Homeಮುಖಪುಟಒಳ ಮೀಸಲಾತಿ: ಕಣ್ಣ ಗಾಯವನರಿಯುವ ಕ್ರಮ - ಹುಲಿಕುಂಟೆ ಮೂರ್ತಿ

ಒಳ ಮೀಸಲಾತಿ: ಕಣ್ಣ ಗಾಯವನರಿಯುವ ಕ್ರಮ – ಹುಲಿಕುಂಟೆ ಮೂರ್ತಿ

ಕರ್ನಾಟಕದ ನೆಲ ರೂಪಿಸಿಕೊಂಡಿರುವ ದಲಿತ ಅಸ್ಮಿತೆಯು ಹೊಲೆಯರಿಲ್ಲದೆ ಮಾದಿಗರನ್ನು ಹಾಗೂ ಮಾದಿಗರಿಲ್ಲದೆ ಹೊಲೆಯರನ್ನೂ ಕಲ್ಪಿಸಿಕೊಳ್ಳಲು ಬರುವುದಿಲ್ಲ.

- Advertisement -
- Advertisement -

ಎರಡು ದಶಕಗಳಿಗೂ ಮಿಕ್ಕಿದ ಮೀಸಲಾತಿ ವರ್ಗೀಕರಣದ ಹೋರಾಟಕ್ಕೆ ಇದೀಗ ಹೊಸ ಹೊರಳು ದಕ್ಕಿದೆ. ಕರ್ನಾಟಕದ ಹೊಲೆಯ- ಮಾದಿಗ ಮತ್ತು ಇತರ ಸಮುದಾಯಗಳ ಹಂಚಿ ಉಣ್ಣುವ ಕನಸಿಗೆ ರೆಕ್ಕೆ ಬಂದಿದೆ. ದಲಿತರ ಇಪ್ಪತ್ತೆರಡು ವರ್ಷಗಳ ಹಕ್ಕೊತ್ತಾಯದ ಕಾರಣಕ್ಕೆ ಕರ್ನಾಟಕ ಸರ್ಕಾರ ನೇಮಿಸಿದ್ದ ಮೂರ್ನಾಲ್ಕು ಸಮಿತಿಗಳಲ್ಲಿ ಜಸ್ಟೀಸ್ ಸದಾಶಿವ ಅವರ ನೇತೃತ್ವದ ಆಯೋಗ ಸಲ್ಲಿಸಿದ ಒಳ ಮೀಸಲಾತಿಯ ವರದಿಗೆ ಸುಪ್ರೀಂ ಕೋರ್ಟಿನ ಆದೇಶದಿಂದ ಇದೀಗ ಜೀವ ಬಂದಿದೆ.

ಶತಮಾನಗಳ ಗಾಯವನ್ನು ಬಾಬಾ ಸಾಹೇಬರ ಸಂವಿಧಾನ ಮಾಯಿಸುತ್ತದೆ ಎಂದು ನಂಬಿದ ದಲಿತರಿಗೆ ಬರೆಯ ಮೇಲೆ ಬರೆ ಬೀಳುತ್ತಲೇ ಇವೆ. ಸಾಮುದಾಯಿಕ ಆತ್ಮಜ್ಞಾನದ ಒಳಗಣ್ಣಿನ ಜ್ಞಾನಧಾರೆಗಳು ಬತ್ತಿಹೋಗಿ, ಜಲ ಸಂಸ್ಕೃತಿಯ ತಾಯಿಬೇರಿಗೆ ಬೆಂಕಿ ತಗುಲಿದೆ. ಶತಮಾನಗಳ ಹಿಂದಿನ ಕೊಲೆಗಳು, ಅತ್ಯಾಚಾರಗಳು ಮರುಕಳಿಸುತ್ತಿವೆ. ಸಮಕಾಲೀನ ಬಿಕ್ಕಟ್ಟುಗಳಿಗೆ ಮೈಕೊಟ್ಟು ಅಭ್ಯಾಸವಿಲ್ಲದ ದಲಿತ ಯುವವರ್ಗ ಹೊಸಕಾಲದ ಹೊಡೆತಗಳಿಗೆ ಬೆಚ್ಚಿಬಿದ್ದಿದೆ. ಈ ಸಂದರ್ಭದಲ್ಲಿ ಒಳಮೀಸಲಾತಿಯ ಕೂಗು ಜೋರಾಗಿರುವುದಕ್ಕೂ, ದಲಿತ ಸಮುದಾಯದ ನಿರ್ಣಾಯಕ ಹೋರಾಟಕ್ಕೂ ನೇರಾನೇರ ಸಂಬಂಧವಿದೆ.

