Homeಮುಖಪುಟನಿಮ್ಮ ಸಹೋದ್ಯೋಗಿಗಳೊಂದಿಗೆ ಅನುಭೂತಿಯಿಂದಿದ್ದೀರಾ? ಇದರಿಂದಾಗುವ ಪ್ರಯೋಜನ ಗೊತ್ತೆ?

ನಿಮ್ಮ ಸಹೋದ್ಯೋಗಿಗಳೊಂದಿಗೆ ಅನುಭೂತಿಯಿಂದಿದ್ದೀರಾ? ಇದರಿಂದಾಗುವ ಪ್ರಯೋಜನ ಗೊತ್ತೆ?

ನಿಮ್ಮ ಸಹೋದ್ಯೋಗಿಗಳಿಂದ ಸಹಾಯ ಎದುರು ನೋಡುವುದಕ್ಕಿಂತ ಮುಂಚೆ ನೀವು ಅವರಿಗೆ ಎಷ್ಟು ಸಹಾಯ ನೀಡುತ್ತಿದ್ದೀರೆಂಬುದನ್ನು ಅವಲೋಕಿಸಿ. ಅನುಭೂತಿ ಎರಡು ದಿಕ್ಕಿನ ದಾರಿ.

- Advertisement -
- Advertisement -

ಜೀವನ ಕಲೆಗಳು ಅಂಕಣ: 8  ಅನುಭೂತಿ (Empathy) -2

ಅನುಭೂತಿ ಎನ್ನುವುದು ಕೇವಲದುಃಖ ಅಥವಾ ಸಂತೋಷದ ಕ್ಷಣಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳುವುದಷ್ಟೇ ಅಲ್ಲ, ಇದು ದೈನಂದಿನ ಕಲೆ. ಇದು ಮನೆ, ಶಾಲೆ/ಕಾಲೇಜು ಹಾಗೂ ಕೆಲಸದ ಸ್ಥಳದಲ್ಲಿ ಯಾವಾಗಲೂ ಕಾಣುವಂತಾಗಬೇಕು. ನಿಮ್ಮ ಕೆಲಸ/ಕಲಿಕೆಯ ಸ್ಥಳದಲ್ಲಿ ಅನುಭೂತಿ ಕಾಣುತ್ತಿದೆಯೇ? ಅನುಭೂತಿಯ ವಾತಾವರಣದ ಕೊರತೆಯಿಂದಾಗಿ ಇರುವ ಜನರು ದೂರವಾಗುತ್ತಿದ್ದಾರೆಯೇ? ಶಾಲೆ/ಕಾಲೇಜು/ಕಚೇರಿಯಲ್ಲಿ ಒಬ್ಬರನ್ನೊಬ್ಬರು ಅವರ ಮೊದಲನೇ ಹೆಸರಿನಿಂದ ಸಂಬೋಧಿಸುತ್ತಾರೋ, ಅಡ್ಡನಾಮದಿಂದಲೋ, ಅವರ ಹುದ್ದೆಯಿಂದ ಕರೆಯುತ್ತಾರೋ, ಅವರಿಗೆ ಸ್ವಭಾವಕ್ಕನುಗುಣವಾಗಿ ಇಟ್ಟಿರುವ ಅನ್ವರ್ಥನಾಮದಿಂದಲೋ, ಯೋಚಿಸಿ ನೋಡಿ.

