Homeಮುಖಪುಟಮಗಳು ನೆಗೆಯುತ್ತಾಳೆಂದು ಜೋರು ಜಗಳ: ಮಕ್ಕಳೇಕೆ ನೆಗೆಯುತ್ತವೆ?

ಮಗಳು ನೆಗೆಯುತ್ತಾಳೆಂದು ಜೋರು ಜಗಳ: ಮಕ್ಕಳೇಕೆ ನೆಗೆಯುತ್ತವೆ?

ಮಕ್ಕಳು ಯಾವ ಯಾವ ವಯಸ್ಸಿನಲ್ಲಿ ಹೇಗೆ ನೆಗೆಯುತ್ತವೆ ಎಂಬುದು ಕೂಡ ತುಂಬಾ ಕುತೂಹಲಕರ ವಿಷಯ. ದೇಹ ಮತ್ತು ಮಿದುಳಿನ ಸಮಗ್ರ ಬೆಳವಣಿಗೆಗೆ ಈ ನೆಗೆತವೇ ಸಹಕಾರಿ.

- Advertisement -
- Advertisement -

ನೆನ್ನೆ ರಾತ್ರಿ ಜೋರು ಜಗಳ!! ನಮಗೂ ಮತ್ತು ಕೆಳಗಿನ ಮನೆಯವರಿಗೂ, ಕಾರಣ ಇಷ್ಟೆ, “ಮಗಳು ನೆಗೆಯುವ ಸದ್ದು ಎದೆ ಮೇಲೆ ಕಲ್ಲು ಬಿದ್ದಂಗೆ ಆಗುತ್ತೆ, ಏನಾದರೂ ಮಾಡಿ, ನನಗೆ ಸದ್ದು ಬರಬಾರದು” ಎಂಬುದು ಅವರ ವಾದ. ಅಷ್ಟೇ ಅಲ್ಲ ದಿನದ ಯಾವ ಸಮಯದಲ್ಲೂ ನೆಗೆಯಲೇಬಾರದು. “ನಾನು ನನ್ನ ಮಗಳನ್ನು ಸಾಕಿದ್ದೇನೆ ನೋಡಿ ಬನ್ನಿ, ಅವಳು ನೆಗೆಯುವುದಿಲ್ಲ, ಕೆಳಗಿನ ಮನೆಯವರಿಗೆ ಏನೂ ತೊಂದರೆ ಕೊಡುವುದಿಲ್ಲ.” ಎಂದು ಉದಾಹರಣೆ ಕೊಟ್ಟು ನನ್ನ ಪೋಷಕತನವನ್ನೇ ಪ್ರಶ್ನೆ ಮಾಡಿದ. ಅವರ ಉದ್ದೇಶವೇ ಜಗಳ ಮಾಡುವುದಾಗಿತ್ತು. ಅವನನ್ನೂ ಸಹಾನುಭೂತಿಯಿಂದ ನೋಡಿ ಮಾತನಾಡುವ ನನ್ನ ಪ್ರಯತ್ನ ಸಫಲವಾಗಲಿಲ್ಲ. ಅಮಾಸೆ ಬೇರೆ ಇತ್ತು, ಜಗಳವಾಯ್ತು ಬಿಡಿ!. ಮಕ್ಕಳನ್ನು ನೆಗೆಯದಂತೆ ಸಾಕಬೇಕು ಎಂಬುದು ಅವರ ವಾದ. ನಾನು ಮಕ್ಕಳ ಸಾಕಾಣಿಕೆಯಲ್ಲಿ ಆಸಕ್ತನಲ್ಲ; ಮಕ್ಕಳ ಬೆಳೆಸುವುದು ನನ್ನ ಪ್ರಯತ್ನ. ಆ ಪ್ರಯತ್ನದಲ್ಲಿ ನಾನೇನು ಸಂಪೂರ್ಣ ಯಶಸ್ವಿಯಲ್ಲ, ನಿತ್ಯವೂ ಕಲಿಯುತ್ತ ನಾನು ಬದಲಾಗುತ್ತಾ ಸಾಗುತ್ತಿದ್ದೇನೆ. ಮಗಳ ಎದುರು ಜಗಳ ಮಾಡಿದ್ದಕ್ಕೆ ನಾಚಿಕೆಯೂ ಆಯ್ತು.

