Homeಅಂಕಣಗಳು“ಮನ್ನೆ ದಿನ ದೀಪ ಹಚ್ಚಿದೇನಕ್ಕ?": ಕಟ್ಟೆಪುರಾಣದಲ್ಲಿ ಜುಮ್ಮಕ್ಕನ್ನ ಕೇಳಿದ ವಾಟಿಸ್ಸೆ

“ಮನ್ನೆ ದಿನ ದೀಪ ಹಚ್ಚಿದೇನಕ್ಕ?”: ಕಟ್ಟೆಪುರಾಣದಲ್ಲಿ ಜುಮ್ಮಕ್ಕನ್ನ ಕೇಳಿದ ವಾಟಿಸ್ಸೆ

- Advertisement -
- Advertisement -

ಜುಮ್ಮಿ ಮನೆಗೆ ಬಂದ ವಾಟಿಸ್ಸೆ,
‘ಮನ್ನೆ ದಿನ ದೀಪ ಹಚ್ಚಿದ್ದೇನಕ್ಕ’ ಎಂದ.
“ಯಾಕ್ಲ.”
“ಇದೇನಕ್ಕ ಹಿಂಕೇಳ್ತಿ, ಮೋದಿ ದೀಪ ಹಚ್ಚಗಂಡು ಕುಂತಿರಿ ಅಂತ ಹೇಳಿದ್ನ ಮರತುಬುಟ್ಟಾ.”
“ಎಲ್ಲೇಳಿದ್ದಾ.”
“ಟಿವಿಲಿ ಕಾಣಿಸಿಗಂಡು ಹೇಳಿದ್ದ ಕಣಕ್ಕ.”
“ಏನಂತ ಹೇಳಿದ್ದಾ”

ಐದನೆ ತಾರೀಖು ರಾತ್ರಿ ವಂಬತ್ತು ಗಂಟೆಗೆ, ಲೈಟಾಪು ಮಾಡಿಕಂಡು, ದೀಪ ಹಚಗಂಡು ವಂಬತ್ತು ನಿಮಿಸ ಮನೆಲಿ ಕುಂತಿರಿ ಅಂತ ಹೇಳಿದ್ದ.”
“ಅದ್ಯಾಕಂಗೇಳಿದ್ದ.”
“ಈ ಕೊರೊನ ವೈರಸ್ ಅದೆ ನೋಡು ಅದು ಬೆಳಕಲ್ಲಿ ಯಲ್ಲಾ ಕಡಿಕೂ ದುಂಬು ತೇಲಿದಂಗೆ ತೇಳಿಕಂಡು ಹೋಯ್ತದಂತೆ. ಆಗ ಯಲ್ಲಾ ದೀಪನು ಆರಿಸಿ. ಅಣತೆ ಹಚಿದ್ರೆ ಅದರತ್ರ ಬಂದು ಸತ್ತೋದವಂತೆ.”
“ಓಹೊ ಲೈಟ್ ಬೆಳಕಿಗೆ ಈಚಉಳ ಬಂದು ಬೀಳ್ತವೆ ನೋಡು ಅಂಗೆ.”
“ಎಜ್ಲಾಟ್ಳಿ ಕರಟ್ ಕಣಕ್ಕ.”
“ಅದವುನಿಗ್ಯಂಗೆ ಗೊತ್ತಾಯಿತ್ಲ.”
“ಅವುನುನ್ನೆನು ಅನ್ನಕಂಡಿದ್ದಿಯಕ್ಕ ನೀನು, ಪ್ರಧಾನಿನೆ ಆಗದೆಯಿದ್ರೆ ಬಿ.ಜೆ.ಪಿ ವಿಜ್ಞಾನಿಯಾಗಿರತಿದ್ದ.”
“ನಾವು ದೀಪ ಹಚ್ಚಲಿಲ್ಲಕಂಡ್ಳ ವಂಬತ್ತು ಗಂಟಗ್ಯಲ್ಲ ಉಂಡು ಮನಿಕಂಬುಡ್ತಿವಿ.”