ಶಾಲೆ/ಕಾಲೇಜು/ಕಚೇರಿಗಳಲ್ಲಿ ಅನುಭೂತಿಯನ್ನು ವ್ಯವಸ್ಥಾಪಕ ಮಂಡಳಿಯ ಆದೇಶದಿಂದಾಗಲೀ, ಸರಕಾರದ ಒಂದು ಸುತ್ತೋಲೆಯಿಂದಾಗಲೀ ಸೃಷ್ಟಿಸಲಾಗುವುದಿಲ್ಲ. ಅನುಭೂತಿ ಮೇಲಿನಿಂದ ಕೆಳಕ್ಕೆ ಜಾರಿಕೊಂಡು ಬರುವುದಿಲ್ಲ. ಇದನ್ನು ಅಲ್ಲಿಯ ಸಹಪಾಠಿ/ಸಹೋದ್ಯೋಗಿಗಳೇ ಸೇರಿ ನಿರ್ಮಿಸಬೇಕು. ಪ್ರತಿಯೋರ್ವರೂ ವೈಯುಕ್ತಿಕ ಮಟ್ಟದಲ್ಲಿ ಅನುಭೂತಿಯನ್ನು ತೋರಿಸಿದ್ದೇ ಆದರೆ ಕೆಲಸದ ವಾತಾವರಣ ಮಾರನೆಯ ದಿನದಿಂದಲೇ ಬದಲಾಗಲು ಪ್ರಾರಂಭವಾಗುತ್ತದೆ.

“ಬಿಸಿನೆಸ್ ಸಾಲ್ವರ್ಸ್” 2017ರ ವರದಿಯ ಪ್ರಕಾರ ಅನುಭೂತಿ ಕೆಲಸಗಾರರ ಉತ್ಪಾದನಾ ಸಾಮರ್ಥ್ಯ, ಕರ್ತವ್ಯ ಹಾಗೂ ಕಂಪನಿಯ ಪರವಾಗಿ ಅವರ ನಿಷ್ಠೆಯ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದಿದೆ. ವರದಿಯ ಪ್ರಕಾರ:

ಅನುಭೂತಿಯ ವಾತಾವರಣ ಇರುವಂತಹ ಕಚೇರಿಯಲ್ಲಿ 77% ಕೆಲಸಗಾರರು ಹಣದ ಆಮಿಶ (ಓವರ್ ಟೈಂ) ಇಲ್ಲದೆ ಹೆಚ್ಚಿನ ಸಮಯ ಕೆಲಸಕ್ಕೆ ನೀಡಲು ಸಿದ್ಧರಾಗಿದ್ದರು. 60% ಕೆಲಸಗಾರರು ಕಂಪನಿಯ ಆರ್ಥಿಕ ಸ್ಥಿತಿ ಚೆನ್ನಾಗಿರದಿದ್ದಲ್ಲಿ ಸಂಬಳ ಕಡಿತಕ್ಕೂ ಸಿದ್ಧರಾಗಿದ್ದರು. ಸಂದರ್ಶಿಸಿದ 92% ಮಾನವ ಸಂಪನ್ಮೂಲ ಅಧಿಕಾರಿಗಳು ಅನುಭೂತಿಯ ವಾತಾವರಣ ತಮ್ಮ ಕಂಪನಿಯ ಕೆಲಸಗಾರರನ್ನು ಹಿಡಿದಿಟ್ಟುಕೊಳ್ಳಲು ದೊಡ್ಡ ಕಾರಣ ಎಂದರು. 1980ರಿಂದ 1995ರವರೆಗೆ ಹುಟ್ಟಿದ 80% ಯುವಕರು ತಮ್ಮ ಕಚೇರಿಯಲ್ಲಿ ಅನುಭೂತಿಯ ವಾತಾವರಣವಿಲ್ಲದಿದ್ದರೆ ಕೆಲಸ ಬಿಡುವುದಾಗಿ ಹೇಳಿದರು. ನಿವೃತ್ತಿಯ ಅಂಚಿನಲ್ಲಿರುವ 66% ಜನರೂ ಕೂಡ ಇದೇ ಪ್ರತಿಕ್ರಿಯೆ ನೀಡಿದರು.