ಮಕ್ಕಳೇಕೆ ನೆಗೆಯುತ್ತವೆ?

ಮಕ್ಕಳು ನೆಗೆಯುವುದು ತೀರಾ ಸಹಜ ಮತ್ತು ಪ್ರಾಕೃತಿಕವಾದುದು. ಮಗುವೊಂದು ನೆಗೆಯುವುದು ಅದರ ಆರೋಗ್ಯಕರ ಬೆಳವಣಿಗೆಯ ಮೈಲಿಗಲ್ಲು. ಮಗುವು ನೆಗೆಯುತ್ತಿಲ್ಲ ಎಂದರೆ ಬೆಳವಣಿಗೆಯಲ್ಲಿ ಏನೋ ದೋಷವಿದೆ ಎಂದು ಮಕ್ಕಳ ವಿಜ್ಞಾನ ಹೇಳುತ್ತದೆ. ಮಗುವು ಅಂಬೆಗಾಲು ಇಟ್ಟು ಬೆಳೆಯುವುದನ್ನು ಕಲಿತ ನಂತರ ನೆಗೆಯುವುದನ್ನು ಕಲಿಯುತ್ತದೆ.

ನೆಗೆಯುವುದರಿಂದ ಆಗುವ ಪ್ರಯೋಜನವೆಂದರೆ, ಮಗುವು ತನ್ನ ದೇಹದ ಬ್ಯಾಲೆನ್ಸ್ ಕಲಿಯುತ್ತದೆ. ನೆಗೆಯಲು ಕಾಲಿನ ಎಲ್ಲಾ ಮಾಂಸಖಂಡಗಳ ಅಗತ್ಯಗಳು ಒಟ್ಟಿಗೆ ಸೇರಿ ಕೆಲಸ ಮಾಡುತ್ತವೆ. ಮಂಡಿಯನ್ನು ಬಾಗಿಸಿ, ಪಾದವನ್ನು ಒತ್ತಿ ನೆಗೆಯುವಾಗ ತೊಡೆಯ ಮತ್ತು ಮಂಡಿಯಿಂದ ಕೆಳಗಿನ ಮಾಂಸಖಂಡಗಳು ಸದೃಢವಾಗುತ್ತವೆ. ಪಾದವನ್ನು ಒತ್ತುವಾಗ ಮೂಳೆಗಳು ನೆಲದ ಕಡೆ ಹೆಚ್ಚು ಶಕ್ತಿ ಪ್ರಯೋಗಿಸುತ್ತವೆ, ಇದರಿಂದ ಮಗುವಿನ ದೈಹಿಕ (ಎತ್ತರ) ಬೆಳವಣಿಗೆ ಚೆನ್ನಾಗಿ ಆಗುತ್ತದೆ ದೇಹವೂ ಸದೃಢವಾಗುತ್ತದೆ ಹಾಗೂ ಮೂಳೆಗಳೂ ಗಟ್ಟಿಯಾಗುತ್ತವೆ.

ಇದು Motor Planning ಕೌಶಲ್ಯ ಅಭಿವೃದ್ಧಿಗೆ ಸಹಕಾರಿ.