ಜಸ್ಟೀಸ್ ಸದಾಶಿವ ವರದಿ ತಯಾರಾದ ದಿನದಿಂದಲೂ ಒಳಮೀಸಲಾತಿಯ ಹೋರಾಟವನ್ನು ದಲಿತರೊಳಗಿನ ಎಡಗೈ ಪಂಗಡವೆಂದು ಗುರುತಿಸಿಕೊಂಡಿರುವ ಮಾದಿಗ ಸಮುದಾಯ ನಡೆಸಿಕೊಂಡು ಬರುತ್ತಿದೆ. ಕರ್ನಾಟಕದ ದಲಿತರ ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿರುವ ಮಾದಿಗ ಸಮುದಾಯ ಸಹಜವಾಗಿ ಒಳ ಮೀಸಲಾತಿಯ ಪರವಾದ ಹೋರಾಟಕ್ಕೆ ನಿಂತಿದೆ. ಆರ್ಥಿಕವಾಗಿ ಹೊಲೆಯ ಸಮುದಾಯಕ್ಕಿಂತಲೂ ಬಹಳ ಹಿಂದೆ ಇರುವ ಮಾದಿಗ ಸಮುದಾಯ ಸದಾಶಿವ ಆಯೋಗದ ವರದಿಯು ತನ್ನನ್ನು ಉಳಿಸುವ ಸಂಜೀವಿನಿ ಎಂದೇ ಭಾವಿಸಿದೆ. ಈ ಭಾವನೆ ಸತ್ಯವೂ ಆಗಿದೆ. ಪ್ರಭುತ್ವದ ಒಡೆದು ಆಳುವ ನೀತಿಯಿಂದಾಗಿ ಹೊಲೆಯ ಮಾದಿಗ ಸಮುದಾಯಗಳ ನಡುವೆ ಎದ್ದಿದ್ದ ಗೋಡೆಯನ್ನು ಇಪ್ಪತ್ತು ವರ್ಷಗಳಿಂದಲೂ ಕೆಡವುತ್ತಲೇ ಬಂದಿರುವ, ದಲಿತ ಸಂಘರ್ಷ ಸಮಿತಿಯ ತಾತ್ವಿಕತೆಯಲ್ಲಿ ನಂಬಿಕೆಯಿಟ್ಟಿರುವ ಎರಡೂ ಸಮುದಾಯಗಳ ನಾಯಕರು ಹೊಸ ಕಾಲದ ಕವಲುಗಳಿಗೆ ಕಿವಿಕೊಡದೆ ತಮ್ಮೊಳಗೇ ಕಟ್ಟಿಕೊಂಡ ಈ ಹೋರಾಟದ ಅಲೆ ಇದೀಗ ಇಡೀ ದೇಶಕ್ಕೇ ಮಾದರಿಯಾಗಲಿದೆ. ರಾಜಕೀಯ ಹಿತಾಸಕ್ತಿಗಳಿಗೆ ಬಗ್ಗುವ, ಆ ಮೂಲಕ ಸಮುದಾಯಗಳ ನೈಜ ಹಿತಾಸಕ್ತಿಯನ್ನು ಹಿನ್ನೆಲೆಗೆ ಸರಿಸುವ ಪ್ರಯತ್ನಗಳು ಈ ಹೋರಾಟವನ್ನು ದಿಕ್ಕುತಪ್ಪಿಸಲು ಸಾಧ್ಯವಾಗದೇ ಹೋಗಿದ್ದು ದಲಿತರ ಬದುಕಿನ ಆಶಾಕಿರಣವೆಂದೇ ಭಾವಿಸಬೇಕಿದೆ.

