Homeಅಂಕಣಗಳು“ಮನ್ನೆ ದಿನ ದೀಪ ಹಚ್ಚಿದೇನಕ್ಕ?": ಕಟ್ಟೆಪುರಾಣದಲ್ಲಿ ಜುಮ್ಮಕ್ಕನ್ನ ಕೇಳಿದ ವಾಟಿಸ್ಸೆ

“ಮನ್ನೆ ದಿನ ದೀಪ ಹಚ್ಚಿದೇನಕ್ಕ?”: ಕಟ್ಟೆಪುರಾಣದಲ್ಲಿ ಜುಮ್ಮಕ್ಕನ್ನ ಕೇಳಿದ ವಾಟಿಸ್ಸೆ

- Advertisement -
- Advertisement -

ಜುಮ್ಮಿ ಮನೆಗೆ ಬಂದ ವಾಟಿಸ್ಸೆ,
‘ಮನ್ನೆ ದಿನ ದೀಪ ಹಚ್ಚಿದ್ದೇನಕ್ಕ’ ಎಂದ.
“ಯಾಕ್ಲ.”
“ಇದೇನಕ್ಕ ಹಿಂಕೇಳ್ತಿ, ಮೋದಿ ದೀಪ ಹಚ್ಚಗಂಡು ಕುಂತಿರಿ ಅಂತ ಹೇಳಿದ್ನ ಮರತುಬುಟ್ಟಾ.”
“ಎಲ್ಲೇಳಿದ್ದಾ.”
“ಟಿವಿಲಿ ಕಾಣಿಸಿಗಂಡು ಹೇಳಿದ್ದ ಕಣಕ್ಕ.”
“ಏನಂತ ಹೇಳಿದ್ದಾ”

ಐದನೆ ತಾರೀಖು ರಾತ್ರಿ ವಂಬತ್ತು ಗಂಟೆಗೆ, ಲೈಟಾಪು ಮಾಡಿಕಂಡು, ದೀಪ ಹಚಗಂಡು ವಂಬತ್ತು ನಿಮಿಸ ಮನೆಲಿ ಕುಂತಿರಿ ಅಂತ ಹೇಳಿದ್ದ.”
“ಅದ್ಯಾಕಂಗೇಳಿದ್ದ.”
“ಈ ಕೊರೊನ ವೈರಸ್ ಅದೆ ನೋಡು ಅದು ಬೆಳಕಲ್ಲಿ ಯಲ್ಲಾ ಕಡಿಕೂ ದುಂಬು ತೇಲಿದಂಗೆ ತೇಳಿಕಂಡು ಹೋಯ್ತದಂತೆ. ಆಗ ಯಲ್ಲಾ ದೀಪನು ಆರಿಸಿ. ಅಣತೆ ಹಚಿದ್ರೆ ಅದರತ್ರ ಬಂದು ಸತ್ತೋದವಂತೆ.”
“ಓಹೊ ಲೈಟ್ ಬೆಳಕಿಗೆ ಈಚಉಳ ಬಂದು ಬೀಳ್ತವೆ ನೋಡು ಅಂಗೆ.”
“ಎಜ್ಲಾಟ್ಳಿ ಕರಟ್ ಕಣಕ್ಕ.”
“ಅದವುನಿಗ್ಯಂಗೆ ಗೊತ್ತಾಯಿತ್ಲ.”
“ಅವುನುನ್ನೆನು ಅನ್ನಕಂಡಿದ್ದಿಯಕ್ಕ ನೀನು, ಪ್ರಧಾನಿನೆ ಆಗದೆಯಿದ್ರೆ ಬಿ.ಜೆ.ಪಿ ವಿಜ್ಞಾನಿಯಾಗಿರತಿದ್ದ.”
“ನಾವು ದೀಪ ಹಚ್ಚಲಿಲ್ಲಕಂಡ್ಳ ವಂಬತ್ತು ಗಂಟಗ್ಯಲ್ಲ ಉಂಡು ಮನಿಕಂಬುಡ್ತಿವಿ.”
