Homeಕರ್ನಾಟಕಸರಿಯಾದ ಮಾನದಂಡಗಳ ಮುಖಾಂತರ ನಮಗೆ ಸಹಜ ಕೃಷಿ ಬೇಕೋ, ರಾಸಾಯನಿಕ ಕೃಷಿ ಬೇಕೋ ನಿರ್ಧರಿಸೋಣ

ಸರಿಯಾದ ಮಾನದಂಡಗಳ ಮುಖಾಂತರ ನಮಗೆ ಸಹಜ ಕೃಷಿ ಬೇಕೋ, ರಾಸಾಯನಿಕ ಕೃಷಿ ಬೇಕೋ ನಿರ್ಧರಿಸೋಣ

- Advertisement -
- Advertisement -

| ಅವಿನಾಶ್ |

ರಾಸಾಯನಿಕ ಕೃಷಿ ಮತ್ತು ರಾಸಾಯನಿಕ ಮುಕ್ತ ಕೃಷಿ ಪದ್ಧತಿಗಳ ಬಗ್ಗೆ ಚರ್ಚೆ ನಡೆಯುತ್ತಿರುವುದು ನನ್ನಂತಹ ಸಾಮಾನ್ಯ ರೈತನಿಗೆ ತುಂಬಾ ಮುಖ್ಯವಾಗಿರುವುದರಿಂದ ಈ ಚರ್ಚೆಯನ್ನು ಆರಂಭಿಸಿದ ಎಲ್ಲರಿಗೂ ನನ್ನ ಅಭಿನಂದನೆಗಳು. ಹಾಗೆಯೇ ಈ ತರಹದ ಆರೋಗ್ಯಕರ ಚರ್ಚೆಗಳು ಒಂದು ಹೊಸ ಆವಿಷ್ಕಾರಕ್ಕೆ ನಾಂದಿಯೆಂದು ಭಾವಿಸುತ್ತೇನೆ.

ನಾನೊಬ್ಬ ರೈತ. ರಾಸಾಯನಿಕ ಮುಕ್ತ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ವ್ಯವಸಾಯ ಮಾಡುತ್ತಿದ್ದೇನೆ. ನಾನು ಕೃಷಿಯನ್ನು ಆರಂಭಿಸಿದ ದಿನಗಳಲ್ಲಿ ಹಲವಾರು ಪ್ರಶ್ನೆಗಳಿದ್ದವು. ನಾವು ಬೆಳೆಯುವ ಬೆಳೆಗಳಿಗೆ ಏನೆಲ್ಲದರ ಅವಶ್ಯಕತೆಯಿದೆ? ಎಲ್ಲಿಂದ ದೊರೆಯುತ್ತವೆ? ವ್ಯವಸಾಯಕ್ಕಾಗಿ ಎಷ್ಟು ಖರ್ಚಾಗುತ್ತದೆ? ಆದಾಯ ಬರುತ್ತದಾ? ಮಾರುಕಟ್ಟೆ ಹೇಗೆ? ಏಕಬೆಳೆ ಪದ್ಧತಿ ಸರಿಯೇ? ಬಹುಬೆಳೆ ಪದ್ಧತಿ ಸರಿಯೇ? ರಾಸಾಯನಿಕಗಳ ಬಳಕೆ ಸರಿಯೇ? ರಾಸಾಯನಿಕಗಳನ್ನು ಉಪಯೋಗಿಸದೆ ಬೆಳೆಗಳನ್ನು ಬೆಳೆಯಬಹುದೇ? ಇಂತಹ ಹತ್ತು ಹಲವಾರು ಪ್ರಶ್ನೆಗಳು. ನನ್ನಲ್ಲಿರುವ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಿಕೊಂಡು ಗುರುಗಳ ಹತ್ತಿರ, ರೈತರ ಹತ್ತಿರ, ತಜ್ಞರ ಹತ್ತಿರ ಉತ್ತರವನ್ನು ಹುಡುಕುತ್ತಾ, ಯಶಸ್ವಿ ತೋಟಗಳನ್ನು ನೋಡಿದಾಗ ನನಗರ್ಥವಾಗಿದ್ದು ನನ್ನ ಭೂಮಿಗೆ ಸರಿ ಹೊಂದುವಂತಹ, ವಾತಾವರಣಕ್ಕೆ ಸಹಕಾರಿಯಾಗುವಂತಹ, ಸಹಜವಾಗಿ ಭೂಮಿಯನ್ನು ಬಲಗೊಳಿಸುವಂತಹ, ಕೃಷಿ ಪದ್ಧತಿ ನನ್ನ ಮುಂದಿನ ಆಯ್ಕೆ ಎಂದು.

