Homeಮುಖಪುಟನಾವಾಡುವ ಮಾತು ನಮ್ಮ ಸಂಸ್ಕೃತಿಯನ್ನು ಸೂಚಿಸುತ್ತದೆ. ಅಂದರೆ ಸಂಸ್ಕೃತಿ ಎಂದರೇನು?

ನಾವಾಡುವ ಮಾತು ನಮ್ಮ ಸಂಸ್ಕೃತಿಯನ್ನು ಸೂಚಿಸುತ್ತದೆ. ಅಂದರೆ ಸಂಸ್ಕೃತಿ ಎಂದರೇನು?

ಈ ಕೈ ಸಂಜ್ಞೆ ಅಮೇರಿಕಾದಲ್ಲಿ ಓಕೆ ಎಂಬುದನ್ನು ಸೂಚಿಸಿದರೆ, ಜಪಾನಿನಲ್ಲಿ “ಹಣ” ವನ್ನು, ಫ್ರಾನ್ಸಿನಲ್ಲಿ ಶೂನ್ಯವನ್ನು, ಟ್ಯುನಿಸಿಯಾ ದೇಶದಲ್ಲಿ “ನಾನು ನಿನ್ನನ್ನು ಕೊಲ್ಲುತ್ತೇನೆ” ಎಂಬುದನ್ನು ಸೂಚಿಸುತ್ತದೆ ಮತ್ತು ಬ್ರಾಸಿಲ್ ದೇಶದಲ್ಲಿ ಇದನ್ನು ಅವಮಾನಕರ ಎಂದು ಭಾವಿಸಲಾಗುತ್ತದೆ.

- Advertisement -
- Advertisement -

ಜೀವನ ಕಲೆಗಳು: ಅಂಕಣ -15

ಸಂಸ್ಕೃತಿ ಮತ್ತು ಸಂವಹನ

ಸಂಸ್ಕೃತಿ ಎಂದರೆ ಒಂದು ಜನಾಂಗದ, ಗುಂಪಿನ, ತಲೆಮಾರಿನಿಂದ ಬಂದಂತಹ ನಡತೆ ಎಂದು ಹೇಳಬಹುದು. ಈ ನಡತೆಯಲ್ಲಿ ಅವರ ಬದುಕಿನ ರೀತಿ-ನೀತಿ, ಹುಟ್ಟು-ಸಾವು, ಸುಖ-ದುಃಖ, ಮದುವೆ ಸಮಾರಂಭ ಸನ್ನಿವೇಶಗಳಲ್ಲಿ ಆಚರಣೆಗಳು, ವೇಷ-ಭೂಷ, ಆಹಾರ ಪದ್ಧತಿ, ನಂಬಿಕೆಗಳು, ಸಾಮಾಜಿಕ ಕಾನೂನುಗಳು, ಯೋಚನಾ ಲಹರಿ, ಸಾಮುದಾಯಿಕ ಸಂಸ್ಥೆಗಳು, ಕಟ್ಟು ಕತೆಗಳು, ಜಾನಪದ, ವಿವೇಕ, ಮೌಲ್ಯಗಳು, ಕಟ್ಟುಪಾಡು, ಆಕಾಂಕ್ಷೆಗಳು, ಇತ್ಯಾದಿ ಇನ್ನೂ ಹತ್ತು ಹಲವಾರು ಅಂಶಗಳು ಸೇರಿರುತ್ತವೆ.