“ಓ ಮೋದಿ ಮಾತು ಕೇಳಿಲ್ಲ ನೀನು, ಅಂಗರೆ ದೇಸದ್ರೊಹಿ ಕಣಕ್ಕ ನೀನು.”
“ನಾನ್ಯಾಕ್ಲ ದೇಸದ್ರೊಯಿಯಾಗ್ಲಿ.”
“ಕಾಲ ಬದ್ಲಾಗ್ಯದೆ ಕಣಕ್ಕ, ಮೋದಿ ಮಾತು ಕೇಳದೊರ್ಯಲ್ಲ ದೇಸದ್ರೊಹಿಗಳು, ಇಡೀ ದೇಸನೆ ದೀಪ ಹಚಿದಾಗ ನೀನು ಮನಗಿದ್ದೆ ಅಂತಿಯಲ್ಲ. ಕೊರೋನ ಬರದಿಲವ ನಿನ್ನ ಮನಿಗೆ.”
“ಇಡೀ ದೇಸನೆ ದೀಪ ಹಚ್ಚಿದ ಮ್ಯಾಲೆ ಅದು ವಂಟೋಗಿರದಿಲವೇನ್ಲ.”
“ಹೋಗಿಲವಂತೆ ಕಣಕ್ಕ. ಸುಮಾರು ಐದು ಪರಸೆಂಟು ಜನ ದೀಪ ಹಚ್ಚಿರಲಿಲವಂತೆ, ಅಂಗಾಗಿ ಉಳಕಂಡದಂತೆ.”
“ಸಾಬರ್ಯಾರೂ ದೀಪ ಹಚ್ಚಿರಲಿಲವಂತೆ ಕಣೊ” ಎಂದ ಉಗ್ರಿ.
“ಸಾಬರ್ಯಾರು ಮೋದಿ ಮಾತ ಕೇಳ್ಯರು.”
“ಅಂಗರವುನ ಮಾತ ಕೇಳದಿಲವೇನ್ಲ ಸಾಬ್ರು.”
“ಇಲ್ಲ ಕಣಕ್ಕ, ಮೋದಿ ಇಡೀ ದೇಸಕೆ ಪ್ರಧಾನಮಂತ್ರಿಯಾಗಿದ್ರೆ ಕೇಳತಿದ್ರು. ಆದ್ರವುನು ಬಿಜೆಪಿ ಪ್ರಧಾನಿಯಾಗಿದ್ದಕಂಡು, ಆರೆಸೆಸ್ ಹೇಳಿದಂಗೆ ಕೇಳ್ತನೆ ಆಂತ ಸಾಬರು ಅವುನೇಳಿದ್ದ ಮಾತ ಕೇಳದಿಲ್ಲ.”
“ಸಾಬರೇನು ಮೋದಿಗೆ ಸಮಸ್ಯೆ ಅಲ್ಲ ಕಣೊ. ಅವುರು ಗಾಂಧೀಜಿ ಕಾಲದಿಂದ ಸಮಸ್ಸೆನೆ. ಪ್ರಪಂಚಕೆ ಸಮಸ್ಯಾದೋರು ಮೋದಿಗೆ ಯಾವ ಲ್ಯಕ್ಕ.”
“ಅದ್ಯಾಕ್ಲ ಸಾಬರಿಗೆ ಬೈತಿರಿ.”
“ಅವುರು ಡೆಲ್ಲಿಲಿ ಸಭೆ ಮಾಡಿದ್ರಂತೆ, ಅಲ್ಲಿಗೆ ಕೊರೋನಾ ಇದ್ದೊರ ಕರಿಸಿ, ಯಲ್ಲಾರಾ ತಬ್ಬಿಕಂಡು ಕ್ಯಾಕರಿಸಿ ಕೆಮ್ಮಿಕಂಡು ದೇಸದ ತುಂಬ ಚಲ್ಲಾಪಿಲ್ಲಿಯಾಗಿ ಹೋಗಿ ಹರಡಿದರಂತೆ ಕೊರೋನಾವಾ.”
