Homeಅಂಕಣಗಳು370ನೇ ವಿಧಿ ರದ್ದು ಮಾಡುವುದರಿಂದ ಕಾಶ್ಮೀರ ಸಮಸ್ಯೆ ಬಗೆಹರಿಯುವುದಿಲ್ಲ

370ನೇ ವಿಧಿ ರದ್ದು ಮಾಡುವುದರಿಂದ ಕಾಶ್ಮೀರ ಸಮಸ್ಯೆ ಬಗೆಹರಿಯುವುದಿಲ್ಲ

- Advertisement -
- Advertisement -

| ಎಚ್.ಎಸ್. ದೊರೆಸ್ವಾಮಿ |

2019ರ ಆಗಸ್ಟ್ 5ರಂದು 50000 ಸೈನಿಕರನ್ನು ಹಠಾತ್ತನೆ ಕಾಶ್ಮೀರಕ್ಕೆ ಕಳಿಸಲಾಯಿತು. ಕಫ್ರ್ಯೂ ವಿಧಿಸಲಾಯಿತು. ಅಲ್ಲಿ ಏನು ನಡೆಯುತ್ತಿದೆ ಎಂಬ ಸುದ್ದಿ ಭಾರತದ ಇತರ ಭಾಗದ ಜನರಿಗೆ ಗೊತ್ತಾಗದಂತೆ ಅಲ್ಲಿಯ ಸುದ್ದಿ ಸಂಸ್ಥೆಗಳನ್ನು ಸ್ಥಗಿತಗೊಳಿಸಲಾಯಿತು. ಕಾಶ್ಮೀರದ ಹಿಂದಿನ ಮುಖ್ಯಮಂತ್ರಿಗಳಾಗಿದ್ದ ಫಾರೂಕ್ ಅಬ್ದುಲ್ಲಾ, ಉಮರ್ ಅಬ್ದುಲ್ಲಾ, ಮೆಹಬೂಬ ಮುಫ್ತಿ ಮುಂತಾದವರನ್ನು ಗೃಹಬಂಧನದಲ್ಲಿ ಇಡಲಾಯಿತು. ಕಾಶ್ಮೀರದ ಭವಿಷ್ಯವನ್ನು ಇತರ ರಾಜ್ಯಗಳ ಬಿಜೆಪಿ ಲೋಕಸಭಾ ಸದಸ್ಯರು ನಿರ್ಧರಿಸಿಬಿಟ್ಟರು. ಆರ್ಟಿಕಲ್ 370ನ್ನು ಹಿಂಪಡೆಯಲಾಯಿತು. ಪಾರ್ಲಿಮೆಂಟಲ್ಲಿ ಭಾರತೀಯ ಜನತಾ ಪಕ್ಷದ ಸದಸ್ಯರು, ಇನ್ನೂ ಖಚಿತವಾಗಿ ಹೇಳಬೇಕಾದರೆ ಮೋದಿ ಮತ್ತು ಅಮಿತ್ ಶಾರವರು ಕಾಶ್ಮೀರದ ಭವಿಷ್ಯವನ್ನು ನಿರ್ಧರಿಸಿಬಿಟ್ಟರು.

370ನೇ ವಿಧಿಯನ್ನು ತಿದ್ದುಪಡಿ ಮಾಡುವ ಮೊದಲು ಕಾಶ್ಮೀರ ಜನರ ಅಭಿಪ್ರಾಯ ಕೇಳಬೇಕಾಗಿತ್ತು. ಲೋಕಸಭೆಯ ವಿರೋಧ ಪಕ್ಷದವರ ಅಭಿಪ್ರಾಯ ಏನೆಂದು ತಿಳಿಯಬೇಕಿತ್ತು. ಕೇಂದ್ರ ಸರ್ಕಾರ ಈ ರೀತಿ ಹಠತ್ತಾಗಿ ಕಾಶ್ಮೀರದ ಮೇಲೆ ತಮ್ಮ ತೀರ್ಮಾನ ಹೇರುವ ಬದಲು ಮೇಲೆ ಹೇಳಿದ ಎಲ್ಲರ ಒಟ್ಟು ಅಭಿಪ್ರಾಯವನ್ನು ತಿಳಿಯುವ ಅವಶ್ಯಕತೆ ಇತ್ತು.

