Homeಚಳವಳಿಎರಡು ದಿನದಲ್ಲಿ ಎರಡು ಕೋಟಿಗೂ ಅಧಿಕ ಜನ ನೋಡಿದ ’ಚಪಾಕ್‌’ ಟ್ರೇಲರ್‌: ಸಮಾಜಮುಖಿ ಚಿತ್ರವಿದು

ಎರಡು ದಿನದಲ್ಲಿ ಎರಡು ಕೋಟಿಗೂ ಅಧಿಕ ಜನ ನೋಡಿದ ’ಚಪಾಕ್‌’ ಟ್ರೇಲರ್‌: ಸಮಾಜಮುಖಿ ಚಿತ್ರವಿದು

ಆಕೆ ತನ್ನ ಮುಖಮುಚ್ಚಿ ಓಡಾಡುವುದಿಲ್ಲ. ಏಕೆಂದರೆ ತಪ್ಪು ಆತನದೇ ಹೊರತು ನನ್ನದಲ್ಲ. ಮುಖ ಮುಚ್ಚಿ ಓಡಾಡಬೇಕಾದವನು ನನಗೆ ಆಸಿಡ್‌ ಎರಚಿದವನು ಎನ್ನುತ್ತಾರೆ ಲಕ್ಷ್ಮಿ ಅಗರವಾಲ್‌..

- Advertisement -
- Advertisement -

ಕಳೆದ ವಾರ ಹೈದರಾಬಾದ್‌ನ ಪಶುವೈದ್ಯೆಯನ್ನು ಅತ್ಯಾಚಾರವೆಸಗಿ ಕೊಲ್ಲಲಾಯಿತು. ಅದಾದ ಒಂದೇ ವಾರಕ್ಕೆ ಉತ್ತರಪ್ರದೇಶ ಉನ್ನಾವ್‌ನಲ್ಲಿ ಅತ್ಯಾಚಾರ ಸಂತ್ರಸ್ತೆಯ ಮೇಲೆ ಅತ್ಯಾಚಾರದ ಆರೋಪಿಗಳೆ ಪೆಟ್ರೊಲ್ ಸುರಿದು ದಹಿಸಿಬಿಟ್ಟರು. ಈ ರೀತಿಯ ಹೆಣ್ಣಮಕ್ಕಳ ಮೇಲಿನ ಅಮಾನವೀಯ ದಾಳಿಗಳ ಸಂದರ್ಭದಲ್ಲಿ ಅಂತಹುದೇ ನೊಂದ ಹೆಣ್ಣು ಮಗಳು ಹೋರಾಡಿ ಮುಂದೆ ಬರುವ ಕಥೆಯುಳ್ಳ ಸಿನಿಮಾ ’ಚಪಾಕ್‌’ ಬಾಲಿವುಡ್‌ನಲ್ಲಿ ತಯಾರಾಗಿದೆ.

ಚಪಾಕ್‌ ಹಿಂದೆ ಯಾರಿದ್ದಾರೆ?

ಜನಪ್ರಿಯ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಫಾಕ್ಸ್‌ ಸ್ಟಾರ್‌ ಸ್ಟುಡಿಯೋ ಜೊತೆ ಈ ಸೇರಿ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಜನವರಿ 10ರಂದು ಬಿಡುಗಡೆಯಾಗಲಿರುವ ಚಪಾಕ್‌ ಸಿನಿಮಾ ಹಲವು ವೈಶಿಷ್ಟ್ಯತೆಗಳನ್ನು ಒಳಗೊಂಡಿರುವ ಈ ಸಿನೆಮಾಗೆ ಗೋವಿಂದ್‌ ಸಿಂಗ್‌ ಸಂಧು ಮತ್ತು ಮೇಘನ ಗುಲ್ಜಾರ್‌ ಸಹ ಹಣ ಹೂಡಿದ್ದಾರೆ.

