Homeಪ್ರಪಂಚಕೊಳಕು ಯುದ್ಧ ಮತ್ತು ಆರ್ಥಿಕ ಸಂಕಷ್ಟಗಳು

ಕೊಳಕು ಯುದ್ಧ ಮತ್ತು ಆರ್ಥಿಕ ಸಂಕಷ್ಟಗಳು

- Advertisement -
- Advertisement -

ಭರತ್ ಹೆಬ್ಬಾಳ |

ಆಧುನಿಕ ಸರ್ವಾಧಿüಕಾರದ ಒಂದು ಗುಣವೆಂದರೆ ಅಲ್ಲಿ ಬರುವ ಬಹುತೇಕ ಸರ್ವಾಧಿüಕಾರಿಗಳು 1) ಆಳುವ ವರ್ಗಕ್ಕೆ ಲಾಭದಾಯಕವಾದ ಆರ್ಥಿಕತೆಯನ್ನು ಜನರ ಮೇಲೆ ಹೇರುತ್ತಾನೆ 2) ಧರ್ಮದ ರಾಜಕೀಯ ಮಾಡುತ್ತಿರುತ್ತಾನೆ 3) ನಿರ್ದಿಷ್ಟ ಧರ್ಮ/ಜಾತಿಯ ವಿರುದ್ದ ದ್ವೇಷ ಕಕ್ಕುತ್ತಾನೆ ಮತ್ತು 4) ಕಮ್ಯೂನಿಸ್ಟ್ ವಿರೋಧಿ ಧೋರಣೆ ಉಳ್ಳವನಾಗಿರುತ್ತಾನೆ. ನಿರ್ದಿಷ್ಟ ಜನರ ಮೇಲೆ ದ್ವೇಷ ಹರಡುವುದು, ಕಮ್ಯೂನಿಸಮ್ ಮತ್ತು ಕಮ್ಯೂನಿಸ್ಟ್ರನ್ನು ಇಲ್ಲದಾಗಿಸುವ ಪ್ರಚಾರ, ನಾಗರೀಕ ಹಕ್ಕುಗಳ ದಮನ, ಪ್ರತಿಭಟನೆಗಳನ್ನು ಕಾನೂನು ಬಾಹಿರ ಮಾಡುವುದು, ಪೊಲೀಸ್ ಮತ್ತು ಮಿಲಿಟರೀ ಪ್ರಭುತ್ವ ಸಾಧಿಸುವುದು, ಅಸಂವಿಧಾನಿಕ ಬಲಪಂಥೀಯ ಹತ್ಯಾ ಪಡೆಗಳನ್ನು ಬೆಳೆಸುವುದು ಮತ್ತು ನವಉದಾರವಾದಿ ಆರ್ಥಿಕ ನೀತಿಗಳನ್ನು ಚಾಚು ತಪ್ಪದೆ ಅನುಷ್ಟಾನಕ್ಕೆ ತಂದು ಜನರ ಮೇಲೆ ಹೇರುವುದು.
ಇದೇ ರೀತಿಯಲ್ಲಿ 1976ರಿಂದ 1983ರವರೆಗೂ “ಕೊಳಕು ಯುದ್ದ” ಎಂದು ಕರೆಯಲ್ಪಡುವ ಅಜೆರ್ಂಟೀನಾದ ಮಿಲಿಟರೀ ಸರ್ವಾಧಿüಕಾರದ ಕಾರ್ಯಾಚರಣೆಗಳಲ್ಲಿ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಮೂವತ್ತು ಸಾವಿರಕ್ಕೂ ಹೆಚ್ಚು ಜನರು ಕಾಣೆಯಾದರು. “ಭಯೋತ್ಪಾದಕರೆಂದರೆ ಬರಿ ಗನ್ನು ಮತ್ತು ಬಾಂಬು ಇಟ್ಟುಕೊಂಡಿರುವವರಷ್ಟೇ ಅಲ್ಲ, ಸಮಾಜದಲ್ಲಿ ಪಾಶ್ಚಾತ್ಯ ಮತ್ತು ಕ್ರೇಸ್ತ ಧರ್ಮೇತರ ಕಲ್ಪನೆಗಳನ್ನು, ವಿಚಾರವನ್ನು ಹರಡುವವನು” ಎಂದು ಮಿಲಿಟರಿ ಸರ್ವಾಧಿಕಾರಿ ಜೋರ್ಜ್ ರಾಫಿಯೆಲ್ ವೈಡ್ಲಾ ಅಮೆರಿಕಾ ಜೊತೆಗೂಡಿ ಅಜೆರ್ಂಟೀನ್ನಿಯನ್ನರ ಮಾರಣ ಹೋಮವನ್ನೇ ಮಾಡಿದನು.
