Homeಅಂಕಣಗಳುಜಂಟಿ ಕಾರ್ಯದರ್ಶಿ ಹುದ್ದೆಗಳ ನೇರ ನೇಮಕದ ಹುನ್ನಾರಗಳು

ಜಂಟಿ ಕಾರ್ಯದರ್ಶಿ ಹುದ್ದೆಗಳ ನೇರ ನೇಮಕದ ಹುನ್ನಾರಗಳು

- Advertisement -
- Advertisement -

ಇದೊಂದು ತೀರಾ ಅಪಾಯಕಾರಿ ಸಂವಿಧಾನ ವಿರೋಧಿ ನಡೆ. ಭಾರತೀಯ ಪ್ರತಿಭಾವಂತ ಉತ್ಸಾಹಿಗಳಿಗೆ ಸದೃಢ ಭಾರತವನ್ನು ಕಟ್ಟಲು ನೀವು ಜಂಟಿ ಕಾರ್ಯದರ್ಶಿಯಾಗಿ ಸರಕಾರದೊಂದಿಗೆ ಕೈಜೋಡಿಸಿ ಎಂದು ಹೇಳುವ ಸರಕಾರದ ಈ ಘೋಷಣೆಯಲ್ಲಿಯೇ ಬಹುದೊಡ್ಡ ಹುನ್ನಾರ ಅಡಗಿದೆ. ನೇರ ಆಯ್ಕೆಯಲ್ಲಿ ಆಯ್ಕೆಯಾಗುವ ಈ ಜಾಯಿಂಟ್ ಸೆಕ್ರೆಟ್ರಿಗಳು ಯೋಜನೆಗಳನ್ನು ರೂಪಿಸುವುದಲ್ಲದೆ, ಈ ಯೋಜನೆಗಳನ್ನು ಸ್ವತಂತ್ರವಾಗಿ ಜಾರಿಗೊಳಿಸುವ ಪರಮಾಧಿಕಾರವನ್ನೂ ಹೊಂದಿದ್ದಾರೆ.
ಇದೀಗ ಹಣಕಾಸು, ಆರ್ಥಿಕವ್ಯವಹಾರ, ಕೃಷಿ ಮತ್ತು ಕೃಷಿಕರ ಕಲ್ಯಾಣ, ಸಾರಿಗೆ, ನಾಗರಿಕ ವಿಮಾನಯಾನ, ನೌಕಾಯಾನ, ಪರಿಸರ, ಅರಣ್ಯ ಮೊದಲಾದ ಪ್ರಮುಖ 10 ಇಲಾಖೆಗಳಿಗೆ ಈ ಹುದ್ದೆಗಳನ್ನು ಕರೆಯಲಾಗಿದೆ. ಹುದ್ದೆಗಿರುವ ಮಾನದಂಡಗಳನ್ನು ಗಮನಿಸೋಣ. ಜುಲೈ 1, 2018 ಕ್ಕೆ ಸರಿಯಾಗಿ 40 ವರ್ಷ ತುಂಬಿರಬೇಕು, ಪದವೀಧರರಾಗಿರಬೇಕು, ಈಗಾಗಲೆ ಜಾಯಿಂಟ್ ಸೆಕ್ರೆಟರಿಯ ಪದನಾಮಕ್ಕೆ ಸಮನಾದ ಹುದ್ದೆಗಳಲ್ಲಿ ಅನುಭವ ಇದ್ದವರಿಗೆ ಆದ್ಯತೆ ಇದೆ. ಖಾಸಗಿಯಾಗಿಯೂ ಕನಿಷ್ಠ 15 ವರ್ಷಗಳ ಕಾಲ ಖಾಸಗಿ, ಡೀಮ್ಡ್ ಕಂಪನಿಗಳನ್ನು ಒಳಗೊಂಡಂತೆ ವಿಶ್ವವಿದ್ಯಾಲಯಗಳು, ಎನ್‍ಜಿಓಗಳಲ್ಲಿ ಕೆಲಸ ಮಾಡಿದವರನ್ನೂ ಪರಿಗಣಿಸಲಾಗುವುದು. ಇದು 3 ವರ್ಷದಿಂದ 5 ವರ್ಷದ ಅವಧಿಯ ಕಾಂಟ್ರಾಕ್ಟ್ ಬೇಸ್ಡ್ ಆದ ಜವಾಬ್ದಾರಿಯಾಗಿದೆ. ಸಂಬಳ 144200 ರಿಂದ 218200/- ತನಕ ನಿಗದಿ ಮಾಡಬಹುದಾಗಿದೆ. ಇದೇ ಜೂನ್ 15 ರಿಂದ ಜುಲೈ 30 ರತನಕ ಅರ್ಜಿಯನ್ನು ಆನ್‍ಲೈನಲ್ಲಿ ಆಹ್ವಾನಿಸಲಾಗಿದೆ. ಅರ್ಜಿ ಹಾಕಿದವರಲ್ಲಿ ಅರ್ಹರಾದವರ ಅಂತಿಮ ಪಟ್ಟಿ ಸಿದ್ಧಪಡಿಸಿ, ಈ ಅಂತಿಮ ಪಟ್ಟಿಯಲ್ಲಿರುವವರನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಕಾರ್ಪೊರೇಟ್‍ಗಳು, ಬಂಡವಾಳಶಾಹಿಗಳು ಹಣ ಹೂಡಿ ಒಬ್ಬ ರಾಜಕಾರಣಿಯನ್ನು ಗೆಲ್ಲಿಸುವುದಿದೆ. ಅದೀಗ ದೇಶದ ಬಲಾಢ್ಯ ಕಾರ್ಪೊರೇಟ್‍ಗಳ ಒಕ್ಕೂಟ ಬಂಡವಾಳ ಹೂಡಿ ಈ ದೇಶದ ಪ್ರಧಾನಿಯನ್ನು ನಿರ್ಧರಿಸುವ ಹಂತಕ್ಕೆ ತಲುಪಿದೆ. ಆದರೆ ಭಾರತೀಯ ನಾಗರಿಕ ಸೇವೆಯ ಉನ್ನತ ಅಧಿಕಾರಿಗಳನ್ನು ಹೀಗೆ ಕೊಳ್ಳುವುದು ಕಷ್ಟ. ಈತನಕ ಲೋಕಸೇವಾ ಆಯೋಗದ ಐಎಎಸ್‍ನ ಆಯ್ಕೆ ಸಾಧ್ಯವಾದಷ್ಟು ಪಾರದರ್ಶಕವಾಗಿ ನಡೆಯುತ್ತಿದೆ. ಆದರೆ ಈ ಬೆಳವಣಿಗೆಯನ್ನು ನೋಡಿದರೆ ಕಾರ್ಪೊರೇಟ್ ಶ್ರೀಮಂತರ ಒಕ್ಕೂಟ ಇದೀಗ ಲೋಕಸೇವಾ ಆಯೋಗಕ್ಕೂ ಲಗ್ಗೆ ಇಟ್ಟು ತಮಗೆ ಬೇಕಾದವರನ್ನು ನಿರ್ಧರಿಸಿ ಅವರ ಆಯ್ಕೆಗೆ ಬೇಕಾದ ಲಾಬಿ ಮಾಡುವ ಕಾಲವೂ ದೂರವಿಲ್ಲ ಅನ್ನಿಸುತ್ತದೆ. ಹಾಗಾಗಿ ಮೊದಲನೆಯದಾಗಿ ನಾಗರಿಕ ಸೇವೆಯ ಕನಸು ಕಾಣುವ ಯುವ ಸಮುದಾಯ ಈ ಬಗ್ಗೆ ಎಚ್ಚರಗೊಳ್ಳಬೇಕಿದೆ.
