HomeUncategorizedಸತ್ಯವನ್ನೇ ಹೇಳುತ್ತಿದ್ದೇನೆ, ಮುಖ್ಯಮಂತ್ರಿಗಳೇ, ನೀವು ಒಳ್ಳೇವ್ರು..!!

ಸತ್ಯವನ್ನೇ ಹೇಳುತ್ತಿದ್ದೇನೆ, ಮುಖ್ಯಮಂತ್ರಿಗಳೇ, ನೀವು ಒಳ್ಳೇವ್ರು..!!

ರಾಜ್ಯದ ಮುಖ್ಯಮಂತ್ರಿಯನ್ನು ತಮ್ಮ ಜಾತಿಯ ಬೆಂಬಲದಿಂದ ಅವಮಾನಿಸಿದ್ದು ತೀರ ಖಂಡನೀಯ. ಇದು ಪ್ರಜಾಪ್ರಭುತ್ವದ ವಿರೋಧ ನಡೆಯೂ ಕೂಡ

- Advertisement -
- Advertisement -

ರಾಜ್ಯದ ನೂತನ ಜಗದ್ಗುರು ಪೀಠದ ಸ್ವಾಮೀಜಿಯೊಬ್ಬರು ರಾಜ್ಯದ ಮುಖ್ಯಮಂತ್ರಿಗಳಿಗೆ ಸಾವಿರಾರು ಜನತೆ ಸೇರಿರುವ ಬಹಿರಂಗ ಸಭೆಯ ವೇದಿಕೆ ಮೇಲೆ ಅಧಿಕಾರವರ್ಗವನ್ನು ‘ಅವಾಜ್’ ಹಾಕುವ ಮೂಲಕ ಅವಾಂತರ ಸೃಷ್ಟಿಸಿಕೊಂಡ‌ ಘಟನೆ ಒಂದು ರಾಜಕೀಯ‌ ವಲಯದಲ್ಲಿ ಭಾರಿ ಚರ್ಚೆಗೆ ಒಳಪಟ್ಟಿದೆ.

“ಮುಖ್ಯಮಂತ್ರಿಗಳೇ , ನೀವು ಒಳ್ಳೇವ್ರು…!
ಪಂಚಮಸಾಲಿ ಸಮುದಾಯದ ಪ್ರಶ್ನಾತೀತ ನಾಯಕ ಮುರುಗೇಶ್ ನಿರಾಣಿಗೆ ಮಂತ್ರಿ ಸ್ಥಾನ ಕೊಡಲೇಬೇಕು..! ನಿಮ್ಮ ಬೆನ್ನಿಗೆ ಬೆನ್ನೆಲುಬಾಗಿ ನಿಂತು ನಿಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡಿರುವ ಮುರುಗೇಶ್ ನಿರಾಣಿಗೆ ಕೈ ಬಿಡ್ಬೇಡಿ..!
ನಮ್ಮ ಸಮುದಾಯದ 13 ಜನ ಶಾಸಕರಲ್ಲಿ ಕನಿಷ್ಠ
4 ಜನರಿಗೆ ಮಂತ್ರಿಸ್ಥಾನ ಕೊಡಲೇಬೇಕು..!
ಒಂದು ವೇಳ ನೀವು ಪಂಚಮಸಾಲಿ ಸಮುದಾಯದ ಕೈಬಿಟ್ಟರೇ ಅಖಂಡ ಪಂಚಮಸಾಲಿ ಸಮುದಾಯ ನಿಮ್ಮನ್ನು  ಕೈಬಿಡುತ್ತೆ…!!”

ಎಂದು ಪಕ್ಕದ ಕುರ್ಚಿಯ ಮೇಲೆ ಕುಳಿತ ರಾಜ್ಯದ ಮುಖ್ಯಮಂತ್ರಿಗಳಿಗೆ ಸಮುದಾಯಪರ ಬ್ಯಾಟಿಂಗ್ ನಡೆಸಿದ ಸ್ವಾಮೀಜಿಯೊಬ್ಬರ ‘ಬೆದರಿಕೆ’ಯ ಮಾತುಗಳು ಯಡಿಯೂರಪ್ಪನವರ ಕೆಂಡಾಮಂಡಲವಾಗಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಪರ – ವಿರೋಧ ವ್ಯಕ್ತವಾಗುತ್ತಿದೆ.

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ‌‌ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಪೀಠಾಧಿಪತಿ ವಚನಾನಂದ ಸ್ವಾಮೀಜಿ ತಮ್ಮ ನಾಯಕರ ಏಳಿಗೆ, ಹಿತಾಸಕ್ತಿ ಬಯಸಿ ರಾಜಕೀಯ ತೆವಲು ತೀರಿಸಿಕೊಳ್ಳಲು ಸಮುದಾಯವನ್ನು ಬಳಸಿಕೊಳ್ಳಲು ಮುಂದಾದರು.

ಅಷ್ಟಕ್ಕೂ ಈ ಸ್ವಾಮೀಜಿ ಮಠಾಧೀಶರೋ ಅಥವಾ ರಾಜಕಾರಣಿಯೋ ಎಂಬ ಸಂಶಯ ರಾಜ್ಯದ ಜನತೆಗೆ ಗಾಢವಾಗಿ ಕಾಡುತ್ತದೆ. ರಾಜ್ಯದ ಮುಖ್ಯಮಂತ್ರಿಗಳ ಜೊತೆ ಹೇಗೆ ಮಾತಾಡಬೇಕೆನ್ನುವ ಕನಿಷ್ಠ ನೈತಿಕತೆ ಇಲ್ಲದವರು ಅದೇಗೆ ಸ್ವಾಮೀಜಿಯಾದರು?
ಇದು ಕಾವಿಯ ಮಹಿಮೆಯೋ ಅಥವಾ ತಮ್ಮ ಸಮುದಾಯ ಬೆಂಬಲದ ”ಅಹಂ’ ಇದಕ್ಕೆ ಮೂಲ ಕಾರಣ ಎನ್ನಬಹುದು. ಈ ರೀತಿಯ ‘ಪಾಲು’ ಕೇಳುವ ಧೈರ್ಯ ಬಹುತೇಕ ಕಾವಿಧಾರಿಗಳು ಕರಗತ ಮಾಡಿಕೊಂಡಿದ್ದಾರೆ. ಇದು ಕಾವಿ – ಖಾದಿಗಳು ಪರಸ್ಪರ ಕೊಂಡುಕೊಳ್ಳುವಿಕೆ ಪ್ರಕ್ರಿಯೆಯಾಗಿದೆ.

ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಮಠಾಧೀಶರಾದ ಇವರು ಅದೆಷ್ಟು ವಚನ ಓದಿದ್ದಾರೋ ಗೊತ್ತಿಲ್ಲ, ಬಹುಶಃ ಇವರು ವಚನ ಸಾಹಿತ್ಯ ಆಳವಾಗಿ ಅಧ್ಯಯನ ಕೈಗೊಂಡಿದರೆ
ಈ ರೀತಿ ಜಾತಿವಾದಿ ರಾಜಕೀಯ ಹಾಗೂ ರಾಜಕಾರಣಿಗಳ ಪರ ನಿಂತು ಅಂಗಲಾಚುತ್ತಿರಲಿಲ್ಲ ಅನ್ಸುತ್ತೆ. ಕೇವಲ ಪಂಚಮಸಾಲಿ ಸಮುದಾಯಕ್ಕೆ ಮಾತ್ರ  ಸೀಮಿತ ಎಂದು ಮಂತ್ರಿ ಸ್ಥಾನ ಕೊಡಬೇಕೆಂದು ಬೆದರಿಸುವ ಈ ಸ್ವಾಮೀಜಿಗಳು ಲಿಂಗಾಯತ ಮಠದ ಸ್ವಾಮೀಜಿ ಎಂದು ಹೇಳಲು ಸಾಧ್ಯವೇ?

