ರೈಲ್ವೆ ಸಚಿವಾಲಯ ವಲಸೆ ಕಾರ್ಮಿಕರಿಂದ ಶುಲ್ಕವನ್ನು ಪಡೆಯುವಂತೆ ಸೂಚಿಸಿರುವುದಕ್ಕೆ ಸ್ವಪಕ್ಷೀಯರಿಂದಲೇ ಟೀಕೆ ವ್ಯಕ್ತವಾಗಿದೆ. ಈ ಬಗ್ಗೆ ಬಿಜೆಪಿಯ ರಾಜ್ಯಸಭಾ ಸದಸ್ಯರಾದ ಸುಬ್ರಮಣ್ಯ ಸ್ವಾಮಿ ಕೇಂದ್ರ ಸರ್ಕಾರ ಮೂರ್ಖತನ ಮಾಡುತ್ತಿದೆ ಕೇಂದ್ರ ಸರ್ಕಾರದ ವಿರುದ್ದವೇ ಕಿಡಿಕಾರಿದ್ದಾರೆ.
ಸುಬ್ರಮಣ್ಯ ಸ್ವಾಮಿ ಟ್ವಿಟ್ಟರಿನಲ್ಲಿ “ಹಸಿವಿನಿಂದ ಬಳಲುತ್ತಿರುವ ವಲಸೆ ಕಾರ್ಮಿಕರಿಂದ ಮಿತಿಮೀರಿದ ರೈಲು ಪ್ರಯಾಣ ದರವನ್ನು ವಿಧಿಸುವ ಕೇಂದ್ರ ಸರ್ಕಾರ ಎಷ್ಟೊಂದು ಮೂರ್ಖತನದ್ದಾಗಿದೆ. ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಏರ್ ಇಂಡಿಯಾ ಉಚಿತವಾಗಿ ಕರೆತರಲಾಯಿತು. ರೈಲ್ವೆ ಇಲಾಖೇ ಇದಕ್ಕೆ ಅನುದಾನ ನೀಡಲು ನಿರಾಕರಿಸಿದರೆ PM CARES ನಿಂದ ಯಾಕೆ ಪಾವತಿಸಬಾರದು?” ಎಂದು ಕೇಂದ್ರದ ವಿರುದ್ದ ಹರಿಹಾಯ್ದಿದ್ದಾರೆ.
How moronic of the Government of India to charge steep rail fares from the half starved migrant labourers! Indians stranded abroad were brought back free by Air India. If Railways refuse to budge then why not make PM CARES pay instead?
— Subramanian Swamy (@Swamy39) May 4, 2020
ಈ ಟ್ವೀಟಿನ ನಂತರ ಸುಬ್ರಮಣ್ಯ ಸ್ವಾಮಿ “ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಜೊತೆ ಈ ಬಗ್ಗೆ ಮಾತನಾಡಿದ್ದೇನೆ. ಕೇಂದ್ರ 85% ನೀಡುತ್ತದೆ ಹಾಗೂ ಉಳಿದ 15% ರಾಜ್ಯ ಪಾವತಿಸಲಿ, ವಲಸೆ ಕಾರ್ಮಿಕರು ಉಚಿತವಾಗಿ ಪ್ರಯಾಣಿಸಲಿ, ಸಚಿವಾಲಯ ಅಧೀಕೃತವಾಗಿ ಸ್ಪಷ್ಟನೆ ನೀಡಲಿದೆ” ಎಂದು ಹೇಳಿದ್ದಾರೆ.
Talked Piyush Goel office. Govt will pay 85% and State Govt 15% . Migrant labour will go free. Ministry will clarify with an official statement
— Subramanian Swamy (@Swamy39) May 4, 2020
ಕಾಂಗ್ರೆಸ್ ಅಧಕ್ಷೆ ಸೋನಿಯಾ ಗಾಂಧಿಯವರು ಕಾರ್ಮಿಕರ ಪ್ರಯಾಣದರವನ್ನು ಪಕ್ಷ ಭರಿಸುವುದಾಗಿ ಘೋಷಿಸಿದ್ದಾರೆ. ಈ ಕುರಿತು ವಲಸೆ ಕಾರ್ಮಿಕರ ಬಗ್ಗೆ ಕೇಂದ್ರದ ನಡೆಯ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡಾ ಟ್ವಿಟ್ಟರಿನಲ್ಲಿ ಕೇಂದ್ರದ ವಿರುದ್ದ ಟೀಕೆ ವ್ಯಕ್ತಪಡಿಸಿದ್ದಾರೆ. “ಒಂದೆಡೆ, ರೈಲ್ವೆ ಇತರ ರಾಜ್ಯಗಳಲ್ಲಿ ಸಿಕ್ಕಿಬಿದ್ದ ಕಾರ್ಮಿಕರಿಂದ ಟಿಕೆಟ್ ದರವನ್ನು ವಿಧಿಸುತ್ತಿದ್ದರೆ, ಮತ್ತೊಂದೆಡೆ ರೈಲ್ವೆ ಸಚಿವಾಲಯವು ಪಿಎಂ ಕೇರ್ ಫಂಡ್ಗೆ 151 ಕೋಟಿ ರೂ. ನೀಡುತ್ತಿದೆ, ಇದನ್ನು ಪರಿಹರಿಸಿ” ಎಂದು ಬರೆದಿದ್ದಾರೆ.
