Homeಮುಖಪುಟಒಳಮೀಸಲಾತಿಯ ಕುರಿತು ಡಾ. ಬಿ.ಆರ್. ಅಂಬೇಡ್ಕರ್‌ರವರ ಆಶಯ ಎನು? - ಡಾ.ನರಸಿಂಹ ಗುಂಜಹಳ್ಳಿ

ಒಳಮೀಸಲಾತಿಯ ಕುರಿತು ಡಾ. ಬಿ.ಆರ್. ಅಂಬೇಡ್ಕರ್‌ರವರ ಆಶಯ ಎನು? – ಡಾ.ನರಸಿಂಹ ಗುಂಜಹಳ್ಳಿ

ಮೀಸಲಾತಿ ಮರುವರ್ಗೀಕರಣದ ಹೋರಾಟ ಯಾರ ವಿರುದ್ಧವು ಅಲ್ಲ. ಯಾರ ಹಕ್ಕನ್ನು ಕಸಿಯುವ ಉದ್ದೇಶವು ಇಲ್ಲ ಎಂದು ಒಳಮೀಸಲಾತಿ ಹೊರಾಟಗಾರರ ಅಭಿಮತವಾಗಿದೆ.

- Advertisement -
- Advertisement -

ಒಂದು ಜನಾಂಗ ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಭೌದ್ಧಿಕವಾಗಿ ಶತಶತಮಾನಗಳಿಂದ ಶೋಷಣೆಗೆ ಒಳಗಾಗಿ, ಸಂವಿಧಾನಾತ್ಮಕ ಸೌಲಭ್ಯಗಳಿಂದ ವಂಚಿತರಾದ ಸಮುದಾಯಕ್ಕೆ ಈ ಸ್ಥಿತಿಗಳಿಂದ ಬಿಡುಗಡೆಗೊಳಿಸಲು ಕೆಲವು ಸಂವಿಧಾನಿಕ ವಿಶೇಷ ಸೌಲಭ್ಯಗಳೇ ಮೀಸಲಾತಿ. ಇದರ ಗುರಿ ಸಾಮಾಜಿಕ ನ್ಯಾಯ. ಇಂದು ಸಮಾನತೆಯ ದೇಶ ಕಟ್ಟವುದಕ್ಕೆ ಭೂಮಿ ಮತ್ತು ಮೀಸಲಾತಿ ಇವರೆಡು ಬಹುಮುಖ್ಯವಾದದ್ದು.

ಸರಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಪರಿಶಿಷ್ಟ ಜಾತಿಗಳಿಗೆ ಸಂವಿಧಾನದತ್ತವಾಗಿ ಬಂದಿರುವ ಮೀಸಲಾತಿಯ ಶೇ. 15 ರಲ್ಲಿ ಮಾದಿಗ ಸಮುದಾಯಕ್ಕೆ ಸಿಗಬೇಕಾದ ಪ್ರಮಾಣ ಶೇ.8.ರಷ್ಟು. ಆದರೆ ಇದುವರೆಗೆ ದಕ್ಕಿರುವುದು ಕೇವಲ ಶೇ.2ರಷ್ಟು ಮಾತ್ರ ಎಂಬುದು ಮಾದಿಗರ ಅರೋಪವಾಗಿದೆ. ಪರಿಶಿಷ್ಟ ಜಾತಿಯಲ್ಲಿ ಬಹುಸಂಖ್ಯಾತರಾದ ನಮಗೆ ನ್ಯಾಯಯುತ ಮೀಸಲಾತಿ ದೊರೆತಿಲ್ಲವೆಂಬ ಅತೃಪ್ತಿಯಿದೆ. ನಮ್ಮ ಹೆಸರಿನಲ್ಲಿ ಬಲಿಷ್ಟ ದಲಿತ ಜಾತಿಯವರು ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆಂದು ಆರೋಪಿಸುತ್ತ ತಮಗೆ ಆದ ಈ ಅನ್ಯಾಯವನ್ನು ಸರಿಪಡಿಸಿಕೊಳ್ಳಲು ಸುಮಾರು 30 ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಇನ್ನೊಬ್ಬರ ಪಾಲು ನಮಗೆ ಬೇಡ. ನಮ್ಮ ಪಾಲಿನ ಹಕ್ಕನ್ನು ನಮಗೆ ಕೊಡಿಯೆಂದು ಒಳಮೀಸಲಾತಿಗಾಗಿ ಮಾದಿಗರು ರಾಜ್ಯದಲ್ಲಿ 1996 ರಿಂದ ಹೋರಾಟ ನಡೆಸಿದ್ದಾರೆ.

