Homeಮುಖಪುಟಮಹಿಷಾಸುರ ಐತಿಹಾಸಿಕ ವ್ಯಕ್ತಿಯೇ ಹೊರತು ಪುರಾಣವಲ್ಲ: ಡಾ.ಚಮರಂ

ಮಹಿಷಾಸುರ ಐತಿಹಾಸಿಕ ವ್ಯಕ್ತಿಯೇ ಹೊರತು ಪುರಾಣವಲ್ಲ: ಡಾ.ಚಮರಂ

ಮಹಿಷಾಸುರನ ಲಾಂಛನ ಎಮ್ಮೆಯಾಗಿರುವುದನ್ನು ಗಮನಿಸಬೇಕು. ಕೈಯಲ್ಲಿ ನಾಗರ ಹಾವು ಹಿಡಿದಿರುವುದು ಮಹಿಷನು ದ್ರಾವಿಡ ಪರಂಪರೆಯ ನಾಗಕುಲಕ್ಕೆ ಸೇರಿದವನೆಂಬುದಕ್ಕೆ ಸಾಕ್ಷಿಯಾಗಿದೆ.

- Advertisement -
- Advertisement -

ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಮತ್ತು ಕಳೆದ ಎಂಟು ವರ್ಷಗಳಿಂದಲೂ ನಡೆದುಕೊಂಡು ಬರುತ್ತಿರುವ ಮಹಿಷ ದಸರ ಕುರಿತು ಮನುವಾದಿಗಳಿಗಿಂತ ಬಹುಜನರೇ ಹೆಚ್ಚು ಆತಂಕಕ್ಕೊಳಗಾಗಿರುವಂತೆ ಕಂಡುಬಂದಿದೆ. ನಮ್ಮ ಅನೇಕ ಹೋರಾಟಗಾರ ಸ್ನೇಹಿತರು ಮತ್ತು ಬುದ್ದಿಜೀವಿ ಬಳಗ ಇದೊಂದು ಪುರಾಣದ ಕತೆ, ನಮ್ಮ ಜನರನ್ನು ದಿಕ್ಕುತಪ್ಪಿಸಲು ಕೆಲವರು ಮಹಿಷನನ್ನು ಐತಿಹಾಸಿಕ ಪುರುಷ ಎಂದು ನಂಬಿಸುತ್ತಿದ್ದಾರೆ. ನಾವು ಬೌದ್ದರಾದರೆ ಸಾಕು. ಅದು ಬಿಟ್ಟು ಈ ಮಹಿಷನ ಕತೆ ಕಟ್ಟಿಕೊಂಡು ಏನಾಗಬೇಕಿದೆ? ಎಂದು ಜಾಲತಾಣದಲ್ಲಿ ವಾದಿಸುತ್ತಿದ್ದಾರೆ. ದಯಮಾಡಿ ಯಾರೂ ಗೊಂದಲಕ್ಕೊಳಗಾಗಬೇಡಿ. ಮಹಿಷಾಸುರ ಖಂಡಿತವಾಗಿ ಐತಿಹಾಸಿಕ ವ್ಯಕ್ತಿಯೇ ಹೊರತು ಪುರಾಣವಲ್ಲ.

ಮಹಿಷನಾಡು, ಮಹಿಷೂರು ನಂತರ ಮೈಸೂರು ಆಗಿದೆ. ಮೈಸೂರಲ್ಲಿ ಮಹಿಷಾಸುರನ ಹಲವು ಪ್ರತಿಮೆಗಳಿವೆ. ಈಗಿನ ಚಾಮುಂಡಿ ಬೆಟ್ಟ ಹಿಂದೆ ಮಹಿಷಗಿರಿ ಎಂದು ಪ್ರಚಲಿತದಲ್ಲಿತ್ತು ಅದನ್ನು ಮಹಾಬಲ ಬೆಟ್ಟ ಎಂತಲೂ ಕರೆದಿದ್ದಾರೆ.

ಮಹಿಷ ಎಂದರೆ ಎಮ್ಮೆ. ಮೈಸೂರು ಪ್ರಾಂತ್ಯದಲ್ಲಿ ಎಲ್ಲಾ ತರದ ಕೃಷಿ ಚಟುವಟಿಕೆಗಳಿಗೂ ಎಮ್ಮೆಯನ್ನೇ ಬಳಸುತ್ತಿದ್ದರು… ಎಮ್ಮೆ ಈ ಜನರ ಹೆಮ್ಮೆ. ದನಗಳು ಆರ್ಯರ ಜಾನುವಾರುಗಳು.
ಆರ್ಯರು ಎಮ್ಮೆಗಳನ್ನು ಕೀಳು ಮಾಡಿ ತಮ್ಮ ದನಗಳನ್ನು ಶ್ರೇಷ್ಟಗೊಳಿಸಿದರು.

