Homeಮುಖಪುಟಬಿ.ಚಂದ್ರೇಗೌಡರ ಕಟ್ಟೆಪುರಾಣ: ಜುಮ್ಮಕ್ಕ ಕೆಮ್ಮು ನೆಗ್ಲೆಟ್ ಮಾಡಬ್ಯಾಡ ಕಣಕ್ಕ

ಬಿ.ಚಂದ್ರೇಗೌಡರ ಕಟ್ಟೆಪುರಾಣ: ಜುಮ್ಮಕ್ಕ ಕೆಮ್ಮು ನೆಗ್ಲೆಟ್ ಮಾಡಬ್ಯಾಡ ಕಣಕ್ಕ

- Advertisement -
- Advertisement -

ಬಿದಿಕಲ್ಲು ಕಾರ ಕಾವಲಿಯಂತೆ ರಣಗುಡುತ್ತಿದ್ದವು. ಸರಿಯಾಗಿ ಒಂದು ಶತಮಾನದ ಹಿಂದಕ್ಕೆ ಊರು ನೆಗೆದಿತ್ತು. ಆಗಲೂ ಅಷ್ಟೇ, ಇಡೀ ಊರು ಕೆರೆಯ ಸಮೀಪಕ್ಕೆ ಸ್ಥಳಾಂತರಗೊಂಡು, ಊರು ಬಿಕೋ ಎನ್ನುತ್ತಿತ್ತು. ಅದಕ್ಕೆ ಕಾರಣ ಮಾರಿ ಭೀತಿ ಹುಟ್ಟಿಸಿದ್ದಳು. ಕೊರೊನಾ ಗುಂಗಿನಲ್ಲೇ ವಾಟಿಸ್ಸೆ ಜುಮ್ಮಿ ಮನೆಗೆ ಬಂದಾಗ, ಉಗ್ರಿಯೂ ಅಲ್ಲಿದ್ದ.

“ಯಕ್ಕಾ, ಯಕ್ಕವ್ ಯಂಗಿದ್ದಯಕ್ಕಾ.”

“ಅಲ್ಲೆ ನಿಂತಗಂಡು ಮಾತಾಡ್ಳ.”

“ಇದೇನಕ್ಕ ಹಿಂಗಂತಿ ಮತ್ತೆ ಉಗ್ರಿ ವಳಿಕೆ ಬಂದವುನೆ.”

“ಅವುನು ಕೈಕಾಲು ತೊಳಕಂಡು ಬಂದವುನೆ.”

“ಕೊಡು ಮತ್ತೆ ನೀರ.”

“ಅಲ್ಲೆ ಅವೆ ತ್ವಳಕಂಡು ಬಾರ್ಲ.”

“ಓಹೋ, ಯಲ್ಲಾ ಕಲ್ಚರ್ರು ರಿಟನ್ ಆಯ್ತಲ್ಲಪ್ಪಾ ಎಂದುಕೊಂಡ ವಾಟಿಸ್ಸೆ ತಾತ್ಸಾರದಿಂದ ನೀರು ಚುಟುಕಿಸಿಕೊಂಡು ಬಂದ.”

“ಅದೇನ್ಲ ಗ್ವಣಗತಿದ್ಯಲ್ಲ” ಎಂದಳು ಜುಮ್ಮಿ.

“ಅದೇ ಕಣಕ್ಕ ಹಿಂದ್ಲ ಕಾಲ್ದಲ್ಲಿ ಬಂದೋರ್ನ ಬಾಗಲಲ್ಲಿ ನಿಲ್ಲಿಸಿ, ನೀರುಕೊಟ್ಟು ಕೈಕಾಲು ಮಖ ತ್ವಳಕಂಡ ಮ್ಯಾಲೆ ವಳಿಕ್ಕರದು, ಚ್ಯಾಪೆ ಹಾಸಿ ಕುಂಡ್ರುಸಿ, ಕ್ವಾಣೆ ಬಾಗಲಲ್ಲಿ ನಿಂತಗಂಡು ಮಾತಾಡರು, ಅಂದ. ಆಗ ಉಗ್ರಿ,