ಹಿಂದೆ ಆಂಧ್ರಪ್ರದೇಶ ಮತ್ತು ತೆಲಂಗಾಣವನ್ನು ಕೂಡಿಸಿ ವಿಶಾಲಾಂಧ್ರ ರಚಿಸಬೇಕೆಂದು ಸರ್ಕಾರ ತೀರ್ಮಾನಿಸಿತು. ಎಲ್ಲಾ ದೃಷ್ಟಿಯಿಂದಲೂ ಹಿಂದುಳಿದಿದ್ದ ತೆಲಂಗಾಣವನ್ನು ಬುದ್ಧಿವಂತರೂ, ಐಶ್ವರ್ಯವಂತರೂ, ಸಾಹಸಿ ಉದ್ಯಮಿಗಳೂ ಆದ ಆಂಧ್ರ ಪ್ರದೇಶದವರ ವಶಕ್ಕೆ ವಸಾಹತು ನೀಡಿದಂತೆ ನೀಡಬೇಕೆಂಬ ರೀತಿಯಲ್ಲಿ ಈ ಘೋಷಣೆ ಮಾಡಿತು. ಹಾಗೆಯೇ ತೆಲಂಗಾಣದವರಿಗೆ ತಮ್ಮ ನದಿಗಳ ಮೇಲಿನ ಹಕ್ಕುಗಳ ಬಗೆಗೂ ಮತ್ತು ನೀರಿನ ಭದ್ರತೆಯ ಬಗೆಗೂ ಕಾಳಜಿ ಇತ್ತು.

ಈ ಕಾರಣಗಳಿಗಾಗಿ ತೆಲಂಗಾಣವನ್ನು ಪ್ರತ್ಯೇಕ ರಾಜ್ಯವೆಂದು ಘೋಷಿಸಬೇಕೆಂದು ತೆಲಂಗಾಣದ ನಾಯಕರು ಅಭಿಪ್ರಾಯಪಟ್ಟರು. ಆದರೂ 1956ರಲ್ಲಿ ತೆಲಂಗಾಣ ಒಳಗೊಂಡ ಆಂಧ್ರಪ್ರದೇಶ ಅಸ್ತಿತ್ವಕ್ಕೆ ಬಂತು. ಈ ಮಧ್ಯೆ ತೆಲಂಗಾಣದ ಹಿಂದುಳಿದಿರುವಿಕೆಯನ್ನು ಸುಧಾರಿಸುವ ಆಶ್ವಾಸನೆಗಳು ಕೇಂದ್ರ ಸರ್ಕಾರದಿಂದ ಪ್ರಕಟವಾದವು. ಆ ಭರವಸೆಗಳು ಭರವಸೆಗಳಾಗಿಯೇ ಉಳಿದವು.

ಕಾಶ್ಮೀರದ 370ನೇ ವಿಧಿ ಹಾಗೂ ಆಂಧ್ರಪ್ರದೇಶದಲ್ಲಿ ತೆಲಂಗಾಣವನ್ನು ವಿಲೀನಗೊಳಿಸುವ ಮಸೂದೆಗಳನ್ನು ಪಾರ್ಲಿಮೆಂಟ್ ಅಧಿವೇಶನದ ಕೊನೆಯ ದಿನಗಳಲ್ಲಿ ಮಂಡಿಸಲಾಯಿತು. ಚರ್ಚೆಗೆ ಅವಕಾಶ ಮಾಡಿಕೊಡಲಿಲ್ಲ. ಜಂಟಿ ಸಮಿತಿಗೆ ಒಪ್ಪಿಸುವುದಕ್ಕೂ ಸರ್ಕಾರ ಒಪ್ಪಲಿಲ್ಲ. ರಾಜ್ಯ ಸರ್ಕಾರಗಳ ಹಾಗೂ ಶಾಸನಸಭೆಯ ಅಭಿಪ್ರಾಯ ತಿಳಿಯಲು ಅವಕಾಶ ಕಲ್ಪಿಸಲಿಲ್ಲ. ಅಂದಹಾಗೆ ಇದಕ್ಕೆ ಮೊದಲೇ ಕಾಶ್ಮೀರ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಡಳಿತವನ್ನು ಕಾಶ್ಮೀರದ ಮೇಲೆ ಹೇರಲಾಗಿತ್ತು.

