Homeಅಂಕಣಗಳುಮುಖಕ್ಕೆ ಬೀಳ್ತಿರೊ ಎಂಜಲು ಒರೆಸಿಕೊಳ್ಳಲು ಲೇವಣ್ಣ ಎರಡು ಶಾಮಿಯಾನ ತರಿಸಿಕೊಂಡ ಬ್ರೇಕಿಂಗ್ ನ್ಯೂಸ್!

ಮುಖಕ್ಕೆ ಬೀಳ್ತಿರೊ ಎಂಜಲು ಒರೆಸಿಕೊಳ್ಳಲು ಲೇವಣ್ಣ ಎರಡು ಶಾಮಿಯಾನ ತರಿಸಿಕೊಂಡ ಬ್ರೇಕಿಂಗ್ ನ್ಯೂಸ್!

- Advertisement -
- Advertisement -

ಕೇಳುಗರಿಗೆಲ್ಲ ನಮಸ್ಕಾರ, ಆಘಾತವಾಣಿ ವಾರ್ತೆಗಳಿಗೆ ಸ್ವಾಗತ, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತ. ಈಗ ವಾರ್ತೆಗಳ ವಿವರ..
ಮುಖ್ಯಮಂತ್ರಿ ‘ಸುಮಾರ್ ಸ್ವಾಮಿ’ಯ ಬೆನ್ನಿಗೆ ಬಿದ್ದ ಬೇತಾಳದಂತೆ ಹೋದಲ್ಲಿ ಬಂದಲ್ಲೆಲ್ಲ ರಂಕಲು ಎಬ್ಬಿಸಿಕೊಂಡು ತಿರುಗೋ ಹೆಚ್.ಡಿ. ಲೇವಣ್ಣನ ಹಿಲ್ಲೇರಿಯಸ್ ಅಡ್ವೆಂಚರ್‍ಗಳಿಗೆ ಹೊಸದೊಂದು ಸಾಹಸ ಸೇರ್ಪಡೆಯಾಗಿದೆ. ತನ್ನ ಮನೆಯ ಬೆಡ್ರೂಂ ಮಂಚದ ಮೇಲೆ ಹೋಮಕುಂಡ ಕಟ್ಟಿಸಿಕೊಂಡು ಅದ್ರೊಳಗೇ ಮಲಗಿದ್ದ ಲೇವಣ್ಣನಿಗೆ ಕನಸಿನಲ್ಲಿ ಸನಿಮಾತ್ಮನು ಬಂದು ತನ್ನ ಕಾಗೆ ಕೊಕ್ಕಿನಿಂದ ಲೇವಣ್ಣನ ಕಣ್ಣಿಗೆ ಕುಕ್ಕಿಸಿ ಎಬ್ಬಿಸಿದ್ದಾನೆ. ಪ್ರವಾಹ ಬಂದು ಜನ ಸಾಯ್ತಾವರೆ, ನೀನಿಲ್ಲಿ ಕುಂಡದೊಳಗೆ ಕಾಲೆತ್ತಿಕೊಂಡು ಬಿದ್ಕಂಡಿದೀಯ ಎದ್ದೇಳೋ ಲೋಪರ್ ಎಂದು ಬೈದನಂತೆ. ತಕ್ಷಣ ಕುಂಡದೊಳಗಿನಿಂದ ಕಣ್ಣುಜ್ಜಿಕೊಂಡು ಎದ್ದ ಲೇವಣ್ಣ ಕಾರಲ್ಲಿ ಒಂದೆರಡು ಬಂಡಲ್ ಬಿಸ್ಕತ್ ಪ್ಯಾಕೆಟ್ ಎತ್ಕೊಂಡು ಪ್ರವಾಹ ಸಂತ್ರಸ್ತರ ಗಂಜಿಕೇಂದ್ರಗಳಿಗೆ ಓಡೋಗಿದೆ. ಅಲ್ಲಿ ಮೊದಲೇ ನೊಂದು ಬೆಂದು ಹೈರಾಣಾಗಿದ್ದ ಸಂತ್ರಸ್ತ ಜನರಿಗೆ ನಾಯಿಗೆ ಎಸೆಯುವಂತೆ ಬಿಸ್ಕತ್ ಎಸೆದು ಬಂದಿದೆ. ಈ ಸುದ್ದಿ ಬಹಿರಂಗವಾಗುತ್ತಿದ್ದಂತೆ ಜನ ಕ್ಯಾಕರಿಸಿ ತುಪಾತುಪಾ ಉಗಿಯತೊಡಗಿದ್ದಾರೆ. ದೊಡ್ಡಗೌಡರ ಮಗ ಅನ್ನೋ ಕ್ವಾಲಿಫಿಕೇಷನ್ ಬಿಟ್ರೆ ಗ್ರಾಮಪಂಚಾಯ್ತಿ ಪೀವನ್ ಆಗಲೂ ಲಾಯಕ್ಕಿಲ್ಲದ ಭಯಂಕರ ವದನ ಹೊಂದಿರೋ ಲೇವಣ್ಣ, ಮುಖಕ್ಕೆ ಬೀಳ್ತಿರೋ ಎಂಜಲು ಒರೆಸಿಕೊಳ್ಳಲು ಮನೇಲಿರೋ ಟವೆಲ್ಲು, ಬೆಡ್‍ಶೀಟುಗಳು ಸಾಲದಾಗಿ ಹೊಸ ಎರಡು ಶಾಮಿಯಾನ ತರಿಸಿಕೊಂಡಿದ್ದಾರೆಂದು ಲೇವಣ್ಣನ ಅಧಿಕೃತ ಪುತ್ರ ಹೇಳಿಕೆ ಕೊಟ್ಟಿದ್ದಾರೆ. ಇದರ ನಡುವೆ ಲೇವಣ್ಣನೇನಾದ್ರೂ ಸಂತ್ರಸ್ತ ಶಿಬಿರಗಳಿಗೆ ಅಪ್ಪಿತಪ್ಪಿ ಮತ್ತೆ ಭೇಟಿ ಕೊಟ್ಟರೆ ಅಲ್ಲಿರೋ ಜನರು ಲೇವಣ್ಣನ ಕಾಲುಹಿಡಿದು ದರದರನೆ ಎಳೆದೊಯ್ದು ರಾಜಾಸೀಟ್ ಮೇಲಿಂದ ಕೆಳಕ್ಕೆಸೆಯಲು ಪ್ಲಾನ್ ಮಾಡಿದ್ದಾರೆಂದು ಗುಪ್ತಚರ ಮೂಲಗಳು ಸ್ಪಷ್ಟಪಡಿಸಿವೆ.