ಈ ನಡೆಯ ಅಪಾಯವನ್ನು ಪಕ್ಷಾತೀತವಾಗಿ ವಿರೋಧಿಸುವಿಕೆ ಕಂಡುಬರುತ್ತಿದೆ. ಅಂತಹ ಕೆಲವು ಚರ್ಚೆಗಳನ್ನು ಗಮನಿಸುವಾಗ ಬಿಹಾರದ ಆರ್‍ಜೆಡಿ ಮುಖಂಡ ತೇಜಸ್ವಿ ಯಾದವ್ ಟ್ವೀಟ್‍ನ್ನು ಗಮನಿಸಬಹುದು, `ಈ ಮನುವಾದಿ ಸರಕಾರ ಯುಪಿಎಸ್‍ಸಿ ವ್ಯವಸ್ಥೆಯನ್ನು ಬದಿಗೆ ಸರಿಸಿ, ಯಾವುದೇ ಪರೀಕ್ಷೆ ನಡೆಸದೆ ತನಗಿಷ್ಟ ಬಂದವರನ್ನು ಜಂಟಿ ಕಾರ್ಯದರ್ಶಿಗಳಂತಹ ಪ್ರಮುಖ ಹುದ್ದೆಗೆ ಆಯ್ಕೆ ಮಾಡಿಕೊಳ್ಳುವುದು ಸರಿಯೇ? ಇದು ಸಂವಿಧಾನದ ಮತ್ತು ಮೀಸಲಾತಿ ನಿಯಮದ ಉಲ್ಲಂಘನೆಯಾಗಿದೆ. ನಾಳೆ ಚುನಾವಣೆ ನಡೆಸದೆ ಪ್ರಧಾನಿಯನ್ನು ಮತ್ತು ಸಚಿವ ಸಂಪುಟವನ್ನೂ ಅವರು ನೇಮಿಸಬಹುದು. ಈ ಸರಕಾರ ಸಂವಿಧಾನವನ್ನು ಒಂದು ತಮಾಷೆಯ ವಿಷಯವನ್ನಾಗಿಸಿದೆ’ ಎನ್ನುತ್ತಾರೆ. ಅಂತೆಯೇ ಕಾಂಗ್ರೆಸ್ ಮುಖಂಡ ಪಿ.ಎಲ್.ಪುನಿಯಾ `ಬಿಜೆಪಿ ಕಾರ್ಯಕರ್ತರಿಗೆ ಹಾಗೂ ಆರೆಸ್ಸೆಸ್ ಸಿದ್ಧಾಂತದ ಹಿನ್ನೆಲೆಯ ವ್ಯಕ್ತಿಗಳಿಗೆ ಅವಕಾಶ ಮಾಡಿಕೊಡಲು ಸರಕಾರ ರೂಪಿಸಿದ ಯೋಜನೆ ಇದಾಗಿದೆ. ಇಂತಹ ಪ್ರಮುಖ ಹುದ್ದೆಗಳಿಗೆ ಆರೆಸ್ಸೆಸ್ ಹಿನ್ನೆಲೆಯ ವ್ಯಕ್ತಿಗಳನ್ನು ನೇಮಿಸಿ ಅವರು ಸರಕಾರದ ನಿರ್ಧಾರದ ಮೇಲೆ ನೇರವಾಗಿ ಪ್ರಭಾವ ಬೀರುವ ಯೋಜನೆ ಇದಾಗಿದೆ’ ಎಂದು ಟೀಕಿಸಿದ್ದಾರೆ.
