Homeಮುಖಪುಟಮಗಳು ನೆಗೆಯುತ್ತಾಳೆಂದು ಜೋರು ಜಗಳ: ಮಕ್ಕಳೇಕೆ ನೆಗೆಯುತ್ತವೆ?

ಮಗಳು ನೆಗೆಯುತ್ತಾಳೆಂದು ಜೋರು ಜಗಳ: ಮಕ್ಕಳೇಕೆ ನೆಗೆಯುತ್ತವೆ?

ಮಕ್ಕಳು ಯಾವ ಯಾವ ವಯಸ್ಸಿನಲ್ಲಿ ಹೇಗೆ ನೆಗೆಯುತ್ತವೆ ಎಂಬುದು ಕೂಡ ತುಂಬಾ ಕುತೂಹಲಕರ ವಿಷಯ. ದೇಹ ಮತ್ತು ಮಿದುಳಿನ ಸಮಗ್ರ ಬೆಳವಣಿಗೆಗೆ ಈ ನೆಗೆತವೇ ಸಹಕಾರಿ.

- Advertisement -
- Advertisement -

ನೆನ್ನೆ ರಾತ್ರಿ ಜೋರು ಜಗಳ!! ನಮಗೂ ಮತ್ತು ಕೆಳಗಿನ ಮನೆಯವರಿಗೂ, ಕಾರಣ ಇಷ್ಟೆ, “ಮಗಳು ನೆಗೆಯುವ ಸದ್ದು ಎದೆ ಮೇಲೆ ಕಲ್ಲು ಬಿದ್ದಂಗೆ ಆಗುತ್ತೆ, ಏನಾದರೂ ಮಾಡಿ, ನನಗೆ ಸದ್ದು ಬರಬಾರದು” ಎಂಬುದು ಅವರ ವಾದ. ಅಷ್ಟೇ ಅಲ್ಲ ದಿನದ ಯಾವ ಸಮಯದಲ್ಲೂ ನೆಗೆಯಲೇಬಾರದು. “ನಾನು ನನ್ನ ಮಗಳನ್ನು ಸಾಕಿದ್ದೇನೆ ನೋಡಿ ಬನ್ನಿ, ಅವಳು ನೆಗೆಯುವುದಿಲ್ಲ, ಕೆಳಗಿನ ಮನೆಯವರಿಗೆ ಏನೂ ತೊಂದರೆ ಕೊಡುವುದಿಲ್ಲ.” ಎಂದು ಉದಾಹರಣೆ ಕೊಟ್ಟು ನನ್ನ ಪೋಷಕತನವನ್ನೇ ಪ್ರಶ್ನೆ ಮಾಡಿದ. ಅವರ ಉದ್ದೇಶವೇ ಜಗಳ ಮಾಡುವುದಾಗಿತ್ತು. ಅವನನ್ನೂ ಸಹಾನುಭೂತಿಯಿಂದ ನೋಡಿ ಮಾತನಾಡುವ ನನ್ನ ಪ್ರಯತ್ನ ಸಫಲವಾಗಲಿಲ್ಲ. ಅಮಾಸೆ ಬೇರೆ ಇತ್ತು, ಜಗಳವಾಯ್ತು ಬಿಡಿ!. ಮಕ್ಕಳನ್ನು ನೆಗೆಯದಂತೆ ಸಾಕಬೇಕು ಎಂಬುದು ಅವರ ವಾದ. ನಾನು ಮಕ್ಕಳ ಸಾಕಾಣಿಕೆಯಲ್ಲಿ ಆಸಕ್ತನಲ್ಲ; ಮಕ್ಕಳ ಬೆಳೆಸುವುದು ನನ್ನ ಪ್ರಯತ್ನ. ಆ ಪ್ರಯತ್ನದಲ್ಲಿ ನಾನೇನು ಸಂಪೂರ್ಣ ಯಶಸ್ವಿಯಲ್ಲ, ನಿತ್ಯವೂ ಕಲಿಯುತ್ತ ನಾನು ಬದಲಾಗುತ್ತಾ ಸಾಗುತ್ತಿದ್ದೇನೆ. ಮಗಳ ಎದುರು ಜಗಳ ಮಾಡಿದ್ದಕ್ಕೆ ನಾಚಿಕೆಯೂ ಆಯ್ತು.

