HomeUncategorizedಸತ್ಯವನ್ನೇ ಹೇಳುತ್ತಿದ್ದೇನೆ, ಮುಖ್ಯಮಂತ್ರಿಗಳೇ, ನೀವು ಒಳ್ಳೇವ್ರು..!!

ಸತ್ಯವನ್ನೇ ಹೇಳುತ್ತಿದ್ದೇನೆ, ಮುಖ್ಯಮಂತ್ರಿಗಳೇ, ನೀವು ಒಳ್ಳೇವ್ರು..!!

ರಾಜ್ಯದ ಮುಖ್ಯಮಂತ್ರಿಯನ್ನು ತಮ್ಮ ಜಾತಿಯ ಬೆಂಬಲದಿಂದ ಅವಮಾನಿಸಿದ್ದು ತೀರ ಖಂಡನೀಯ. ಇದು ಪ್ರಜಾಪ್ರಭುತ್ವದ ವಿರೋಧ ನಡೆಯೂ ಕೂಡ

- Advertisement -
- Advertisement -

ರಾಜ್ಯದ ನೂತನ ಜಗದ್ಗುರು ಪೀಠದ ಸ್ವಾಮೀಜಿಯೊಬ್ಬರು ರಾಜ್ಯದ ಮುಖ್ಯಮಂತ್ರಿಗಳಿಗೆ ಸಾವಿರಾರು ಜನತೆ ಸೇರಿರುವ ಬಹಿರಂಗ ಸಭೆಯ ವೇದಿಕೆ ಮೇಲೆ ಅಧಿಕಾರವರ್ಗವನ್ನು ‘ಅವಾಜ್’ ಹಾಕುವ ಮೂಲಕ ಅವಾಂತರ ಸೃಷ್ಟಿಸಿಕೊಂಡ‌ ಘಟನೆ ಒಂದು ರಾಜಕೀಯ‌ ವಲಯದಲ್ಲಿ ಭಾರಿ ಚರ್ಚೆಗೆ ಒಳಪಟ್ಟಿದೆ.

“ಮುಖ್ಯಮಂತ್ರಿಗಳೇ , ನೀವು ಒಳ್ಳೇವ್ರು…!
ಪಂಚಮಸಾಲಿ ಸಮುದಾಯದ ಪ್ರಶ್ನಾತೀತ ನಾಯಕ ಮುರುಗೇಶ್ ನಿರಾಣಿಗೆ ಮಂತ್ರಿ ಸ್ಥಾನ ಕೊಡಲೇಬೇಕು..! ನಿಮ್ಮ ಬೆನ್ನಿಗೆ ಬೆನ್ನೆಲುಬಾಗಿ ನಿಂತು ನಿಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡಿರುವ ಮುರುಗೇಶ್ ನಿರಾಣಿಗೆ ಕೈ ಬಿಡ್ಬೇಡಿ..!
ನಮ್ಮ ಸಮುದಾಯದ 13 ಜನ ಶಾಸಕರಲ್ಲಿ ಕನಿಷ್ಠ
4 ಜನರಿಗೆ ಮಂತ್ರಿಸ್ಥಾನ ಕೊಡಲೇಬೇಕು..!
ಒಂದು ವೇಳ ನೀವು ಪಂಚಮಸಾಲಿ ಸಮುದಾಯದ ಕೈಬಿಟ್ಟರೇ ಅಖಂಡ ಪಂಚಮಸಾಲಿ ಸಮುದಾಯ ನಿಮ್ಮನ್ನು  ಕೈಬಿಡುತ್ತೆ…!!”

ಎಂದು ಪಕ್ಕದ ಕುರ್ಚಿಯ ಮೇಲೆ ಕುಳಿತ ರಾಜ್ಯದ ಮುಖ್ಯಮಂತ್ರಿಗಳಿಗೆ ಸಮುದಾಯಪರ ಬ್ಯಾಟಿಂಗ್ ನಡೆಸಿದ ಸ್ವಾಮೀಜಿಯೊಬ್ಬರ ‘ಬೆದರಿಕೆ’ಯ ಮಾತುಗಳು ಯಡಿಯೂರಪ್ಪನವರ ಕೆಂಡಾಮಂಡಲವಾಗಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಪರ – ವಿರೋಧ ವ್ಯಕ್ತವಾಗುತ್ತಿದೆ.

