Homeಮುಖಪುಟಬಿ.ಚಂದ್ರೇಗೌಡರ ಕಟ್ಟೆಪುರಾಣ: ಜುಮ್ಮಕ್ಕ ಕೆಮ್ಮು ನೆಗ್ಲೆಟ್ ಮಾಡಬ್ಯಾಡ ಕಣಕ್ಕ

ಬಿ.ಚಂದ್ರೇಗೌಡರ ಕಟ್ಟೆಪುರಾಣ: ಜುಮ್ಮಕ್ಕ ಕೆಮ್ಮು ನೆಗ್ಲೆಟ್ ಮಾಡಬ್ಯಾಡ ಕಣಕ್ಕ

- Advertisement -
- Advertisement -

ಬಿದಿಕಲ್ಲು ಕಾರ ಕಾವಲಿಯಂತೆ ರಣಗುಡುತ್ತಿದ್ದವು. ಸರಿಯಾಗಿ ಒಂದು ಶತಮಾನದ ಹಿಂದಕ್ಕೆ ಊರು ನೆಗೆದಿತ್ತು. ಆಗಲೂ ಅಷ್ಟೇ, ಇಡೀ ಊರು ಕೆರೆಯ ಸಮೀಪಕ್ಕೆ ಸ್ಥಳಾಂತರಗೊಂಡು, ಊರು ಬಿಕೋ ಎನ್ನುತ್ತಿತ್ತು. ಅದಕ್ಕೆ ಕಾರಣ ಮಾರಿ ಭೀತಿ ಹುಟ್ಟಿಸಿದ್ದಳು. ಕೊರೊನಾ ಗುಂಗಿನಲ್ಲೇ ವಾಟಿಸ್ಸೆ ಜುಮ್ಮಿ ಮನೆಗೆ ಬಂದಾಗ, ಉಗ್ರಿಯೂ ಅಲ್ಲಿದ್ದ.

“ಯಕ್ಕಾ, ಯಕ್ಕವ್ ಯಂಗಿದ್ದಯಕ್ಕಾ.”

“ಅಲ್ಲೆ ನಿಂತಗಂಡು ಮಾತಾಡ್ಳ.”

“ಇದೇನಕ್ಕ ಹಿಂಗಂತಿ ಮತ್ತೆ ಉಗ್ರಿ ವಳಿಕೆ ಬಂದವುನೆ.”

“ಅವುನು ಕೈಕಾಲು ತೊಳಕಂಡು ಬಂದವುನೆ.”

“ಕೊಡು ಮತ್ತೆ ನೀರ.”

“ಅಲ್ಲೆ ಅವೆ ತ್ವಳಕಂಡು ಬಾರ್ಲ.”

“ಓಹೋ, ಯಲ್ಲಾ ಕಲ್ಚರ್ರು ರಿಟನ್ ಆಯ್ತಲ್ಲಪ್ಪಾ ಎಂದುಕೊಂಡ ವಾಟಿಸ್ಸೆ ತಾತ್ಸಾರದಿಂದ ನೀರು ಚುಟುಕಿಸಿಕೊಂಡು ಬಂದ.”

“ಅದೇನ್ಲ ಗ್ವಣಗತಿದ್ಯಲ್ಲ” ಎಂದಳು ಜುಮ್ಮಿ.

“ಅದೇ ಕಣಕ್ಕ ಹಿಂದ್ಲ ಕಾಲ್ದಲ್ಲಿ ಬಂದೋರ್ನ ಬಾಗಲಲ್ಲಿ ನಿಲ್ಲಿಸಿ, ನೀರುಕೊಟ್ಟು ಕೈಕಾಲು ಮಖ ತ್ವಳಕಂಡ ಮ್ಯಾಲೆ ವಳಿಕ್ಕರದು, ಚ್ಯಾಪೆ ಹಾಸಿ ಕುಂಡ್ರುಸಿ, ಕ್ವಾಣೆ ಬಾಗಲಲ್ಲಿ ನಿಂತಗಂಡು ಮಾತಾಡರು, ಅಂದ. ಆಗ ಉಗ್ರಿ,

