Homeಮುಖಪುಟಅರುಣ್ ಫೆರೇರ: ನತದೃಷ್ಟರ ಕಾನೂನು ನೆರವಿಗೆ ಸದಾ ಲಭ್ಯವಿದ್ದ ಕಾರ್ಯಕರ್ತ

ಅರುಣ್ ಫೆರೇರ: ನತದೃಷ್ಟರ ಕಾನೂನು ನೆರವಿಗೆ ಸದಾ ಲಭ್ಯವಿದ್ದ ಕಾರ್ಯಕರ್ತ

ಜೈಲಿನಲ್ಲಿದ್ದ ದಿನಗಳ ಅನುಭವಗಳ ಕುರಿತು ಅರುಣ್ ಬರೆದ ಪುಸ್ತಕ "ಕಲರ್ಸ್ ಆಫ್ ದಿ ಕೇಜ್" ಭಾರತದಲ್ಲಿ ಜೈಲಿನನುಭವಗಳ ಕುರಿತು ಬಂದ ಪುಸ್ತಕಗಳಲ್ಲೇ ಮಹತ್ವದ್ದು. ಈ ಪುಸ್ತಕವು ಜೈಲಿನಲ್ಲಿನ ಕ್ರೂರ ವಾಸ್ತವಗಳನ್ನು ಬಹಳ ಸೂಕ್ಷ್ಮವಾಗಿ ಭಾರತೀಯರಿಗೆ ಪರಿಚಯಿಸಿತು.

- Advertisement -
- Advertisement -

ಅರುಣ್ ಫೆರೇರ ಅವರದ್ದು ಬಹುಮುಖಿ ವ್ಯಕ್ತಿತ್ವ. ಅವರು ಲೇಖಕರು, ವಕೀಲರು, ವ್ಯಂಗ್ಯಚಿತ್ರಕಾರ, ಚಳುವಳಿಗಾರ, ಉತ್ತಮ ಕತೆಗಾರ ಮತ್ತು ಅದ್ಭುತ ವ್ಯಕ್ತಿತ್ವದ ಸ್ನೇಹಿತ. ವಿಮರ್ಶಕರಿಂದ ಅಪಾರ ಮೆಚ್ಚುಗೆ ಗಳಿಸಿದ ಜೈಲಿನ ಅನುಭವಗಳ ಕುರಿತಾದ ಪುಸ್ತಕ “ಕಲರ್ಸ್ ಆಫ್ ದಿ ಕೇಜ್”ನ ಕತೃ ಅರುಣ್ ಫೆರೇರ. ಸಮಾಜದಂಚಿನಲ್ಲಿರುವ ಜನರಿಗೆ ಉಚಿತವಾಗಿ ಕಾನೂನು ಸಹಾಯಗಳನ್ನು ಒದಗಿಸುವ ಸಂಘಟನೆಯಾದ ’ಇಂಡಿಯನ್ ಅಸೋಸಿಯೇಷನ್ ಆಫ್ ಪೀಪಲ್ಸ್ ಲಾಯರ್ಸ್’ನ (IAPL) ಪ್ರಮುಖ ಸದಸ್ಯರು. ತುರ್ತು ಪರಿಸ್ಥಿತಿಯ ದಮನ ಕಾರ್ಯಗಳ ನಂತರದಲ್ಲಿ ಪ್ರಜಾಪ್ರಭುತ್ವದ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ಸ್ಥಾಪಿತವಾದ ’ಕಮಿಟಿ ಫಾರ್ ಪ್ರೊಟೆಕ್ಷನ್ ಆಫ್ ಡೆಮಾಕ್ರೆಟಿಕ್ ರೈಟ್ಸ್’ನ (ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣಾ ಸಮಿತಿ) ಸದಸ್ಯರೂ ಹೌದು.

2007ರ ಮೇ ತಿಂಗಳಿನಲ್ಲಿ ಅರುಣ್ ಫೆರೇರರನ್ನು ಅಕ್ರಮವಾಗಿ ಬಂಧಿಸಿ, ಹಿಂಸಿಸಲಾಯಿತು. ತದನಂತರ ಅವರಿಗೆ ’ನಕ್ಸಲೈಟ್’ ಎಂಬ ಹಣೆಪಟ್ಟಿ ಹಚ್ಚಿ ಕಠಿಣಾತಿ ಕಠಿಣ ಯುಎಪಿಎ ಕಾಯ್ದೆಯಡಿ ಆರೋಪಪಟ್ಟಿ ದಾಖಲಿಸಲಾಯಿತು. ಪೋಲೀಸರು ಅರುಣ್ ರವರನ್ನು ದೈಹಿಕವಾಗಿ ಹಿಂಸೆಗೆ ಒಳಪಡಿಸಿದ್ದನ್ನು ಮಾಧ್ಯಮಗಳಲ್ಲಿ ಪ್ರಕಟವಾದ ಅವರ ದುರ್ಬಲ ಶರೀರದ ಫೋಟೋಗಳು ಧೃಡಪಡಿಸಿದವು.