ಕಚೇರಿಯಲ್ಲಿ ಅನುಭೂತಿ ಸೃಷ್ಟಿಸುವುದು ಅಷ್ಟು ಸುಲಭದ ಮಾತಲ್ಲ. ಅನುಭೂತಿಯ ವಾತಾವರಣವನ್ನು ಅಳೆಯಲು ಸುಲಭವಾದ ಮಾಪಕಯಂತ್ರಗಳಿಲ್ಲ. ಸರ್ವೇಕ್ಷಣೆ ಅಥವಾ ಮಾನವ ಸಂಪನ್ಮೂಲ ವಿಭಾಗದ ಕಾರ್ಯಾಗಾರ/ಪ್ರಶ್ನೆಪತ್ರಿಕೆಗಳಿಂದ ಸ್ವಲ್ಪ ಮಾಹಿತಿ ಸಿಗಬಹುದು ಆದರೆ ಹಲವು ಮುಖ್ಯ ಅಂಶಗಳು ಅಳೆಯಲು ಕೈಗೆ ಸಿಗುವುದಿಲ್ಲ.

ಕೆಳಗಿನ ಕಲೆಗಳು ನಿಮ್ಮ ಸಹೋದ್ಯೋಗಿ/ಸಹಪಾಠಿಗಳ ನಡುವಣ ಸಂಬಂಧ ಹೆಚ್ಚಿಸಲು ಸಹಾಯಕವಾಗಬಹುದು.

1. ಕೇಳಿಸಿಕೊಳ್ಳುವ ಕಲೆಯನ್ನು ಬಲಪಡಿಸಿಕೊಳ್ಳಿ: ನಿಮ್ಮ ಸಹೋದ್ಯೋಗಿ/ಸಹಪಾಠಿ ಏನಾದರೂ ಹೇಳಲು ಬಯಸಿದಲ್ಲಿ ನೀವು ನಿಜವಾಗಿಯೂ ಅವರು ಹೇಳಿದ್ದನ್ನು ಕೇವಲ ಆಲಿಸುತ್ತಿದ್ದೀರೋ ಅಥವಾ ಗಮನವಿಟ್ಟು ಅರ್ಥಮಾಡಿಕೊಳ್ಳಲು ಪ್ರಯತ್ನ ಪಡುತ್ತಿದ್ದೀರೋ ಎಂದು ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ. ಇದು ಕೇವಲ ಆಡುವ ಮಾತಿಗೆ/ದೂರಧ್ವನಿ ಸಂಭಾಷಣೆಗೆ ಸೀಮಿತವಾಗಿಲ್ಲ, ಕಚೇರಿಯ ಎಸ್.ಎಂ.ಎಸ್./ಎ-ಮೇಲ್, ವಾಟ್ಸಾಪ್ ವೈಯುಕ್ತಿಕ/ಗುಂಪು ಸಂದೇಶಗಳೂ ಇದರಲ್ಲಿ ಸೇರಿವೆ.

2. ಸರಿಯಾದ ಪ್ರಶ್ನೆ ಕೇಳುವ ಕಲೆ ವೃದ್ಧಿಸಿಕೊಳ್ಳಿ: ಇದರಿಂದ ನಿಮ್ಮ ಸಹೋದ್ಯೋಗಿ/ಸಹಪಾಠಿಯ ನಿಜವಾದ ಸಮಸ್ಯೆ ಏನು ಎಂಬುದು ತಿಳಿಯುತ್ತದೆ. ನೀಡಿದ ಉತ್ತರ ಅಥವಾ ಅವರು ಕೇಳಿದ ಪ್ರಶ್ನೆ ನಿಮಗೆ ಅರ್ಥವಾಗದಿದ್ದಲ್ಲಿ ಅದನ್ನು ಬಿಡಿಸಿ ಹೇಳುವಂತೆ ತಿಳಿಸಿ.

3. ಅವರ ಸ್ಥಳದಲ್ಲಿ ನೀವಿದ್ದರೆ ನಿಮಗೆ ಏನನಿಸುತ್ತಿತ್ತು ಯೋಚಿಸಿ: ಇನ್ನೊಬ್ಬರ ಕಷ್ಟ ಅರಿತುಕೊಳ್ಳುವ ಪ್ರಯತ್ನ ನೀವು ಮಾಡಿತ್ತಿದ್ದೀರೆಂಬ ಸಂದೇಶ ಅವರಿಗೆ ಕೂಡಲೇ ರವಾನಿಸಿ. ಅವರನ್ನು ನೇರ ಮಾತುಕತೆಗೆ ಕರೆಯಿರಿ, ಸಮಯ ಸ್ಥಳ ನಿರ್ಧರಿಸಿ. ಮುಖಾಮುಖಿಯಾಗುವುದರಿಂದ ಹಲವು ಪ್ರಶ್ನೆಗಳು ತಾವಾಗಿಯೇ ಉತ್ತರಿಸಲ್ಪಡುತ್ತವೆ.

