Homeಮುಖಪುಟ“ಡಿವೈಡ್ ಆಂಡ್ ರೂಲ್ ಪಾಲಿಸಿ”ಯ ಜನಕರು ವೈದಿಕರೇ ಹೊರತು ಬ್ರಿಟಿಶರಲ್ಲ.

“ಡಿವೈಡ್ ಆಂಡ್ ರೂಲ್ ಪಾಲಿಸಿ”ಯ ಜನಕರು ವೈದಿಕರೇ ಹೊರತು ಬ್ರಿಟಿಶರಲ್ಲ.

- Advertisement -
- Advertisement -

ಒಂದು ಪತ್ರ

ಮಾನ್ಯರೇ,
“ಡಿವೈಡ್ ಆಂಡ್ ರೂಲ್ ಪಾಲಿಸಿ” ಅರ್ಥಾತ್ ವಿಭಜಿಸಿ ಆಳು ಎಂಬ ರಾಜನೀತಿ ಬ್ರಿಟಿಷರದ್ದು ಎಂಬ ಆರೋಪ ಯಾವಾಗಲೂ ಕೇಳಿ ಬರುತ್ತದೆ. ಆದರೆ ಮೂಲತಃ “ವಿಭಜಿಸಿ ಆಳು” ಎಂಬ ಕುತ್ಸಿತ ನೀತಿಯ ಜನಕರು ವೈದಿಕರೇ ಹೊರತು ಬ್ರಿಟಿಶರಲ್ಲ.

ಮೂರು ಸಾವಿರ ವರ್ಷಗಳ ಹಿಂದೆ ವೈದಿಕರು ಇದೇ ಡಿವೈಡ್ & ರೂಲ್ ಪಾಲಿಸಿ ಸಮಾಜದಲ್ಲಿ ಬಿತ್ತಲು “ವರ್ಣ” ಗಳನ್ನು ನಯವಾಗಿ ಸೃಷ್ಟಿಸಿ ಜಾರಿಗೊಳಿಸಿದರು. ನಂತರ ಕುಲಕಸುಬು ಆಧಾರದಲ್ಲಿ ಜಾತಿ-ಉಪಜಾತಿಗಳನ್ನು ಹುಟ್ಟು ಹಾಕಿ ಮೇಲು-ಕೀಳು ಎಂಬ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆ ಜಾರಿಗೆ ತಂದು ಜಾತಿ-ಜಾತಿಯೊಳಗೆ ಪಂಥ-ಪಂಥ ಗಳೊಳಗೆ ದ್ವೇಷ ಹುಟ್ಟಿಸಿ ತಮ್ಮ ಬೇಳೆ ಬೇಯಿಸಿಕೊಂಡರು.

ವೈದಿಕರು ತಾವೇ ಚಿತ್ರವಿಚಿತ್ರ ಮನುಷ್ಯ ಮತ್ತು ಪ್ರಾಣಿ ರೂಪದ ದೇವರ ಕಲ್ಪನೆ ಹುಟ್ಟು ಹಾಕಿ ಕೊನೆಗೆ ಆ ದೇವರೊಳಗೂ ಮೇಲು-ಕೀಳು ಹೆಣ್ಣು-ಗಂಡು ಎಂಬ ವಿಭಜನೆ ಮಾಡಿ, ಆ ವಿಚಿತ್ರ ಸ್ವರೂಪದ ದೇವರುಗಳ ಹೆಸರಲ್ಲಿ ಜನರು ತಮ್ಮ ತಮ್ಮಲ್ಲೇ ಕಚ್ಚಾಡುವಂತೆ ಷಡ್ಯಂತ್ರ ರಚಿಸಿ ಯಶಸ್ವಿಯಾದರು. ಎಲ್ಲಾ ಬಿಟ್ಟು ದೇವಸ್ಥಾನದ ಆನೆಯ ಹಣೆಗೆ ಯಾವ ವಿನ್ಯಾಸದ ನಾಮ ಹಾಕಬೇಕು ಎಂಬ ಬಗ್ಗೆಯೂ ಒಮ್ಮತ ಹುಟ್ಟದಂತಹಾ ಮಾನಸಿಕತೆ ಸಮಾಜದಲ್ಲಿ ಹುಟ್ಟು ಹಾಕಿದವರೂ ಈ ವೈದಿಕರೇ!

ಬ್ರಿಟಿಷರು ಭಾರತಕ್ಕೆ ಬಂದಾಗ ಅವರು ಇಂತಹಾ 6200 ಜಾತಿಗಳಿರುವ ವೈದಿಕ ಧರ್ಮ ನೋಡಿ ಆಘಾತಗೊಂಡರು ಹಾಗೂ ಕೇವಲ 3% ಇರುವ ಬ್ರಾಹ್ಮಣರು ಜಾತಿ-ಉಪಜಾತಿ- ವರ್ಗ-ಪಂಥಗಳ ಮೂಲಕ 97% ಜನರನ್ನು ಮಾನಸಿಕ ದಾಸ್ಯಕ್ಕೆ ಒಳಪಡಿಸಿಕೊಂಡು ಸಮಾಜವನ್ನು ತಮ್ಮ ಮುಷ್ಟಿಯಲ್ಲಿ ಇಟ್ಟಿಕೊಂಡಿರುವುದನ್ನು ಕಂಡು ಬುದ್ದಿವಂತ ಬ್ರಿಟಿಷರು ತಾವೂ ಅದನ್ನೇ ಅನುಸರಿಸಿ ಹಿಂದೂ-ಮುಸ್ಲಿಂ ಒಡಕು ಹುಟ್ಟು ಹಾಕಿದರು. ಈ ಒಡಕನ್ನೇ ಸಂಘ ಪರಿವಾರ ಇಂದು ಬಂಡವಾಳ ಮಾಡಿಕೊಂಡು ಮತ್ತೆ ಮತ್ತೆ ಅಧಿಕಾರಕ್ಕೆ ಬರುತ್ತಿರುವುದು.

