HomeUncategorizedಸತ್ಯವನ್ನೇ ಹೇಳುತ್ತಿದ್ದೇನೆ, ಮುಖ್ಯಮಂತ್ರಿಗಳೇ, ನೀವು ಒಳ್ಳೇವ್ರು..!!

ಸತ್ಯವನ್ನೇ ಹೇಳುತ್ತಿದ್ದೇನೆ, ಮುಖ್ಯಮಂತ್ರಿಗಳೇ, ನೀವು ಒಳ್ಳೇವ್ರು..!!

ರಾಜ್ಯದ ಮುಖ್ಯಮಂತ್ರಿಯನ್ನು ತಮ್ಮ ಜಾತಿಯ ಬೆಂಬಲದಿಂದ ಅವಮಾನಿಸಿದ್ದು ತೀರ ಖಂಡನೀಯ. ಇದು ಪ್ರಜಾಪ್ರಭುತ್ವದ ವಿರೋಧ ನಡೆಯೂ ಕೂಡ

- Advertisement -
- Advertisement -

ರಾಜ್ಯದ ನೂತನ ಜಗದ್ಗುರು ಪೀಠದ ಸ್ವಾಮೀಜಿಯೊಬ್ಬರು ರಾಜ್ಯದ ಮುಖ್ಯಮಂತ್ರಿಗಳಿಗೆ ಸಾವಿರಾರು ಜನತೆ ಸೇರಿರುವ ಬಹಿರಂಗ ಸಭೆಯ ವೇದಿಕೆ ಮೇಲೆ ಅಧಿಕಾರವರ್ಗವನ್ನು ‘ಅವಾಜ್’ ಹಾಕುವ ಮೂಲಕ ಅವಾಂತರ ಸೃಷ್ಟಿಸಿಕೊಂಡ‌ ಘಟನೆ ಒಂದು ರಾಜಕೀಯ‌ ವಲಯದಲ್ಲಿ ಭಾರಿ ಚರ್ಚೆಗೆ ಒಳಪಟ್ಟಿದೆ.

“ಮುಖ್ಯಮಂತ್ರಿಗಳೇ , ನೀವು ಒಳ್ಳೇವ್ರು…!
ಪಂಚಮಸಾಲಿ ಸಮುದಾಯದ ಪ್ರಶ್ನಾತೀತ ನಾಯಕ ಮುರುಗೇಶ್ ನಿರಾಣಿಗೆ ಮಂತ್ರಿ ಸ್ಥಾನ ಕೊಡಲೇಬೇಕು..! ನಿಮ್ಮ ಬೆನ್ನಿಗೆ ಬೆನ್ನೆಲುಬಾಗಿ ನಿಂತು ನಿಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡಿರುವ ಮುರುಗೇಶ್ ನಿರಾಣಿಗೆ ಕೈ ಬಿಡ್ಬೇಡಿ..!
ನಮ್ಮ ಸಮುದಾಯದ 13 ಜನ ಶಾಸಕರಲ್ಲಿ ಕನಿಷ್ಠ
4 ಜನರಿಗೆ ಮಂತ್ರಿಸ್ಥಾನ ಕೊಡಲೇಬೇಕು..!
ಒಂದು ವೇಳ ನೀವು ಪಂಚಮಸಾಲಿ ಸಮುದಾಯದ ಕೈಬಿಟ್ಟರೇ ಅಖಂಡ ಪಂಚಮಸಾಲಿ ಸಮುದಾಯ ನಿಮ್ಮನ್ನು  ಕೈಬಿಡುತ್ತೆ…!!”

ಎಂದು ಪಕ್ಕದ ಕುರ್ಚಿಯ ಮೇಲೆ ಕುಳಿತ ರಾಜ್ಯದ ಮುಖ್ಯಮಂತ್ರಿಗಳಿಗೆ ಸಮುದಾಯಪರ ಬ್ಯಾಟಿಂಗ್ ನಡೆಸಿದ ಸ್ವಾಮೀಜಿಯೊಬ್ಬರ ‘ಬೆದರಿಕೆ’ಯ ಮಾತುಗಳು ಯಡಿಯೂರಪ್ಪನವರ ಕೆಂಡಾಮಂಡಲವಾಗಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಪರ – ವಿರೋಧ ವ್ಯಕ್ತವಾಗುತ್ತಿದೆ.