ಮಕ್ಕಳೇಕೆ ನೆಗೆಯುತ್ತವೆ?

ಮಕ್ಕಳು ನೆಗೆಯುವುದು ತೀರಾ ಸಹಜ ಮತ್ತು ಪ್ರಾಕೃತಿಕವಾದುದು. ಮಗುವೊಂದು ನೆಗೆಯುವುದು ಅದರ ಆರೋಗ್ಯಕರ ಬೆಳವಣಿಗೆಯ ಮೈಲಿಗಲ್ಲು. ಮಗುವು ನೆಗೆಯುತ್ತಿಲ್ಲ ಎಂದರೆ ಬೆಳವಣಿಗೆಯಲ್ಲಿ ಏನೋ ದೋಷವಿದೆ ಎಂದು ಮಕ್ಕಳ ವಿಜ್ಞಾನ ಹೇಳುತ್ತದೆ. ಮಗುವು ಅಂಬೆಗಾಲು ಇಟ್ಟು ಬೆಳೆಯುವುದನ್ನು ಕಲಿತ ನಂತರ ನೆಗೆಯುವುದನ್ನು ಕಲಿಯುತ್ತದೆ.

ನೆಗೆಯುವುದರಿಂದ ಆಗುವ ಪ್ರಯೋಜನವೆಂದರೆ, ಮಗುವು ತನ್ನ ದೇಹದ ಬ್ಯಾಲೆನ್ಸ್ ಕಲಿಯುತ್ತದೆ. ನೆಗೆಯಲು ಕಾಲಿನ ಎಲ್ಲಾ ಮಾಂಸಖಂಡಗಳ ಅಗತ್ಯಗಳು ಒಟ್ಟಿಗೆ ಸೇರಿ ಕೆಲಸ ಮಾಡುತ್ತವೆ. ಮಂಡಿಯನ್ನು ಬಾಗಿಸಿ, ಪಾದವನ್ನು ಒತ್ತಿ ನೆಗೆಯುವಾಗ ತೊಡೆಯ ಮತ್ತು ಮಂಡಿಯಿಂದ ಕೆಳಗಿನ ಮಾಂಸಖಂಡಗಳು ಸದೃಢವಾಗುತ್ತವೆ. ಪಾದವನ್ನು ಒತ್ತುವಾಗ ಮೂಳೆಗಳು ನೆಲದ ಕಡೆ ಹೆಚ್ಚು ಶಕ್ತಿ ಪ್ರಯೋಗಿಸುತ್ತವೆ, ಇದರಿಂದ ಮಗುವಿನ ದೈಹಿಕ (ಎತ್ತರ) ಬೆಳವಣಿಗೆ ಚೆನ್ನಾಗಿ ಆಗುತ್ತದೆ ದೇಹವೂ ಸದೃಢವಾಗುತ್ತದೆ ಹಾಗೂ ಮೂಳೆಗಳೂ ಗಟ್ಟಿಯಾಗುತ್ತವೆ.

ಇದು Motor Planning ಕೌಶಲ್ಯ ಅಭಿವೃದ್ಧಿಗೆ ಸಹಕಾರಿ.