********

ಆಡಳಿತ ನಡೆಸಿ ಅನುಭವವಿರದ ಎಲ್ ಬೋರ್ಡ್ ಎನ್.ಡಿ.ಎ ಸರ್ಕಾರ, ಎಲ್ಲಿ ಕೈ ಇಟ್ಟರೂ ಅಲ್ಲೊಂದು ಕೊಳಕುಮಂಡಲದ ಹಾವಿನ ಕೈಲಿ ಗಚ್ಚನೆ ಕಡಿಸಿಕೊಂಡು ಕಿಟಾರ್ ಎಂದು ಕಿರುಚಿಕೊಳ್ಳುತ್ತಿರುವ ಸುದ್ದಿಗಳು ಲಭ್ಯವಾಗಿವೆ. ಕೇಂದ್ರ ಅಂಕಿಅಂಶ ಆಯೋಗ ನಡೆಸಿದ ಅವಲೋಕನದಲ್ಲಿ ಕೇಂದ್ರದ ‘ಹಾಫ್ ಮೆಂಟ್ಲು ಓಲ್ಡ್ ಮ್ಯಾನ್’ ಸರ್ಕಾರದ ಕಾಲದ ಜಿ.ಡಿ.ಪಿಯು ಹಿಂದಿನ ಯುಪಿಎ ಸರ್ಕಾರದ ಕಾಲದ ಜಿಡಿಪಿಯ ಕಾಲಧೂಳಿಗೂ ಸಮವಿಲ್ಲದಂತೆ ಯಕ್ಕುಟ್ಟಿ ಹೋಗಿರುವುದು ಬಯಲಾಗಿದೆ. ಇದನ್ನೇ ಸರ್ಕಾರದ ವೆಬ್‍ಸೈಟಿನಲ್ಲಿ ಪ್ರಕಟಿಸಿದಾಗ ತಲೆಯಿರುವ ಮಾಧ್ಯಮಗಳು ಪೊರಕೆ ಎತ್ತಿಕೊಂಡು ‘ಗಟರ್ ಗ್ಯಾಸ್ ಮೆಂಟ್ಲುಮ್ಯಾನ್’ ಮುಖಕ್ಕೆ ಹೆಟ್ಟಿ ‘ಏನಲೇ ಇದು ಭಾಡಕೋ’ ಎಂದು ಮಕ್ಕುಗಿದಿವೆ. ಇದರಿಂದ ನೊಂದ ಮೆಂಟ್ಲುತಾತ.. ಆ ರಿಪೋರ್ಟನ್ನೇ ವೆಬ್‍ಸೈಟಿಂದ ಕಿತ್ತು ಬಚ್ಚಿಡಲು ಹೇಳಿ, ಮತ್ತೊಮ್ಮೆ ಸಿಕ್ಕಿ ಬಿದ್ದಿದೆ. ಚಡ್ಡಿ ಹರಿದೋಗಿ ಏನೇನೋ ಕಾಣ್ತಿದೆ ನೋಡ್ಕಳಯ್ಯ ಅಂದ್ರೆ ‘ ನಾನಿರದೇ ಹಿಂಗೆ, ನೋಡಕ್ಕಾಗದಿದ್ರೆ ನೀವೇ ಕಣ್ ಮುಚ್ಕಳಿ ಅಂದ್ನಂತೆ’ ಅನ್ನೋ ಗಾದೆಯನ್ನ ಈ ಓಲ್ಡ್ ಬಫೆಲೋನ ನೋಡಿಯೇ ಬರೆದಿರಬಹುದೆಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