ಅಧಿಸೂಚನೆಯಲ್ಲಿ `ಪ್ರತಿಭಾವಂತ ಉತ್ಸಾಹಿ’ ಎನ್ನುವ ಪದವನ್ನು ಬಳಸಲಾಗಿದೆ. ಈ ಪದವೆ ಮೀಸಲಾತಿಯ ವಿರೋಧಿಯಾಗಿದೆ. ಪ್ರತಿಭಾವಂತರನ್ನು ಗುರುತಿಸುವ ಮಾನದಂಡಗಳೇನು? ನಿಸ್ಸಂಶಯವಾಗಿ ಇದು ಮೇಲುಜಾತಿಗಳ, ಕಾರ್ಪೋರೇಟ್ ಕಂಪನಿಗಳ ಸಿಇಓಗಳಂತವರನ್ನು ಪ್ರತಿಭಾವಂತರೆಂದು ಭಾವಿಸುವ ಸಾಧ್ಯತೆಯಿದೆ. ಅಂತೆಯೇ ಆರ್‍ಎಸ್‍ಎಸ್ ನಂತಹ ಸಂಸ್ಥೆಗಳಲ್ಲಿರುವವರು ನಿಸ್ಸಂಶಯವಾಗಿ ಈ ಹುದ್ದೆಗಳಿಗೆ ಆಯ್ಕೆಯಾಗುವ ಬಗ್ಗೆ ಈಗಾಗಲೆ ಹಲವಾರು ರಾಜಕೀಯ ನಾಯಕರು ಪ್ರತಿಕ್ರಿಯಿಸಿದ್ದಾರೆ.
ಈ ಹುದ್ದೆಗಳು ಕಾಂಟ್ರಾಕ್ಟ್ ಬೇಸ್ಡ್ ಎನ್ನುತ್ತಲೇ, ಮೂರರಿಂದ ಐದು ವರ್ಷದ ಅವಧಿಯ ಹುದ್ದೆಗಳು ಎಂದಾಗ, ಇವರುಗಳು ಸರಕಾರದ ಪೂರ್ಣಪ್ರಮಾಣದ ಯೋಜನೆಗಳನ್ನು ಜಾರಿ ಮಾಡುವ ಅಧಿಕಾರವನ್ನು ಹೇಗೆ ಪಡೆಯುತ್ತಾರೆ? ಯಾವುದೇ ಯೋಜನೆಗಳು ಜಾರಿಯಾದಾಗಲೂ ಅದಕ್ಕೆ ಅಧಿಕಾರಿ ವಲಯವೆ ಉತ್ತರದಾಯಿತ್ವವನ್ನು ಹೊಂದಿರುತ್ತದೆ. ಯಾವುದೇ ಮಂತ್ರಿ ಭ್ರಷ್ಟಾಚಾರ ಮಾಡಿದಾಗಲೂ ಆಯಾ ಮಂತ್ರಿಯ ಸಚಿವಾಲಯವೂ ಇದಕ್ಕೆ ಉತ್ತರದಾಯಿತ್ವದ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಹಾಗಾದರೆ ಯೋಜನೆಗಳನ್ನು ಜಾರಿಗೊಳಿಸಿ ಐದು ವರ್ಷದ ನಂತರ ಹುದ್ದೆಗಳನ್ನು ಬಿಟ್ಟುಹೋದರೆ ಈ ಯೋಜನೆಗಳ ಉತ್ತರದಾಯಿತ್ವದ ಹೊಣೆಗಾರಿಕೆ ಯಾರದು? ಎನ್ನುವ ಪ್ರಶ್ನೆಯಿದೆ. ಇದು ಭಾರತೀಯ ನಾಗರಿಕ ಸೇವಾ ಅಧಿಕಾರಿಗಳಿಗೆ ದೊಡ್ಡ ಗಂಡಾಂತರ ತಂದಿಡುತ್ತದೆ. ಕಾರಣ ಈ ಅರೆಕಾಲಿಕ ಜಾಯಿಂಟ್ ಸೆಕ್ರೆಟ್ರಿಗಳು ಮಾಡಿದ ಯಡವಟ್ಟುಗಳಿಗೆ ಈ ಐಎಎಸ್ ಅಧಿಕಾರಿಗಳು ಉತ್ತರ ಕೊಡಬೇಕಾಗುತ್ತದೆ. ಹಾಗಾಗಿ ಮೊದಲನೆಯದಾಗಿ ಐಎಎಸ್ ಅಧಿಕಾರಿಗಳ ಸಮೂಹ ಈ ಆಯ್ಕೆ ಕ್ರಮವನ್ನು ಗಟ್ಟಿಯಾಗಿ ಪ್ರತಿರೋಧಿಸಬೇಕಿದೆ.