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ‌‌ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಪೀಠಾಧಿಪತಿ ವಚನಾನಂದ ಸ್ವಾಮೀಜಿ ತಮ್ಮ ನಾಯಕರ ಏಳಿಗೆ, ಹಿತಾಸಕ್ತಿ ಬಯಸಿ ರಾಜಕೀಯ ತೆವಲು ತೀರಿಸಿಕೊಳ್ಳಲು ಸಮುದಾಯವನ್ನು ಬಳಸಿಕೊಳ್ಳಲು ಮುಂದಾದರು.

ಅಷ್ಟಕ್ಕೂ ಈ ಸ್ವಾಮೀಜಿ ಮಠಾಧೀಶರೋ ಅಥವಾ ರಾಜಕಾರಣಿಯೋ ಎಂಬ ಸಂಶಯ ರಾಜ್ಯದ ಜನತೆಗೆ ಗಾಢವಾಗಿ ಕಾಡುತ್ತದೆ. ರಾಜ್ಯದ ಮುಖ್ಯಮಂತ್ರಿಗಳ ಜೊತೆ ಹೇಗೆ ಮಾತಾಡಬೇಕೆನ್ನುವ ಕನಿಷ್ಠ ನೈತಿಕತೆ ಇಲ್ಲದವರು ಅದೇಗೆ ಸ್ವಾಮೀಜಿಯಾದರು?
ಇದು ಕಾವಿಯ ಮಹಿಮೆಯೋ ಅಥವಾ ತಮ್ಮ ಸಮುದಾಯ ಬೆಂಬಲದ ”ಅಹಂ’ ಇದಕ್ಕೆ ಮೂಲ ಕಾರಣ ಎನ್ನಬಹುದು. ಈ ರೀತಿಯ ‘ಪಾಲು’ ಕೇಳುವ ಧೈರ್ಯ ಬಹುತೇಕ ಕಾವಿಧಾರಿಗಳು ಕರಗತ ಮಾಡಿಕೊಂಡಿದ್ದಾರೆ. ಇದು ಕಾವಿ – ಖಾದಿಗಳು ಪರಸ್ಪರ ಕೊಂಡುಕೊಳ್ಳುವಿಕೆ ಪ್ರಕ್ರಿಯೆಯಾಗಿದೆ.

ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಮಠಾಧೀಶರಾದ ಇವರು ಅದೆಷ್ಟು ವಚನ ಓದಿದ್ದಾರೋ ಗೊತ್ತಿಲ್ಲ, ಬಹುಶಃ ಇವರು ವಚನ ಸಾಹಿತ್ಯ ಆಳವಾಗಿ ಅಧ್ಯಯನ ಕೈಗೊಂಡಿದರೆ
ಈ ರೀತಿ ಜಾತಿವಾದಿ ರಾಜಕೀಯ ಹಾಗೂ ರಾಜಕಾರಣಿಗಳ ಪರ ನಿಂತು ಅಂಗಲಾಚುತ್ತಿರಲಿಲ್ಲ ಅನ್ಸುತ್ತೆ. ಕೇವಲ ಪಂಚಮಸಾಲಿ ಸಮುದಾಯಕ್ಕೆ ಮಾತ್ರ  ಸೀಮಿತ ಎಂದು ಮಂತ್ರಿ ಸ್ಥಾನ ಕೊಡಬೇಕೆಂದು ಬೆದರಿಸುವ ಈ ಸ್ವಾಮೀಜಿಗಳು ಲಿಂಗಾಯತ ಮಠದ ಸ್ವಾಮೀಜಿ ಎಂದು ಹೇಳಲು ಸಾಧ್ಯವೇ?