ಇದನ್ನೂ ಓದಿ: ಎಲ್ಲರನ್ನೂ ದಾಟಿ ಮುಂದಕ್ಕೆ ಸಾಗಬೇಕಿದೆ ಒಳಮೀಸಲಾತಿ ಹೋರಾಟ – ಭಾಸ್ಕರ್ ಪ್ರಸಾದ್

ಮೀಸಲಾತಿ ವರ್ಗೀಕರಣದ ಮಹತ್ವ:

ಬಾಬಾ ಸಾಹೇಬರ ಕನಸಿನ ಸಂವಿಧಾನ ಅಂಚಿನ ಸಮುದಾಯಗಳನ್ನು ಮೇಲೆತ್ತಲು ಮೀಸಲಾತಿಯ ಮೀಟುಗೋಲುಗಳನ್ನು ನೀಡಿದ್ದು ಬಹಳ ಸಶಕ್ತವಾದ ಕಾರ್ಯ ನಿರ್ವಹಿಸಿತು ಎಂದು ಹೇಳಲಾಗದಿದ್ದರೂ ದಲಿತ ಸಮುದಾಯ ಕೊಂಚ ಮಟ್ಟಿಗೆ ಉಸಿರಾಡಲು ಸಾಧ್ಯವಾಯಿತು; ಆದರೆ, ಆಳುವ ವರ್ಗಗಳು ಒಲ್ಲದ ಮನಸ್ಸಿನಿಂದ ಜಾರಿಗೆ ತಂದ ಸಾಂವಿಧಾನಿಕ ಹಕ್ಕುಗಳು ದಲಿತರೊಳಗೇ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗಗಳನ್ನು ಸೃಷ್ಟಿಸಿ ‘ತಿಂದವನೇ ತಿನ್ನಲು ಯತ್ನಿಸುವ ಕಾಳ’ ಅನ್ನುವ ರೀತಿಯ ಪ್ರಮಾದಗಳಿಗೆ ಎಡೆಮಾಡಿಕೊಟ್ಟವು. ಇದರ ಪರಿಣಾಮವಾಗಿ ಅರವತ್ತು ವರ್ಷಗಳಲ್ಲಿ ಆಗಬೇಕಿದ್ದ ಬದಲಾವಣೆಯ ಪ್ರಮಾಣ ತೀರಾ ಕೆಳಮಟ್ಟದಲ್ಲಿ ಕಾಣುವಂತೆ ಆಯಿತು. ಈ ಪ್ರಮಾದಗಳನ್ನು ಒಳ ಮೀಸಲಾತಿ ಸರಿ ಪಡಿಸಿಬಿಡಬಹುದೆಂಬ ಭ್ರಮೆಯೇನೂ ಬೇಡವಾದರೂ ರಾಜ್ಯದ ಎರಡು ಅಸ್ಪೃಶ್ಯ ಸಮುದಾಯಗಳ ನಡುವಿನ ಸಾಂಸ್ಕೃತಿಕ ಸಾವಯವ ಬಾಂಧವ್ಯ ಗಟ್ಟಿಗೊಳ್ಳಲಿಕ್ಕಾದರೂ ಇದು ಸಾಧ್ಯವಾಗಬೇಕಿದೆ. ಈಗಿರುವ ಒಟ್ಟು ಹದಿನೈದು ಶೇಕಡಾವರು ಮೀಸಲಾತಿಯಲ್ಲಿ ನಾಲ್ಕು ಶೇಕಡಾ ಜನಸಂಖ್ಯೆಯಲ್ಲಿರುವ ಸ್ಪೃಶ್ಯ ದಲಿತ ಸಮುದಾಯಗಳು ಹೆಚ್ಚು ಪಾಲನ್ನು ಬಳಸಿಕೊಂಡಿರುವುದು ಭಾರತೀಯ ಸಾಮಾಜಿಕ ವ್ಯವಸ್ಥೆಗೆ ಹಿಡಿದ ಕನ್ನಡಿಯೇ ಆಗಿದೆ. ಅಂದರೆ ಒಬ್ಬರನ್ನು ತುಳಿದು ಬದುಕುವ ಬ್ರಾಹ್ಮಣ್ಯದ ಅವಕಾಶವಾದಿತನ ಈ ಸಮುದಾಯಗಳ ನಡುವೆಯೂ ಕೆಲಸ ಮಾಡಿದೆ. ಈ ಅಸಮಾನ ಹಂಚಿಕೆಗೆ ಅಸ್ಪೃಶ್ಯ ಜಾತಿಗಳ ಶೈಕ್ಷಣಿಕ ಮಟ್ಟವೂ ಕಾರಣವಿರಬಹುದು; ಆದರೆ, ಆ ಶೈಕ್ಷಣಿಕ ಅವಕಾಶಗಳೂ ಸದರಿ ಸಮುದಾಯಗಳಿಗೆ ಎಟುಕದೇ ಇರುವುದು ಕೂಡ ಈ ಬ್ರಾಹ್ಮಣ್ಯದ ಅವಕಾಶಾದಿತನದ ಫಲವೇ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.