“ಮತ್ತೆ ಚೀಣಾ ದೇಸದಿಂದ ಬತ್ತು ಅಂತಿದ್ರು.”
“ಅದು ಮದ್ಲು, ಈಗ ಬಿಜೆಪಿಗಳಿಗೆ ಸಾಬರು ಸಿಕ್ಕಿರದ್ರಿಂದ ಅವುರ ತಲಿಗಾ ಕಟ್ಟಿ ತಮಾಸಿ ನೋಡ್ತ ಅವುರೆ.”
“ಥೂ ಅಂಗೆ ಮಾಡಬಾರ್ದು ಕಂಡ್ಳ.”
“ಅವು ಅಂಗೆ ಮಾಡ್ತವೆ ಕಣ.., ಅವುಸ್ತಿಕೊಡಕ್ಕೊದ ದಾಗುಟ್ರು ಕಾಂಪೌಡ್ರಗ್ಯಲ್ಲ ವಡದೋಡಿಸ್ಯವೆ.”
“ಅವು ಮಲ್ಲಾಗ್ರು ಬರ ಅವುಕೇನು ಬತ್ಲ.”
“ನೋಡಕ್ಕ, ಸಾಬರ ಮ್ಯಾಲೆ ಈ ಮೋದಿ ಕಡಿಯೋರು ಯರಡು ಮೂರು ಕಾನೂನು ತಂದು ನೀವು ನಮ್ಮ ದೇಸದೋರಲ್ಲ, ಪಾಕಿಸ್ತಾನದೊರು, ಬಾಗ್ಲಾದೇಸದೊರು, ಅಲ್ಲಿಗೆ ರವಾನಿಸ್ತೀವಿ ಅಂತ ಹೆದರಿಸಿದ್ರು. ಆಗ ಅವುರ್ಯಲ್ಲ ಡೆಲ್ಲಿಲಿ ಸಭೆ ಸೇರಿ, ಗಲಾಟೆ ಮಾಡಿದ್ರು. ಅವುರ ಮ್ಯಾಲೆ ಗೂಂಡಾಗಳ ಚೂ ಬಿಟ್ಟು ಗುಂಡಾರಿಸಿ ಐವತ್ತು ಜನ ಕೊಂದಾಕಿದ್ರು ಇದು ಸರಿಯೇನಕ್ಕ.”
“ತೆಪ್ಪು. ಅಂಗೆ ಮಾಡಿದ್ರೆ ಅವುರೆಲ್ಲಿಗೋಗಬೇಕ್ಲ.”
“ಇರುವೆನೂ ಸುಮ್ಮನೆ ಸಾಯದಿಲ್ಲ ಕಣಕ್ಕ. ಕಚ್ಚಿಬುಟ್ಟೆ ಸಾಯ್ತದೆ. ಅಂತಾದ್ರಲ್ಲಿ, ಯಾವ ಸಾಬಿನೂ ಸುಮ್ಮನೆ ಸಾಯದಿಲ್ಲ. ನಾಕುಜನ ತಗದೆ ಹೋಗನ ಅಂತ ತೀರ್ಮಾನ ತಗತನೆ. ಅಂತದ್ಯಾವೊ ವಸಿ ಪೋಲಿ ಬಡ್ಡೆತ್ತವು, ದಾಗುಟ್ರು ಮ್ಯಾಲೆ ಹಲ್ಲೆ ಮಾಡ್ಯವೆ.”
“ಅಂತು ಸಾಬರಿಗೆ ಕ್ಯಟ್ಟೆಸರು ತಂದವೆ ಅನ್ನು.”
