Homeಚಳವಳಿಎರಡು ದಿನದಲ್ಲಿ ಎರಡು ಕೋಟಿಗೂ ಅಧಿಕ ಜನ ನೋಡಿದ ’ಚಪಾಕ್‌’ ಟ್ರೇಲರ್‌: ಸಮಾಜಮುಖಿ ಚಿತ್ರವಿದು

ಎರಡು ದಿನದಲ್ಲಿ ಎರಡು ಕೋಟಿಗೂ ಅಧಿಕ ಜನ ನೋಡಿದ ’ಚಪಾಕ್‌’ ಟ್ರೇಲರ್‌: ಸಮಾಜಮುಖಿ ಚಿತ್ರವಿದು

ಆಕೆ ತನ್ನ ಮುಖಮುಚ್ಚಿ ಓಡಾಡುವುದಿಲ್ಲ. ಏಕೆಂದರೆ ತಪ್ಪು ಆತನದೇ ಹೊರತು ನನ್ನದಲ್ಲ. ಮುಖ ಮುಚ್ಚಿ ಓಡಾಡಬೇಕಾದವನು ನನಗೆ ಆಸಿಡ್‌ ಎರಚಿದವನು ಎನ್ನುತ್ತಾರೆ ಲಕ್ಷ್ಮಿ ಅಗರವಾಲ್‌..

- Advertisement -
- Advertisement -

ಕಳೆದ ವಾರ ಹೈದರಾಬಾದ್‌ನ ಪಶುವೈದ್ಯೆಯನ್ನು ಅತ್ಯಾಚಾರವೆಸಗಿ ಕೊಲ್ಲಲಾಯಿತು. ಅದಾದ ಒಂದೇ ವಾರಕ್ಕೆ ಉತ್ತರಪ್ರದೇಶ ಉನ್ನಾವ್‌ನಲ್ಲಿ ಅತ್ಯಾಚಾರ ಸಂತ್ರಸ್ತೆಯ ಮೇಲೆ ಅತ್ಯಾಚಾರದ ಆರೋಪಿಗಳೆ ಪೆಟ್ರೊಲ್ ಸುರಿದು ದಹಿಸಿಬಿಟ್ಟರು. ಈ ರೀತಿಯ ಹೆಣ್ಣಮಕ್ಕಳ ಮೇಲಿನ ಅಮಾನವೀಯ ದಾಳಿಗಳ ಸಂದರ್ಭದಲ್ಲಿ ಅಂತಹುದೇ ನೊಂದ ಹೆಣ್ಣು ಮಗಳು ಹೋರಾಡಿ ಮುಂದೆ ಬರುವ ಕಥೆಯುಳ್ಳ ಸಿನಿಮಾ ’ಚಪಾಕ್‌’ ಬಾಲಿವುಡ್‌ನಲ್ಲಿ ತಯಾರಾಗಿದೆ.

ಚಪಾಕ್‌ ಹಿಂದೆ ಯಾರಿದ್ದಾರೆ?

ಜನಪ್ರಿಯ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಫಾಕ್ಸ್‌ ಸ್ಟಾರ್‌ ಸ್ಟುಡಿಯೋ ಜೊತೆ ಈ ಸೇರಿ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಜನವರಿ 10ರಂದು ಬಿಡುಗಡೆಯಾಗಲಿರುವ ಚಪಾಕ್‌ ಸಿನಿಮಾ ಹಲವು ವೈಶಿಷ್ಟ್ಯತೆಗಳನ್ನು ಒಳಗೊಂಡಿರುವ ಈ ಸಿನೆಮಾಗೆ ಗೋವಿಂದ್‌ ಸಿಂಗ್‌ ಸಂಧು ಮತ್ತು ಮೇಘನ ಗುಲ್ಜಾರ್‌ ಸಹ ಹಣ ಹೂಡಿದ್ದಾರೆ.