“ಅಷ್ಟೇ ಅಲ್ಲ ಕಣಯ್ಯ, ಕೈಕಾಲು ತ್ವಳಿಯಕ್ಕೆ ನೀರು ಕೊಡೊರು ಕೂಡ ಸೆರಗಲ್ಲಿ ಚೊಂಬಿಡಕಂಡು, ಅದರಲ್ಲೇ ಕೈಗೆ ನೀರಾಯ್ಕಂಡು, ತ್ವಳಕಂಡು ನಂತರ ನಿನಿಗೆ ನೀರು ಕೊಡೊರು” ಎಂದ.

“ನಮ್ಮತ್ತೆ ನಮ್ಮವ್ವ ಯಲ್ಲ ಕಡಿಗಂಟ ಅಂಗೆ ಮಾಡಿದ್ರು ಕಂಡ್ಳ.”

“ನಿಜ ಕಣಕ್ಕ, ನಾನು ನೋಡಿದ್ದೆ. ಇದೇನು ಮಡಿ ಮೈಲಿಗೆ ಜನವಪ್ಪ ಅನ್ಸಿತ್ತು. ಇವತ್ತು ನೋಡಿದ್ರೆ, ನಮ್ಮ ಹಳೆ ಜನ ಇವುರಿಗಿಂತ ಎಚ್ಚರಾಗಿದ್ದುದ್ದು ಯಂಗೆ, ಅನ್ನಸ್ತದೆ.”

“ಊ ಕಣೋ ವಾಟಿಸ್ಸೆ, ಉಣ್ಣುವಾಗ ಯಾರಾರ ಬಂದ್ರೆ ಕಾಲ್ದೂಳಾಯ್ತದೆ ಅಲ್ಲೇ ಇರಿ ಅಂತಿದ್ರು. ಅವುನ್ಯಂಥಾ ದ್ವಡ್ಡ ಮನುಸ್ನೆ ಆಗ್ಲಿ, ಮುಚ್ಕಂಡು ಕುಂತಿದ್ದು ಅಮ್ಯಾಲೆ ವಳಿಕೆ ಬರೋನು.”

“ನಾನು ನೋಡಿದ್ದೆ ಕಣೋ ಉಗ್ರಿ, ಆಗೊಂದು ಸತಿ ಮಂಡೇವುದತ್ರ ಅಳ್ಳಕ್ಯರಿಗೋಗಿದ್ದಾಗ ದಳ್ಳಾಳಿ ತಮ್ಮಣ್ಣಗೌಡನ ಮನೆ ಉಣತಾಯಿದ್ದೊ, ಆಗ ತಮ್ಮಣ್ಣಗೌಡ ಬಂದ ಅವುನೆಂಡ್ತಿ ‘ಅಯ್ಯವ್ ಅಲ್ಲೆ ಇರು ವಳಿಕೆ ಬರಬ್ಯಾಡ ಉಣತಾ ಅವುರೆ’ ಅಂದ್ಲು ತಮ್ಮಣ್ಣಗೌಡ ಉಸುರು ಬುಡದಂಗೆ ಅಲ್ಲೇ ಕುತಗಂಡ ಅವ್ಯಲ್ಲ ಇವತ್ತು ಜ್ಞಾಪುಕಕ್ಕೆ ಬತ್ತಾ ಅವೆ” ಎಂದು ವಾಟಿಸ್ಸೆ ಹೇಳುವಾಗ ಜುಮ್ಮಿ ಕೆಮ್ಮಿದಳು.

“ಇದ್ಯಾಕಕ್ಕ ಕೆಮ್ತಿ.”

“ಸುಮ್ಮನೆ ಕಂಡ್ಳ.”