Motor Planning ಎಂಬುದು ಒಂದು ಕೌಶಲ್ಯ. ಮಗುವು ಒಂದು ಚಲನೆಯಲ್ಲಿನ ಹಂತಗಳನ್ನು ನೆನಪಿನಲ್ಲಿಟ್ಟುಕೊಂಡು ಮಾಡಲು ಸಹಕಾರಿಯಾಗುತ್ತದೆ. ಉದಾಹರಣೆಗೆ, ನೆಗೆಯುವ ದೂರವನ್ನು ನಿರ್ಧರಿಸುವುದು (planning and sequencing), ಆ ದೂರಕ್ಕೆ ನೆಗೆಯಲು ಎಷ್ಟು ಶಕ್ತಿಯನ್ನು ವಿನಿಯೋಗಿಸಬೇಕು, ಎಲ್ಲಿಗೆ ನೆಗೆಯಬೇಕೆಂದು ಯೋಜಿಸುವುದು. ನೆಗೆಯುವುದು ಹೇಗೆ ಮತ್ತು ನೆಗೆದ ನಂತರ ಸುರಕ್ಷಿತವಾಗಿ ನಿಲ್ಲುವುದು ಹೇಗೆ (ಇದಕ್ಕೆ motor planning skill ಎನ್ನುತ್ತಾರೆ). ಇನ್ನೂ ಸರಳವಾಗಿ ಹೇಳಬೇಕೆಂದರೆ, ಇದೊಂದು ಅನೇಕ ಆಲೋಚನೆಗಳ ಅಗತ್ಯ ಇರುವ ಒಂದು ಸಂಕೀರ್ಣ ಕೆಲಸವನ್ನು ನಿರ್ವಹಿಸಲು ದೇಹಕ್ಕೆ ಬೇಕಾದ ಹಂತಗಳನ್ನು ‘ದೇಹವು’ ನೆನಪಿನಲ್ಲಿಟ್ಟುಕೊಳ್ಳುವುದು.  ಈ ಕೌಶಲ್ಯ ಕಲಿಯಲು ನೆಗೆತವೇ ತುಂಬಾ ಸಹಕಾರಿಯಾಗಿರುವುದು. ಈ ಕೌಶಲ್ಯದ ಕೊರತೆ ಇರುವ ಮಗುವು ಎದುರಿಸುವ ಸಮಸ್ಯೆ ಎಂದರೆ, ಮಿದುಳಿನಲ್ಲಿ ಸಂವೇದನಗಳನ್ನು ಸ್ವೀಕರಿಸುವ ಮತ್ತು ಪ್ರತಿಸ್ಪಂದಿಸುವ ನರವ್ಯೂಹದ ಕಳಪೆ ರಚನೆ. ಇದನ್ನು ತುಂಬಾ ಸುಲಭವಾಗಿ ನಿಮಗೆ ತಿಳಿಸಬೇಕೆಂದರೆ, ಮಗುವಿನ ದೈಹಿಕ ಆಟೋಟಗಳ ಆಧಾರದಲ್ಲಿಯೇ ಮಿದುಳಿನಲ್ಲಿ ನರವ್ಯೂಹ ರೂಪುಗೊಳ್ಳುತ್ತಿರುತ್ತದೆ. ದೇಹದಿಂದ ಸೂಚನೆಗಳು ಬರದೆ ಆ ನರವ್ಯೂಹಗಳು ಸರಿಗೊಳ್ಳುವುದಿಲ್ಲ. ಅದಕ್ಕಾಗಿಯೇ ಆಯಾ ಕಾಲಘಟ್ಟಕ್ಕೆ ಮಗುವು ಎನೇನು ಮಾಡಬೇಕು ಅದನ್ನು ಮಾಡಬೇಕು. ಈ ದೇಹದ ರಚನೆಯ ಈ ವಿಜ್ಞಾನವು ರೋಮಂಚನಕಾರಿಯಾಗಿದೆ. ಮಗುವು ನೆಗೆಯುವುದನ್ನು ನಿಲ್ಲಿಸಿಬಿಟ್ಟರೆ, ಇಂತಹ ಕೌಶಲ್ಯದ ಕಲಿಕೆ ನಿಂತು ಹೋಗುತ್ತದೆ.  ಇಂತಹ ಕೌಶಲ್ಯದ ಕೊರತೆಯಲ್ಲಿ ಬೆಳೆಯುವ ಮಗುವು ಮುಂದೆ ಸಣ್ಣ ಸಣ್ಣ ಹಂತಗಳನ್ನು ಒಳಗೊಂಡ ಒಂದು ಸಂಕೀರ್ಣ ಕೆಲಸಗಳನ್ನು ನಿರ್ವಹಿಸಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಅಷ್ಟೆ ಅಲ್ಲ, ಆ ಮಗು ದೈಹಿಕ ಶ್ರಮ  ಬಯಸುವ ಆಟೋಟಗಳಿಂದ ದೂರ ಉಳಿಯುತ್ತದೆ. ಉದಾಹರಣೆಗೆ ಸೈಕಲ್ ಓಡಿಸುವುದು. ಸೈಕಲ್ ಓಡಿಸಲು ಭಯಪಟ್ಟು ಕಲಿಯಲು ಆಸಕ್ತಿ ತೋರದೆ ಹೋಗಬಹುದು.

