Homeಕರ್ನಾಟಕ ‘ಮೇಘ ಸಂದೇಶವೇ ನಮ್ಮ ಇಮೇಲ್’. ಎನ್.ಐ.ಎ ಪ್ರಗ್ಯಾ ಮೇಲಿನ ಕೇಸ್ ಕೈಬಿಟ್ಟಿದ್ದು ಹೀಗೆ

 ‘ಮೇಘ ಸಂದೇಶವೇ ನಮ್ಮ ಇಮೇಲ್’. ಎನ್.ಐ.ಎ ಪ್ರಗ್ಯಾ ಮೇಲಿನ ಕೇಸ್ ಕೈಬಿಟ್ಟಿದ್ದು ಹೀಗೆ

ಠಕ್ಕರ್: ಭೋಪಾಲದಲ್ಲಿ ವಿಷಾನಿಲದೊಂದಿಗೆ ಮುಖಾಮುಖಿ

- Advertisement -
- Advertisement -

| ಮಲ್ಲಿ |

‘ಉಜ್ಜೋಣ ಉಜ್ಜೋಣ ಅಂಬಾ ಬೆನ್ನು ಉಜ್ಜೋಣ’

ಪ್ರಗ್ಯಾ ಮನೆ ಸಮೀಪ ಹೋದಂತೆ ಒಂಥರಾ ವಿಷಾನಿಲದ ವಾಸನೆ…. ತೀರಾ ಸಮೀಪವೇ ಹೋದಾಗ ಸೆಗಣಿ ವಾಸನೆ.. ಹಾಂ, ಇದು ಪ್ರಗ್ಯಾ ಮನೆಯೇ ಎಂದು ಪಕ್ಕಾ ಆಗುತ್ತಿದ್ದಂತೆ, ಅಂಗಳದಲ್ಲಿ ಅಂಬಾ ಬೆನ್ನು ಉಜ್ಜುತ್ತ ನಿಂತಿದ್ದ ಪ್ರಗ್ಯಾ ಕಂಡೇಬಿಟ್ಟರು.

ಅಕ್ಕೋ, ಕರ್ನಾಟಕದಿಂದ ಬಂದೀನಿ… ಲೂಜಾವರ ಸ್ವಾಮೀಜಿ ತಮ್ಮ ಇಂಟರ್‍ವ್ಯೂ ಮಾಡಾಕೆ ಕಳಿಸಿದ್ದಾರೆ.
‘ಓಹ್, ಮೊನ್ನೆನೇ ಅವರ ವ್ಯಾಟ್ಸಪ್ ಬಂದಿತ್ತು, ನಿನ್ನೆ ಇಮೇಲ್ ಕೂಡ ಕಳಿಸಿದ್ದರು… ಬಾರಪ್ಪ ಬಾ’ ಎಂದು ಗೋವಿನ ಹಿಂಭಾಗದ ತುದಿಯಿಂದ ಮುಂದಕ್ಕೆ ಉಜ್ಜತೊಡಗಿದರು.
‘ಅಲ್ಲ ಅಕ್ಕವ್ವ, ನೀವೇನೋ ವ್ಯಾಟ್ಸಪ್, ‘ಮೇಲ್’ ಬಳಸಬಹುದು. ಆದರೆ, ಲೂಜಾವರರು ಬಳಸ್ತಾರಾ?’
‘ಅವ್ರು, ನಾನು ಎಲ್ಲ 1988ರಿಂದಾನೇ ಬಳಸ್ತಾ ಇದೀವಿ…’
‘ಮೋದಿ ಹಂಗೆ ಹೇಳಿದ್ದಕ್ಕೆ ಜನ ನಗ್ತಾ ಅವ್ರೆ ಅಕ್ಕಾ’
‘ದಡ್ಡರು ನೀವೆಲ್ಲ…. ನಮ್ಮ ‘ಮೇಲು’ ಅಂದ್ರೆ ಅದು ಮೇಘ ಸಂದೇಶ… ಮೋಡದ ಮೂಲಕವೇ ಸಂದೇಶ ರವಾನಿಸಿಕೊಳ್ತೀವಿ…ಅದನ್ನು ಬೇರೆಯವರು ನೋಡಾಕಾಗಲ್ಲ…ಮೋಡಗಳ ರಕ್ಷಣೆಯಲ್ಲಿ ಅದು ಹರಿದು ನಮ್ಮವರನ್ನ ತಲುಪುತ್ತೆ’
‘ಅದಿರ್ಲಿ ಅಕ್ಕಾ, ‘ಮೇಲು’ ಬಂದು ಇನ್‍ಬಾಕ್ಸ್‍ಗೆ ಬೀಳ್ತಾವೆ. ಆದ್ರೆ ನಿಮ್ಮ ಮೇಘ ಸಂದೇಶ ಎಲ್ಲಿ ಬೀಳತ್ತೆ? ನಿಮ್ಗೆ, ಲೂಜಾವರರಿಗೆ ಬಕ್ಕಣ (ಕಿಸೆ, ಪಾಕೆಟ್) ಬೇರೆ ಇಲ್ವಲ್ಲ?’
‘ಮೂರ್ಖ. ಆ ಸಂದೇಶಗಳು ಸೀದಾ ಆತ್ಮವನ್ನ ತಲುಪ್ತಾವೆ’
‘ಹಂಗಾದ್ರೆ ನಿಂಗೆ ಶಿಕ್ಷೆ ಆಗಲ್ಲಕ್ಕ… ತನಿಖೆ ಮಾಡೋರಿಗೆ ನಿಮ್ಮ ಮೇಘ ಸಂದೇಶ ಸಿಗೋದೇ ಇಲ್ವಲ್ಲ?’
‘ಇದು ಆಫ್ ದಿ ರೆಕಾರ್ಡ್ ಇರಲಿ..’