ಬಸವ ತತ್ವ ಸಿದ್ಧಾಂತ‌ ಸೂಕ್ಷ್ಮವಾಗಿ  ಅರ್ಥೈಸಿಕೊಳ್ಳದವರು ಮಠಾಧೀಶರಾಗಲು
ಅರ್ಹರೇ? ‘ಲಿಂಗಾಯತ’ ಎಂಬುದು ಜಾತಿಯಲ್ಲ,
ಜಾತಿ ಮತ ಪಂಥ ಹಾಗೂ ಲಿಂಗರಹಿತವಾದ ‘
ಸಕಲ ಜೀವಾತ್ಮರಿಗೂ ಲೇಸು ಬಯಸುವ’
ಮಾನವೀಯತೆ ನೆಲೆಗಟ್ಟಿನ‌ ಅದೊಂದು
ಧರ್ಮ. ಆದರೆ ಹಿರಿಯ‌ ಮಠಾಧೀಶರ ಬುದ್ಧಿವಂತಿಕೆಯಿಂದ ಲಿಂಗಾಯತ ಎನ್ನುವ ಮೂಲ ಪರಿಕಲ್ಪನೆ ಮರೆಮಾಚಿಸುವ ಮೂಲಕ ಜಾತಿಗೊಂದು ಮಠ ಸ್ಥಾಪಿಸಿದರು. ಅಂತಹ ಮಠಗಳಿಗೆ ಜಾತಿಗೊಬ್ಬ ಮಠಾಧೀಶರನ್ನು ನೇಮಿಸುವ ಮೂಲಕ ಲಿಂಗಾಯತ ಧರ್ಮವನ್ನು ವೈದಿಕ ಧರ್ಮದ ಭಾಗವಾಗಿ ಗುರುತಿಸಿದರು! ಇಂತಹ ಪೀಠಗಳಲ್ಲಿ ಪಂಚಮಸಾಲಿ ಕೂಡ ಒಂದು. ಮಾಧ್ಯಮಗಳ ಮೂಲಕ ಜನಮಾನಸದಲ್ಲಿ ಗುರುತಿಸಿಕೊಂಡಿರುವ ಶ್ವಾಸಗುರು‌ ಸ್ವಾಮೀಜಿ ನಂತರದ ದಿನಗಳಲ್ಲಿ ಪಂಚಮಸಾಲಿ ಪೀಠಕ್ಕೆ ಹೊಸ ‘ಜಗದ್ಗುರು’ವಾಗಿ‌ ಬಡ್ತಿ ಪಡೆದರು.

ರಾಜ್ಯದ ಮುಖ್ಯಮಂತ್ರಿಯನ್ನು ತಮ್ಮ ಜಾತಿಯ ಬೆಂಬಲದಿಂದ ಅವಮಾನಿಸಿದ್ದು ತೀರ ಖಂಡನೀಯ. ಇದು ಪ್ರಜಾಪ್ರಭುತ್ವದ ವಿರೋಧ ನಡೆಯೂ ಕೂಡ. ಸಂವಿಧಾನ ಬದ್ಧವಾಗಿ ಆಯ್ಕೆಯಾದ ಪ್ರತಿನಿಧಿಗೆ ಕನಿಷ್ಠ ಗೌರವ ನೀಡದ ಸ್ವಾಮೀಜಿಯೊಬ್ಬರು ತನ್ನ ಮಠ ಹಾಗೂ ಸಮುದಾಯದಕ್ಕೆ ಸೀಮಿತವಾಗಿ ಬೇಡಿಕೆ ಮಂಡಿಸುವ ತಾಕತ್ತು ಧರ್ಮ ಕಲಿಸುವುದಿಲ್ಲ.

ಮಠಾಧೀಶರಾದವರು ‘ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ’ ಎನ್ನುವ ತತ್ವದಲ್ಲಿ ಮುನ್ನಡೆದು ಇತರರಿಗೂ ಮಾದರಿಯಾಗಬೇಕು.
ಆದರೆ ಕೂತಲ್ಲೇ ಮೈಕ್ ನಲ್ಲಿ ಅಸಭ್ಯವಾಗಿ ಏರು ದನಿಯಲ್ಲಿ ಮಾತನಾಡಿ ಮುಖ್ಯಮಂತ್ರಿಗೆ ಅವಮಾನಿಸುವ ಧೈರ್ಯ ಹೇಗೆ ಬಂದಿರಬಹುದು?

ಸರ್ಕಾರಕ್ಕೆ ತಮ್ಮ ಸಮುದಾಯ ಹಾಗೂ ಜಾತಿಗಳಿಗೆ ಸವಲತ್ತು ಕೇಳುವ ಹಕ್ಕನ್ನು ಸಂವಿಧಾನ ನೀಡಿದೆ. ಯಾವುದೇ ಸರ್ಕಾರ ಹಾಗೂ ರಾಜಕಾರಣಿಗಳಿಗೆ ಸಲಹೆ ಸೂಚನೆಗಳನ್ನು ನೀಡುವ ಅಧಿಕಾರ ಕೂಡ ಮಠಾಧೀಶರಿಗಿದೆ. ಆದರೆ ರಾಜಕೀಯ ಹಸ್ತಕ್ಷೇಪ ಮಾಡುವಂತಿಲ್ಲ. ಹಾಗೇನಾದರೂ ಮಾಡಿದರೆ ಕಾವಿ ಕಳಚಿಟ್ಪು ನೇರವಾಗಿ ರಾಜಕಾರಣ ಮಾಡಲು ಖಾದಿ ಧರಿಸಬೇಕು? ಆದರೆ ಧಾರ್ಮಿಕ ಬೋಧನೆಯ ಸ್ವಾಮೀಜಿ ತನ್ನ ಜಾತಿಯ ಒಬ್ಬರನ್ನ ಮಂತ್ರಿ ಮಾಡಲೇಬೇಕು ಎಂದು ಅಂತ ಧಮ್ಕಿ ಹಾಕಿ ಹಕ್ಕೊತ್ತಾಯ ಮೂಲಕ ಆಮಿಷ ತೋರಿಸೋದು ಕಾನೂನು ಬಾಹಿರ ಅಲ್ಲವೇ?

