Homeಮುಖಪುಟಆಧಾರ್‌, ಪ್ಯಾನ್‌, ಬ್ಯಾಂಕ್‌ ಅಕೌಂಟ್‌ ದಾಖಲೆಗಳು ಪೌರತ್ವ ಸಾಬೀತುಪಡಿಸುವುದಿಲ್ಲ! ಗೌಹಟಿ ಹೈಕೋರ್ಟ್

ಆಧಾರ್‌, ಪ್ಯಾನ್‌, ಬ್ಯಾಂಕ್‌ ಅಕೌಂಟ್‌ ದಾಖಲೆಗಳು ಪೌರತ್ವ ಸಾಬೀತುಪಡಿಸುವುದಿಲ್ಲ! ಗೌಹಟಿ ಹೈಕೋರ್ಟ್

- Advertisement -
- Advertisement -

ಇತ್ತೀಚಿನ ಆದೇಶವೊಂದರಲ್ಲಿ, ಭೂ ಕಂದಾಯ ಪಾವತಿಸುವ ರಶೀದಿಗಳು, ಶಾಶ್ವತ ಖಾತೆ ಸಂಖ್ಯೆ (ಪ್ಯಾನ್) ಕಾರ್ಡ್ ಮತ್ತು ಬ್ಯಾಂಕ್ ದಾಖಲೆಗಳು ಪೌರತ್ವವನ್ನು ಸಾಬೀತುಪಡಿಸುವುದಿಲ್ಲ ಎಂದು ಹೇಳುವ ಮೂಲಕ ಅಸ್ಸಾಂನ ನ್ಯಾಯಮಂಡಳಿಯಿಂದ ವಿದೇಶಿಯೆಂದು ಘೋಷಿಸಲ್ಪಟ್ಟ ಮಹಿಳೆಯ ಅರ್ಜಿಯನ್ನು ಗೌಹಟಿ ಹೈಕೋರ್ಟ್ ತಿರಸ್ಕರಿಸಿದೆ.

ನ್ಯಾಯಮೂರ್ತಿ ಮನೋಜಿತ್ ಭುಯಾನ್ ಮತ್ತು ನ್ಯಾಯಮೂರ್ತಿ ಪಾರ್ಥಿವ್ಜ್ಯೋತಿ ಸೈಕಿಯಾ ಅವರ ನ್ಯಾಯಾಲಯವು ಜಬೇದಾ ಬೇಗಂ ಅವರ ಅರ್ಜಿಯನ್ನು ವಜಾಗೊಳಿಸಿದೆ. ಏಕೆಂದರೆ ಅವರು “ತನ್ನ ಪೋಷಕರು ಮತ್ತು ಸಹೋದರನ ಸಂಬಂಧಿ ಎಂದು ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಕೋರ್ಟ್‌ ಹೇಳಿದೆ.”

ಅಸ್ಸಾಂನಲ್ಲಿ ಪೌರತ್ವದ ನಿರ್ಣಯವು ಹೇಗೆ ಭಿನ್ನವಾಗಿದೆ ಎಂದು ಈ ಆದೇಶವು ತೋರಿಸುತ್ತದೆ. 1951ರಲ್ಲಿ ತಯಾರಿಸಲಾದ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ)ಗೆ ನಂತರ ಕಳೆದ ವರ್ಷ ನವೀಕರಿಸಲಾಗಿದೆ. ಅದರಂತೆ ಕಳೆದ ವರ್ಷ ಆಗಸ್ಟ್‌ನಲ್ಲಿ, ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯ ಐದು ವರ್ಷಗಳ ಪ್ರಕ್ರಿಯೆಯ ನಂತರ, ಅಸ್ಸಾಂನ ನವೀಕರಿಸಿದ ಎನ್‌ಆರ್‌ಸಿ ಪಟ್ಟಿಯಿಂದ 19 ಲಕ್ಷ ಅರ್ಜಿದಾರರ ಹೆಸರನ್ನು (ಅರ್ಜಿ ಸಲ್ಲಿಸಿದ 3.3 ಕೋಟಿಗಳಲ್ಲಿ) ಕೈಬಿಟ್ಟಿದೆ.