ಇವನ್ನು ಒಂದು ಪೀಳಿಗೆ ತನ್ನ ಮುಂದಿನ ಪೀಳಿಗೆಗೆ ನೀಡುತ್ತಾ ಹೋಗುತ್ತದೆ. ಇದರಿಂದ ಅವರಿಗೆ ತಮ್ಮದೇ ಆದ ಒಂದು ಜನಾಂಗೀಯ ಪರಿಚಯ ಸಿಗುತ್ತದೆ. ಅದೇ ರೀತಿ ಸಂಸ್ಥೆಗಳಿಗೂ, ವಾಣಿಜ್ಯ ಕಂಪನಿಗಳಿಗೂ ತಮ್ಮದೇ ಆದ ಒಂದು ಸಂಸ್ಕೃತಿ ಎನ್ನುವುದು ಇರುತ್ತದೆ. ಇದು ಯಾವ ಕಾಲದಲ್ಲಿ, ಯಾರಿಂದ, ಯಾವ ದೇಶದಲ್ಲಿ ಮತ್ತು ಪರಿಸ್ಥಿತಿಯಲ್ಲಿ ಸ್ಥಾಪಿತವಾಯಿತು ಎಂಬುದನ್ನು ಅವಲಂಬಿಸಿರುತ್ತದೆ. ಈ ಸಂಸ್ಕೃತಿಯಿಂದಾಗಿ ಅದರಲ್ಲಿರುವ ಜನರು ತಮ್ಮ ನಡತೆಯನ್ನು ಆ  ಸಮುದಾಯ/ಸಂಸ್ಥೆ/ಕಂಪನಿಯ ಸಂಸ್ಕೃತಿಗೆ ಹೊಂದಿಸಿಕೊಂಡಿರುತ್ತಾರೆ. ಈ ಸಂಸ್ಕೃತಿಯ ಕಟ್ಟುಪಾಡುಗಳಿಂದಾಗಿ ಇವರಿಗೆ ಇತರ ಗುಂಪಿನ ಜೊತೆ ಸಂವಹನಕ್ಕೆ ಸಮಸ್ಯೆಗಳು ಬರಬಹುದು. ಈ ಸಮಸ್ಯೆ ಭಾಷೆಗಷ್ಟೇ ಸೀಮಿತವಾಗಿರುವುದಿಲ್ಲ. ಮಾತನಾಡುವ ಭಾಷೆಯ ಜೊತೆಗೆ ಸಂಜ್ಞೆಗಳು, ದೈಹಿಕ ಭಾಷೆ, ಮೌಲ್ಯಗಳಿಗೂ ಅನ್ವಯಿಸುತ್ತವೆ. ಆದ್ದರಿಂದ ಸಮರ್ಪಕ ಸಂವಹನ ನಡೆಸಲು ಭಾಷೆಯ ಜೊತೆಗೆ ನಾವು ಆ ಜನಾಂಗದ ಸಂಸ್ಕೃತಿಯನ್ನೂ ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ವಿಭಿನ್ನ ಪ್ರಾಂತ್ಯ, ರಾಜ್ಯ, ದೇಶದ ಜನರ ಜೊತೆ ನಾವು ಸಂವಹಿಸುವ ಸಂದರ್ಭಗಳಲ್ಲಿ ಈ ವ್ಯತ್ಯಾಸಗಳು ಬಹಳ ಮಹತ್ವಪೂರ್ಣವಾಗುತ್ತವೆ. ಹಲವಾರು ದೇಶಗಳಲ್ಲಿ ಕೆಲಸ ಮಾಡುವಾಗ ನನಗೆ ವೈಯುಕ್ತಿಕವಾಗಿ ಆದ ಅನುಭವಗಳ ಆಧಾರದ ಮೇಲೆ ಹೇಳುತೇನೆ.