ಮಹಿಷ ಮಂಡಲ ಕೇರಳದ ವೈನಾಡು, ತಮಿಳುನಾಡಿನ ನೀಲಗಿರಿ ಪ್ರಾಂತ್ಯವನ್ನು ಒಳಗೊಂಡಿತ್ತು. ನೀಲಗಿರಿಯಲ್ಲಿ ಇಂದಿಗೂ ವಾಸವಾಗಿರುವ ತೋಡ ಎಂಬ ಗಿರಿಜನ ಮಹಿಷನ ವಂಶಸಂಸ್ಥರು ಎನ್ನಲಾಗಿದೆ. ಅವರು ಈಗಲೂ ಮಹಿಷನನ್ನು ಆರಾಧಿಸುತ್ತಾರೆ.
ನೀಲಗಿರಿ, ವೈನಾಡ್ ಜಿಲ್ಲೆಗಳಲ್ಲಿ ಇಂದಿಗೂ ಎಮ್ಮೆಗಳಿಂದಲೇ ಉಳುಮೆ ಮಾಡುತ್ತಾರೆ.

ಮಹಿಷಾಸುರನ ಲಾಂಛನ ಎಮ್ಮೆಯಾಗಿರುವುದನ್ನು ಗಮನಿಸಬೇಕು. ಕೈಯಲ್ಲಿ ನಾಗರ ಹಾವು ಹಿಡಿದಿರುವುದು ಮಹಿಷನು ದ್ರಾವಿಡ ಪರಂಪರೆಯ ನಾಗಕುಲಕ್ಕೆ ಸೇರಿದವನೆಂಬುದಕ್ಕೆ ಸಾಕ್ಷಿಯಾಗಿದೆ.

ಮಹಿಷ ಮಂಡಲವು ಮೈಸೂರು, ನೀಲಗಿರಿ, ವೈನಾಡು ಇಷ್ಟು ಭೂಪ್ರದೇಶವನ್ನು ಹೊಂದಿತ್ತು. ಇದನ್ನು “ಎರುಮೈನಾಡು” ಎಂದು ಕರೆದಿರುವುದು ಅನೇಕ ಇತಿಹಾಸದ ಸಂಶೋಧನೆಗಳಿಂದ ದೃಢಪಟ್ಟಿದೆ ಮತ್ತು ದಾಖಲಾಗಿದೆ. “ಎರುಮೈ” ಎಂದರೆ ಎಮ್ಮೆ ಎಂದರ್ಥ.

ಆದ್ದರಿಂದ ಮಹಿಷನ ಕುರಿತು ಯಾವುದೇ ಕೀಳರಿಮೆ, ಗೊಂದಲಗಳನ್ನು ನಮ್ಮ ಜನರು ಇಟ್ಟುಕೊಳ್ಳುವ ಅಗತ್ಯವಿಲ್ಲ. ಮಹಿಷ ನಿಶ್ಚಿತವಾಗಿ ದ್ರಾವಿಡ ದೊರೆ, ನಾಗವಂಶದ ರಾಜ ಮತ್ತು ಬೌದ್ದಾನುಯಾಯಿಯಾಗಿದ್ದ ಎಂಬುದಕ್ಕೆ ಅನೇಕ ದಾಖಲೆಗಳು ಲಭ್ಯವಿವೆ.

ಇತ್ತೀಚಗೆ ಗುಲ್ಬರ್ಗದ ಬಳಿ ನಡೆಸಿದ ಐತಿಹಾಸಿಕ ಉತ್ಖನನದಲ್ಲಿ ಮಹಿಷ ನಾಡಿನ ತೋಡರು ಬೌದ್ದವಿಹಾರಗಳಿಗೆ ಹಲವು ಕೊಡುಗೆಗಳನ್ನು ಕೊಟ್ಟಿರುವ ಬೌದ್ಧಶಾಸನಗಳು ದೊರೆತಿವೆ. ಈ ಕುರಿತು ಕಳೆದ ಭಾನುವಾರದ (೩.೧೦.೨೧) ಪ್ರಜಾವಾಣಿಯ ವಾರದ ಪುರವಣಿಯಲ್ಲಿ ಇತಿಹಾಸ ಸಂಶೋಧಕ ಷ.ಶಟರ್ ಅವರು ಬರೆದಿರುವ ಲೇಖನ ಹೆಚ್ಚು ಬೆಳಕು ಚಲ್ಲಿದೆ.

