Homeಕರ್ನಾಟಕ17 ಶಾಸಕರ ಅನರ್ಹತೆ, ಡೆಮಾಕ್ರಸಿಗೆ ಘನತೆ. ಅದೇ ಹೊಸ ಸರ್ಕಾರಕ್ಕೆ ಮಾನ್ಯತೆ!

17 ಶಾಸಕರ ಅನರ್ಹತೆ, ಡೆಮಾಕ್ರಸಿಗೆ ಘನತೆ. ಅದೇ ಹೊಸ ಸರ್ಕಾರಕ್ಕೆ ಮಾನ್ಯತೆ!

- Advertisement -
- Advertisement -

17 > 105 ! ಮ್ಯಾಥ್ಸ್ ಆಫ್ ಡೆಮಾಕ್ರಸಿ!
17 ಶಾಸಕರ ಅನರ್ಹತೆ ಡೆಮಾಕ್ರಸಿಗೆ ಘನತೆ
ಅದೇ ಹೊಸ ಸರ್ಕಾರಕ್ಕೆ ಮಾನ್ಯತೆ!

ರಾಜಕೀಯದಲ್ಲಿ ಒಂದು ಮಟ್ಟಿಗಿನ ನೈತಿಕತೆಯನ್ನು ಬಯಸುವ ರಾಜ್ಯದ ಜನರೆಲ್ಲ 17 ಶಾಸಕರ ಅನರ್ಹತೆಯ ಸಂಗತಿಯನ್ನು ಬೆಂಬಲಿಸಿದ್ದಾರೆ. ಅವರ ಆಶಯಕ್ಕೆ ಅನುಗುಣವಾಗಿಯೇ ಸ್ಪೀಕರ್ ಅವರ ನಿರ್ಧಾರವೂ ಬಂದಿದೆ ಅನಿಸುತ್ತಿದೆ ಎಂದು ದಿಟ್ಟವಾಗಿ ಹೇಳಲೂ ಆಗದ ಕಾಲದಲ್ಲಿ ನಾವಿದ್ದೇವೆ!

ಆದರೆ, ಒಬ್ಬ ಪ್ರಜೆಯಾಗಿ, ಮತದಾರನಾಗಿ ಹೇಳುವುದಾದರೆ ಹೊಣೆಗೇಡಿ 17 ಶಾಸಕರಿಗೆ ತಕ್ಕ ಶಾಸ್ತಿಯೇ ಆಗಿದೆ. ಹೀಗೆ ಪಾಠವು ದಿಟ್ಟವಾಗಿ ಹೇಳದೇ ಇದ್ದರೆ, ತಮ್ಮ ಮಿತಿಗಳಲ್ಲೇ ಅಂತಹ ಕ್ರಮಕ್ಕೆ ಮುಂದಾದ ಸ್ಪೀಕರ್‍ಗೆ ಅವಮಾನಿಸಿದಂತೆ.

2008ರಲ್ಲಿ, ಪಕ್ಷಾಂತರ ನಿಷೇಧ ಕಾಯ್ದೆ, ಸಂವಿಧಾನದ 10ನೇ ಶೆಡ್ಯೂಲ್-ಎಲ್ಲವನ್ನೂ ಮಣ್ಣು ಮಾಡಿ ಅಧಿಕಾರ ಹಿಡಿಯಬಹುದು ಎಂದು ಹೊಸ ‘ಮಾದರಿ’ಯೊಂದನ್ನು ದೇಶದ ಮುಂದಿಟ್ಟ, ಆ ಮೂಲಕ ಪಕ್ಷಾಂತರ ನಿಷೇಧ ಕಾಯ್ದೆ ಮತ್ತು ಅದನ್ನು ಎತ್ತಿ ಹಿಡಿಯುತ್ತಿದ್ದ ದೇಶದ ಉನ್ನತ ನ್ಯಾಯಾಲಯಗಳನ್ನೂ ಕಾಲಕಸ ಮಾಡಿದ ಕರ್ನಾಟಕ ರಾಜ್ಯದ ಬಿಜೆಪಿಯೀಗ ಅಂಥದ್ದೇ ‘ಮಾದರಿ’ಯ ಪ್ರಯೋಗದಲ್ಲಿ ಆರೂವರೆ ವರ್ಷಗಳ ನಂತರ ಅಧಿಕಾರ ಹಿಡಿದಿದೆ.