“ತರದೇನು ಸಾಬರನ ಅಗಚಿಬುಟ್ರು ಅತ್ತಗೆ” ಎಂದ ಉಗ್ರೀ.
“ಅವುರಿಗೆ ಅಗಚಿಗಂಡರೂ ಸಗತಿನೂ ಅದೆ ಕಣೊ ಉಗ್ರಿ. ಅವುರ ಧರ್ಮನೆ ಅಂಗದೆ.”
“ಕ್ಯರೋನ ಬಂದು ಯಲ್ಲಾರ್ನು ಕ್ಯರಕಂಡೊಯ್ತಾಯಿರುವಾಗ ಧರಮ ಕಡಿಗಂಡೇನ್ಲ.” ಎಂದು ಜುಮ್ಮಿ ಹೇಳುವಾಗ ಸೀರ ಕಾಣಿಸಿಕೊಂಡ.
“ಬಾ ಚಿಗಪ್ಪ. ಈ ಕರೊನ ಬಂದು ಅಮೇರಿಕದಲ್ಲಿ ಲಕ್ಷಾಂತರ ಜನ ಸಾಯ್ತ ಅವುರೆ, ನಮ್ಮ ದೇಸಕ್ಕು ಬಂದ್ರೆ ಕತಿಯೇನು.”
“ಬರ್ಲಿ ಬುಡ್ಳ., ಆಗಿನ ಕಾಲದಲ್ಲಿ ನಮ್ಮಪ್ಪಯಲ್ಲ ಪ್ಳೇಗಿನಲ್ಲಿ ಸತ್ತೋದ್ರು. ಈಗ್ಲು ಅಂಥದೊಂದು ಬಂದದೆ ಒದಿರೋಗ್ಲಿ ಬುಡು.”
‘ಇದೇನು ಚಿಗಪ್ಪ ಹಿಂಗಂತಿ.”
“ಮತ್ತೆ, ಈಗಿನುಡ್ರು ಮಾತ ಕೇಳ್ತವೇನ್ಲ ಹಿರಿಯರೆಗೆ ಗೌರವಕೊಟ್ಟವೇನ್ಲ. ಅದೇನು ಧಿಮಾಕು, ಅದೇನು ಜಂಬಾ, ಅವುರನೇನಾರ ಮಾತಾಡಿಸಕ್ಕಾದತೆ, ಇಂಥ ನನಮಗನವು ಇದ್ರೆಷ್ಟು ಹೋದರೆಷ್ಟು. ಇದು ಬಂದಿದ್ದು ವಳ್ಳೆದೆ ಸುಂಕಿರು. ಜಳ್ಯಲ್ಲ ಹೋಗಿ ಗಟ್ಟಿದು ಉಳಕತ್ತದೆ” ಎಂದು ಸೀರ ನಕ್ಕ.
“ನಗತಿಯಲ್ಲೊ ಚಿಗಪ್ಪ. ವಸ ಜನ ನಿನಿಗೆ ಗೌರವ ಕೊಡಲಿಲ್ಲ ಅಂತ ಕೊರೋನ ಬಂದು ತೂರಿಕಂಡೋಗ್ಲಿ ಅಂತಿಯಲ್ಲಾ. ಲೇ ಉಗ್ರಿ ಸಾಬರ ಬೈತಿಯಲ್ಲೊ ನೋಡಿಲ್ಲೆ ಅವುನೆ ಕೊರೋನಾ ಚಿಗಪ್ಪ.”
“ಅವುಂದೇನ್ಯಲ್ಲ ಆಯ್ತಲ್ಲ ಅಯ್ಯನ ಮಿಸೇನು ನಿಂತೂಗ್ಯದೆ ಚಿಗವ್ವನೂ ಮುದುಕಿಯಾದ್ಲು ಅದ್ಕೆ ಕೊರೋನ ಬರ್ಲಿ ಅಂತ ಕಾಯ್ತ ಕುಂತವನೆ.”
“..!?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...