ಅಷ್ಟೇ ಅಲ್ಲದೇ ಈ ಸಿನಿಮಾ ಬಿಡುಗಡೆಗೂ ಮುನ್ನವೇ ಭಾರೀ ದಾಖಲೆಗಳನ್ನು ಮಾಡುತ್ತಿದೆ. ಅವುಗಳೆಂದರೆ ’ಚಪಾಕ್‌’ ಟ್ರೇಲರ್‌ ಬಿಡುಗಡೆಯಾದ ಎರಡು ದಿನದಲ್ಲೇ ಎರಡು ಕೋಟಿಗೂ ಅಧಿಕ ಜನ ಅದನ್ನು ವೀಕ್ಷಿಸಿದ್ದಾರೆ. ಅಷ್ಟು ಮಾತ್ರವಲ್ಲ ಯೂಟ್ಯೂಬ್‌ನಲ್ಲಿ ನಂಬರ್‌ 1 ಸ್ಥಾನದಲ್ಲಿ ಟ್ರೆಂಡಿಂಗ್‌ ಆಗಿರುವ ಆ ಟ್ರೇಲರ್‌ ಅನ್ನು ಸುಮಾರು 9.2 ಲಕ್ಷ ಜನರು ಅದನ್ನು ಇಷ್ಟಪಟ್ಟು ಲೈಕ್‌ ಮಾಡಿದ್ದಾರೆ.

ಟ್ರೇಲರ್‌ ನೋಡಿ.

ಏನಿದರ ಕಥಾಹಂದರ?

2005ರಲ್ಲಿ ಆಸಿಡ್‌ ದಾಳಿಗೊಳಗಾದ ಲಕ್ಷ್ಮಿ ಅಗರ್‌ವಾಲ್‌ರವರ ಜೀವನ ಕಥನದ ನೈಜ ಘಟನೆಗಳನ್ನು ಆಧರಿಸಿ ಚಪಾಕ್‌ ಸಿನೆಮಾ ಮಾಡಲಾಗಿದೆ. 1990ರಲ್ಲಿ ದೆಹಲಿಯಲ್ಲಿ ಹುಟ್ಟಿದ ಲಕ್ಷ್ಮಿ ಅಗರ್‌ವಾಲ್‌ ಎಲ್ಲರಂತೆ ಬದುಕಿನ ಬಗ್ಗೆ ಭರವಸೆ ಇಟ್ಟುಕೊಂಡಿದ್ದ ಹುಡುಗಿ. ಆದರೆ ಬಡತನದ ಕಾರಣಕ್ಕೆ ಚಿಕ್ಕ ವಯಸ್ಸಿಗೆ ಕೆಲಸಕ್ಕೆ ಸೇರಬೇಕಾದ ಅನಿವಾರ್ಯತೆಗೆ ಬಿದ್ದ ಆಕೆ ಪುಸ್ತಕದಂಗಡಿಯಲ್ಲಿ ಕೆಲಸಕ್ಕೆ ಸೇರುತ್ತಾರೆ.

ಅಂದವಾಗಿದ್ದ 15 ವರ್ಷದ ಈ ಬಾಲೆಯ ಹಿಂದೆ 32 ವರ್ಷದ ಗುಡ್ಡು ಎಂಬ ವ್ಯಕ್ತಿ ಬೀಳುತ್ತಾನೆ. ಸಹಜವಾಗಿಯೇ ಆತನ ಪ್ರೀತಿಯನ್ನು ಲಕ್ಷ್ಮಿ ನಿರಾಕರಿಸಿದ ಏಕೈಕ ಕಾರಣಕ್ಕಾಗಿ ಆ ದುಷ್ಟನಿಂದ ಆಸಿಡ್‌ ದಾಳಿಗೊಳಗಾಗುತ್ತಾಳೆ. ಅವಳ ಬಹುತೇಕ ಮುಖ ತೀವ್ರ ಹಾನಿಗೊಳಗಾಗುತ್ತದೆ.

ಆದರೆ ಕುಗ್ಗದ ಲಕ್ಷ್ಮಿ ನ್ಯಾಯಕ್ಕಾಗಿ ಕೋರ್ಟ್‌ ಮೆಟ್ಟಿಲೇರುತ್ತಾಳೆ ಮತ್ತು ದಿಟ್ಟವಾಗಿ ಹೋರಾಡಿ ಅದರಲ್ಲಿ ಜಯಸಾಧಿಸುತ್ತಾಳೆ. ಆರೋಪಿಗೆ ಜೀವಾವಧಿ ಶಿಕ್ಷೆಯಾಗುತ್ತದೆ. ಆದರೆ ಅಷ್ಟಕ್ಕೆ ಲಕ್ಷ್ಮಿ ಸುಮ್ಮನಾಗುವುದಿಲ್ಲ. ತನ್ನ ಮುಖವನ್ನು ಘಾಸಿಗೊಳಿಸಿದ್ದು ಸಾಕು ಮತ್ಯಾರ ಮುಖವೂ ಹಾಳಾಗಬಾರದೆಂಬ ದಿಟ್ಟ ತೀರ್ಮಾನಕ್ಕೆ ಬರುತ್ತಾಳೆ. ಅದಕ್ಕಾಗಿ ದೇಶಾದ್ಯಂತ ಆಸಿಡ್‌ ಮಾರಾಟ ನೀಷೇಧಿಸುವ ಆಂದೋಲಕ್ಕೆ ಕರೆ ನೀಡುತ್ತಾಳೆ.