‘ಅಕ್ಕಾ ಹಿಂಗ ಉಜುತ್ತೀರಲ್ಲ ಆಕಳ ಬೆನ್ನನ್ನ… ಬಿಪಿ ಕಂಟ್ರೋಲ್‍ಗೆ ಬರೋದು ಆಕಳದ್ದೋ, ನಿಮ್ದೋ ಅಕ್ಕಾ’
‘ಪೆದ್ದ, ಗೋಮಾತೆಗೆ ಬಿಪಿ, ಶುಗರ್ ಬರಲ್ಲ’
‘ನಾ ಬಂದಾಗಿಂದ ನೋಡತಿನಿ, ಉಜ್ತಾನೇ ಇದ್ದೀರಿ… ಸೋಲೋ ಭಯದಲ್ಲಿ ಬಿಪಿ ಏರುಪೇರಾಗಿದೆಯಾ?
‘ಓವರ್ ಆಯ್ತು… ಶಾಪ ಕೊಡ್ಲಾ?’
‘ಬೇಡಕ್ಕೋ, ಸಾರಿ….ಅಕ್ಕಾ ಅಕ್ಕಾ, ಕ್ಯಾನ್ಸರ್ ಔಷಧಿ ಬೀಳ್ತಾ ಇದೆ…. ಒಂದು ಬಾಟಲ್ ಕೊಡಕ್ಕ’
(ಆಕಳು ಒಂದು ಕೊಡದಷ್ಟು ಸೂಸು ಮಾಡಿತು…)
‘ಹೇಯ್, ನಿಂಗೆ ಬೇಕಾದ್ರೆ ಅಲ್ಲಿ ಕರ್ನಾಟಕದಲ್ಲಿ ಸಿಗುತ್ತೆ… ರಾಮ್ದೇವ್ ನನ್ನ ಫಾರ್ಮುಲಾ ಇಟ್ಗೊಂಡು, ಗೋಮೂತ್ರಗಳ ಪಾಕೆಟ್ ಮಾಡಿ ‘ಹೇತಂಜಲಿ’ಯಲ್ಲಿ ಮಾರ್ತಾನೆ…’