ಇದಕ್ಕೆ ನಾನು ಮೂಲತ: ಕೃಷಿ ವಿದ್ಯಾರ್ಥಿಯಲ್ಲದಿರುವುದು ಒಂದು ಕಾರಣವಾದರೆ, ಮತ್ತೊಂದು ಕಾರಣ ನಾನು ವ್ಯವಸಾಯಕ್ಕೆ ಬರುವ ಮೊದಲೇ ಡಾ.ಮುಸುನೋಬು ಪುಕುವೊಕ, ಪ್ರೊ .ಶ್ರೀಪಾದ್ ಎ ದಾಬೊಲ್ಕರ್, ಶ್ರೀ ಬಾಸ್ಕರ್ ಸಾವೆಂ, ಶ್ರೀ ನಾರಾಯಣರೆಡ್ಡಿ, ಶ್ರೀ ಸುಬಾμï ಪಾಲೇಕರ್‍ರವರಲ್ಲದೇ ಇನ್ನು ಹಲವಾರು ರೈತರು ಕೂಡಾ ರಾಸಾಯನಿಕ ಮುಕ್ತ ಕೃಷಿ ಪದ್ಧತಿಯ ಬಗ್ಗೆ ಮಾತನಾಡುತ್ತಿದ್ದರು. ಇನ್ನೊಂದು ಕಡೆ ರಾಸಾಯನಿಕ ಕೃಷಿ ಪದ್ಧತಿಯಿಂದಾಗುತ್ತಿರುವ ಕಷ್ಟನಷ್ಟ್ಟಗಳ ಬಗ್ಗೆ ಮಾತನಾಡುತ್ತಿದ್ದರು.

ಒಂದು ಕಡೆ ರಾಸಾಯನಿಕ ಕೃಷಿ, ಇನ್ನೊಂದು ಕಡೆ ರಾಸಾಯನಿಕ ಮುಕ್ತ ಕೃಷಿ – ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಜಿಜ್ಞಾಸೆ. ಸರಿ ಈ ಎರಡು ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡಿರುವ ರೈತರ ಜಮೀನಿಗೆ ಭೇಟಿ ಕೊಡಲಾರಂಭಿಸಿದೆ. ನಿರಂತರ 2 ವರ್ಷಗಳ ಕಾಲದಲ್ಲಿ ನೂರಾರು ರೈತರ ಪರಿಚಯ, ವಿಚಾರ ವಿನಿಮಯಗಳಿಂದ, ಅಲ್ಲಿ ನಡೆಸಿರುವ ಪ್ರಯೋಗಗಳಿಂದ ನನ್ನಲ್ಲಿರುವ ಹಲವಾರು ಪ್ರಶ್ನೆಗಳಿಗೆ ಉತ್ತರ ದೊರೆಯಲಾರಂಭಿಸಿತು.

