Homeಅಂಕಣಗಳು“ಮನ್ನೆ ದಿನ ದೀಪ ಹಚ್ಚಿದೇನಕ್ಕ?": ಕಟ್ಟೆಪುರಾಣದಲ್ಲಿ ಜುಮ್ಮಕ್ಕನ್ನ ಕೇಳಿದ ವಾಟಿಸ್ಸೆ

“ಮನ್ನೆ ದಿನ ದೀಪ ಹಚ್ಚಿದೇನಕ್ಕ?”: ಕಟ್ಟೆಪುರಾಣದಲ್ಲಿ ಜುಮ್ಮಕ್ಕನ್ನ ಕೇಳಿದ ವಾಟಿಸ್ಸೆ

- Advertisement -
- Advertisement -

ಜುಮ್ಮಿ ಮನೆಗೆ ಬಂದ ವಾಟಿಸ್ಸೆ,
‘ಮನ್ನೆ ದಿನ ದೀಪ ಹಚ್ಚಿದ್ದೇನಕ್ಕ’ ಎಂದ.
“ಯಾಕ್ಲ.”
“ಇದೇನಕ್ಕ ಹಿಂಕೇಳ್ತಿ, ಮೋದಿ ದೀಪ ಹಚ್ಚಗಂಡು ಕುಂತಿರಿ ಅಂತ ಹೇಳಿದ್ನ ಮರತುಬುಟ್ಟಾ.”
“ಎಲ್ಲೇಳಿದ್ದಾ.”
“ಟಿವಿಲಿ ಕಾಣಿಸಿಗಂಡು ಹೇಳಿದ್ದ ಕಣಕ್ಕ.”
“ಏನಂತ ಹೇಳಿದ್ದಾ”

ಐದನೆ ತಾರೀಖು ರಾತ್ರಿ ವಂಬತ್ತು ಗಂಟೆಗೆ, ಲೈಟಾಪು ಮಾಡಿಕಂಡು, ದೀಪ ಹಚಗಂಡು ವಂಬತ್ತು ನಿಮಿಸ ಮನೆಲಿ ಕುಂತಿರಿ ಅಂತ ಹೇಳಿದ್ದ.”
“ಅದ್ಯಾಕಂಗೇಳಿದ್ದ.”
“ಈ ಕೊರೊನ ವೈರಸ್ ಅದೆ ನೋಡು ಅದು ಬೆಳಕಲ್ಲಿ ಯಲ್ಲಾ ಕಡಿಕೂ ದುಂಬು ತೇಲಿದಂಗೆ ತೇಳಿಕಂಡು ಹೋಯ್ತದಂತೆ. ಆಗ ಯಲ್ಲಾ ದೀಪನು ಆರಿಸಿ. ಅಣತೆ ಹಚಿದ್ರೆ ಅದರತ್ರ ಬಂದು ಸತ್ತೋದವಂತೆ.”
“ಓಹೊ ಲೈಟ್ ಬೆಳಕಿಗೆ ಈಚಉಳ ಬಂದು ಬೀಳ್ತವೆ ನೋಡು ಅಂಗೆ.”
“ಎಜ್ಲಾಟ್ಳಿ ಕರಟ್ ಕಣಕ್ಕ.”
“ಅದವುನಿಗ್ಯಂಗೆ ಗೊತ್ತಾಯಿತ್ಲ.”
“ಅವುನುನ್ನೆನು ಅನ್ನಕಂಡಿದ್ದಿಯಕ್ಕ ನೀನು, ಪ್ರಧಾನಿನೆ ಆಗದೆಯಿದ್ರೆ ಬಿ.ಜೆ.ಪಿ ವಿಜ್ಞಾನಿಯಾಗಿರತಿದ್ದ.”
“ನಾವು ದೀಪ ಹಚ್ಚಲಿಲ್ಲಕಂಡ್ಳ ವಂಬತ್ತು ಗಂಟಗ್ಯಲ್ಲ ಉಂಡು ಮನಿಕಂಬುಡ್ತಿವಿ.”
