Homeಕರ್ನಾಟಕಮಹಿಷ ದಸರಾ: ಅಂಬಾರಿಯಲ್ಲಿ ಗಾಂಧಿ, ಅಂಬೇಡ್ಕರ್, ನಾಲ್ವಡಿ ಫೋಟೊ ಇರಲಿ - ಮಹೇಶ್ ಚಂದ್ರ ಗುರು

ಮಹಿಷ ದಸರಾ: ಅಂಬಾರಿಯಲ್ಲಿ ಗಾಂಧಿ, ಅಂಬೇಡ್ಕರ್, ನಾಲ್ವಡಿ ಫೋಟೊ ಇರಲಿ – ಮಹೇಶ್ ಚಂದ್ರ ಗುರು

- Advertisement -
- Advertisement -

ಮೈಸೂರು ದಸರಾ ಅಂಬಾರಿಯಲ್ಲಿ ಚಾಮುಂಡಿಯ ಬದಲಾಗಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿಯ ಭಾವಚಿತ್ರ, ಸಂವಿಧಾನ ರಚನೆ ಮಾಡಿದ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ, ಸರ್ವರ ಸಮಾನತೆಗೆ ಶ್ರಮಿಸಿದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರವನ್ನು ಇಟ್ಟು ಮೆರವಣಿಗೆ ಮಾಡಬೇಕು ಎಂದು ವಿಶ್ರಾಂತ ಪ್ರಾಧ್ಯಾಪಕ ಡಾ. ಬಿ.ಪಿ. ಮಹೇಶ್ ಚಂದ್ರ ಗುರು ಒತ್ತಾಯಿಸಿದರು.

ಮೈಸೂರಿನ ಅಶೋಕಪುರಂನ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನದಲ್ಲಿ ನಡೆದ ಮಹಿಷ ದಸರಾದಲ್ಲಿ ಮಾತನಾಡಿದ ಅವರು “ಮೈಸೂರು ದಸರಾ ಆಚರಣೆಗೆ ನಾವು ವಿರೋಧಿಗಳಲ್ಲ. ಪ್ರತಿಷ್ಠೆಗೊಸ್ಕರ ಮಹಿಷ ದಸರಾ ಆಚರಣೆ ಮಾಡುತ್ತಿಲ್ಲ. ಮೌಲ್ಯಗಳಿಗೆ ಶರಣಾಗಿ, ಪ್ರಕೃತಿಗೆ, ಸಂವಿಧಾನಕ್ಕೆ, ಚರಿತ್ರೆಗೆ, ಮೂಲ ನಿವಾಸಿಗಳಿಗೆ ಶರಣಾಗಿ ಮಹಿಷ ದಸರಾವನ್ನು ಆಚರಣೆ ಮಾಡಲಾಗುತ್ತಿದೆ” ಎಂದರು.

ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಮಹಿಷಾ ದಸರಾ ವೈಜ್ಞಾನಿಕ ಮತ್ತು ವಿಜ್ಞಾನದ ದಸರಾ. ಇದು ಮೌಢ್ಯವಲ್ಲ, ಬೌದ್ಧ ದೀಕ್ಷೆ ಸ್ವೀಕರಿಸುವ ಸಮಾವೇಶವಾಗಿದೆ.  ಜಾಗೃತ ಸಮಾಜದಿಂದ ದೇಶವನ್ನು ಆಳುವುದಕ್ಕೆ ಸಾಧ್ಯ. ಸತ್ತ ಸಮಾಜದಿಂದ ಯಾವುದೇ ಪ್ರಯೋಜನವಿಲ್ಲ ಎಂದು ಅಂಬೇಡ್ಕರ್ ಅವರು ಹೇಳಿದ್ದಾರೆ. ಆದ್ದರಿಂದ ನಾವು ಜಾಗೃತರಾಗಬೇಕು ಎಂದರು.

ಪ್ರಸ್ತುತ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿ ಶಿಕ್ಷಣ ಕ್ಷೇತ್ರವನ್ನು ಮತ್ತೆ ಸಾಂಪ್ರದಾಯಿಕ ವ್ಯವಸ್ಥೆಗೆ ತಗೆದುಕೊಂಡು ಹೋಗಲಾಗುತ್ತಿದೆ. ಗುರುಕುಲದ ಶಿಕ್ಷಣ ಪದ್ಧತಿ ಬರಲಿದೆ. ಮಡಕೆ ಮಾಡುವವರು, ಚಪ್ಪಲಿ ಹೊಲೆಯುವವರು, ಜೀತ ಮಾಡುವವರು ಜೀತ ಮಾಡಬೇಕೆಂದು ಎನ್‌ಇಪಿ ಬಯಸುತ್ತದೆ. ಇಂಥ ಶಿಕ್ಷಣ ನಮಗೆ ಬೇಕೆ ಎಂದು ಪ್ರಶ್ನಿಸಿದರು.