ಅಷ್ಟೇ ಅಲ್ಲದೇ ಈ ಸಿನಿಮಾ ಬಿಡುಗಡೆಗೂ ಮುನ್ನವೇ ಭಾರೀ ದಾಖಲೆಗಳನ್ನು ಮಾಡುತ್ತಿದೆ. ಅವುಗಳೆಂದರೆ ’ಚಪಾಕ್‌’ ಟ್ರೇಲರ್‌ ಬಿಡುಗಡೆಯಾದ ಎರಡು ದಿನದಲ್ಲೇ ಎರಡು ಕೋಟಿಗೂ ಅಧಿಕ ಜನ ಅದನ್ನು ವೀಕ್ಷಿಸಿದ್ದಾರೆ. ಅಷ್ಟು ಮಾತ್ರವಲ್ಲ ಯೂಟ್ಯೂಬ್‌ನಲ್ಲಿ ನಂಬರ್‌ 1 ಸ್ಥಾನದಲ್ಲಿ ಟ್ರೆಂಡಿಂಗ್‌ ಆಗಿರುವ ಆ ಟ್ರೇಲರ್‌ ಅನ್ನು ಸುಮಾರು 9.2 ಲಕ್ಷ ಜನರು ಅದನ್ನು ಇಷ್ಟಪಟ್ಟು ಲೈಕ್‌ ಮಾಡಿದ್ದಾರೆ.

ಟ್ರೇಲರ್‌ ನೋಡಿ.

ಏನಿದರ ಕಥಾಹಂದರ?

2005ರಲ್ಲಿ ಆಸಿಡ್‌ ದಾಳಿಗೊಳಗಾದ ಲಕ್ಷ್ಮಿ ಅಗರ್‌ವಾಲ್‌ರವರ ಜೀವನ ಕಥನದ ನೈಜ ಘಟನೆಗಳನ್ನು ಆಧರಿಸಿ ಚಪಾಕ್‌ ಸಿನೆಮಾ ಮಾಡಲಾಗಿದೆ. 1990ರಲ್ಲಿ ದೆಹಲಿಯಲ್ಲಿ ಹುಟ್ಟಿದ ಲಕ್ಷ್ಮಿ ಅಗರ್‌ವಾಲ್‌ ಎಲ್ಲರಂತೆ ಬದುಕಿನ ಬಗ್ಗೆ ಭರವಸೆ ಇಟ್ಟುಕೊಂಡಿದ್ದ ಹುಡುಗಿ. ಆದರೆ ಬಡತನದ ಕಾರಣಕ್ಕೆ ಚಿಕ್ಕ ವಯಸ್ಸಿಗೆ ಕೆಲಸಕ್ಕೆ ಸೇರಬೇಕಾದ ಅನಿವಾರ್ಯತೆಗೆ ಬಿದ್ದ ಆಕೆ ಪುಸ್ತಕದಂಗಡಿಯಲ್ಲಿ ಕೆಲಸಕ್ಕೆ ಸೇರುತ್ತಾರೆ.

ಅಂದವಾಗಿದ್ದ 15 ವರ್ಷದ ಈ ಬಾಲೆಯ ಹಿಂದೆ 32 ವರ್ಷದ ಗುಡ್ಡು ಎಂಬ ವ್ಯಕ್ತಿ ಬೀಳುತ್ತಾನೆ. ಸಹಜವಾಗಿಯೇ ಆತನ ಪ್ರೀತಿಯನ್ನು ಲಕ್ಷ್ಮಿ ನಿರಾಕರಿಸಿದ ಏಕೈಕ ಕಾರಣಕ್ಕಾಗಿ ಆ ದುಷ್ಟನಿಂದ ಆಸಿಡ್‌ ದಾಳಿಗೊಳಗಾಗುತ್ತಾಳೆ. ಅವಳ ಬಹುತೇಕ ಮುಖ ತೀವ್ರ ಹಾನಿಗೊಳಗಾಗುತ್ತದೆ.