4. ಸಹೋದ್ಯೋಗಿ/ಸಹಪಾಠಿಗಳ ಬಗ್ಗೆ ಒಮ್ಮೆಲೇ ನಿಮ್ಮ ಉಹಾಪೋಹದ ನಿರ್ಧಾರಕ್ಕೆ ಬರಬೇಡಿ: ಹೇಳಿದ ಕೆಲಸ ಸರಿಯಾಗಿ ಮಾಡುತ್ತಿಲ್ಲ ಎಂದು ತಿಳಿದಾಗ ಅವರಿಗೆ ಇನ್ಯಾವ ತೊಂದರೆ ಇದೆ ತಿಳಿದುಕೊಳ್ಳಲು ಪ್ರಯತ್ನಿಸಿ.

5. ಸಮಸ್ಯೆಗಳನ್ನು ಬಗೆಹರಿಸುವಾಗ ಆದ್ಯತೆಯ ಮೇಲೆ ಗಮನ ಕೊಡಿ: ಎಲ್ಲಾ ಸಮಸ್ಯೆಗಳಿಗೂ ಒಂದೇ ಸಮನಾದ ತುರ್ತು ಇರುವುದಿಲ್ಲ. ಮೊದಲು ಬಂದ ಸಮಸ್ಯೆಗೆ ಮೊದಲು ಪರಿಹಾರ ಎನ್ನುವುದೂ ಸರಿಯಲ್ಲ. ಆದ್ದರಿಂದ ಸಮಸ್ಯೆಯ ಗಂಭೀರತೆಗೆ ಅನುಗುಣವಾಗಿ ಅದರ ಪರಿಹಾರಕ್ಕೆ ಗಮನ/ಸಮಯ ನೀಡಿ.

6. ನಿಮ್ಮ ಸಹೋದ್ಯೋಗಿ/ಸಹಪಾಠಿಗಳನ್ನು ದೂರವಿಡಬೇಡಿ: ಆದರೆ ತೀರಾ ಸನಿಹತೆಯ ಅವಶ್ಯಕತೆಯೂ ಇಲ್ಲ. ಅವರ ಬಗ್ಗೆ ವೈಯುಕ್ತಿಕ, ಕುಟುಂಬದ ಮಾಹಿತಿ ಇರಲಿ ಆದರೆ ನೀವು ಅವರ ಮೇಲೆ ಬೇಹುಗಾರಿಕೆ ನಡೆಸುತ್ತಿದ್ದೀರಿಎಂಬ ಭಾವನೆ ಅವರಿಗೆ ಬರದಿರಲಿ. ಅವರ ಇ-ಮೇಲ್ ಸಂದೇಶಕ್ಕೆ ಉತ್ತರಿಸುವಾಗ ಅವರ ಹೆಸರನ್ನು ಬಳಸಿ, ಅವರ ವಿಭಾಗದ ಹೆಸರಿಗೆ ಉತ್ತರಿಸಬೇಡಿ. ಕಚೇರಿಯಲ್ಲೂ ವೈಯುಕ್ತಿಕ ಮತ್ತು ಸಾಂಸ್ಥಿಕ ವಿಷಯಗಳನ್ನು ಬೆರೆಸಬೇಡಿ.