ಫಿಲಿಪ್ಪೀನ್ಸ್ ಜನರ ಜೊತೆಯ ಅನುಭವ: ಅಮೇರಿಕದ ಸಂಸ್ಕೃತಿಯಿಂದ ಪ್ರಭಾವಿತರಾದ ಅವರು ಬಹಳ ಸರಳ ಸ್ವಭಾವದ ಜನ. ಅವರಿಗೆ ಸ್ವಲ್ಪ ಮಟ್ಟಿಗೆ ಇಂಗ್ಲಿಷ್ ಭಾಷೆಯ ಜ್ಞಾನವಿದೆ. ಆದ್ದರಿಂದ ಭಾಷೆಯ ಸಮಸ್ಯೆ ಇಲ್ಲವೆನ್ನಬಹುದು. ನನ್ನ ಜೊತೆ ಕೆಲಸ ಮಾಡುತ್ತಿದ್ದ ಕೆಲಸಗಾರರ ಮುಖ್ಯಸ್ಥನನ್ನು ನಾನು ಬೆಳಿಗ್ಗೆ ಕರೆದು ಇಡೀ ದಿನದಲ್ಲಿ ಮಾಡಬೇಕಾದ ನಾಲ್ಕೈದು ಕೆಲಸ ಒಟ್ಟಿಗೆ ವಿವರಿಸುತ್ತಿದ್ದೆ; ಆತ ಗಮನವಿಟ್ಟು ಕೇಳಿಸಿಕೊಳ್ಳುತ್ತಿದ್ದ, ಕೊನೆಗೆ ನಾನು “ನಿನಗೆ ಸರಿಯಾಗಿ ಅರ್ಥವಾಯಿತೇ?” ಎಂದು ಕೇಳಿದಾಗ ಹೂಂಗುಟ್ಟುತ್ತಿದ್ದ. “ಸರಿ, ಹೋಗು” ಎಂದು ಕಳುಹಿಸಿದರೆ ಸುಮ್ಮನೇ ಹೋಗುತ್ತಿದ್ದ, ಏನೂ ಕೆಲಸ ಮಾಡುತ್ತಿರಲಿಲ್ಲ ಅಥವಾ ಮಾಡಿಸುತ್ತಿರಲಿಲ್ಲ”.

ನನಗೆ ನಂತರ ತಿಳಿಯಿತು ಅವರಿಗೆ ಒಂದೊಂದೇ ಕೆಲಸವನ್ನು ಕೊಟ್ಟು, “ಇದನ್ನು ಮಾಡಿ, ಮುಗಿಸಿ, ಬಂದು ನನಗೆ ಹೇಳು” ಎಂದು ಸರಳವಾದ ಆದೇಶ ಕೊಡಬೇಕು ಎಂದು. ನನ್ನ ಸಹಾಯಕನನ್ನು “ನನಗೆ ಕುಡಿಯಲು ಒಂದು ಲೋಟ ನೀರು ತರಲು ಸಾಧ್ಯವೇ?” ಎಂದು ಕೇಳಿದೆ. ಅವನೂ ಸಹ ಹೂಂಗುಟ್ಟಿದ, ನೀರು ತರಲಿಲ್ಲ. ನಂತರ ತಿಳಿಯಿತು “ಅವನಿಗೆ ಒಂದು ಲೋಟ ಕುಡಿಯುವ ನೀರು ತಂದುಕೊಡು” ಎಂಬ ನಿರ್ದೇಶನ ನೀಡಬೇಕಾಗಿತ್ತು ಎಂದು. ಅದೇ ರೀತಿ ಆ ಮುಖ್ಯಸ್ಥನಿಗೆ ನಾನು ನಮ್ಮ ಸ್ಟೋರ್ ರೂಂ ವೀಕ್ಷಿಸಲು ಬರುವುದಾಗಿ ತಿಳಿಸಿ ಅವನಿಗೆ ಬರಹೇಳಿದ, ಬಂದ ಕೂಡಲೇ ಅವನ ಜೊತೆಗೆ ಸ್ಟೋರ್ ರೂಂಗೆ ಹೋದೆ, ಅದಕ್ಕೆ ಬೀಗ ಹಾಕಲಾಗಿತ್ತು. ಇಬ್ಬರೂ ಅದರ ಮುಂದೆ ಸುಮ್ಮನೆ ನಿಂತುಕೊಂಡೆವು. ಕೊನೆಗೆ ನಾನೇ ಅವನಿಗೆ ಅದರ “ಬೀಗದ ಕೈ ನಿನ್ನ ಬಳಿ ಇದೆಯೇ” ಎಂದು ಕೇಳಿದೆ, “ಹೌದು” ಎಂದ. “ಹಾಗಾದರೆ ಬಾಗಿಲು ತೆಗೆ” ಎಂದೆ, ನಂತರವೇ ಬಾಗಿಲು ತೆಗೆದ.