ಆದರೆ ಕುಗ್ಗದ ಲಕ್ಷ್ಮಿ ನ್ಯಾಯಕ್ಕಾಗಿ ಕೋರ್ಟ್‌ ಮೆಟ್ಟಿಲೇರುತ್ತಾಳೆ ಮತ್ತು ದಿಟ್ಟವಾಗಿ ಹೋರಾಡಿ ಅದರಲ್ಲಿ ಜಯಸಾಧಿಸುತ್ತಾಳೆ. ಆರೋಪಿಗೆ ಜೀವಾವಧಿ ಶಿಕ್ಷೆಯಾಗುತ್ತದೆ. ಆದರೆ ಅಷ್ಟಕ್ಕೆ ಲಕ್ಷ್ಮಿ ಸುಮ್ಮನಾಗುವುದಿಲ್ಲ. ತನ್ನ ಮುಖವನ್ನು ಘಾಸಿಗೊಳಿಸಿದ್ದು ಸಾಕು ಮತ್ಯಾರ ಮುಖವೂ ಹಾಳಾಗಬಾರದೆಂಬ ದಿಟ್ಟ ತೀರ್ಮಾನಕ್ಕೆ ಬರುತ್ತಾಳೆ. ಅದಕ್ಕಾಗಿ ದೇಶಾದ್ಯಂತ ಆಸಿಡ್‌ ಮಾರಾಟ ನೀಷೇಧಿಸುವ ಆಂದೋಲಕ್ಕೆ ಕರೆ ನೀಡುತ್ತಾಳೆ.

ಲಕ್ಷ್ಮಿ ಅಗರ್‌ವಾಲ್

ನ್ಯಾಯಾಲಯದಲ್ಲಿಯೂ ಈ ವಿಚಾರವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವ ಇವಳು ಜನಾಭಿಪ್ರಾಯ ಮೂಡಿಸಲು ಮುಂದಾಗುತ್ತಾಳೆ. ಕೊನೆಗೂ ನ್ಯಾಯಾಲಯ 2013ರಲ್ಲಿ ಆಸಿಡ್‌ ಮಾರಾಟದ ಕುರಿತು ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಆದೇಶಿಸಿದೆ. ಅದರಲ್ಲಿ ಗೆದ್ದ ಆಕೆ ಹಿಂತಿರುಗಿ ನೋಡಲೇ ಇಲ್ಲ. ಆಸಿಡ್‌ ದಾಳಿ ನಿಲ್ಲಿಸಿ ಎಂಬ ಆಂದೋಲನದ ಗಟ್ಟಿ ಕೂಗಾಗುತ್ತಾಳೆ.

ಆದರೆ ಕುಟುಂಬದ ಪರಿಸ್ಥಿತಿ ಚಿಂತಾಜನಕವಾಗುತ್ತದೆ. ಟಿಬಿಯಿಂದ ತಮ್ಮ ಕೊನೆಯುಸಿರೆಳೆದರೆ ಆಕೆಯ ತಂದೆಯೂ ಸಹ ಹೃದಯಾಘಾತದಿಂದ ಮರಣಹೊಂದುತ್ತಾರೆ. ಛಲ ಬಿಡದ ಗಟ್ಟಿಗಿತ್ತಿ ಲಕ್ಷ್ಮಿ ತನ್ನ ಹೋರಾಟ ಮಾತ್ರ ನಿಲ್ಲಿಸುವುದಿಲ್ಲ.