ನವೀಕರಿಸಿದ ಎನ್‌ಆರ್‌ಸಿ 1985 ರ ಅಸ್ಸಾಂ ಒಪ್ಪಂದದಲ್ಲಿ ತನ್ನ ಮೂಲವನ್ನು ಹೊಂದಿದೆ. ಬಾಂಗ್ಲಾದೇಶದಿಂದ ಅಕ್ರಮ ವಲಸಿಗರ ವಿರುದ್ಧ ಆರು ವರ್ಷಗಳ ಕಾಲ ನಡೆದ ಆಂದೋಲನದ ನಂತರ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಈ ಒಪ್ಪಂದವು 1955 ರ ಪೌರತ್ವ ಕಾಯ್ದೆಯಲ್ಲಿ ಸೆಕ್ಷನ್ 6 ಎ ಅನ್ನು ಸೇರಿಸಲು ಕಾರಣವಾಯಿತು. ಇದು ಮಾರ್ಚ್ 25, 1971 ಕ್ಕೆ ಮುಂಚಿತವಾಗಿ ಬಾಂಗ್ಲಾದೇಶದಿಂದ ಅಸ್ಸಾಂಗೆ ಬಂದ ಅಕ್ರಮ ವಲಸಿಗರನ್ನು ನಾಗರಿಕರೆಂದು ಪರಿಗಣಿಸಲಾಗಿದೆ. ಅದೇ ದಿನಾಂಕವನ್ನು ಎನ್ಆರ್‌ಸಿ ನವೀಕರಣ ಪ್ರಕ್ರಿಯೆಗೆ ಬಳಸಲಾಯಿತು.

ಎನ್ಆರ್‌ಸಿ ಸೇರ್ಪಡೆಗಾಗಿ ಅರ್ಜಿದಾರರು ಪೌರತ್ವವನ್ನು ಸಾಬೀತುಪಡಿಸಲು ಮಾರ್ಚ್ 24, 1971 ರ ಮೊದಲು ನೀಡಲಾದ 14 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಬೇಕಾಗಿತ್ತು, ಅದು ಅಸ್ಸಾಂನಲ್ಲಿ ವಾಸಿಸುವಿಕೆಯನ್ನು ಸಾಬೀತುಪಡಿಸಲು ಅವರ ಹೆಸರುಗಳು ಅಥವಾ ಅವರ ಪೂರ್ವಜರ ಹೆಸರುಗಳನ್ನು ಹೊಂದಿತ್ತು.

ಈ ದಾಖಲೆಗಳು 1951 ಎನ್‌ಆರ್‌ಸಿಯಿಂದ ಮಾರ್ಚ್ 24, 1971 ರವರೆಗೆ ಮತದಾರರ ಪಟ್ಟಿ, ಭೂಮಿ ಮತ್ತು ಬಾಡಿಗೆ ದಾಖಲೆಗಳು, ಪೌರತ್ವ ಪ್ರಮಾಣಪತ್ರ, ಶಾಶ್ವತ ನಿವಾಸ ಪ್ರಮಾಣಪತ್ರ, ನಿರಾಶ್ರಿತರ ನೋಂದಣಿ ಪ್ರಮಾಣಪತ್ರ, ಪಾಸ್‌ಪೋರ್ಟ್, ವಿಮಾ ಪಾಲಿಸಿ, ಸರ್ಕಾರ ನೀಡಿದ ಪರವಾನಗಿ ಅಥವಾ ಪ್ರಮಾಣಪತ್ರ, ಉದ್ಯೋಗದ ಪುರಾವೆ, ಬ್ಯಾಂಕ್ ಅಥವಾ ಅಂಚೆ ಕಚೇರಿ ಖಾತೆಗಳು, ಜನನ ಪ್ರಮಾಣಪತ್ರ, ಶಿಕ್ಷಣ ಪ್ರಮಾಣಪತ್ರಗಳು ಅಥವಾ ನ್ಯಾಯಾಲಯದ ದಾಖಲೆಗಳು ಅಥವಾ ಪ್ರಕ್ರಿಯೆಗಳ ದಾಖಲೆಗಳಲ್ಲಿ ಕೆಲವನ್ನು ತೋರಿಸಬಹುದಿತ್ತು.