ಬಸವ ತತ್ವ ಸಿದ್ಧಾಂತ‌ ಸೂಕ್ಷ್ಮವಾಗಿ  ಅರ್ಥೈಸಿಕೊಳ್ಳದವರು ಮಠಾಧೀಶರಾಗಲು
ಅರ್ಹರೇ? ‘ಲಿಂಗಾಯತ’ ಎಂಬುದು ಜಾತಿಯಲ್ಲ,
ಜಾತಿ ಮತ ಪಂಥ ಹಾಗೂ ಲಿಂಗರಹಿತವಾದ ‘
ಸಕಲ ಜೀವಾತ್ಮರಿಗೂ ಲೇಸು ಬಯಸುವ’
ಮಾನವೀಯತೆ ನೆಲೆಗಟ್ಟಿನ‌ ಅದೊಂದು
ಧರ್ಮ. ಆದರೆ ಹಿರಿಯ‌ ಮಠಾಧೀಶರ ಬುದ್ಧಿವಂತಿಕೆಯಿಂದ ಲಿಂಗಾಯತ ಎನ್ನುವ ಮೂಲ ಪರಿಕಲ್ಪನೆ ಮರೆಮಾಚಿಸುವ ಮೂಲಕ ಜಾತಿಗೊಂದು ಮಠ ಸ್ಥಾಪಿಸಿದರು. ಅಂತಹ ಮಠಗಳಿಗೆ ಜಾತಿಗೊಬ್ಬ ಮಠಾಧೀಶರನ್ನು ನೇಮಿಸುವ ಮೂಲಕ ಲಿಂಗಾಯತ ಧರ್ಮವನ್ನು ವೈದಿಕ ಧರ್ಮದ ಭಾಗವಾಗಿ ಗುರುತಿಸಿದರು! ಇಂತಹ ಪೀಠಗಳಲ್ಲಿ ಪಂಚಮಸಾಲಿ ಕೂಡ ಒಂದು. ಮಾಧ್ಯಮಗಳ ಮೂಲಕ ಜನಮಾನಸದಲ್ಲಿ ಗುರುತಿಸಿಕೊಂಡಿರುವ ಶ್ವಾಸಗುರು‌ ಸ್ವಾಮೀಜಿ ನಂತರದ ದಿನಗಳಲ್ಲಿ ಪಂಚಮಸಾಲಿ ಪೀಠಕ್ಕೆ ಹೊಸ ‘ಜಗದ್ಗುರು’ವಾಗಿ‌ ಬಡ್ತಿ ಪಡೆದರು.

ರಾಜ್ಯದ ಮುಖ್ಯಮಂತ್ರಿಯನ್ನು ತಮ್ಮ ಜಾತಿಯ ಬೆಂಬಲದಿಂದ ಅವಮಾನಿಸಿದ್ದು ತೀರ ಖಂಡನೀಯ. ಇದು ಪ್ರಜಾಪ್ರಭುತ್ವದ ವಿರೋಧ ನಡೆಯೂ ಕೂಡ. ಸಂವಿಧಾನ ಬದ್ಧವಾಗಿ ಆಯ್ಕೆಯಾದ ಪ್ರತಿನಿಧಿಗೆ ಕನಿಷ್ಠ ಗೌರವ ನೀಡದ ಸ್ವಾಮೀಜಿಯೊಬ್ಬರು ತನ್ನ ಮಠ ಹಾಗೂ ಸಮುದಾಯದಕ್ಕೆ ಸೀಮಿತವಾಗಿ ಬೇಡಿಕೆ ಮಂಡಿಸುವ ತಾಕತ್ತು ಧರ್ಮ ಕಲಿಸುವುದಿಲ್ಲ.

ಮಠಾಧೀಶರಾದವರು ‘ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ’ ಎನ್ನುವ ತತ್ವದಲ್ಲಿ ಮುನ್ನಡೆದು ಇತರರಿಗೂ ಮಾದರಿಯಾಗಬೇಕು.
ಆದರೆ ಕೂತಲ್ಲೇ ಮೈಕ್ ನಲ್ಲಿ ಅಸಭ್ಯವಾಗಿ ಏರು ದನಿಯಲ್ಲಿ ಮಾತನಾಡಿ ಮುಖ್ಯಮಂತ್ರಿಗೆ ಅವಮಾನಿಸುವ ಧೈರ್ಯ ಹೇಗೆ ಬಂದಿರಬಹುದು?

ಸರ್ಕಾರಕ್ಕೆ ತಮ್ಮ ಸಮುದಾಯ ಹಾಗೂ ಜಾತಿಗಳಿಗೆ ಸವಲತ್ತು ಕೇಳುವ ಹಕ್ಕನ್ನು ಸಂವಿಧಾನ ನೀಡಿದೆ. ಯಾವುದೇ ಸರ್ಕಾರ ಹಾಗೂ ರಾಜಕಾರಣಿಗಳಿಗೆ ಸಲಹೆ ಸೂಚನೆಗಳನ್ನು ನೀಡುವ ಅಧಿಕಾರ ಕೂಡ ಮಠಾಧೀಶರಿಗಿದೆ. ಆದರೆ ರಾಜಕೀಯ ಹಸ್ತಕ್ಷೇಪ ಮಾಡುವಂತಿಲ್ಲ. ಹಾಗೇನಾದರೂ ಮಾಡಿದರೆ ಕಾವಿ ಕಳಚಿಟ್ಪು ನೇರವಾಗಿ ರಾಜಕಾರಣ ಮಾಡಲು ಖಾದಿ ಧರಿಸಬೇಕು? ಆದರೆ ಧಾರ್ಮಿಕ ಬೋಧನೆಯ ಸ್ವಾಮೀಜಿ ತನ್ನ ಜಾತಿಯ ಒಬ್ಬರನ್ನ ಮಂತ್ರಿ ಮಾಡಲೇಬೇಕು ಎಂದು ಅಂತ ಧಮ್ಕಿ ಹಾಕಿ ಹಕ್ಕೊತ್ತಾಯ ಮೂಲಕ ಆಮಿಷ ತೋರಿಸೋದು ಕಾನೂನು ಬಾಹಿರ ಅಲ್ಲವೇ?