ಅದೇನೆಂದರೆ, ರಾಸಾಯನಿಕ ಕೃಷಿ ಪದ್ಧತಿಯಲ್ಲಿ ರಾಸಾಯನಿಕಗಳನ್ನು ಬಳಸುವುದರಿಂದ ಭೂಮಿ ಬರಡಾಗುತ್ತಿದೆ, ಆಹಾರ ಪದಾರ್ಥಗಳು ವಿಷಭರಿತವಾಗಿವೆ, ವಾತಾವರಣ ಕಲುಷಿತಗೊಂಡಿದೆ, ಮಣ್ಣಿನಲ್ಲಿ ನೀರು ಇಂಗದೆ ಅಂತರ್ಜಲಮಟ್ಟ ಇನ್ನು ಕುಸಿಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ರಾಸಾಯನಿಕ ಮುಕ್ತ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡರೆ ಮಾತ್ರ ಈ ಎಲ್ಲಾ ಅನಾಹುತಗಳಿಂದ ತಪ್ಪಿಸಿಕೊಳ್ಳಬಹುದೇನೊ ಎನ್ನಿಸಿತು. ರಾಸಾಯನಿಕ ಮುಕ್ತ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡ ರೈತರ ಅನುಭವವನ್ನು ಕೇಳಿದಾಗ ಮೊದಲ ಒಂದೆರಡು ವರ್ಷಗಳು ಇಳುವರಿ ಬರೋದಿಲ್ಲ ಎಂದರು ಮತ್ತು ಕೆಲವರು ಖರ್ಚು ಕಮ್ಮಿ ಮಾಡಲಾಗುವುದಿಲ್ಲ, ಆದರೆ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಸದೆಯಿರುವುದು ಹೆಮ್ಮೆಯ ವಿಚಾರ ಎಂದರು. ಒಂದು ಕಡೆ ರಾಸಾಯನಿಕಗಳು, ಇನ್ನೊಂದು ಕಡೆ ಖರ್ಚು. ಏನು ಮಾಡುವುದು ಗೊತ್ತಾಗಲಿಲ್ಲ. ಕೃಷಿ ಪುಸ್ತಕಗಳನ್ನು ಓದಲಾರಂಭಿಸಿದೆ. ಅರ್ಥವಾಗಲಿಲ್ಲ, ಕಾರಣ ಕೃಷಿಯನ್ನು Rocket Science ಭಾಷೆಯಲ್ಲಿ ಬರೆದಿದ್ದಾರೆ. ನಾನೊಬ್ಬ ಸಾಮಾನ್ಯ ರೈತ. ನನಗರ್ಥವಾಗುವ ಭಾಷೆ ಬಹುಮುಖ್ಯ. ನಂತರದ ದಿನಗಳಲ್ಲಿ ನನಗೆ ಅರ್ಥವಾದ ಕೃಷಿ ಎಂದರೆ
1. ಒಂದು ಗಿಡ ಬೆಳೆಯಲು ಬೇಕಾದ ಪೋಷಕಾಂಶಗಳನ್ನು ನಿಸರ್ಗದತ್ತವಾಗಿ ಒದಗಿಸುವುದು ಅಥವಾ ನಿಸರ್ಗದತ್ತವಾಗಿ ಪೋಷಕಾಂಶಗಳು ಒದಗುವಂತಹ ವಾತಾವರಣವನ್ನು ನಮ್ಮ ಭೂಮಿಯಲ್ಲಿ ಸೃಷ್ಟಿಮಾಡುವುದು
2. ಬೆಳಕನ್ನು ಸರಿ ಅನುಪಾತದಲ್ಲಿ ಬೆಳೆಗಳಿಗೆ ಒದಗಿಸುವುದು
3. ಬಿದ್ದ ಮಳೆ ನೀರನ್ನು ನನ್ನದೇ ಭೂಮಿಯಲ್ಲಿ ಹಿಡಿದಿಟ್ಟುಕೊಳ್ಳುವುದು
4. ಗಿಡಮರಗಳಿಂದ ಕೂಡಿದ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಅಂದರೆ ನಮ್ಮ ವ್ಯವಸಾಯ ಭೂಮಿಯನ್ನು ಆಹಾರೋತ್ಪಾನೆಯ ಕಾಡನ್ನಾಗಿ ಪರಿವರ್ತಿಸುವುದು ( ಫ್ಹುಡ್ ಫ್ಹಾರೆಸ್ಟ್)