ಅಮೆರಿಕ ಮತ್ತು ಸೋವಿಯಟ್ ಒಕ್ಕೂಟದ ನಡುವಣ ಶೀತಲ ಸಮರದ ಸಮಯದಲ್ಲಿ ಕ್ಯೂಬನ್ ಕ್ರಾಂತಿಯ ನಂತರ ದಕ್ಷಿಣ ಅಮೆರಿಕಾದ್ಯಂತ ಹಾರಾಡುತ್ತಿದ್ದ ಎಡಪಂಥೀಯ ವಿಚಾರಧಾರೆಗಳನ್ನು ಹೊಸಕಿ ಹಾಕಲು ಅಮೆರಿಕ ಬಳಸಿದ ಈ ರೀತಿಯ ಕಾರ್ಯಾಚರಣೆಯ ಹೆಸರೇ “ಆಪರೇಶನ್ ಕೊಂಡೋರ್”. ಇದರ ಮುಖ್ಯ ಧ್ಯೇಯವೇ ಅಮೆರಿಕಾದ ಬಂಡವಾಳಶಾಹಿ ಹೂಡಿಕೆಗಳ ರಕ್ಷಣೆ ಮತ್ತು ಅದಕ್ಕೆ ವಿರುದ್ಧವಾಗಿದ್ದ ಸಮಾನತಾವಾದ, ಸಹಿಷ್ಣುತಾವಾದ, ಸಮಾಜವಾದ, ಕಮ್ಯೂನಿಸಮ್ ಇಲ್ಲದಾಗಿಸುವುದು. ಎಳೆಯ ಮಕ್ಕಳನ್ನು ಬಿಡದೆ, ಎಡಪಂಥೀಯ ವಿಚಾರಧಾರೆ ಹೊಂದಿದ್ದ ವಿದ್ಯಾರ್ಥಿ ಯುವಜನರು, ಕಾರ್ಮಿಕ ನಾಯಕರು, ಮಾನವ ಹಕ್ಕುಗಳ ಹೋರಾಟಗಾರರು, ಸಾಹಿತಿಗಳು ಒಟ್ಟಾರೆ ಮನುಷ್ಯಮುಖಿ ಎಡಪಂಥೀಯ ಚಿಂತನೆಗಳುಳ್ಳವರೆಲ್ಲರನ್ನು ಬಂಧಿಸಿ, ಹಿಂಸಿಸಿ, ರಾಜಕೀಯ ಹತ್ಯೆಗಳ ಮೂಲಕ ದಮನಿಸಲಾಯಿತು. ಪ್ರಭುತ್ವದ ಈ ಭಯೋತ್ಪಾದನೆ ಶಕ್ತಿ ಎಷ್ಟರ ಮಟ್ಟಿಗೆ ಇತ್ತೆಂದರೆ, ಕಾಣೆಯಾದವರನ್ನೆಲ್ಲಾ ಅಮೆರಿಕ ನೀಡಿದ ಹೆಲಿಕಾಪ್ಟರ್ ಮತ್ತು ವಿಮಾನದಲ್ಲಿ ತೆಗೆದುಕೊಂಡು ಹೋಗಿ ಅಟ್ಲ್ಯಾಂಟಿಕ್ ಮಹಾಸಾಗರದಲ್ಲಿ ಎಸೆಯಲಾಗುತ್ತಿತ್ತು ಎಂದು ಹೊರಬಿದ್ದಿರುವ ದಾಖಲೆಗಳು ಹೇಳುತ್ತವೆ.