ಇದಲ್ಲದೆ, ಇನ್ನೂ ಎರಡು ಪೂರಕ ದಾಖಲೆಗಳು – ಮದುವೆಯ ನಂತರ ವಲಸೆ ಹೋಗುವ ವಿವಾಹಿತ ಮಹಿಳೆಯರಿಗೆ ಸರ್ಕಲ್ ಅಧಿಕಾರಿ ಅಥವಾ ಗ್ರಾಮ ಪಂಚಾಯತ್ ಕಾರ್ಯದರ್ಶಿ ನೀಡಿದ ಪ್ರಮಾಣಪತ್ರಗಳು (ಮಾರ್ಚ್ 24, 1971 ರ ಮೊದಲು ಅಥವಾ ನಂತರ) ಮತ್ತು ಮಾರ್ಚ್ 24, 1971 ಕ್ಕೆ ಮೊದಲು ನೀಡಲಾದ ಪಡಿತರ ಚೀಟಿಗಳನ್ನು ಅರ್ಜಿದಾರರು ಸೇರಿಸಬಹುದು. ಆದರೆ ಅರ್ಜಿದಾರರು ಮೇಲೆ ಪಟ್ಟಿ ಮಾಡಲಾದ 14 ದಾಖಲೆಗಳಲ್ಲಿ ಒಂದನ್ನು ಹೊಂದಿದ್ದರೆ ಮಾತ್ರ ಈ ಎರಡು ದಾಖಲೆಗಳನ್ನು ಸ್ವೀಕರಿಸಬೇಕಾಗಿತ್ತು.

14 ದಾಖಲೆಗಳಲ್ಲಿ ಹೆಸರಿಲ್ಲದ ಅರ್ಜಿದಾರರಿಗೆ, ಅವರು ಪೂರ್ವಜರೊಂದಿಗೆ (ತಂದೆ, ತಾಯಿ, ಅಜ್ಜ, ಅಜ್ಜಿ ಇತ್ಯಾದಿ) ಸಂಬಂಧವನ್ನು ಸ್ಥಾಪಿಸಲು ಎಂಟು ವಿಭಿನ್ನ ದಾಖಲೆಗಳನ್ನು ಸಲ್ಲಿಸಬೇಕು, ಅವರ ಹೆಸರುಗಳನ್ನು ಮಾರ್ಚ್ 24, 1971ರ ಮೊದಲು 14 ದಾಖಲೆಗಳಲ್ಲಿ ಯಾವುದಾದರೂ ಒಂದು ಪಟ್ಟಿಯಲ್ಲಿ ಸೇರಿಸಲಾಗಿರಬೇಕಿತ್ತು.

ಈ ದಾಖಲೆಗಳು ಜನನ ಪ್ರಮಾಣಪತ್ರ, ಭೂ ದಾಖಲೆಗಳು, ಪರೀಕ್ಷಾ ಪ್ರಮಾಣಪತ್ರಗಳು, ಬ್ಯಾಂಕ್, ವಿಮಾ ಪೊಲೀಸ್ ಅಥವಾ ಅಂಚೆ ಕಚೇರಿ ದಾಖಲೆಗಳು, ವೃತ್ತ ಅಧಿಕಾರಿ ಅಥವಾ ಗ್ರಾಮ ಪಂಚಾಯತ್ ಕಾರ್ಯದರ್ಶಿ (ವಿವಾಹಿತ ಮಹಿಳೆಯ ಸಂದರ್ಭದಲ್ಲಿ) ನೀಡಿದ ಪ್ರಮಾಣಪತ್ರ, ಮತದಾರರ ಪಟ್ಟಿಯಲ್ಲಿ ಹೆಸರು, ಪಡಿತರ ಚೀಟಿ ಅಥವಾ ಕಾನೂನುಬದ್ಧವಾಗಿ ಸ್ವೀಕಾರಾರ್ಹವಾದ ಯಾವುದೇ ಡಾಕ್ಯುಮೆಂಟ್.

ಈ ದಾಖಲೆಗಳನ್ನು ನೀಡಲು ವಿಫಲರಾದ ಅರ್ಜಿದಾರರನ್ನು ಎನ್‌ಆರ್‌ಸಿ ಪಟ್ಟಿಯಿಂದ ಹೊರಗಿಡಲಾಗಿದೆ. ಈ ಅರ್ಜಿದಾರರು ತಮ್ಮ ಪ್ರಕರಣಗಳನ್ನು ವಿದೇಶಿಯರ ನ್ಯಾಯಮಂಡಳಿಗಳು, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳಲ್ಲಿ ಪೌರತ್ವವನ್ನು ಸಾಬೀತುಪಡಿಸಲು ಮೇಲ್ಮನವಿ ಸಲ್ಲಿಸುವ ಅವಕಾಶವನ್ನು ಹೊಂದಿದ್ದಾರೆ. ಅದಂರಂತೆ ಅರ್ಜಿ ಸಲ್ಲಿಸಿದ್ದ ಮಹಿಳೆಯ ದಾಖಲೆಗಳನ್ನು ಕೋರ್ಟ್‌ ಒಪ್ಪಿಲ್ಲ.

