Homeಎಲೆಮರೆಊರಿಗೆ ಊರನ್ನೆ ಶಾಲಾ ಪತ್ರಿಕೆಯ ಓದುಗರನ್ನಾಗಿಸಿದ ಶಿಕ್ಷಕ ಬಿ.ಕೊಟ್ರೇಶ್

ಊರಿಗೆ ಊರನ್ನೆ ಶಾಲಾ ಪತ್ರಿಕೆಯ ಓದುಗರನ್ನಾಗಿಸಿದ ಶಿಕ್ಷಕ ಬಿ.ಕೊಟ್ರೇಶ್

- Advertisement -
- Advertisement -

ಕಾರಟಗಿಯಲ್ಲಿ ಸಮಾಜ ವಿಜ್ಞಾನ ಸಂಶೋಧನಾ ಸಂಸ್ಥೆಯ ಬಿ.ಪೀರಬಾಷ ಮತ್ತು ಗೆಳೆಯರು ಸೇರಿ ಕುವೆಂಪು ಕುರಿತಂತೆ ಕಮ್ಮಟವನ್ನು ಏರ್ಪಡಿಸಿದ್ದರು. ರಾಮಲಿಂಗಪ್ಪ ಟಿ. ಬೇಗೂರು ಮತ್ತು ನಾನು ಕಮ್ಮಟವನ್ನು ನಿರ್ವಹಿಸುವ ಹೊಣೆ ಹೊತ್ತಿದ್ದೆವು. ಆಗ ಕೊಪ್ಪಳ ಸಿಂಧನೂರು ಗಂಗಾವತಿ ಭಾಗದ ಶಿಕ್ಷಕರು ಶಿಬಿರಾರ್ಥಿಗಳಾಗಿ ಬಂದಿದ್ದರು. ಬಿಡುವಿನ ವೇಳೆಯಲ್ಲಿ ಶಿಕ್ಷಕ ಬಿ.ಕೊಟ್ರೇಶ್ ತಾನು ಶಾಲೆಯಿಂದ ತರುತ್ತಿರುವ ಪತ್ರಿಕೆಯೊಂದನ್ನು ಕೈಗೆ ಕೊಟ್ಟರು. ಸುಮ್ಮನೆ ಕಣ್ಣಾಡಿಸಿದರೆ ಆ ಪತ್ರಿಕೆಯ ವೈವಿಧ್ಯ, ಹರವು, ದೃಷ್ಟಿಕೋನ ಅಚ್ಚರಿ ಹುಟ್ಟಿಸಿತು. ಶಾಲಾ ಮಕ್ಕಳೆ ಪ್ರಕಟಿಸುತ್ತಾರೆಂದಾಗ ನಂಬಲಾಗಲಿಲ್ಲ. ಕಳೆದ ನಾಲ್ಕು ವರ್ಷದಿಂದ ಈ ಪತ್ರಿಕೆ ತರುವುದಾಗಿಯೂ, ಪತ್ರಿಕೆಯನ್ನು ಶಾಲಾಮಕ್ಕಳೇ ಸಂಪಾದಿಸುತ್ತಿದ್ದು, ಅವರೇ ಬರೆದು, ಅವರೇ ಹಂಚುತ್ತಾರೆ ಎಂದು ಮತ್ತಷ್ಟು ವಿವರಿಸಿದರು. ಇದನ್ನು ಕೇಳಿ ಪೇಸ್‍ಬುಕ್‍ನಲ್ಲಿ ಮೆಚ್ಚುಗೆಯ ಪೋಸ್ಟ್ ಹಾಕಿ ಸುಮ್ಮನಾಗಿದ್ದೆ. ಇದೀಗ ರಾಷ್ಟ್ರೀಯ ಪತ್ರಿಕೆಗಳಲ್ಲಿ ಪೆನ್ಸಿಲ್ ಪತ್ರಿಕೆಯ ಬಗ್ಗೆ ವಿಶೇಷ ಸುದ್ದಿಗಳು ಪ್ರಕಟವಾಗಿ ಗಮನ ಸೆಳೆಯುತ್ತಿದೆ.

ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಬೆಳಗುರ್ಕಿ ಒಂದು ಪುಟ್ಟ ಹಳ್ಳಿ. ಐದು ಸಾವಿರದಷ್ಟು ಜನಸಂಖ್ಯೆ ಇರುವ ಬೆಳಗುರ್ಕಿಯ ಶಾಲೆಯಲ್ಲಿ 310 ರಷ್ಟು ವಿದ್ಯಾರ್ಥಿಗಳಿದ್ದು, ಎಂಟು ಜನ ಶಿಕ್ಷಕರು, ಇಬ್ಬರು ಅತಿಥಿ ಶಿಕ್ಷಕರಿದ್ದಾರೆ. ಆ ಹಳ್ಳಿಗೆ ಈಗಲೂ ದಿನಪತ್ರಿಕೆಗಳು ಬರುವುದಿಲ್ಲ. ಆದರೆ ಈ ಊರಿನ ಹಿರಿಯರಿಗೆ ತಮ್ಮೂರಿನ ಶಾಲಾಮಕ್ಕಳ ಪೆನ್ಸಿಲ್ ಪತ್ರಿಕೆ ಅಚ್ಚುಮೆಚ್ಚು. ಹರಟೆಕಟ್ಟೆಗಳೀಗ `ಪೆನ್ಸಿಲ್ ಪತ್ರಿಕಾ’ ಕಟ್ಟೆಗಳಾಗಿ ಬದಲಾಗಿವೆ. ಈ ಪತ್ರಿಕೆಯ ಪ್ರಭಾವಕ್ಕೆ ಒಳಗಾಗಿ ಕೆಲವು ದಿನಪತ್ರಿಕೆಗಳೂ ಉಚಿತವಾಗಿ ಊರು ಸೇರುತ್ತಿವೆ. ಊರಲ್ಲೊಂದು ಓದುಗವರ್ಗ ಸೃಷ್ಠಿಯಾಗಿದೆ.

ಶಾಲೆಯಿಂದ ಹೊರಗುಳಿಯುವ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವುದರ ಉದ್ದೇಶದಿಂದ ಕೊಟ್ರೇಶ್ ಶಾಲಾ ಬಿಟ್ಟ ಮಕ್ಕಳ ಕತೆಯನ್ನು ಅವರದೆ ಫೋಟೋ ಹಾಕಿ ಆರಂಭಕ್ಕೆ ಗೋಡೆ ಪತ್ರಿಕೆಯಲ್ಲಿ ಪ್ರಕಟಿಸಲು ತೊಡಗುತ್ತಾರೆ. ಇದಕ್ಕೆ ಮಕ್ಕಳ ಪ್ರತಿಕ್ರಿಯೆ ಉತ್ಸಾಹ ಹೆಚ್ಚಾಗತೊಡಗುತ್ತದೆ. ಗೋಡೆ ಪತ್ರಿಕೆಯನ್ನೆ ಯಾಕೆ ಸ್ವತಂತ್ರ ಪತ್ರಿಕೆ ಮಾಡಬಾರದು ಎನ್ನುವ ಯೋಚನೆಯಿಂದ `ಪೆನ್ಸಿಲ್’ ಪತ್ರಿಕೆ ಹುಟ್ಟುತ್ತದೆ. ಪತ್ರಿಕೆಯೊಂದರಲ್ಲಿ ಕೆಲಸ ಮಾಡುವ ಕೊಟ್ರೇಶ್ ಅವರ ಸ್ನೇಹಿತ ಉಲ್ಲಾಸ್ ಎನ್ನುವವರು ಪುಟವಿನ್ಯಾಸ ಮಾಡುತ್ತಾರೆ. ಇದರಿಂದಾಗಿ ಯಾವುದೇ ದಿನಪತ್ರಿಕೆಗೂ ಕಡಿಮೆ ಇಲ್ಲದಂತೆ `ಪೆನ್ಸಿಲ್’ ರೂಪು ಪಡೆಯುತ್ತದೆ. ದೂರದ ನಗರಗಳಲ್ಲಿ ಮುದ್ರಣವಾಗಿ ಬರುವ ಪತ್ರಿಕೆಗಳ ಬಗೆಗೆ ಜನರಿಗಿದ್ದ ಸಹಜ ಕುತೂಹಲ `ನಮ್ಮೂರಿನ ಶಾಲೆಯೂ ಒಂದು ಪತ್ರಿಕೆ ತರುತ್ತಿದೆ’ ಎನ್ನುವ ಬೆರಗು ಮೂಡಿಸುತ್ತದೆ. ಈ ಬೆರಗಿನಿಂದಲೇ ಶಾಲಾಪತ್ರಿಕೆಯನ್ನು ಊರಿನ ಜನ ಓದಲು ತೊಡಗುತ್ತಾರೆ.