ವಿಪರ್ಯಾಸವೆಂದರೆ ಇದೇ ಮಿಲಿಟರೀ ಸರ್ವಾಧಿಕಾರದಲ್ಲಿ ಬಹುದೊಡ್ಡ ಪ್ರಮಾಣದ ಮಾನವ ಹಕ್ಕುಗಳ ಉಲ್ಲಂಘನೆಗಳು ಆಗುತ್ತಿದ್ದರೂ ಅಜೆರ್ಂಟೀನಾ 1978ರಲ್ಲಿ ಫುಟ್‍ಬಾಲ್ ವಲ್ರ್ಡ್‍ಕಪ್‍ನ ಆತಿಥೇಯ ವಹಿಸಿ ವಲ್ರ್ಡ್ ಕಪ್ ಗೆದ್ದುಕೊಂಡಿತು ಕೂಡ! ಪ್ರಭುತ್ವದ ಇಷ್ಟು ದೊಡ್ಡ ಪ್ರಮಾಣದ ಭಯೋತ್ಪಾದನೆಯನ್ನೂ ಮೀರಿ ಅಜೆಂಟೀನಾದ ಜನತೆ ಬಹುದೊಡ್ಡ ಪ್ರಮಾಣದಲ್ಲಿ ಪ್ರತಿರೋಧ ಒಡ್ಡಿತು ಮತ್ತು ಕ್ರಮೇಣ ಪ್ರಜಾಪ್ರಭುತ್ವಕ್ಕೆ ಹಿಂದಿರುಗಿತು.
ಐ.ಎಮ್.ಎಫ್ (ಅಂತರರಾಷ್ಟ್ರೀಯ ಹಣಕಾಸು ನಿಧಿ) ಮತ್ತು ವಲ್ರ್ಡ್ ಬ್ಯಾಂಕ್‍ಗಳು ‘ಆರ್ಥಿಕ ಸಲಹೆ’ಗಳ ಮೂಲಕ ಅತಿ ಹೆಚ್ಚು ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ಉತ್ತೇಜಿಸಿದವು. ವಾಸ್ತವದಲ್ಲಿ ಇವು ದೇಶ ದೇಶಗಳನ್ನು ಸಾಲದ ಸುಳಿಗೆ ಸಿಲುಕಿಸುವ, ದೇಶಗಳ ಸಾರ್ವಭೌಮತ್ವವನ್ನೇ ನಾಶ ಮಾಡುವ ಶಕ್ತಿಯುಳ್ಳ ಆಳುವ ವರ್ಗದ ಅಂತರ್ರಾಷ್ಟ್ರೀಯ ಬಂಡವಾಳಶಾಹಿ ಆರ್ಥಿಕ ಒಕ್ಕೂಟಗಳು. ಮಿಲಿಟರೀ ಸರ್ವಾಧಿಕಾರದಲ್ಲಿ ಇಂತಹ ಸಂಸ್ಥೆಗಳ ಸಲಹೆಗಳ (ಸ್ಟ್ರಕ್ಚರಲ್ ಅಡ್ಜಸ್ಟ್‍ಮೆಂಟ್ ಪ್ರೋಗ್ರಾಮ್ಸ್) ಮೇರೆಗೆ ತಂದ ಆರ್ಥಿಕ ಬದಲಾವಣೆಗಳು, ಖಾಸಗೀಕರಣಗಳು, ನವ ಉದಾರವಾದಿ ನೀತಿಗಳ ಪರಿಣಾಮವಾಗಿ 1975ರಲ್ಲಿ 8 ಬಿಲಿಯನ್ ಡಾಲರ್ ಇದ್ದ ಅರ್ಜೆಂಟೀನಾದ ಸಾಲ 1985ರಷ್ಟಿಗೆ 45 ಬಿಲಿಯನ್ ಡಾಲರ್ ಆಗಿರುತ್ತದೆ. 