“ಓ ಮೋದಿ ಮಾತು ಕೇಳಿಲ್ಲ ನೀನು, ಅಂಗರೆ ದೇಸದ್ರೊಹಿ ಕಣಕ್ಕ ನೀನು.”
“ನಾನ್ಯಾಕ್ಲ ದೇಸದ್ರೊಯಿಯಾಗ್ಲಿ.”
“ಕಾಲ ಬದ್ಲಾಗ್ಯದೆ ಕಣಕ್ಕ, ಮೋದಿ ಮಾತು ಕೇಳದೊರ್ಯಲ್ಲ ದೇಸದ್ರೊಹಿಗಳು, ಇಡೀ ದೇಸನೆ ದೀಪ ಹಚಿದಾಗ ನೀನು ಮನಗಿದ್ದೆ ಅಂತಿಯಲ್ಲ. ಕೊರೋನ ಬರದಿಲವ ನಿನ್ನ ಮನಿಗೆ.”
“ಇಡೀ ದೇಸನೆ ದೀಪ ಹಚ್ಚಿದ ಮ್ಯಾಲೆ ಅದು ವಂಟೋಗಿರದಿಲವೇನ್ಲ.”
“ಹೋಗಿಲವಂತೆ ಕಣಕ್ಕ. ಸುಮಾರು ಐದು ಪರಸೆಂಟು ಜನ ದೀಪ ಹಚ್ಚಿರಲಿಲವಂತೆ, ಅಂಗಾಗಿ ಉಳಕಂಡದಂತೆ.”
“ಸಾಬರ್ಯಾರೂ ದೀಪ ಹಚ್ಚಿರಲಿಲವಂತೆ ಕಣೊ” ಎಂದ ಉಗ್ರಿ.
“ಸಾಬರ್ಯಾರು ಮೋದಿ ಮಾತ ಕೇಳ್ಯರು.”
“ಅಂಗರವುನ ಮಾತ ಕೇಳದಿಲವೇನ್ಲ ಸಾಬ್ರು.”
“ಇಲ್ಲ ಕಣಕ್ಕ, ಮೋದಿ ಇಡೀ ದೇಸಕೆ ಪ್ರಧಾನಮಂತ್ರಿಯಾಗಿದ್ರೆ ಕೇಳತಿದ್ರು. ಆದ್ರವುನು ಬಿಜೆಪಿ ಪ್ರಧಾನಿಯಾಗಿದ್ದಕಂಡು, ಆರೆಸೆಸ್ ಹೇಳಿದಂಗೆ ಕೇಳ್ತನೆ ಆಂತ ಸಾಬರು ಅವುನೇಳಿದ್ದ ಮಾತ ಕೇಳದಿಲ್ಲ.”
“ಸಾಬರೇನು ಮೋದಿಗೆ ಸಮಸ್ಯೆ ಅಲ್ಲ ಕಣೊ. ಅವುರು ಗಾಂಧೀಜಿ ಕಾಲದಿಂದ ಸಮಸ್ಸೆನೆ. ಪ್ರಪಂಚಕೆ ಸಮಸ್ಯಾದೋರು ಮೋದಿಗೆ ಯಾವ ಲ್ಯಕ್ಕ.”
“ಅದ್ಯಾಕ್ಲ ಸಾಬರಿಗೆ ಬೈತಿರಿ.”
“ಅವುರು ಡೆಲ್ಲಿಲಿ ಸಭೆ ಮಾಡಿದ್ರಂತೆ, ಅಲ್ಲಿಗೆ ಕೊರೋನಾ ಇದ್ದೊರ ಕರಿಸಿ, ಯಲ್ಲಾರಾ ತಬ್ಬಿಕಂಡು ಕ್ಯಾಕರಿಸಿ ಕೆಮ್ಮಿಕಂಡು ದೇಸದ ತುಂಬ ಚಲ್ಲಾಪಿಲ್ಲಿಯಾಗಿ ಹೋಗಿ ಹರಡಿದರಂತೆ ಕೊರೋನಾವಾ.”