2013 ರ ಸೆಪ್ಟೆಂಬರ್ ತಿಂಗಳಲ್ಲಿ ಪೆನ್ಸಿಲ್‍ನ ಮೊದಲ ಮುದ್ರಿತ ಸಂಚಿಕೆ ಬರುತ್ತದೆ. 2016 ರ ತನಕ ಪೆನ್ಸಿಲ್ ಪತ್ರಿಕೆ ತಿಂಗಳ ಪತ್ರಿಕೆಯಾಗಿ ಪ್ರಕಟವಾಗುತ್ತಾ ಗಮನ ಸೆಳೆಯಿತು. 2016 ರಲ್ಲಿ ಪತ್ರಿಕೆ ರೂಪಿಸುವ ಹೊಣೆಹೊತ್ತ ಶಿಕ್ಷಕ ಕೊಟ್ರೇಶ್ ಅವರು ಬಿಇಓ ಕಚೇರಿಯ ಸಿಆರ್‍ಪಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಹೀಗಾಗಿ ಕೆಲಕಾಲ ಪತ್ರಿಕೆ ನಿಲ್ಲುತ್ತದೆ. ನಂತರ ಇಂಡಿಯನ್ ಫೌಂಡೇಷನ್ ಫಾರ್ ದಿ ಆಟ್ರ್ಸ್‍ನಲ್ಲಿ ಕೊಟ್ರೇಶ್ ತಮ್ಮ ಪತ್ರಿಕೆಗೆ ಆರ್ಥಿಕ ನೆರವು ಕೇಳಿದಾಗ ಫೌಂಡೇಷನ್ ಒಂದು ವರ್ಷದ ಪತ್ರಿಕೆ ವೆಚ್ಚವನ್ನು ಪ್ರಾಯೋಜಿಸುತ್ತಾರೆ. ಹೀಗಾಗಿ ಮತ್ತಷ್ಟು ಉತ್ಸಾಹದೊಂದಿಗೆ ಪತ್ರಿಕೆ ದ್ವೈಮಾಸಿಕ ಸಂಚಿಕೆಯಾಗಿ ಮುದ್ರಿತವಾಗುತ್ತದೆ. ಇದೀಗ ಊರಿನವರೆ ಒಂದೊಂದು ಸಂಚಿಕೆಯ ವೆಚ್ಚವನ್ನು ಪ್ರಾಯೋಜಿಸಲು ಮುಂದೆ ಬರುವಷ್ಟು ಪತ್ರಿಕೆ ಬೇರುಬಿಟ್ಟಿದೆ. ಮುಂದೆ ಹಣದ ಕೊರತೆಯಿಂದ ಪತ್ರಿಕೆ ನಿಂತರೆ ಹೇಗೆ ಎಂದು ಕೊಟ್ರೇಶ್ ಮಕ್ಕಳನ್ನು ಕೇಳಿದರೆ, ನಾವೇ ಸೇವಿಂಗ್ಸ್ ಬ್ಯಾಂಕ್ ಮೂಲಕ ಹಣ ಉಳಿಸಿ ಪ್ರಕಟಿಸೋಣ ಸರ್ ಎಂದು ಮಕ್ಕಳೆ ಕೊಟ್ರೇಶರಿಗೆ ದೈರ್ಯ ತುಂಬುತ್ತಾರೆ.