1983ರಲ್ಲಿ ಮಿಲಿಟರೀ ಸರ್ವಾಧಿಕಾರದ ನಂತರ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಅಲ್ಫಾನ್ಸಿನ್ ಗೆದ್ದು ಅಧ್ಯಕ್ಷರಾಗುತ್ತಾರೆ ಆದರೆ ಏನು ಬದಲಾವಣೆಗಳನ್ನು ತರದೆ ಇರುವ ಯಥಾಸ್ಥಿತಿ ವಾದವನ್ನೇ ಮುಂದುವರೆಸಿಕೊಂಡು ಹೋಗುತ್ತಾರೆ. 1990ರಲ್ಲಿ ಬಿಗಡಾಯಿಸುತ್ತಿರುವ ಆರ್ಥಿಕ ಸಮಸ್ಯೆಗಳ ಕಾರಣದಿಂದ ಅಲ್ಫಾನ್ಸಿನ್ ಅಧಿಕಾರ ತ್ಯಜಿಸುತ್ತಾರೆ.
ನವ-ಪೆರನಿಸಮ್ ಮೂಲಕ ‘ಎಲ್ಲರಿಗೂ ನ್ಯಾಯ’ದ ಆಶ್ವಾಸನೆಯಿಂದ ಅಧ್ಯಕ್ಷ ಸ್ಥಾನಕ್ಕೇರಿದ ಕಾರ್ಲೋಸ್ ಮೆನಿಮ್ ಐ.ಎಮ್.ಎಫ್‍ನ ಇನ್ನಷ್ಟು ನವ ಉದಾರವಾದಿ ಆರ್ಥಿಕ ನೀತಿಗಳನ್ನು ಜಾರಿಗೊಳಿಸಿದ. 8 ಘಂಟೆಯ ದುಡಿಯುವ ಸಮಯವನ್ನು ಹೆಚ್ಚುವರಿ ವೇತನವಿಲ್ಲದೆ 12 ಗಂಟೆಗೆ ವಿಸ್ತರಿಸಿದ. ಕಠಿಣವಾದ ಕಾರ್ಮಿಕ ನೀತಿಗಳನ್ನು ಅನುಷ್ಟಾನಕ್ಕೆ ತಂದ, ನೀರು ಅಡುಗೆ ಅನಿಲ, ವಿಮಾನ ನಿಲ್ದಾಣಗಳು, ದೂರ ಸಂಪರ್ಕ, ಅಂಚೆ ಇನ್ನೂ ಇತರೆ ಸಾರ್ವಜನಿಕ ಮಾಲೀಕತ್ವದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿದ. ಜನ ಕಲ್ಯಾಣಕ್ಕಾಗಿ ಇದ್ದ ರಾಜ್ಯ ವೆಚ್ಚವನ್ನು ಇಳಿಸಿದ. ಇಂತಹ ಕ್ರಮಗಳಿಂದ ಅಮೆರಿಕ ಮತ್ತು ಐ.ಎಮ್.ಎಫ್ ಶ್ಲ್ಯಾಘನೆಗೆ ಪಾತ್ರನಾಗಿದ್ದ. ಇವೆಲ್ಲವೂ ಪ್ರಜಾಪ್ರಭುತ್ವದ ಹೆಸರಿನಲ್ಲಿ. 