ಈ ನಾಲ್ಕು ಪ್ರಮುಖವಾದ ವಿಚಾರಗಳನ್ನು (ಗೋಲ್ಡನ್ ಸ್ಟೆಪ್ಸ್) ಜಾಚೂ ತಪ್ಪದೆ ಪಾಲಿಸಿದರೆ ಪ್ರಸ್ತುತ ಅನುಭವಿಸುತ್ತಿರುವ ಕೃಷಿ ಉಸಿರಾಡಬಹುದು ಎನ್ನುವುದು ನಿಧಾನವಾಗಿ ಅರಿವಾಗತೊಡಗಿತು.

ರಾಸಾಯನಿಕ ಮುಕ್ತ ಕೃಷಿ ಪದ್ಧತಿ ಎಂದ ತಕ್ಷಣ ನಮಗೆ ಹತ್ತಾರು ಪದ್ಧತಿಗಳು, ಹತ್ತಾರು ವಿಧಾನಗಳನ್ನು ತಿಳಿಸಿಕೊಡುವವರಿದ್ದಾರೆ. ಇಲ್ಲಿ ಒಂದು ಸಾಮಾನ್ಯವಾದ ವಿಜ್ಞಾನ ಮತ್ತು ಸಾಮಾನ್ಯ ಜ್ಞಾನದ ಅವಶ್ಯಕತೆಯಿದೆ. ಇಲ್ಲವಾದಲ್ಲಿ ರಾಸಾಯನಿಕ ಮುಕ್ತ ಕೃಷಿ ಪದ್ಧತಿಯು ಸಹ ನಷ್ಟದ ಹಾದಿಯಲ್ಲಿ ನಡೆಯಬಹುದು.

ಭೂಮಿಯ ಮೇಲೆ ಸಸ್ಯವೈವಿಧ್ಯತೆಯನ್ನು ಕಾಪಾಡಿದರೆ ಭೂಮಿಯ ಆಳದಲ್ಲಿ ಜೀವವ್ಯೆವಿಧ್ಯತೆ ಹೆಚ್ಚಾಗುತ್ತದೆ. ಭೂಮಿಯಲ್ಲಿ ಸೂಕ್ಷ್ಮ ವಾತಾವರಣ ಸೃಷ್ಟಿಯಾದರೆ ಜೀವಾಣುಗಳು ನಮ್ಮದೆ ಭೂಮಿಯಲ್ಲಿ ನೆಲೆಸಲು ಸಹಕಾರಿಯಾಗುತ್ತದೆ. ರಾಸಾಯನಿಕಗಳನ್ನು ಬಳಸದೆ, ಬಹುಬೆಳೆ ಪದ್ಧತಿಯನ್ನು ಅನುಸರಿಸಿದರೆ, ಬೆಳೆಗಳ ಆವೃತ್ತಿಯನ್ನು ಕಾಪಾಡಿಕೊಂಡು, ಹೆಚ್ಚಿನ ಆಳಕ್ಕೆ ಉಳುಮೆ ಮಾಡದೆ, ತ್ಯಾಜ್ಯಗಳನ್ನು ಸುಡದೆ ಭೂಮಿಯಲ್ಲಿ ಸಹಜವಾಗಿ ಕಳೆಯುವಂತೆ ಮಾಡಿದರೆ ಹ್ಯೂಮಸ್ ಉತ್ಪತ್ತಿಯಾಗುತ್ತದೆ. ಒಂದೆರಡು ವರುಷಗಳಲ್ಲಿ ಸಾವಯವ ಇಂಗಾಲ ವೃದ್ಧಿಯಾಗುತ್ತದೆ. ಇವೆರಡನ್ನು ಭೂಮಿಯ ಫಲವತ್ತತೆಯನ್ನು ಅಳೆಯುವ ಮಾಪನವೆನ್ನಬಹುದು.
ಮಣ್ಣಿನಲ್ಲಿ ಹ್ಯೂಮಸ್ ಮತ್ತು ಸಾವಯವ ಇಂಗಾಲವನ್ನು ಹೆಚ್ಚಿಸುವುದರಿಂದಾಗುವ ಲಾಭಗಳು:

* ಮಣ್ಣಿನಲ್ಲಿ ಗಾಳಿ ಮತ್ತು ಬೆಳಕನ್ನು ಸರಾಗವಾಗಿ ಹರಿದಾಡಲು ಅನುವು ಮಾಡಿಕೊಡುತ್ತದೆ
* ಪೋಷಕಾಂಶಗಳನ್ನು ಹಿಡಿದಿಡುವ ಶಕ್ತಿಯನ್ನು ಹೊಂದುತ್ತದೆ
* ತೇವಾಂಶವನ್ನು ಹಿಡಿದಿಡುವ ಶಕ್ತಿಯನ್ನು ಹೊಂದುತ್ತದೆ
* ಎರೆಹುಳುಗಳು ಮತ್ತು ಜೀವಾಣುಗಳ ಸಂತತಿಯನ್ನು ವೃದ್ಧಿಸುತ್ತದೆ
* ನೀರಿನ ಆವಿಯಾಗುವಿಕೆಯನ್ನು ತಡೆಯುತ್ತದೆ
* ಮಣ್ಣಿನ ಆವಿಯಾಗುವಿಕೆಯನ್ನು ತಡೆಯುತ್ತದೆ
* ಪಿಎಚ್ ಪ್ರಮಾಣವನ್ನು ಸರಿ ಪ್ರಮಾಣದಲ್ಲಿಡಲು ಸಹಕರಿಸುತ್ತದೆ
* ಮಣ್ಣಿನಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಹ್ಯೂಮಸ್ ಮತ್ತು ಸಾವಯವ ಇಂಗಾಲ ನಮ್ಮ ಭೂಮಿಯಲ್ಲಿ ಉತ್ಪತ್ತಿಯಾಗಲು 3 ರಿಂದ 4 ವರ್ಷಗಳ ಕಾಲಾವಕಾಶ ಬೇಕು. ನೆನಪಿಟ್ಟುಕೊಳ್ಳಬೇಕಾದ ಸಂಗತಿಯೆಂದರೆ ಮೂರ್ನಾಲ್ಕು ವರ್ಷಗಳ ಕಾಲ ಒಂದೇ ತತ್ವವನ್ನು ಪಾಲಿಸಿದರೆ ಮಾತ್ರ ಫಲ ಪಡೆಯಬಹುದು. ಇದನ್ನರಿತು ನಮ್ಮ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು.

ಸಾವಯವ ಇಂಗಾಲ: 40ರಿಂದ 50 ವರ್ಷಗಳ ಕೆಳಗೆ ಸಾವಯವ ಇಂಗಾಲ ಶೇ.8ಕ್ಕಿಂತ ಹೆಚ್ಚಿತ್ತೆಂದು ಓದಿದ್ದೇನೆ. ಆದರೆ ಪ್ರಸ್ತುತ ಸಾವಯವ ಇಂಗಾಲ ಶೇ.0.03ರಿಂದ 0.05ರಷ್ಟಿದೆ. ಹಾಗಾಗಿ ಭೂಮಿ ತನ್ನ ಸತ್ವವನ್ನು ಕಳೆದುಕೊಂಡಿದೆ; ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಗುಣ ಹೊಂದಿಲ್ಲ; ಭೂಮಿಯಲ್ಲಿ ಸೂಕ್ಷ್ಮವಾತಾವರಣವಿಲ್ಲದೆ ಜೀವಾಣುಗಳು ಸಾಯುತ್ತಿವೆಯಾದ್ದರಿಂದ ಕೃಷಿಯೂ ಸಾಯುತ್ತಿದೆ; ಇನ್ನೊಂದು ಕಡೆ ರೈತರು ಸಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಾವಯವ ಇಂಗಾಲವನ್ನು ವೃದ್ಧಿಸಲು ಪೂರಕವಾದ ಕೃಷಿ ಪದ್ಧತಿ ಮಾತ್ರ ಕೃಷಿಯನ್ನು ಕಾಪಾಡಬಲ್ಲದು.