ಕರ್ನಾಟಕದ ಬೇರೆ ಬೇರೆ ಶಾಲೆಗಳಲ್ಲಿ ಶಿಕ್ಷಕರು ಶಾಲಾಪತ್ರಿಕೆಗಳನ್ನು ರೂಪಿಸುತ್ತಿದ್ದಾರೆ. ಆದರೆ ಪೆನ್ಸಿಲ್ ಪತ್ರಿಕೆಗೂ ಅವುಗಳಿಗೂ ಫರಕಿದೆ. ಮೊದಲನೆಯದಾಗಿ ಬಹುಪಾಲು ಶಿಕ್ಷಕರು ಮಕ್ಕಳಿಗಾಗಿ ಬರೆದ ಅಥವಾ ಸಂಗ್ರಹಿಸಿದ ಬರಹಗಳಿರುತ್ತವೆ. ಆದರೆ ಪೆನ್ಸಿಲ್ ಪತ್ರಿಕೆಯಲ್ಲಿ ಶಿಕ್ಷಕರ ಸಂಪಾದಕೀಯ ಹೊರತುಪಡಿಸಿದರೆ ಇಡೀ ಪತ್ರಿಕೆ ತುಂಬಾ ಶಾಲೆಯ ಮಕ್ಕಳೇ ಬರೆಯುತ್ತಾರೆ. ಮುಖ್ಯವಾಗಿ ಬೇರೆ ಪತ್ರಿಕೆಗಳು ಆಯಾ ಶಾಲೆ, ಶಾಲೆಯ ಮಕ್ಕಳಿಗೆ ಸೀಮಿತವಾಗಿದ್ದರೆ, ಪೆನ್ಸಿಲ್ ಪತ್ರಿಕೆ ಊರಿನ ಮನೆಮನೆಗೆ ಹಂಚಲ್ಪಡುತ್ತದೆ. ಹಾಗಾಗಿ ಪತ್ರಿಕೆ ಜನಸಮುದಾಯಕ್ಕೆ ವಿಸ್ತರಿಸಿದೆ. ಶಾಲಾಮಕ್ಕಳು ತಮ್ಮದೇ ಊರಿನ ಕಲಾವಿದರು, ಹಿರಿಯರು, ಸಾಧಕರನ್ನು ಸಂದರ್ಶನ ಮಾಡುತ್ತಾರೆ. ತಮ್ಮ ಊರಿನ ಹಬ್ಬ ಜಾತ್ರೆಗಳ ಬಗ್ಗೆಯೂ, ಶಾಲಾ ಕಾರ್ಯಕ್ರಮಗಳ ಬಗ್ಗೆಯೂ ವರದಿ ಮಾಡುತ್ತಾರೆ. ಹೀಗಾಗಿಯೇ ಶಾಲಾಮಕ್ಕಳನ್ನು ಸಮೀಪದ ಪತ್ರಿಕಾ ಕಚೇರಿಗಳಿಗೂ ಭೇಟಿಮಾಡಿಸಲಾಗುತ್ತದೆ. ಪತ್ರಕರ್ತರೊಂದಿಗೆ ಮಕ್ಕಳ ಸಂವಾದಗಳನ್ನು ಏರ್ಪಡಿಸಲಾಗುತ್ತದೆ. ಶಾಲಾ ಮಕ್ಕಳು ಏಕಕಾಲದಲ್ಲಿ ಪತ್ರಕರ್ತರಂತೆಯೂ, ಪತ್ರಿಕೆ ರೂಪುಗೊಳ್ಳುವ ಸಮಯಕ್ಕೆ ಶಾಲೆಯೇ ಪತ್ರಿಕಾ ಕಚೇರಿಯಂತೆಯೂ ಬದಲಾಗುತ್ತದೆ.