ಲಕ್ಷ್ಮಿ ಅಗರ್‌ವಾಲ್

ನ್ಯಾಯಾಲಯದಲ್ಲಿಯೂ ಈ ವಿಚಾರವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವ ಇವಳು ಜನಾಭಿಪ್ರಾಯ ಮೂಡಿಸಲು ಮುಂದಾಗುತ್ತಾಳೆ. ಕೊನೆಗೂ ನ್ಯಾಯಾಲಯ 2013ರಲ್ಲಿ ಆಸಿಡ್‌ ಮಾರಾಟದ ಕುರಿತು ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಆದೇಶಿಸಿದೆ. ಅದರಲ್ಲಿ ಗೆದ್ದ ಆಕೆ ಹಿಂತಿರುಗಿ ನೋಡಲೇ ಇಲ್ಲ. ಆಸಿಡ್‌ ದಾಳಿ ನಿಲ್ಲಿಸಿ ಎಂಬ ಆಂದೋಲನದ ಗಟ್ಟಿ ಕೂಗಾಗುತ್ತಾಳೆ.

ಆದರೆ ಕುಟುಂಬದ ಪರಿಸ್ಥಿತಿ ಚಿಂತಾಜನಕವಾಗುತ್ತದೆ. ಟಿಬಿಯಿಂದ ತಮ್ಮ ಕೊನೆಯುಸಿರೆಳೆದರೆ ಆಕೆಯ ತಂದೆಯೂ ಸಹ ಹೃದಯಾಘಾತದಿಂದ ಮರಣಹೊಂದುತ್ತಾರೆ. ಛಲ ಬಿಡದ ಗಟ್ಟಿಗಿತ್ತಿ ಲಕ್ಷ್ಮಿ ತನ್ನ ಹೋರಾಟ ಮಾತ್ರ ನಿಲ್ಲಿಸುವುದಿಲ್ಲ.

ಆಕೆ ತನ್ನ ಮುಖಮುಚ್ಚಿ ಓಡಾಡುವುದಿಲ್ಲ. ಏಕೆಂದರೆ ತಪ್ಪು ಆತನದೇ ಹೊರತು ನನ್ನದಲ್ಲ. ಮುಖ ಮುಚ್ಚಿ ಓಡಾಡಬೇಕಾದವನು ನನಗೆ ಆಸಿಡ್‌ ಎರಚಿದವನು ಎಂದು ಹಲವು ಸಂದರ್ಶನಗಳಲ್ಲಿ ಆಕೆ ದಿಟ್ಟವಾಗಿ ಹೇಳಿದ್ದಾಳೆ. ಇದನ್ನು ನಾವು ಅತ್ಯಾಚಾರಕ್ಕೊಳಗಾದ ಹೆಣ್ಣು ಮಕ್ಕಳಿಗೂ ಅನ್ವಯಿಸಬೇಕಾಗಿದೆ. ಸಂತ್ರಸ್ತರ ತಲೆಯೆತ್ತಿ ನಡೆಯಬೇಕು. ಆರೋಪಿಗಳು ತಲೆತಗ್ಗಿಸಬೇಕು ಎಂಬ ಮನೋಭಾವವನ್ನು ಎಲ್ಲೆಡೆ ಮೂಡಿಸಬೇಕು ಎನ್ನುವುದು ಆಕೆಯ ಮನದಾಳದ ಮಾತು.

ಆಕೆಯ ಈ ಧೈರ್ಯ ಮತ್ತು ದಿಟ್ಟತನವನ್ನು ಮೆಚ್ಚಿದ ಪರ್ತಕರ್ತ ಮತ್ತು ಸಾಮಾಜಿಕ ಕಾರ್ಯಕರ್ತ ಅಲೋಕ್‌ ದೀಕ್ಷಿತ್‌ ಆಕೆಯ ಜೊತೆಗಾರನಾಗಿದ್ದಾನೆ. ಸಾಂಪ್ರಾದಾಯಿಕ ಮದುವೆ ಪದ್ಧತಿಯಲ್ಲಿ ನಂಬಿಕೆಯಿರದ ಅವರು ಜೊತೆಗೂಡಿ ಪ್ರೀತಿಯ ಜೀವನ ನಡೆಸುತ್ತಿದ್ದಾರೆ. ಅವರಿಗೆ ಒಂದು ಮಗು ಸಹ ಇದೆ.