Motor Planning ಎಂಬುದು ಒಂದು ಕೌಶಲ್ಯ. ಮಗುವು ಒಂದು ಚಲನೆಯಲ್ಲಿನ ಹಂತಗಳನ್ನು ನೆನಪಿನಲ್ಲಿಟ್ಟುಕೊಂಡು ಮಾಡಲು ಸಹಕಾರಿಯಾಗುತ್ತದೆ. ಉದಾಹರಣೆಗೆ, ನೆಗೆಯುವ ದೂರವನ್ನು ನಿರ್ಧರಿಸುವುದು (planning and sequencing), ಆ ದೂರಕ್ಕೆ ನೆಗೆಯಲು ಎಷ್ಟು ಶಕ್ತಿಯನ್ನು ವಿನಿಯೋಗಿಸಬೇಕು, ಎಲ್ಲಿಗೆ ನೆಗೆಯಬೇಕೆಂದು ಯೋಜಿಸುವುದು. ನೆಗೆಯುವುದು ಹೇಗೆ ಮತ್ತು ನೆಗೆದ ನಂತರ ಸುರಕ್ಷಿತವಾಗಿ ನಿಲ್ಲುವುದು ಹೇಗೆ (ಇದಕ್ಕೆ motor planning skill ಎನ್ನುತ್ತಾರೆ). ಇನ್ನೂ ಸರಳವಾಗಿ ಹೇಳಬೇಕೆಂದರೆ, ಇದೊಂದು ಅನೇಕ ಆಲೋಚನೆಗಳ ಅಗತ್ಯ ಇರುವ ಒಂದು ಸಂಕೀರ್ಣ ಕೆಲಸವನ್ನು ನಿರ್ವಹಿಸಲು ದೇಹಕ್ಕೆ ಬೇಕಾದ ಹಂತಗಳನ್ನು ‘ದೇಹವು’ ನೆನಪಿನಲ್ಲಿಟ್ಟುಕೊಳ್ಳುವುದು.  ಈ ಕೌಶಲ್ಯ ಕಲಿಯಲು ನೆಗೆತವೇ ತುಂಬಾ ಸಹಕಾರಿಯಾಗಿರುವುದು. ಈ ಕೌಶಲ್ಯದ ಕೊರತೆ ಇರುವ ಮಗುವು ಎದುರಿಸುವ ಸಮಸ್ಯೆ ಎಂದರೆ, ಮಿದುಳಿನಲ್ಲಿ ಸಂವೇದನಗಳನ್ನು ಸ್ವೀಕರಿಸುವ ಮತ್ತು ಪ್ರತಿಸ್ಪಂದಿಸುವ ನರವ್ಯೂಹದ ಕಳಪೆ ರಚನೆ. ಇದನ್ನು ತುಂಬಾ ಸುಲಭವಾಗಿ ನಿಮಗೆ ತಿಳಿಸಬೇಕೆಂದರೆ, ಮಗುವಿನ ದೈಹಿಕ ಆಟೋಟಗಳ ಆಧಾರದಲ್ಲಿಯೇ ಮಿದುಳಿನಲ್ಲಿ ನರವ್ಯೂಹ ರೂಪುಗೊಳ್ಳುತ್ತಿರುತ್ತದೆ. ದೇಹದಿಂದ ಸೂಚನೆಗಳು ಬರದೆ ಆ ನರವ್ಯೂಹಗಳು ಸರಿಗೊಳ್ಳುವುದಿಲ್ಲ. ಅದಕ್ಕಾಗಿಯೇ ಆಯಾ ಕಾಲಘಟ್ಟಕ್ಕೆ ಮಗುವು ಎನೇನು ಮಾಡಬೇಕು ಅದನ್ನು ಮಾಡಬೇಕು. ಈ ದೇಹದ ರಚನೆಯ ಈ ವಿಜ್ಞಾನವು ರೋಮಂಚನಕಾರಿಯಾಗಿದೆ. ಮಗುವು ನೆಗೆಯುವುದನ್ನು ನಿಲ್ಲಿಸಿಬಿಟ್ಟರೆ, ಇಂತಹ ಕೌಶಲ್ಯದ ಕಲಿಕೆ ನಿಂತು ಹೋಗುತ್ತದೆ.  ಇಂತಹ ಕೌಶಲ್ಯದ ಕೊರತೆಯಲ್ಲಿ ಬೆಳೆಯುವ ಮಗುವು ಮುಂದೆ ಸಣ್ಣ ಸಣ್ಣ ಹಂತಗಳನ್ನು ಒಳಗೊಂಡ ಒಂದು ಸಂಕೀರ್ಣ ಕೆಲಸಗಳನ್ನು ನಿರ್ವಹಿಸಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಅಷ್ಟೆ ಅಲ್ಲ, ಆ ಮಗು ದೈಹಿಕ ಶ್ರಮ  ಬಯಸುವ ಆಟೋಟಗಳಿಂದ ದೂರ ಉಳಿಯುತ್ತದೆ. ಉದಾಹರಣೆಗೆ ಸೈಕಲ್ ಓಡಿಸುವುದು. ಸೈಕಲ್ ಓಡಿಸಲು ಭಯಪಟ್ಟು ಕಲಿಯಲು ಆಸಕ್ತಿ ತೋರದೆ ಹೋಗಬಹುದು.

ನೆಗೆಯುವುದರಿಂದ ಆಗುವ ಇನ್ನಿತರ ಅನುಕೂಲಗಳೆಂದರೆ, ದೈಹಿಕವಾಗಿ ಮಗುವು ಗಟ್ಟಿಯಾಗಿ, ಆರೋಗ್ಯಕರವಾಗಿರುತ್ತದೆ. ಹಸಿವು, ದಣಿವು ಆಗುವುದರಿಂದ ಸರಿಯಾಗಿ ಊಟ ನಿದ್ರೆ ಆಗುತ್ತದೆ. ಇದರಿಂದ ಮಗು ಆರೋಗ್ಯವಾಗಿರುತ್ತದೆ. ನೆಗೆತದ ಅಗತ್ಯ ಇರುವ ಎಲ್ಲಾ ಆಟೋಟಗಳಲ್ಲಿ ಯಶಸ್ವಿಯಾಗಿ ಆಡಲು ಈ ಬಾಲ್ಯದ ನೆಗೆತವೇ ಸಹಕಾರಿ.

ಮಕ್ಕಳು ಯಾವ ಯಾವ ವಯಸ್ಸಿನಲ್ಲಿ ಹೇಗೆ ನೆಗೆಯುತ್ತವೆ ಎಂಬುದು ಕೂಡ ತುಂಬಾ ಕುತೂಹಲಕರ ವಿಷಯ. ಮಗುವಿನ ದೇಹ ಮತ್ತು ಮಿದುಳಿನ ಸಮಗ್ರ ಬೆಳವಣಿಗೆಗೆ ಈ ನೆಗೆತವೇ ಸಹಕಾರಿ. ಈ ಕೆಳಗಿನ ನೆಗೆತದ ಮೈಲಿಗಲ್ಲು ನೋಡಿ.

ನಿಮ್ಮ ಮಗು ನೆಗೆಯುತ್ತಿಲ್ಲವೆಂದರೆ, ನೆಗೆಯಲು ಭಯಪಡುತ್ತಿದೆಯೆಂದರೆ, ಒಂದೇ ಕಡೆ ನೆಗೆಯುತ್ತಿದೆ ಎಂದರೆ (ಅಂದರೆ, ಮುಂದಕ್ಕೆ ಅಥವಾ ಮೇಲಕ್ಕೆ ಅಥವಾ ಕೆಳಕ್ಕೆ), ನೆಗೆಯುವಾಗ ಬೀಳುತ್ತಿದೆಯೆಂದರೆ, ನೆಗೆಯಲು ಕಷ್ಟಪಡುತ್ತಿದೆಎಂದರೆ ನಿಮ್ಮ ಮಗುವಿನ ಬೆಳವಣಿಗೆಯಲ್ಲೆಲ್ಲೊ ಕುಂಠಿತವಾಗಿದೆ ಎಂದೇ ಅರ್ಥ.