7. ವ್ಯಕ್ತಿಗಳಿಗೆ ಭಾವನೆಗಳಿರುತ್ತವೆ: ಕಂಪನಿಯ ಟಾರ್ಗೆಟ್, ಡೆಡ್ಲೈನ್, ಲಾಭ-ನಷ್ಟದ ಒತ್ತಡದಲ್ಲಿ ಮುಖ್ಯವಾಗಿ ತಂಡದ ಜನರಿಗೆ ಭಾವನೆಗಳಿರುತ್ತವೆ ಎಂಬುದನ್ನು ಮರೆಯಬೇಡಿ. ಆದ್ದರಿಂದ ನಿಮ್ಮ ಸಹೋದ್ಯೋಗಿ/ಸಹಪಾಠಿಗಳ ಮೇಲಿನ ಕಟು ಟಿಪ್ಪಣಿಗಳನ್ನು ಮೃದುವಾಗಿರಿಸಿ.

8. ಕೆಲವೊಮ್ಮೆ ತಲೆಯ ಬದಲಿಗೆ ಹೃದಯ ಉಪಯೋಗಿಸಿ: ಇಂಗ್ಲಿಷಿನಲ್ಲಿ ಇದನ್ನು “ಥಿಂಕ್ ವಿತ್ ಯುವರ್ ಹಾರ್ಟ್” ಎನ್ನುತ್ತಾರೆ.

9. ನಿಮ್ಮ ಸ್ವಂತ ಪೂರ್ವಾಗ್ರಹ: ನಿಮ್ಮ ಸಾಂಸ್ಕೃತಿಕ ಪಕ್ಷಪಾತವೇನಾದರೂ ಅನುಭೂತಿಗೆ ಅಡ್ಡ ಬರುತ್ತಿದೆಯೇ, ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

10. ಸಹೋದ್ಯೋಗಿಗಳಿಂದ ಪ್ರತ್ಯಾದಾನ: ಫೀಡ್-ಬ್ಯಾಕ್ ಸ್ವೀಕರಿಸಿ. ಕೆಲವು ನೇರವಾಗಿ ಬರದಿರಬಹುದು, ಅಪ್ರತ್ಯಕ್ಷವಾಗಿ ಬಂದ ಟೀಕೆ ಟಿಪ್ಪಣಿಗಳನ್ನೂ ಗುರುತುಹಾಕಿಕೊಳ್ಳಿ. ಅದೇ ರೀತಿ ನೀವು ನೀಡಿದ ಫೀಡ್-ಬ್ಯಾಕ್/ಟೀಕೆ/ಟಿಪ್ಪಣಿ ಹೇಗೆ ಕೆಲಸ ಮಾಡುತ್ತಿದೆ ಅದನ್ನೂ ತಿಳಿದುಕೊಳ್ಳಿ

11. ಸ್ಥಳ ಬದಲಾಯಿಸಿ: ಸಹೋದ್ಯೋಗಿ/ಸಹಪಾಠಿಗಳೊಂದಿಗೆ ಕಚೇರಿಯಿಂದ ಹೊರಗೆ ಪ್ರವಾಸಕ್ಕೆ ಹೋಗಿ. ಅವರನ್ನು ಅರಿತುಕೊಳ್ಳಲು ಸಮಯ ಮತ್ತು ಅವಕಾಶ ದೊರೆಯುತ್ತದೆ.

12. ಅನುಭೂತಿ ಒಂದು ರಾತ್ರಿಯಲ್ಲಿ ಆಗುವ ಬದಲಾವಣೆ ಅಲ್ಲ: ಇದು ನೂರಡಿಯ ವೇಗದ ಓಟವಲ್ಲ, 26 ಮೈಲಿಯ ಮ್ಯಾರಥಾನ್. ಒಬ್ಬ ವ್ಯಕ್ತಿ ಅಥವಾ ಒಂದು ಪರಿಸ್ಥಿತಿಯಲ್ಲಿ ಆದ ಕಹಿ ನೆನಪಿನಿಂದ ನಿಮ್ಮ ಮುಂದಿನ ಕೆಲಸ ಕೆಡದಂತೆ ಜಾಗೃತೆ ವಹಿಸಿ.

