Homeಅಂಕಣಗಳುಕಳೆದು ಹೋದ ದಿನಗಳು -24: ಶಾಪ್ ಸಿದ್ಧೇಗೌಡ ಚಿನ್ನದ ಪದಕದ ಸ್ಥಾಪಕರ ಕುರಿತು

ಕಳೆದು ಹೋದ ದಿನಗಳು -24: ಶಾಪ್ ಸಿದ್ಧೇಗೌಡ ಚಿನ್ನದ ಪದಕದ ಸ್ಥಾಪಕರ ಕುರಿತು

- Advertisement -
- Advertisement -

ನಂತರ ಗಣಪಯ್ಯನವರು ಸಕ್ರಿಯ ರಾಜಕಾರಣದಿಂದ ಹೆಚ್ಚೂ ಕಡಿಮೆ ದೂರವಿದ್ದರು. ಕೃಷಿ ಮತ್ತು ಜನಸಂಪರ್ಕಗಳಲ್ಲಿ ಕಾಲ ಕಳೆಯುತ್ತಿದ್ದರು. ಹಾರ್ಲೆ ಎಸ್ಟೇಟಿಗೆ ಬಂದು ಹೋಗುತ್ತಿದ್ದ ಗಣ್ಯರು ನೂರಾರು ಮಂದಿ, ಅವರಲ್ಲಿ ಭಾನು ಪ್ರತಾಪ್ ಸಿಂಗ್, ಎ.ಎಸ್. ರಸ್ತೋಗಿ, ಪಿ.ಸಿ.ಚಾಕೋ, ಮುತ್ತುಸ್ವಾಮಿ ಗೌಂಡರ್, ಚಂದ್ರಶೇಖರ ಭೂಪಾಲಮ್, ಮುಂತಾದವರಿದ್ದರು. ಸಿ.ಎಂ.ಪೂಣಚ್ಚ, ಗ್ರೆಗೊರಿ ಮಥಾಯಿಸ್ ಮುಂತಾದವರ ತೋಟಗಳನ್ನು ಇವರೇ ನೋಡಿಕೊಳ್ಳುತ್ತಿದ್ದರಾದ್ದರಿಂದ ಅವರು ನಿರಂತರ ಸಂಪರ್ಕದಲ್ಲಿದ್ದರು.

ಅಷ್ಟು ದೊಡ್ಡ ವ್ಯವಹಾರಗಳನ್ನು ನಡೆಸುತ್ತಾ ರಾಷ್ಟ್ರ ಮಟ್ಟದಲ್ಲಿ ರಾಜಕಾರಣ ಮತ್ತು ರೈತ ಸಂಘಟನೆಗಳಲ್ಲಿ ಮುಂದಾಳುವಾಗಿದ್ದ ಅವರು ಸಾಮಾನ್ಯರ ಜೊತೆ ಅತಿ ಸಾಮಾನ್ಯರಾಗಿದ್ದರು. ಪ್ರತಿವಾರ ವಾರದ ಸಂತೆಗೆ ಅವರೇ ಹೋಗುವರು. ಇಡೀ ಸಂತೆಯಲ್ಲಿ ತಿರುಗಿ ತರಕಾರಿಯನ್ನು ಕೊಳ್ಳುವರು. ಅದೂ ಸಹಾ ಹೆಚ್ಚಾಗಿ ಮುದುಕರು ಮತ್ತು ಮಹಿಳೆಯರ ಬಳಿಯೇ ವ್ಯಾಪಾರ. ಸಂತೆಯಲ್ಲಿ ಮಾರುವ ಕರಿದ ತಿಂಡಿಗಳನ್ನು ಕೊಂಡು ಜೊತೆಯಲ್ಲಿ ಇದ್ದವರಿಗೂ ಕೊಡುವರು ಯಾರಾದರೂ, ಮಕ್ಕಳು ಮತ್ತು ಮುದುಕರು ಕಂಡರೆ ಅವರಿಗೂ ಹಂಚುವರು. ಇವೆಲ್ಲದರಿಂದ ಗಣಪಯ್ಯ ಒಂದು ವಾರ ಸಂತೆಗೆ ಬಾರದಿದ್ದರೆ “ಈ ವಾರ ಹಾರ್ಲೆ ಅಜ್ಜಾವ್ರು ಬಂದಿಲ್ಲ” ಎಂದು ಇಡೀ ಸಂತೆಯಲ್ಲಿ ಸುದ್ದಿಯಾಗುತ್ತಿತ್ತು. ಅವರು ಅಲ್ಲಿ ಕೊಳ್ಳುತ್ತಿದ್ದ ವಸ್ತುಗಳಿಗಿಂತೂ ಎಲ್ಲರನ್ನೂ ಮಾತಾಡಿಸುತ್ತ, ನಗುತ್ತ ತಿರುಗಾಡುತ್ತಿದ್ದುದೇ ನೋಡುಗರಿಗೆ ಒಂದು ವಿಶೇಷವಾಗಿತ್ತು. ಆ ಕ್ಷಣಗಳನ್ನು ಇಂದಿಗೂ ಅಲ್ಲಿನ ಹಿರಿಯರು ನೆನಪಿಸಿಕೊಳ್ಳುತ್ತಾರೆ.

ಆಲಪ್ಪ ಶೆಟ್ಟಿ ಎಂಡ್ ಸನ್ಸ್

ಒಮ್ಮೆ ಸಂತೆಯಲ್ಲಿ ಜೀಪ್ ನಿಲ್ಲಿಸಿದ್ದರು. ಜೀಪು ನಿಂತಿದ್ದ ಸ್ಥಳದ ಪಕ್ಕದಲ್ಲಿಯೇ ಜಾಯ್ ಸೆಬಾಸ್ಟಿಯನ್ ಎಂಬವರೊಬ್ಬರ ಟೈರ್ ರಿಪೇರಿ ಅಂಗಡಿ. ಅದುವರೆಗೆ ಸಣ್ಣ ಪುಟ್ಟ ರಿಪೇರಿ ಕೆಲಸ ಮಾಡುತ್ತಿದ್ದವರು. ಟೈರ್ ರಿಟ್ರೆಡಿಂಗ್ ಕೆಲಸ ಪ್ರಾರಂಭಿಸಿದ್ದರು. ಅವರು ಗಣಪಯ್ಯನವರ ಜೀಪನ್ನು ನೋಡಿದರು. ನಾಲ್ಕೂ ಟೈರುಗಳು ಸಾಕಷ್ಟು ಸವೆದಿದ್ದವು.

ಆತ ಗಣಪಯ್ಯನವರ ಬಳಿ ಬಂದು “ಸಾರ್ ನಿಮ್ಮ ಜೀಪಿನ ಟೈರುಗಳು ಸವೆದಿವೆ, ಅದು ಪೂರ್ತಿ ಸವೆದರೆ ನೀವು ಹೊಸ ಟೈರು ಹಾಕಿಸಬಲ್ಲಿರಿ, ಆದರೆ ಈಗ ನನಗೆ ಕೊಟ್ಟರೆ ರಿಟ್ರೆಡ್ ಮಾಡಿ ಕೊಡುತ್ತೇನೆ. ನನಗೆ ಒಂದು ದಿನ ಮನೆಯಲ್ಲಿ ಎಲ್ಲರಿಗೂ ಊಟಕ್ಕೆ ಆಗುತ್ತದೆ” ಎಂದರು.

ಗಣಪಯ್ಯ ಆಗ “ನೋಡುವ” ಎಂದು ಹೇಳಿ ಮನೆಗೆ ಬಂದವರು ಮಾರನೆಯ ದಿನ ಡ್ರೈವರಲ್ಲಿ ಜೀಪು ಕೊಟ್ಟು ನಾಲ್ಕೂ ಟೈರುಗಳನ್ನು ರಿಟ್ರೆಡಿಂಗಿಗೆ ಅಲ್ಲಿಗೇ ಕೊಟ್ಟು ಕಳುಹಿಸಿದರು. ನಂತರ ವರ್ಷಗಳ ಕಾಲ ಹಾರ್ಲೆ ವಾಹನಗಳ ಟೈರುಗಳು ಸವೆದಾಗ ಅಲ್ಲಿಗೆ ಕಳುಹಿಸುತ್ತಿದ್ದರು.

ಸಾಮಾನ್ಯವಾಗಿ ಜೀಪನ್ನು ಅವರೇ ಡ್ರೈವ್ ಮಾಡುತ್ತಿದ್ದರು. ಕೆಲವು ಸಲ ಡ್ರೈವರ್ ಕರೆದೊಯ್ಯುವುದೂ ಇತ್ತು. ಯಾರ ಮನೆಗಾದರೂ ಮದ್ಯಾಹ್ನ ಹೋದರೆ ಡ್ರೈವರ್‌ಗೂ ಅವರ ಜೊತೆಯಲ್ಲೇ ಊಟ. ಅವರ ಮನೆಯಲ್ಲಿಯೂ ಅಷ್ಟೇ ಇಡೀ ಮನೆಗೆ ಎಲ್ಲರಿಗೂ ಮುಕ್ತ ಪ್ರವೇಶ ಅಲ್ಲಿ ಜಾತಿ, ವರ್ಗಗಳ ಪ್ರಶ್ನೆ ಇರಲಿಲ್ಲ.

ವಾಸಣ್ಣ ಶೆಟ್ಟರು

ಇತರ ದಿನಗಳಲ್ಲಿಯೂ ಅಷ್ಟೇ ಅವರ ಜೀಪು ಹೊರಟಿತೆಂದರೆ ಮನೆಯ ಎರಡು ನಾಯಿಗಳು ಮೊದಲು ಹತ್ತಿಕೂರುವವು. ಮತ್ತೆ ಜೀಪಿನ ತುಂಬ ಹಿಂದೆ ಮುಂದೆ ತೋಟದ ಕಾರ್ಮಿಕರ ಮಕ್ಕಳು. ಗಣಪಯ್ಯ ದಾರಿಯುದ್ದಕ್ಕೂ ಮಕ್ಕಳ ಜೊತೆ ಮಾತಾಡುತ್ತ ಮಕ್ಕಳಿಗೆ ಭಜನೆ ಹಾಡುಗಳನ್ನು ಹೇಳಿಕೊಡುತ್ತಾ ಹೋಗುವರು. ತೋಟದ ನೂರಾರು ಮಕ್ಕಳಲ್ಲಿ ಪ್ರತಿಯೊಬ್ಬನ ಹೆಸರೂ ಗಣಪಯ್ಯನವರಿಗೆ ತಿಳಿದಿತ್ತು. ದಾರಿಯಲ್ಲಿ ಕಂಡ ಅಂಗಡಿಯಲ್ಲಿ ಕಾಯಿ, ಬೆಲ್ಲ, ಕಡ್ಳೆಪುರಿ, ಮಿಠಾಯಿಗಳನ್ನು ಕೊಂಡು ತಾವೂ ತಿಂದು ಮಕ್ಕಳಿಗೆ ಹಂಚುವರು.  ಮಕ್ಕಳ ಕೂಗಾಟದಿಂದ ಇಡೀ ಊರಿಗೇ ಗಣಪಯ್ಯನವರ ಜೀಪು ಬಂತೆಂದು ತಿಳಿಯುತ್ತಿತ್ತು.

ಗಣಪಯ್ಯನವರು ಸಕಲೇಶಪುರಕ್ಕೆ ಬಂದು ನೆಲೆಸಿದ ನಂತರ ಇಲ್ಲಿ ಅವರ ಬಳಗ ಬೆಳೆಯುತ್ತ ಹೋಯಿತು.  ಅವರಲ್ಲಿ ಹಲವಾರು ಕ್ಷೇತ್ರಗಳ ಜನರಿದ್ದರು, ರಾಜಕೀಯ ವಲಯದವರಲ್ಲದೆ, ಕೃಷಿಕರು, ಕೃಷಿ ವಿಜ್ಞಾನಿಗಳು, ಶಿಕ್ಷಣ -ವೈದ್ಯಕೀಯ ಕ್ಷೇತ್ರಗಳವರು, ಮುಂತಾದವರೆಲ್ಲ ಇದ್ದರು.

ಸಕಲೇಶಪುರದ ಅಂದಿನ ಗಣ್ಯರೆಲ್ಲರೂ ಗಣಪಯ್ಯನವರ ಜೊತೆ ಇದ್ದವರೇ, ಆಲಪ್ಪ ಶೆಟ್ಟಿ ಎಂಡ್ ಸನ್ಸ್‌ನ ನಾಗರಾಜ ಶೆಟ್ಟರ ಅಂಗಡಿ, ಸಕಲೇಶಪುರದ ನಗರದಲ್ಲಿ ಗಣಪಯ್ಯನವರ ಕಛೇರಿಯಂತೇ ಇತ್ತು. ಪೇಟೆಗೆ ಬಂದಾಗ ಅಲ್ಲೇ ಕುಳಿತು ವ್ಯವಹಾರಗಳನ್ನು ಮುಗಿಸುವರು.  ಹಾರ್ಲೆಗೆ ಕೆಲಸ ಕೇಳಿಕೊಂಡು ಬರುವ ಹೊಸ ಉದ್ಯೋಗಾರ್ಥಿಗಳ ಸಂದರ್ಶನಗಳು ಕೂಡಾ ಅಲ್ಲೇ ನಡೆಯುತ್ತಿದ್ದವು.

ನಾಗರಾಜ ಶೆಟ್ಟರ ಸಹೋದರ ವಾಸಣ್ಣ ಶೆಟ್ಟರು ಗಾಂಧೀಜಿ ಅನುಯಾಯಿ. ಮದ್ಯಪಾನ ನಿಷೆಧ ಚಳುವಳಿಯಲ್ಲಿ ಮುಂದಾಳುವಾಗಿದ್ದವರು. ಸ್ವಾತಂತ್ರ್ಯಾನಂತರದಲ್ಲಿ ಮೊದಲ ಬಾರಿಗೆ ಸಕಲೇಶಪುರದ ಪುರಸಭಾಧ್ಯಕ್ಷರಾಗಿ ಆಯ್ಕೆಯಾದರು. ವಾಸಣ್ಣ ಶೆಟ್ಟರಿಗೆ ಏಲಕ್ಕಿ ವ್ಯಾಪಾರವಿತ್ತು. ಪುರಸಭೆಯಲ್ಲಿ ಹಣದ ಕೊರತೆ ಆದಾಗಲೆಲ್ಲ, ತಮ್ಮ ಹಣದಿಂದ ನೌಕರರರಿಗೆ ವೇತನ ಕೊಡುತ್ತಿದ್ದರಂತೆ. 1962 ರಲ್ಲಿ ಇವರು ಕಾಂಗ್ರೆಸ್ಸಿನಿಂದ ಸ್ಪರ್ಧಿಸಿ ಸಕಲೇಶಪುರದ ಶಾಸಕರೂ ಆದರು. ಇವರ ಅಣ್ಣ ತಮ್ಮಂದಿರೂ ಸೇರಿದಂತೆ ಇಡೀ ಕುಟುಂಬ ಗಣಪಯ್ಯನವರ ಸ್ನೇಹಿತರಾಗಿದ್ದರು.

ಶಾಪ್ ಸಿದ್ದೇಗೌಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ಸಕಲೇಶಪುರದಲ್ಲಿ ಇನ್ನೊಂದು ಕುಟುಂಬ ಶಾಪ್ ಸಿದ್ದೇಗೌಡರದ್ದು. ಅವರ ಕುಟುಂಬಕ್ಕೆ ಶಾಪ್ ಕುಟುಂಬ ಹೆಸರು ಬಂದದ್ದೇ ಒಂದು ರೋಚಕ ಕಥೆ.

ಸಕಲೇಶಪುರದ ಸಿದ್ಧೇಗೌಡರು 1860ರಲ್ಲಿ ಹುಟ್ಟಿದ ಸಿದ್ಧೇಗೌಡರದು ಸಾಕಷ್ಟು ಶ್ರೀಮಂತ ಮನೆತನ, ಆಗಲೇ ಸುತ್ತಮತ್ತ ಇದ್ದಂತಹ ಬ್ರಿಟಿಷ್ ಪ್ಲಾಂಟರುಗಳ ಒಡನಾಟ. ಸಿದ್ದೇಗೌಡರು ಸಕಲೇಶಪುರ ಉಪ್ಪಿನಂಗಡಿ ರಸ್ತೆಯ ನಿರ್ಮಾಣದ ಕಂಟ್ರಾಕ್ಟರ್ ಆಗಿದ್ದರಂತೆ. ಆಗಿ ಕಬ್ಬಿಣದ ಸೇತುವೆಗಳೆಲ್ಲ ಜರ್ಮನ್ ಇಂಜಿನಿಯರ್‌ಗಳ ಉಸ್ತುವಾರಿಯಲ್ಲಿ ಆದವುಗಳಂತೆ. ಕಬ್ಬಿಣ ಸಾಮಗ್ರಿಯೆಲ್ಲ ಇಂಗ್ಲೆಂಡಿನಿಂದ ಬರಬೇಕಾಗಿತ್ತು.

ಸಿದ್ಧೇಗೌಡರಿಗೆ ಕಾಫಿ ವ್ಯಾಪಾರವೂ ಇತ್ತು. ಅದರ ನಿಮಿತ್ತ ಮದ್ರಾಸಿಗೂ ಹೋಗಿ ಬರುತ್ತಿದ್ದರು. ಆಗ ಮದ್ರಾಸಿನಲ್ಲಿ ಸ್ಪೆನ್ಸರ್ ಎಂಡ್ ಕಂಪೆನಿಯ ಸರ್ವ ಸಾಮಗ್ರಿ ಮಳಿಗೆಯನ್ನು ನೋಡಿದ ಸಿದ್ಧಗೌಡರು 1895ರಲ್ಲಿ ಸಕಲೇಶಪುರದಲ್ಲಿ ಅಂತದ್ದೇ ಒಂದು ಸರ್ವಸಾಮಗ್ರಿ ಮಳಿಗೆಯನ್ನು ತೆರೆದರು, ಅದಕ್ಕೆ ಸಿದ್ಧೇಗೌಡ ಎಂಡ್ ಕಂಪೆನಿ ಎಂದು ಹೆಸರಿಟ್ಟರು. ಅಲ್ಲಿ ತೋಟಗಳಿಗೆ ಬೇಕಾದ ಉಪಕರಣಗಳು, ಕಟ್ಟಡ ಸಾಮಗ್ರಿಗಳು, ಆಹಾರ ಪದಾರ್ಥ, ಚರ್ಮದ ವಸ್ತುಗಳು, ಅಡಿಗೆ ಎಣ್ಣೆಗಳು, ಮಾಂಸಗಳು ಹಾಗೆಯೇ ಇತರ ಕಟ್ಲೆರಿ ಸಾಮಾನುಗಳಿಂದ ಹಿಡಿದು ಗುಂಡುಸೂಜಿಯವರೆಗೆ ಎಲ್ಲವೂ ದೊರೆಯುತ್ತಿತ್ತು. ಇಡೀ ಎರಡು ಮೂರು ತಾಲ್ಲೂಕಿನಲ್ಲಿ ಹರಡಿ ಹೋಗಿದ್ದ ಬ್ರಿಟಿಷ್ ಪ್ಲಾಂಟರುಗಳು ಇವರ ಗಿರಾಕಿಗಳು.

ಆಗ ಸುತ್ತ ಮತ್ತ ಹಲವರು ಸಿದ್ಧೇಗೌಡರು ಇದ್ದುದರಿಂದ ಬ್ರಿಟಿಷರು ಇವರನ್ನು ಶಾಪ್ ಸಿದ್ಧೇಗೌಡ ಎಂದು ಕರೆಯಲಾರಂಭಿಸಿದರು. ಮುಂದೆ ಅದೇ ಪ್ರಚಲಿತವಾಯಿತು.

ಇವರು ವೀರಶೈವರಾದ್ದರಿಂದ ಮಾಂಸದ ವಸ್ತುಗಳ ಮಾರಾಟಕ್ಕೆಂದು ಮದ್ರಾಸಿನಿಂದಲೇ ಲಬ್ಬೆಯವರ (ಪಠಾಣರು) ನಾಲ್ಕು ಕುಟುಂಬಗಳನ್ನು ಕರೆತಂದರು. ಹಾಗೆ ಬಂದ ಕುಟುಂಬವೊಂದರ ಕುಡಿ ಮುಂದೆ ಜಾನಪದ ಜಂಗಮರೆಂದು ಖ್ಯಾತರಾದ ಎಸ್.ಕೆ. ಕರೀಂಖಾನರು.

ಆ ಕಾಲದಲ್ಲಿ ಮಂಗಳೂರಿನ ಕಡೆಯಿಂದ ಬರುವ ಸರಕು ಪಾಣೆಮಂಗಳೂರಿನವರೆಗೆ ದೋಣಿಯಲ್ಲಿ ಬರುತ್ತಿತ್ತು. ಅಲ್ಲಿಂದ ಎತ್ತಿನ ಗಾಡಿಗಳಲ್ಲಿ ಅದು ಶಿರಾಡಿ ಘಾಟಿಯ ಮೂಲಕ ಸಕಲೇಶಪುರಕ್ಕೆ ಬರಬೇಕಿತ್ತು. ಈ ಸರಕು ಸಾಗಣೆಗಾಗಿ ಸಿದ್ದೇಗೌಡರು, ರಾಮನಗರದಿಂದ ಕೆಲವು ಮುಸ್ಲಿಂ ಕುಟುಂಬವನ್ನು ಕರೆತಂದಿದ್ದರಂತೆ. ಆ ಕುಟುಂಬಗಳೂ ಸಕಲೇಶಪುರದಲ್ಲಿಯೇ ನೆಲೆಸಿದರು.

ಈ ಸಿದ್ಧೇಗೌಡರ ಮೂರನೆಯ ಮಗನಿಗೂ ಸಿದ್ಧೇಗೌಡರೆಂದೇ ಇಟ್ಟಿದ್ದರು. ಇವರ ಕಾಲದಲ್ಲಿ ಅಂಗಡಿ ವ್ಯಾಪಾರ ಇನ್ನಷ್ಟು ವೃದ್ಧಿಯಾಯಿತಲ್ಲದೆ. ಈ ಎರಡನೆಯ ಸಿದ್ಧೇಗೌಡರು ಅಂಗಡಿಯ ಹೆಸರನ್ನು “ಶಾಪ್ ಸಿದ್ಧೇಗೌಡ ಎಂಡ್ ಕಂಪನಿ” ಎಂದು ಬದಲಾಯಿಸಿದರು. ನಂತರ ಇವರ ಕುಟುಂಬಕ್ಕೆ ಶಾಪ್ ಕುಟುಂಬ ಹೆಸರು ಬಂತು. 1930 ರವೇಳೆಗೆ ಇಂಗ್ಲೆಂಡಿನ ಪತ್ರಿಕೆಗಳಲ್ಲಿ ಇವರ ಅಂಗಡಿಯ ಜಾಹೀರಾತು ಪ್ರಕಟವಾಗುತ್ತಿತ್ತು.!

ನಗರ ಮದ್ಯದಲ್ಲಿ ದೊಡ್ಡ ಮಸೀದಿ

ಆ ಕಾಲದಲ್ಲಿ ಹಾಸನದಲ್ಲಿ ಕೂಡಾ ವಾರದ ಸಂತೆಯ ದಿನ ಮಾತ್ರ ಅಂಗಡಿಗಳು ತೆರದಿದ್ದು ಉಳಿದ ದಿನ ಮುಚ್ಚಿರುತ್ತಿದ್ದವಂತೆ. ಆದರೆ ಸಕಲೇಶಪುರದ ಇವರ “ಶಾಪ್ ಸಿದ್ಧೇಗೌಡ ಎಂಡ್ ಕೊ” ಇಡೀ ವಾರ ತೆರೆದಿರುತ್ತಿತ್ತು.

ಸಕಲೇಶಪುರದ ಶಾಪ್ ಸಿದ್ಧೇಗೌಡ ಹಿರಿಯ ಪ್ರಾಥಮಿಕ ಶಾಲೆ. ಶಾಪ್ ಬಸಪ್ಪ ಪಶುವೈದ್ಯಶಾಲೆ, ಕ್ರಾಫರ್ಡ್ ಆಸ್ಪತ್ರೆಯ ಒಂದು ವಾರ್ಡ್ ಮುಂತಾದವೆಲ್ಲ ಇವರ ಕುಟುಂಬದ ಕೊಡುಗೆ.

ಆಗ ಸಕಲೇಶಪುರದಲ್ಲಿ ಮಸೀದಿ ಇರಲಿಲ್ಲ. ಇವರು ಮದ್ರಾಸಿನಿಂದ ಮತ್ತು ರಾಮನಗರದಿಂದ ಕರೆತಂದ ಮುಸ್ಲಿಂ ಕುಟುಂಬಗಳೂ ಸೇರಿದಂತೆ ಎಲ್ಲ ಮುಸ್ಲಿಮರಿಗಾಗಿ ಸಕಲೇಶಪುರದಲ್ಲಿ ಇವರ ನೇತೃತ್ವ ಮತ್ತು ಸಹಾಯದಿಂದ ಮಸೀದಿಯೊಂದು ನಿರ್ಮಾಣವಾಯಿತು. ಅದೇ ಇಂದಿನ ಸಕಲೇಶಪುರದ ನಗರ ಮದ್ಯದಲ್ಲಿರುವ ದೊಡ್ದ ಮಸೀದಿ.

ಇಂದಿಗೂ ಈ ಮಸೀದಿ ಸಮಿತಿಯವರು ಇವರ ಗೌರವಾರ್ಥ ವರ್ಷದಲ್ಲಿ ಒಂದು ಹಬ್ಬದ ಸಂದರ್ಭದಲ್ಲಿ ಶಾಪ್ ಸಿದ್ದೇಗೌಡ ಕುಟುಂಬದವರನ್ನು ಮಸೀದಿಗೆ ಆಹ್ವಾನಿಸಿ ಗೌರವಿಸುತ್ತಾರೆ.

ಬ್ರಿಟಿಷರ ಒಡನಾಡಿಯಾಗಿದ್ದು, ಅವರ ಭಾಷೆಯನ್ನು ಕಲಿತು, ಅವರೊಂದಿಗೆ ನಿರಂತರ ವ್ಯವಹಾರವನ್ನು ಇಟ್ಟುಕೊಂಡಿದ್ದ ಸಿದ್ಧೇಗೌಡರು ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಭಾಷೆಯಲ್ಲಿ ಉನ್ನತ ಶ್ರೇಣಿಗಳಿಸುವ ವಿದ್ಯಾರ್ಥಿಗಳಿಗೆ ಕೊಡಲಾಗುವ “ಶಾಪ್ ಸಿದ್ಧೇಗೌಡ ಚಿನ್ನದ ಪದಕ”ದ ಸ್ಥಾಪಕರು.!

ಈ ಕುಟುಂಬದ ಬಸಪ್ಪನವರು ಕಾಂಗ್ರೆಸ್ಸಿನಲ್ಲಿಇದ್ದು ಪುರಸಭಾದ್ಯಕ್ಷರೂ ಆಗಿದ್ದರು. ನಂತರದ ದಿನಗಳಲ್ಲಿ ಗಣಪಯ್ಯನವರ ನೇತೃತ್ವದ ಸ್ವತಂತ್ರ ಪಾರ್ಟಿ ಸೇರಿ ಸಕಲೇಶಪುರದಲ್ಲಿ ಸ್ವತಂತ್ರ ಪಕ್ಷದ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡಿದರು.

ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಜನತಾ ಮನೆಗಳ ನಿರ್ಮಾಣಕ್ಕೆ ದಿನವೊಂದಕ್ಕೆ 70 ಕಿ.ಮೀ ಸೈಕಲ್ ತುಳಿಯುತ್ತಿದ್ದ ದಿನಗಳು – ಪ್ರಸಾದ್ ರಕ್ಷಿದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...