Homeರಾಜಕೀಯಈ ಅಜಾತಶತ್ರು ತನ್ನ ಹಲ್ಲು, ಉಗುರುಗಳನ್ನು ಧಾರೆಯೆರೆದ ವ್ಯಾಘ್ರನಂತಲ್ಲಾ

ಈ ಅಜಾತಶತ್ರು ತನ್ನ ಹಲ್ಲು, ಉಗುರುಗಳನ್ನು ಧಾರೆಯೆರೆದ ವ್ಯಾಘ್ರನಂತಲ್ಲಾ

- Advertisement -
- Advertisement -

ಅಟಲ್ ಬಿಹಾರಿ ವಾಜಪೇಯಿಯವರು ನಿರ್ಗಮಿಸಿದ್ದಾರೆ. ಅವರು ಮಾತು ನಿಲ್ಲಿಸಿ ಒಂದು ದಶಕವಾಗುತ್ತಾ ಬಂದಿತ್ತು. ಯಾರನ್ನೂ ಗುರುತಿಸಲಾಗದೆ ಮಗುವಿನಂತೆ ನೋಡುತ್ತಿದ್ದರು. ಎಲ್ಲರೂ ಅವರ ಸ್ಥಿತಿ ಕಂಡು ಮರುಗುತ್ತಿದ್ದರು. ಹಾಲಿ ಬಿಜೆಪಿಯ ಹಲವು ಹಿರಿಯರು ವಾಜಪೇಯಿಯಂತಲ್ಲದಿದ್ದರೂ ಒಂಥರದಲ್ಲಿ ಮೌನಿಗಳಾಗಿದ್ದಾರಂತಲ್ಲಾ.
ವಾಜಪೇಯಿಯವರ ನಿಧನಕ್ಕೆ ತಮ್ಮ ಬತ್ತಳಿಕೆಯಲ್ಲಿನ ಎಲ್ಲಾ ಪದಪುಂಜಗಳಿಗೂ ಸಾಣೆಹಿಡಿದು ಝಳಪಿದ ಮಾಧ್ಯಮದ ಬೃಹಸ್ಪತಿಗಳು ಕಡೆಗೆ `ಅಜಾತಶತೃ’ `ಕವಿಹೃದಯಿ’ ಎಂದೆಲ್ಲಾ ಕರೆದು ಸುಸ್ತಾದವಂತಲ್ಲಾ.
ವಾಜಪೇಯಿ ಅಜಾತಶತ್ರು ನಿಜ. ಆದರೂ, ಅವರು ಶತ್ರುಸೈನ್ಯವನ್ನು ಹೊಂದಿದ್ದರು. ಆ ಸೈನ್ಯದ ಸೇನಾಪತಿ ಮಾತ್ರ ಅಡ್ವಾನಿ. ಸದರಿ ಅಡ್ವಾನಿಯವರು ತಮ್ಮ ಗುರುವರ್ಯನನ್ನು ಪ್ರಧಾನಿಯಾಗಿ ಮಾಡಲು ಶ್ರೀ ರಾಮಚಂದ್ರನನ್ನೇ ಬೀದಿಗೆ ತಂದರು. ಅದರಿಂದಾದ ಸಾವುನೋವುಗಳಿಗೆ ಅದ್ವಾನಿಯೇ ಕಾರಣ, ವಾಜಪೇಯಿ ಅಲ್ಲ ಎಂದು ಹೇಗೆ ಹೇಳುವುದು. ಥೂತ್ತೇರಿ..!

