Homeಅಂಕಣಗಳುಜಂಟಿ ಕಾರ್ಯದರ್ಶಿ ಹುದ್ದೆಗಳ ನೇರ ನೇಮಕದ ಹುನ್ನಾರಗಳು

ಜಂಟಿ ಕಾರ್ಯದರ್ಶಿ ಹುದ್ದೆಗಳ ನೇರ ನೇಮಕದ ಹುನ್ನಾರಗಳು

- Advertisement -
- Advertisement -

ಇದೊಂದು ತೀರಾ ಅಪಾಯಕಾರಿ ಸಂವಿಧಾನ ವಿರೋಧಿ ನಡೆ. ಭಾರತೀಯ ಪ್ರತಿಭಾವಂತ ಉತ್ಸಾಹಿಗಳಿಗೆ ಸದೃಢ ಭಾರತವನ್ನು ಕಟ್ಟಲು ನೀವು ಜಂಟಿ ಕಾರ್ಯದರ್ಶಿಯಾಗಿ ಸರಕಾರದೊಂದಿಗೆ ಕೈಜೋಡಿಸಿ ಎಂದು ಹೇಳುವ ಸರಕಾರದ ಈ ಘೋಷಣೆಯಲ್ಲಿಯೇ ಬಹುದೊಡ್ಡ ಹುನ್ನಾರ ಅಡಗಿದೆ. ನೇರ ಆಯ್ಕೆಯಲ್ಲಿ ಆಯ್ಕೆಯಾಗುವ ಈ ಜಾಯಿಂಟ್ ಸೆಕ್ರೆಟ್ರಿಗಳು ಯೋಜನೆಗಳನ್ನು ರೂಪಿಸುವುದಲ್ಲದೆ, ಈ ಯೋಜನೆಗಳನ್ನು ಸ್ವತಂತ್ರವಾಗಿ ಜಾರಿಗೊಳಿಸುವ ಪರಮಾಧಿಕಾರವನ್ನೂ ಹೊಂದಿದ್ದಾರೆ.
ಇದೀಗ ಹಣಕಾಸು, ಆರ್ಥಿಕವ್ಯವಹಾರ, ಕೃಷಿ ಮತ್ತು ಕೃಷಿಕರ ಕಲ್ಯಾಣ, ಸಾರಿಗೆ, ನಾಗರಿಕ ವಿಮಾನಯಾನ, ನೌಕಾಯಾನ, ಪರಿಸರ, ಅರಣ್ಯ ಮೊದಲಾದ ಪ್ರಮುಖ 10 ಇಲಾಖೆಗಳಿಗೆ ಈ ಹುದ್ದೆಗಳನ್ನು ಕರೆಯಲಾಗಿದೆ. ಹುದ್ದೆಗಿರುವ ಮಾನದಂಡಗಳನ್ನು ಗಮನಿಸೋಣ. ಜುಲೈ 1, 2018 ಕ್ಕೆ ಸರಿಯಾಗಿ 40 ವರ್ಷ ತುಂಬಿರಬೇಕು, ಪದವೀಧರರಾಗಿರಬೇಕು, ಈಗಾಗಲೆ ಜಾಯಿಂಟ್ ಸೆಕ್ರೆಟರಿಯ ಪದನಾಮಕ್ಕೆ ಸಮನಾದ ಹುದ್ದೆಗಳಲ್ಲಿ ಅನುಭವ ಇದ್ದವರಿಗೆ ಆದ್ಯತೆ ಇದೆ. ಖಾಸಗಿಯಾಗಿಯೂ ಕನಿಷ್ಠ 15 ವರ್ಷಗಳ ಕಾಲ ಖಾಸಗಿ, ಡೀಮ್ಡ್ ಕಂಪನಿಗಳನ್ನು ಒಳಗೊಂಡಂತೆ ವಿಶ್ವವಿದ್ಯಾಲಯಗಳು, ಎನ್‍ಜಿಓಗಳಲ್ಲಿ ಕೆಲಸ ಮಾಡಿದವರನ್ನೂ ಪರಿಗಣಿಸಲಾಗುವುದು. ಇದು 3 ವರ್ಷದಿಂದ 5 ವರ್ಷದ ಅವಧಿಯ ಕಾಂಟ್ರಾಕ್ಟ್ ಬೇಸ್ಡ್ ಆದ ಜವಾಬ್ದಾರಿಯಾಗಿದೆ. ಸಂಬಳ 144200 ರಿಂದ 218200/- ತನಕ ನಿಗದಿ ಮಾಡಬಹುದಾಗಿದೆ. ಇದೇ ಜೂನ್ 15 ರಿಂದ ಜುಲೈ 30 ರತನಕ ಅರ್ಜಿಯನ್ನು ಆನ್‍ಲೈನಲ್ಲಿ ಆಹ್ವಾನಿಸಲಾಗಿದೆ. ಅರ್ಜಿ ಹಾಕಿದವರಲ್ಲಿ ಅರ್ಹರಾದವರ ಅಂತಿಮ ಪಟ್ಟಿ ಸಿದ್ಧಪಡಿಸಿ, ಈ ಅಂತಿಮ ಪಟ್ಟಿಯಲ್ಲಿರುವವರನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಕಾರ್ಪೊರೇಟ್‍ಗಳು, ಬಂಡವಾಳಶಾಹಿಗಳು ಹಣ ಹೂಡಿ ಒಬ್ಬ ರಾಜಕಾರಣಿಯನ್ನು ಗೆಲ್ಲಿಸುವುದಿದೆ. ಅದೀಗ ದೇಶದ ಬಲಾಢ್ಯ ಕಾರ್ಪೊರೇಟ್‍ಗಳ ಒಕ್ಕೂಟ ಬಂಡವಾಳ ಹೂಡಿ ಈ ದೇಶದ ಪ್ರಧಾನಿಯನ್ನು ನಿರ್ಧರಿಸುವ ಹಂತಕ್ಕೆ ತಲುಪಿದೆ. ಆದರೆ ಭಾರತೀಯ ನಾಗರಿಕ ಸೇವೆಯ ಉನ್ನತ ಅಧಿಕಾರಿಗಳನ್ನು ಹೀಗೆ ಕೊಳ್ಳುವುದು ಕಷ್ಟ. ಈತನಕ ಲೋಕಸೇವಾ ಆಯೋಗದ ಐಎಎಸ್‍ನ ಆಯ್ಕೆ ಸಾಧ್ಯವಾದಷ್ಟು ಪಾರದರ್ಶಕವಾಗಿ ನಡೆಯುತ್ತಿದೆ. ಆದರೆ ಈ ಬೆಳವಣಿಗೆಯನ್ನು ನೋಡಿದರೆ ಕಾರ್ಪೊರೇಟ್ ಶ್ರೀಮಂತರ ಒಕ್ಕೂಟ ಇದೀಗ ಲೋಕಸೇವಾ ಆಯೋಗಕ್ಕೂ ಲಗ್ಗೆ ಇಟ್ಟು ತಮಗೆ ಬೇಕಾದವರನ್ನು ನಿರ್ಧರಿಸಿ ಅವರ ಆಯ್ಕೆಗೆ ಬೇಕಾದ ಲಾಬಿ ಮಾಡುವ ಕಾಲವೂ ದೂರವಿಲ್ಲ ಅನ್ನಿಸುತ್ತದೆ. ಹಾಗಾಗಿ ಮೊದಲನೆಯದಾಗಿ ನಾಗರಿಕ ಸೇವೆಯ ಕನಸು ಕಾಣುವ ಯುವ ಸಮುದಾಯ ಈ ಬಗ್ಗೆ ಎಚ್ಚರಗೊಳ್ಳಬೇಕಿದೆ.