ದಲಿತ ಸಂಘಟನೆಗಳ ಶಕ್ತಿ ಮತ್ತು ಮಿತಿ:

ಈಗ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿರುವ ಅಷ್ಟೂ ಸಮುದಾಯಗಳಲ್ಲಿ ಹೊಲೆಯ ಮಾದಿಗರ ಸಂಖ್ಯೆ ದೊಡ್ಡದಿದ್ದರೂ, ಆ ಸಮುದಾಯಗಳಲ್ಲಿ ಶಾಲೆಯ ಮುಖ ನೋಡದ ಹಾಗೂ ಅರ್ಧದಲ್ಲೇ ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಹೆಚ್ಚಿದೆ. ಅದರಲ್ಲೂ ಈ ಪ್ರಮಾಣ ಮಾದಿಗರಲ್ಲಿ ಹೆಚ್ಚಿದೆ. ಶೈಕ್ಷಣಿಕ ಅರ್ಹತೆಗಳು ಮೀಸಲಾತಿಯ ಫಲಾನುಭವಿಗಳನ್ನು ಸೃಷ್ಟಿಸುವ ನಮ್ಮ ಸಂವಿಧಾನದ ಚಿಕಿತ್ಸಕ ದೃಷ್ಟಿಕೋನ ನಮ್ಮ ಸಮುದಾಯಗಳಿಗೆ ಮತ್ತವುಗಳ ಮುಂದಾಳುಗಳಿಗೆ ಇನ್ನೂ ಅರ್ಥವಾಗದಿರುವುದು ದುರಂತವೇ ಸರಿ. ವೃತ್ತಿ ಕೌಶಲ್ಯ, ರಾಜಕಾರಣ ಮುಂತಾದ ವಲಯಗಳಲ್ಲಿ ದಲಿತರು ಸ್ಪರ್ಧೆಗೆ ಇಳಿಯಬೇಕಾದರೆ ಅವರ ಶೈಕ್ಷಣಿಕ ಹಿನ್ನೆಲೆ ಅಥವಾ ಆರ್ಥಿಕ ಹಿನ್ನೆಲೆ ಮುಖ್ಯವಾಗುತ್ತದೆ. ಇಂಥಾ ಕಡೆಗಳಲ್ಲಿ ಬಲಿಷ್ಟ ಕೌಟುಂಬಿಕ ಹಿನ್ನೆಲೆಯಿರುವವರು ಮುನ್ನೆಲೆಗೆ ಬಂದುಬಿಡುತ್ತಾರೆ. ಆಗ ಮೀಸಲಾತಿಯ ಉಪಯೋಗ ಅನಾಯಾಸವಾಗಿ ಅವರಿಗೇ ದಕ್ಕುತ್ತದೆ. ಎಪ್ಪತ್ತರ ದಶಕದಲ್ಲಿ ದಲಿತರ ಮೇಲೆ ನಡೆಯುವ ಜಾತಿ ದೌಜ್ರ್ಯನ್ಯಗಳ ವಿರುದ್ಧ ಪ್ರತಿಭಟಿಸಲು ಹುಟ್ಟಿಕೊಂಡ ದಲಿತ ಸಂಘಟನೆಗಳು ತಮ್ಮ ಸಮುದಾಯಗಳಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಾಗಲು ಹಾಗು ದಲಿತ ಯುವಜನರಲ್ಲಿ ವೃತ್ತಿ ಕೌಶಲ್ಯವನ್ನು ಬೆಳೆಸುವ ಶೈಕ್ಷಣಿಕ ವಾತಾವರಣವನ್ನು ಸೃಷ್ಟಿಮಾಡಲು ಒತ್ತುಕೊಟ್ಟಿದ್ದರೆ ಇಷ್ಟು ಹೊತ್ತಿಗೆ ಏಕಕಾಲಕ್ಕೆ ದಲಿತರ ನಿರುದ್ಯೋಗ ಸಮಸ್ಯೆಯೊಂದಿಗೆ ಬಡತನ, ಅನಕ್ಷರತೆ ಮತ್ತು ಆರ್ಥಿಕ ಸಾಮಾಜಿಕ ಸಮಸ್ಯೆಗಳನ್ನು ಹೋಗಲಾಡಿಸಬಹುದಿತ್ತು. ಆದರೆ ಹಾಗೆ ಆಗಲಿಲ್ಲ; ಹಾಗೆ ಆಗುವುದೂ ಸಾಧ್ಯವಿರಲಿಲ್ಲ ಎಂಬುದು ಬೇರೆ ಮಾತು. ಯಾಕೆಂದರೆ, ಸಾಂವಿಧಾನಿಕ ಹಕ್ಕುಗಳನ್ನು ಅರ್ಥೈಸಿಕೊಂಡ ದಲಿತ ಯುವ ಸಮುದಾಯ ಕಾಲಾಂತರದಿಂದ ಅನೂಚಾನವಾಗಿ ನಡೆದುಕೊಂಡು ಬರುತ್ತಿದ್ದ ದೌರ್ಜನ್ಯಗಳಿಗೆ ಎದೆಕೊಟ್ಟು ನಿಲ್ಲಬೇಕಾಯಿತು. ಸಮುದಾಯವನ್ನು ಭೌತಿಕವಾಗಿ ಉಳಿಸುವ ನಿಟ್ಟಿನಲ್ಲಿ ಅವರು ಹೋರಾಟ ರೂಪಿಸಬೇಕಾದುದ್ದರಿಂದ ತಕ್ಷಣಕ್ಕೆ ದಲಿತರ ಮೇಲೆ ನಡೆಯುತ್ತಿದ್ದ ಹಲ್ಲೆಗಳನ್ನು ತಡೆಗಟ್ಟಲು ಪರಿಪಾಟಲು ಪಡಬೇಕಾಯಿತು ಮತ್ತು ಈ ಕಾರಣದಿಂದ ಅದೇ ಸಾಂವಿಧಾನಿಕ ಕಾನೂನುಗಳಿಗೆ ಕೊರಳೊಡ್ಡಬೇಕಾಯಿತು. ಈ ಕಾರಣದಿಂದಾಗಿ ದಲಿತ ಸಂಘರ್ಷ ಸಮಿತಿಯ ಆಶಯವೂ ಆಗಿದ್ದ ಶಿಕ್ಷಣದ ಕಡೆ ಹೆಚ್ಚು ಒತ್ತು ಕೊಡಲಾಗಲಿಲ್ಲ. ಕರ್ನಾಟಕದಲ್ಲಿ ನಡೆದ ದಲಿತ ಹೋರಾಟಗಳಿಗೆ ಅಂಬೇಡ್ಕರ್ ಚಿಂತನೆಗಳು ದಕ್ಕಲು ಸಮಯ ತೆಗೆದುಕೊಂಡಿದ್ದರಿಂದ, ಅದೇ ಸಮಯಕ್ಕೆ ಕಮ್ಯುನಿಷ್ಟ್ ಸಿದ್ಧಾಂತಗಳು ದಲಿತ ಹೋರಾಟಗಳಿಗೆ ಸ್ಪೂರ್ತಿಯಾದುದ್ದರಿಂದ ಈ ಪ್ರಮಾದ ಉಂಟಾಯಿತು.