“ಮತ್ತೆ ಚೀಣಾ ದೇಸದಿಂದ ಬತ್ತು ಅಂತಿದ್ರು.”
“ಅದು ಮದ್ಲು, ಈಗ ಬಿಜೆಪಿಗಳಿಗೆ ಸಾಬರು ಸಿಕ್ಕಿರದ್ರಿಂದ ಅವುರ ತಲಿಗಾ ಕಟ್ಟಿ ತಮಾಸಿ ನೋಡ್ತ ಅವುರೆ.”
“ಥೂ ಅಂಗೆ ಮಾಡಬಾರ್ದು ಕಂಡ್ಳ.”
“ಅವು ಅಂಗೆ ಮಾಡ್ತವೆ ಕಣ.., ಅವುಸ್ತಿಕೊಡಕ್ಕೊದ ದಾಗುಟ್ರು ಕಾಂಪೌಡ್ರಗ್ಯಲ್ಲ ವಡದೋಡಿಸ್ಯವೆ.”
“ಅವು ಮಲ್ಲಾಗ್ರು ಬರ ಅವುಕೇನು ಬತ್ಲ.”
“ನೋಡಕ್ಕ, ಸಾಬರ ಮ್ಯಾಲೆ ಈ ಮೋದಿ ಕಡಿಯೋರು ಯರಡು ಮೂರು ಕಾನೂನು ತಂದು ನೀವು ನಮ್ಮ ದೇಸದೋರಲ್ಲ, ಪಾಕಿಸ್ತಾನದೊರು, ಬಾಗ್ಲಾದೇಸದೊರು, ಅಲ್ಲಿಗೆ ರವಾನಿಸ್ತೀವಿ ಅಂತ ಹೆದರಿಸಿದ್ರು. ಆಗ ಅವುರ್ಯಲ್ಲ ಡೆಲ್ಲಿಲಿ ಸಭೆ ಸೇರಿ, ಗಲಾಟೆ ಮಾಡಿದ್ರು. ಅವುರ ಮ್ಯಾಲೆ ಗೂಂಡಾಗಳ ಚೂ ಬಿಟ್ಟು ಗುಂಡಾರಿಸಿ ಐವತ್ತು ಜನ ಕೊಂದಾಕಿದ್ರು ಇದು ಸರಿಯೇನಕ್ಕ.”
“ತೆಪ್ಪು. ಅಂಗೆ ಮಾಡಿದ್ರೆ ಅವುರೆಲ್ಲಿಗೋಗಬೇಕ್ಲ.”
“ಇರುವೆನೂ ಸುಮ್ಮನೆ ಸಾಯದಿಲ್ಲ ಕಣಕ್ಕ. ಕಚ್ಚಿಬುಟ್ಟೆ ಸಾಯ್ತದೆ. ಅಂತಾದ್ರಲ್ಲಿ, ಯಾವ ಸಾಬಿನೂ ಸುಮ್ಮನೆ ಸಾಯದಿಲ್ಲ. ನಾಕುಜನ ತಗದೆ ಹೋಗನ ಅಂತ ತೀರ್ಮಾನ ತಗತನೆ. ಅಂತದ್ಯಾವೊ ವಸಿ ಪೋಲಿ ಬಡ್ಡೆತ್ತವು, ದಾಗುಟ್ರು ಮ್ಯಾಲೆ ಹಲ್ಲೆ ಮಾಡ್ಯವೆ.”
“ಅಂತು ಸಾಬರಿಗೆ ಕ್ಯಟ್ಟೆಸರು ತಂದವೆ ಅನ್ನು.”