ಈ ನಡೆಯ ಅಪಾಯವನ್ನು ಪಕ್ಷಾತೀತವಾಗಿ ವಿರೋಧಿಸುವಿಕೆ ಕಂಡುಬರುತ್ತಿದೆ. ಅಂತಹ ಕೆಲವು ಚರ್ಚೆಗಳನ್ನು ಗಮನಿಸುವಾಗ ಬಿಹಾರದ ಆರ್‍ಜೆಡಿ ಮುಖಂಡ ತೇಜಸ್ವಿ ಯಾದವ್ ಟ್ವೀಟ್‍ನ್ನು ಗಮನಿಸಬಹುದು, `ಈ ಮನುವಾದಿ ಸರಕಾರ ಯುಪಿಎಸ್‍ಸಿ ವ್ಯವಸ್ಥೆಯನ್ನು ಬದಿಗೆ ಸರಿಸಿ, ಯಾವುದೇ ಪರೀಕ್ಷೆ ನಡೆಸದೆ ತನಗಿಷ್ಟ ಬಂದವರನ್ನು ಜಂಟಿ ಕಾರ್ಯದರ್ಶಿಗಳಂತಹ ಪ್ರಮುಖ ಹುದ್ದೆಗೆ ಆಯ್ಕೆ ಮಾಡಿಕೊಳ್ಳುವುದು ಸರಿಯೇ? ಇದು ಸಂವಿಧಾನದ ಮತ್ತು ಮೀಸಲಾತಿ ನಿಯಮದ ಉಲ್ಲಂಘನೆಯಾಗಿದೆ. ನಾಳೆ ಚುನಾವಣೆ ನಡೆಸದೆ ಪ್ರಧಾನಿಯನ್ನು ಮತ್ತು ಸಚಿವ ಸಂಪುಟವನ್ನೂ ಅವರು ನೇಮಿಸಬಹುದು. ಈ ಸರಕಾರ ಸಂವಿಧಾನವನ್ನು ಒಂದು ತಮಾಷೆಯ ವಿಷಯವನ್ನಾಗಿಸಿದೆ’ ಎನ್ನುತ್ತಾರೆ. ಅಂತೆಯೇ ಕಾಂಗ್ರೆಸ್ ಮುಖಂಡ ಪಿ.ಎಲ್.ಪುನಿಯಾ `ಬಿಜೆಪಿ ಕಾರ್ಯಕರ್ತರಿಗೆ ಹಾಗೂ ಆರೆಸ್ಸೆಸ್ ಸಿದ್ಧಾಂತದ ಹಿನ್ನೆಲೆಯ ವ್ಯಕ್ತಿಗಳಿಗೆ ಅವಕಾಶ ಮಾಡಿಕೊಡಲು ಸರಕಾರ ರೂಪಿಸಿದ ಯೋಜನೆ ಇದಾಗಿದೆ. ಇಂತಹ ಪ್ರಮುಖ ಹುದ್ದೆಗಳಿಗೆ ಆರೆಸ್ಸೆಸ್ ಹಿನ್ನೆಲೆಯ ವ್ಯಕ್ತಿಗಳನ್ನು ನೇಮಿಸಿ ಅವರು ಸರಕಾರದ ನಿರ್ಧಾರದ ಮೇಲೆ ನೇರವಾಗಿ ಪ್ರಭಾವ ಬೀರುವ ಯೋಜನೆ ಇದಾಗಿದೆ’ ಎಂದು ಟೀಕಿಸಿದ್ದಾರೆ.
ಅಧಿಸೂಚನೆಯಲ್ಲಿ `ಪ್ರತಿಭಾವಂತ ಉತ್ಸಾಹಿ’ ಎನ್ನುವ ಪದವನ್ನು ಬಳಸಲಾಗಿದೆ. ಈ ಪದವೆ ಮೀಸಲಾತಿಯ ವಿರೋಧಿಯಾಗಿದೆ. ಪ್ರತಿಭಾವಂತರನ್ನು ಗುರುತಿಸುವ ಮಾನದಂಡಗಳೇನು? ನಿಸ್ಸಂಶಯವಾಗಿ ಇದು ಮೇಲುಜಾತಿಗಳ, ಕಾರ್ಪೋರೇಟ್ ಕಂಪನಿಗಳ ಸಿಇಓಗಳಂತವರನ್ನು ಪ್ರತಿಭಾವಂತರೆಂದು ಭಾವಿಸುವ ಸಾಧ್ಯತೆಯಿದೆ. ಅಂತೆಯೇ ಆರ್‍ಎಸ್‍ಎಸ್ ನಂತಹ ಸಂಸ್ಥೆಗಳಲ್ಲಿರುವವರು ನಿಸ್ಸಂಶಯವಾಗಿ ಈ ಹುದ್ದೆಗಳಿಗೆ ಆಯ್ಕೆಯಾಗುವ ಬಗ್ಗೆ ಈಗಾಗಲೆ ಹಲವಾರು ರಾಜಕೀಯ ನಾಯಕರು ಪ್ರತಿಕ್ರಿಯಿಸಿದ್ದಾರೆ.