ಕೊಟ್ರೇಶ್ ಮಾತನಾಡುತ್ತಾ `ನಮ್ಮ ಶಾಲೆಯ ಮುಖ್ಯ ಶಿಕ್ಷಕರಾದ ಪರಮೇಶ್ ಚಿಂತಮಾನದೊಡ್ಡಿ, ಶಿಕ್ಷಕರಾದ ಪುಟ್ಟಸ್ವಾಮಿ, ಮಲ್ಲೇಶ್ ಕರಿಗಾರ, ತಿಮ್ಮಾರೆಡ್ಡಿ, ಸುನೀಲ್, ಶಿಕ್ಷಕಿಯರಾದ ಮೀನಾಕ್ಷಿ, ಬಸಿರಾ ಬೇಗಂ ಎಲ್ಲರ ಶ್ರಮದಿಂದಾಗಿ ಪೆನ್ಸಿಲ್ ಪತ್ರಿಕೆ ರೂಪುಗೊಳ್ಳುತ್ತಿದೆ. ಅಂತೆಯೇ ಬೆಳಗುರ್ಕಿಯ ಗ್ರಾಮಸ್ಥರು, ನಮ್ಮ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಮಾಧ್ಯಮದ ಸ್ನೇಹಿತರು ತುಂಬಾ ಸಹಕಾರ ಕೊಡುತ್ತಿದ್ದಾರೆ. ಇಂಡಿಯನ್ ಫೌಂಡೇಷನ್ ಫಾರ್ ದಿ ಆಟ್ರ್ಸ್(ಕಲಿ-ಕಲಿಸು) ಕಲಾ ಅಂತರ್ಗತ ಯೋಜನೆಗೆ ನಮ್ಮ ಶಾಲೆಯನ್ನು ಆಯ್ದುಕೊಂಡಿದ್ದಾರೆ. ಈ ಸಂಸ್ಥೆಯ ಕಾರ್ಯಕ್ರಮ ನಿರ್ವಾಹಕರಾದ ಕೃಷ್ಣಮೂರ್ತಿ ಹಾಗೂ ರಾಧಿಕಾ ಭಾರದ್ವಾಜ್ ಅವರುಗಳು ಪತ್ರಿಕೆಗೆ ಮಾರ್ಗದರ್ಶನ ಮಾಡುತ್ತಾರೆ. ನಾನು ಪತ್ರಿಕೆಯ ಜವಾಬ್ದಾರಿ ನಿರ್ವಹಿಸಿದರೂ, ಅದರ ಹಿಂದೆ ಈ ಎಲ್ಲರ ಸಹಕಾರ ಮತ್ತು ಪ್ರೀತಿಯೇ ಪೆನ್ಸಿಲ್ ಪತ್ರಿಕೆಯನ್ನು ಗಮನ ಸೆಳೆಯುವಂತೆ ಮಾಡಿದೆ. ಇದರಿಂದಾಗಿ ನಮ್ಮ ಜವಾಬ್ದಾರಿಯೂ ಹೆಚ್ಚಾಗಿದೆ’ ಎನ್ನುತ್ತಾರೆ.

ಇದೀಗ ಬೆಳಗುರ್ಕಿ ಶಾಲೆಯ ಮಕ್ಕಳು ಮಕ್ಕಳ ಗ್ರಾಮಸಭೆಗೆ ಹಾಜರಾಗಿ ಜಬರ್ದಸ್ತ್ ಪ್ರಶ್ನೆ ಮಾಡಿ ಗ್ರಾಮಪಂಚಾಯ್ತಿಯಿಂದ ಶಾಲೆಗೆ ಬರಬೇಕಾದ ಸೌಲಭ್ಯಗಳನ್ನು ಪಡೆದಿದ್ದಾರೆ. ಈಗಾಗಲೆ ಮಕ್ಕಳೆಲ್ಲಾ ಸೇರಿ ನಮ್ಮೂರಲ್ಲಿ ಸಾರಾಯಿ ಅಂಗಡಿಯನ್ನು ಏಕೆ ನಿಲ್ಲಿಸಬಾರದು? ನಾವು ನಮ್ಮ ಪತ್ರಿಕೆಗೆ ಈಗಿನ ಶಿಕ್ಷಣ ಮಂತ್ರಿಯನ್ನೇಕೆ ಸಂದರ್ಶನ ಮಾಡಬಾರದು ಎಂದೆಲ್ಲಾ ಯೋಚನೆ ಮಾಡಲು ಶುರು ಮಾಡಿದ್ದಾರೆ. ಹೀಗೆ ಸದ್ದಿಲ್ಲದಂತೆ ಪೆನ್ಸಿಲ್ ಪತ್ರಿಕೆ ಶಾಲಾಮಕ್ಕಳನ್ನು ಜಾಗೃತ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಪ್ರೇರೇಪಿಸುತ್ತಿದೆ. ಕೊಟ್ರೇಶ್‍ನಂತಹ ಶಿಕ್ಷಕರೂ, ಪೆನ್ಸಿಲ್‍ನಂತಹ ಪತ್ರಿಕೆಗಳು ಎಲ್ಲಾ ಸರಕಾರಿ ಶಾಲೆಗಳಲ್ಲೂ ಜೀವ ತಳೆಯಬೇಕಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...