ಸದಾಶಿವ ಆಯೋಗದ ವರದಿಗೆ ವಿರೋಧ: ಛಲವಾದಿ ಕ್ಷೇಮಾಭಿವೃದ್ಧಿ ಸಂಘದ ನಡೆಗೆ ತೀವ್ರ ಖಂಡನೆ

ಜೊತೆಗೂಡಿ ಹೋರಾಟ:

ದಲಿತ ಸಮುದಾಯ ಈಗಲೂ ಎದುರುಗೊಳ್ಳುತ್ತಿರುವ ಮಾನಸಿಕ ಹಾಗೂ ದೈಹಿಕ ಮಟ್ಟದ ಹಲ್ಲೆಗಳನ್ನು ಕಾನೂನಾತ್ಮಕ ಚೌಕಟ್ಟಿನಲ್ಲಿ ನಿಲ್ಲಿಸಿಬಿಡಲು ಅಸ್ಪೃಶ್ಯ ಸಮುದಾಯಗಳು ಮುಂದಾಗಬೇಕು. ಅದಕ್ಕಾಗಿ ‘ದಲಿತ್ ಮ್ಯಾನಿಫೆಸ್ಟೋ’ ರೂಪಿಸಿ ರಾಜಕೀಯ ಪಕ್ಷಗಳಿಗೆ ದಲಿತ ಸಮುದಾಯವನ್ನು ಬಿಟ್ಟು ರಾಜಕಾರಣ ಮಾಡಲಾಗದ ಅನಿವಾರ್ಯತೆ ಸೃಷ್ಟಿಸಬೇಕು. ಸದಾಶಿವ ಆಯೋಗದ ವರದಿ ಜೊತೆಗೆ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಅಷ್ಟೂ ಜಾತಿಗಳ ಸಾಮಾಜಿಕ, ಆರ್ಥಿಕ ಬೆಳವಣಿಗೆ ಹಾಗೂ ಶೈಕ್ಷಣಿಕ ಮಾಹಿತಿಗಳನ್ನು ಕಲೆಹಾಕಿ ಜಾತಿವಾರು ಮೀಸಲಾತಿಯನ್ನು ವೈಜ್ಞಾನಿಕವಾಗಿ ಹಂಚುವ ಬಗ್ಗೆ ಸರ್ಕಾರಗಳಿಗೆ ಮನವರಿಕೆ ಮಾಡಿಕೊಡಬೇಕು. ಈ ನಿಟ್ಟಿನ ಹೋರಾಟವು ದಲಿತರ ಅಸ್ಮಿತೆಯನ್ನೇ ಇಲ್ಲವಾಗಿಸಿದ ಮೀಸಲಾತಿ ವಿರೋಧಿ ಆಂದೋಲನವಾಗಿ ಮಾರ್ಪಡುವ ಬಗ್ಗೆ ಎಲ್ಲರೂ ಎಚ್ಚರದಿಂದ ಇರಬೇಕಿದ್ದು, ಎಲ್ಲಾ ಸಮುದಾಯಗಳ ನಡುವೆ ಬಾಂಧವ್ಯವನ್ನು ಗಟ್ಟಿಗೊಳಿಸಿಕೊಳ್ಳಬೇಕು. ಹೊಲೆಯ ಮಾದಿಗರಲ್ಲಿರುವ ಬೆಳಕೇ ಕಾಣದ ಉಪ ಪಂಗಡಗಳನ್ನು ಮುಖ್ಯವಾಹಿನಿಗೆ ತರುವ ಕಾರ್ಯಕ್ರಮಗಳನ್ನು ರೂಪಿಸಬೇಕು. ಕೊರಚ, ಕೊರಮ ಥರದ ಸ್ಪೃಶ್ಯವಾದರೂ ಸಂಕಷ್ಟದಲ್ಲಿರುವ ಸಮುದಾಯಗಳ ಸಾಮಾಜಿಕ ಒಳಗೊಳ್ಳುವಿಕೆಯ ಸಾಧ್ಯತೆಗಳನ್ನು ದಲಿತ ಹೋರಾಟದ ಮುಂದಾಳತ್ವ ವಹಿಸಿರುವ ಮುನ್ನೆಲೆಯ ಸಮುದಾಯಗಳಿಗೆ ಅರ್ಥವಾಗುವಂತೆ ಹಾಗೂ ಆ ಸಮುದಾಯಗಳಿಗೆ ಅನ್ಯಾಯವಾಗದಂತೆ ಅರ್ಥಮಾಡಿಸುವ ಪ್ರಯತ್ನವಾಗಬೇಕು. ಇದರ ಜತೆಜತೆಗೆ ಜಾರಿಯಾಗಬೇಕಿರುವ ಸದಾಶಿವ ಆಯೋಗದ ವರದಿಯನ್ನು ಹೊಲೆಮಾದಿಗೇತರ ಸಮುದಾಯಗಳ ಆಶಯದಂತೆ ಚರ್ಚೆಗೊಳಪಡಿಸಿ ಜಾರಿಯ ನಂತರದ ಸಾಧಕ ಬಾಧಕಗಳನ್ನು ಮನಗಾಣಬೇಕು. ಸದ್ಯ ಈ ಕೆಲಸವನ್ನು ಮಾದಿಗ ಸಮುದಾಯದ ಬುದ್ಧಿಜೀವಿಗಳು ಮಾಡುತ್ತಿದ್ದರೂ ಅವರ ಮಾತುಗಳನ್ನು ಕೇಳಿಸಿಕೊಳ್ಳದ ಹಾಗೆ ಕೆಲವು ಹಿತಾಸಕ್ತಿಗಳು ತಡೆಯುತ್ತಿರುವುದರಿಂದ, ಹೊಲೆ ಮಾದಿಗರಿಬ್ಬರೂ ಹಿಂದೆ ಸರಿಯದೆ ‘ಅರ್ಥ ಮಾಡಿಸುವ’ ಪ್ರಯತ್ನವನ್ನು ಮುಂದುವರಿಸಬೇಕು.