1990ರಿಂದ 1999ರವರೆಗೂ ಅಜೆರ್ಂಟೀನಾದಲ್ಲಿ ನಿರುದ್ಯೋಗ ದ್ವಿಗುಣಗೊಳ್ಳುತ್ತದೆ, ಅಸಮಾನತೆ ಮತ್ತು ಬಡತನ ಹೆಚ್ಚುತ್ತಾ ಹೋಗುತ್ತದೆ. ದುಡಿಯುವ ವರ್ಗ ತಲೆಯತ್ತದೆ ದುಡಿದರೆ ಸಂಬಳ, ಇಲ್ಲದೆ ಹೋದಲ್ಲಿ ನಿರುದ್ಯೋಗ. ಈ ರೀತಿಯ ವ್ಯವಸ್ಥೆಯ ಅಜೆರ್ಂಟಿನವನ್ನು ಮಾರುಕಟ್ಟೆ ಸ್ನೇಹಿ, ಹೂಡಿಕೆದಾರರ ಸ್ವರ್ಗ ಎಂದು ಬಣ್ಣಿಸಲಾಗಿತ್ತು. ನವಉದಾರೀಕರಣದಿಂದ, ವಿದೇಶಿ ಹೂಡಿಕೆಗಳಿಂದ ಬಂದ ಹಣ ಆ ಬಂಡವಾಳಶಾಹಿ ಹೂಡಿಕೆದಾರರ ತೆರಿಗೆ ವಿನಾಯ್ತಿ ಮತ್ತು ಇನ್ನಿತರೆ ಸವಲತ್ತುಗಳನ್ನು ನೀಡುವುದರಲ್ಲೇ ಮುಗಿದು ಹೋಗಿತ್ತು.
ಡಾಲರ್ ಏರಿಕೆಯಿಂದ ಅಜೆರ್ಂಟೀನಾದ ಪೇಸೊ ಕೂಡ ಸ್ವಲ್ಪ ಮಟ್ಟಿಗೆ ಏರಿದರೂ ಜಾಗತಿಕವಾಗಿ ಊಹಾತ್ಮಕ ಹೂಡಿಕೆ ವಹಿವಾಟಿನ ಏರುಪೇರಿನಿಂದ ಅಜೆರ್ಂಟೀನಾದ ವಿದೇಶಿ ಹೂಡಿಕೆ ಕೂಡ ಕಡಿಮೆಯಾಗುತ್ತಾ ಹೋಗಿ ಕೊನೆಗೆ 1999ರಲ್ಲಿ ಆರ್ಥಿಕ ಕುಸಿತ ಕಂಡು ಐ.ಎಮ್.ಎಫ್‍ನಿಂದ ಮತ್ತೆ 40 ಬಿಲಿಯನ್ ಡಾಲರ್ ಸಲ ಪಡೆಯುತ್ತದೆ ಮತ್ತು ಅದಕ್ಕಾಗಿ ಇನ್ನೂ ಹಲವು ಖಾಸಗೀಕರಣ ಉದಾರೀಕರಣದ ಆರ್ಥಿಕ ನೀತಿಗಳನ್ನು ಅನುಸರಿಸಿ ರಾಜ್ಯದ ವೆಚ್ಚವನ್ನು ಇಳಿಸುವಂತಾಗಿ ಅಜೆರ್ಂಟೀನಾ ಆರ್ಥಿಕ ಇಳಿತಕ್ಕೆ (ರಿಸೆಶನ್) ಒಳಗಾಗುತ್ತದೆ. ಐ.ಎಮ್.ಎಫ್‍ನ ಇನ್ನಷ್ಟು ‘ಸಲಹೆಗಳಿಂದ’ ಆರ್ಥಿಕ ಇಳಿತ ತೀವ್ರಗೊಳ್ಳುತ್ತದೆ.
ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದ ಕಾರ್ಲೋಸ್ ಮೆನಿಮ್ ಬದಲಿಗೆ 1999ರಲ್ಲಿ ಫನ್ಯಾರ್ಂಡೊ ದೆ ಲ ರೂವ ಅಧ್ಯಕ್ಷರಾಗುತ್ತಾರೆ. ದೆ ಲ ರೂವ ‘ವ್ಯವಸ್ಥಿತ ಮತ್ತು ಪ್ರಾಮಾಣಿಕ ಅಜೆರ್ಂಟೀನಾ’ ಘೋಷಣೆಯಲ್ಲಿ ಅದಿಕಾರಕ್ಕೇರಿರುತ್ತಾರೆ. ಆದರೆ ಸಾಲದ ಸುಳಿಯಿಂದ ತತ್ತರಿಸುತಿದ್ದ ಅಜೆರ್ಂಟೀನಾ ಎರಡೇ ವರ್ಷಗಳಲ್ಲಿ ದೇಶ ಕಂಡ ಬಹುದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತದೆ. ಅಜೆರ್ಂಟೀನಾದ ಕಾಸಾದ ಪೇಸೊ ನೆಲಕಚ್ಚುತ್ತದೆ. ಜನ ರಾಷ್ಟ್ರದೆಲ್ಲೆಡೆ ತಮ್ಮ ಹೂಡಿಕೆ ಮತ್ತು ಉಳಿತಾಯವನ್ನು ಬಾಂಕುಗಳಿಂದ ತೆಗೆಯಲು ಶುರು ಮಾಡುತ್ತಾರೆ. ಸರ್ಕಾರ ಸಂಪೂರ್ಣ ಬ್ಯಾಂಕಿಂಗ್ ಕುಸಿತವನ್ನು ತಡೆಯಲು ಗ್ರಾಹಕರು ಹಣ ತೆಗೆಯುವುದನ್ನು ತಡೆಯುವ ಕ್ರಮಗಳಿಗೆ ಮುಂದಾಗುತ್ತದೆ. ತಿಂಗಳಿಗೆ 1000 ಡಾಲರ್ನಷ್ಟೇ ತೆಗೆಯಾಬಹುದೆಂದು ನಿಬರ್ಂಧ ಹೇರುತ್ತಾರೆ. ರಾಷ್ಟ್ರಾದ್ಯಂತ ಅಂಗಡಿ ಲೂಟಿ, ದಂಗೆ ಗಲಭೆಗಳು ಜರಗುತ್ತವೆ. 2001 ನವೆಂಬರ್ ಹೊತ್ತಿಗೆ ಐ.ಎಮ್.ಎಫ್ ವಿಧಿಸುವ ಆರ್ಥಿಕ ದಿಗ್ಬಂಧನವನ್ನು ಇನ್ನೂ ಅನುಸರಿಸಲು ಸಾಧ್ಯವೇ ಇಲ್ಲದಿರುವಾಗ ದೆ ಲ ರೂವ ರಾಜೀನಾಮೆ ನೀಡಿ ಅಧಿಕಾರ ತೊರೆಯುತ್ತಾರೆ. ಇಡೀ ಅಜೆರ್ಂಟೀನಾ ಜನತೆ ಸರ್ಕಾರದ ವಿರುದ್ದ ಬೀದಿಗಿಳಿಯುತ್ತಾರೆ. ಅಸಮಾನತೆ, ಬಡತನ, ನಿರುದ್ಯೋಗ, ಕೈಗೆಟುಕದ ಶಿಕ್ಷಣ, ಆರೋಗ್ಯ ಮತ್ತು ಏರುತ್ತಿರುವ ಬೆಲೆ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗಳನ್ನು ಮಾಡಿ ಅಜೆರ್ಂಟಿನವನ್ನು ವಾರಗಟ್ಟಲೆ ಸ್ತಬ್ದರಾಗಿಸುತ್ತಾರೆ.

ಮುಂದಿನ ಸಂಚಿಕೆಯಲ್ಲಿ: ಅಜೆರ್ಂಟೀನಾ
ಮತ್ತು ಸಾಲ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...