Homeಅಂಕಣಗಳು“ಮನ್ನೆ ದಿನ ದೀಪ ಹಚ್ಚಿದೇನಕ್ಕ?": ಕಟ್ಟೆಪುರಾಣದಲ್ಲಿ ಜುಮ್ಮಕ್ಕನ್ನ ಕೇಳಿದ ವಾಟಿಸ್ಸೆ

“ಮನ್ನೆ ದಿನ ದೀಪ ಹಚ್ಚಿದೇನಕ್ಕ?”: ಕಟ್ಟೆಪುರಾಣದಲ್ಲಿ ಜುಮ್ಮಕ್ಕನ್ನ ಕೇಳಿದ ವಾಟಿಸ್ಸೆ

- Advertisement -
- Advertisement -

ಜುಮ್ಮಿ ಮನೆಗೆ ಬಂದ ವಾಟಿಸ್ಸೆ,
‘ಮನ್ನೆ ದಿನ ದೀಪ ಹಚ್ಚಿದ್ದೇನಕ್ಕ’ ಎಂದ.
“ಯಾಕ್ಲ.”
“ಇದೇನಕ್ಕ ಹಿಂಕೇಳ್ತಿ, ಮೋದಿ ದೀಪ ಹಚ್ಚಗಂಡು ಕುಂತಿರಿ ಅಂತ ಹೇಳಿದ್ನ ಮರತುಬುಟ್ಟಾ.”
“ಎಲ್ಲೇಳಿದ್ದಾ.”
“ಟಿವಿಲಿ ಕಾಣಿಸಿಗಂಡು ಹೇಳಿದ್ದ ಕಣಕ್ಕ.”
“ಏನಂತ ಹೇಳಿದ್ದಾ”

ಐದನೆ ತಾರೀಖು ರಾತ್ರಿ ವಂಬತ್ತು ಗಂಟೆಗೆ, ಲೈಟಾಪು ಮಾಡಿಕಂಡು, ದೀಪ ಹಚಗಂಡು ವಂಬತ್ತು ನಿಮಿಸ ಮನೆಲಿ ಕುಂತಿರಿ ಅಂತ ಹೇಳಿದ್ದ.”
“ಅದ್ಯಾಕಂಗೇಳಿದ್ದ.”
“ಈ ಕೊರೊನ ವೈರಸ್ ಅದೆ ನೋಡು ಅದು ಬೆಳಕಲ್ಲಿ ಯಲ್ಲಾ ಕಡಿಕೂ ದುಂಬು ತೇಲಿದಂಗೆ ತೇಳಿಕಂಡು ಹೋಯ್ತದಂತೆ. ಆಗ ಯಲ್ಲಾ ದೀಪನು ಆರಿಸಿ. ಅಣತೆ ಹಚಿದ್ರೆ ಅದರತ್ರ ಬಂದು ಸತ್ತೋದವಂತೆ.”
“ಓಹೊ ಲೈಟ್ ಬೆಳಕಿಗೆ ಈಚಉಳ ಬಂದು ಬೀಳ್ತವೆ ನೋಡು ಅಂಗೆ.”
“ಎಜ್ಲಾಟ್ಳಿ ಕರಟ್ ಕಣಕ್ಕ.”
“ಅದವುನಿಗ್ಯಂಗೆ ಗೊತ್ತಾಯಿತ್ಲ.”
“ಅವುನುನ್ನೆನು ಅನ್ನಕಂಡಿದ್ದಿಯಕ್ಕ ನೀನು, ಪ್ರಧಾನಿನೆ ಆಗದೆಯಿದ್ರೆ ಬಿ.ಜೆ.ಪಿ ವಿಜ್ಞಾನಿಯಾಗಿರತಿದ್ದ.”
“ನಾವು ದೀಪ ಹಚ್ಚಲಿಲ್ಲಕಂಡ್ಳ ವಂಬತ್ತು ಗಂಟಗ್ಯಲ್ಲ ಉಂಡು ಮನಿಕಂಬುಡ್ತಿವಿ.”