ಹೊಲೆಯ ಮಾದಿಗ ಸಮುದಾಯಗಳು ನಾಡಿನ ದಲಿತ ಹೋರಾಟಗಳ ಹಾದಿಯಲ್ಲಿ ಗಟ್ಟಿಹೆಜ್ಜೆ ಇಟ್ಟಿರುವಿದರಿಂದ ಸ್ಪೃಶ್ಯ ಸಮುದಾಯಗಳ ನಾಯಕರು ಅವರಿಬ್ಬರ ಮಾತುಗಳಿಗೆ ಹೆಚ್ಚು ಮಾನ್ಯತೆ ಕೊಡಬೇಕಿದೆ. ಇನ್ನೂ ಅರೆಪ್ರಜ್ಞಾವಸ್ಥೆಯಲ್ಲಿರುವ ಹತ್ತಾರು ಸಮುದಾಯಗಳಿಗೆ ಒಳಮೀಸಲಾತಿಯ ಲಾಭ ಸಿಗುವಂತೆ ಮಾಡಬೇಕಾದ ಜವಾಬ್ದಾರಿ ಈಗ ಮುಂದೆ ನಿಂತಿರುವ ಹೋರಾಟಗಾರರ ಮೇಲಿದೆ. ಎಸ್ಸಿ ಮೀಸಲಾತಿಯಲ್ಲಿ ಅತಿ ಹೆಚ್ಚು ಸೌಲಭ್ಯ ಪಡೆದಿರುವ ಹೊಲೆಯ ಸಮುದಾಯ ಈಗಲಾದರೂ ಮಾದಿಗರೊಂದಿಗೆ ಕಲೆತು ಸಮುದಾಯಗಳ ಅಭಿವೃದ್ಧಿಗೆ ದುಡಿಯದಿದ್ದರೆ ಒಂದೊತ್ತಿನ ಕೂಳನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕಾಗುತ್ತದೆ. ಜೊತೆಗೆ, ಹೊಲೆಯ ಮಾದಿಗ ಸಮುದಾಯಗಳ ಬಗ್ಗೆ ಹಿರಿಯ ದಲಿತ ನಾಯಕರು ಆಡುತ್ತಿರುವ ‘ಸಂಬಂಧ’ದ ಮಾತುಗಳು ಅಷ್ಟು ತೆಳುವಾದುವಲ್ಲ; ಎಷ್ಟೇ ಕಷ್ಟ ಬಂದರೂ ಅವರ ಆಶಯದಂತೆ ನಾವೆಲ್ಲರೂ ಬದುಕಲೇಬೇಕು. ಕರ್ನಾಟಕದ ನೆಲ ರೂಪಿಸಿಕೊಂಡಿರುವ ದಲಿತ ಅಸ್ಮಿತೆಯು ಹೊಲೆಯರಿಲ್ಲದೆ ಮಾದಿಗರನ್ನು ಹಾಗೂ ಮಾದಿಗರಿಲ್ಲದೆ ಹೊಲೆಯರನ್ನೂ ಕಲ್ಪಿಸಿಕೊಳ್ಳಲು ಬರುವುದಿಲ್ಲ; ಈ ಎರಡೂ ಸಮುದಾಯಗಳು ಪಾರಂಪರಿಕ ಪಣಕಟ್ಟುಗಳ ನಿರರ್ಥಕ ವ್ಯಾಜ್ಯಗಳನ್ನು ಬದಿಗೊತ್ತಿ ಸಮಕಾಲೀನ ತಲ್ಲಣಗಳಿಗೆ ಎದುರುಗೊಳ್ಳಬೇಕಾದರೆ ಒಳ ಮೀಸಲಾತಿಯು ಜಾರಿಯಾಗಬೇಕಿದೆ. ಅದು ಸದಾಶಿವ ಆಯೋಗದ ವರದಿಯಿಂದಲೋ ಮತ್ತೊಂದರಿಂದಲೋ ಅಂತೂ ಆಗಲೇಬೇಕಿದೆ ಎಂಬುದನ್ನು ಎರಡೂ ಸಮುದಾಯಗಳು ಅರ್ಥ ಮಾಡಿಕೊಳ್ಳಬೇಕಿದೆ ಮತ್ತು ಅರ್ಥ ಮಾಡಿಕೊಂಡಿವೆ.