“ಅಷ್ಟೇ ಅಲ್ಲ ಕಣಯ್ಯ, ಕೈಕಾಲು ತ್ವಳಿಯಕ್ಕೆ ನೀರು ಕೊಡೊರು ಕೂಡ ಸೆರಗಲ್ಲಿ ಚೊಂಬಿಡಕಂಡು, ಅದರಲ್ಲೇ ಕೈಗೆ ನೀರಾಯ್ಕಂಡು, ತ್ವಳಕಂಡು ನಂತರ ನಿನಿಗೆ ನೀರು ಕೊಡೊರು” ಎಂದ.

“ನಮ್ಮತ್ತೆ ನಮ್ಮವ್ವ ಯಲ್ಲ ಕಡಿಗಂಟ ಅಂಗೆ ಮಾಡಿದ್ರು ಕಂಡ್ಳ.”

“ನಿಜ ಕಣಕ್ಕ, ನಾನು ನೋಡಿದ್ದೆ. ಇದೇನು ಮಡಿ ಮೈಲಿಗೆ ಜನವಪ್ಪ ಅನ್ಸಿತ್ತು. ಇವತ್ತು ನೋಡಿದ್ರೆ, ನಮ್ಮ ಹಳೆ ಜನ ಇವುರಿಗಿಂತ ಎಚ್ಚರಾಗಿದ್ದುದ್ದು ಯಂಗೆ, ಅನ್ನಸ್ತದೆ.”

“ಊ ಕಣೋ ವಾಟಿಸ್ಸೆ, ಉಣ್ಣುವಾಗ ಯಾರಾರ ಬಂದ್ರೆ ಕಾಲ್ದೂಳಾಯ್ತದೆ ಅಲ್ಲೇ ಇರಿ ಅಂತಿದ್ರು. ಅವುನ್ಯಂಥಾ ದ್ವಡ್ಡ ಮನುಸ್ನೆ ಆಗ್ಲಿ, ಮುಚ್ಕಂಡು ಕುಂತಿದ್ದು ಅಮ್ಯಾಲೆ ವಳಿಕೆ ಬರೋನು.”

“ನಾನು ನೋಡಿದ್ದೆ ಕಣೋ ಉಗ್ರಿ, ಆಗೊಂದು ಸತಿ ಮಂಡೇವುದತ್ರ ಅಳ್ಳಕ್ಯರಿಗೋಗಿದ್ದಾಗ ದಳ್ಳಾಳಿ ತಮ್ಮಣ್ಣಗೌಡನ ಮನೆ ಉಣತಾಯಿದ್ದೊ, ಆಗ ತಮ್ಮಣ್ಣಗೌಡ ಬಂದ ಅವುನೆಂಡ್ತಿ ‘ಅಯ್ಯವ್ ಅಲ್ಲೆ ಇರು ವಳಿಕೆ ಬರಬ್ಯಾಡ ಉಣತಾ ಅವುರೆ’ ಅಂದ್ಲು ತಮ್ಮಣ್ಣಗೌಡ ಉಸುರು ಬುಡದಂಗೆ ಅಲ್ಲೇ ಕುತಗಂಡ ಅವ್ಯಲ್ಲ ಇವತ್ತು ಜ್ಞಾಪುಕಕ್ಕೆ ಬತ್ತಾ ಅವೆ” ಎಂದು ವಾಟಿಸ್ಸೆ ಹೇಳುವಾಗ ಜುಮ್ಮಿ ಕೆಮ್ಮಿದಳು.

“ಇದ್ಯಾಕಕ್ಕ ಕೆಮ್ತಿ.”

“ಸುಮ್ಮನೆ ಕಂಡ್ಳ.”