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ‌‌ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಪೀಠಾಧಿಪತಿ ವಚನಾನಂದ ಸ್ವಾಮೀಜಿ ತಮ್ಮ ನಾಯಕರ ಏಳಿಗೆ, ಹಿತಾಸಕ್ತಿ ಬಯಸಿ ರಾಜಕೀಯ ತೆವಲು ತೀರಿಸಿಕೊಳ್ಳಲು ಸಮುದಾಯವನ್ನು ಬಳಸಿಕೊಳ್ಳಲು ಮುಂದಾದರು.

ಅಷ್ಟಕ್ಕೂ ಈ ಸ್ವಾಮೀಜಿ ಮಠಾಧೀಶರೋ ಅಥವಾ ರಾಜಕಾರಣಿಯೋ ಎಂಬ ಸಂಶಯ ರಾಜ್ಯದ ಜನತೆಗೆ ಗಾಢವಾಗಿ ಕಾಡುತ್ತದೆ. ರಾಜ್ಯದ ಮುಖ್ಯಮಂತ್ರಿಗಳ ಜೊತೆ ಹೇಗೆ ಮಾತಾಡಬೇಕೆನ್ನುವ ಕನಿಷ್ಠ ನೈತಿಕತೆ ಇಲ್ಲದವರು ಅದೇಗೆ ಸ್ವಾಮೀಜಿಯಾದರು?
ಇದು ಕಾವಿಯ ಮಹಿಮೆಯೋ ಅಥವಾ ತಮ್ಮ ಸಮುದಾಯ ಬೆಂಬಲದ ”ಅಹಂ’ ಇದಕ್ಕೆ ಮೂಲ ಕಾರಣ ಎನ್ನಬಹುದು. ಈ ರೀತಿಯ ‘ಪಾಲು’ ಕೇಳುವ ಧೈರ್ಯ ಬಹುತೇಕ ಕಾವಿಧಾರಿಗಳು ಕರಗತ ಮಾಡಿಕೊಂಡಿದ್ದಾರೆ. ಇದು ಕಾವಿ – ಖಾದಿಗಳು ಪರಸ್ಪರ ಕೊಂಡುಕೊಳ್ಳುವಿಕೆ ಪ್ರಕ್ರಿಯೆಯಾಗಿದೆ.

ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಮಠಾಧೀಶರಾದ ಇವರು ಅದೆಷ್ಟು ವಚನ ಓದಿದ್ದಾರೋ ಗೊತ್ತಿಲ್ಲ, ಬಹುಶಃ ಇವರು ವಚನ ಸಾಹಿತ್ಯ ಆಳವಾಗಿ ಅಧ್ಯಯನ ಕೈಗೊಂಡಿದರೆ
ಈ ರೀತಿ ಜಾತಿವಾದಿ ರಾಜಕೀಯ ಹಾಗೂ ರಾಜಕಾರಣಿಗಳ ಪರ ನಿಂತು ಅಂಗಲಾಚುತ್ತಿರಲಿಲ್ಲ ಅನ್ಸುತ್ತೆ. ಕೇವಲ ಪಂಚಮಸಾಲಿ ಸಮುದಾಯಕ್ಕೆ ಮಾತ್ರ  ಸೀಮಿತ ಎಂದು ಮಂತ್ರಿ ಸ್ಥಾನ ಕೊಡಬೇಕೆಂದು ಬೆದರಿಸುವ ಈ ಸ್ವಾಮೀಜಿಗಳು ಲಿಂಗಾಯತ ಮಠದ ಸ್ವಾಮೀಜಿ ಎಂದು ಹೇಳಲು ಸಾಧ್ಯವೇ?