“ಓ ಮೋದಿ ಮಾತು ಕೇಳಿಲ್ಲ ನೀನು, ಅಂಗರೆ ದೇಸದ್ರೊಹಿ ಕಣಕ್ಕ ನೀನು.”
“ನಾನ್ಯಾಕ್ಲ ದೇಸದ್ರೊಯಿಯಾಗ್ಲಿ.”
“ಕಾಲ ಬದ್ಲಾಗ್ಯದೆ ಕಣಕ್ಕ, ಮೋದಿ ಮಾತು ಕೇಳದೊರ್ಯಲ್ಲ ದೇಸದ್ರೊಹಿಗಳು, ಇಡೀ ದೇಸನೆ ದೀಪ ಹಚಿದಾಗ ನೀನು ಮನಗಿದ್ದೆ ಅಂತಿಯಲ್ಲ. ಕೊರೋನ ಬರದಿಲವ ನಿನ್ನ ಮನಿಗೆ.”
“ಇಡೀ ದೇಸನೆ ದೀಪ ಹಚ್ಚಿದ ಮ್ಯಾಲೆ ಅದು ವಂಟೋಗಿರದಿಲವೇನ್ಲ.”
“ಹೋಗಿಲವಂತೆ ಕಣಕ್ಕ. ಸುಮಾರು ಐದು ಪರಸೆಂಟು ಜನ ದೀಪ ಹಚ್ಚಿರಲಿಲವಂತೆ, ಅಂಗಾಗಿ ಉಳಕಂಡದಂತೆ.”
“ಸಾಬರ್ಯಾರೂ ದೀಪ ಹಚ್ಚಿರಲಿಲವಂತೆ ಕಣೊ” ಎಂದ ಉಗ್ರಿ.
“ಸಾಬರ್ಯಾರು ಮೋದಿ ಮಾತ ಕೇಳ್ಯರು.”
“ಅಂಗರವುನ ಮಾತ ಕೇಳದಿಲವೇನ್ಲ ಸಾಬ್ರು.”
“ಇಲ್ಲ ಕಣಕ್ಕ, ಮೋದಿ ಇಡೀ ದೇಸಕೆ ಪ್ರಧಾನಮಂತ್ರಿಯಾಗಿದ್ರೆ ಕೇಳತಿದ್ರು. ಆದ್ರವುನು ಬಿಜೆಪಿ ಪ್ರಧಾನಿಯಾಗಿದ್ದಕಂಡು, ಆರೆಸೆಸ್ ಹೇಳಿದಂಗೆ ಕೇಳ್ತನೆ ಆಂತ ಸಾಬರು ಅವುನೇಳಿದ್ದ ಮಾತ ಕೇಳದಿಲ್ಲ.”
“ಸಾಬರೇನು ಮೋದಿಗೆ ಸಮಸ್ಯೆ ಅಲ್ಲ ಕಣೊ. ಅವುರು ಗಾಂಧೀಜಿ ಕಾಲದಿಂದ ಸಮಸ್ಸೆನೆ. ಪ್ರಪಂಚಕೆ ಸಮಸ್ಯಾದೋರು ಮೋದಿಗೆ ಯಾವ ಲ್ಯಕ್ಕ.”
“ಅದ್ಯಾಕ್ಲ ಸಾಬರಿಗೆ ಬೈತಿರಿ.”
“ಅವುರು ಡೆಲ್ಲಿಲಿ ಸಭೆ ಮಾಡಿದ್ರಂತೆ, ಅಲ್ಲಿಗೆ ಕೊರೋನಾ ಇದ್ದೊರ ಕರಿಸಿ, ಯಲ್ಲಾರಾ ತಬ್ಬಿಕಂಡು ಕ್ಯಾಕರಿಸಿ ಕೆಮ್ಮಿಕಂಡು ದೇಸದ ತುಂಬ ಚಲ್ಲಾಪಿಲ್ಲಿಯಾಗಿ ಹೋಗಿ ಹರಡಿದರಂತೆ ಕೊರೋನಾವಾ.”