ಹಳೆಯದರೊಂದಿಗೆ ಆಧುನಿಕತೆ ಸಹಾ ಇರಲಿ ಎಂಬಂತೆ ಬಿ‌ಜೆ‌ಪಿಯವರಿಂದ ಇವಿಎಂ ತಿರುಚಾಟ ಸಹಾ ನಡೆಯುತ್ತಿದೆ ಬಿಡಿ. ಆದರೆ ಈ ಇವಿಎಂ ತಿರುಚಾಟದ ವಿರುದ್ಧ ಯಾರೂ ದನಿ ಎತ್ತದಂತೆ ಕಾಂಗ್ರೆಸ್ಸಿನೊಳಗಿನ ಆರೆಸ್ಸೆಸ್ಸಿಗರು ತಡೆಯುತ್ತಿದ್ದಾರೆ. ಹಾಗಾಗಿ ಬಿ‌ಜೆ‌ಪಿಯ ಇವಿಎಂ ವಂಚನೆಯ ವಿರುದ್ಧದ ಹೋರಾಟವೂ ಜಾತಿಯ ಸ್ವರೂಪ ಪಡೆದು ಈಗ ಚುನಾವಣೆಯಲ್ಲಿ ಮತಪತ್ರ/ ಬ್ಯಾಲೆಟ್ ಪೇಪರ್ ಮರಳಿ ತರುವುದಕ್ಕಾಗಿ ನಡೆಯುತ್ತಿರುವ ಹೋರಾಟ ಕೇವಲ ದಲಿತ ಸಂಘಟನೆಗಳಿಗೆ ಮಾತ್ರ ಸೀಮಿತವಾಗುವಂತೆ ಎಲ್ಲಾ ವಿರೋಧ ಪಕ್ಷಗಳ ಒಳಗೆ ತೂರಿಕೊಂಡಿರುವ ಆರೆಸ್ಸೆಸ್ಸಿಗರು ನೋಡಿಕೊಂಡಿದ್ದಾರೆ. ಈ ರೀತಿ ವಿರೋಧ ಪಕ್ಷದೊಳಗೂ ಈ ವೈದಿಕರ ಡಿವೈಡ್ ಆಂಡ್ ರೂಲ್ ನೀತಿ ಯಶಸ್ವಿಯಾಗಿ ಅನುಷ್ಟಾನಗೊಂಡಿದೆ. ಇದಕ್ಕೆಲ್ಲಾ ಬ್ರಿಟಿಷರನ್ನು ದೂರಲು ಸಾಧ್ಯವೇ!

ತಮ್ಮ ವಿಶ್ವಾಸಿ,
ಪ್ರವೀಣ್ ಎಸ್ ಶೆಟ್ಟಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನನ್ನ ಮೌನವನ್ನು ಸೋಲು ಎಂದು ತಿಳಿಯಬೇಡಿ’’: ರಾಜ್ಯಸಭೆಯಲ್ಲಿ ಪದಚ್ಯುತಿಯ ನಂತರ ಎಎಪಿಗೆ ತಿರಗೇಟು ನೀಡಿದ ಸಂಸದ ರಾಘವ್ ಛಡ್ಡಾ

ರಾಜ್ಯಸಭೆಯಲ್ಲಿ ಪಕ್ಷದ ಉಪ ನಾಯಕನ ಸ್ಥಾನದಿಂದ ತೆಗೆದುಹಾಕಲ್ಪಟ್ಟ ಒಂದು ದಿನದ ನಂತರ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಛಡ್ಡಾ ಅವರು ಶುಕ್ರವಾರ "ನನ್ನ ಬಾಯಿ ಮುಚ್ಚಿಸಬಹುದು, ಸೋಲಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ. ಪಕ್ಷದ...

ಮಾಲ್ಡಾ ನ್ಯಾಯಾಂಗ ಅಧಿಕಾರಿಗಳ ಘೇರಾವ್ ಪ್ರಕರಣದಲ್ಲಿ 17 ಜನರ ಬಂಧನ: ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಿದ ಇಸಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಏಳು ನ್ಯಾಯಾಂಗ ಅಧಿಕಾರಿಗಳ ಘೇರಾವ್‌ನಲ್ಲಿ ಭಾಗಿಯಾಗಿದ್ದಕ್ಕಾಗಿ ಚುನಾವಣಾ ಅಭ್ಯರ್ಥಿ ಸೇರಿದಂತೆ ಕನಿಷ್ಠ 17 ಜನರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ ಎಂದು...

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....