‘ಅಕ್ಕಾ ಈ ರೇಡಾರ್ ಬಗ್ಗೆ ನಿಂಗೇನಾದ್ರೂ ಗೊತ್ತಾ ಅಕ್ಕ?’
‘ಚಿಕ್ಕಪ್ಪಯ್ಯ ಹೇಳಿದ್ದನ್ನ ಜೋಕ್ ಮಾಡ್ತೀದಿಯಾ? ಆಫ್ ದಿ ರೆಕಾರ್ಡ್ ಕೇಳು: ನಮ್ಮನ್ನೆಲ್ಲ ಜೈಲಿಗೆ ಹಾಕಿದ್ರಾ… ಅಮಿತಣ್ಣಂಗೂ ಜೈಲು ಕಾದಿತ್ತಾ? ಚಿಕ್ಕಪ್ಪ ಮೋಡ ಸೃಷ್ಟಿಸಿಬಿಟ್ಟ… ಎನ್‍ಐಎ ಕಣ್ಣಿನ ಪೊರೆಗೆ ಈ ಮೋಡ ಅಮರಿಕೊಂಡವು… ಅಸೀಮಾನಂದ ಕಾಕಾ ಅದಕ್ಕೇ ರಿಲೀಸ್ ಆಗಲಿಲ್ವಾ… ನಮ್ಮ ಚಿಕ್ಕಪ್ಪ ಹೇಳಿದ್ದು ನಿಮ್ಗೆ ಅರ್ಥ ಆಗಲ್ಲ…’
(ಪ್ರಗ್ಯಕ್ಕ ಎದೆ ಮೇಲೆ ಕೈ ಇಟ್ಟುಕೊಂಡು ಕಣ್ಣು ಮುಚ್ಚಿಕೊಂಡರು….ಆಕಳು ಅಂಬಾ ಅಂದಿತು…)
‘ಏನಾಯ್ತಕ್ಕಾ, ಎದೆನೋವಾ?’
‘ನೋ ನೋ… ಆತ್ಮಕ್ಕೆ ಮೇಘ ಸಂದೇಶವೊಂದು ಬಂದಿದೆ, ಚಿಕ್ಕಪ್ಪಯ್ಯನ ಕಡೆಯಿಂದ’
‘ಆಯ್ತಕ್ಕ ಇನ್‍ಬಾಕ್ಸ್…. ಸಾರಿ… ಆತ್ಮವ ತೆರೆದು ಮೇಲು ನೋಡು… ಬರ್ಲಾ ಅಕ್ಕಾ…ಒಂದೇ ಒಂದು ಸಲ ಉಜ್ಜಲಾ?’
(ಟೊಣಪನೊಬ್ಬ ಬಂದು ಏ ಎಂದು ಗದರಿಸಿದ)
‘ಉಜ್ಜಲಿ ಬಿಡು…. ಗೋಮಾತೆ ಇರೋದೇ ಉಜ್ಜಲು, ಬಿಪಿ ಕಂಟ್ರೋಲ್ ಮಾಡಿಕೊಳ್ಳಲು…’
ನಮ್ಮ ಠಕ್ಕಣ್ಣ ಆಕಳಿನ ಬೆನ್ನು ಉಜ್ಜುವಾಗ ಮತ್ತೆ ವಿಷಾನಿಲದ ವಾಸನೆ… ಭಯ ಬಿದ್ದವನೇ ಅಲ್ಲಿಂದ ಪರಾರಿಯಾಗಿ ಬಂದಿದ್ದಾನೆ…

ದೇಶದೊಳಗಿನ ‘ಬಾಂಬು’ ಪ್ರಗ್ಯಾ ಎಂಬ ಸಾಧ್ವಿಯೂ… ಸುರಕ್ಷತೆ ಬಗ್ಗೆ ಕುಟ್ಟುತ್ತಲೇ ಇರುವ ಮೋದಿಯೂ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...