ನೆಗೆಯುವುದರಿಂದ ಆಗುವ ಇನ್ನಿತರ ಅನುಕೂಲಗಳೆಂದರೆ, ದೈಹಿಕವಾಗಿ ಮಗುವು ಗಟ್ಟಿಯಾಗಿ, ಆರೋಗ್ಯಕರವಾಗಿರುತ್ತದೆ. ಹಸಿವು, ದಣಿವು ಆಗುವುದರಿಂದ ಸರಿಯಾಗಿ ಊಟ ನಿದ್ರೆ ಆಗುತ್ತದೆ. ಇದರಿಂದ ಮಗು ಆರೋಗ್ಯವಾಗಿರುತ್ತದೆ. ನೆಗೆತದ ಅಗತ್ಯ ಇರುವ ಎಲ್ಲಾ ಆಟೋಟಗಳಲ್ಲಿ ಯಶಸ್ವಿಯಾಗಿ ಆಡಲು ಈ ಬಾಲ್ಯದ ನೆಗೆತವೇ ಸಹಕಾರಿ.

ಮಕ್ಕಳು ಯಾವ ಯಾವ ವಯಸ್ಸಿನಲ್ಲಿ ಹೇಗೆ ನೆಗೆಯುತ್ತವೆ ಎಂಬುದು ಕೂಡ ತುಂಬಾ ಕುತೂಹಲಕರ ವಿಷಯ. ಮಗುವಿನ ದೇಹ ಮತ್ತು ಮಿದುಳಿನ ಸಮಗ್ರ ಬೆಳವಣಿಗೆಗೆ ಈ ನೆಗೆತವೇ ಸಹಕಾರಿ. ಈ ಕೆಳಗಿನ ನೆಗೆತದ ಮೈಲಿಗಲ್ಲು ನೋಡಿ.

ನಿಮ್ಮ ಮಗು ನೆಗೆಯುತ್ತಿಲ್ಲವೆಂದರೆ, ನೆಗೆಯಲು ಭಯಪಡುತ್ತಿದೆಯೆಂದರೆ, ಒಂದೇ ಕಡೆ ನೆಗೆಯುತ್ತಿದೆ ಎಂದರೆ (ಅಂದರೆ, ಮುಂದಕ್ಕೆ ಅಥವಾ ಮೇಲಕ್ಕೆ ಅಥವಾ ಕೆಳಕ್ಕೆ), ನೆಗೆಯುವಾಗ ಬೀಳುತ್ತಿದೆಯೆಂದರೆ, ನೆಗೆಯಲು ಕಷ್ಟಪಡುತ್ತಿದೆಎಂದರೆ ನಿಮ್ಮ ಮಗುವಿನ ಬೆಳವಣಿಗೆಯಲ್ಲೆಲ್ಲೊ ಕುಂಠಿತವಾಗಿದೆ ಎಂದೇ ಅರ್ಥ.