ಸರಕಾರ ರಚಿಸಿದ್ದ ಸದಾಶಿವ ಅಯೋಗವು 2012ರಲ್ಲಿ ವರದಿ ಸಲ್ಲಿಸದಾಗಿನಿಂದ ಅದರ ಪರ ಮತ್ತು ವಿರೋಧ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಮೀಸಲಾತಿ ಮರುವರ್ಗೀಕರಣದ ಹೋರಾಟ ಯಾರ ವಿರುದ್ಧವು ಅಲ್ಲ. ಯಾರ ಹಕ್ಕನ್ನು ಕಸಿಯುವ ಉದ್ದೇಶವು ಇಲ್ಲ ಎಂದು ಒಳಮೀಸಲಾತಿ ಹೊರಾಟಗಾರರ ಅಭಿಮತವಾಗಿದೆ. ಇದು ಒಡೆದು ಆಳುವ ನೀತಿಯಲ್ಲ. ಇದು ಹಂಚಿ ತಿನ್ನುವ ಮಾನವತವಾದ. ಒಳಮೀಸಲಾತಿಯನ್ನು ವಿರೋಧಿಸುವುದೆಂದರೆ ಮೀಸಲಾತಿಯನ್ನು ಮತ್ತು ಸಮಪಾಲು – ಸಮಬಾಳು ತತ್ವವನ್ನು ವಿರೋಧಿಸುವುದಕ್ಕೆ ಸಮನಾದದ್ದು ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಮಾಡುವ ಅಪಾಚಾರ ಸಹ ಹೌದು.

ಪರಿಶಿಷ್ಟ ಜಾತಿಯಲ್ಲಿರುವ ಮೀಸಲಾತಿಯನ್ನು ವಿಭಜಿಸಿದರೆ ದಲಿತರ ಒಗ್ಗಟ್ಟು ಹಾಳುಗುತ್ತಿದೆ ಎಂಬುದು ಸುಳ್ಳು. ಸಾಮಾಜಿಕ ನ್ಯಾಯಕ್ಕೆ ಭಂಗ ತರುವವರು ಇಂತಹ ಆರೋಪವನ್ನು ಮಾಡುತ್ತಾರೆ. ಸ್ವಾರ್ಥ ಮತ್ತು ಕೆಲವರು ತಮ್ಮ ಅನೂಕೂಲಕ್ಕೆ ತಕ್ಕ ಹಾಗೆ ಆಯೋಗದ ವರದಿಯ ಶಿಫಾರಸ್ಸುಗಳನ್ನು ಆರ್ಥೈಸಿಕೊಳ್ಳುತ್ತಿದ್ದಾರೆ. ಅದ್ದರಿಂದ ಸದಾಶಿವ ಅಯೋಗದ ವರದಿಯನ್ನು ಬಹಿರಂಗ ಚರ್ಚೆಗೆ ಬಿಡುಗಡೆ ಮಾಡಬೇಕು.