ಆದರೆ ಈ ಸಲ ಅಂತಹ ಅನೈತಿಕ ಪ್ರಯೋಗಕ್ಕೇ ಸವಾಲು ಎನಿಸುವಂತಹ ನೈತಿಕ ನಿರ್ಧಾರಗಳು ಹಲವು ಮೂಲಗಳಿಂದ ಹೊರಬಿದ್ದಿವೆ. ಮುಂದೆ ಈ ವಿಚಾರ ಸುಪ್ರೀಂ ಕೋರ್ಟಿಗೆ ಹೋಗಬಹುದು ಎಂಬ ಅರಿವಿದ್ದರೂ, ಸ್ಪೀಕರ್ ರಮೇಶಕುಮಾರ್ ಅವರು, ‘’ಅತೃಪ್ತ” ಎಂಬ ಹಣೆಪಟ್ಟಿ ಅಂಟಿಸಿಕೊಂಡು ಕ್ಷೇತ್ರ ಮತ್ತು ರಾಜ್ಯಗಳಿಂದ ಪಲಾಯನ ಮಾಡಿದ್ದ, ಸಾಂವಿಧಾನಿಕ ಮತ್ತು ಪ್ರಜಾತಾಂತ್ರಿಕ ಆಶಯಗಳನ್ನೇ ಗೇಲಿ ಮಾಡುವಂತೆ ಟಿವಿ ಚಾನೆಲ್ಲುಗಳಿಂದ ವಿಜೃಂಭಿಸಲ್ಪಡುತ್ತಿದ್ದ 17 ಹೊಣೆಗೇಡಿ ಶಾಸಕರನ್ನು ಅನರ್ಹಗೊಳಿಸುವ ಮೂಲಕ, ದೇಶದ ಎಲ್ಲೆಡೆ ಸಾಂಕ್ರಾಮಿಕ ರೋಗದಂತೆ ಹಬ್ಬುತ್ತಿರುವ ಅಸಹ್ಯ ರಾಜಕಾರಣಕ್ಕೆ ಒಂದು ಏಟು ನೀಡಿದ್ದಾರೆ.

ಅನರ್ಹತೆ: ಮುಂದೇನು?
ಸದ್ಯ ಶೆಡ್ಯೂಲ್ 10ರ ತೀರಾ ಸೂಕ್ಷ್ಮಾತಿಸೂಕ್ಷ್ಮ ಅಂಶಗಳನ್ನು ಪರಿಗಣಿಸಿಯೇ ಸ್ಪೀಕರ್ ರಮೇಶಕುಮಾರ್ 17 ಶಾಸಕರನ್ನು ಅನರ್ಹ ಮಾಡಿದ್ದಾರೆ. ಸದ್ಯಕ್ಕೆ ಅವರು, ಈ ಸದನದ, 15ನೇ ಅಸೆಂಬ್ಲಿ ಮುಗಿಯುವವರೆಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಸುಪ್ರೀಂ ಕೋರ್ಟು ಮೊರೆ ಹೋಗಿರುವ ಶಾಸಕರಿಗೆ ಅಲ್ಲೂ ನಿರಾಶೆ ಕಾದಂತಿದೆ. ಈ ಹಿಂದೆ, ಹೆಚ್ಚೂಕಡಿಮೆ ಇಂಥದ್ದೇ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ತಮಿಳುನಾಡಿನ 18 ಶಾಸಕರ ಅನರ್ಹತೆಯನ್ನು ಎತ್ತಿ ಹಿಡಿದಿತ್ತು. ಈ ಅಂತಿಮ ತೀರ್ಪು ಬರಲು ಒಂದು ವರ್ಷ ಹಿಡಿದಿತ್ತು!