ಬಸವ ತತ್ವ ಸಿದ್ಧಾಂತ‌ ಸೂಕ್ಷ್ಮವಾಗಿ  ಅರ್ಥೈಸಿಕೊಳ್ಳದವರು ಮಠಾಧೀಶರಾಗಲು
ಅರ್ಹರೇ? ‘ಲಿಂಗಾಯತ’ ಎಂಬುದು ಜಾತಿಯಲ್ಲ,
ಜಾತಿ ಮತ ಪಂಥ ಹಾಗೂ ಲಿಂಗರಹಿತವಾದ ‘
ಸಕಲ ಜೀವಾತ್ಮರಿಗೂ ಲೇಸು ಬಯಸುವ’
ಮಾನವೀಯತೆ ನೆಲೆಗಟ್ಟಿನ‌ ಅದೊಂದು
ಧರ್ಮ. ಆದರೆ ಹಿರಿಯ‌ ಮಠಾಧೀಶರ ಬುದ್ಧಿವಂತಿಕೆಯಿಂದ ಲಿಂಗಾಯತ ಎನ್ನುವ ಮೂಲ ಪರಿಕಲ್ಪನೆ ಮರೆಮಾಚಿಸುವ ಮೂಲಕ ಜಾತಿಗೊಂದು ಮಠ ಸ್ಥಾಪಿಸಿದರು. ಅಂತಹ ಮಠಗಳಿಗೆ ಜಾತಿಗೊಬ್ಬ ಮಠಾಧೀಶರನ್ನು ನೇಮಿಸುವ ಮೂಲಕ ಲಿಂಗಾಯತ ಧರ್ಮವನ್ನು ವೈದಿಕ ಧರ್ಮದ ಭಾಗವಾಗಿ ಗುರುತಿಸಿದರು! ಇಂತಹ ಪೀಠಗಳಲ್ಲಿ ಪಂಚಮಸಾಲಿ ಕೂಡ ಒಂದು. ಮಾಧ್ಯಮಗಳ ಮೂಲಕ ಜನಮಾನಸದಲ್ಲಿ ಗುರುತಿಸಿಕೊಂಡಿರುವ ಶ್ವಾಸಗುರು‌ ಸ್ವಾಮೀಜಿ ನಂತರದ ದಿನಗಳಲ್ಲಿ ಪಂಚಮಸಾಲಿ ಪೀಠಕ್ಕೆ ಹೊಸ ‘ಜಗದ್ಗುರು’ವಾಗಿ‌ ಬಡ್ತಿ ಪಡೆದರು.

ರಾಜ್ಯದ ಮುಖ್ಯಮಂತ್ರಿಯನ್ನು ತಮ್ಮ ಜಾತಿಯ ಬೆಂಬಲದಿಂದ ಅವಮಾನಿಸಿದ್ದು ತೀರ ಖಂಡನೀಯ. ಇದು ಪ್ರಜಾಪ್ರಭುತ್ವದ ವಿರೋಧ ನಡೆಯೂ ಕೂಡ. ಸಂವಿಧಾನ ಬದ್ಧವಾಗಿ ಆಯ್ಕೆಯಾದ ಪ್ರತಿನಿಧಿಗೆ ಕನಿಷ್ಠ ಗೌರವ ನೀಡದ ಸ್ವಾಮೀಜಿಯೊಬ್ಬರು ತನ್ನ ಮಠ ಹಾಗೂ ಸಮುದಾಯದಕ್ಕೆ ಸೀಮಿತವಾಗಿ ಬೇಡಿಕೆ ಮಂಡಿಸುವ ತಾಕತ್ತು ಧರ್ಮ ಕಲಿಸುವುದಿಲ್ಲ.

ಮಠಾಧೀಶರಾದವರು ‘ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ’ ಎನ್ನುವ ತತ್ವದಲ್ಲಿ ಮುನ್ನಡೆದು ಇತರರಿಗೂ ಮಾದರಿಯಾಗಬೇಕು.
ಆದರೆ ಕೂತಲ್ಲೇ ಮೈಕ್ ನಲ್ಲಿ ಅಸಭ್ಯವಾಗಿ ಏರು ದನಿಯಲ್ಲಿ ಮಾತನಾಡಿ ಮುಖ್ಯಮಂತ್ರಿಗೆ ಅವಮಾನಿಸುವ ಧೈರ್ಯ ಹೇಗೆ ಬಂದಿರಬಹುದು?

ಸರ್ಕಾರಕ್ಕೆ ತಮ್ಮ ಸಮುದಾಯ ಹಾಗೂ ಜಾತಿಗಳಿಗೆ ಸವಲತ್ತು ಕೇಳುವ ಹಕ್ಕನ್ನು ಸಂವಿಧಾನ ನೀಡಿದೆ. ಯಾವುದೇ ಸರ್ಕಾರ ಹಾಗೂ ರಾಜಕಾರಣಿಗಳಿಗೆ ಸಲಹೆ ಸೂಚನೆಗಳನ್ನು ನೀಡುವ ಅಧಿಕಾರ ಕೂಡ ಮಠಾಧೀಶರಿಗಿದೆ. ಆದರೆ ರಾಜಕೀಯ ಹಸ್ತಕ್ಷೇಪ ಮಾಡುವಂತಿಲ್ಲ. ಹಾಗೇನಾದರೂ ಮಾಡಿದರೆ ಕಾವಿ ಕಳಚಿಟ್ಪು ನೇರವಾಗಿ ರಾಜಕಾರಣ ಮಾಡಲು ಖಾದಿ ಧರಿಸಬೇಕು? ಆದರೆ ಧಾರ್ಮಿಕ ಬೋಧನೆಯ ಸ್ವಾಮೀಜಿ ತನ್ನ ಜಾತಿಯ ಒಬ್ಬರನ್ನ ಮಂತ್ರಿ ಮಾಡಲೇಬೇಕು ಎಂದು ಅಂತ ಧಮ್ಕಿ ಹಾಕಿ ಹಕ್ಕೊತ್ತಾಯ ಮೂಲಕ ಆಮಿಷ ತೋರಿಸೋದು ಕಾನೂನು ಬಾಹಿರ ಅಲ್ಲವೇ?