ಆಕೆ ತನ್ನ ಮುಖಮುಚ್ಚಿ ಓಡಾಡುವುದಿಲ್ಲ. ಏಕೆಂದರೆ ತಪ್ಪು ಆತನದೇ ಹೊರತು ನನ್ನದಲ್ಲ. ಮುಖ ಮುಚ್ಚಿ ಓಡಾಡಬೇಕಾದವನು ನನಗೆ ಆಸಿಡ್‌ ಎರಚಿದವನು ಎಂದು ಹಲವು ಸಂದರ್ಶನಗಳಲ್ಲಿ ಆಕೆ ದಿಟ್ಟವಾಗಿ ಹೇಳಿದ್ದಾಳೆ. ಇದನ್ನು ನಾವು ಅತ್ಯಾಚಾರಕ್ಕೊಳಗಾದ ಹೆಣ್ಣು ಮಕ್ಕಳಿಗೂ ಅನ್ವಯಿಸಬೇಕಾಗಿದೆ. ಸಂತ್ರಸ್ತರ ತಲೆಯೆತ್ತಿ ನಡೆಯಬೇಕು. ಆರೋಪಿಗಳು ತಲೆತಗ್ಗಿಸಬೇಕು ಎಂಬ ಮನೋಭಾವವನ್ನು ಎಲ್ಲೆಡೆ ಮೂಡಿಸಬೇಕು ಎನ್ನುವುದು ಆಕೆಯ ಮನದಾಳದ ಮಾತು.

ಆಕೆಯ ಈ ಧೈರ್ಯ ಮತ್ತು ದಿಟ್ಟತನವನ್ನು ಮೆಚ್ಚಿದ ಪರ್ತಕರ್ತ ಮತ್ತು ಸಾಮಾಜಿಕ ಕಾರ್ಯಕರ್ತ ಅಲೋಕ್‌ ದೀಕ್ಷಿತ್‌ ಆಕೆಯ ಜೊತೆಗಾರನಾಗಿದ್ದಾನೆ. ಸಾಂಪ್ರಾದಾಯಿಕ ಮದುವೆ ಪದ್ಧತಿಯಲ್ಲಿ ನಂಬಿಕೆಯಿರದ ಅವರು ಜೊತೆಗೂಡಿ ಪ್ರೀತಿಯ ಜೀವನ ನಡೆಸುತ್ತಿದ್ದಾರೆ. ಅವರಿಗೆ ಒಂದು ಮಗು ಸಹ ಇದೆ.

ಚಾವ್‌ ಫೌಂಡೇಶನ್‌ ತೆರದಿರುವ ಅವರಿಬ್ಬರೂ ಆಸಿಡ್‌ ದಾಳಿಯ ವಿರುದ್ಧ ಪ್ರಚಾರಾಂದೋಲನ ಮತ್ತು ದಾಳಿಗೊಳಗಾದವರಿಗೆ ರಕ್ಷಣೆ, ಪರಿಹಾರ ಇನ್ನಿತರ ವಿಚಾರಗಳಲ್ಲಿ ತೊಡಗಿಸಿಕೊಂಡಿದೆ. ಸಾಕಷ್ಟು ಟಿವಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿರುವ ಲಕ್ಷ್ಮಿ 2016ರಲ್ಲಿ ಲಂಡನ್‌ನಲ್ಲಿ ನಡೆದ ಫ್ಯಾಷನ್‌ ವೀಕ್‌ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಿದ್ದಾರೆ. ಅಮೆರಿಕಾದ ಮಾಜಿ ಅಧ್ಯಕ್ಷ ಒಬಾಮ ಪತ್ನಿ ಮಿಶೆಲ್‌ ಲಕ್ಷ್ಮಿಯನ್ನು ಗುರುತಿಸಿ ಧೈರ್‍ಯವಂತ ಮಹಿಳೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಒಟ್ಟಿನಲ್ಲಿ ನಮಗೆ ಬರುವ ಕಷ್ಟಗಳು, ಸವಾಲುಗಳನ್ನೇ ದಾರಿಯಾಗಿ ಮಾಡಿಕೊಂಡು ಸಾಧನೆಗೈಯ್ಯಬೇಕು ಮತ್ತು ನೊಂದವರಿಗೆ ಸಹಾಯ ಮಾಡಬೇಕು ಎಂಬುದನ್ನು ನಾವು ಲಕ್ಷ್ಮಿಯಿಂದ ಕಲಿಯಬೇಕಾಗಿದೆ. ಈಕೆಯ ಇಷ್ಟೆಲ್ಲಾ ಸಾಧನೆ ನೋಡಿಯೇ ಚಪಾಕ್‌ ಸಿನಿಮಾ ರಚನೆಗೊಂಡಿದೆ.