“ಸುಮ್ಮನೆ ಕೆಮ್ಮೊ ಸಿಚುಯೇಷನ್ ಅಲ್ಲ ಇದು. ಯಾವುದ್ಕು ತೋರಿಸಿಗಂಡುಬುಡದು ವಳ್ಳೇದು.”

“ಲೈ ಹಿಟ್ಲಕ್ಕ ಕರಾನ ಬರದಕ್ಕಿಂತ ಮದ್ಲಿಂದ ಕೆಮ್ಮುತಿದ್ದೆ ಕಂಡ್ಳ ಅದೊಂತರ ವಣಕೆಮ್ಮುಗ.”

“ಅಯ್ಯೋ ಚೆಕಪ್ ಮಾಡಸಕ್ಕೊದ್ರೆ ಜುಮ್ಮಿ ಬುಟ್ಟರೇನೊ ವಾಟಿಸ್ಸೆ. ಅಲ್ಲೆ ಕುಂಡ್ರಿಸಿಗತ್ತರೆ, ಜ್ವತಿಗೆ ಅವುಳ ಮನೆಲಿದ್ದ ನಮ್ಮನ್ನೂ ಅಲ್ಲೆ ಇರಿ ನಿಮಿಗೂ ಚೆಕಪ್ ಮಾಡ್ತಿವಿ ಅಂತರೆ ಇದು ಬೇರೆ ನಿಂಗೆ.”

“ಅಂಗಲ್ಲ ಕಣೊ ಉಗ್ರಿ, ಈ ನಮ್ಮ ಜುಮ್ಮಕ್ಕ ಪಂಚಾತಿ ಮಂಬ್ರು ಕಾಂಟ್ಯಾಕ್ಟವುಳೆ, ಅದ್ರಿಂದ ಸಣ್ಣ ಕೆಮ್ಮುಗೂ ನೆಗ್ಲೆಟ್ ಮಾಡಂಗಿಲ್ಲ ಚೆಕಪ್ ಮಾಡುಸಬೇಕು.”

“ಇವತ್ತು ದೇಶ ಇಂಗಾಗಿರದೆ ನಿನ್ನಂಥೋನಿಂದ ಕಣೊ. ಆ ಟಿವಿ ಮುಂಡೆಮಕ್ಕಳಿಗೆ ಮದ್ಲು ಕೊರೊನ ಬಂದ್ರು ನೀಟಾಗ್ಯದೆ.”

“ಅವುರ ಬಂಬಾಯಿ ನಿಲ್ಲುಸಬೇಕಾದ್ರೆ, ಯಾವನಾರ ಕೊರೊನಾ ರೋಗಿಯ ಕಳಿಸಿ, ಒಂದು ರವುಂಡ್ ವಡಕಂಡು ಬಾ ಅನ್ನಬೇಕು ಕಣೊ. ಆಗ ಆ ನನ್ನ ಮಕ್ಕಳ ಬಾಯಿ ಬಂದಾಯ್ತದೆ.”

“ಏ ಪಾಪ ಅವುರ ವಟ್ಟಿಪಾಡ್ಯಂಗದೆ. ಅಂದ್ರೆ ಕೊರೊನಾಕ್ಕೂ ಹೆದರದಂಗಾಗ್ಯವುರೆ, ಬಟ್ಟೆ ಕಟಿಗಂಡೆ ಮಾತಾಡ್ತರೆ, ನಿಮಸಕ್ಕೊಂದು ಸತಿ ಮೋದಿ ಪೋಟಾ ಹಾಕಿ ಹೆದರಬ್ಯಾಡಿ ಪ್ರಧಾನಿ ಅವುನೆ ಅಂತರೆ, ಅವುನೇನು ಮಾಡ್ತನೆ ಅಂತ ಅಂಗಂತವೆ.”