ಈ ಹುದ್ದೆಗಳು ಕಾಂಟ್ರಾಕ್ಟ್ ಬೇಸ್ಡ್ ಎನ್ನುತ್ತಲೇ, ಮೂರರಿಂದ ಐದು ವರ್ಷದ ಅವಧಿಯ ಹುದ್ದೆಗಳು ಎಂದಾಗ, ಇವರುಗಳು ಸರಕಾರದ ಪೂರ್ಣಪ್ರಮಾಣದ ಯೋಜನೆಗಳನ್ನು ಜಾರಿ ಮಾಡುವ ಅಧಿಕಾರವನ್ನು ಹೇಗೆ ಪಡೆಯುತ್ತಾರೆ? ಯಾವುದೇ ಯೋಜನೆಗಳು ಜಾರಿಯಾದಾಗಲೂ ಅದಕ್ಕೆ ಅಧಿಕಾರಿ ವಲಯವೆ ಉತ್ತರದಾಯಿತ್ವವನ್ನು ಹೊಂದಿರುತ್ತದೆ. ಯಾವುದೇ ಮಂತ್ರಿ ಭ್ರಷ್ಟಾಚಾರ ಮಾಡಿದಾಗಲೂ ಆಯಾ ಮಂತ್ರಿಯ ಸಚಿವಾಲಯವೂ ಇದಕ್ಕೆ ಉತ್ತರದಾಯಿತ್ವದ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಹಾಗಾದರೆ ಯೋಜನೆಗಳನ್ನು ಜಾರಿಗೊಳಿಸಿ ಐದು ವರ್ಷದ ನಂತರ ಹುದ್ದೆಗಳನ್ನು ಬಿಟ್ಟುಹೋದರೆ ಈ ಯೋಜನೆಗಳ ಉತ್ತರದಾಯಿತ್ವದ ಹೊಣೆಗಾರಿಕೆ ಯಾರದು? ಎನ್ನುವ ಪ್ರಶ್ನೆಯಿದೆ. ಇದು ಭಾರತೀಯ ನಾಗರಿಕ ಸೇವಾ ಅಧಿಕಾರಿಗಳಿಗೆ ದೊಡ್ಡ ಗಂಡಾಂತರ ತಂದಿಡುತ್ತದೆ. ಕಾರಣ ಈ ಅರೆಕಾಲಿಕ ಜಾಯಿಂಟ್ ಸೆಕ್ರೆಟ್ರಿಗಳು ಮಾಡಿದ ಯಡವಟ್ಟುಗಳಿಗೆ ಈ ಐಎಎಸ್ ಅಧಿಕಾರಿಗಳು ಉತ್ತರ ಕೊಡಬೇಕಾಗುತ್ತದೆ. ಹಾಗಾಗಿ ಮೊದಲನೆಯದಾಗಿ ಐಎಎಸ್ ಅಧಿಕಾರಿಗಳ ಸಮೂಹ ಈ ಆಯ್ಕೆ ಕ್ರಮವನ್ನು ಗಟ್ಟಿಯಾಗಿ ಪ್ರತಿರೋಧಿಸಬೇಕಿದೆ.
ಈ ಮೇಲಿನ ಸಂಗತಿಗಳನ್ನು ಒಳಗೊಂಡಂತೆ ಸೂಕ್ಷ್ಮವಾಗಿ ಗಮನಿಸಿದರೆ, ಕೆಲವು ಗಂಭೀರ ಪ್ರಶ್ನೆಗಳು ಕಾಡುತ್ತವೆ. ಮೊದಲೆ ಹೇಳಿದಂತೆ, ಜನರು ಚುನಾವಣೆಯ ಮೂಲಕ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಶಾಸಕಾಂಗವನ್ನು ಬಂಡವಾಳಶಾಹಿ ಶಕ್ತಿಗಳು ನಿಯಂತ್ರಿಸುತ್ತಿವೆ. ಅಂತೆಯೇ ಈಚಿನ ನ್ಯಾಯಾಂಗದ ಕೆಲವು ತೀರ್ಮಾನಗಳನ್ನು ನೋಡಿದರೆ ಕಾರ್ಪೊರೇಟ್ ಶಕ್ತಿಗಳಿಗೆ ನ್ಯಾಯಾಂಗವೂ ಮಣಿಯುತ್ತಿರುವಂತಿದೆ. ಆಳ್ವಿಕೆಗೆ ಸಂಬಂಧಿಸಿದ ಶಾಸನಗಳನ್ನು