एक तरफ रेलवे दूसरे राज्यों में फँसे मजदूरों से टिकट का भाड़ा वसूल रही है वहीं दूसरी तरफ रेल मंत्रालय पीएम केयर फंड में 151 करोड़ रुपए का चंदा दे रहा है।
जरा ये गुत्थी सुलझाइए! pic.twitter.com/qaN0k5NwpG
— Rahul Gandhi (@RahulGandhi) May 4, 2020
ರಾಹುಲ್ ಗಾಂಧಿಯವರ ಟ್ವಿಟ್ಟರಿಗೆ ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಟ್ವೀಟ್ ಮಾಡಿ, “ರಾಹುಲ್ ಗಾಂಧಿಯವರೆ, ಮಾರ್ಗ ಸೂಚಿಯೂ ಯಾವುದೇ ನಿಲ್ದಾಣದಲ್ಲಿ ಯಾವುದೇ ಟಿಕೆಟ್ಗಳನ್ನು ಮಾರಾಟ ಮಾಡಬಾರದು ಎಂದು ಸ್ಪಷ್ಟವಾಗಿ ಹೇಳುತ್ತದೆ ರೈಲ್ವೆ ಸಚಿವಾಲಯ 85% ಸಬ್ಸಿಡಿ ನೀಡಿದೆ ಮತ್ತು ರಾಜ್ಯ ಸರ್ಕಾರ 15% ಪಾವತಿಸಬೇಕಾಗಿದೆ, ಅದನ್ನು ಅನುಸರಿಸಲು ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಸರ್ಕಾರಗಳಿಗೆ ಹೇಳಿ” ಎಂದಿದ್ದಾರೆ.
Rahul Gandhi ji,
I have attached guidelines of MHA which clearly states that “No tickets to be sold at any station”
Railways has subsidised 85% & State govt to pay 15%
The State govt can pay for the tickets(Madhya Pradesh’s BJP govt is paying)
Ask Cong state govts to follow suit https://t.co/Hc9pQzy8kQ pic.twitter.com/2RIAMyQyjs— Sambit Patra (@sambitswaraj) May 4, 2020
ಇದಕ್ಕೆ ಉತ್ತರವಾಗಿ ಟ್ವಿಟ್ಟರ್ ಬಳಕೆದಾರರೊಬ್ಬರು, ಯಾವುದೆ ಟಿಕೆಟುಗಳು ಮಾರುತ್ತಿಲ್ಲ ಎಂದು ಹೇಳುತ್ತಿರುವ ಸಂಬಿತ್ ಪಾತ್ರ, ಇದೇನು? ಎಂದು ಮೇ 02 ರಂದು ಪಡೆದ ರೂ. 740 ರ ರೈಲ್ವೇ ಟಿಕೆಟೊಂದರ ಚಿತ್ರವನ್ನು ಹಾಕಿದ್ದಾರೆ.
If no tickets are being sold, like @sambitswaraj is claiming, what is this? https://t.co/8cE2YcDRYT pic.twitter.com/G0Lf0FYUjg
— Yogesh Leela Pawar (@powerofyogesh) May 4, 2020
ಇದನ್ನೂ ಓದಿ: ವಲಸೆ ಕಾರ್ಮಿಕರ ರೈಲು ಪ್ರಯಾಣದ ಶುಲ್ಕ ಪಾವತಿಗೆ ಕೇಂದ್ರದ ಸೂಚನೆ: ವಿರೋಧ ಪಕ್ಷಗಳ ಆಕ್ಷೇಪ
ವಿಡಿಯೊ ನೋಡಿ: ಮರೆಯಲೆ ಬಾರದ ಈ ಹಿಂದಿನ ಸುದ್ದಿಗಳು
ಸದ್ದು ಈ ಸುದ್ದಿಗಳೇನಾಗಿವೆ? – 03 may 2020
ಹೊಸ ಸುದ್ದಿಗಳು, ಮರೆಯಬಾರದ ಹಳೆಯ ಸುದ್ದಿಗಳು ಮತ್ತು ಮುಂದಾಗಬೇಕಾದ ಸುದ್ದಿಗಳು – ಇವುಗಳನ್ನೊಳಗೊಂಡ ಇಂದಿನ #ಸದ್ದು_ಈ_ಸುದ್ದಿಗಳೇನಾಗಿವೆ?
Posted by Naanu Gauri on Sunday, May 3, 2020