ಹಿಂದೆ ನಮ್ಮ ಸಮಾಜ ಪರಿವರ್ತನ ಪತ್ರಿಕೆಯಲ್ಲಿ ಸಹ ಈ ಕುರಿತು ಅನೇಕ ಲೇಖಕರು ಸರಣಿ ಬರಹಗಳನ್ನು ಬರೆದಿದ್ದಾರೆ. ಮೈಸೂರಿನ ನಮ್ಮ ಲೇಖಕ ಸ್ನೇಹಿತರಾದ ಸಿದ್ದಸ್ವಾಮಿಯವರು “ಮಹಿಷ ಮಂಡಲ” ಎಂಬ ತಮ್ಮ ಸಂಶೋಧಿತ ಕೃತಿಯಲ್ಲಿ ಐತಿಹಾಸಿಕ ವಿಚಾರಗಳೊಡನೆ ವರ್ತಮಾನದ ದಾಖಲೆಗಳನ್ನಿಟ್ಟು ಚರ್ಚಿಸಿದ್ದಾರೆ.

ಈ ಎಲ್ಲಾ ಹಿನ್ನೆಲೆಯಲ್ಲಿಯೇ ನಾವಿಂದು ಎಲ್ಲರೂ ಸೇರಿ ಮಹಿಷ ದಸರ ಆಚರಿಸಿಕೊಂಡು ಚಾರಿತ್ರಿಕ ಅನ್ಯಾಯವನ್ನು ಎತ್ತಿ ಹಿಡಿತುತ್ತಾ ನಮ್ಮ ಅಸ್ಮಿತೆಯನ್ನು ಉಳಿಸಲು ಕಾರ್ಯಕ್ರಮ ರೂಪಿಸಿಕೊಂಡು ಬರುತ್ತಿದ್ದೇವೆ. ಇದರ ಸತ್ಯವು ಗೊತ್ತಿದ್ದೇ ಮನುವಾದಿಗಳು ಬೆಚ್ಚಿದ್ದಾರೆ. ಅವರು ಬೆಚ್ಚಿದ್ದಾರೆ ಎಂದರೆ ವಿಷಯವು ಸ್ಪಷ್ಟವಿದೆ ಎಂದರ್ಥ. ಅವರು ಅದನ್ನು ತಮ್ಮ ಅಧಿಕಾರ ಬಳಸಿ ತಡೆಯಲು ಯತ್ನಿಸುತ್ತಲೇ ಇದ್ದಾರೆ ಎಂದರೆ ಅದು ಸ್ಪಷ್ಟವಾಗಿ ನಮ್ಮ ಸ್ವಾಭೀಮಾನದ ಇತಿಹಾಸ ಎಂಬುದು ಖಚಿತವಾಗುತ್ತದೆ.

ಆದ್ದರಿಂದ ನಮ್ಮೊಳಗೆ ಅವರು ಗೊಂದಲ ಸೃಷ್ಟಿಸಲು ಆರಂಭಿಸಿದ್ದಾರೆ. ನಮ್ಮ ಜನರು ಗೊಂದಲಕ್ಕೊಳಗಾಗಬೇಡಿ. ಸತ್ಯವನ್ನು ಅರಿಯೋಣ. ಸತ್ಯವನ್ನು ಸಾರೋಣ. ಸತ್ಯವನ್ನು ಉಳಿಸೋಣ.

ಬಾಬಾಸಾಹೇಬರ ಬರಹಗಳಲ್ಲೂ ಅಸುರರು, ದಾಸರು, ದಸ್ಯುಗಳ ಕುರಿತ ದಾಖಲೆಗಳಿವೆ. ಮನುವಾದಿಗಳ ಕುತಂತ್ರಕ್ಕೆ ಬಲಿಯಾದ ನಮ್ಮ ವೀರರು ಮತ್ತು ಶೂರರು ಇತಿಹಾಸದಲ್ಲಿ ಅಸುರರೆಂದು, ರಾಕ್ಷಸರೆಂದು ಬಿಂಬಿಸಲ್ಪಟ್ಟಿದ್ದಾರೆ.

ಈ ರೀತಿ ಮಾಡುವ ಮೂಲಕ ನಮ್ಮಿಂದ ನಮ್ಮ ಪೂರ್ವಿಕರನ್ನು ದೂರಮಾಡುವ ಹುನ್ನಾರವೇ ಮನುವಾದಿಗಳದ್ದಾಗಿದೆ. ಆದ್ದರಿಂದಲೇ ನಮ್ಮ ಜನರು ನಮ್ಮ ಪೂರ್ವಿಕರ ಶೌರ್ಯದ ಇತಿಹಾಸ ಮರೆತು ಇದೇ ಮನುವಾದಿಗಳು ಸೃಷ್ಟಿಸಿರುವ ಕಾಲ್ಪನಿಕ ದೇವರುಗಳನ್ನು ನಂಬಿ ಆರಾಧಿಸುತ್ತಾ ಮನುವಾದಿಗಳಿಗೆ ಲಾಭ ಮಾಡುತ್ತಾ ತಮ್ಮ ನೈಜ ಸಂಸ್ಕೃತಿಯನ್ನು ಮರೆತು ಮನುವಾದಿಗಳ ಗುಲಾಮರಾಗಿದ್ದಾರೆ.