ಬಸವಣ್ಣರ ಕಟ್ಟಲು ಬಯಸಿದ ಲಿಂಗಾಯತ ಸಿದ್ಧಾಂತವೇ ಬೇರೆ.ಈ ಸ್ವಾಮೀಜಿಗಳ ಸಿದ್ಧಾಂತವೇ ಬೇರೆಯಾಗಿದೆ. ಮೊದಲಿಗೆ ಬಸವ ಸಿದ್ಧಾಂತದಲ್ಲಿ  ಮಠವೂ ಇಲ್ಲ, ಕಾವಿಯೂ ಇಲ್ಲ. ಆದರೆ ಜಾತಿ ಲೆಕ್ಕಾಚಾರದಲ್ಲಿ ಜಾತಿಗೊಂದು ಜಾತ್ರೆ ಮಾಡಲು ಮಠೀಯ ವ್ಯವಸ್ಥೆ ಜಾರಿಗೊಳಿಸಿದರು. ಇಂತಹ ಕಾವಿಧಾರಿಗಳ ನಡುವೆಯೂ ಸಿದ್ಧಗಂಗಾ ಶ್ರೀ, ತೋಂಟದಾರ್ಯ ಶ್ರೀಗಳು, ಭಾಲ್ಕಿಯ ಚನ್ನಬಸವ ಪಟ್ಟದೇವರ ಭಿನ್ನವಾಗಿ ಕಂಡು ಸಮನ್ವಯತೆಗೆ ಮಾದರಿಯಾದವರು.

ವಚನಾನಂದ ಶ್ರೀಗಳು ಬಹುಶಃ ತಮ್ಮ ಸಮುದಾಯದ ಏಳಿಗೆ ಬಯಸಿ ಒಂದಿಷ್ಟು ಪೂರಕ ಯೋಜನೆ ರೂಪಿಸುವಂತೆ ಸಲಹೆ ನೀಡಬಹುದಿತ್ತು. ತಮ್ಮ ಭಾಗದ ರೈತರ ಕೃಷಿ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲು ಆಗ್ರಹಿಸಬಹುದಿತ್ತು. ಉಳಿದ ಜಾತಿಗಳ ಬಗ್ಗೆ ನಿರ್ಲಕ್ಷ್ಯ ತೋರಿದರೂ ತಮ್ಮ ಜಾತಿಯ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಪ್ರತ್ಯೇಕ ಅನುದಾನವಾದರೂ ಕೇಳಿದರೆ??  ನೀವು ನಿಜವಾಗ್ಲೂ ಜನಪರ ‘ಶ್ವಾಸಗುರು’ ಎನಿಸಿಕೊಳ್ಳುತ್ತಿದ್ದೀರಿ. ಇನ್ನಾದರೂ ಬದಲಾಗಿ ‘ಇವನಮ್ಮವ’ ಎನ್ನುವ ತತ್ವ ಸಿದ್ಧಾಂತ ಮೈಗೂಡಿಸಿಕೊಳ್ಳಬೇಕಿದೆ.

ಚುನಾವಣೆಯಲ್ಲಿ ಮಠ ಪೀಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಸಲಹೆಯಂತೆ ಟಿಕೇಟ್ ಹಂಚುವ ರಾಜಕಾರಣಿಗಳು ಕಾವಿಗೆ ಹೆದರದೆ ಇರುವವರೇ?
ಜಾತಿ‌, ಧರ್ಮಾಧಾರಿತ‌ವಾಗಿ ಬದಲಾದ ಇಂದಿನ ರಾಜಕೀಯ ವ್ಯವಸ್ಥೆಯನ್ನು ಮಠ‌ – ಪೀಠಗಳೇ ನಿರ್ಣಾಯಕವಾಗಿವೆ.