“ಅವುರೇನು ಮಾಡಲ್ಲ, ಇಂತವುಕ್ಯಲ್ಲ ಹೆದರದೂ ಇಲ್ಲ ಅವುನು. ಗುಜರಾತಲ್ಲಿ ತಾನೇ ಆಜ್ಞೆ ಮಾಡಿ ಸಾವುರಾರು ಜನ ಸಾಬರ ಕೊಲ್ಲಿಸಿದೋನು, ಇನ್ನ ಕೊರೊನಾದಿಂದ ಜನ ಸತ್ರೆ ಹೆದರತನೇನೊ.”

“ಮತ್ತೆ ಜನಗಳಿಗೆ ಭಾರಿ ಎಚ್ಚರಿಕೆ ಹೇಳ್ತ ಕುಂತವುನೆ.”

“ಹೇಳ್ತನೆ, ಅವುರು ಬಳಸಿಗಳದ್ಯಲ್ಲ ಇಂತ ಸಿಚುಯೇಶನ್ನೇ ಅಲವೆ. ಜನಕ್ಕೆ ಆಗಬಾರದ್ದಾಬೇಕು. ಅಲ್ಲಿ ಆರೆಸ್ಸಿಸ್ಸಿನೋರು ಕಾಣಿಸಿಗಬೇಕು, ಚಿತ್ರಾನ್ನ ಮೊಸರನ್ನ ಹಂಚಬೇಕು, ನಮ್ಮ ಬುಟ್ರೆ ದೇಶಭಕ್ತರು ಇಲವೇಯಿಲ್ಲ ಅನ್ನಬೇಕು. ಇದರಲ್ಲೇ ಬಂದೋರವರು. ಇನ್ನ ಕೊರೊನಾ ಬುಡ್ತರೆನೋ. ನಮ್ಮ ಅವುತಾರ ಪುರುಸ ಮೋದಿ ಯದೆಕೊಟ್ಟು ನಿಂತಗಂಡು ಕೊರೊನಾ ಓಡಿಸಿದಾ ಅಂತ ಕೂಗತ್ತ ತಿರಗ್ತವೆ.”

“ಅದೇನೊ ಸಾಬರಮ್ಯಾಲೆ ಕಾನೂನು ತಂದ್ರಿದ್ರಂತಲ್ಲ ಏನಾಯಿತ್ಲ” ಎಂದಳು ಜುಮ್ಮಿ.

“ಅದು ಸಿಎಎ ಅಂತ ಕಣಕ್ಕ. ಸಾಬರನ್ಯಲ್ಲ ಸೊಸಿ ಅತ್ತಗೆ ಯಸಿಯೋ ಕಾನೂನು ತಂದಿದ್ರು. ಸಾಬರು ಎಲ್ಲ ಸೇರಿಕಂಡು ಅದ್ಯಂಗೆ ನಮ್ಮ ಬ್ಯಾರೆ ಮಾಡ್ತಿರಿ ನೋಡನ ಅಂತ ಎದ್ದು ನಿಂತಗಂಡ್ರು. ಅಷ್ಟರಲ್ಲಿ ಕೊರೊನಾ ಬಂದು ಯಲ್ಲಾರ್ನು ಅಮರಿಕತ್ತಾ ಅದೆ ಕಣಕ್ಕ.’’

“ಯಲ್ಲಾರ್ನು ಅಂದ್ರೆ ಚಪ್ಪನ್ನೈವತ್ತಾರು ದೇಸನೂ ಆವರಿಸಿಗಂಡದೆ ಕಣೆ. ಇಟಲಿದೇಸಕೆ ಜಾಸ್ತಿ ಅಮರಿಕಂಡದೆ.”

“ಸೋನಿಯಾಗಾಂಧಿ ಆ ಊರೊಳೆ ಅದ್ರವೆ.”

“ಆ ಊರೊಳೆಯ, ಅವುಳೇನಾರ ಅಲ್ಲಿಗೋಗಿ ಬಂದಿದ್ರೆ ಅವುಳೆ ಕೊರೊನಾ ತಂದ್ಲು ಅಂತ ಬಿಜೆಪಿಗಳು ಬಬ್ಬೆ ಹೊಡಿಯವು.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...