ಬಲಿ ಚಕ್ರವರ್ತಿ ಮತ್ತು ನರಕಾಸುರ ಎಂಬ ನಮ್ಮ ಪೂರ್ವಿಕರನ್ನು ಮನುವಾದಿಗಳು ಮೋಸದಿಂದ ಕೊಂದು ರಾಜ್ಯ ಕಬಳಿಸಿ ಅವರನ್ನು ದುಷ್ಟರೆಂದು ಚಿತ್ರಿಸಿ ಪಟಾಕಿ ಸಿಡಿಸಿ ನಮ್ಮಿಂದಲೇ ನಮ್ಮವರ ಸಾವನ್ನು ಸಂಭ್ರಮಿಸುವಂತೆ ಮಾಡಿದ್ದಾರೆ. ಹೀಗೆ ಇತಿಹಾಸದ ಉದ್ದಕ್ಕೂ ನಮ್ಮ ಪರಂಪರೆಯನ್ನು ನಾಶಗೊಳಿಸಿ ನಮ್ಮನ್ನು ದಿಕ್ಕುತಪ್ಪಿಸಿರುವ ಮನುವಾದಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ನಾವು ಮಾನಸಿಕವಾಗಿ ಬಿಡುಗಡೆ ಹೊಂದಿದಾಗ ಮಾತ್ರವೇ ಕಳೆದುಕೊಂಡಿರು ಅಧಿಕಾರವನ್ನು ಮರಳಿ ಪಡೆಯಬೇಕಿದೆ. ಇದೇ ನಮ್ಮ ಪರಂಪರೆಯಾಗಿದೆ. ಒಂದು ಸಮುದಾಯವನ್ನು ನಾಶ ಪಡಿಸಬೇಕಿದ್ದರೆ ಅದರ ಪರಂಪರೆಯನ್ನು ನಾಶ ಪಡಿಸಬೇಕು ಎಂಬುದು ಮನುವಾದಿಗಳ ಕುತಂತ್ರವಾಗಿದೆ ಎಂದು ಬಾಬಾಸಾಹೇಬರು ಹೇಳುತ್ತಾರೆ. ನಮ್ಮ ಪರಂಪರೆಯನ್ನು ಹುಡುಕಿ ಮರಳಿ ಪಡೆದರೆ ಮಾತ್ರ ಮನುವಾದಿಗಳ ಪರಂಪರೆಯಿಂದ ಹೊರಬಂದರೆ ಮಾತ್ರ ನಮಗೆ ಅಧಿಕಾರವು ದಕ್ಕಲಿದೆ. ಅಧಿಕಾರದಿಂದ ಮಾತ್ರ ನಮ್ಮ ಹಕ್ಕುಗಳು ದೊರೆಯಲಿವೆ. ಇದೆಲ್ಲವೂ ಬೌದ್ದೀಯತೆಯೇ ಆಗಿದೆ ಎಂಬುದನ್ನು ನೆನಪಿಡಿ.

  • ಡಾ.ಕೃಷ್ಣಮೂರ್ತಿ ಚಮರಂ

(ಡಾ.ಕೃಷ್ಣಮೂರ್ತಿ ಚಮರಂರವರು ಸಾಮಾಜಿಕ ಕಾರ್ಯಕರ್ತರು ಮತ್ತು ಬರಹಗಾರರು. ಲೇಖನದಲ್ಲಿನ ಅಭಿಪ್ರಾಯಗಳು ವೈಯಕ್ತಿಕವಾದವು. ಈ ಕುರಿತು ಚರ್ಚೆಗೆ ಆಹ್ವಾನವಿದೆ. ಮಹಿಷಾಸುರ ಸಂಬಂಧಿತ ಲೇಖನಗಳನ್ನು [email protected] ಗೆ ಕಳಿಸಬಹುದು)


ಇದನ್ನೂ ಓದಿ: ಮಹಿಷ ದಸರಾ: ಅಂಬಾರಿಯಲ್ಲಿ ಗಾಂಧಿ, ಅಂಬೇಡ್ಕರ್, ನಾಲ್ವಡಿ ಫೋಟೊ ಇರಲಿ – ಮಹೇಶ್ ಚಂದ್ರ ಗುರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...