“ಮತ್ತೆ ಚೀಣಾ ದೇಸದಿಂದ ಬತ್ತು ಅಂತಿದ್ರು.”
“ಅದು ಮದ್ಲು, ಈಗ ಬಿಜೆಪಿಗಳಿಗೆ ಸಾಬರು ಸಿಕ್ಕಿರದ್ರಿಂದ ಅವುರ ತಲಿಗಾ ಕಟ್ಟಿ ತಮಾಸಿ ನೋಡ್ತ ಅವುರೆ.”
“ಥೂ ಅಂಗೆ ಮಾಡಬಾರ್ದು ಕಂಡ್ಳ.”
“ಅವು ಅಂಗೆ ಮಾಡ್ತವೆ ಕಣ.., ಅವುಸ್ತಿಕೊಡಕ್ಕೊದ ದಾಗುಟ್ರು ಕಾಂಪೌಡ್ರಗ್ಯಲ್ಲ ವಡದೋಡಿಸ್ಯವೆ.”
“ಅವು ಮಲ್ಲಾಗ್ರು ಬರ ಅವುಕೇನು ಬತ್ಲ.”
“ನೋಡಕ್ಕ, ಸಾಬರ ಮ್ಯಾಲೆ ಈ ಮೋದಿ ಕಡಿಯೋರು ಯರಡು ಮೂರು ಕಾನೂನು ತಂದು ನೀವು ನಮ್ಮ ದೇಸದೋರಲ್ಲ, ಪಾಕಿಸ್ತಾನದೊರು, ಬಾಗ್ಲಾದೇಸದೊರು, ಅಲ್ಲಿಗೆ ರವಾನಿಸ್ತೀವಿ ಅಂತ ಹೆದರಿಸಿದ್ರು. ಆಗ ಅವುರ್ಯಲ್ಲ ಡೆಲ್ಲಿಲಿ ಸಭೆ ಸೇರಿ, ಗಲಾಟೆ ಮಾಡಿದ್ರು. ಅವುರ ಮ್ಯಾಲೆ ಗೂಂಡಾಗಳ ಚೂ ಬಿಟ್ಟು ಗುಂಡಾರಿಸಿ ಐವತ್ತು ಜನ ಕೊಂದಾಕಿದ್ರು ಇದು ಸರಿಯೇನಕ್ಕ.”
“ತೆಪ್ಪು. ಅಂಗೆ ಮಾಡಿದ್ರೆ ಅವುರೆಲ್ಲಿಗೋಗಬೇಕ್ಲ.”
“ಇರುವೆನೂ ಸುಮ್ಮನೆ ಸಾಯದಿಲ್ಲ ಕಣಕ್ಕ. ಕಚ್ಚಿಬುಟ್ಟೆ ಸಾಯ್ತದೆ. ಅಂತಾದ್ರಲ್ಲಿ, ಯಾವ ಸಾಬಿನೂ ಸುಮ್ಮನೆ ಸಾಯದಿಲ್ಲ. ನಾಕುಜನ ತಗದೆ ಹೋಗನ ಅಂತ ತೀರ್ಮಾನ ತಗತನೆ. ಅಂತದ್ಯಾವೊ ವಸಿ ಪೋಲಿ ಬಡ್ಡೆತ್ತವು, ದಾಗುಟ್ರು ಮ್ಯಾಲೆ ಹಲ್ಲೆ ಮಾಡ್ಯವೆ.”
“ಅಂತು ಸಾಬರಿಗೆ ಕ್ಯಟ್ಟೆಸರು ತಂದವೆ ಅನ್ನು.”