ಬಸವಣ್ಣರ ಕಟ್ಟಲು ಬಯಸಿದ ಲಿಂಗಾಯತ ಸಿದ್ಧಾಂತವೇ ಬೇರೆ.ಈ ಸ್ವಾಮೀಜಿಗಳ ಸಿದ್ಧಾಂತವೇ ಬೇರೆಯಾಗಿದೆ. ಮೊದಲಿಗೆ ಬಸವ ಸಿದ್ಧಾಂತದಲ್ಲಿ  ಮಠವೂ ಇಲ್ಲ, ಕಾವಿಯೂ ಇಲ್ಲ. ಆದರೆ ಜಾತಿ ಲೆಕ್ಕಾಚಾರದಲ್ಲಿ ಜಾತಿಗೊಂದು ಜಾತ್ರೆ ಮಾಡಲು ಮಠೀಯ ವ್ಯವಸ್ಥೆ ಜಾರಿಗೊಳಿಸಿದರು. ಇಂತಹ ಕಾವಿಧಾರಿಗಳ ನಡುವೆಯೂ ಸಿದ್ಧಗಂಗಾ ಶ್ರೀ, ತೋಂಟದಾರ್ಯ ಶ್ರೀಗಳು, ಭಾಲ್ಕಿಯ ಚನ್ನಬಸವ ಪಟ್ಟದೇವರ ಭಿನ್ನವಾಗಿ ಕಂಡು ಸಮನ್ವಯತೆಗೆ ಮಾದರಿಯಾದವರು.

ವಚನಾನಂದ ಶ್ರೀಗಳು ಬಹುಶಃ ತಮ್ಮ ಸಮುದಾಯದ ಏಳಿಗೆ ಬಯಸಿ ಒಂದಿಷ್ಟು ಪೂರಕ ಯೋಜನೆ ರೂಪಿಸುವಂತೆ ಸಲಹೆ ನೀಡಬಹುದಿತ್ತು. ತಮ್ಮ ಭಾಗದ ರೈತರ ಕೃಷಿ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲು ಆಗ್ರಹಿಸಬಹುದಿತ್ತು. ಉಳಿದ ಜಾತಿಗಳ ಬಗ್ಗೆ ನಿರ್ಲಕ್ಷ್ಯ ತೋರಿದರೂ ತಮ್ಮ ಜಾತಿಯ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಪ್ರತ್ಯೇಕ ಅನುದಾನವಾದರೂ ಕೇಳಿದರೆ??  ನೀವು ನಿಜವಾಗ್ಲೂ ಜನಪರ ‘ಶ್ವಾಸಗುರು’ ಎನಿಸಿಕೊಳ್ಳುತ್ತಿದ್ದೀರಿ. ಇನ್ನಾದರೂ ಬದಲಾಗಿ ‘ಇವನಮ್ಮವ’ ಎನ್ನುವ ತತ್ವ ಸಿದ್ಧಾಂತ ಮೈಗೂಡಿಸಿಕೊಳ್ಳಬೇಕಿದೆ.

ಚುನಾವಣೆಯಲ್ಲಿ ಮಠ ಪೀಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಸಲಹೆಯಂತೆ ಟಿಕೇಟ್ ಹಂಚುವ ರಾಜಕಾರಣಿಗಳು ಕಾವಿಗೆ ಹೆದರದೆ ಇರುವವರೇ?
ಜಾತಿ‌, ಧರ್ಮಾಧಾರಿತ‌ವಾಗಿ ಬದಲಾದ ಇಂದಿನ ರಾಜಕೀಯ ವ್ಯವಸ್ಥೆಯನ್ನು ಮಠ‌ – ಪೀಠಗಳೇ ನಿರ್ಣಾಯಕವಾಗಿವೆ.