ಅಸಲಿ ವಿಷಯ
ಈಗ ಸದ್ಯಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ, ಅದೀಗ ಪ್ರಜಾಸತ್ತಾತ್ಮಕ ವಿಷಯ ಎಂದು ಒಪ್ಪಿಕೊಳ್ಳಲು ಶುರು ಮಾಡಿಬಿಟ್ಟರೆ ಏನಾಗುತ್ತದೆ? ಇಲ್ಲೇನೂ ಆಗಲಿಕ್ಕಿಲ್ಲ. ಆದರೆ, ದೇಶದ ತುಂಬ ಹೀಗೇ ಪ್ರತಿಪಕ್ಷಗಳನ್ನೇ ನಾಶ ಮಾಡುವ ಅಜೆಂಡಾದೊಂದಿಗೆ ಒಂದು ದುಷ್ಟಶಕ್ತಿ ಹವಣಿಸುತ್ತಿದ್ದು, ಅದಕ್ಕೆ ಕೇಂದ್ರ ಸರ್ಕಾರದ ಬೆಂಬಲವೂ ಇದೆ ಎಂಬುದೆಲ್ಲ ಗೊತ್ತಾದ ಮೇಲೂ, ‘ಕರ್ನಾಟಕದಲ್ಲಿ ಈಗ ವಿಶ್ವಾಸಮತ ಗೆದ್ದು ಬಿಜೆಪಿ ಅಧಿಕಾರಕ್ಕೆ ಬಂದಿದೆ’ ಎಂದು ಒಪ್ಪಿಕೊಂಡರೆ ಅದು ಆತ್ಮವಂಚನೆಯೇ, ಅದೆಷ್ಟರ ಮಟ್ಟಿಗಿನ ಆತ್ಮವಂಚನೆ ಎಂದರೆ ಈ ದೇಶದಲ್ಲಿ ಇನ್ನೂ ಪರಿಪೂರ್ಣ ಪ್ರಜಾಪ್ರಭುತ್ವ ಜೀವಂತ ಇದೆ ಎಂದು ಹಲುಬುವ ಮನಸ್ಸುಗಳು ತಮಗೆ ತಾವೇ ದ್ರೋಹ ಬಗೆದುಕೊಂಡಂತೆ…

ಸುಪ್ರೀಂಕೋರ್ಟಿನಲ್ಲಿ 17 ‘ಅನರ್ಹ ಶಾಸಕರು’ ಅರ್ಜಿ ಸಲ್ಲಿಸುತ್ತಾರೆ. ಅಲ್ಲಿ ಗೆಲ್ಲುವುದೇ ಅವರಿಗೆ ಡೌಟು! ಆ ಕಾರಣಕ್ಕೇ ಈಗಾಗಲೇ ಕೆಲವು ಮನೆಹಾಳ ಅನರ್ಹರು ನಿವೃತ್ತಿ ಘೋಷಿಸಿದ್ದಾರೆ. ಇವರೆಲ್ಲ ತಮ್ಮ ಮಕ್ಕಳಿಗೆ ಅಥವಾ ಪತ್ನಿಗೆ ಸಚಿವ ಸ್ಥಾನ ಕೊಡಿ ಎಂದರೆ ಯಡಿಯೂರಪ್ಪ ಏನು ಮಾಡುತ್ತಾರೆ? ಕೊಡಲೇಬೇಕು ಅಲ್ಲವೇ? ಅಲ್ಲಿಗೇ ಮತ್ತೊಮ್ಮೆ ಮತ್ತೊಂದು ವಿಧದ ಆಪರೇಷನ್ ಕಮಲ ಶುರುವಾದಂತೆ!

ಈ ಸರ್ಕಾರ, ಮುಂದೇನಾಗುತ್ತೆ?
ಸರಳ ಪ್ರಶ್ನೆ. ಆರು ತಿಂಗಳು ಬೀಳಲ್ಲ. ಈಗಿನ ಕೇಂದ್ರದ ಬಲ ಮತ್ತು ಬಿಜೆಪಿಯ ಹಣಬಲ ನೋಡಿದರೆ ಬೀಳೋದೇ ಇಲ್ಲ. ಆದರೂ. ಇಲ್ಲಿ ವಿಪಕ್ಷಗಳು ಒಂದು ದೊಡ್ಡ ಹೋರಾಟಕ್ಕೆ ಅಣಿಯಾದರೆ ಸ್ವಲ್ಪ ವ್ಯತ್ಯಾಸ ಆಗಬಹುದಷ್ಟೇ. ಈ ಮೂರ್ಖರಲ್ಲಿ ಅಂತಹ ದೃಢತೆ ಇಲ್ಲವೇ ಇಲ್ಲ ಅಲ್ಲವೇ?

ಹಾಗಾಗಿ, ಈ ಸರ್ಕಾರವನ್ನು 2023ರವರೆಗೂ ಕರೆದೊಯ್ಯುವ ಜವಾಬ್ದಾರಿಯನ್ನು ಅಮಿತ್ ಶಾ ಹೊತ್ತಿದ್ದಾರೆ. ಗೋವಾದಲ್ಲಿ ಕೇವಲ 12 ಬಿಜೆಪಿ ಶಾಸಕರಿದ್ದೂ ಅಲ್ಲಿನ 40 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ! ಇಲ್ಲೂ ಅದರ ಪ್ರಯೋಗ ಮುಂದುವರೆಯುತ್ತದೆ ಅಷ್ಟೇ!