ನಿಮ್ಮ ಮಗು ನೆಗೆಯಲು ಸಹಕರಿಸಲು ಅನೇಕ ಕೆಲಸ ಮಾಡಬಹುದು. ಮೃದುವಾದ ಮೆತ್ತ ಮೆತ್ತಗಿನ ನೆಲಹಾಸನ್ನು ಹಾಸಿ ನೆಗೆಯಲು ಅನುಕೂಲ ಮಾಡಿಕೊಡಿ. ಮೊದಮೊದಲು ಎರಡು ಕೈ ಹಿಡಿದು ನೆಗೆಯಲು ಸಹಾಯ ಮಾಡಿ. ನೆಗೆತವನ್ನು ಮಾಡುವಂತಹ ಆಟಗಳ ಆಡಿಸಿ, ಉದಾಹರಣೆಗೆ ಕಪ್ಪೆ ನೆಗೆತ. ನೆಲದಲ್ಲಿ ಗೆರೆಗಳ ಹಾಕಿ ನೆಗೆಯಲು ಪ್ರೋತ್ಸಾಹಿಸಿ. ರಿಂಗ್ ಗಳ ಇಟ್ಟು ಅದರಲ್ಲಿ ನೆಗೆಯಲು ಟಾಸ್ಕ್ ಕೊಡಿ. ಇಷ್ಟೆಲ್ಲಾ ಮಾಡಿಯೂ ನಿಮ್ಮ ಮಗು ನೆಗೆಯುತ್ತಿಲ್ಲವೆಂದರೆ ಮಕ್ಕಳ ತಜ್ಞರನ್ನು ಅಥವಾ ಫಿಸಿಯೋ ಥೆರಪಿಸ್ಟ್ ಗಳನ್ನು ಸಂಪರ್ಕಿಸಿರಿ.

ನೆಗೆಯುವ ಚಿಕಿತ್ಸೆ ಎಂಬ (Jumping Therapy) ಇದೆ. ಮಕ್ಕಳಿಗೆ ಯಾವ ರೀತಿ ನೆಗೆಯುವುದನ್ನು ಅಭ್ಯಾಸ ಮಾಡಿಸಬೇಕೆಂದು ಗೂಗಲ್ ನಲ್ಲಿ ಮಾಹಿತಿ ಸಿಗುತ್ತದೆ. ನಿಮ್ಮ ಮಗು ನೆಗೆಯದೆ ಇದ್ದರೆ ನೆಗೆಸಲು ಪ್ರಯತ್ನಿಸಿರಿ.

ಕೋವಿಡ್ ನಂತರ ಮಕ್ಕಳು ಅನೇಕ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ನಗರದಲ್ಲಿರುವ ಮಕ್ಕಳ ಸ್ಥಿತಿ ಬೇರೇಯೆ ಆಗಿ ಭಯ ಹುಟ್ಟಿಸುತ್ತಿದೆ. ತಿಂದು ಕೂರುವುದು, ಮೊಬೈಲ್, ಟಿವಿ ನೋಡುವುದು ಅಷ್ಟೇ ಅವರಿಗೆ ಸಿಗುತ್ತಿರುವುದು. ಆಟ ಆಡಲೂ ಬಿಡುವುದಿಲ್ಲ, ಶಾಲೆಯೂ ಇಲ್ಲ, ಮನೆಯಲ್ಲೂ ಆಡುವಂತಿಲ್ಲ, ಪೋಷಕರೂ ಮಕ್ಕಳೊಂದಿಗೆ ಆಡುವುದಿಲ್ಲ. ನೀವೊಮ್ಮೆ ಅವರ ಜಾಗದಲ್ಲಿ ನಿಂತು ಯೋಚಿಸಿರಿ. ಆ ಮಗುವಿನ ಕಷ್ಟ ಅರ್ಥವಾಗುತ್ತದೆ. ಪೋಷಕರಾದವರಿಗೆ ನೆನಪಿರಬೇಕು, ಮಗುವಿಗೆ ಈಗ ಆಗುತ್ತಿರುವ ನಕಾರಾತ್ಮಾಕ ಅನುಭವವು ಮುಂದೆ ದೀರ್ಘಕಾಲಿಕ ಪರಿಣಾಮ ಉಂಟುಮಾಡುತ್ತದೆ.

ಈಗ ನನ್ನ ವಿಚಾರಕ್ಕೆ ವಾಪಸ್ಸು ಬಂದರೆ, ಮೇಲಿನ ಮನೆಯವರು ಕೆಳಗಿನ ಮನೆಯವರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಅಗತ್ಯ. ಅದಕ್ಕಾಗಿ ನಾನೀಗ ಸಂಜೆಯ ವೇಳೆಯಲ್ಲಿ ಅವಳಿಗೆ ಪೇಂಟಿಂಗ್, ಅಕ್ಷರಾಭ್ಯಾಸ ಇಂತಹ ಕೆಲಸಗಳನ್ನು ಕೊಡಲು ಯೋಜಿಸಿದ್ದೇನೆ. ಸಂಜೆ ವೇಳೆ ಆಟದ ಮೈದಾನದಲ್ಲಿ ಆಗಾಗ ಜಂಪಿಂಗ್ ಮಾಡಿಸುತ್ತಿದ್ದೆನು. ಈಗ ಪ್ರತಿದಿನವೂ ಜಂಪಿಂಗ್ ಆಟಗಳ ಆಡಿಸಲು ಯೋಜಿಸಿದ್ದೇನೆ, ಇದರಿಂದ ಮನೆಯೊಳಗೆ ಜಂಪ್ ಮಾಡುವುದು ಕಡಿಮೆಯಾಗುವುದೆಂದು ಅಂದಾಜಿಸಿದ್ದೇನೆ. ಕೆಳಗಿನ ಮನೆಯವರೂ ಅಷ್ಟೇ, ಮಕ್ಕಳು ಒಮ್ಮೆಮ್ಮೆ ಜಂಪ್ ಮಾಡಿದರೆ, ಅದು ಸಹಜ ಎಂದು ಹೊಂದಾಣಿಕೆ ಮಾಡಿಕೊಳ್ಳಬೇಕು. ಅದಕ್ಕಾಗಿ ಜಗಳ ತೆಗೆಯಬಾರದು. ನೆನಪಿರಲಿ, ವಿಶ್ವ ಆರೋಗ್ಯ ಸಂಸ್ಥೆಯು ಮಕ್ಕಳಿಗಾಗಿ ಶಿಫಾರಸ್ಸು ಮಾಡಿರುವ ದೈಹಿಕ ಚಟುವಟಿಕೆಗಳಲ್ಲಿ ನೆಗೆಯುವುದಕ್ಕೆ ಮಹತ್ವದ ಸ್ಥಾನ ನೀಡಿದೆ.

  • ಅಣೇಕಟ್ಟೆ ವಿಶ್ವನಾಥ್

(ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನ ಅಣೇಕಟ್ಟೆಯವರಾದ ವಿಶ್ವನಾಥ್‌ರವರು ಕೃಷಿಕರು ಮತ್ತು ತೆಂಗು ಬೆಳೆಗಾರರ ಸಂಘದ ಕಾರ್ಯದರ್ಶಿಗಳು. ತೆಂಗಿನ ಮೌಲ್ಯವರ್ಧನೆ ಇವರ ಆಸಕ್ತಿಯ ಕ್ಷೇತ್ರ.)


ಇದನ್ನೂ ಓದಿ: ಬಾರ್ಡರ್ ಕೇಸ್ ಬಸವಣ್ಣ: ಅಣೇಕಟ್ಟೆ ವಿಶ್ವನಾಥ್‌ರವರ ಕಥೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...