ‘ಹೇತಂಜಲಿ’ಯಲ್ಲಿ ಮಾರ್ತಾನೆ…’

‘ಅಕ್ಕಾ ಈ ರೇಡಾರ್ ಬಗ್ಗೆ ನಿಂಗೇನಾದ್ರೂ ಗೊತ್ತಾ ಅಕ್ಕ?’
‘ಚಿಕ್ಕಪ್ಪಯ್ಯ ಹೇಳಿದ್ದನ್ನ ಜೋಕ್ ಮಾಡ್ತೀದಿಯಾ? ಆಫ್ ದಿ ರೆಕಾರ್ಡ್ ಕೇಳು: ನಮ್ಮನ್ನೆಲ್ಲ ಜೈಲಿಗೆ ಹಾಕಿದ್ರಾ… ಅಮಿತಣ್ಣಂಗೂ ಜೈಲು ಕಾದಿತ್ತಾ? ಚಿಕ್ಕಪ್ಪ ಮೋಡ ಸೃಷ್ಟಿಸಿಬಿಟ್ಟ… ಎನ್‍ಐಎ ಕಣ್ಣಿನ ಪೊರೆಗೆ ಈ ಮೋಡ ಅಮರಿಕೊಂಡವು… ಅಸೀಮಾನಂದ ಕಾಕಾ ಅದಕ್ಕೇ ರಿಲೀಸ್ ಆಗಲಿಲ್ವಾ… ನಮ್ಮ ಚಿಕ್ಕಪ್ಪ ಹೇಳಿದ್ದು ನಿಮ್ಗೆ ಅರ್ಥ ಆಗಲ್ಲ…’
(ಪ್ರಗ್ಯಕ್ಕ ಎದೆ ಮೇಲೆ ಕೈ ಇಟ್ಟುಕೊಂಡು ಕಣ್ಣು ಮುಚ್ಚಿಕೊಂಡರು….ಆಕಳು ಅಂಬಾ ಅಂದಿತು…)
‘ಏನಾಯ್ತಕ್ಕಾ, ಎದೆನೋವಾ?’
‘ನೋ ನೋ… ಆತ್ಮಕ್ಕೆ ಮೇಘ ಸಂದೇಶವೊಂದು ಬಂದಿದೆ, ಚಿಕ್ಕಪ್ಪಯ್ಯನ ಕಡೆಯಿಂದ’
‘ಆಯ್ತಕ್ಕ ಇನ್‍ಬಾಕ್ಸ್…. ಸಾರಿ… ಆತ್ಮವ ತೆರೆದು ಮೇಲು ನೋಡು… ಬರ್ಲಾ ಅಕ್ಕಾ…ಒಂದೇ ಒಂದು ಸಲ ಉಜ್ಜಲಾ?’
(ಟೊಣಪನೊಬ್ಬ ಬಂದು ಏ ಎಂದು ಗದರಿಸಿದ)
‘ಉಜ್ಜಲಿ ಬಿಡು…. ಗೋಮಾತೆ ಇರೋದೇ ಉಜ್ಜಲು, ಬಿಪಿ ಕಂಟ್ರೋಲ್ ಮಾಡಿಕೊಳ್ಳಲು…’
ನಮ್ಮ ಠಕ್ಕಣ್ಣ ಆಕಳಿನ ಬೆನ್ನು ಉಜ್ಜುವಾಗ ಮತ್ತೆ ವಿಷಾನಿಲದ ವಾಸನೆ… ಭಯ ಬಿದ್ದವನೇ ಅಲ್ಲಿಂದ ಪರಾರಿಯಾಗಿ ಬಂದಿದ್ದಾನೆ…

ದೇಶದೊಳಗಿನ ‘ಬಾಂಬು’ ಪ್ರಗ್ಯಾ ಎಂಬ ಸಾಧ್ವಿಯೂ… ಸುರಕ್ಷತೆ ಬಗ್ಗೆ ಕುಟ್ಟುತ್ತಲೇ ಇರುವ ಮೋದಿಯೂ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...