ನಿಮ್ಮ ಸಹೋದ್ಯೋಗಿಗಳಿಂದ ಸಹಾಯ ಎದುರು ನೋಡುವುದಕ್ಕಿಂತ ಮುಂಚೆ ನೀವು ಅವರಿಗೆ ಎಷ್ಟು ಸಹಾಯ ನೀಡುತ್ತಿದ್ದೀರೆಂಬುದನ್ನು ಅವಲೋಕಿಸಿ. ಅನುಭೂತಿ ಎರಡು ದಿಕ್ಕಿನ ದಾರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಸ್‌ಐಆರ್ ಬಳಿಕ 9 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಮತದಾರರ ಸಂಖ್ಯೆ 1.70 ಕೋಟಿ ಇಳಿಕೆ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಬಳಿಕ 9 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮತದಾರರ ಒಟ್ಟು ಸಂಖ್ಯೆಯಲ್ಲಿ 1.70 ಕೋಟಿ ಇಳಿಕೆ ಕಂಡಿದೆ. ಗುಜರಾತ್, ಪುದುಚೇರಿ, ಲಕ್ಷದ್ವೀಪ, ರಾಜಸ್ಥಾನ, ಛತ್ತೀಸ್‌ಗಢ, ಅಂಡಮಾನ್...

ಅಫ್ಘಾನ್ ಗಡಿಯಲ್ಲಿ ಪಾಕಿಸ್ತಾನ ವೈಮಾನಿಕ ದಾಳಿ : 20ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಶಂಕೆ

ಅಫ್ಘಾನಿಸ್ತಾನದ ಗಡಿ ಪ್ರದೇಶಗಳಲ್ಲಿ ಪಾಕಿಸ್ತಾನ ಭಾನುವಾರ (ಫೆ.22) ಭಾರೀ ವೈಮಾನಿಕ ದಾಳಿ ನಡೆಸಿರುವುದಾಗಿ ವರದಿಯಾಗಿದೆ. ಪಾಕಿಸ್ತಾನದ ವಾಯುಪಡೆಯು ಅಫ್ಘಾನಿಸ್ತಾನದ ಪಕ್ತಿಕಾ ಮತ್ತು ನಂಗರ್ಹಾರ್ ಪ್ರಾಂತ್ಯಗಳಲ್ಲಿರುವ ಏಳು ಸಶಸ್ತ್ರ ಗುಂಪುಗಳ ಅಡಗುತಾಣಗಳ ಮೇಲೆ ದಾಳಿ ನಡೆಸಿದೆ...

ಹೊಸ ಜಾಗತಿಕ ಸುಂಕವನ್ನು ಶೇ.15ಕ್ಕೆ ಏರಿಸಿದ ಟ್ರಂಪ್

ಪ್ರತಿ ಸುಂಕ ನೀತಿಯನ್ನು ರದ್ದುಗೊಳಿಸಿದ್ದ ಸುಪ್ರೀಂ ಕೋರ್ಟ್ ಆದೇಶಕ್ಕೆ ಸೆಡ್ಡು ಹೊಡೆದು, ಎಲ್ಲಾ ದೇಶಗಳ ಆಮದಿನ ಮೇಲೆ ಹೊಸದಾಗಿ 10 ಶೇಕಡ ಜಾಗತಿಕ ಸುಂಕ ಘೋಷಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಶನಿವಾರ...

ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕ; ಲೋಕಾಯುಕ್ತ ಪೊಲೀಸರಿಂದ ಚಂದ್ರು ಲಮಾಣಿ ಬಂಧನ

ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರು ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಗುತ್ತಿಗೆದಾರ ವಿಜಯ್ ಪೂಜಾರ್ ಅವರ ದೂರಿನ ಮೇರೆಗೆ ಗದಗ ಲೋಕಾಯುಕ್ತ ಪೊಲೀಸರು ನಡೆಸಿದ...

ಎಐ ಶೃಂಗಸಭೆಯಲ್ಲಿ ಪ್ರತಿಭಟನೆ : ನಾಲ್ವರು ಯುವ ಕಾಂಗ್ರೆಸ್‌ ಕಾರ್ಯಕರ್ತರು 5 ದಿನ ಪೊಲೀಸ್ ಕಸ್ಟಡಿಗೆ

ನವದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಿದ್ದ ಎಐ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದ ನಾಲ್ವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ದೆಹಲಿ ನ್ಯಾಯಾಲಯ ಶನಿವಾರ (ಫೆ.21) 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ದೆಹಲಿ ಪೊಲೀಸರು...