“ಸುಮ್ಮನೆ ಕೆಮ್ಮೊ ಸಿಚುಯೇಷನ್ ಅಲ್ಲ ಇದು. ಯಾವುದ್ಕು ತೋರಿಸಿಗಂಡುಬುಡದು ವಳ್ಳೇದು.”

“ಲೈ ಹಿಟ್ಲಕ್ಕ ಕರಾನ ಬರದಕ್ಕಿಂತ ಮದ್ಲಿಂದ ಕೆಮ್ಮುತಿದ್ದೆ ಕಂಡ್ಳ ಅದೊಂತರ ವಣಕೆಮ್ಮುಗ.”

“ಅಯ್ಯೋ ಚೆಕಪ್ ಮಾಡಸಕ್ಕೊದ್ರೆ ಜುಮ್ಮಿ ಬುಟ್ಟರೇನೊ ವಾಟಿಸ್ಸೆ. ಅಲ್ಲೆ ಕುಂಡ್ರಿಸಿಗತ್ತರೆ, ಜ್ವತಿಗೆ ಅವುಳ ಮನೆಲಿದ್ದ ನಮ್ಮನ್ನೂ ಅಲ್ಲೆ ಇರಿ ನಿಮಿಗೂ ಚೆಕಪ್ ಮಾಡ್ತಿವಿ ಅಂತರೆ ಇದು ಬೇರೆ ನಿಂಗೆ.”

“ಅಂಗಲ್ಲ ಕಣೊ ಉಗ್ರಿ, ಈ ನಮ್ಮ ಜುಮ್ಮಕ್ಕ ಪಂಚಾತಿ ಮಂಬ್ರು ಕಾಂಟ್ಯಾಕ್ಟವುಳೆ, ಅದ್ರಿಂದ ಸಣ್ಣ ಕೆಮ್ಮುಗೂ ನೆಗ್ಲೆಟ್ ಮಾಡಂಗಿಲ್ಲ ಚೆಕಪ್ ಮಾಡುಸಬೇಕು.”

“ಇವತ್ತು ದೇಶ ಇಂಗಾಗಿರದೆ ನಿನ್ನಂಥೋನಿಂದ ಕಣೊ. ಆ ಟಿವಿ ಮುಂಡೆಮಕ್ಕಳಿಗೆ ಮದ್ಲು ಕೊರೊನ ಬಂದ್ರು ನೀಟಾಗ್ಯದೆ.”

“ಅವುರ ಬಂಬಾಯಿ ನಿಲ್ಲುಸಬೇಕಾದ್ರೆ, ಯಾವನಾರ ಕೊರೊನಾ ರೋಗಿಯ ಕಳಿಸಿ, ಒಂದು ರವುಂಡ್ ವಡಕಂಡು ಬಾ ಅನ್ನಬೇಕು ಕಣೊ. ಆಗ ಆ ನನ್ನ ಮಕ್ಕಳ ಬಾಯಿ ಬಂದಾಯ್ತದೆ.”

“ಏ ಪಾಪ ಅವುರ ವಟ್ಟಿಪಾಡ್ಯಂಗದೆ. ಅಂದ್ರೆ ಕೊರೊನಾಕ್ಕೂ ಹೆದರದಂಗಾಗ್ಯವುರೆ, ಬಟ್ಟೆ ಕಟಿಗಂಡೆ ಮಾತಾಡ್ತರೆ, ನಿಮಸಕ್ಕೊಂದು ಸತಿ ಮೋದಿ ಪೋಟಾ ಹಾಕಿ ಹೆದರಬ್ಯಾಡಿ ಪ್ರಧಾನಿ ಅವುನೆ ಅಂತರೆ, ಅವುನೇನು ಮಾಡ್ತನೆ ಅಂತ ಅಂಗಂತವೆ.”