ಜಮ್ಮು ಕಾಶ್ಮೀರಗಳ ಗಲಭೆಗಳು, ಭಯೋತ್ಪಾದಕ ಕೃತ್ಯಗಳು 370ನೇ ವಿಧಿಯನ್ನು ತೆಗೆದುಹಾಕುವುದರಿಂದ ಕೊನೆಗೊಳ್ಳುವುದು ಎಂದು ಗೃಹ ಸಚಿವರು ಹೇಳಿದ್ದಾರೆ. ಕಾಶ್ಮೀರದಲ್ಲಿ ಒಂದು ಸಶಕ್ತ ಸಮ್ಮಿಶ್ರ ಸರ್ಕಾರ ಇದ್ದರೆ ಮಾತ್ರ ಅಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುವುದು. ಅದಿಲ್ಲವಾದರೆ ಬೂದಿ ಮುಚ್ಚಿದ ಕೆಂಡದಂತಿರುವ ಈ ಪರಿಸ್ಥಿತಿ ಯಾವಾಗ ಬೇಕಾದರೂ ಹದಗೆಡಬಹುದು. ಅಲ್ಲಿಯ ಸರ್ಕಾರಕ್ಕೂ ಕೇಂದ್ರ ಸರ್ಕಾರಕ್ಕೂ ಒಂದು ಮಧುರ ಬಾಂಧವ್ಯ ಇದ್ದರೆ ಮಾತ್ರ ಶಾಶ್ವತ ಶಾಂತಿ ನೆಲೆಸೀತು. ಒಂದು ಬಹುಮುಖ್ಯ ವಿಚಾರವೆಂದರೆ ಮಿಲಿಟರಿಯ ಮೃಗೀಯ ಶಕ್ತಿ ಬಳಸಿಕೊಂಡು ಕಾಶ್ಮೀರದಲ್ಲಿ ಶಾಂತಿಸ್ಥಾಪನೆ ಮಾಡುವುದು ಆಗದ ಮಾತು.

ಶ್ರೀಲಂಕಾದಲ್ಲಿ ತಮಿಳರಿಗೆ ಸ್ವತಂತ್ರವಾಗಿ ಬದುಕಲು ಸಿಂಹಳೀಯರು ಅವಕಾಶ ಮಾಡಿಕೊಡಲು ನಿರಾಕರಿಸಿ ಅವರಿಗೆ ಕಿರುಕುಳ ಕೊಟ್ಟಿದ್ದರಿಂದ ಅಲ್ಲಿ ಎಲ್.ಟಿ.ಟಿ.ಈಗೂ ಸಿಂಹಳ ಸರ್ಕಾರಕ್ಕೂ ಯುದ್ಧವೇ ನಡೆದುಹೋಯಿತು ಎಂಬುದನ್ನು ನಾವು ಮರೆಯಬಾರದು. ಅಂತಹ ಯುದ್ಧದಲ್ಲಿ ಮನುಷ್ಯತ್ವವೇ ಕರಗಿಹೋಗುವ ಮಾರಣಹೋಮಗಳು ನಡೆದವು.

370ನೇ ವಿಧಿಯನ್ನು ಆಗ ರಾಷ್ಟ್ರಾಧ್ಯಕ್ಷರ ಆದೇಶದ ಮೇರೆಗೆ ಜಾರಿಗೆ ತರಲಾಗಿತ್ತು. ಈಗ ರಾಷ್ಟ್ರಾಧ್ಯಕ್ಷರ ಆದೇಶದಿಂದಲೇ ಕಿತ್ತು ಹಾಕುತ್ತೇವೆ ಆದ್ದರಿಂದ ಅದು ರಾಜ್ಯಾಂಗದ ಉಲ್ಲಂಘನೆಯಲ್ಲ ಎಂದು ಅಮಿತ್ ಶಾ ಅವರು ಹೇಳುತ್ತಾರೆ. ಇದು ಅಷ್ಟು ಸರಳ ಸಂಗತಿಯಾಗಿಲ್ಲ. ನಾವು ಪ್ರೀತಿಯಿಂದ ಒಲಿಸಿಕೊಳ್ಳಬೇಕಿದ್ದ, ಒಂದು ಭೂಭಾಗವು ನಮ್ಮೊಡನೆ ಸೇರಲು ಮಾಡಿಕೊಂಡಿದ್ದ ಕರಾರು ಅದು. ದೇಶ ರೂಪುಗೊಳ್ಳಬೇಕಾದ ಸಂದರ್ಭದಲ್ಲಿ ಮಾಡಿಕೊಳ್ಳಲಾಗಿದ್ದ ಅಂತಹ ರಾಜ್ಯಾಂಗ ಬದಲಾವಣೆಗಳನ್ನು ಹೀಗೆ ಅಧಿಕಾರಬಲದಿಂದ ಹಿಂತೆಗೆದುಕೊಳ್ಳುವ ಅಧಿಕಾರ ರಾಷ್ಟ್ರಾಧ್ಯಕ್ಷರಿಗೆ ಇದೆಯೇ ಎಂಬುದು ಚರ್ಚೆಗೆ ಬರುವ ಸಂಭವವಿದೆ. ಕಾಲ ನಿಂತ ನೀರಲ್ಲ. ಬದಲಾವಣೆಗಳು ಬೇಕಾಗಬಹುದು. ಅಂತಹ ಸಂದರ್ಭದಲ್ಲಿ ಮೆಜಾರಿಟಿ ಇದೆ, ಬದಲಿಸಿಕೊಳ್ಳುತ್ತೇವೆ ಎಂಬ ಧೋರಣೆಗಿಂತ, ಯಾರ ಮೇಲೆ ಇದರ ಹೆಚ್ಚಿನ ಪರಿಣಾಮ ಆಗುತ್ತದೋ, ಅವರ ಅಭಿಪ್ರಾಯವನ್ನು ಪರಿಗಣಿಸುವುದಕ್ಕೆ ಹೆಚ್ಚಿನ ಮುತುವರ್ಜಿ ಇರಬೇಕು.