ಮೈಮೇಲೆ ದೇವರು ಬಂದಂತೆ ನಟಿಸಿ ದಲಿತ ನವದಂಪತಿ ದೇವಸ್ಥಾನ ಪ್ರವೇಶ ನಿರಾಕರಣೆ: ವ್ಯಕ್ತಿ ಬಂಧನ

ಮೈಮೇಲೆ ದೇವರು ಬಂದಂತೆ ನಾಟಕವಾಡಿದ ವ್ಯಕ್ತಿಯೊಬ್ಬ, ದೇವಸ್ಥಾನಕ್ಕೆ ಬಂದಿದ್ದ ದಲಿತ ನವದಂಪತಿಯನ್ನು ಹೊರಗೆ ಕಳುಹಿಸುವ ಮೂಲಕ ಅಸ್ಪೃಶ್ಯತೆ ಆಚರಣೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋಣಿ ತುಮಕೂರಿನಲ್ಲಿ (ಫೆ.20) ನಡೆದಿದೆ. ಗೃಹ...

ಜಾತಿವಾದಿ ಹೇಳಿಕೆ: ಜೆಎನ್‌ಯು ಉಪಕುಲಪತಿ ರಾಜೀನಾಮೆಗೆ ವಿದ್ಯಾರ್ಥಿ ಸಂಘ ಆಗ್ರಹ

ದೆಹಲಿಯ ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯದ (ಜೆಎನ್‌ಯು) ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು 'ದ ಸಂಡೇ ಗಾರ್ಡಿಯನ್' ಯೂಟ್ಯೂಬ್‌ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ 'ಜಾತಿ ಮತ್ತು ವಿಕ್ಟಿಮ್ ಕಾರ್ಡ್' ಕುರಿತು ನೀಡಿದ ಹೇಳಿಕೆ...

10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ : ದಂಪತಿಗೆ ಮರಣದಂಡನೆ

ಸುಮಾರು 10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದಂಪತಿಗೆ ಮರಣದಂಡನೆ ವಿಧಿಸಿ ಉತ್ತರ ಪ್ರದೇಶದ ಬಂಡಾ ವಿಶೇಷ ಪೋಕ್ಸೋ ನ್ಯಾಯಾಲಯ ಶುಕ್ರವಾರ (ಫೆ.20) ಆದೇಶಿಸಿದೆ. ಉತ್ತರ ಪ್ರದೇಶದ...

ರಾಜ್ಯಸಭೆ ಚುನಾವಣೆ : ಬಿಹಾರದಲ್ಲಿ ಕಿಂಗ್ ಮೇಕರ್ ಆದ ಓವೈಸಿ ಪಕ್ಷ

ಮಾರ್ಚ್ 16ರಂದು ನಡೆಯಲಿರುವ ಬಿಹಾರದ ಐದು ರಾಜ್ಯಸಭಾ ಸ್ಥಾನಗಳ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು 'ಕಿಂಗ್ ಮೇಕರ್' ಆಗಿ ಹೊರಹೊಮ್ಮಿದೆ. ಬಿಹಾರದಲ್ಲಿ ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು ಕನಿಷ್ಠ...

ದೆಹಲಿ : ಪ್ರಧಾನಿ ಮನೆ ಬಳಿಯ ಕೊಳಗೇರಿಗಳ 717 ಕುಟುಂಬಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್

ನವದೆಹಲಿಯ ಪ್ರಧಾನಿ ನಿವಾಸದ ಬಳಿಯ ಮೂರು ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಏಳುನೂರ ಹದಿನೇಳು ಕುಟುಂಬಗಳು ಮಾರ್ಚ್ 6ರೊಳಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ದರಾಗುವಂತೆ ಎಚ್ಚರಿಕೆ ನೀಡಲಾಗಿದೆ...