ಬೆಳಕು (Sunlight Harvest): ಪ್ರೊ.ಶ್ರೀಪಾದ್ ಎ ದಾಭೋಲ್ಕರ್‍ರವರು ಬೆಳಕಿನ ಮಹತ್ವವನ್ನು ಈ ರೀತಿ ವಿವರಿಸುತ್ತಾರೆ – ಒಂದು ಚದುರಡಿ ಹಸಿರೆಲೆ, ದಿನದ 10 ಗಂಟೆಯಲ್ಲಿ ಎಷ್ಟು ಸರಿ ಅನುಪಾತದ ಬೆಳಕನ್ನು ಸ್ವೀಕರಿಸುತ್ತದೆಯೋ ಆಗ ಆ ಗಿಡ, ನಮಗೆ ಒಂದು ಹೊತ್ತಿನ ಊಟಕ್ಕೆ ಸಮನಾದ ಆಹಾರವನ್ನು ತಯಾರಿಸುತ್ತದೆ ಎಂದು. ದ್ಯುತಿ ಸಂಶ್ಲೇಷಣಾ ಕ್ರಿಯೆಯಲ್ಲಿ ಸೂರ್ಯನ ಬೆಳಕು ಮಹತ್ವದ ಪಾತ್ರ ವಹಿಸುತ್ತದೆ. ಗಿಡಮರಗಳಿಗೆ ಎಲೆಗಳೇ ಅಡುಗೆ ಮನೆ. ಬೇರುಗಳು ಭೂಮಿಯಲ್ಲಿ ದೊರೆಯುವ ಪೋಷಕಾಂಶಗಳನ್ನು ಎಲೆಗಳಿಗೆ ಪೂರೈಸುತ್ತವೆ, ಎಲೆಗಳು ವಾತಾವರಣದಲ್ಲಿ ದೊರೆಯುವ ಪೋಷಕಾಂಶಗಳನ್ನು ಹೀರಿಕೊಂಡು ಸಂಗ್ರಹಿಸಿಕೊಳ್ಳುತ್ತವೆ. ಸೂರ್ಯನ ಬೆಳಕು ಎಲೆಗಳ ಮೇಲೆ ಸರಿ ಅನುಪಾತದಲ್ಲಿ ತಾಗಿದಾಗ ಮಾತ್ರ ಈ ಎಲ್ಲಾ ಪೋಷಕಾಂಶಗಳು ಸಕ್ಕರೆ ಅಂಶವಾಗಿ (ಗ್ಲೂಕೋಸ್) ಪರಿವರ್ತನೆಗೊಳ್ಳುತ್ತದೆ. ಈ ಸಕ್ಕರೆ (ಗ್ಲೂಕೋಸ್) ಸಸ್ಯಗಳಿಗೆ ಆಹಾರ. ನೇರವಾದ ಪೋಷಕಾಂಶಗಳಲ್ಲ. ಆದರೆ ಇಂದು ಬೇರೆ ಬೇರೆ ಕಾರಣಗಳಿಂದ ಸೂರ್ಯನ ಕಿರಣಗಳ ತೀವ್ರತೆ (Light Intensity) ಹೆಚ್ಚಾಗುತ್ತಿದೆ. ಓಜೋನ್ ಪದರ ಹಾಳಾಗಿರುವುದು, ವಾತಾವರಣದಲ್ಲಿ ಏರೊಸಾಲ್ಸ್ (ನೀರ ಗುಳ್ಳೆಗಳು) ಗಳಿಲ್ಲದೆಯಿರುವುದು, ಹೀಗೆ ಹತ್ತಾರು ಕಾರಣಗಳಿಂದ ಬೆಳಕಿನ ತೀವ್ರತೆ ಹೆಚ್ಚಾಗಿರುವುದರಿಂದ ಗಿಡಮರಗಳ ಬೆಳವಣಿಗೆ ಕುಂಠಿತಗೊಳ್ಳುತ್ತಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಮರಗಿಡಗಳಿಂದ ಕೂಡಿದ ಕೃಷಿ ಪದ್ಧತಿಗೆ ಹೆಚ್ಚಿನ ಆದ್ಯತೆ ಕೊಡಬೇಕಾಗಿದೆ.