ಹೀಗೆ ಸಣ್ಣ ಪುಟ್ಟ ಅಂಶಗಳು ಸಂವಹನದಲ್ಲಿ ಅತೀವ ಪರಿಣಾಮ ಬೀರುತ್ತವೆ. ಇವು ಸಂಸ್ಕೃತಿಯ ಪರಿಣಾಮ ಎಂದ ಮಾತ್ರಕ್ಕೆ ಅವರು ನಮಗಿಂತ ಕಡಿಮೆ ತಿಳಿದವರು ಎಂದರ್ಥವಲ್ಲ; ನಮಗಿಂತ ವಿಭಿನ್ನ ಅಷ್ಟೇ. ನಮ್ಮವರಾಗಿದ್ದರೆ ನನಗೆ ಕೇಳಿದ ಕೂಡಲೇ ಕುಡಿಯಲು ನೀರು ಸಿಗುತ್ತಿತ್ತು. ನಾನು ಸ್ಟೋರ್ ರೂಂ ತಲುಪುವ ಮುನ್ನ ಅದರ ಬೀಗ ತೆಗೆದು ವೀಕ್ಷಣೆಗೆ ಎಲ್ಲವೂ ಸಿದ್ಧವಾಗಿರುತ್ತಿತ್ತು. ಆದರೆ ಫಿಲಿಪ್ಪೀನ್ಸ್ ಜನ ಸಾಮೂಹಿಕವಾಗಿ ಹೀಗೆ ಎಂದು ನನ್ನ ಒಬ್ಬನ ಅಭಿಪ್ರಾಯ ವ್ಯಕ್ತಪಡಿಸಿದಲ್ಲಿ ಅದು ತಪ್ಪಾಗುತ್ತದೆ. ಎಲ್ಲರೂ ಪಡಿಯಚ್ಚಲ್ಲ, ನನಗೆ ಆಗಿದ್ದು ನನ್ನ ವೈಯುಕ್ತಿಕ ಅನುಭವ.

ನಮ್ಮಲ್ಲಿ ಏನಾದರೂ ಗಾಜಿನ, ಅಥವಾ ಸುಲಭವಾಗಿ ಒಡೆಯುವ ವಸ್ತು, ಇದ್ದು ನನ್ನ ಸಂಬಂಧಿಕರ ಕೈಯಿಂದ ಜಾರಿ ಬಿದ್ದು ಒಡೆದುಹೋದಲ್ಲಿ, ಯಾರಾದರೂ ನನಗೆ ಅದರ ಬಗ್ಗೆ ವಿಚಾರಿಸಿದಲ್ಲಿ, ಅದನ್ನು ಇಂತಹವರು ಒಡೆದು ಹಾಕಿದರು ಎಂದು ಮುಲಾಜಿಲ್ಲದೆ ಸಾರುತ್ತೇನೆ. ಅದೇ ಜಪಾನ್ ದೇಶದ ಜನ, ಅದರ ಬಗ್ಗೆ ಮಾತನಾಡ ಬೇಕಾದ ಸಂದರ್ಭದಲ್ಲಿ, “ಅದು ಒಂದು ಅಪಘಾತದಲ್ಲಿ ಒಡೆದು ಹೋಯಿತು” ಎಂದಷ್ಟೇ ಹೇಳುತ್ತಾರೆಯೇ ವಿನಃ ಅದರ ನಷ್ಟಕ್ಕೆ ಯಾರನ್ನೂ ಎಂದೂ ದೂರುವುದಿಲ್ಲ. ಇದೂ ಸಹ ಸಂಸ್ಕೃತಿಯ ಪ್ರಭಾವ.

