Homeಮುಖಪುಟಈ ಮಾಧ್ಯಮಗಳಿಗೆ ’ದೊಡ್ಡರೋಗ’ ಬಂದಿದೆಯೇ? ಅಂಕೆ ತಪ್ಪಿದ ಅಭಿವ್ಯಕ್ತಿಯೇ ನಾಗರಿಕತೆಯ ತಿರುಗು ಚಕ್ರಕ್ಕೆ ತಡೆದಿಮ್ಮೆ! 

ಈ ಮಾಧ್ಯಮಗಳಿಗೆ ’ದೊಡ್ಡರೋಗ’ ಬಂದಿದೆಯೇ? ಅಂಕೆ ತಪ್ಪಿದ ಅಭಿವ್ಯಕ್ತಿಯೇ ನಾಗರಿಕತೆಯ ತಿರುಗು ಚಕ್ರಕ್ಕೆ ತಡೆದಿಮ್ಮೆ! 

ಇದೆಂತಹ ವಿಚಿತ್ರ ರೋಗವೆಂದರೆ ರೋಗದಿಂದ ಬಳಲುತ್ತಿರುವವನಿಗಿಂತಲೂ ಅವನ ಸುತ್ತು ಮುತ್ತಲಿನವರಿಗೆ ಮಾನಸಿಕ ನೋವು, ಮುಜುಗರವನ್ನು ಉಂಟು ಮಾಡುತ್ತದೆ. 

- Advertisement -
- Advertisement -

1949 ನವೆಂಬರ್ 25 ಸಂವಿಧಾನ ರಚನಾಸಭೆಯ ಕಡೆಯ ದಿನದ ಚರ್ಚೆ ಅತ್ಯಂತ ಮಹತ್ವಪೂರ್ಣವಾದದ್ದು. “ಧರ್ಮದೆಡಗಿನ ಭಕ್ತಿಯು ಮುಕ್ತಿಯನ್ನು ತಂದು ಕೊಡಬಹುದು. ಆದರೆ ರಾಜಕೀಯ ಭಕ್ತಿ, ವ್ಯಕ್ತಿ ಪೂಜೆ ಪ್ರಜಾಪ್ರಭುತ್ವದ ಕುಸಿತಕ್ಕೆ ಕಾರಣವಾಗುತ್ತದೆ ಮತ್ತು ಕ್ರಮೇಣ ನಿರಂಕುಶ ಆಡಳಿತಕ್ಕೆ ಎಡೆ ಮಾಡಿಕೊಡುತ್ತದೆ”. ಹಾಗೆಯೇ ಮಾಧ್ಯಮಗಳ ಕುರಿತು ವಿಶೇಷವಾಗಿ ಹೇಳಬೇಕಾದ್ದು ಏನೂ ಇಲ್ಲ. ಸಾಮಾನ್ಯ ಪ್ರಜೆಗೆ ಲಭಿಸುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳು ಮಾಧ್ಯಮಕ್ಕೂ ಅನ್ವಯವಾಗುತ್ತದೆ. ಸಂವಿಧಾನದ ವಿಧಿ 19(2) ರಲ್ಲಿ ಕಾಣಿಸಿರುವ ನಿಭಂದನೆಗಳು ಎಲ್ಲರಿಗೂ ಅನ್ವಯವಾಗಲಿವೆ ಎಂಬ ಮಾತುಗಳನ್ನು ಅಂಬೇಡ್ಕರ್ ಅವರು ಹೇಳಿದ್ದರು. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳು ಮತ್ತು ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿ ಮತ್ತು ಅವರ ಸಾಗಬೇಕಾದ ಹಾದಿಯನ್ನು ಬೊಟ್ಟು ಮಾಡಿ ತೋರಿದ್ದರು.

ರಾಜಕೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳ ಕುರಿತು ಪ್ರಜೆಗಳಿಗೆ ಅಪಾರವಾದ ನಂಬಿಕೆಯಿದೆ. ಪ್ರಜಾಪ್ರಭುತ್ವದ ಕಾವಲು ನಾಯಿ ಎಂದೇ ಭಾವಿಸಲಾದ ಮಾಧ್ಯಮಗಳು ಬೊಗಳುವುದನ್ನು ಬಿಟ್ಟು ಆಳ್ಮೆಗಾರರ ತಲೆಕಾಯುವ ಸಾಕುನಾಯಿಯಾದರೆ ಮತ್ಯಾವ ಕಾವಲುಗಾರನನ್ನು ಹುಡುಕಿ ತರಬೇಕು. ದೇಶವೊಂದು ಕರೋನಾದಂತಹ ಅಸಾಧಾರಣ ಪಿಡುಗನ್ನು ಮಣಿಸಲು ಪ್ರಯತ್ನಿಸುವ ಸನ್ನಿವೇಶದಲ್ಲಿ ಮಾಧ್ಯಮಗಳು ತುಳಿದಿರುವ ಹಾದಿಯನ್ನು ನೋಡಿದಾಗ ಈ ಕೆಳಗಿನ ಸಂಗತಿ ನೆನಪಿಗೆ ಬರುತ್ತದೆ.