ಮೇಘನ ಗುಲ್ಜಾರ್‌

ಇನ್ನು ಮಹತ್ವದ ಈ ಸಿನಿಮಾಗೆ ರಾಝಿ ಮತ್ತು ತಲ್ವಾರ್‌ ನಂತಹ ಹಿಟ್‌ ಸಿನಿಮಾಗಳನ್ನು ಕೊಟ್ಟ ಖ್ಯಾತ ನಿರ್ದೇಶಕಿ ಮೇಘನ ಗುಲ್ಜಾರ್‌ರವರು ಆಕ್ಷಮ್‌ ಕಟ್‌ ಹೇಳಿದ್ದಾರೆ.

ದೀಪಿಕಾ ಪಡುಕೋಣೆ ಬಗ್ಗೆ ಒಂದಿಷ್ಟು…

ಬಾಲಿವುಡ್‌ ತಾರೆ ದೀಪಿಕಾ ಪಡುಕೋಣೆ ಸಿನಿಮಾಗಷ್ಟೇ ಸೀಮಿತವಾಗಿಲ್ಲ. ಅವರು ಮಾನಸಿಕ ಖಿನ್ನತೆಯ ವಿರುದ್ಧ ಅರಿವು ಮೂಡಿಸಲು ದಿ ಲೈವ್‌ ಲವ್‌ ಲಾಫ್‌ ಫೌಂಡೇಶನ್‌ ಆರಂಭಿಸಿದ್ದಾರೆ. ಚಿಕ್ಕಂದಿನಲ್ಲಿ ಮತ್ತು ಸಿನೆಮಾ ತಾರೆಯಾದ ನಂತರವೂ ಸ್ವತಃ ಖಿನ್ನತೆಯಿಂದ ಬಳಲಿದ ದೀಪಿಕಾ ತನಗಾದ ನೋವು ಮತ್ಯಾರಿಗೂ ಆಗಬಾರದೆಂದು ಖಿನ್ನತೆಯ ವಿರುದ್ಧ ಸಮರ ಸಾರಿದ್ದಾರೆ.

ಕರ್ನಾಟಕದ ಕೊಪ್ಪಳ ಜಿಲ್ಲೆಗೂ ಬಂದು ಈ ಕುರಿತು ಅರಿವು ಮೂಡಿಸುತ್ತಿರುವ ಅವರು ಮಾನಸಿಕ ಖಿನ್ನತೆಯಿಂದ ಉಂಟಾಗುವ  ಆತ್ಮಹತ್ಯೆಗಳನ್ನು ತಡೆಯುವಲ್ಲಿ ಕೆಲಸ ಮಾಡುತ್ತಿದ್ದಾರೆ.

ಇದೇ ಮಾದರಿಯ ಚಿತ್ರ ಉಯರೆ..

ಇನ್ನು ಈ ವರ್ಷ ತೆರೆಕಂಡ ಮಲೆಯಾಳಂ ಸಿನೆಮಾ ಕೂಡ ಆಸಿಡ್‌ ದಾಳಿಗೊಳಗಾದ ಸಂತ್ರಸ್ತೆಯ ದಿಟ್ಟ ಹೋರಾಟವನ್ನು ಬಿಚ್ಚಿಡುತ್ತದೆ. ಪೈಲೆಟ್‌ ಆಗಿ ಆಕಾಸದಲ್ಲಿ ಹಕ್ಕಿಯ ರೀತಿ ಹಾರಬೇಕೆಂದು ಚಿಕ್ಕಂದಿನಿಂದ ಕನಸು ಕಾಣುವ ಹುಡುಗಿಗೆ ಆತನ ಪ್ರಿಯತಮೆನೆ ಕಲ್ಲು ಗುಂಡಿನ ಹಾಗೆ ಆಕೆಯ ಕಾಲಿಗೆ ಗಂಟು ಬಿದ್ದಿರುತ್ತಾನೆ.