ಇದನ್ನೂ ಓದಿ: ಎಲ್ಲರನ್ನೂ ದಾಟಿ ಮುಂದಕ್ಕೆ ಸಾಗಬೇಕಿದೆ ಒಳಮೀಸಲಾತಿ ಹೋರಾಟ – ಭಾಸ್ಕರ್ ಪ್ರಸಾದ್

ಡಾ.ಬಿ.ಆರ್.ಅಂಬೇಡ್ಕರ್ ಅವರ ಅಶಯವು ಭಾರತದಲ್ಲಿ ಜನಸಂಖ್ಯೆಯಾಧಾರಿತ ಮೀಸಲಾತಿ ಹಂಚಿಕೆಯಾಗಬೇಕೆನ್ನುವುದು ವಾದವಾಗಿತ್ತು. ದಲಿತರು ಒಳ ಮೀಸಲಾತಿಯನ್ನು ಪಡೆದರೂ ವಿಘಟನೆಗೊಳ್ಳದೆ, ಈ ದೇಶದಲ್ಲಿ ಜಾತಿವ್ಯವಸ್ಥೆ, ಆಸ್ಪೃಶ್ಯತೆ ಇರುವವರೆಗೂ ಅವುಗಳ ವಿರುದ್ಧ ಮತ್ತು ಖಾಸಗಿ ವಲಯದಲ್ಲೂ ಮೀಸಲಾತಿಗಾಗಿ ಹೋರಾಟ ಮಾಡಬೇಕು. ಅದನ್ನು ಬಳಿಸಿಕೊಂಡು ಜಾತಿ ವಿನಾಶಮಾಡದೇ ಹೋದರೆ ಉಳಿಗಾಲವಿಲ್ಲ. ಜಾತಿ ಜಾತಿಗಳ ನಡುವಿನ ಸಮಾನತೆಯು ಜಾತಿಯನ್ನು ನಾಶಮಾಡುತ್ತದೆ ಎನ್ನುವುದನ್ನು ದಲಿತರು ಅರ್ಥಮಾಡಿಕೋಳ್ಳಬೇಕು.

ಇವತ್ತಿನವರೆಗೆ ದಲಿತರ ಮಿಸಲಾತಿಯನ್ನು ಹೊಲೆಯರು, ಮಾದಿಗರು, ಲಂಬಾಣಿಗಳು ಮತ್ತು ಭೋವಿಗಳು – ಈ ನಾಲ್ಕು ಜಾತಿಗಳ ಮಾತ್ರ ಹೆಚ್ಚು ಪಡೆದಿವೆ. ಪರಿಶಿಷ್ಟರಲ್ಲಿನ ಸುಡುಗಾಡು ಸಿದ್ದರು ಸೇರಿದಂತೆ ಆನೇಕ ಸಣ್ಣ ಸಣ್ಣ ದಲಿತ ಜಾತಿಗಳು ಈವರೆಗೂ ಶೇ.1 ರಷ್ಟು ಸಹ ಮೀಸಲಾತಿ ಸೌಲಭ್ಯ ಪಡೆದಿಲ್ಲ. ಜನಸಂಖ್ಯೆ ಆಧಾರದಲ್ಲಿ ಪರಿಶಿಷ್ಟರಲ್ಲಿ ಇರುವ 101 ಜಾತಿಗಳಿಗೆ ಈಗಿರುವ ಶೇ.15 ಮೀಸಲಾತಿಯನ್ನು ಸದಾಶಿವ ಆಯೋಗ ವಿಭಜಿಸಿಕೊಟ್ಟಿದೆ ಎನ್ನಲಾಗುತ್ತಿದೆ. ಇದರ ಪ್ರಕಾರ ಹಂಚಿಕೆ ಮಾಡಬೇಕು. ಇದು ಹಲವು ಸಣ್ಣ ಪರಿಶಿಷ್ಟ ಜಾತಿಗಳಿಗೆ ನೆರವಾಗಲಿದೆ. ಇದನ್ನು ಒಳಮೀಸಲಾತಿ ಎನ್ನಿ, ಮೀಸಲಾತಿ ಪುನರ್ ವಿಂಗಡನೆ ಎನ್ನಿ, ಮೀಸಲಾತಿ ಗುಂಪುಗಳು ಎನ್ನಿ, ಏನು ಬೇಕಾದರೂ ಹೇಳಿ, ಅದು ಸಂವಿಧಾನದ ಯಾವುದೇ ವಿಧಿಗಳ ಉಲ್ಲಂಘನೆಯಾಗುವುದಿಲ್ಲ.

ದಲಿತರಲ್ಲಿನ ಸ್ಪೃಶ್ಯ ಜಾತಿಗಳು ಅಸ್ಪೃಶ್ಯ ಸಮುದಾಯವನ್ನು ಸಹೋದರಂತೆ ಕಾಣಬೇಕು. ಮೀಸಲಾತಿ ಮತ್ತು ಒಳಮೀಸಲಾತಿ ಇದು ಒಂದು ಸಾಮಾಜಿಕ ನ್ಯಾಯ. ಸ್ಪೃಶ್ಯ ಜಾತಿಯವರು ಮತ್ತು ಸಾರ್ವಜನಿಕರು ಇದನ್ನು ಬೆಂಬಲಿಸಿ ಜಾರಿಗೆಗೋಳಿಸಲು ಸರಕಾರಕ್ಕೆ ಒತ್ತಾಯಿಸಬೇಕು.