“ಅವುರೇನು ಮಾಡಲ್ಲ, ಇಂತವುಕ್ಯಲ್ಲ ಹೆದರದೂ ಇಲ್ಲ ಅವುನು. ಗುಜರಾತಲ್ಲಿ ತಾನೇ ಆಜ್ಞೆ ಮಾಡಿ ಸಾವುರಾರು ಜನ ಸಾಬರ ಕೊಲ್ಲಿಸಿದೋನು, ಇನ್ನ ಕೊರೊನಾದಿಂದ ಜನ ಸತ್ರೆ ಹೆದರತನೇನೊ.”

“ಮತ್ತೆ ಜನಗಳಿಗೆ ಭಾರಿ ಎಚ್ಚರಿಕೆ ಹೇಳ್ತ ಕುಂತವುನೆ.”

“ಹೇಳ್ತನೆ, ಅವುರು ಬಳಸಿಗಳದ್ಯಲ್ಲ ಇಂತ ಸಿಚುಯೇಶನ್ನೇ ಅಲವೆ. ಜನಕ್ಕೆ ಆಗಬಾರದ್ದಾಬೇಕು. ಅಲ್ಲಿ ಆರೆಸ್ಸಿಸ್ಸಿನೋರು ಕಾಣಿಸಿಗಬೇಕು, ಚಿತ್ರಾನ್ನ ಮೊಸರನ್ನ ಹಂಚಬೇಕು, ನಮ್ಮ ಬುಟ್ರೆ ದೇಶಭಕ್ತರು ಇಲವೇಯಿಲ್ಲ ಅನ್ನಬೇಕು. ಇದರಲ್ಲೇ ಬಂದೋರವರು. ಇನ್ನ ಕೊರೊನಾ ಬುಡ್ತರೆನೋ. ನಮ್ಮ ಅವುತಾರ ಪುರುಸ ಮೋದಿ ಯದೆಕೊಟ್ಟು ನಿಂತಗಂಡು ಕೊರೊನಾ ಓಡಿಸಿದಾ ಅಂತ ಕೂಗತ್ತ ತಿರಗ್ತವೆ.”

“ಅದೇನೊ ಸಾಬರಮ್ಯಾಲೆ ಕಾನೂನು ತಂದ್ರಿದ್ರಂತಲ್ಲ ಏನಾಯಿತ್ಲ” ಎಂದಳು ಜುಮ್ಮಿ.

“ಅದು ಸಿಎಎ ಅಂತ ಕಣಕ್ಕ. ಸಾಬರನ್ಯಲ್ಲ ಸೊಸಿ ಅತ್ತಗೆ ಯಸಿಯೋ ಕಾನೂನು ತಂದಿದ್ರು. ಸಾಬರು ಎಲ್ಲ ಸೇರಿಕಂಡು ಅದ್ಯಂಗೆ ನಮ್ಮ ಬ್ಯಾರೆ ಮಾಡ್ತಿರಿ ನೋಡನ ಅಂತ ಎದ್ದು ನಿಂತಗಂಡ್ರು. ಅಷ್ಟರಲ್ಲಿ ಕೊರೊನಾ ಬಂದು ಯಲ್ಲಾರ್ನು ಅಮರಿಕತ್ತಾ ಅದೆ ಕಣಕ್ಕ.’’

“ಯಲ್ಲಾರ್ನು ಅಂದ್ರೆ ಚಪ್ಪನ್ನೈವತ್ತಾರು ದೇಸನೂ ಆವರಿಸಿಗಂಡದೆ ಕಣೆ. ಇಟಲಿದೇಸಕೆ ಜಾಸ್ತಿ ಅಮರಿಕಂಡದೆ.”

“ಸೋನಿಯಾಗಾಂಧಿ ಆ ಊರೊಳೆ ಅದ್ರವೆ.”

“ಆ ಊರೊಳೆಯ, ಅವುಳೇನಾರ ಅಲ್ಲಿಗೋಗಿ ಬಂದಿದ್ರೆ ಅವುಳೆ ಕೊರೊನಾ ತಂದ್ಲು ಅಂತ ಬಿಜೆಪಿಗಳು ಬಬ್ಬೆ ಹೊಡಿಯವು.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...