ಸುಳ್ಳು ಕೇಸುಗಳಡಿಯಲ್ಲಿ ಬಂಧನಕ್ಕೊಳಪಡಿಸಿ ಕುಟುಂಬಸ್ಥರು, ಸ್ನೇಹಿತರು ಮತ್ತು ಸಂಗಾತಿಗಳಿಂದ ದೂರವಾಗಿಸಿದ ಘಟನೆಗಳು ಮೂಡಿಸಿದ ಆಘಾತವನ್ನು ಅರುಣ್ ರವರ ಸರಳ ನಗು ಮತ್ತು ವ್ಯಕ್ತಿತ್ವವು ಮರೆಮಾಚುತ್ತಿತ್ತು. 2007ರಲ್ಲಿ ಬಂಧನವಾದ ನಂತರ ದಿನಪತ್ರಿಕೆಗಳ ಮುಖಪುಟದಲ್ಲಿ ಪ್ರಕಟವಾದ ಜರ್ಜರಿತ ವ್ಯಕ್ತಿಯೇ ಈ ನಗುಮುಖದ ಮನುಷ್ಯ ಎಂಬುದನ್ನು ಅರಿಯುವುದೇ ಹಲವರಿಗೆ ಕಷ್ಟವಾಗಿರಬಹುದು.

2010ರ ಸೆಪ್ಟೆಂಬರ್ ತಿಂಗಳಿನಲ್ಲಿ ನಾಗಪುರದ ನ್ಯಾಯಾಲಯ ಅರುಣ್‌ರವರನ್ನು ದೋಷಮುಕ್ತರನ್ನಾಗಿಸಿ ಖುಲಾಸೆಗೊಳಿಸುತ್ತದೆ. ಜೈಲಿನ ಆವರಣದಿಂದ ಹೊರಬಂದ ಅರುಣ್‌ರವರನ್ನು ಸಾದಾ ಉಡುಪಿನಲ್ಲಿದ್ದ ಪೋಲೀಸರು ಮತ್ತೆ ಬಂಧಿಸುತ್ತಾರೆ. ಅರುಣ್‌ರವರ ಬರುವಿಕೆಗೆ ಕಾಯುತ್ತಿದ್ದ ಕುಟುಂಬದವರನ್ನು ಕಣ್ತುಂಬಿಕೊಳ್ಳುವ ಅವಕಾಶವೂ ಅವರಿಗೆ ದಕ್ಕುವುದಿಲ್ಲ. ಅರುಣ್ ಜೈಲಿನಲ್ಲಿದ್ದ ಸಮಯದಲ್ಲಿ ನಡೆದ ಘಟನೆಯೊಂದಕ್ಕೆ ಸಂಬಂಧಪಟ್ಟಂತೆ ಅವರ ಮೇಲೆ ಕೇಸ್ ದಾಖಲಿಸಿಬಿಡುತ್ತಾರೆ! ಒಟ್ಟು ನಾಲ್ಕು ವರ್ಷ ಎಂಟು ತಿಂಗಳು ಜೈಲುವಾಸವನ್ನನುಭವಿಸಿದ ಅರುಣ್ 2012ರ ಜನವರಿಯಲ್ಲಿ ಸ್ವತಂತ್ರರಾಗುತ್ತಾರೆ. ಆ ಸಮಯದಲ್ಲಿ ನಾರ್ಕೋಅನಾಲಿಸಿಸ್ ಪರೀಕ್ಷೆ ಕಾನೂನಿಗೆ ಹೊರತಾದುದಾಗಿರಲಿಲ್ಲ. ಪೋಲೀಸರು ಅರುಣ್ ರವರನ್ನು ಈ ಪರೀಕ್ಷೆಗೆ ಒಳಪಡಿಸಿದ್ದರು. ಚಳುವಳಿಗಾರರು ನಾರ್ಕೋಅನಾಲಿಸಿಸ್ ಪರೀಕ್ಷೆಯನ್ನು ವಿರೋಧಿಸುವ ಕಾರ್ಯದಲ್ಲಿ ತೊಡಗಲು ಅರುಣ್‌ರವರ ಪ್ರಕರಣ ಕಾರಣವಾಯಿತೆಂದರೆ ತಪ್ಪಲ್ಲ.