ನಾನು ಅಮೇರಿಕಾ ದೇಶದಲ್ಲಿ ಕೆಲಸ ಪ್ರಾರಂಭಿಸಿದ ಹೊಸತರಲ್ಲಿ ನನ್ನ ಮೇಲಧಿಕಾರಿಯ (ಬಾಸ್) ಜೊತೆ ಮಾತನಾಡುವಾಗ ಅವರನ್ನು “ಸರ್” ಎಂದು ಸಂಬೋಧಿಸುತ್ತಿದ್ದೆ ಮತ್ತು ಇ-ಮೇಲ್ ಇತ್ಯಾದಿ ಕಳುಹಿಸುವಾಗ “ಮಿಸ್ಟರ್ ಆಂಡರ್ಸನ್” ಎಂದು. ಒಂದು ವಾರದ ಒಳಗೆ ಅವರೇ ನನಗೆ ಕರೆ ಮಾಡಿ “ಕಾಲ್ ಮಿ ಗ್ಯಾರಿ” ಎಂದು ಸ್ಪಷ್ಟ ನಿರ್ದೇಶನ ನೀಡಿದರು. ಇದೂ ಸಹ ಸಂಸ್ಕೃತಿಯ ಪ್ರಭಾವ. ಹೀಗೆ ದೇಶ ಮಾತ್ರವಲ್ಲ, ರಾಜ್ಯಕ್ಕೂ, ಪ್ರಾಂತ್ಯಕ್ಕೂ ನಡತೆಯ ವ್ಯತ್ಯಾಸವಿರುತ್ತದೆ.

ಕೈಯಿಂದ ಮಾಡುವ ಸಂಜ್ಞೆಗಳೂ ಸಹ ಅತ್ಯಂತ ಮಹತ್ವದಿಂದ ಕೂಡಿರುತ್ತವೆ. ಉದಾ: ಕೆಳಗಿನ ಕೈ ಸಂಜ್ಞೆ

ಇದು ಅಮೇರಿಕಾದಲ್ಲಿ ಓಕೆ ಎಂಬುದನ್ನು ಸೂಚಿಸಿದರೆ, ಜಪಾನಿನಲ್ಲಿ “ಹಣ” ವನ್ನು, ಫ್ರಾನ್ಸಿನಲ್ಲಿ ಶೂನ್ಯವನ್ನು, ಟ್ಯುನಿಸಿಯಾ ದೇಶದಲ್ಲಿ “ನಾನು ನಿನ್ನನ್ನು ಕೊಲ್ಲುತ್ತೇನೆ” ಎಂಬುದನ್ನು ಸೂಚಿಸುತ್ತದೆ ಮತ್ತು ಬ್ರಾಸಿಲ್ ದೇಶದಲ್ಲಿ ಇದನ್ನು ಅವಮಾನಕರ ಎಂದು ಭಾವಿಸಲಾಗುತ್ತದೆ. ಅದೇ ರೀತಿ ಮೂಗು ಮುಟ್ಟಿಕೊಳ್ಳುವುದು, ಕೈಗಳ ಹಾವಭಾವ, ಕಣ್ಣು ಸಂಜ್ಞೆಗಳು, ದೈಹಿಕ ಸಾಮೀಪ್ಯ ಅಥವಾ ಪರಸ್ಪರ ಭಾವನೆಗಳನ್ನು ಸಾರ್ವಜನಿಕವಾಗಿ ವ್ಯಕ್ತ ಪಡಿಸುವುದು ಅಪಾರ್ಥಕ್ಕೆ ಅಥವಾ ತೊಂದರೆಗೆ ಕಾರಣವಾಗಬಲ್ಲವು. ಅದರ ಬಗ್ಗೆ ಜಾಗರೂಕರಾಗಿರುವುದು ಮೇಲು.