ಇಂದಿನ ಬಹುತೇಕ ಎಲ್ಲಾ ಮಠಗಳು ರಾಜಕೀಯ ತಾಣಗಳಾಗಿ ಪರಿವರ್ತನೆಯಾಗಿವೆ. ಚುನಾವಣೆಗಳಲ್ಲಿ ಪಕ್ಷಗಳ ಗೆಲುವಿಗಾಗಿ ಹರಸಾಹಸಪಟ್ಟು ಬೆಂಬಲ ಘೋಷಿಸುವ ಮಠಾಧೀಪತಿಗಳು ನಂತರದ ದಿನಗಳಲ್ಲಿ ತಮ್ಮ ಕಸರತ್ತಿನ ಪಾಲು ಕೇಳದೇ ಇರಬಹುದೇ? ಧರ್ಮದ ಹೆಸರಿನಲ್ಲಿ ಜಾತಿ ರಾಜಕಾರಣ ನಡೆಸುವ ಮಠಾಧೀಶರು ತಮ್ಮ ಮಠ – ಪೀಠ ಬೆಳವಣಿಗೆಗಾಗಿ ಎಲ್ಲಾ ರೀತಿಯ ಸಾಹಸಗಳನ್ನು ಮಾಡಲು ಮುಂದಾಗುತ್ತಾರೆ.

ಮಂತ್ರಿ ಸ್ಥಾನ ತೊರೆದು ನಾಲ್ಕು ತಿಂಗಳ ಉಪವಾಸ ವನವಾಸ ಅನುಭವಿಸಿ ಮುಖ್ಯಮಂತ್ರಿ ‌ಮಾಡಿದ
17 ಶಾಸಕರಿಗೆ ಹೇಗೆ ಸಚಿವ‌ ಸ್ಥಾನ ಕೊಡಬೇಕೆಂಬ ಸಂಕಷ್ಟದಲ್ಲಿರುವ ಯಡಿಯೂರಪ್ಪನವರಿಗೆ ವಚನಾನಂದ ಸ್ವಾಮೀಜಿಯ ‘ಗರ್ ಗುರ್’ ಮಾತುಗಳು ನಿರಾಸೆ ಮೂಡಿಸಿದವು. ಕೊನೆಗೆ
“ನನ್ನ ಪರಿ‌ಸ್ಥಿತಿ‌ ಅರ್ಥೈಸಿಕೊಳ್ಳಿ,‌ ಎಲ್ಲರೂ ‌ನನಗೆ ಅಷ್ಟೇ ಸಮ,ಸಲಹೆ ನೀಡಬಹುದು ಹೊರತು ಬೆದರಿಕೆ ಅಲ್ಲ, ನೀವು ಬಯಸಿದರೆ ನಾಳೆಯೇ ರಾಜಿನಾಮೆ ಕೊಡುತ್ತೇನೆ” ಎಂದು ಸ್ವಾಮೀಜಿಗೆ ಸರಿಯಾಗೇ ಉತ್ತರಿಸಿದರೂ ಒಳಗೊಳಗೆ ಸಂಪುಟ ವಿಸ್ತರಣೆಯ ಭಯ ಮತ್ತೆ ಕಾಡುತ್ತಿತ್ತು.

ಇಂದಿನ ರಾಜಕೀಯ ವ್ಯವಸ್ಥೆ ಕಾವಿಧಾರಿಗಳ ನಿರ್ದೇಶನದಂತೆ ಮುನ್ನಡೆಯುತ್ತಿರುವಾಗ ಇಂತಹ ಬೆಳವಣಿಗೆಗಳು ಸಾಮಾನ್ಯವಾಗಿ ಹುಟ್ಟಿಕೊಳ್ಳುತ್ತವೆ ಎಂಬುದು ಈ ಘಟನೆ ಮತ್ತೊಮ್ಮೆ ಸಾಕ್ಷಿಯಾಗಿ ‌ನೋಡಬಹುದು.

(ಲೇಖಕರು ಶಿಕ್ಷಕರು ಮತ್ತು ಬರಹಗಾರರು. ಅಭಿಪ್ರಾಯಗಳು ಅವರ ಸ್ವಂತದ್ದು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಒಂದು ಸಮುದಾಯಕ್ಕೆ ಸೀಮಿತವಾದ ಸ್ವಾಮೀಜಿ ಜಗದ್ಗುರು ಆಗಲು ಹೇಗೆ ಸಾಧ್ಯ?

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...