ಸ್ವಾತಂತ್ರ್ಯ ಬಂದಮೇಲೆ ಸಂಸ್ಥಾನಗಳ ರಾಜರುಗಳು, ಇಂಡಿಯನ್ ಯೂನಿಯನ್ ಜೊತೆಗೆ ಕೂಡಿಕೊಂಡಾಗ ಅವರಿಗೆ ರಾಜಧನ ನೀಡಬೇಕೆಂದು ಒಪ್ಪಂದ ಆಗಿತ್ತು. ಮುಂದೆ ರಾಜಧನ ಕೊಡುವುದಿಲ್ಲವೆಂದು ರಾಷ್ಟ್ರಾಧ್ಯಕ್ಷರು ತೀರ್ಮಾನ ತೆಗೆದುಕೊಂಡಾಗ ಮಾಜಿ ರಾಜರು ಸವ್ರ್ಚೊಚ್ಚ ನ್ಯಾಯಾಲಯದ ಮೆಟ್ಟಿಲು ಏರಿದರು. ಒಮ್ಮೆ ಕೊಡಲು ಒಪ್ಪಿಕೊಂಡಿರುವ ರಾಜಧನವನ್ನು ತಡೆಹಿಡಿಯುವ ಅಧಿಕಾರ ಸರ್ಕಾರಕ್ಕಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿತು. ಅಂದಿನ ಕಾಶ್ಮೀರ ರಾಜರೊಡನೆ ಮಾಡಿಕೊಂಡಿರುವ ಒಪ್ಪಂದವನ್ನು ಕೇಂದ್ರ ಸರ್ಕಾರ ರದ್ದುಗೊಳಿಸುವುದು ಕಾನೂನಾತ್ಮಕವಾಗಿ ಮತ್ತು ನ್ಯಾಯಯುತವಾಗಿ ಸಾಧುವೇ? ಈ ಪ್ರಶ್ನೆಯನ್ನು ಈ ಸಂದರ್ಭದಲ್ಲಿ ಎತ್ತಲು ಸಾಧ್ಯವೇ ಎಂಬುದನ್ನು ಕಾನೂನುಪಂಡಿತರು ಜನರಿಗೆ ತಿಳಿಸಿ ಹೇಳಬೇಕು.

ಈ ದೇಶದ ಆಡಳಿತದ ಹೊಣೆಗಾರಿಕೆ ಪ್ರಜೆಯದು. ರಾಷ್ಟ್ರಾಧ್ಯಕ್ಷರಾಗಲಿ, ಸರ್ಕಾರವೇ ಆಗಲಿ ತಮ್ಮ ಸಾರ್ವಭೌಮತ್ವವನ್ನು ಪ್ರಜೆಗಳ ಮೇಲೆ ಕಾನೂನುಬಾಹಿರವಾಗಿ ಹೇರುವುದು ಸರಿಯಿಲ್ಲ. ಆರ್ಥಿಕ ಸಂಯೋಜನೆ ಮತ್ತು ಅಭಿವೃದ್ಧಿ ಮಂತ್ರ ಮಾತ್ರ ಸಂಯೋಜನೆಗೆ ಮಾರ್ಗಸೂಚಿ ಅಲ್ಲ. ಜಮ್ಮು ಕಾಶ್ಮೀರದ ಜನತೆಯ ಅನುಮತಿ ಮತ್ತು ಸಹಕಾರವಿಲ್ಲದೆ ಇದ್ದರೆ ಆ ರಾಜ್ಯದಲ್ಲಿ ಶಾಂತಿ ಸ್ಥಾಪನೆಯಾಗಲಿ, 370ರ ವಿಧಿಯನ್ನು ರದ್ದು ಮಾಡುವುದಾಗಲೀ ಸುಸೂತ್ರವಾಗಿ ನಡೆಯಲಾರದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...