ಮೀಡಿಯಾ: ಈಗ ವಿಪಕ್ಷ ವಿರುದ್ಧ!
ಇಲ್ಲಿ ಪ್ರಜಾಪ್ರಭುತ್ವ ಕೊಲ್ಲುವ ಕಾನೂನುಬಾಹಿರ ಕೆಲಸಗಳಿಗೆಲ್ಲ ಮಾನ್ಯತೆ ತಂದುಕೊಟ್ಟಿರುವುದೇ ಈ ಮೀಡಿಯಾ, ಅದರಲ್ಲೂ ದೃಶ್ಯ ಮೀಡಿಯಾ. ಇಲ್ಲಿವರೆಗೂ ಸರ್ಕಾರವನ್ನು ಟೀಕಿಸುತ್ತಿದ್ದ ಅವು ಇನ್ಮುಂದೆ ವಿಪಕ್ಷಗಳನ್ನು ಟೀಕಿಸಲು ಶುರು ಮಾಡಲಿವೆ!

ಇಲ್ಲಿವರೆಗೂ ಸಮ್ಮಿಶ್ರ ಸರ್ಕಾರದ ವಿರುದ್ಧ ವಿಪರೀತ ಎನಿಸುವಷ್ಟು ಟೀಕೆ, ಅಪಪ್ರಚಾರ ಮಾಡತೊಡಗಿದ ಮಾಧ್ಯಮಗಳ ಕಾರ್ಯವನ್ನು ಮೆಚ್ಚೋಣ. ಮಾಧ್ಯಮ ಯಾವತ್ತಿಗೂ ವಿಪಕ್ಷ ಎಂಬ ಹಿನ್ನೆಲೆ ಇಟ್ಟುಕೊಂಡರೆ ಅದು ಸರಿಯೇ ಅನಿಸಬಹುದು. ಆದರೆ, ಈಗ ವಿಶ್ವಾಸಮತದ ಪ್ರಕ್ರಿಯೆ ಶುರು ಆದಾಗಿಂದ ಇವೆಲ್ಲ ಪುಟ್ಟಾಪೂರಾ ‘ಅತೃಪ್ತರ’ ಪರ ಬ್ಯಾಟಿಂಗ್ ಮಾಡಿದ್ದು ರಾಜ್ಯಕ್ಕೇ ಗೊತ್ತಿದೆ.

ಸುತ್ತು ಬಳಸಿ ಬೇಡವೇ ಬೇಡ, ರಾಜ್ಯದ ಬಹುಪಾಲು ದೃಶ್ಯ ಮಾಧ್ಯಮಗಳು ಬಿಜೆಪಿಗೆ ಮಾರಿಕೊಂಡಿವೆ. ಹೀಗಾಗಿ ಅವುಗಳ ಮುಂದಿನ ಟಾರ್ಗೆಟ್ ಆಡಳಿತ ಪಕ್ಷವಲ್ಲ, ವಿರೋಧ ಪಕ್ಷಗಳೇ. ಈ ಎರಡು ದಿನಗಳ ಅವುಗಳ ವರದಿ, ವಿಶ್ಲೇಷಣೆ ನೋಡಿದರೆ ಸಾಕು, ಇದೆಲ್ಲ ಅರ್ಥವಾಗುತ್ತದೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...

ಹತ್ಯಾಕಾಂಡಕ್ಕೆ ಸಮನಾದ NEET ಹಗರಣ ನಡೆಯಲು ಬಿಟ್ಟ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆದ ನಂತರದ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಜೂನ್ ಆರಂಭದಿಂದ ಇಲ್ಲಿಯವರೆಗೆ ದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ದೇಶದ ಜನತೆ ನೋಡುತ್ತಿದ್ದಾರೆ. ದೇಶದ...