ಇಂದಿನ ಬಹುತೇಕ ಎಲ್ಲಾ ಮಠಗಳು ರಾಜಕೀಯ ತಾಣಗಳಾಗಿ ಪರಿವರ್ತನೆಯಾಗಿವೆ. ಚುನಾವಣೆಗಳಲ್ಲಿ ಪಕ್ಷಗಳ ಗೆಲುವಿಗಾಗಿ ಹರಸಾಹಸಪಟ್ಟು ಬೆಂಬಲ ಘೋಷಿಸುವ ಮಠಾಧೀಪತಿಗಳು ನಂತರದ ದಿನಗಳಲ್ಲಿ ತಮ್ಮ ಕಸರತ್ತಿನ ಪಾಲು ಕೇಳದೇ ಇರಬಹುದೇ? ಧರ್ಮದ ಹೆಸರಿನಲ್ಲಿ ಜಾತಿ ರಾಜಕಾರಣ ನಡೆಸುವ ಮಠಾಧೀಶರು ತಮ್ಮ ಮಠ – ಪೀಠ ಬೆಳವಣಿಗೆಗಾಗಿ ಎಲ್ಲಾ ರೀತಿಯ ಸಾಹಸಗಳನ್ನು ಮಾಡಲು ಮುಂದಾಗುತ್ತಾರೆ.

ಮಂತ್ರಿ ಸ್ಥಾನ ತೊರೆದು ನಾಲ್ಕು ತಿಂಗಳ ಉಪವಾಸ ವನವಾಸ ಅನುಭವಿಸಿ ಮುಖ್ಯಮಂತ್ರಿ ‌ಮಾಡಿದ
17 ಶಾಸಕರಿಗೆ ಹೇಗೆ ಸಚಿವ‌ ಸ್ಥಾನ ಕೊಡಬೇಕೆಂಬ ಸಂಕಷ್ಟದಲ್ಲಿರುವ ಯಡಿಯೂರಪ್ಪನವರಿಗೆ ವಚನಾನಂದ ಸ್ವಾಮೀಜಿಯ ‘ಗರ್ ಗುರ್’ ಮಾತುಗಳು ನಿರಾಸೆ ಮೂಡಿಸಿದವು. ಕೊನೆಗೆ
“ನನ್ನ ಪರಿ‌ಸ್ಥಿತಿ‌ ಅರ್ಥೈಸಿಕೊಳ್ಳಿ,‌ ಎಲ್ಲರೂ ‌ನನಗೆ ಅಷ್ಟೇ ಸಮ,ಸಲಹೆ ನೀಡಬಹುದು ಹೊರತು ಬೆದರಿಕೆ ಅಲ್ಲ, ನೀವು ಬಯಸಿದರೆ ನಾಳೆಯೇ ರಾಜಿನಾಮೆ ಕೊಡುತ್ತೇನೆ” ಎಂದು ಸ್ವಾಮೀಜಿಗೆ ಸರಿಯಾಗೇ ಉತ್ತರಿಸಿದರೂ ಒಳಗೊಳಗೆ ಸಂಪುಟ ವಿಸ್ತರಣೆಯ ಭಯ ಮತ್ತೆ ಕಾಡುತ್ತಿತ್ತು.

ಇಂದಿನ ರಾಜಕೀಯ ವ್ಯವಸ್ಥೆ ಕಾವಿಧಾರಿಗಳ ನಿರ್ದೇಶನದಂತೆ ಮುನ್ನಡೆಯುತ್ತಿರುವಾಗ ಇಂತಹ ಬೆಳವಣಿಗೆಗಳು ಸಾಮಾನ್ಯವಾಗಿ ಹುಟ್ಟಿಕೊಳ್ಳುತ್ತವೆ ಎಂಬುದು ಈ ಘಟನೆ ಮತ್ತೊಮ್ಮೆ ಸಾಕ್ಷಿಯಾಗಿ ‌ನೋಡಬಹುದು.

(ಲೇಖಕರು ಶಿಕ್ಷಕರು ಮತ್ತು ಬರಹಗಾರರು. ಅಭಿಪ್ರಾಯಗಳು ಅವರ ಸ್ವಂತದ್ದು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಒಂದು ಸಮುದಾಯಕ್ಕೆ ಸೀಮಿತವಾದ ಸ್ವಾಮೀಜಿ ಜಗದ್ಗುರು ಆಗಲು ಹೇಗೆ ಸಾಧ್ಯ?

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...