ವಯಕ್ತಿಕ ಬದುಕಿಗೋ, ಕೌಟುಂಬಿಕ ನೆಮ್ಮದಿಗೋ ಅಥವಾ ಸಾಮಾಜಿಕ ನೆಮ್ಮದಿಗೋ ಕಂಟಕನಾದವನ ಕುರಿತು ದೂಷಿಸುವಾಗ ‘ದೊಡ್ಡ ರೋಗ’ ಬಂದು ಒರಗಿ ಹೋಗಲಿ ಎಂದು ಹೇಳುವುದು ಜನಪದದಲ್ಲಿದೆ.

ಮನೆಯ ನೆಮ್ಮದಿಗೆ ಬೇಡವೆನಿಸಿದ ಸಂಗತಿಗಳನ್ನು ಎತ್ತಿ ತಲೆಬುಡವಿಲ್ಲದೇ ಚರ್ಚಿಸಿ ಆರ್ಭಟಿಸಿ ನಿತ್ಯನಿರಕವನ್ನು ಉಂಟುಮಾಡುವ  ಕುಟುಂಬದ ಸದಸ್ಯನ  ಅಥವಾ ಇತರರ ಆರ್ಭಟ ಕುರಿತು ಹೇಳುವಾಗಲೂ ಏನ್ ‘ದೊಡ್ಡ ರೋಗ’ ಇವನಿಗೆ ಎಂದು ಪ್ರಾಸಂಗಿಕವಾಗಿ ಹೇಳುವುದು ವಾಡಿಕೆಯಲ್ಲಿದೆ.

ಈ ದೊಡ್ಡ ರೋಗವೆಂದರೆ ಏನು ಎಂಬುದರ ಕುರಿತು ಜನಪದದಲ್ಲಿ ಅಧ್ಯಯನಗಳು ನೆಡದ ಬಗ್ಗೆ ಮಾಹಿತಿ ಲಭ್ಯವಿಲ್ಲ. ದೊಡ್ಡ ರೋಗವೆಂದರೆ ಮದ್ದು ಸಿಗದ, ವಾಸಿಯಾಗದ ಕಾಯಿಲೆ. ವೈದ್ಯಶಾಸ್ತ್ರ ಪರಿಣಿತರ ಅರಿವಿಗೆ ನಿಲುಕದ ಕಾಯಿಲೆ, ಅದರ ಸ್ವರೂಪವೇನು ಮತ್ತು ಉಂಟು ಮಾಡುವ ಪರಿಣಾಮಗಳೇನು ಎಂಬುದಲ್ಲ. ದೊಡ್ಡ ರೋಗವೆಂಬುದು ಪೀಡಕನ ಕೆಟ್ಟ ಮನಸ್ಥಿತಿಯನ್ನು ಸೂಚಿಸುವ ಗುಣವಾಚಕ.

ಇದೆಂತಹ ವಿಚಿತ್ರ ರೋಗವೆಂದರೆ ರೋಗದಿಂದ ಬಳಲುತ್ತಿರುವವನಿಗಿಂತಲೂ ಅವನ ಸುತ್ತು ಮುತ್ತಲಿನವರಿಗೆ ಮಾನಸಿಕ ನೋವು, ಮುಜುಗರವನ್ನು ಉಂಟು ಮಾಡುತ್ತದೆ.