ನಿಮ್ಮ ಮಗು ನೆಗೆಯಲು ಸಹಕರಿಸಲು ಅನೇಕ ಕೆಲಸ ಮಾಡಬಹುದು. ಮೃದುವಾದ ಮೆತ್ತ ಮೆತ್ತಗಿನ ನೆಲಹಾಸನ್ನು ಹಾಸಿ ನೆಗೆಯಲು ಅನುಕೂಲ ಮಾಡಿಕೊಡಿ. ಮೊದಮೊದಲು ಎರಡು ಕೈ ಹಿಡಿದು ನೆಗೆಯಲು ಸಹಾಯ ಮಾಡಿ. ನೆಗೆತವನ್ನು ಮಾಡುವಂತಹ ಆಟಗಳ ಆಡಿಸಿ, ಉದಾಹರಣೆಗೆ ಕಪ್ಪೆ ನೆಗೆತ. ನೆಲದಲ್ಲಿ ಗೆರೆಗಳ ಹಾಕಿ ನೆಗೆಯಲು ಪ್ರೋತ್ಸಾಹಿಸಿ. ರಿಂಗ್ ಗಳ ಇಟ್ಟು ಅದರಲ್ಲಿ ನೆಗೆಯಲು ಟಾಸ್ಕ್ ಕೊಡಿ. ಇಷ್ಟೆಲ್ಲಾ ಮಾಡಿಯೂ ನಿಮ್ಮ ಮಗು ನೆಗೆಯುತ್ತಿಲ್ಲವೆಂದರೆ ಮಕ್ಕಳ ತಜ್ಞರನ್ನು ಅಥವಾ ಫಿಸಿಯೋ ಥೆರಪಿಸ್ಟ್ ಗಳನ್ನು ಸಂಪರ್ಕಿಸಿರಿ.

ನೆಗೆಯುವ ಚಿಕಿತ್ಸೆ ಎಂಬ (Jumping Therapy) ಇದೆ. ಮಕ್ಕಳಿಗೆ ಯಾವ ರೀತಿ ನೆಗೆಯುವುದನ್ನು ಅಭ್ಯಾಸ ಮಾಡಿಸಬೇಕೆಂದು ಗೂಗಲ್ ನಲ್ಲಿ ಮಾಹಿತಿ ಸಿಗುತ್ತದೆ. ನಿಮ್ಮ ಮಗು ನೆಗೆಯದೆ ಇದ್ದರೆ ನೆಗೆಸಲು ಪ್ರಯತ್ನಿಸಿರಿ.

ಕೋವಿಡ್ ನಂತರ ಮಕ್ಕಳು ಅನೇಕ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ನಗರದಲ್ಲಿರುವ ಮಕ್ಕಳ ಸ್ಥಿತಿ ಬೇರೇಯೆ ಆಗಿ ಭಯ ಹುಟ್ಟಿಸುತ್ತಿದೆ. ತಿಂದು ಕೂರುವುದು, ಮೊಬೈಲ್, ಟಿವಿ ನೋಡುವುದು ಅಷ್ಟೇ ಅವರಿಗೆ ಸಿಗುತ್ತಿರುವುದು. ಆಟ ಆಡಲೂ ಬಿಡುವುದಿಲ್ಲ, ಶಾಲೆಯೂ ಇಲ್ಲ, ಮನೆಯಲ್ಲೂ ಆಡುವಂತಿಲ್ಲ, ಪೋಷಕರೂ ಮಕ್ಕಳೊಂದಿಗೆ ಆಡುವುದಿಲ್ಲ. ನೀವೊಮ್ಮೆ ಅವರ ಜಾಗದಲ್ಲಿ ನಿಂತು ಯೋಚಿಸಿರಿ. ಆ ಮಗುವಿನ ಕಷ್ಟ ಅರ್ಥವಾಗುತ್ತದೆ. ಪೋಷಕರಾದವರಿಗೆ ನೆನಪಿರಬೇಕು, ಮಗುವಿಗೆ ಈಗ ಆಗುತ್ತಿರುವ ನಕಾರಾತ್ಮಾಕ ಅನುಭವವು ಮುಂದೆ ದೀರ್ಘಕಾಲಿಕ ಪರಿಣಾಮ ಉಂಟುಮಾಡುತ್ತದೆ.