********

ಭೂಮಿಯ ಮೇಲೆ ಎಲ್ಲೂ ಕಾಣಸಿಗದ ಅತ್ಯಂತ ಶ್ರೇಷ್ಟ ಮುಠ್ಠಾಳರ ಕೊಂಪೆಯಾಗಿರೋ ಮೋತಿಜೀ ಭಕ್ತರು ಕೇರಳ ಪ್ರವಾಹದ ಸಂದರ್ಭದಲ್ಲು ತಮ್ಮ ಸೈಕೋಬುದ್ದಿಗಳನ್ನು ಬಿಡದಿರುವುದು ಆಶ್ಚರ್ಯವೇನಲ್ಲ. ಸುಪ್ರೀಂಕೋರ್ಟ್ ಶಬರಿಮಲೆ ದೇವರ ದರ್ಶನಕ್ಕೆ ಹೆಂಗಸರನ್ನು ಬಿಟ್ಟಿದ್ದೇ ಕಾರಣವೆಂದು ಈ ಅನ್ಯಗ್ರಹ ಮೂದೇವಿಗಳು ತಲೆಚಚ್ಚಿಕೊಂಡು ಅಳುತ್ತಿವೆ. ಆ ಲೆಕ್ಕದಲ್ಲಿ ನೋಡಿದರೆ ಸುಪ್ರೀಂ ತೀರ್ಪಿಗೆ ಸಿಟ್ಟಿಗೆದ್ದ ಅಯ್ಯಪ್ಪಸ್ವಾಮಿ ಕೋರ್ಟನ್ನೇ ಪ್ರವಾಹದೊಳಗೆ ಮುಳುಗಿಸುವ ಬದಲು ತನ್ನ ಟೆಂಪಲ್ಲನ್ನೇ ಯಾಕೆ ಪಂಪಾನದಿಯೊಳಗೆ ಕಂಠಮಟ್ಟ ಮುಳುಗಿಸಿಕೊಂಡನೆಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಉತ್ತರಾಖಂಡದಲ್ಲಿ ನೆರೆ ಬಂದು ಇಡೀ ಕಣಿವೆ ದೇಗುಲದ ಊರನ್ನು ಕೊಚ್ಚಿಕೊಂಡು ಹೋದಾಗ ಆ ದೇವರೇನು ಶಾಪ ಕೊಟ್ಟಿತ್ತು? ಗುಜರಾತಲ್ಲಿ ಭೂಕಂಪ ಸಂಭವಿಸಿದಾಗ ಆ ರಾಜ್ಯವೇನು ಪಾಪ ಮಾಡಿತ್ತು? ಅನ್ನತಕ್ಕಂಥ ಪ್ರಶ್ನೆಗಳು ಜನರಿಂದ ಬರುತ್ತಿದ್ದಂತೆ.. ಸೆಗಣಿ ಬ್ರೈನ್ ಸೈಕೋಭಕ್ತರು ಕಣ್ಣಿಗೆ ಬಿದ್ದ ಇಲಿಬಿಲಗಳನ್ನು ಹೊಕ್ಕಿದ್ದು, ಅಲ್ಲಿ ವಾಸವಿದ್ದ ಮೂಗಿಲಿಗಳೊಡನೆ ವೀರಾವೇಶದಿಂದ ಹೋರಾಡಿ ಅವನ್ನು ಹೊರಗಾಕಿ ಬಿಲದಲ್ಲೇ ಠಿಕಾಣಿ ಹೂಡಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ.