“ತರದೇನು ಸಾಬರನ ಅಗಚಿಬುಟ್ರು ಅತ್ತಗೆ” ಎಂದ ಉಗ್ರೀ.
“ಅವುರಿಗೆ ಅಗಚಿಗಂಡರೂ ಸಗತಿನೂ ಅದೆ ಕಣೊ ಉಗ್ರಿ. ಅವುರ ಧರ್ಮನೆ ಅಂಗದೆ.”
“ಕ್ಯರೋನ ಬಂದು ಯಲ್ಲಾರ್ನು ಕ್ಯರಕಂಡೊಯ್ತಾಯಿರುವಾಗ ಧರಮ ಕಡಿಗಂಡೇನ್ಲ.” ಎಂದು ಜುಮ್ಮಿ ಹೇಳುವಾಗ ಸೀರ ಕಾಣಿಸಿಕೊಂಡ.
“ಬಾ ಚಿಗಪ್ಪ. ಈ ಕರೊನ ಬಂದು ಅಮೇರಿಕದಲ್ಲಿ ಲಕ್ಷಾಂತರ ಜನ ಸಾಯ್ತ ಅವುರೆ, ನಮ್ಮ ದೇಸಕ್ಕು ಬಂದ್ರೆ ಕತಿಯೇನು.”
“ಬರ್ಲಿ ಬುಡ್ಳ., ಆಗಿನ ಕಾಲದಲ್ಲಿ ನಮ್ಮಪ್ಪಯಲ್ಲ ಪ್ಳೇಗಿನಲ್ಲಿ ಸತ್ತೋದ್ರು. ಈಗ್ಲು ಅಂಥದೊಂದು ಬಂದದೆ ಒದಿರೋಗ್ಲಿ ಬುಡು.”
‘ಇದೇನು ಚಿಗಪ್ಪ ಹಿಂಗಂತಿ.”
“ಮತ್ತೆ, ಈಗಿನುಡ್ರು ಮಾತ ಕೇಳ್ತವೇನ್ಲ ಹಿರಿಯರೆಗೆ ಗೌರವಕೊಟ್ಟವೇನ್ಲ. ಅದೇನು ಧಿಮಾಕು, ಅದೇನು ಜಂಬಾ, ಅವುರನೇನಾರ ಮಾತಾಡಿಸಕ್ಕಾದತೆ, ಇಂಥ ನನಮಗನವು ಇದ್ರೆಷ್ಟು ಹೋದರೆಷ್ಟು. ಇದು ಬಂದಿದ್ದು ವಳ್ಳೆದೆ ಸುಂಕಿರು. ಜಳ್ಯಲ್ಲ ಹೋಗಿ ಗಟ್ಟಿದು ಉಳಕತ್ತದೆ” ಎಂದು ಸೀರ ನಕ್ಕ.
“ನಗತಿಯಲ್ಲೊ ಚಿಗಪ್ಪ. ವಸ ಜನ ನಿನಿಗೆ ಗೌರವ ಕೊಡಲಿಲ್ಲ ಅಂತ ಕೊರೋನ ಬಂದು ತೂರಿಕಂಡೋಗ್ಲಿ ಅಂತಿಯಲ್ಲಾ. ಲೇ ಉಗ್ರಿ ಸಾಬರ ಬೈತಿಯಲ್ಲೊ ನೋಡಿಲ್ಲೆ ಅವುನೆ ಕೊರೋನಾ ಚಿಗಪ್ಪ.”
“ಅವುಂದೇನ್ಯಲ್ಲ ಆಯ್ತಲ್ಲ ಅಯ್ಯನ ಮಿಸೇನು ನಿಂತೂಗ್ಯದೆ ಚಿಗವ್ವನೂ ಮುದುಕಿಯಾದ್ಲು ಅದ್ಕೆ ಕೊರೋನ ಬರ್ಲಿ ಅಂತ ಕಾಯ್ತ ಕುಂತವನೆ.”
“..!?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...