*********

ಅಡ್ವಾನಿ ಈ ಅಜಾತಶತ್ರುವನ್ನು ಪ್ರಧಾನಿಯಾಗಿ ಮಾಡಲು ಸೈನ್ಯ ಸಮೇತರಾಗಿ ಹೊರಟಿದ್ದು ಬಾಬರಿ ಮಸೀದಿ ದಿಕ್ಕಿಗೆ. ನೋಡುನೋಡುತ್ತಿದ್ದಂತೆಯೇ ಮಸೀದಿ ನೆಲಸಮವಾಯ್ತು. ಅದಕ್ಕೆ ಸ್ಫೂರ್ತಿ ಅಜಾತಶತೃ ಕವನ. ಏಕೆಂದರೆ ನಮ್ಮ ಅಜಾತಶತ್ರು ಕವಿ ಬೇರೆ ಆಗಿದ್ದರಿಂದ ಭಾಷಣದಲ್ಲಿನ ಅರ್ಧಭಾಗದಲ್ಲಿ ಕವಿಸಾಲುಗಳಿರುತ್ತಿದ್ದವು. ಬಾಬರಿ ಮಸೀದಿ ಉರುಳಿಸುವುದರಲ್ಲಿ ವಾಜಪೇಯಿ ಕಾವ್ಯ ಎಂತಹ ಸ್ಫೂರ್ತಿ ಕೊಟ್ಟಿತ್ತೆಂದರೆ, ಅವರ ಸಾಲುಗಳನ್ನೇ ತರ್ಜುಮೆ ಮಾಡಿಕೊಂಡ ಚೆಡ್ಡಿಗಳು,
ನೀವು ಬಂದರೆ ಜೊತೆಯಾಗಿ,
ನೀವು ಬಾರದಿರೆ ಬಿಟ್ಟು,
ತಡೆಯ ಬಂದರೆ ಹತ್ತಿಕ್ಕಿ,
ಮಂದಿರವಲ್ಲೇ ಕಟ್ಟುವೆವು
ಭಜನೆಗೆ ಅಲ್ಲೇ ಕೂರುವೆವು
ಕೀರ್ಥನೆ ಅಲ್ಲೇ ಹಾಡುವೆವು
ಪಾಕಶಾಲೆ ಕಡೆ ಓಡುವೆವು
ಎಂದು ಕರೆದುಕೊಂಡು ಅದನ್ನೆ ದೇಶಕ್ಕೆಲ್ಲಾ ಮೆಸೇಜು ಮಾಡಿದವಲ್ಲಾ ಥೂತ್ತೇರಿ…!

********

ನಮ್ಮ ಕವಿಹೃದಯದ ಅಜಾತಶತ್ರು ನೆಹರು ಕಾಲದವರು. ರಾಜೀವ್‍ಗಾಂಧಿ ಪ್ರಧಾನಿಯಾದಾಗಲೂ ವಿರೋಧ ಪಕ್ಷದ ನಾಯಕ. ಆಗ ಭಾರತವನ್ನು ತಿರುಗುತ್ತಾ, ನಮ್ಮ ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆಗಳು ತುಂಬಾ ಹೀನ ಸ್ಥಿತಿಯಲ್ಲಿವೆ, ಮಕ್ಕಳಿಗೆ ಅಕ್ಷರ ಬರೆದು ತೋರಲು ಬ್ಲಾಕ್ ಬೋರ್ಡುಗಳಿಲ್ಲ. ಇದು ರಾಜೀವ್‍ಗಾಂಧಿಯಂತಹ ನಾಯಕರಿಗೆ ಗೊತ್ತಾಗುವುದಿಲ್ಲ ಎಂದು ಹೇಳಿದ್ದರು. ನಂತರ ಸದರಿ ಕವಿಯೇ ಪ್ರಧಾನಿಯಾದರು. ಭಾರತದ ಎಲ್ಲಾ ಹಳ್ಳಿಗಳಲ್ಲಿ ಸುಸಜ್ಜಿತ ಪ್ರೈಮರಿ ಶಾಲೆ ರೂಪುಗೊಳ್ಳುತ್ತವೆಂದು ಕಾಯುತ್ತಿರಬೇಕಾದರೆ, ವಾಜಪೇಯಿ ಪ್ರೊಕ್ರಾನ್ ಸಿಡಿಸಿದರು. ಇದರಿಂದ ಶಾಕಾದ ಲಂಕೇಶ್ `ಮಗ ಎಲ್ಲಾ ಬಿಟ್ಟು ಭಂಗಿ ನೆಟ್ಟ’ ಎಂದು ಬರೆದರಂತಲ್ಲಾ, ಥೂತ್ತೇರಿ…!