ಈ ಮೇಲಿನ ಸಂಗತಿಗಳನ್ನು ಒಳಗೊಂಡಂತೆ ಸೂಕ್ಷ್ಮವಾಗಿ ಗಮನಿಸಿದರೆ, ಕೆಲವು ಗಂಭೀರ ಪ್ರಶ್ನೆಗಳು ಕಾಡುತ್ತವೆ. ಮೊದಲೆ ಹೇಳಿದಂತೆ, ಜನರು ಚುನಾವಣೆಯ ಮೂಲಕ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಶಾಸಕಾಂಗವನ್ನು ಬಂಡವಾಳಶಾಹಿ ಶಕ್ತಿಗಳು ನಿಯಂತ್ರಿಸುತ್ತಿವೆ. ಅಂತೆಯೇ ಈಚಿನ ನ್ಯಾಯಾಂಗದ ಕೆಲವು ತೀರ್ಮಾನಗಳನ್ನು ನೋಡಿದರೆ ಕಾರ್ಪೊರೇಟ್ ಶಕ್ತಿಗಳಿಗೆ ನ್ಯಾಯಾಂಗವೂ ಮಣಿಯುತ್ತಿರುವಂತಿದೆ. ಆಳ್ವಿಕೆಗೆ ಸಂಬಂಧಿಸಿದ ಶಾಸನಗಳನ್ನು ಶಾಸಕಾಂಗ ರಚಿಸಿದರೆ, ನ್ಯಾಯಾಂಗ ಅದನ್ನು ಅರ್ಥೈಸುತ್ತದೆ, ಅನ್ವಯಿಸುತ್ತದೆ. ಆದರೆ ಇದನ್ನು ಜಾರಿ ಮಾಡುವುದು, ಈ ಶಾಸನಗಳನ್ನು ಕಾರ್ಯಗತ ಮಾಡುವ ಪರಮ ಅಧಿಕಾರ ಕಾರ್ಯಾಂಗಕ್ಕಿದೆ. ಸಂವಿಧಾನಬದ್ಧವಾಗಿ ಕಾರ್ಯನಿರ್ವಹಿಸಬೇಕಿರುವ ಕಾರ್ಯಾಂಗ ಸಾಮಾನ್ಯವಾಗಿ ಸಂವಿಧಾನಿಕವಲ್ಲದ ನಡೆಗಳನ್ನು ಬೆಂಬಲಿಸುವುದಿಲ್ಲ. ಹಾಗಾಗಿ ಶಾಸಕಾಂಗ ಮತ್ತು ನ್ಯಾಯಾಂಗವನ್ನು ಕಾರ್ಪೊರೇಟ್ ಶಕ್ತಿಗಳು ಮಣಿಸಿದಂತೆ ಸುಲಭವಾಗಿ ಕಾರ್ಯಾಂಗವನ್ನು ಮಣಿಸುವುದು ಕಷ್ಟ. ಮೇಲಿನ ಜಂಟಿಕಾರ್ಯದರ್ಶಿಗಳ ನೇರ ಆಯ್ಕೆ, ನೇರವಾಗಿ ಕಾರ್ಯಾಂಗವನ್ನು ಕೈವಶಮಾಡಿಕೊಳ್ಳುವ ಹುನ್ನಾರವಾಗಿದೆ. ಹೀಗಾಗಿ ಈಗಿನ ಕಾರ್ಯಾಂಗದ ಭಾಗವಾಗಿರುವ ಸದಸ್ಯರು ಈ ಆಯ್ಕೆಯ ಬಗ್ಗೆ ಸಂವಿಧಾನಿಕ ವಿರೋಧಿ ನಡೆಯನ್ನು ಜನರೆದುರು ಬಯಲುಗೊಳಿಸಬೇಕಿದೆ.