ವರುಷಗಳ ಕಾಲ ಜೈಲಿನಲ್ಲಿ ಕಳೆದರೂ ಸಹಿತ, ಬಿಡುಗಡೆಯಾದ ನಂತರ ಅರುಣ್ ಸಿದ್ಧಾರ್ಥ ಕಾಲೇಜಿನಲ್ಲಿ 2015 ರಲ್ಲಿ ತಮ್ಮ ಲಾ ಪದವಿಯನ್ನು ಪೂರ್ತಿಗೊಳಿಸಿ 2016ರಿಂದ ವಕೀಲರಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತಾರೆ. ತಮ್ಮ ರಾಜಕೀಯ ಮತ್ತು ಚಳುವಳಿಯನ್ನು ನ್ಯಾಯಾಲಯದ ಅಂಗಳಕ್ಕೆ ತೆಗೆದುಕೊಂಡು ಹೋಗುತ್ತಾರೆ. ವಕೀಲರ ಅವಶ್ಯಕತೆ ಇರುವ, ವಕೀಲರ ದೊಡ್ಡ ಮೊತ್ತದ ಫೀಸನ್ನು ಕಟ್ಟಲು ಅಶಕ್ತರಾಗಿರುವ ಜನರನ್ನು ಪ್ರತಿನಿಧಿಸುತ್ತಾರೆ ಅರುಣ್ ಫೆರೇರ.

ಅರುಣ್

ಜೈಲಿನಲ್ಲಿದ್ದ ದಿನಗಳ ಅನುಭವಗಳ ಕುರಿತು ಅರುಣ್ ಬರೆದ ಪುಸ್ತಕ “ಕಲರ್ಸ್ ಆಫ್ ದಿ ಕೇಜ್” ಭಾರತದಲ್ಲಿ ಜೈಲಿನನುಭವಗಳ ಕುರಿತು ಬಂದ ಪುಸ್ತಕಗಳಲ್ಲೇ ಮಹತ್ವದ್ದು. ಈ ಪುಸ್ತಕವು ಜೈಲಿನಲ್ಲಿನ ಕ್ರೂರ ವಾಸ್ತವಗಳನ್ನು ಬಹಳ ಸೂಕ್ಷ್ಮವಾಗಿ ಭಾರತೀಯರಿಗೆ ಪರಿಚಯಿಸಿತು. ಬಂಧನ ದಿನಗಳಲ್ಲಿನ ಚಿತ್ರಹಿಂಸೆ, ವರುಷಗಳ ಕಾಲ ಸುಳ್ಳು ಕೇಸುಗಳನ್ನಾಕಿ ಹಿಂಸಿಸುವ ಪರಿ ಮತ್ತು ನೆಲದ ಕಾನೂನನ್ನು ಹಾಡಹಗಲಿನಲ್ಲೇ ಮೀರಿನಿಲ್ಲುವ ವ್ಯವಸ್ಥೆಯ ಕುರಿತು ಅರುಣ್ ಬರೆದರು. ಕ್ರೂರತೆಯ ವಿರುದ್ಧ ಸಿಡಿದೆದ್ದು ಮುಷ್ಕರಕ್ಕಿಳಿಯುವ ಖೈದಿಗಳು, ಭರವಸೆ ಕಳೆದುಹೋಗದಂತೆ ಕಾಪಿಡುವ ಪುಟ್ಟ ಸಮಾಧಾನಗಳ ಕುರಿತು ಬರೆದರು. ಕುಖ್ಯಾತ ’ಅಂಡಾ’ ಕೊಠಡಿಯೊಳಗಿನ ಒಂಟಿ ಜೈಲು ವಾಸದ ಕುರಿತು ಬರೆಯುತ್ತಾ ಅರುಣ್ “ಭಯಹುಟ್ಟಿಸುವ ಅಂಡಾ ಸೆಲ್ಲಿನ ವಾತಾವರಣಕ್ಕಿಂತ ಹೆಚ್ಚಾಗಿ ಮನುಷ್ಯರ ಸಂಪರ್ಕವೇ ಇರದಿರುವುದು ಉಸಿರುಗಟ್ಟಿಸುತ್ತದೆ. ಅಂಡಾ ಸೆಲ್ಲಿನೊಳಗಿದ್ದಾಗ ಹದಿನೈದು ಘಂಟೆಗಳ ಕಾಲ ಅಥವಾ ಅದಕ್ಕಿಂತಲೂ ಹೆಚ್ಚಿನ ಸಮಯ ಆ ಕೊಠಡಿಯೊಳಗೆ ನೀವು ಒಬ್ಬರೇ ಕಳೆಯುತ್ತೀರಿ. ನೀವು ನೋಡುವ ಇನ್ನಿತರೆ ಮನುಷ್ಯರೆಂದರೆ ಕಾವಲುಗಾರರು ಮತ್ತು ಅತಿ ಅಪರೂಪಕ್ಕೆ ನಿಮ್ಮ ವಿಭಾಗದಲ್ಲಿರುವ ಇನ್ನಿತರೆ ಖೈದಿಗಳು. ಅಂಡಾ ಸೆಲ್ಲಿನಲ್ಲಿ ಕೆಲವು ವಾರಗಳನ್ನು ಕಳೆದರೆ ಮನುಷ್ಯ ಕುಸಿದುಬಿಡುತ್ತಾನೆ” ಎನ್ನುತ್ತಾರೆ.