ಸಿಜೆಪಿ ಮತ್ತು ಜೆನ್‌ ಜಿಫಿಕೇಶನ್: ಪ್ರಸ್ತುತ ಬೆಳವಣಿಗೆ, ಭವಿಷ್ಯದ ಸಾಧ್ಯತೆ

ಇತ್ತೀಚಿನ ಬೆಳವಣಿಗೆಗಳು ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಸಿಜೆಪಿ (ಕಾಕ್ರೋಚ್‌ ಜನತಾ ಪಕ್ಷ) ಪ್ರತಿಭಟನೆ ಈಗ ತಾರ್ಕಿಕ ಹಂತಕ್ಕೆ ತಲಪುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ನೀಟ್‌ನ (ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ) ಮೊದಲ...

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...

ಪ್ರತಿಭಟನೆಯನ್ನು ಹತ್ತಿಕ್ಕಲು ಅಕ್ಕಾಡಕ್ಕಿಳಿದಿವೆ ಹಿಂದುತ್ವವಾದಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್‌ ಮತ್ತು ಉಗ್ರ ಗೂಂಡಾ ಪಡೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಜೂನ್ 20ರಂದು ಶುರುವಾಗಿದ್ದ ಈ ಆಂದೋಲನ ಇದೀಗ ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಸಿಜೆಪಿ ಪಟ್ಟು ಹಿಡಿದಿದ್ದು, ಇಂದು...

ಜಿರಳೆಗಳನ್ನು ಸಾಯಿಸಿ ಎಂದು ವಿವಾದಾತ್ಮಕ ಪೋಸ್ಟ್‌ ಹಾಕಿದ ಪ್ರಜ್ಞಾ ಸಿಂಗ್ ಠಾಕೂರ್

ಮಾಜಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ದೇಶದಿಂದ ಜಿರಳೆಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ವ್ಯವಸ್ಥೆ ಮಾಡುವಂತೆ ದೇಶದ ನಾಯಕರಿಗೆ ಮನವಿ ಮಾಡಿದ್ದಾರೆ. X (ಟ್ವಿಟರ್) ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, 2008 ರ...

ಸೋನಮ್ ವಾಂಗ್ಚುಕ್ ಮತ್ತು ಸರ್ಕಾರದ ಡೀಲ್‌ನಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಂಶವೇ ಇಲ್ಲ

ಕೇಂದ್ರದ ಮೋದಿ ಸರ್ಕಾರ ತನ್ನ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡ ನಂತರ, ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಜುಲೈ 23ರ ಗುರುವಾರ ತಮ್ಮ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ....

“50 ಗ್ರಾಂ ಡ್ರಗ್ಸ್ ಇಟ್ಟು ಕೇಸ್ ಹಾಕ್ತೀನಿ!”: ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಮಾದಕದ್ರವ್ಯ ಪ್ರಕರಣದ ಬೆದರಿಕೆಯೊಡ್ಡಿದ ಮುಂಬೈ ಪೊಲೀಸ್!

ಮುಂಬೈ: ದೇಶಾದ್ಯಂತ ವಿದ್ಯಾರ್ಥಿ ಸಮುದಾಯದ ಆಕ್ರೋಶ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿರುವ ಯುವಜನರನ್ನು ಹತೋಟಿಗೆ ತರಲು ಪೊಲೀಸರು ಯಾವ ಮಟ್ಟದ ದಮನಕಾರಿ ಮಾರ್ಗಗಳನ್ನು ತುಳಿಯುತ್ತಿದ್ದಾರೆ ಎಂಬುದಕ್ಕೆ ಮುಂಬೈನಲ್ಲಿ ನಡೆದ ಘಟನೆಯೊಂದು...

ಬಿಡದಿ ಟೌನ್‌ಶಿಪ್: 80% ರೈತರ ಒಪ್ಪಿಗೆ ಇದೆ ಎಂಬ ವಾದ ಸಾಬೀತುಪಡಿಸಿ – ಸರ್ಕಾರಕ್ಕೆ ಸಂಯುಕ್ತ ಹೋರಾಟ ಸವಾಲು

ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಮಿ ನೀಡಲು ಉದ್ದೇಶಿತ ಪ್ರದೇಶದ ಶೇಕಡಾ 80 ರಷ್ಟು ರೈತರು ಒಪ್ಪಿದ್ದಾರೆ ಎಂಬ ಸರ್ಕಾರದ ವಾದಕ್ಕೆ ಯಾವುದೇ ವಾಸ್ತವಿಕ ಆಧಾರವಿಲ್ಲ. ಸರ್ಕಾರಕ್ಕೆ ಧೈರ್ಯವಿದ್ದರೆ ತನ್ನ ಈ ಹೇಳಿಕೆಯನ್ನು ಜನರ...