ಮೀಸಲಾತಿ ಅಸಮರ್ಪಕ ವಿತರಣೆ, ಅಸಮಾನ ಹಂಚಿಕೆಯಿಂದ ದಲಿತ ಜಾತಿಗಳಲ್ಲಿ ಆಂತರಿಕ ಬಿಕ್ಕಟ್ಟು ಸೃಷ್ಟಿಯಾಗಿ ಸಂಬಂಧಗಳು ಕಳೆಯುತ್ತಿವೆ. ಆದ್ದರಿಂದ ಒಳಮೀಸಲಾತಿ ಕುರಿತು ದಲಿತರು ಒಟ್ಟಿಗೆ ಕುಳಿತು ಚರ್ಚಿಸಿಬೇಕು. ಇದನ್ನು ಲಾಭ- ನಷ್ಟದ ದೃಷ್ಟಿಯಿಂದ ಪರಿಗಣಿಸದೇ, ತಾಂತ್ರಿಕ ಕಾರಣಗಳಿಂದ ನೋಡದೇ ನ್ಯಾಯ, ಮಾನವೀಯ ಕಲ್ಪನೆಗಳಿಂದ ವಿಚಾರ ಮಾಡಬೇಕು. ಅದರ ಸಾಮಾಜಿಕ ಅರ್ಥಿಕ ಸಮಸ್ಯೆಗಳನ್ನು ಚರ್ಚಿಸಿ ಅನುಷ್ಟಾನಕ್ಕೆ ಒತ್ತಾಯಿಸಬೇಕು. ದಲಿತರಿಂದಲೇ ದಲಿತರಿಗೆ ಶೋಷಣೆಯಾಗಬಾರದು ಎಂದರೆ ಕೂಡಲೆ ಒಳಮೀಸಲಾತಿ ಜಾರಿಗೆ ತರಬೇಕು. ಮೀಸಲಾತಿ ವರ್ಗೀಕರಣ ಮಾಡಿದರೆ ದಲಿತರ ನಡುವೆ, ಜಾತಿ – ಜಾತಿಗಳ ನಡುವೆ ಸಮಾನತೆ, ಸೌಹರ್ದತೆ, ಜಾತ್ಯತೀತತೆ ಮತ್ತು ಸ್ನೇಹ ಬೆಳೆಯುತ್ತದೆ. ಸ್ಪೃಶ್ಯ ಜಾತಿಗಳು ಪಟ್ಟಭದ್ರ ಹಿತಶಕ್ತಿಗಳ ಕುತಂತ್ರಕ್ಕೆ ಬಲಿಯಾಗದೇ ಮೀಸಲಾತಿ ವರ್ಗೀಕರಣಕ್ಕೆ ಒತ್ತಾಯಿಸಬೇಕು.

  • ಡಾ.ನರಸಿಂಹ ಗುಂಜಹಳ್ಳಿ

ರಾಯಚೂರು ತಾಲೂಕಿನ ಗುಂಜಳ್ಳಿಯ ನರಸಿಂಹ ಅವರು ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಸಾಮಾಜಿಕ ಚಳುವಳಿಯಲ್ಲಿ ಸಕ್ರಿಯರು. ಬಿಎಂಟಿಸಿ ಕಂಡಕ್ಟರ್ ಆಗಿದ್ದುಕೊಂಡು ಪಿಎಚ್‌ಡಿ ಸಂಶೋಧನೆ ನಡೆಸಿ, ಪದವಿ ಪಡೆದುಕೊಂಡರು. ಇದೀಗ ಕೊಪ್ಪಳದ ಕಾಲೇಜಿನಲ್ಲಿ ಅಧ್ಯಾಪಕರು


ಇದನ್ನೂ ಓದಿ: ದಲಿತ ಚಳವಳಿಯಲ್ಲಿ ಯುವ ನಾಯಕತ್ವ ಅರಳುವ ಸಮಯ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...