ಬಸವಣ್ಣರ ಕಟ್ಟಲು ಬಯಸಿದ ಲಿಂಗಾಯತ ಸಿದ್ಧಾಂತವೇ ಬೇರೆ.ಈ ಸ್ವಾಮೀಜಿಗಳ ಸಿದ್ಧಾಂತವೇ ಬೇರೆಯಾಗಿದೆ. ಮೊದಲಿಗೆ ಬಸವ ಸಿದ್ಧಾಂತದಲ್ಲಿ  ಮಠವೂ ಇಲ್ಲ, ಕಾವಿಯೂ ಇಲ್ಲ. ಆದರೆ ಜಾತಿ ಲೆಕ್ಕಾಚಾರದಲ್ಲಿ ಜಾತಿಗೊಂದು ಜಾತ್ರೆ ಮಾಡಲು ಮಠೀಯ ವ್ಯವಸ್ಥೆ ಜಾರಿಗೊಳಿಸಿದರು. ಇಂತಹ ಕಾವಿಧಾರಿಗಳ ನಡುವೆಯೂ ಸಿದ್ಧಗಂಗಾ ಶ್ರೀ, ತೋಂಟದಾರ್ಯ ಶ್ರೀಗಳು, ಭಾಲ್ಕಿಯ ಚನ್ನಬಸವ ಪಟ್ಟದೇವರ ಭಿನ್ನವಾಗಿ ಕಂಡು ಸಮನ್ವಯತೆಗೆ ಮಾದರಿಯಾದವರು.

ವಚನಾನಂದ ಶ್ರೀಗಳು ಬಹುಶಃ ತಮ್ಮ ಸಮುದಾಯದ ಏಳಿಗೆ ಬಯಸಿ ಒಂದಿಷ್ಟು ಪೂರಕ ಯೋಜನೆ ರೂಪಿಸುವಂತೆ ಸಲಹೆ ನೀಡಬಹುದಿತ್ತು. ತಮ್ಮ ಭಾಗದ ರೈತರ ಕೃಷಿ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲು ಆಗ್ರಹಿಸಬಹುದಿತ್ತು. ಉಳಿದ ಜಾತಿಗಳ ಬಗ್ಗೆ ನಿರ್ಲಕ್ಷ್ಯ ತೋರಿದರೂ ತಮ್ಮ ಜಾತಿಯ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಪ್ರತ್ಯೇಕ ಅನುದಾನವಾದರೂ ಕೇಳಿದರೆ??  ನೀವು ನಿಜವಾಗ್ಲೂ ಜನಪರ ‘ಶ್ವಾಸಗುರು’ ಎನಿಸಿಕೊಳ್ಳುತ್ತಿದ್ದೀರಿ. ಇನ್ನಾದರೂ ಬದಲಾಗಿ ‘ಇವನಮ್ಮವ’ ಎನ್ನುವ ತತ್ವ ಸಿದ್ಧಾಂತ ಮೈಗೂಡಿಸಿಕೊಳ್ಳಬೇಕಿದೆ.

ಚುನಾವಣೆಯಲ್ಲಿ ಮಠ ಪೀಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಸಲಹೆಯಂತೆ ಟಿಕೇಟ್ ಹಂಚುವ ರಾಜಕಾರಣಿಗಳು ಕಾವಿಗೆ ಹೆದರದೆ ಇರುವವರೇ?
ಜಾತಿ‌, ಧರ್ಮಾಧಾರಿತ‌ವಾಗಿ ಬದಲಾದ ಇಂದಿನ ರಾಜಕೀಯ ವ್ಯವಸ್ಥೆಯನ್ನು ಮಠ‌ – ಪೀಠಗಳೇ ನಿರ್ಣಾಯಕವಾಗಿವೆ.