“ಓ ಮೋದಿ ಮಾತು ಕೇಳಿಲ್ಲ ನೀನು, ಅಂಗರೆ ದೇಸದ್ರೊಹಿ ಕಣಕ್ಕ ನೀನು.”
“ನಾನ್ಯಾಕ್ಲ ದೇಸದ್ರೊಯಿಯಾಗ್ಲಿ.”
“ಕಾಲ ಬದ್ಲಾಗ್ಯದೆ ಕಣಕ್ಕ, ಮೋದಿ ಮಾತು ಕೇಳದೊರ್ಯಲ್ಲ ದೇಸದ್ರೊಹಿಗಳು, ಇಡೀ ದೇಸನೆ ದೀಪ ಹಚಿದಾಗ ನೀನು ಮನಗಿದ್ದೆ ಅಂತಿಯಲ್ಲ. ಕೊರೋನ ಬರದಿಲವ ನಿನ್ನ ಮನಿಗೆ.”
“ಇಡೀ ದೇಸನೆ ದೀಪ ಹಚ್ಚಿದ ಮ್ಯಾಲೆ ಅದು ವಂಟೋಗಿರದಿಲವೇನ್ಲ.”
“ಹೋಗಿಲವಂತೆ ಕಣಕ್ಕ. ಸುಮಾರು ಐದು ಪರಸೆಂಟು ಜನ ದೀಪ ಹಚ್ಚಿರಲಿಲವಂತೆ, ಅಂಗಾಗಿ ಉಳಕಂಡದಂತೆ.”
“ಸಾಬರ್ಯಾರೂ ದೀಪ ಹಚ್ಚಿರಲಿಲವಂತೆ ಕಣೊ” ಎಂದ ಉಗ್ರಿ.
“ಸಾಬರ್ಯಾರು ಮೋದಿ ಮಾತ ಕೇಳ್ಯರು.”
“ಅಂಗರವುನ ಮಾತ ಕೇಳದಿಲವೇನ್ಲ ಸಾಬ್ರು.”
“ಇಲ್ಲ ಕಣಕ್ಕ, ಮೋದಿ ಇಡೀ ದೇಸಕೆ ಪ್ರಧಾನಮಂತ್ರಿಯಾಗಿದ್ರೆ ಕೇಳತಿದ್ರು. ಆದ್ರವುನು ಬಿಜೆಪಿ ಪ್ರಧಾನಿಯಾಗಿದ್ದಕಂಡು, ಆರೆಸೆಸ್ ಹೇಳಿದಂಗೆ ಕೇಳ್ತನೆ ಆಂತ ಸಾಬರು ಅವುನೇಳಿದ್ದ ಮಾತ ಕೇಳದಿಲ್ಲ.”
“ಸಾಬರೇನು ಮೋದಿಗೆ ಸಮಸ್ಯೆ ಅಲ್ಲ ಕಣೊ. ಅವುರು ಗಾಂಧೀಜಿ ಕಾಲದಿಂದ ಸಮಸ್ಸೆನೆ. ಪ್ರಪಂಚಕೆ ಸಮಸ್ಯಾದೋರು ಮೋದಿಗೆ ಯಾವ ಲ್ಯಕ್ಕ.”
“ಅದ್ಯಾಕ್ಲ ಸಾಬರಿಗೆ ಬೈತಿರಿ.”
“ಅವುರು ಡೆಲ್ಲಿಲಿ ಸಭೆ ಮಾಡಿದ್ರಂತೆ, ಅಲ್ಲಿಗೆ ಕೊರೋನಾ ಇದ್ದೊರ ಕರಿಸಿ, ಯಲ್ಲಾರಾ ತಬ್ಬಿಕಂಡು ಕ್ಯಾಕರಿಸಿ ಕೆಮ್ಮಿಕಂಡು ದೇಸದ ತುಂಬ ಚಲ್ಲಾಪಿಲ್ಲಿಯಾಗಿ ಹೋಗಿ ಹರಡಿದರಂತೆ ಕೊರೋನಾವಾ.”