ಈಗ ನನ್ನ ವಿಚಾರಕ್ಕೆ ವಾಪಸ್ಸು ಬಂದರೆ, ಮೇಲಿನ ಮನೆಯವರು ಕೆಳಗಿನ ಮನೆಯವರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಅಗತ್ಯ. ಅದಕ್ಕಾಗಿ ನಾನೀಗ ಸಂಜೆಯ ವೇಳೆಯಲ್ಲಿ ಅವಳಿಗೆ ಪೇಂಟಿಂಗ್, ಅಕ್ಷರಾಭ್ಯಾಸ ಇಂತಹ ಕೆಲಸಗಳನ್ನು ಕೊಡಲು ಯೋಜಿಸಿದ್ದೇನೆ. ಸಂಜೆ ವೇಳೆ ಆಟದ ಮೈದಾನದಲ್ಲಿ ಆಗಾಗ ಜಂಪಿಂಗ್ ಮಾಡಿಸುತ್ತಿದ್ದೆನು. ಈಗ ಪ್ರತಿದಿನವೂ ಜಂಪಿಂಗ್ ಆಟಗಳ ಆಡಿಸಲು ಯೋಜಿಸಿದ್ದೇನೆ, ಇದರಿಂದ ಮನೆಯೊಳಗೆ ಜಂಪ್ ಮಾಡುವುದು ಕಡಿಮೆಯಾಗುವುದೆಂದು ಅಂದಾಜಿಸಿದ್ದೇನೆ. ಕೆಳಗಿನ ಮನೆಯವರೂ ಅಷ್ಟೇ, ಮಕ್ಕಳು ಒಮ್ಮೆಮ್ಮೆ ಜಂಪ್ ಮಾಡಿದರೆ, ಅದು ಸಹಜ ಎಂದು ಹೊಂದಾಣಿಕೆ ಮಾಡಿಕೊಳ್ಳಬೇಕು. ಅದಕ್ಕಾಗಿ ಜಗಳ ತೆಗೆಯಬಾರದು. ನೆನಪಿರಲಿ, ವಿಶ್ವ ಆರೋಗ್ಯ ಸಂಸ್ಥೆಯು ಮಕ್ಕಳಿಗಾಗಿ ಶಿಫಾರಸ್ಸು ಮಾಡಿರುವ ದೈಹಿಕ ಚಟುವಟಿಕೆಗಳಲ್ಲಿ ನೆಗೆಯುವುದಕ್ಕೆ ಮಹತ್ವದ ಸ್ಥಾನ ನೀಡಿದೆ.

  • ಅಣೇಕಟ್ಟೆ ವಿಶ್ವನಾಥ್

(ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನ ಅಣೇಕಟ್ಟೆಯವರಾದ ವಿಶ್ವನಾಥ್‌ರವರು ಕೃಷಿಕರು ಮತ್ತು ತೆಂಗು ಬೆಳೆಗಾರರ ಸಂಘದ ಕಾರ್ಯದರ್ಶಿಗಳು. ತೆಂಗಿನ ಮೌಲ್ಯವರ್ಧನೆ ಇವರ ಆಸಕ್ತಿಯ ಕ್ಷೇತ್ರ.)


ಇದನ್ನೂ ಓದಿ: ಬಾರ್ಡರ್ ಕೇಸ್ ಬಸವಣ್ಣ: ಅಣೇಕಟ್ಟೆ ವಿಶ್ವನಾಥ್‌ರವರ ಕಥೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...