*********

ಪಾಕಿಸ್ತಾನದ ಹೊಸ ಪ್ರಧಾನಮಂತ್ರಿ ಇಮ್ರಾನ್ ಖಾನ್ ಪದವಿ ಸ್ವೀಕಾರ ಪ್ರೋಗ್ರಾಂಗೆ ಹೋಗಿಬಂದ ಮಾಜಿ ಕ್ರಿಕೆಟರ್ ಸಿಕ್ಸರ್ ಸಿದ್ದುವಿನ ಮೇಲೆ ಬ್ರಿಟಿಷರ ಬೂಟನ್ನು ನಾಲಿಗೆಯಿಂದ ಸ್ವಚ್ಛಗೊಳಿಸುತ್ತಿದ್ದ ದ್ವೇಷಭಕ್ತರು ಮುಗಿಬಿದ್ದಿದ್ದಾರೆ. ಶತ್ರು ದೇಶಕ್ಕೆ ಯಾಕೆ ಹೋದ್ರಿ, ಅಲ್ಲಿನ ಆರ್ಮಿ ಚೀಫನ್ನ ಯಾಕ್ ತಬ್ಕೊಂಡ್ರಿ, ಲೊಟ್ಟೆ ಲೊಸಕು ಅಂತ ಕೂಗಾಡುತ್ತಿದ್ದಾರೆ. ಆಲ್ ಇಂಡಿಯ ನಿರುದ್ಯೋಗಿಗಳ ಸಂಘದ ‘ಭಜ ಮಂಗದಳ’ದ ಕಮಂಗಿಗಳು ಸಿದ್ದು ತಲೆ ತೆಗೆದವರಿಗೆ 5 ಲಕ್ಷ ದುಡ್ಡನ್ನ ಪೇಟಿಎಂಲಿ ಕಳಿಸ್ತೀವಿ ಅಂತ ಬೊಗಳಾಡುತ್ತಿದ್ದಾರೆ. ಎಲ್ಲವನ್ನು ಕೇಳಿಸಿಕೊಂಡ ಸಿಕ್ಸರ್ ಸಿದ್ದು ಇದೀಗ ಅರಚಾಡುತ್ತಿರೋ ‘ಬ್ರಿಟಿಶ್ ಬೂಟ್ ಪಾಲಿಶ್’ ಗ್ಯಾಂಗಿಗೆ ಒಂದೊಂದೇ ಪ್ರಶ್ನೆಗಳನ್ನು ಹಳೇಕೆರಗಳಿಗೆ ಸಿಕ್ಕಿಸಿ ಎಸೆಯತೊಡಗಿದ್ದಾರೆ. ವಾಜಪೇಯಿ ಕಾಲದಲ್ಲಿ ಕಾರ್ಗಿಲ್ ಯುದ್ಧಕ್ಕೆ ಕಾರಣನಾಗಿ ನಮ್ಮ ಸಾವಿರಾರು ಸೈನಿಕರನ್ನು ಕೊಂದ ಪರ್ವೆಜ್ ಮುಶರಫ್‍ನನ್ನು ಅ’ತಾತ’ಶತ್ರು ವಾಜಪೇಯಿ ಇಂಡಿಯಾಗೆ ಆಹ್ವಾನಿಸಿ ತಬ್ಬಿಕೊಂಡಿದ್ರಲ್ಲ.. ಅವಾಗ ಈ ‘ಬ್ರಿಟಿಶ್ ಬೂಟ್ ಪಾಲಿಶ್ ಗ್ಯಾಂಗ್’ ಯಾವ ಹೋಟೆಲಿನಲ್ಲಿ ಎಂಜಲೆತ್ತುತ್ತಿತ್ತು? “ಕರೆಯದೇ ಬರುವನ ಕರೆದು ಹಳೆಯ ರೀಬೋಕ್ ಬೂಟಲ್ಲಿ ಹೊಡೆಯೆಂದ ಸರ್ವಜ್ಞ” ಎಂಬ ಗಾದೆಯಂತೆ ಕರೆಯದಿದ್ರೂ ನವಾಜ್ ಶರೀಫ್ ಮಗಳ ಮದ್ವೆಗೆ ಪಾಕಿಸ್ತಾನಕ್ಕೆ ಓಡೋಗಿ “ಮಮ್ಮಿಗೆ ಸೀರೆ ಇಲ್ಲ, ಇರೋ ಸೀರೆಗಳೆಲ್ಲ ಹರಿದು ಹೋಗಿವೆ, ನನಗೆ ಕೊಡಿಸೋ ತಾಕತ್ತಿಲ್ಲ, ಒಂದೆರಡು ಸೀರೆ ಕೊಡ್ರಿ” ಅಂತ ನವಾಜ್ ಶರೀಫನಿಂದ ಸೀರೆ ತಗೊಂಡು ಬಂದ ‘ಗಟರ್ ಗ್ಯಾಸ್ ಮೋರಿ’ಯ ತಲೆಗೆಷ್ಟು ಬಹುಮಾನ ಕಟ್ತೀರಿ? ಪಠಾಣ್ ಕೋಟ್ ಆರ್ಮಿಬೇಸಿಗೆ ಬಾಂಬೆಸೆದು ಹೋದ ಪಾಕ್ ಉಗ್ರರನ್ನು ಸದೆ ಬಡೆಯೋದು ಬಿಟ್ಟು ಪಾಕ್ ಗುಪ್ತಚರ ದಳದ ಐಎಸ್‍ಐ ಅಧಿಕಾರಿಗಳನ್ನ ಪಠಾಣ್ ಕೋಟಿನಲ್ಲಿ ರತ್ನಗಂಬಳಿ ಹಾಸಿ ಕರೆದುಕೊಂಡ ಅರುಳುಮರುಳು ಪಕೋಡತಾತನ್ನ ಯಾವ ಸಮುದ್ರದ ಒಳಗೆ ಎಸೀತೀರಿ? ಅಂತ ಸೈಕೋ ದ್ವೇಷಭಕ್ತರನ್ನು ಕಂಡಕಂಡಲ್ಲಿ ಒದೆಯುತ್ತಿರೋ ಸಿಕ್ಸರ್ ಸಿದ್ದು ಧೈರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ನಮ್ಮ ನಿಮ್ಮ ಭೇಟಿ ಮುಂದಿನವಾರ. ಅಲ್ಲೀತನಕ ನೀವೂ ನೆಮ್ದಿಯಾಗಿರಿ, ನಾವೂ ನೆಮ್ದಿಯಾಗಿರುತ್ತೇವೆ ಅಂತ ಹೇಳುತ್ತ, ವಾರ್ತಾಪ್ರಸಾರಕ್ಕೆ ಮಂಗಳ ಹಾಡುತ್ತಿದ್ದೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಡದಿ ರೈತರ ವಿಚಾರದಲ್ಲಿ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಆದರೆ.., ಸಂಯುಕ್ತ ಹೋರಾಟ ಸಮಿತಿಯ ಎಚ್ಚರಿಕೆಯ ಮಾತು

ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಬಲವಂತವಾಗಿ ಯಾವುದೇ ರೈತರ ಭೂಮಿ ಕಿತ್ತುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳುತ್ತಿರುವುದು ಕೇವಲ ಮಾತಿನ ಜಾಣ್ಮೆಯಷ್ಟೇ. ಬಿಡದಿ ಭಾಗದ ಮೂರು ಗ್ರಾಮಗಳಿಗೆ ಹೊರಡಿಸಲಾಗಿರುವ ಭೂಸ್ವಾಧೀನದ ಅಂತಿಮ ಅಧಿಸೂಚನೆಯನ್ನು ಸಂಪೂರ್ಣವಾಗಿ...

“8.5 ಕೆಜಿ ತೂಕ ಇಳಿಸಿಕೊಂಡ ಸೋನಮ್ ವಾಂಗ್‌ಚುಕ್ ಜೀವಕ್ಕೆ ಅಪಾಯ: ಬಲವಂತ ಆಹಾರ ನೀಡುವಂತೆ ದೆಹಲಿ ಹೈಕೋರ್ಟ್‌ನಲ್ಲಿ ಪಿಐಎಲ್”

ದೇಶದ ಶೈಕ್ಷಣಿಕ ವ್ಯವಸ್ಥೆಯ ಭವಿಷ್ಯವನ್ನು ಗಾಳಿಗೆ ತೂರಿರುವ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಸಾಲು ಸಾಲು ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದು, ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪ್ರಖ್ಯಾತ ಹವಾಮಾನ ಮತ್ತು...

ಇನ್‌ಸ್ಟಾಮಾರ್ಟ್‌ನಲ್ಲಿ ಸಿಗಲಿದೆ ಎಲ್‌ಪಿಜಿ ಸಿಲಿಂಡರ್: ಬೆಂಗಳೂರಿನಲ್ಲಿ ಹೊಸ ಸೇವೆ ಆರಂಭ!

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಗ್ರಾಹಕರು ಇನ್ನು ಮುಂದೆ ಪ್ರಮುಖ ಕ್ವಿಕ್ ಕಾಮರ್ಸ್ ಸಂಸ್ಥೆಯಾದ 'ಇನ್‌ಸ್ಟಾಮಾರ್ಟ್' (Instamart) ಆ್ಯಪ್ ಮೂಲಕವೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್...

ಬಿಡದಿ ರೈತರ ಹೋರಾಟಕ್ಕೆ ಜಯ: ಬಲವಂತವಾಗಿ ಒಬ್ಬೇ ಒಬ್ಬ ರೈತರ ಜಮೀನನ್ನೂ ಪಡೆಯಲ್ಲ ಸಿಎಂ ಡಿ.ಕೆ.ಶಿವಕುಮಾರ್

"ಬಿಡದಿ ಸ್ಮಾರ್ಟ್ ಸಿಟಿ/ಟೌನ್ ಶಿಪ್ ಯೋಜನೆಯ ಹೆಸರಿನಲ್ಲಿ ಬಲವಂತವಾಗಿ ಒಬ್ಬೇ ಒಬ್ಬ ರೈತರ ಅಥವಾ ರೈತ ಮಹಿಳೆಯರ ಜಮೀನನ್ನು ನಮ್ಮ ಸರ್ಕಾರ ಭೂಸ್ವಾಧೀನ ಮಾಡಿಕೊಳ್ಳುವುದಿಲ್ಲ," ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಬಿಡದಿ ಟೌನ್‌ಶಿಪ್...

ಪಶ್ಚಿಮ ಬಂಗಾಳ: TMC ಬಂಡಾಯ ನಾಯಕ ರಿತಬ್ರತ ಬ್ಯಾನರ್ಜಿಗೆ ವಿಪಕ್ಷ ಸ್ಥಾನ ನೀಡಿದ್ದಕ್ಕೆ ನ್ಯಾಯಾಧೀಶರ ತೀವ್ರ ಆಕ್ಷೇಪ

ತೃಣಮೂಲ ಕಾಂಗ್ರೆಸ್‌ನ ಬಂಡಾಯ ಬಣದ ಮುಖ್ಯಸ್ಥ ರಿತಬ್ರತ ಬ್ಯಾನರ್ಜಿ ಅವರನ್ನು ಪಶ್ಚಿಮ ಬಂಗಾಳದ ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡುವಲ್ಲಿ ಸ್ಪೀಕರ್ ರತೀಂದ್ರ ಬೋಸ್ ತೋರಿರುವ "ತರಾತುರಿ"ಯನ್ನು ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ...

ಎರಡು ವರ್ಷಗಳಲ್ಲಿ 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ; ಇವರಲ್ಲಿ 193 ಮಂದಿ ವಿದೇಶಿಯರೆಂದು ಘೋಷಿತರು: ಅಸ್ಸಾಂ ಸರ್ಕಾರ

ಗುವಾಹಟಿ: ಕಳೆದ ಎರಡು ವರ್ಷಗಳ ಅವಧಿಯಲ್ಲಿ ಗಡೀಪಾರು, ಗಡಿಯಿಂದ ಆಚೆಗೆ ತಳ್ಳುವಿಕೆ (ಪುಶ್‌ಬ್ಯಾಕ್) ಅಥವಾ ಉಚ್ಚಾಟನೆ ಪ್ರಕ್ರಿಯೆಯ ಮೂಲಕ ಒಟ್ಟು 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ ಎಂದು ಅಸ್ಸಾಂ ಸರ್ಕಾರ ರಾಜ್ಯ ವಿಧಾನಸಭೆಗೆ...