“ಮತ್ತೆ ಚೀಣಾ ದೇಸದಿಂದ ಬತ್ತು ಅಂತಿದ್ರು.”
“ಅದು ಮದ್ಲು, ಈಗ ಬಿಜೆಪಿಗಳಿಗೆ ಸಾಬರು ಸಿಕ್ಕಿರದ್ರಿಂದ ಅವುರ ತಲಿಗಾ ಕಟ್ಟಿ ತಮಾಸಿ ನೋಡ್ತ ಅವುರೆ.”
“ಥೂ ಅಂಗೆ ಮಾಡಬಾರ್ದು ಕಂಡ್ಳ.”
“ಅವು ಅಂಗೆ ಮಾಡ್ತವೆ ಕಣ.., ಅವುಸ್ತಿಕೊಡಕ್ಕೊದ ದಾಗುಟ್ರು ಕಾಂಪೌಡ್ರಗ್ಯಲ್ಲ ವಡದೋಡಿಸ್ಯವೆ.”
“ಅವು ಮಲ್ಲಾಗ್ರು ಬರ ಅವುಕೇನು ಬತ್ಲ.”
“ನೋಡಕ್ಕ, ಸಾಬರ ಮ್ಯಾಲೆ ಈ ಮೋದಿ ಕಡಿಯೋರು ಯರಡು ಮೂರು ಕಾನೂನು ತಂದು ನೀವು ನಮ್ಮ ದೇಸದೋರಲ್ಲ, ಪಾಕಿಸ್ತಾನದೊರು, ಬಾಗ್ಲಾದೇಸದೊರು, ಅಲ್ಲಿಗೆ ರವಾನಿಸ್ತೀವಿ ಅಂತ ಹೆದರಿಸಿದ್ರು. ಆಗ ಅವುರ್ಯಲ್ಲ ಡೆಲ್ಲಿಲಿ ಸಭೆ ಸೇರಿ, ಗಲಾಟೆ ಮಾಡಿದ್ರು. ಅವುರ ಮ್ಯಾಲೆ ಗೂಂಡಾಗಳ ಚೂ ಬಿಟ್ಟು ಗುಂಡಾರಿಸಿ ಐವತ್ತು ಜನ ಕೊಂದಾಕಿದ್ರು ಇದು ಸರಿಯೇನಕ್ಕ.”
“ತೆಪ್ಪು. ಅಂಗೆ ಮಾಡಿದ್ರೆ ಅವುರೆಲ್ಲಿಗೋಗಬೇಕ್ಲ.”
“ಇರುವೆನೂ ಸುಮ್ಮನೆ ಸಾಯದಿಲ್ಲ ಕಣಕ್ಕ. ಕಚ್ಚಿಬುಟ್ಟೆ ಸಾಯ್ತದೆ. ಅಂತಾದ್ರಲ್ಲಿ, ಯಾವ ಸಾಬಿನೂ ಸುಮ್ಮನೆ ಸಾಯದಿಲ್ಲ. ನಾಕುಜನ ತಗದೆ ಹೋಗನ ಅಂತ ತೀರ್ಮಾನ ತಗತನೆ. ಅಂತದ್ಯಾವೊ ವಸಿ ಪೋಲಿ ಬಡ್ಡೆತ್ತವು, ದಾಗುಟ್ರು ಮ್ಯಾಲೆ ಹಲ್ಲೆ ಮಾಡ್ಯವೆ.”
“ಅಂತು ಸಾಬರಿಗೆ ಕ್ಯಟ್ಟೆಸರು ತಂದವೆ ಅನ್ನು.”