ದಶಕಗಳಿಂದ ದೇಶವನ್ನಾಳಿದ ಪ್ರಭುತ್ವಗಳು ರಾಜಕೀಯ ಮೀಸಲಾತಿಯ ಕಾರಣಕ್ಕೆ ದಲಿತರಿಗೆ ಹಕ್ಕು ನೀಡಿದವು ಅನ್ನುವುದಕ್ಕಿಂತ ಬಳಸಿಕೊಂಡವು ಅನ್ನುವುದೇ ಸರಿಯಾಗುತ್ತದೆ. ದೇಶದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ದಲಿತ ಸಮುದಾಯಗಳು ಈ ಪ್ರಭುತ್ವಗಳನ್ನು ನಿಭಾಯಿಸುವ ಕೀಲಿಕೈಗಳನ್ನು ತಮ್ಮದಾಗಿಸಿಕೊಂಡಿಲ್ಲದ ಕಾರಣದಿಂದ ಇಂದಿಗೂ ಬೀದಿಯಲ್ಲಿ ನಿಂತು ವ್ಯಥೆ ಪಡುವಂತಾಗಿದೆ. ಈಗಲಾದರೂ ವಶೀಲಿ ಬಾಜಿ ರಾಜಕಾರಣವನ್ನು ಬಿಟ್ಟು ಸಮರ್ಥ ರಾಜಕಾರಣಕ್ಕೆ ಈ ಸಮುದಾಯಗಳು ಮುಂದಾಗದಿದ್ದರೆ ಯಾವ ಆಯೋಗದ ವರದಿಗಳೂ ನಮ್ಮನ್ನು ಕಾಯಲಾರವು.

  • ಹುಲಿಕುಂಟೆ ಮೂರ್ತಿ

    (ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆಯ ಮೂರ್ತಿ, ಕನ್ನಡ ಅಧ್ಯಾಪಕರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂಎ ಮಾಡುವ ಮುಂಚಿನಿಂದಲೂ ಸಾಮಾಜಿಕ ಚಳವಳಿಗಳಲ್ಲಿ ಕ್ರಿಯಾಶೀಲರು. ‘ನೀಲಿ ಗ್ಯಾನ’ ಕವನ ಸಂಕಲನಕ್ಕೂ ಮುಂಚೆಯೇ ಕವಿಯಾಗಿ ಗುರುತು ಪಡೆದುಕೊಂಡಿದ್ದರು. ಕೌದಿ ಚಿತ್ರದ ಗೀತರಚನೆಗಾಗಿ ರಾಜ್ಯಪ್ರಶಸ್ತಿ ಪಡೆದಿದ್ದಾರೆ.)


ಇದನ್ನೂ ಓದಿ: ಒಳಮೀಸಲಾತಿಯ ಕುರಿತು ಡಾ. ಬಿ.ಆರ್. ಅಂಬೇಡ್ಕರ್‌ರವರ ಆಶಯ ಎನು? – ಡಾ.ನರಸಿಂಹ ಗುಂಜಹಳ್ಳಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...