ಹಾಡುಹಗಲೇ ರೈತರ ಮೇಲೆ ಕಾರು ಹರಿಸಿ ರೈತರನ್ನು ಕೊಲೆ ಮಾಡಿದ್ದಾರೆ. ಕೊಲೆ ಮಾಡಿದವರನ್ನು ಬಂಧಿಸುವುದನ್ನು ಬಿಟ್ಟು, ಮೃತರ ಕುಟುಂಬ ಸದಸ್ಯರ ಭೇಟಿ ಮಾಡಲು ಹೋದ ಪ್ರಿಯಾಂಕಾ ಗಾಂಧಿಯನ್ನು ಬಂಧಿಸಿದ್ದಾರೆ. ಇಲ್ಲಿ ಸಂವಿಧಾನ ಗಾಳಿಗೆ ತೂರಿದ್ದಾರೆ. ಪ್ರಜಾಪ್ರಭುತ್ವ ಸತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇತಿಹಾಸ ತಜ್ಞ ಪ್ರೊ. ನಂಜರಾಜೇ ಅರಸ್ ಮಾತನಾಡಿ “ನಮ್ಮದು ಜಾತ್ಯತೀತ ರಾಷ್ಟ್ರ. ಸರ್ಕಾರದ ವತಿಯಿಂದ ಯಾವುದೇ ಧಾರ್ಮಿಕ ಆಚರಣೆಗಳನ್ನು ಮಾಡಬಾರದು ಎಂದು 1974ರಲ್ಲಿ ಸಂವಿಧಾನದ ತಿದ್ದುಪಡಿಯಲ್ಲಿ ಹೇಳಲಾಗಿದೆ. ಆದರೆ ಕರ್ನಾಟಕ ಸರ್ಕಾರ ಸಾರ್ವಜನಿಕರ ತೆರಿಗೆ ಹಣದಿಂದ, 7-8 ಕೋಟಿ ರೂಪಾಯಿ ಖರ್ಚು ಮಾಡಿ ದಸರಾವನ್ನು ಆಚರಣೆ ಮಾಡುತ್ತಿದೆ. ಇದು ಸಂವಿಧಾನದ ವಿರೋಧಿ ಕೆಲಸ ಎಂದರು.

ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಮಾತನಾಡಿ “ಹಿಂದೂ ಧರ್ಮ ಗುಲಾಮಗಿರಿ ಧರ್ಮ. ಶೇ.4ರಷ್ಟು ಜನರು ಶೇ.96ರಷ್ಟು ಜನರನ್ನು ಆಳುತ್ತಿದ್ದಾರೆ. ಈ ಬಹುಸಂಖ್ಯಾತರು ತಲೆ ಬೆಳೆಸಿಕೊಂಡಿಲ್ಲ. ಶೇ.ನಾಲ್ಕರಷ್ಟಿರುವ ಜನರ ಕೈಗೆ ತಲೆಯನ್ನು ಕೊಟ್ಟುಬಿಟ್ಟಿದ್ದಾರೆ. ಅವರು ಪಂಚಾಂಗಗಳ ಮೂಲಕ ನಿಮ್ಮನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳುತ್ತಿದ್ದಾರೆ. ಆದ್ದರಿಂದ ಬಹುಸಂಖ್ಯಾತರು ಸ್ವಂತ ಬುದ್ಧಿಶಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕೊಳ್ಳೇಗಾಲದ ಜೇತವನದ ಮನೋರಕ್ಖಿತ ಭಂತೇಜಿ, ನಾಗಬಸವ ಸ್ವಾಮೀಜಿ, ಡಾ.ಕೃಷ್ಣಮೂರ್ತಿ ಚಮರಂ, ಬೆಟ್ಟಯ್ಯ ಕೋಟೆ, ಚಿಕ್ಕಂದಾನಿ, ಸಿದ್ಧಸ್ವಾಮಿ, ಪಾಲಿಕೆ ಸದಸ್ಯರಾದ ಪಲ್ಲವಿ ಬೇಗಂ, ಜಪರಪ್ಪ, ಮಲೆಯೂರು ಸೋಮಣ್ಣ, ಎನ್.ಸಿದ್ದರಾಜು, ಚೋರನಹಳ್ಳಿ ಶಿವಣ್ಣ, ಬಿ.ಡಿ.ಶಿವಬುದ್ಧಿ, ಶಂಭುಲಿಂಗಸ್ವಾಮಿ, ಮರಂಕಯ್ಯ, ರಾಜಶೇಖರ ಕೋಟೆ, ಚುಂಚನಹಳ್ಳಿ ಮಲ್ಲೇಶ್, ನಗರ್ಲೆ ಎಂ.ವಿಜಯಕುಮಾರ್, ಕಾರ್ಯ ಬಸವಣ್ಣ, ಯಡದೊರೆ ಮಹಾದೇವಯ್ಯ, ಮಹೇಶ್ ಸೋಸ್ಲೆ, ಮರಿದೇವರು, ಈಶ್ವರ ಚಕ್ಕಡಿ, ಅಲಗೂಡು ಶಿವಕುಮಾರ್, ರೇವಣ್ಣ, ಮುದ್ದುಮಾದಯ್ಯ,ಬೈರಾಪುರ ರಾಮು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.


ಇದನ್ನೂ ಓದಿ: ಸರ್ಕಾರಿ ಕಾರ್ಯಕ್ರಮದಲ್ಲಿ ಹಿಂದುತ್ವದ ಘೋಷಣೆ – ಕಾರ್ಯಕ್ರಮ ಮೊಟಕುಗೊಳಿಸಿದ ಜಿಲ್ಲಾಧಿಕಾರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...