ಒಟ್ಟಿನಲ್ಲಿ ಈ ಎನ್‌ಆರ್‌ಸಿ ಪ್ರಕ್ರಿಯೆ ಭಾರತದಂತಹ ಬೃಹತ್‌ ದೇಶದಲ್ಲಿ ದೊಡ್ಡ ಕಗ್ಗಂಟು ಉಂಟುಮಾಡುವುದು ನಿಸ್ಸಂದೇಹವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಬಜೆಟ್ 2026: ‘ಇದು ನನ್ನ ರಾಜಕೀಯ ಜೀವನದ ಅತ್ಯಂತ ನಿರಾಶಾದಾಯಕ ಬಜೆಟ್’: ಸಿಎಂ ಸಿದ್ದರಾಮಯ್ಯ

‘ಮೋದಿ ಸರ್ಕಾರ ಆರ್ಥಿಕ ದೂರದೃಷ್ಟಿಕೋನಗಳಿಲ್ಲದೆ, ದೇಶವನ್ನು ಯಾವ ದಿಕ್ಕಿನತ್ತ ಮುನ್ನಡೆಸಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲದೆ ದಣಿದಿದೆ ಎಂಬುದರ ಸಂಕೇತ ಈ 2026 ಬಜೆಟ್’ ಎಂದು ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.  ಕಲಬುರಗಿ ವಿಮಾನ...

ಕೇಂದ್ರ ಬಜೆಟ್ 2026: ಅಪರೂಪದ ಭೂಮಿಯ ಕಾರಿಡಾರ್‌ನಿಂದ ಹೈಸ್ಪೀಡ್ ರೈಲಿನವರೆಗೆ: ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಕೇಂದ್ರ ಬಜೆಟ್ ನಲ್ಲಿ ಸಿಕ್ಕಿದ್ದೇನು?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಲೋಕಸಭೆಯಲ್ಲಿ ತಮ್ಮ ಸತತ 9 ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಜೆಟ್ ನಲ್ಲಿ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಂತಹ ಚುನಾವಣೆ...

ಬಲೂಚಿಸ್ತಾನ: ಭದ್ರತಾ ಕಾರ್ಯಾಚರಣೆಯಲ್ಲಿ 15 ಪಾಕ್ ಸೈನಿಕರು, 92 ಭಯೋತ್ಪಾದಕರು ಸಾವು

ಬಲೂಚಿಸ್ತಾನ ಪ್ರಾಂತ್ಯದ ಸುಮಾರು 12 ಸ್ಥಳಗಳಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಕನಿಷ್ಠ 15 ಪಾಕಿಸ್ತಾನಿ ಸೈನಿಕರು ಮತ್ತು 92 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನಿ ಸೇನೆ ತಿಳಿಸಿರುವುದಾಗಿ ಪಿಟಿಐ ವರದಿ...

ಕೇಂದ್ರ ಬಜೆಟ್ 2026 | ಯಾವುದು ಅಗ್ಗ ಮತ್ತು ಯಾವುದು ದುಬಾರಿ..? 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ (ಫೆಬ್ರವರಿ 1, 2026) ತಮ್ಮ ಒಂಬತ್ತನೇ ಬಜೆಟ್ ಮಂಡಿಸಿದ್ದಾರೆ. ಈ ವರ್ಷದ (2026-27 ಹಣಕಾಸು) ಬಜೆಟ್ ತೀವ್ರಗೊಳ್ಳುತ್ತಿರುವ ಜಾಗತಿಕ ವ್ಯಾಪಾರ ಉದ್ವಿಗ್ನತೆ, ರೂಪಾಯಿ ಮೌಲ್ಯದಲ್ಲಿ...

ಕೇಂದ್ರ ಬಜೆಟ್ 2026| ರಕ್ಷಣಾ ಇಲಾಖೆಗೆ 7.85 ಲಕ್ಷ ಕೋಟಿ ರೂ. ಮೀಸಲು

ಕೇಂದ್ರ ಸರ್ಕಾರದ ಬಜೆಟ್ 2026 ರಲ್ಲಿ ರಕ್ಷಣಾ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಈ ವಲಯಕ್ಕೆ 7.85 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದು ಕಳೆದ ವರ್ಷದ 6.81 ಲಕ್ಷ ಕೋಟಿ ರೂ.ಗಳಿಗಿಂತ ಗಮನಾರ್ಹ...

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...