ಇದನ್ನು ಗಮನಿಸಿದರೆ, ಈಗಾಗಲೆ ಇರುವ ಕಾರ್ಯಾಂಗವನ್ನು ಬದಿಗೆ ಸರಿಸಿ ತಮಗೆ ಬೇಕಾದ ಕಾರ್ಯಾಂಗವನ್ನು ಮರುಸೃಷ್ಟಿ ಮಾಡಿಕೊಳ್ಳುತ್ತಿದೆ. ಇದು ದೇಶದ ಸಂವಿಧಾನಕ್ಕೆ ಎದುರಾದ ಬಹುದೊಡ್ಡ ಗಂಡಾಂತರಗಳಲ್ಲಿ ಒಂದಾಗಿದೆ. ಈ ದೇಶದ ದಲಿತ ದಮನಿತ ಕೆಳಜಾತಿ ಅಲ್ಪಸಂಖ್ಯಾತರು ಈ ಆಯ್ಕೆ ಪ್ರಕ್ರಿಯೆಯ ವಿರುದ್ಧ ದೇಶವ್ಯಾಪಿ ಸಂವಿಧಾನಬದ್ಧ ಪ್ರಶ್ನೆಗಳನ್ನು ಕೇಳಬೇಕಾಗಿದೆ. ಕಾರಣ ಈ ನಡೆ ಪರೋಕ್ಷವಾಗಿ ಸಂವಿಧಾನವನ್ನು ಇಲ್ಲವಾಗಿಸುವ ಹುನ್ನಾರ. ಅಂತೆಯೇ ಈ ಬಗೆಯ ಚಟುವಟಿಕೆಗಳ ಮೂಲಕವೆ ಸಂವಿಧಾನವನ್ನು ನಿಧಾನಕ್ಕೆ ದುರ್ಬಲಗೊಳಿಸಲಾಗುತ್ತದೆ. ಅದರ ಜತೆಗೆ ಸಂವಿಧಾನ ಪರವಾದ ಹೋರಾಟ ಮತ್ತು ಚಳವಳಿಗಳನ್ನೂ ದಿಕ್ಕುತಪ್ಪಿಸುವ ಸಾಧ್ಯತೆಯಿದೆ.

– ಅರುಣ್ ಜೋಳದ ಕೂಡ್ಲಿಗಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...

ಸರ್ಕಾರ ಆಧಾರ್ ವ್ಯವಸ್ಥೆಯನ್ನು ನಂಬುವುದಾದರೆ, SIR‌ ತಪಾಸಣೆಗೂ ಇದನ್ನೇ ಬಳಸಲಿ: ಆರ್‌ ಎಸ್‌ ಶರ್ಮಾ ಸಲಹೆ

ಪ್ರಸ್ತುತ ಚರ್ಚೆಯಲ್ಲಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ದಾಖಲೆಗಳ ತಪಾಸಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಧಾರ್‌ ವ್ಯವಸ್ಥೆಯ ಮಾಜಿ ಮುಖ್ಯಸ್ಥ (UIDAI) ಶರ್ಮಾ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಪ್ರತಿ ಬಾರಿ ಸಾವಿರಾರು...

ಸೋಶಿಯಲ್ ಮೀಡಿಯಾಗಳಲ್ಲಿ ಅಪ್ರಾಪ್ತರಿಗೆ ಹೆಚ್ಚುತ್ತಿರುವ ಅಪಾಯ; ಲೈಂಗಿಕ ಶೋಷಣೆ ತಡೆಗೆ ಮೆಟಾದಿಂದ ಮಹತ್ವದ ನಿರ್ಧಾರ!

ಸಾಮಾಜಿಕ ಜಾಲತಾಣಗಳ ಬಳಕೆ ಯುವಜನರು ಮತ್ತು ಮಕ್ಕಳ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿರುವ ಬೆನ್ನಲ್ಲೇ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸಲು ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ....