Homeಮುಖಪುಟನೀವೊಂದು ತಂಡ ಕಟ್ಟಬೇಕೆಂದಿದ್ದೀರಾ? ಹಾಗಾದರೆ ಹೀಗೆ ಮಾಡಿನೋಡಿ

ನೀವೊಂದು ತಂಡ ಕಟ್ಟಬೇಕೆಂದಿದ್ದೀರಾ? ಹಾಗಾದರೆ ಹೀಗೆ ಮಾಡಿನೋಡಿ

- Advertisement -
- Advertisement -

ಜೀವನ ಕಲೆಗಳು: ಅಂಕಣ-27

ತಂಡ ಕಟ್ಟುವ ಕಲೆ

ತಂಡವನ್ನು ಕಟ್ಟುವ ಕಲೆ ಮತ್ತು ತಂಡದಂತೆ ಕೆಲಸ ಮಾಡುವ ಕಲೆಗಳು ಎರಡೂ ಬೇರೆ ಬೇರೆ. ಇವೆರಡನ್ನೂ ಗಲಿಬಿಲಿ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಯಾವುದೇ ಒಂದು ಕಾರ್ಯಕ್ಕೆ, ಯೋಜನೆ ಹಾಕುವಾಗ ಅದಕ್ಕೆ ಬೇಕಾದ ಸರಿಯಾದ ಜನರನ್ನು ಹುಡುಕಿ, ತೆಗೆದು, ಗುಂಪುಗೂಡಿಸುವುದು ತಂಡ ರಚನೆ. ಆದರೆ ನಂತರ ಈ ಗುಂಪನ್ನು ಒಂದು ತಂಡದಂತೆ ಕೆಲಸಕ್ಕಿಳಿಸಿ, ಯೋಜನೆಯನ್ನು ಸಾರ್ಥಕಗೊಳಿಸುವುದು ಆ ತಂಡದ  ನಾಯಕರ ಕೆಲಸ. ಕೆಲವು ವಿಷಯದಲ್ಲಿ ಸಮಾನತೆ ಇದ್ದರೂ ಸಹ ಪ್ರಕ್ರಿಯೆಯಲ್ಲಿ ಕೆಲವು ವ್ಯತ್ಯಾಸಗಳೂ ಇರುತ್ತವೆ.

ಶೈಕ್ಷಣಿಕ ಮನಃಶಾಸ್ತ್ರಜ್ಞ ಬ್ರೂಸ್ ಟಕ್ಮಾನ್ ಪ್ರಕಾರ ತಂಡ ರಚನೆಯಲ್ಲಿ ಐದು ಅಭಿವೃದ್ಧಿ ಪ್ರಕ್ರಿಯೆಗಳಿವೆ. ಇದನ್ನು ಅವರು ಫಾರ್ಮಿಂಗ್, ಸ್ಟಾರ್ಮಿಂಗ್, ನಾರ್ಮಿಂಗ್, ಪರ್ಫಾರ್ಮಿಂಗ್ ಮತ್ತು ಅಡ್ಜರ್ನಿಂಗ್, (forming, storming, norming, performing, and adjourning) ಎನ್ನುತ್ತಾರೆ.

·         ರಚನೆ (ಫಾರ್ಮಿಂಗ್) ಹಂತದಲ್ಲಿ ಸರಿಯಾದ ಜನರನ್ನು ತಂಡಕ್ಕೆ ಆಯ್ದುಕೊಳ್ಳುವುದು. ಇದು ತಂಡರಚನಾಕಾರರ ಕೆಲಸ.

·         ಸ್ಟಾರ್ಮಿಂಗ್ (ಬ್ರೇನ್ ಸ್ಟಾರ್ಮಿಂಗ್) ಹಂತದಲ್ಲಿ ಒಟ್ಟಾಗಿ ಕಲೆತು ತಂಡದ ಬಗ್ಗೆ ಎಲ್ಲರೂ ತಮ್ಮ ತಮ್ಮ ಸಲಹೆಗಳನ್ನು ಕೊಡುವುದು.

·         ನಾರ್ಮಿಂಗ್ ಹಂತದಲ್ಲಿ ತಂಡದ ಕೆಲಸ ಮತ್ತು ನಿಯಮಾವಳಿಯನ್ನು ರೂಪಿಸಿ, ಎಲ್ಲರಿಗೂ ಸರಿಯಾಗಿ ತಿಳಿಯುವಂತೆ ಹೇಳುವುದು.

·         ಪರ್ಫೊರ್ಮಿಂಗ್ ಹಂತದಲ್ಲಿ ತಂಡವು ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವುದು.

·         ಕೊನೆಯದಾಗಿ ಅಡ್ಜರ್ನಿಂಗ್ ಹಂತದಲ್ಲಿ ಕೆಲಸ ಮುಗಿದ ನಂತರ ತಂಡವನ್ನು ಬರ್ಖಾಸ್ತ್ ಮಾಡುವುದು.

ನಿಮಗೆಲ್ಲಾ ತಿಳಿದಿರುವಂತೆ ಯಾವುದಾದರೂ ನೈಸರ್ಗಿಕ ವಿಕೋಪ ಅಥವಾ ಕಠಿಣವಾದ ಕೆಲಸವನ್ನು ಕೂಡಲೇ ಮಾಡಬೇಕಾಗಿ ಬಂದಾಗ ಜನರಿಗೂ ಮತ್ತು ಸರಕಾರಕ್ಕೂ ಭಾರತೀಯ ಸೇನೆ ನೆನಪಾಗುತ್ತದೆ. ಏಕೆ ಗೊತ್ತೆ? ಅದರಲ್ಲಿರುವ ಶಿಸ್ತು ಮತ್ತು ಛಲ. ಸೈನಿಕರು ಯಾವ ಸಮಯದಲ್ಲೂ ಇದು ನಮ್ಮ ಕೆಲಸವಲ್ಲ, ಈಗ ಚಹಾ ಸಮಯ, ಮುಂತಾದ ಕ್ಷುಲ್ಲಕ ಕಾರಣ ನೀಡುವುದಿಲ್ಲ. ಅವಶ್ಯಕತೆ ಬಿದ್ದಲ್ಲಿ ತಮ್ಮ ಪ್ರಾಣವನ್ನು ಪಣಕ್ಕೆ ಒಡ್ಡಿ, ಹೇಳಿದ ಕೆಲಸ ಮಾಡಿ ಮುಗಿಸುತ್ತಾರೆ. ಸೈನ್ಯದ ಇನ್ನೊಂದು ಬಹಳ ಗಮನೀಯ ಗುಣ ಅಂದರೆ ಇಲ್ಲಿ ಜಾತಿ ಬೇಧವಿಲ್ಲ. ಮೇಲಧಿಕಾರಿ ಅಥವಾ ಕೆಳ ಹಂತದ ಸೈನಿಕ ಇಬ್ಬರಿಗೂ ಎಂದೂ ಕೆಲಸದ ಮಧ್ಯೆ ಜಾತಿಯ ಪ್ರಶ್ನೆ ಉದ್ಭವವಾಗುವುದಿಲ್ಲ. ಕೆಲಸದಲ್ಲಿ ಅವನ ರೆಜಿಮೆಂಟ್ ಅವನ ಜಾತಿಯಾಗುತ್ತದೆ. ಆದ್ದರಿಂದ ಇಂತಹ ಚಿಂತನೆಯುಳ್ಳ ಜನರನ್ನು ನಿಮ್ಮ ತಂಡಕ್ಕೆ ಸೇರಿಸಿಕೊಂಡಲ್ಲಿ ಏನೇ ಕೆಲಸವಿರಲಿ, ನಿಮ್ಮ ತಂಡ ಮಾಡಲು ಸಾಧ್ಯವಾಗುತ್ತದೆ.

ತಂಡ ಕಟ್ಟಲು ಮುಖ್ಯವಾಗಿ ನಮಗೆ ಬೇಕಾಗಿರುವುದು ಮುನ್ನೋಟ, ದೂರದೃಷ್ಟಿ (ವಿಷನ್): ನಾವು ಏತಕ್ಕಾಗಿ ಈ ತಂಡ ರಚಿಸುತ್ತಿದ್ದೇವೆ, ಇದರಿಂದ ಸಾಧಿಸಬೇಕಾಗಿರುವುದು ಏನು ಎಂಬ ಮಾಹಿತಿ ನಮ್ಮಲ್ಲಿರಬೇಕು.

ಎರಡನೆಯದು ತಂಡದಲ್ಲಿ ಸಾಮರಸ್ಯ, ಸೌಹಾರ್ದತೆ ಇರಬೇಕು, ಇಲ್ಲದಿದ್ದಲ್ಲಿ ತಂಡ ಏಕ ದಿಸೆಯಲ್ಲಿ ಸಾಗಲು ಸಾಧ್ಯವಿಲ್ಲ.

ಮೂರನೆಯದು ಗುರಿಯ ಕೇಂದ್ರೀಕರಣ (ಫೋಕಸ್). ಇಡೀ ತಂಡ ತನ್ನ ಗಮನವನ್ನು ಒಂದೇ ಗುರಿಯತ್ತ ಕೇಂದ್ರೀಕರಿಸಿ, ಅದರತ್ತ ಒಂದೇ ಗತಿಯಲ್ಲಿ ಸಾಗಬೇಕು.

ನಾಲ್ಕನೆಯದು ಕೆಲಸದ ಪ್ರತಿ ಸಂಪೂರ್ಣ ಸಮರ್ಪಣೆ. ಇದನ್ನು ಬಿಟ್ಟು ಇನ್ನೇನನ್ನೂ ಯೋಚಿಸುವಂತಿಲ್ಲ.

ಐದನೆಯದು ಸಮರ್ಪಕ ಸಂವಹನ. ತಂಡದ ರಚನಾಕಾರರ, ನಾಯಕರ ಮತ್ತು ಪರಸ್ಪರ ಸದಸ್ಯರ ಮಧ್ಯೆ ಸಂವಹನೆ ಸಮರ್ಪಕವಾಗಿರಬೇಕು.

ಹೊಂದಿಕೊಳ್ಳುವಿಕೆ: ಅವಶ್ಯಕತೆ ಹಾಗೂ ಸನ್ನಿವೇಶಕ್ಕೆ ತಕ್ಕಂತೆ ಕೆಲಸಕ್ಕೆ ಹೊಂದಿಕೊಳ್ಳುವಿಕೆ ಇರಬೇಕು.

ಪ್ರತಿಭೆ: ತಂಡದಲ್ಲಿ ಕೆಲಸಕ್ಕೆ ಬೇಕಾದ ಪ್ರತಿಭೆ ಇರಬೇಕು. ಕ್ರಿಕೆಟ್ ಆಟಗಾರರನ್ನು ಸೇರಿಸಿಕೊಂಡು ಫುಟ್ಬಾಲ್ ಪಂದ್ಯಕ್ಕೆ ಸ್ಪರ್ದಿಸಲಾಗುವುದಿಲ್ಲ.

ಮಾಪನ: ಪ್ರತ್ಯೇಕವಾಗಿ ತಂಡದ ಸದಸ್ಯರ ಮತ್ತು ಒಟ್ಟಾಗಿ ತಂಡದ ಪ್ರದರ್ಶನವನ್ನು ಅಳೆಯುವ ಮಾಪನ/ಸಾಧನ ಇರಬೇಕು.

ಅನುಭವ: ತಂಡ ರಚಿಸುತ್ತಿರುವವರಿಗೆ ತಂಡ ರಚನೆಯ ಅನುಭವವಿರಬೇಕು. ಇಲ್ಲದಿದ್ದಲ್ಲಿ ಇದು ಪರೀಕ್ಷೆ, ಮರುಪರೀಕ್ಷೆ (ಟ್ರಯಲ್ ಎಂಡ್ ಎರರ್) ಪ್ರಯತ್ನವಾಗುತ್ತದೆ. ಸಮಯ ಮತ್ತು ಪರಿಶ್ರಮ ವ್ಯರ್ಥವಾಗುತ್ತದೆ.

ತಂಡ ರಚನೆಗೆ ಬೇಕಾದ ಕಲೆಗಳು:

·         ಸಂವಹನ ಕಲೆ*

·         ಸಮಸ್ಯೆಗಳ ಪರಿಹಾರದ ಕಲೆ*

·         ನಾಯಕತ್ವದ ಕಲೆ*

·         ತಂಡದಂತೆ ಕೆಲಸ ಮಾಡುವ ಕಲೆ*

·         ಪ್ರೇರೇಪಿಸುವ ಕಲೆ%

·         ಅಧಿಕಾರ/ಜವಾಬ್ದಾರಿ ವಹಿಸಿವ ಕಲೆ%

·         ಪ್ರತ್ಯಾದಾನದ ಕಲೆ%

(*ಈ ಕಲೆಗಳ ಬಗ್ಗೆ ಪ್ರತ್ಯೇಕವಾಗಿ, ವಿವರವಾಗಿ ಬರೆದಿರುತ್ತೇನೆ ಮತ್ತು % ಬೇರೆ ಕಲೆಗಳ ಭಾಗವಾಗಿರುತ್ತದೆ.)

ತಂಡ ಕಟ್ಟುವ ಸಲುವಾಗಿ:

1.      ತಂಡದ ನಾಯಕರನ್ನು ನೇಮಿಸಬೇಕು. ನಾಯಕರ ಮೇಲೆ ತಂಡದ ಸದಸ್ಯರಿಗೆ ಸಂಪೂರ್ಣ ವಿಶ್ವಾಸವಿದ್ದಲ್ಲಿ ಅವರು ನಾಯಕರ ಅನುಪಸ್ಥಿತಿಯಲ್ಲೂ ಸಹ ಸಮರ್ಪಕವಾಗಿ ಕೆಲಸ ಮಾಡುತ್ತಾರೆ.

2.      ತಂಡದ ಪ್ರತಿಯೊಬ್ಬ ಸದಸ್ಯರ ಜೊತೆಯೂ ಒಳ್ಳೆಯ ಸೌಹಾರ್ದಯುತ ಬಾಂಧವ್ಯ ಬೆಳೆಸಿ.

3.      ತಂಡದ ಸಂವಹನೆಯ ರೂಪು ರೇಷೆಗಳನ್ನು ಚರ್ಚಿಸಿ. ಪ್ರಕ್ರಿಯೆ ಸುಲಲಿತಗೊಳಿಸಿ.

4.      ಒಂದು ತಂಡದಂತೆ ಕೆಲಸಮಾಡುವ ಅಭ್ಯಾಸವನ್ನು ಸದಸ್ಯರಲ್ಲಿ ಬೆಳೆಯುವಂತೆ ಮಾಡಿ.

5.      ತಂಡದಲ್ಲಿ ಸದಸ್ಯರ ನಡತೆಯ ನಿಯಮಾವಳಿ ಎಲ್ಲರಿಗೂ ತಿಳಿಯುವಂತೆ ಸ್ಪಷ್ಟಗೊಳಿಸಿ.

6.      ತಂಡದಲ್ಲಿ ಪ್ರತಿಯೊಬ್ಬ ಸದಸ್ಯನಿಗೂ ತನ್ನ ಕೆಲಸ/ಸಮಯ ಬಹಳ ಸ್ಪಷ್ಟವಾಗಿ ತಿಳಿದಿರಬೇಕು. ಜೊತೆಗೆ ಬೇರೆಯವರ ಕೆಲಸ/ಸಮಯ ಏನು ಎಂಬುದರ ಅರಿವೂ ಇರಬೇಕು.

7.      ತಂಡದಲ್ಲಿ ಸಾಮರಸ್ಯವಿರಬೇಕು, ಇಂದಿನ ದೈನಂದಿನ ಜೀವನದಲ್ಲಿ ಒಡಕು ಹುಟ್ಟಿಸುವ ಅಂಶಗಳಾದ ಜಾತಿ, ಧರ್ಮ, ಆಹಾರ, ವೇಷ-ಭೂಷದಂತಹ ವಿಷಯಗಳು ಮತ್ತು ವೈಯುಕ್ತಿಕ ಅಂಶಗಳಾದ ಅಹಂಕಾರ, ಮತ್ಸರ ಮುಂತಾದವು ತಂಡವನ್ನು ಕಾಡುತ್ತಿದ್ದಲ್ಲಿ ತಂಡದಿಂದ ಏನನ್ನೂ ಸಾಧಿಸಲು ಆಗುವುದಿಲ್ಲ.

ತಂಡರಚನೆಗೆ ಅನುಕೂಲವಾಗುವಂತಹ ಹಲವಾರು ಒಳಾಂಗಣ ಮತ್ತು ಹೊರಾಂಗಣ ಆಟಗಳು ಅಂತರ್ಜಾಲದಲ್ಲಿ ಲಭ್ಯವಿದೆ. ಇದನ್ನು ಆಡುವ ಮೂಲಕ ಬೇರೆ ಬೇರೆ ಶೈಕ್ಷಣಿಕ, ಸಾಮಾಜಿಕ ಹಿನ್ನೆಲೆಯಿಂದ ಬಂದಿರುವ ಸದಸ್ಯರಲ್ಲಿ ವೈವಿಧ್ಯತೆಯಲ್ಲಿ ಐಕ್ಯತೆ ಎಂಬಂತೆ “ನಾವು ಒಂದೇ ತಂಡ” ಎಂಬ ಭಾವನೆ ಬೆಳೆದು, ಅವರು ತಂಡಕ್ಕೋಸ್ಕರ ಕೆಲಸ ಮಾಡುವಂತೆ ಪ್ರೇರೇಪಣೆಗೆ ಒಳಗಾಗುತ್ತಾರೆ. ಇಂತಹ ಆಟಗಳನ್ನು ನಮ್ಮ ಮಕ್ಕಳು ಚಿಕ್ಕಂದಿನಿಂದಲೂ ಆಡುತ್ತಿರುತ್ತಾರೆ ಆದರೆ ಅವರಿಗೆ ಆಟಕ್ಕೂ ನಿಜ ಜೀವನಕ್ಕೂ ಇರುವ ಹೋಲಿಕೆ/ಸಂಬಂಧ ಅಥವಾ ಪ್ರಯೋಜನ ತಿಳಿದಿರುವುದಿಲ್ಲ.

ತಂಡರಚನೆ ಬಹಳ ಸುಧೀರ್ಘವಾದ ವಿಷಯ. ನಾನು ಕೇವಲ ಪಕ್ಷಿನೋಟ ಮಾತ್ರ ನೀಡಿದ್ದೇನೆ. ಇಂದಿನ ದಿನಗಳಲ್ಲಿ ತಂಡ ರಚನೆಯ ತಂತ್ರಾಂಶವಷ್ಟೇ ಅಲ್ಲ, ಮೊಬೈಲ್ ಆಪ್ ಕೂಡಾ ಬಂದಿವೆ. ಇವು ತಂಡರಚನೆಯ ಎಲ್ಲಾ ಪ್ರಕ್ರಿಯೆಯನ್ನು ಸ್ವಯಂಚಾಲತೀಕರಣಗೊಳಿಸಿವೆ. ನೀವೂ ನಿಮ್ಮ ತಂಡ ರಚಿಸಿಕೊಳ್ಳಿ.

 

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...