ಮಳೆ ನೀರು ಕೊಯ್ಲು (Rainwater Harvest): ಮಳೆ ನೀರನ್ನು ಭೂಮಿಯಲ್ಲಿ ಇಂಗಿಸಲು ಹತ್ತು ಹಲವು ಪದ್ಧತಿಗಳನ್ನು ಅನುಸರಿಸುತ್ತಿದ್ದೇವೆ. ಇಲ್ಲಿ ನಾವು ನೀರನ್ನು ಭೂಮಿಗೆ ಇಂಗಿಸುವ ಉತ್ಸಾಹದಲ್ಲಿ ಪಕ್ಕದ ಹೊಲದಿಂದ ಬಂದ, ರಸ್ತೆಯ ಪಕ್ಕದಲ್ಲಿ ಹರಿಯುವ ನೀರನ್ನು ಭೂಮಿಗೆ ಹಿಂಗಿಸುತ್ತಿದ್ದೇವೆ. ಈ ನೀರು ಸಾಮಾನ್ಯವಾಗಿ ರಾಸಾಯನಿಕಗಳಿಂದ ಕೂಡಿದ್ದು ಇದನ್ನು ನಾವು ಬೋರ್ವೆಲ್ ರಿಚಾರ್ಜ್ ಗುಂಡಿಗಾಗಲಿ, ಕೆರೆಕಟ್ಟೆಗಳಿಗಾಗಲಿ, ಕೃಷಿ ಹೊಂಡಗಳಿಗಾಗಲಿ ತುಂಬಿಸಿದಾಗ ವಿಷಭರಿತ ನೀರು ನಮ್ಮ ಭೂಮಿಗೆ ಸೇರುತ್ತದೆ. ಮುಂದಿನ ದಿನಗಳಲ್ಲಿ ವಿಷಭರಿತವಾದ ನೀರನ್ನು ನಾವು ಕುಡಿಯಬೇಕಾದ ಪರಿಸ್ಥಿತಿ ಎದುರಾಗಬಹುದು. ಈ ಕಾರಣದಿಂದ ನಮ್ಮ ಭೂಮಿಯಲ್ಲಿ ಬಿದ್ದ ಮಳೆ ನೀರನ್ನೆ ನಾವು ಅಂತರ್ಜಲಮಟ್ಟವನ್ನು ಹೆಚ್ಚಿಸಲು ಬಳಸಬೇಕು. ಇದು ರಾಸಾಯನಿಕ ಮುಕ್ತ ಕೃಷಿ ಪದ್ಧತಿಗೆ ಪೂರಕವಾಗಿದೆ.
(…….ಮುಂದಿನ ಸಂಚಿಕೆಯಲ್ಲಿ ಮುಂದುವರೆಯುವುದು)

ಸಹಜ ಕೃಷಿ ಬೇಕೋ, ರಾಸಾಯನಿಕ ಕೃಷಿ ಬೇಕೋ? : ಭಾಗ 2

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...