ಲೇಖಕರ ಪರಿಚಯ

ಜಿ. ಆರ್. ವಿದ್ಯಾರಣ್ಯ ಅವರು ಶ್ರೀಮತಿ ಶಾಂತ ಮತ್ತು ದಿ. ಜಿ.ವಿ.ರಂಗಸ್ವಾಮಿಯವರ ಜ್ಯೇಷ್ಠ ಪುತ್ರರಾಗಿ 1951ರಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ಜನಿಸಿ, ದೂರದ ಮುಂಬಯಿ ನಗರದಲ್ಲಿ ಬೆಳೆದವರು. ಶಾಲಾ ಕಾಲೇಜು ಶಿಕ್ಷಣ ಮುಂಬಯಿಯಲ್ಲಿ ನಡೆಯಿತು. ತಮ್ಮ 18ನೆಯ ವಯಸ್ಸಿನಲ್ಲಿ, 1969ರಲ್ಲಿ ಐ.ಬಿ.ಎಂ. 1401 ಆಟೋಕೋಡರ್ ಕಂಪ್ಯೂಟರ್ ಪ್ರೊಗ್ರಾಮಿಂಗ್ ಡಿಪ್ಲೊಮಾ ಪಡೆದ ನಂತರ, ಕೆಲಸ ಸಿಗದೆ, ಮರೀನ್ ಕಮ್ಯುನಿಕೇಷನ್ ಕ್ಲಾಸ್ 1 ಲೈಸೆನ್ಸ್ ಪಡೆದು ಸುಮಾರು ಇಪ್ಪತ್ತೈದು ವರ್ಷ ವಾಣಿಜ್ಯ ಹಡಗುಗಳಲ್ಲಿ ಕಮ್ಯುನಿಕೇಷನ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ಜೊತೆಗೆ ಇಂಗ್ಲೆಂಡಿನ ಲಿವರ್ಪೂಲ್ ನಗರದ ರಿವರ್ಸ್ಡೇಲ್ ಕಾಲೇಜಿನಲ್ಲಿ ಓದಿ, ಮರೀನ್ ರೇಡಾರ್ ಟೆಕ್ನಾಲಜಿಯಲ್ಲಿ ಡಿಪ್ಲೊಮಾ ಪಡೆದಿದ್ದಾರೆ. ಕಂಪ್ಯೂಟರ್ ಆಸಕ್ತಿ ಮುಂದುವರೆಸಿ, ಮೈಕ್ರೋಸಾಫ್ಟ್ ಕಂಪನಿಯ ಸಿಸ್ಟಮ್ ಇಂಜಿನಿಯರ್, ಸಿಸ್ಟಮ್ ಅಡ್ಮಿನಿಸ್ಟ್ರೇಟರ್, ಡೇಟಾಬೇಸ್ ಅಡ್ಮಿನಿಸ್ಟ್ರೇಟರ್ ಮುಂತಾದ ಡಿಪ್ಲೊಮಾಗಳನ್ನೂ ಪಡೆದಿದ್ದಾರೆ. ಇದಲ್ಲದೆ ಕಂಪ್ಯೂಟರ್ ನೆಟವರ್ಕ್ ರೇಡಿಯೋ ಸುಪರಿಂಟೆಂಡೆಂಟ್ ಆಗಿ ಅಮೇರಿಕಾ, ಸಿಂಗಾಪುರ್, ಚೈನಾ, ಜಪಾನ್, ದೇಶಗಳಲ್ಲಿ ಕೆಲಸ ಮಾಡಿದ್ದಾರೆ. ನೂರಕ್ಕೂ ಹೆಚ್ಚು ದೇಶಗಳನ್ನು ಸುತ್ತಿ ಬಂದಿರುತ್ತಾರೆ.