ಈ ದೂಷಣೆಯ ಹಿಂದೆ ಕಂಟಕಪ್ರಾಯನಾದವನನ್ನು ಹೋಗಲಾಡಿಸುವುದಕ್ಕಿಂತಲೂ ಎದೆಯೊಳಗಿನ ಸಂಕಟವನ್ನು ಹೊರಗೆ ಹಾಕಿ ಎದೆಗೂಡನ್ನು ಹಗುರ ಮಾಡಿಕೊಳ್ಳುವ ಭಾವವೇ ಹೆಚ್ಚು. ಸಂಕಟಗಳ ಹೊರತಾಗಿಯೂ ನಮ್ಮ ಸಮಾಜ ತೊಂದರೆಗೆ ಕಾರಣನಾದ ವ್ಯಕ್ತಿಯ ಸಾವನ್ನು ಬಯಸುವುದಿಲ್ಲ. ಪೀಡಕನು ತನ್ನ ಧೋರಣೆಯನ್ನು ಬದಲಿಸಿದರೆ ಅವನನ್ನು ಮನ್ನಿಸುವ ದೊಡ್ಡ ಗುಣವೂ ಈ ಮಣ್ಣಿನೊಳಗೆ ಮಿಳಿತವಾಗಿದೆ. ಇಂತಹ ಸಾತ್ವಿಕ ಕೋಪವನ್ನು ನಮ್ಮ ಸಮಾಜವು ತಲತಲಾಂತರದಿಂದ ಸಲಹಿಕೊಂಡು ಬಂದಿದೆ.

ಈ ಮೇಲಿನದ್ದು ಕೌಟುಂಬಿಕ ಹಿನ್ನೆಲೆಯ ಚಿತ್ರಣವಾದರೆ.
ನಂಜುಪೂರಿತ ಮಾತುಗಳನ್ನಾಡಿ, ಸಮಾಜದ ನೆಮ್ಮದಿಗೆ ಧಕ್ಕೆ ತರುವ, ಟಿವಿ ನಿರೂಪಕರ, ರಾಜಕೀಯ ಮುಂದಾಳುಗಳ, ಧಾರ್ಮಿಕ ನಾಯಕರ ಚಿತ್ರಣವೇನೂ ಬೇರೆಯಲ್ಲ! ಈ ಪಾತ್ರಗಳೆಲ್ಲವೂ  ಕುಟುಂಬದ ನೆಮ್ಮದಿ ಕಲಕುವವನ ಪಾತ್ರಕ್ಕಿಂತ ಭಿನ್ನವಾಗಿಲ್ಲ. ಜನರ ಬವಣೆಗಳನ್ನು ಎತ್ತಿ ತೋರಿ ಆಳ್ಮೆಗಾರರ ಕಣ್ಣ ತೆರಸಬೇಕಾದವರೇ ಆಳ್ಮೆಗಾರರಿಗೆ ಜೋಗುಳವಾಡಿದರೆ, ಧಮನಿತರು ಯಾರ ಮೊರೆಯೋಗಬೇಕು ಎಂಬ ಪ್ರಶ್ನೆಗೆ ಉತ್ತರವಿದೆಯೇ!

ದೇಶದ ಹೊಸ್ತಿಲನ್ನು ದಾಟಿ ಒಳನುಸುಳುಕೋರನಂತೆ ಬಂದೆರಗಿದ ಸಾಂಕ್ರಾಮಿಕ ಪಿಡುಗು ಯಾವುದೇ ಮತ, ಜಾತಿ ಭೇದವಿಲ್ಲದೆ ಎಲ್ಲರ ಎದೆಗೂಡೊಳಗೆ ಸೇರಲು ಹವಣಿಸಿದೆ‌. ಇಂತಹ ವಿಷಮ ಪರಿಸ್ಥಿತಿಯಲ್ಲಿ ಒಂದೆಡೆ ಆಳ್ಮೆಗಾರರನ್ನು ಅಗತ್ಯಕ್ಕಿಂತಲೂ ಹೆಚ್ಚು ವೈಭವೀಕರಿಸಿ ಮೈಮರೆಯಲು ಬಿಡುವುದು. ಮತ್ತೊಂದೆಡೆ ಸಾಂಕ್ರಾಮಿಕ ರೋಗದ ಸೊಂಕಿಗೆ ಒಂದು ಜನಾಂಗವನ್ನು ತಳಕು ಹಾಕುವುದು.