ಪೈಲೆಟ್‌ ತರಬೇತಿಗಾಗಿ ಮುಂಬೈ ಸೇರುವ ಹುಡುಗಿ, ಆಕೆಯ ಬಗ್ಗೆ ಅನುಮಾನಿಸವು ಪ್ರಿಯತಮೆ, ಜೀವಕ್ಕಿಂತ ಹೆಚ್ಚು ಮಗಳನ್ನು ಪ್ರೀತಿಸುವ ಆಕೆಯ ತಂದೆ.. ಇವಿಷ್ಟರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಪ್ರಯತಮೆನೇ ಆಕೆಯ ಮೇಲೆ ಆಸಿಡ್‌ ಎರಚುತ್ತಾನೆ. ಆ ಮೂಲಕ ಆಕೆಯ ಕನಸುಗಳನ್ನು ಭಗ್ನಗೊಳಿಸಲು ಯತ್ನಿಸುತ್ತಾನೆ.

ಛಲಬಿಡದ ಆಕೆ ಪೈಲೆಟ್‌ ಆಗದಿದ್ದರೂ ಕೊನೆಗೆ ಗಗನಸಖಿಯಾಗುತ್ತಾಳೆ. ಆದರೆ ಆರೋಪಿ ಮಾತ್ರ ತನ್ನ ಕೃತ್ಯಕ್ಕೆ ಪಶ್ಚಾತಾಪ ಪಡದೇ ಆಕೆಗೆ ಮತ್ತೆ ತೊಂದರೆ ಕೊಟ್ಟು ಆ ಕೆಲಸದಿಂದಲೂ ಆಕೆಯನ್ನು ಬಿಡಿಸುತ್ತಾನೆ. ಅಲ್ಲಿಂದ ಹೋರಾಟ ಮುಂದುವರೆಸುವ ಆಕೆ ನ್ಯಾಯಾಲಯದಲ್ಲಿಯೂ ಗೆಲ್ಲುವುದು ಮತ್ತು ಸಂಕಷ್ಟದಲ್ಲಿ ಪೈಲೆಟ್‌ ಆಗಿ ಜನರನ್ನು ರಕ್ಷಿಸುವ ಮೂಲಕ ಜನಮನವನ್ನು ಗೆಲ್ಲುತ್ತಾಳೆ.

ಪಾರ್ವತಿ, ತೊವಿನೊ ಥಾಮಸ್‌, ಆಸಿಫ್‌ ಅಲಿ ಅಭಿನಯದ ಈ ಚಿತ್ರ ಅತ್ಯುತ್ತಮ ಸಂದೇಶ ಬೀರುವ ಚಿತ್ರವಾಗಿ ಎಲ್ಲರ ಮನಗೆದ್ದಿದೆ. ಅಲ್ಲಿನ ಹಾಡುಗಳು ಸಹ ಸ್ಪೂರ್ತಿಯುತವಾಗಿದೆ.

ಒಟ್ಟಿನಲ್ಲಿ ಈ ರೀತಿಯ ಸಮಾಜಮುಖಿ ಮತ್ತಷ್ಟು ಬರಲಿ. ಇದನ್ನು ನೋಡಿದ ಜನ ಅಲ್ಲಿನ ಸಂದೇಶಗಳನ್ನು ಅಳವಡಿಸಿಕೊಳ್ಳಲ್ಲಿ. ಹೆಣ್ಣು ಮಕ್ಕಳ ಮೇಲಿನ ಅಪರಾಧಗಳು ನಿಲ್ಲಲ್ಲಿ ಎಂಬುದು ನಮ್ಮ ಕಾಳಜಿ. ಆ ನಿಟ್ಟಿನಲ್ಲಿ ಚಿತ್ರತಂಡಕ್ಕೆ ಶುಭಕೋರೋಣ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...