“ತರದೇನು ಸಾಬರನ ಅಗಚಿಬುಟ್ರು ಅತ್ತಗೆ” ಎಂದ ಉಗ್ರೀ.
“ಅವುರಿಗೆ ಅಗಚಿಗಂಡರೂ ಸಗತಿನೂ ಅದೆ ಕಣೊ ಉಗ್ರಿ. ಅವುರ ಧರ್ಮನೆ ಅಂಗದೆ.”
“ಕ್ಯರೋನ ಬಂದು ಯಲ್ಲಾರ್ನು ಕ್ಯರಕಂಡೊಯ್ತಾಯಿರುವಾಗ ಧರಮ ಕಡಿಗಂಡೇನ್ಲ.” ಎಂದು ಜುಮ್ಮಿ ಹೇಳುವಾಗ ಸೀರ ಕಾಣಿಸಿಕೊಂಡ.
“ಬಾ ಚಿಗಪ್ಪ. ಈ ಕರೊನ ಬಂದು ಅಮೇರಿಕದಲ್ಲಿ ಲಕ್ಷಾಂತರ ಜನ ಸಾಯ್ತ ಅವುರೆ, ನಮ್ಮ ದೇಸಕ್ಕು ಬಂದ್ರೆ ಕತಿಯೇನು.”
“ಬರ್ಲಿ ಬುಡ್ಳ., ಆಗಿನ ಕಾಲದಲ್ಲಿ ನಮ್ಮಪ್ಪಯಲ್ಲ ಪ್ಳೇಗಿನಲ್ಲಿ ಸತ್ತೋದ್ರು. ಈಗ್ಲು ಅಂಥದೊಂದು ಬಂದದೆ ಒದಿರೋಗ್ಲಿ ಬುಡು.”
‘ಇದೇನು ಚಿಗಪ್ಪ ಹಿಂಗಂತಿ.”
“ಮತ್ತೆ, ಈಗಿನುಡ್ರು ಮಾತ ಕೇಳ್ತವೇನ್ಲ ಹಿರಿಯರೆಗೆ ಗೌರವಕೊಟ್ಟವೇನ್ಲ. ಅದೇನು ಧಿಮಾಕು, ಅದೇನು ಜಂಬಾ, ಅವುರನೇನಾರ ಮಾತಾಡಿಸಕ್ಕಾದತೆ, ಇಂಥ ನನಮಗನವು ಇದ್ರೆಷ್ಟು ಹೋದರೆಷ್ಟು. ಇದು ಬಂದಿದ್ದು ವಳ್ಳೆದೆ ಸುಂಕಿರು. ಜಳ್ಯಲ್ಲ ಹೋಗಿ ಗಟ್ಟಿದು ಉಳಕತ್ತದೆ” ಎಂದು ಸೀರ ನಕ್ಕ.
“ನಗತಿಯಲ್ಲೊ ಚಿಗಪ್ಪ. ವಸ ಜನ ನಿನಿಗೆ ಗೌರವ ಕೊಡಲಿಲ್ಲ ಅಂತ ಕೊರೋನ ಬಂದು ತೂರಿಕಂಡೋಗ್ಲಿ ಅಂತಿಯಲ್ಲಾ. ಲೇ ಉಗ್ರಿ ಸಾಬರ ಬೈತಿಯಲ್ಲೊ ನೋಡಿಲ್ಲೆ ಅವುನೆ ಕೊರೋನಾ ಚಿಗಪ್ಪ.”
“ಅವುಂದೇನ್ಯಲ್ಲ ಆಯ್ತಲ್ಲ ಅಯ್ಯನ ಮಿಸೇನು ನಿಂತೂಗ್ಯದೆ ಚಿಗವ್ವನೂ ಮುದುಕಿಯಾದ್ಲು ಅದ್ಕೆ ಕೊರೋನ ಬರ್ಲಿ ಅಂತ ಕಾಯ್ತ ಕುಂತವನೆ.”
“..!?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...