ಧರ್ಮ, ಜನಾಂಗ, ಜಾತಿ, ಲಿಂಗಾಧಾರಿತ ದೂಷಣೆಗಳೂ ಮತ್ತು ತಾರತಮ್ಯಗಳು ಬೆಳಕಿಗೆ ಬಂದೊಡನೆಯೇ ಸಂವಿಧಾನದ ಆಶಯಗಳನ್ನು ಉಳಿಸಿಕೊಳ್ಳಲು ಆಳ್ಮೆಗಾರರರು ತಮ್ಮ ಅಧಿಕಾರವನ್ನು ಬಳಸಿ ಪ್ರಜಾಸತ್ತೆಯ ಸಾರ್ವಭೌಮತೆಯನ್ನು ಎತ್ತಿ ಹಿಡಿಯಬೇಕು. ಕಷ್ಟ ಕಾಲದಲ್ಲಿ ದನಿಯಿಲ್ಲದವರ, ಧಮನಿತರ ಪರವಾಗಿ ನಿಲ್ಲದೇ ಹೋಗುವ ಆಳ್ಮೆಗಾರರ ಸಾಮಾಜಿಕ ಬದ್ಧತೆಯೂ ಪ್ರಶ್ನಾರ್ಹವಾದದ್ದು.

ಇಂತಹ ಮನಸ್ಥಿತಿಯನ್ನು ಕುರಿತು ನೆನದಾಗಲೆಲ್ಲ
ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ
ಧರೆ ಹತ್ತಿ ಉರಿದಡೆ ನಿಲಲುಬಾರದು.
ಏರಿ ನೀರುಂಬಡೆ
ಬೇಲಿ ಕೆಯ್ಯ ಮೇವಡೆ
ನಾರಿ ತನ್ನ ಮನೆಯಲ್ಲಿ ಕಳುವಡೆ
ತಾಯವಾಲು ನಂಜಾಗಿ ಕೊಲುವಡೆ
ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ
ಎಂಬ ಅಣ್ಣನ ಕುಹಕ ನೆನಪಿಗೆ ಬರುತ್ತದೆ.

ವಸ್ತುನಿಷ್ಠ ಮತ್ತು ರಚನಾತ್ಮಕ ವಿಮರ್ಶೆಯನ್ನು ಕೈಬಿಟ್ಟು ಸರ್ಕಾರದ ಧ್ವನಿವರ್ಧಕವಾದ ಮಾಧ್ಯಮಗಳಿಗೆ ಅಂದು ಸಂವಿಧಾನ ರಚನಾ ಸಭೆಯಲ್ಲಿ ಉಲ್ಲೇಖಿಸಿದಂತೆ “ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳ ಸ್ವೇಚ್ಛಾಚಾರದ ಬಳಕೆ ಒಳಿತಿಗಿಂತಲೂ ಕೆಡುಕನ್ನು ಮಾಡಬಲ್ಲದು ಎಂಬ ಅಂಬೇಡ್ಕರ್ ಅವರ ನಿಲುವು ಎಲ್ಲಾ ಕಾಲಕ್ಕೂ ಸಲ್ಲುತ್ತದೆ. ತನ್ನ ಪಾಲಿನ ನೈತಿಕ ಹೊಣೆಗಾರಿಕೆಯನ್ನು ಮನಗಾಣದೇ, ಅಂಕೆ ಮೀರಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳನ್ನು ಬಳಸುವ ಮಾಧ್ಯಮಗಳು ಮತ್ತು ಪ್ರಜೆಗಳ ಮಹಾಮೌನವೇ ಪ್ರಜಾಪ್ರಭುತ್ವದ ಮಹಾಪಾತಕಿಗಳು. ಇದನ್ನು  ಅರಿಯದೇ ಹೋದರೆ ನಾವೆಲ್ಲರೂ ನಾಗರಿಕತೆಯ ತಿರುಗು ಚಕ್ರಕ್ಕೆ ತಡೆದಿಮ್ಮೆಯಾಗಬಲ್ಲೆವು! .

ಕೆ.ಬಿ.ಕೆ.ಸ್ವಾಮಿ

(ಲೇಖಕರು ಯುವ ಬರಹಗಾರರು. ಅಭಿಪ್ರಾಯಗಳು ವಯಕ್ತಿಕವಾದವುಗಳು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...

ಬಂಗಾಳ ಎಸ್ಐಆರ್ ಪ್ರಕ್ರಿಯೆ: ಚುನಾವಣಾ ಆಯೋಗದ ಸಹಾಯಕ್ಕೆ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲು ಕಲ್ಕತ್ತಾ ಹೈಕೋರ್ಟ್‌ಗೆ ಸುಪ್ರೀಂ ಸೂಚನೆ

ನವದೆಹಲಿ: ಪಶ್ಚಿಮ ಬಂಗಾಳ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವೆ ಮತದಾರರ ಪಟ್ಟಿ ಶುದ್ಧೀಕರಣ ಅಭಿಯಾನಕ್ಕೆ ಸಂಬಂಧಿಸಿದಂತೆ ದುರದೃಷ್ಟಕರ ಆರೋಪದ ಆಟ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ವಿಶೇಷ ತೀವ್ರ ಪರಿಷ್ಕರಣೆ...

ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಬಿಷ್ಣೋಯಿ ಗ್ಯಾಂಗ್ ನಿಂದ ಜೀವಬೆದರಿಕೆ: ಅಮೆರಿಕಾ ನಂಬರ್ ನಿಂದ 10ಕೋಟಿ ರೂ. ಬೇಡಿಕೆ 

ಬಿಷ್ಣೋಯ್ ಗ್ಯಾಂಗ್ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಂದ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಅಮೆರಿಕದ ಸಂಖ್ಯೆಯಿಂದ ಬಂದ ವಾಯ್ಸ್ ನೋಟ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಮುಂಬೈ ಪೊಲೀಸ್...

‘ರಾಜಿ ಮಾಡಿಕೊಂಡ ಪ್ರಧಾನಿ’: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರಿಂದ ಶರ್ಟ್‌ ಬಿಚ್ಚಿ ಪ್ರತಿಭಟನೆ

ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಮತ್ತು ಪ್ರಧಾನಿ "ರಾಜಿ ಮಾಡಿಕೊಂಡಿದ್ದಾರೆ" ಎಂದು ಆರೋಪಿಸಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಭಾರತ್ ಮಂಟಪದಲ್ಲಿ ಶರ್ಟ್ ಧರಿಸದೆ ಪ್ರತಿಭಟನೆ...

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಉದ್ವಿಗ್ನ ಪರಿಸ್ಥಿತಿ: ಫೆ.24ರವರೆಗೆ ನಿಷೇಧಾಜ್ಞೆ ಜಾರಿ

ಬಾಗಲಕೋಟೆಯಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ನಡೆದ ಪ್ರತಿಮೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಹಳೆಯ ನಗರ ಪ್ರದೇಶದ ಪಂಕ ಮಸೀದಿ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಈ...

ನಿಯಮಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆ ಕೋಶದ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮೇವಾನಿ; ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ರಚಿಸಲಾದ ರಾಜ್ಯ ಮೇಲ್ವಿಚಾರಣಾ ಕೋಶದ (ಎಸ್‌ಎಂಸಿ) ನಿಯಮಿತ ಸಭೆಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕರೆಯುತ್ತಿಲ್ಲ ಎಂದು ವಡ್ಗಾಮ್‌ನ ಕಾಂಗ್ರೆಸ್ ಶಾಸಕ ಜಿಗ್ನೇಶ್...

ನೆಲಮಂಗಲದಲ್ಲಿ ಹಾಸಿಗೆ ಹಿಡಿದ ಪತಿಯ ಎದುರೇ 60ವರ್ಷದ ಮಹಿಳೆಯ ಕೊಲೆ; ಐದು ಗಂಟೆಗಳಲ್ಲಿ ಆರೋಪಿ ಬಂಧನ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲದ ಪೇಟೆ ಬೀದಿಯಲ್ಲಿ ವೀಲ್‌ಚೇರ್‌ನಲ್ಲಿ ಕುಳಿತಿದ್ದ ಗಂಡನ ಮುಂದೆಯೇ ಮಹಿಳೆಯೊಬ್ಬಳ ಕೊಲೆಯಾದ ಐದು ಗಂಟೆಗಳಲ್ಲಿ ನೆಲಮಂಗಲ ಪಟ್ಟಣ ಪೊಲೀಸರು 45 ವರ್ಷದ ದಿನಸಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಫೆಬ್ರವರಿ...

‘ದಿ ಕೇರಳ ಸ್ಟೋರಿ 2’ ಚಿತ್ರ ನಿರ್ಮಾಪಕರು, ಸಿಬಿಎಫ್‌ಸಿ ಮಂಡಳಿಗೆ ನೋಟಿಸ್ ಜಾರಿ ಮಾಡಿದ ಕೇರಳ ಹೈಕೋರ್ಟ್

ಕೊಚ್ಚಿ: 'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಚಿತ್ರದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಮತ್ತು ಅದರ ಶೀರ್ಷಿಕೆಯ ಮರುಪರಿಶೀಲನೆ ಸೇರಿದಂತೆ ಮಾರ್ಪಾಡುಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಣ್ಣೂರು ಮೂಲದವರು ಸಲ್ಲಿಸಿದ ಅರ್ಜಿಯ...

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...