’ಕಲರ್ಸ್ ಆಫ್ ಕೇಜ್’ ಪುಸ್ತಕದ ಬಿಡುಗಡೆಯ ಸಂದರ್ಭದಲ್ಲಿ ಅರುಣ್ “ನಾನೊಬ್ಬ ಚಳುವಳಿಗಾರನಾದರೆ ಏನಾಯಿತು? ಶಂಕಿತ ಮಾವೋವಾದಿಗಳ ಅಥವಾ ಭಯೋತ್ಪಾದಕರ ಪ್ರಕರಣಗಳನ್ನು ನಿಭಾಯಿಸದರೇನಾಯಿತು? ಒಬ್ಬ ವಕೀಲನಾಗಿ ಶಂಕಿತರ ಕೇಸುಗಳನ್ನು ನಾನು ತೆಗೆದುಕೊಂಡರೇನಾಯಿತು? ಈ ಕಾರಣಗಳಿಂದಾಗಿ ನನ್ನನ್ನೂ ಅದೇ ಪ್ರಕರಣಗಳಲ್ಲಿ ಸುಳ್ಳು ಸುಳ್ಳೇ ಸಿಕ್ಕಿಸುವ ಸವಲತ್ತು ಈ ವ್ಯವಸ್ಥೆಗೆ ಸಿಕ್ಕಿದ್ದಾದರೂ ಹೇಗೆ?” ಎಂದು ಪ್ರಶ್ನಿಸುತ್ತಾರೆ.

ದುರದೃಷ್ಟವಶಾತ್ ಈ ಬಾರಿ ಅರುಣ್ ಫೆರೇರರನ್ನು ಸ್ಪಷ್ಟವಾಗಿ ಈ ಕಾರಣಗಳಿಗಾಗಿಯೇ ಬಂಧಿಸಿದ್ದಾರೆ, ಕಾನೂನಾತ್ಮಕ ಸಹಾಯ ಪಡೆಯಲು ಸಾಧ್ಯವಾಗದೆ ಭಾರತದ ಜೈಲುಗಳಲ್ಲಿ ಕೊಳೆಯುತ್ತಿರುವ ಜನರ ಹಕ್ಕುಗಳ ಕುರಿತಾಗಿ ಮಾತನಾಡಿದ ಕಾರಣಕ್ಕೆ ಅರುಣ್ ಫೆರೇರರನ್ನು ಬಂಧಿಸಿದ್ದಾರೆ.

ಕೃಪೆ: ಮುಂಬೈ ರೈಸಸ್ ಟು ಸೇವ್ ಡೆಮಾಕ್ರಸಿ

ಅನುವಾದ: ಡಾ. ಕೆ ಆರ್ ಅಶೋಕ್


ಇದನ್ನೂ ಓದಿ; ಜೈಲು ಕಾಣಿಸುವ ಇನ್ನೊಂದು ಸತ್ಯ : ಡಾ.ರಹಮತ್ ತರೀಕೆರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...