ಇಂದಿನ ಬಹುತೇಕ ಎಲ್ಲಾ ಮಠಗಳು ರಾಜಕೀಯ ತಾಣಗಳಾಗಿ ಪರಿವರ್ತನೆಯಾಗಿವೆ. ಚುನಾವಣೆಗಳಲ್ಲಿ ಪಕ್ಷಗಳ ಗೆಲುವಿಗಾಗಿ ಹರಸಾಹಸಪಟ್ಟು ಬೆಂಬಲ ಘೋಷಿಸುವ ಮಠಾಧೀಪತಿಗಳು ನಂತರದ ದಿನಗಳಲ್ಲಿ ತಮ್ಮ ಕಸರತ್ತಿನ ಪಾಲು ಕೇಳದೇ ಇರಬಹುದೇ? ಧರ್ಮದ ಹೆಸರಿನಲ್ಲಿ ಜಾತಿ ರಾಜಕಾರಣ ನಡೆಸುವ ಮಠಾಧೀಶರು ತಮ್ಮ ಮಠ – ಪೀಠ ಬೆಳವಣಿಗೆಗಾಗಿ ಎಲ್ಲಾ ರೀತಿಯ ಸಾಹಸಗಳನ್ನು ಮಾಡಲು ಮುಂದಾಗುತ್ತಾರೆ.

ಮಂತ್ರಿ ಸ್ಥಾನ ತೊರೆದು ನಾಲ್ಕು ತಿಂಗಳ ಉಪವಾಸ ವನವಾಸ ಅನುಭವಿಸಿ ಮುಖ್ಯಮಂತ್ರಿ ‌ಮಾಡಿದ
17 ಶಾಸಕರಿಗೆ ಹೇಗೆ ಸಚಿವ‌ ಸ್ಥಾನ ಕೊಡಬೇಕೆಂಬ ಸಂಕಷ್ಟದಲ್ಲಿರುವ ಯಡಿಯೂರಪ್ಪನವರಿಗೆ ವಚನಾನಂದ ಸ್ವಾಮೀಜಿಯ ‘ಗರ್ ಗುರ್’ ಮಾತುಗಳು ನಿರಾಸೆ ಮೂಡಿಸಿದವು. ಕೊನೆಗೆ
“ನನ್ನ ಪರಿ‌ಸ್ಥಿತಿ‌ ಅರ್ಥೈಸಿಕೊಳ್ಳಿ,‌ ಎಲ್ಲರೂ ‌ನನಗೆ ಅಷ್ಟೇ ಸಮ,ಸಲಹೆ ನೀಡಬಹುದು ಹೊರತು ಬೆದರಿಕೆ ಅಲ್ಲ, ನೀವು ಬಯಸಿದರೆ ನಾಳೆಯೇ ರಾಜಿನಾಮೆ ಕೊಡುತ್ತೇನೆ” ಎಂದು ಸ್ವಾಮೀಜಿಗೆ ಸರಿಯಾಗೇ ಉತ್ತರಿಸಿದರೂ ಒಳಗೊಳಗೆ ಸಂಪುಟ ವಿಸ್ತರಣೆಯ ಭಯ ಮತ್ತೆ ಕಾಡುತ್ತಿತ್ತು.

ಇಂದಿನ ರಾಜಕೀಯ ವ್ಯವಸ್ಥೆ ಕಾವಿಧಾರಿಗಳ ನಿರ್ದೇಶನದಂತೆ ಮುನ್ನಡೆಯುತ್ತಿರುವಾಗ ಇಂತಹ ಬೆಳವಣಿಗೆಗಳು ಸಾಮಾನ್ಯವಾಗಿ ಹುಟ್ಟಿಕೊಳ್ಳುತ್ತವೆ ಎಂಬುದು ಈ ಘಟನೆ ಮತ್ತೊಮ್ಮೆ ಸಾಕ್ಷಿಯಾಗಿ ‌ನೋಡಬಹುದು.

(ಲೇಖಕರು ಶಿಕ್ಷಕರು ಮತ್ತು ಬರಹಗಾರರು. ಅಭಿಪ್ರಾಯಗಳು ಅವರ ಸ್ವಂತದ್ದು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಒಂದು ಸಮುದಾಯಕ್ಕೆ ಸೀಮಿತವಾದ ಸ್ವಾಮೀಜಿ ಜಗದ್ಗುರು ಆಗಲು ಹೇಗೆ ಸಾಧ್ಯ?

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...