“ತರದೇನು ಸಾಬರನ ಅಗಚಿಬುಟ್ರು ಅತ್ತಗೆ” ಎಂದ ಉಗ್ರೀ.
“ಅವುರಿಗೆ ಅಗಚಿಗಂಡರೂ ಸಗತಿನೂ ಅದೆ ಕಣೊ ಉಗ್ರಿ. ಅವುರ ಧರ್ಮನೆ ಅಂಗದೆ.”
“ಕ್ಯರೋನ ಬಂದು ಯಲ್ಲಾರ್ನು ಕ್ಯರಕಂಡೊಯ್ತಾಯಿರುವಾಗ ಧರಮ ಕಡಿಗಂಡೇನ್ಲ.” ಎಂದು ಜುಮ್ಮಿ ಹೇಳುವಾಗ ಸೀರ ಕಾಣಿಸಿಕೊಂಡ.
“ಬಾ ಚಿಗಪ್ಪ. ಈ ಕರೊನ ಬಂದು ಅಮೇರಿಕದಲ್ಲಿ ಲಕ್ಷಾಂತರ ಜನ ಸಾಯ್ತ ಅವುರೆ, ನಮ್ಮ ದೇಸಕ್ಕು ಬಂದ್ರೆ ಕತಿಯೇನು.”
“ಬರ್ಲಿ ಬುಡ್ಳ., ಆಗಿನ ಕಾಲದಲ್ಲಿ ನಮ್ಮಪ್ಪಯಲ್ಲ ಪ್ಳೇಗಿನಲ್ಲಿ ಸತ್ತೋದ್ರು. ಈಗ್ಲು ಅಂಥದೊಂದು ಬಂದದೆ ಒದಿರೋಗ್ಲಿ ಬುಡು.”
‘ಇದೇನು ಚಿಗಪ್ಪ ಹಿಂಗಂತಿ.”
“ಮತ್ತೆ, ಈಗಿನುಡ್ರು ಮಾತ ಕೇಳ್ತವೇನ್ಲ ಹಿರಿಯರೆಗೆ ಗೌರವಕೊಟ್ಟವೇನ್ಲ. ಅದೇನು ಧಿಮಾಕು, ಅದೇನು ಜಂಬಾ, ಅವುರನೇನಾರ ಮಾತಾಡಿಸಕ್ಕಾದತೆ, ಇಂಥ ನನಮಗನವು ಇದ್ರೆಷ್ಟು ಹೋದರೆಷ್ಟು. ಇದು ಬಂದಿದ್ದು ವಳ್ಳೆದೆ ಸುಂಕಿರು. ಜಳ್ಯಲ್ಲ ಹೋಗಿ ಗಟ್ಟಿದು ಉಳಕತ್ತದೆ” ಎಂದು ಸೀರ ನಕ್ಕ.
“ನಗತಿಯಲ್ಲೊ ಚಿಗಪ್ಪ. ವಸ ಜನ ನಿನಿಗೆ ಗೌರವ ಕೊಡಲಿಲ್ಲ ಅಂತ ಕೊರೋನ ಬಂದು ತೂರಿಕಂಡೋಗ್ಲಿ ಅಂತಿಯಲ್ಲಾ. ಲೇ ಉಗ್ರಿ ಸಾಬರ ಬೈತಿಯಲ್ಲೊ ನೋಡಿಲ್ಲೆ ಅವುನೆ ಕೊರೋನಾ ಚಿಗಪ್ಪ.”
“ಅವುಂದೇನ್ಯಲ್ಲ ಆಯ್ತಲ್ಲ ಅಯ್ಯನ ಮಿಸೇನು ನಿಂತೂಗ್ಯದೆ ಚಿಗವ್ವನೂ ಮುದುಕಿಯಾದ್ಲು ಅದ್ಕೆ ಕೊರೋನ ಬರ್ಲಿ ಅಂತ ಕಾಯ್ತ ಕುಂತವನೆ.”
“..!?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...