17 ದಿನ, 9 ಕೆಜಿ ತೂಕ ಇಳಿಕೆ, ಸೋನಮ್ ವಾಂಗ್‌ಚುಕ್ ಆರೋಗ್ಯ ಸ್ಥಿತಿ ಗಂಭೀರ: ಉಪವಾಸ ಕೈಬಿಡುವಂತೆ ಅಖಿಲೇಶ್-ಕೇಜ್ರಿವಾಲ್ ಮನವಿ

ದೇಶದ ಶಿಕ್ಷಣ ವ್ಯವಸ್ಥೆಯನ್ನು ಜರ್ಜರಿತಗೊಳಿಸಿರುವ ಸರಣಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರವನ್ನು ವಿರೋಧಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಖ್ಯಾತ ಪರಿಸರ ಕಾರ್ಯಕರ್ತ ಸೋನಮ್...

ಎನ್‌ಸಿಪಿಯ ಎರಡೂ ಬಣಗಳಲ್ಲೂ ಬಿರುಸಿನ ಬೆಳವಣಿಗೆ : ಬಿಜೆಪಿ ತೆಕ್ಕೆಗೆ ಮತ್ತೊಂದು ಪಕ್ಷ?

ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ (ಎನ್‌ಸಿಪಿ) ಎರಡೂ ಬಣಗಳ ಮುಖ್ಯ ನಾಯಕರು ಮಂಗಳವಾರ (ಜು.14) ರಾತ್ರಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ಸಭೆಯು ಶರದ್ ಪವಾರ್ ಅವರ...

ಮೋದಿಯ ಮೌನವನ್ನು ಪ್ರಶ್ನಿಸುವ ರಾಹುಲ್ ಗಾಂಧಿ, ಸಾರ್ವಜನಿಕ ಹಿತಾಸಕ್ತಿಯ ಈ ವಿಷಯಗಳಲ್ಲಿ ತಾವೇಕೆ ಮೌನ?

ಪ್ರಧಾನಿ ಮೋದಿಯವರದ್ದು ಜಾಣ ಮೌನ ಎಂದು ಈಗಾಗಲೇ ಈ ದೇಶದ ಜನಕ್ಕೆ ಮನವರಿಕೆಯಾಗಿದೆ. ಕಳೆದ 14ವರ್ಷದಲ್ಲಿ ಒಂದೇ ಒಂದು ಪ್ರೆಸ್ ಮೀಟ್‌ಅನ್ನು ಅಡ್ರೆಸ್ ಮಾಡದೆ ಇರುವವರ ಬಗ್ಗೆ ಜನ ಹೆಚ್ಚಿನದ್ದೇನನ್ನು ನಿರೀಕ್ಷಿಸಲಾರರು, ಆದರೆ...

ಹೊಸ ಮತದಾರರ ಫಾರಂ 6ಕ್ಕೆ ಪೋಷಕರ ಎಸ್‌ಐಆರ್ ಕಡ್ಡಾಯಗೊಳಿಸಿದ ಚು. ಆಯೋಗ : ಸಂಪೂರ್ಣ ಕಾನೂನುಬಾಹಿರ ಎಂದ ಸಂಸದ ಜಾನ್ ಬ್ರಿಟ್ಟಾಸ್

ಹೊಸ ಮತದಾರರನ್ನು ನೋಂದಾಯಿಸಲು ಬಳಸುವ ತನ್ನ ಆನ್‌ಲೈನ್ ಅರ್ಜಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಹೊಸ ವಿಭಾಗವನ್ನು ಸೇರಿಸುವ ಮೂಲಕ ಚುನಾವಣಾ ಆಯೋಗವು (ಇಸಿ) "ಸಂಪೂರ್ಣವಾಗಿ ಕಾನೂನು ಅಧಿಕಾರವಿಲ್ಲದೆ ಕಾರ್ಯನಿರ್ವಹಿಸಿದೆ" ಎಂದು...