ಸಾಮಾಜಿಕ ಕಳಕಳಿಯುಳ್ಳ ಅವರು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಹಂಬಲದಿಂದ 2001 ರಲ್ಲಿ ಮುಂಬಯಿ ಬಿಟ್ಟು, ಮೈಸೂರಿನಲ್ಲಿ ನೆಲೆಸಿ, ತಮ್ಮ ಕೈಯಲ್ಲಾದ ಸಮಾಜ ಸೇವೆ ಮಾಡುತ್ತಿದ್ದಾರೆ. ಹಲವಾರು ಎನ್.ಜಿ.ಒ. ಗಳೊಂದಿಗೆ ಸುಮಾರು 75 ಶಾಲೆಗಳಲ್ಲಿ ಮತ್ತು 15 ಕಾಲೇಜುಗಳಲ್ಲಿ ಮಕ್ಕಳಿಗೆ ಪೌರಪ್ರಜ್ಞೆಯ ಪಾಠ ಹೇಳಿಕೊಟ್ಟಿದ್ದಾರೆ. ಮಾಹಿತಿ ಹಕ್ಕು ಕಾಯಿದೆಯ ಸಕ್ರಿಯ ಕಾರ್ಯಕರ್ತರಾಗಿ ಹಾಗೂ ಜಿಲ್ಲಾ ಮಟ್ಟದ ತರಬೇತುದಾರರಾಗಿ, ಅರ್.ಟಿ.ಐ. ಇಂಡಿಯಾ ಜಾಲತಾಣದಲ್ಲಿ ಕಮ್ಯುನಿಟಿ ಬಿಲ್ಡರ್ ಆಗಿ, ಜನರಿಗೆ ಉಚಿತ ಮಾರ್ಗದರ್ಶನ ಮಾಡುತ್ತಿದ್ದಾರೆ. ಮೈಸೂರಿನ ಕೊಳಗೇರಿಗಳಲ್ಲಿ ಬಡ ಮಕ್ಕಳಿಗೆ, ಎನ್.ಜಿ.ಒ. ಜೊತೆ ಸೇರಿ, ಜೀವನಾವಶ್ಯಕ ಕಲೆಗಳ ಮತ್ತು ನಾಯಕತ್ವದ ತರಬೇತಿಯನ್ನೂ ನೀಡುತ್ತಿದ್ದಾರೆ. ಬರಹದಲ್ಲಿ ತಮ್ಮ ಆಸಕ್ತಿಯಿಂದ ಮೈಸೂರಿನ ರೋಟರಿ ವೆಸ್ಟ್ ಕ್ಲಬ್ಬಿನ ಬೃಂದಾವನ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಹಲವಾರು ವಿಷಯಗಳ ಬಗ್ಗೆ ಪತ್ರಿಕೆಗಳಲ್ಲಿ/ಜಾಲತಾಣಗಳಲ್ಲಿ ಲೇಖನ ಪ್ರಕಟಿಸಿದ್ದಾರೆ. ಶ್ರೀಯುತರ ಪತ್ನಿ, ಶ್ರೀಮತಿ ಸ್ವರ್ಣಗೌರಿ, ನಿವೃತ್ತ ಶಾಲಾ ಶಿಕ್ಷಕಿ. ಇಬ್ಬರು ಪುತ್ರಿಯರು ವಿದೇಶದಲ್ಲಿ ನೆಲೆಸಿದ್ದಾರೆ.

ನಾನುಗೌರಿ. ಕಾಂ ಗೆ ಈಗಾಗಲೇ ಹತ್ತಾರು ಸಕಾಲಿಕ ಲೇಖನಗಳನ್ನು ಬರೆದಿರುವು ಅವರು ಇನ್ನು ಮುಂದೆ ಜೀವನ ಕಲೆಗಳು, ವ್ಯಕ್ತಿತ್ವ ವಿಕಸನದ ಕುರಿತು ನಿರಂತರವಾಗಿ ಅಂಕಣ ಬರೆಯುತ್ತಿದ್ದಾರೆ. ಎಲ್ಲಾ ವಯೋಮಾನದವರಿಗೂ ಗೊತ್ತಿದ್ದರೂ ಸಹ ಒತ್ತಡದಲ್ಲಿ ಮರೆತುಬಿಡಬಹುದಾದ ಹಲವು ಬಹುಮುಖ್ಯ ಅಂಶಗಳು ಕುರಿತು ಅವರು ಬೆಳಕು ಚೆಲ್ಲಲ್ಲಿದ್ದಾರೆ. ಹಾಗಾಗಿ ತಪ್ಪದೇ ಓದಿ

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...