********

ನಮ್ಮ ಅಜಾತಶತೃ ವಾಜಪೇಯಿಯವರನ್ನ ಕೆಲವು ಟೀಕಾಕಾರರು ಗೋಮುಖವ್ಯಾಘ್ರ ಎಂದು ಬಣ್ಣಿಸಿದ್ದರು. ಆದರೆ ಆ ವ್ಯಾಘ್ರನಿಗೆ ಹಲ್ಲು ಉಗುರುಗಳಿರಲಿಲ್ಲ. ಆದರೂ ಅವುಗಳನ್ನು ಬೇರೆಯವರಿಗೆ ಕರ್ಣನಂತೆ ಧಾರೆಯೆರೆದಿದ್ದರು. ಧಾರೆ ಎರೆಸಿಕೊಂಡ ಅಢ್ವಾನಿ ಅವತಾರ ಅಂತ್ಯಗೊಂಡ ನಂತರ ಪ್ರಖರ ಹಲ್ಲು ಉಗುರುಗಳೊಂದಿಗೆ ಕಂಗೊಳಿಸಿದ ಮೋದಿ ಎಂಬ ವ್ಯಾಘ್ರ ವಾಜಪೇಯಿ, ಅಡ್ವಾನಿಗಳ ಸೃಷ್ಟಿಯೇ ಹೊರತು, ಸ್ವಯಂ ಸೃಷ್ಟಿಯಾದುದಲ್ಲವಂತಲ್ಲಾ. ಈಚೆಗೆ ಪ್ರಾಣಿತಳಿ ಶಾಸ್ತ್ರಜ್ಞರು ಒಂದು ಪ್ರಯೋಗ ಮಾಡಿ, ಸಿಂಹ ಮತ್ತು ಹುಲಿಯನ್ನು ಕೂಡಿಸಿ ವಿಶೇಷ ತಳಿ ತೆಗೆದು ಅದಕ್ಕೆ ಲೈಗರ್ ಎಂದು ನಾಮಕರಣ ಮಾಡಿದ್ದಾರೆ. ಆ ಲೈಗರ್ ನೋಡಿದರೆ ಅದರೊಳಗೆ ಸಿಂಹ ಮತ್ತು ಹುಲಿ ಎರಡೂ ಅಡಗಿರುವುದು ಗೋಚರವಾಗುತ್ತದಂತೆ. ಭಾರತ ಕಂಡ ಅಪರೂಪದ ಪ್ರಧಾನಿ ಮೋದಿಯನ್ನು ನೋಡಿದರೆ ಗೋಮುಖವ್ಯಾಘ್ರನಾದ ವಾಜಪೇಯಿ, ವ್ಯಾಘ್ರಮುಖದ ಗೋವಾದ ಅಡ್ವಾನಿ, ಈ ಇಬ್ಬರ ಚಹರೆಗಳೂ ಗೋಚರಿಸುತ್ತಾ ದೇಶಕ್ಕೆ ಆತಂಕ ಉಂಟಾಗಿದೆಯಂತಲ್ಲಾ ಥೂತ್ತೇರಿ..!