ಶಾಸಕಾಂಗ ರಚಿಸಿದರೆ, ನ್ಯಾಯಾಂಗ ಅದನ್ನು ಅರ್ಥೈಸುತ್ತದೆ, ಅನ್ವಯಿಸುತ್ತದೆ. ಆದರೆ ಇದನ್ನು ಜಾರಿ ಮಾಡುವುದು, ಈ ಶಾಸನಗಳನ್ನು ಕಾರ್ಯಗತ ಮಾಡುವ ಪರಮ ಅಧಿಕಾರ ಕಾರ್ಯಾಂಗಕ್ಕಿದೆ. ಸಂವಿಧಾನಬದ್ಧವಾಗಿ ಕಾರ್ಯನಿರ್ವಹಿಸಬೇಕಿರುವ ಕಾರ್ಯಾಂಗ ಸಾಮಾನ್ಯವಾಗಿ ಸಂವಿಧಾನಿಕವಲ್ಲದ ನಡೆಗಳನ್ನು ಬೆಂಬಲಿಸುವುದಿಲ್ಲ. ಹಾಗಾಗಿ ಶಾಸಕಾಂಗ ಮತ್ತು ನ್ಯಾಯಾಂಗವನ್ನು ಕಾರ್ಪೊರೇಟ್ ಶಕ್ತಿಗಳು ಮಣಿಸಿದಂತೆ ಸುಲಭವಾಗಿ ಕಾರ್ಯಾಂಗವನ್ನು ಮಣಿಸುವುದು ಕಷ್ಟ. ಮೇಲಿನ ಜಂಟಿಕಾರ್ಯದರ್ಶಿಗಳ ನೇರ ಆಯ್ಕೆ, ನೇರವಾಗಿ ಕಾರ್ಯಾಂಗವನ್ನು ಕೈವಶಮಾಡಿಕೊಳ್ಳುವ ಹುನ್ನಾರವಾಗಿದೆ. ಹೀಗಾಗಿ ಈಗಿನ ಕಾರ್ಯಾಂಗದ ಭಾಗವಾಗಿರುವ ಸದಸ್ಯರು ಈ ಆಯ್ಕೆಯ ಬಗ್ಗೆ ಸಂವಿಧಾನಿಕ ವಿರೋಧಿ ನಡೆಯನ್ನು ಜನರೆದುರು ಬಯಲುಗೊಳಿಸಬೇಕಿದೆ.
ಇದನ್ನು ಗಮನಿಸಿದರೆ, ಈಗಾಗಲೆ ಇರುವ ಕಾರ್ಯಾಂಗವನ್ನು ಬದಿಗೆ ಸರಿಸಿ ತಮಗೆ ಬೇಕಾದ ಕಾರ್ಯಾಂಗವನ್ನು ಮರುಸೃಷ್ಟಿ ಮಾಡಿಕೊಳ್ಳುತ್ತಿದೆ. ಇದು ದೇಶದ ಸಂವಿಧಾನಕ್ಕೆ ಎದುರಾದ ಬಹುದೊಡ್ಡ ಗಂಡಾಂತರಗಳಲ್ಲಿ ಒಂದಾಗಿದೆ. ಈ ದೇಶದ ದಲಿತ ದಮನಿತ ಕೆಳಜಾತಿ ಅಲ್ಪಸಂಖ್ಯಾತರು ಈ ಆಯ್ಕೆ ಪ್ರಕ್ರಿಯೆಯ ವಿರುದ್ಧ ದೇಶವ್ಯಾಪಿ ಸಂವಿಧಾನಬದ್ಧ ಪ್ರಶ್ನೆಗಳನ್ನು ಕೇಳಬೇಕಾಗಿದೆ. ಕಾರಣ ಈ ನಡೆ ಪರೋಕ್ಷವಾಗಿ ಸಂವಿಧಾನವನ್ನು ಇಲ್ಲವಾಗಿಸುವ ಹುನ್ನಾರ. ಅಂತೆಯೇ ಈ ಬಗೆಯ ಚಟುವಟಿಕೆಗಳ ಮೂಲಕವೆ ಸಂವಿಧಾನವನ್ನು ನಿಧಾನಕ್ಕೆ ದುರ್ಬಲಗೊಳಿಸಲಾಗುತ್ತದೆ. ಅದರ ಜತೆಗೆ ಸಂವಿಧಾನ ಪರವಾದ ಹೋರಾಟ ಮತ್ತು ಚಳವಳಿಗಳನ್ನೂ ದಿಕ್ಕುತಪ್ಪಿಸುವ ಸಾಧ್ಯತೆಯಿದೆ.

– ಅರುಣ್ ಜೋಳದ ಕೂಡ್ಲಿಗಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....