********

ಭಾರತದ ಇಡೀ ಸಂಘಪರಿವಾರ ಮತ್ತದರ ನಿರ್ಮಾತೃಗಳೆಲ್ಲಾ ರಾಮಮಂದಿರದ ಬಗ್ಗೆ ಹೋರಾಡುತ್ತಿರುವುದರ ಹಿಂದೆ ಸಾವಿರಾರು ವರ್ಷಗಳ ಇತಿಹಾಸವಿದೆಯಂತಲ್ಲಾ.
ಆ ಇತಿಹಾಸ ಯಾವುದಪ್ಪಾ ಎಂದರೆ, ಭಾರತವನ್ನೇ ಬಾಳೆಯೆಲೆ ಮಾಡಿಕೊಂಡು ಉಂಡ ಜನ ನೆಲೆಸಿದ್ದುದು ದೇವಸ್ಥಾನದ ಒಳಗೆ. ಆ ದೇವಸ್ಥಾನದಲ್ಲಿ ಹಜಾರ, ಗರ್ಭಗುಡಿ, ಪೌಳಿ ಮತ್ತು ಪಾಕಶಾಲೆಗಳಿದ್ದವು. ಮನೋರಂಜನೆಗೆ ಭಜನೆ ಕೀರ್ತನೆ ಜೊತೆಗೆ ಭರತನಾಟ್ಯಗಳು ಜರುಗುತ್ತಿದ್ದವು. ಕೈ ಸಡಿಲಬಿಟ್ಟು ಭೋಜನ ಭಾರಿಸಿದವರು ಸುಧಾರಿಸಿಕೊಳ್ಳಲು ಒಳ ಜಗಲಿ ಇದ್ದವು. ಹೀಗೆ ಮಂದಿರದೊಳಗೇ ಬದುಕಿದ್ದ ಜನ ಬಿಜೆಪಿ ಪಾರ್ಟಿ ಮಾಡಿಕೊಂಡು ಬೀದಿಗೆ ಬಂದಾಗಲೂ ಅವುಗಳ ಬಾಯಿಂದ ಬರುತ್ತಿರುವ ಮಾತೂ ಕೂಡಾ ಮಂದಿರ ನಿರ್ಮಾಣವೇ ಹೊರತು ಭಾರತ ಇಂದು ಹೆದರಿಸುತ್ತಿರುವ ಸಮಸ್ಯೆಗಳಲ್ಲವಂತಲ್ಲಾ ಥೂತ್ತೇರಿ..!

********

ದಿಢೀರನೆ ಕೇರಳದ ಕಡೆ ಅಪ್ಪಳಿಸಿದ ಜಲಪ್ರಳಯವಾದಂತೆ ಹಾಡುಹಗಲು ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿ ಉದ್ಭವಿಸಿದ ಕುಮಾರಣ್ಣ, ಎಮ್ಮೆ ಕರುವಿನ ಮೇಲೆ ಶಾಲು ಹಾಕಿದಂತೆ ವಸ್ತ್ರ ಧರಿಸಿಕೊಂಡು ಕುಕ್ಕೆ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳಕ್ಕೆ ನುಗ್ಗಿ ಹೋಗುತ್ತಿದ್ದಾರಂತಲ್ಲಾ. ಹೊಸದಾಗಿ ಮುಖ್ಯಮಂತ್ರಿಯಾದವರು ಮೊದಲು ಮಾಡುವ ಕೆಲಸವೇನೆಂದರೆ, ಆಯಾ ಜಿಲ್ಲೆಯ ಆಡಳಿತವನ್ನು ಮೀಟಿಂಗ್ ಕರೆದು ಸಲಹೆಕೊಡುವುದು ಹಾಗೂ ತಾರತಮ್ಯದ ಕಾರಣಕ್ಕೆ ರೊಚ್ಚಿಗೆದ್ದ ಜನಗಳ ಬಳಿಗೋಗಿ ಸಾಂತ್ವನ ಹೇಳುವುದು, ಹಾಗೇ ಬಿತ್ತನೆಗೆ ಭೂಮಿ ರೆಡಿಮಾಡಿಕೊಂಡು ಮಳೆ ಬರದೆ ಕಂಗಾಲಾಗಿರುವ ರೈತನ ಬಳಿಗೋಗುವುದು.. ಇದೆಲ್ಲವನ್ನ ಬಿಟ್ಟು ಕುಮಾರಣ್ಣ ಮಂಡ್ಯದಲ್ಲಿ ನಾಲ್ಕು ಪೈರು ನಾಟಿ ಮಾಡಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಓಡಿಹೋದದ್ದು ನೋಡಿದ ಯಡ್ಡಿ ಪಟಾಲಂ ಕುಂಡಿ ಬಡಿದುಕೊಂಡು ನಕ್ಕವಂತಲ್ಲಾ, ಥೂತ್ತೇರಿ…!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...