ಚಾವ್‌ ಫೌಂಡೇಶನ್‌ ತೆರದಿರುವ ಅವರಿಬ್ಬರೂ ಆಸಿಡ್‌ ದಾಳಿಯ ವಿರುದ್ಧ ಪ್ರಚಾರಾಂದೋಲನ ಮತ್ತು ದಾಳಿಗೊಳಗಾದವರಿಗೆ ರಕ್ಷಣೆ, ಪರಿಹಾರ ಇನ್ನಿತರ ವಿಚಾರಗಳಲ್ಲಿ ತೊಡಗಿಸಿಕೊಂಡಿದೆ. ಸಾಕಷ್ಟು ಟಿವಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿರುವ ಲಕ್ಷ್ಮಿ 2016ರಲ್ಲಿ ಲಂಡನ್‌ನಲ್ಲಿ ನಡೆದ ಫ್ಯಾಷನ್‌ ವೀಕ್‌ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಿದ್ದಾರೆ. ಅಮೆರಿಕಾದ ಮಾಜಿ ಅಧ್ಯಕ್ಷ ಒಬಾಮ ಪತ್ನಿ ಮಿಶೆಲ್‌ ಲಕ್ಷ್ಮಿಯನ್ನು ಗುರುತಿಸಿ ಧೈರ್‍ಯವಂತ ಮಹಿಳೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಒಟ್ಟಿನಲ್ಲಿ ನಮಗೆ ಬರುವ ಕಷ್ಟಗಳು, ಸವಾಲುಗಳನ್ನೇ ದಾರಿಯಾಗಿ ಮಾಡಿಕೊಂಡು ಸಾಧನೆಗೈಯ್ಯಬೇಕು ಮತ್ತು ನೊಂದವರಿಗೆ ಸಹಾಯ ಮಾಡಬೇಕು ಎಂಬುದನ್ನು ನಾವು ಲಕ್ಷ್ಮಿಯಿಂದ ಕಲಿಯಬೇಕಾಗಿದೆ. ಈಕೆಯ ಇಷ್ಟೆಲ್ಲಾ ಸಾಧನೆ ನೋಡಿಯೇ ಚಪಾಕ್‌ ಸಿನಿಮಾ ರಚನೆಗೊಂಡಿದೆ.

ಮೇಘನ ಗುಲ್ಜಾರ್‌

ಇನ್ನು ಮಹತ್ವದ ಈ ಸಿನಿಮಾಗೆ ರಾಝಿ ಮತ್ತು ತಲ್ವಾರ್‌ ನಂತಹ ಹಿಟ್‌ ಸಿನಿಮಾಗಳನ್ನು ಕೊಟ್ಟ ಖ್ಯಾತ ನಿರ್ದೇಶಕಿ ಮೇಘನ ಗುಲ್ಜಾರ್‌ರವರು ಆಕ್ಷಮ್‌ ಕಟ್‌ ಹೇಳಿದ್ದಾರೆ.

ದೀಪಿಕಾ ಪಡುಕೋಣೆ ಬಗ್ಗೆ ಒಂದಿಷ್ಟು…

ಬಾಲಿವುಡ್‌ ತಾರೆ ದೀಪಿಕಾ ಪಡುಕೋಣೆ ಸಿನಿಮಾಗಷ್ಟೇ ಸೀಮಿತವಾಗಿಲ್ಲ. ಅವರು ಮಾನಸಿಕ ಖಿನ್ನತೆಯ ವಿರುದ್ಧ ಅರಿವು ಮೂಡಿಸಲು ದಿ ಲೈವ್‌ ಲವ್‌ ಲಾಫ್‌ ಫೌಂಡೇಶನ್‌ ಆರಂಭಿಸಿದ್ದಾರೆ. ಚಿಕ್ಕಂದಿನಲ್ಲಿ ಮತ್ತು ಸಿನೆಮಾ ತಾರೆಯಾದ ನಂತರವೂ ಸ್ವತಃ ಖಿನ್ನತೆಯಿಂದ ಬಳಲಿದ ದೀಪಿಕಾ ತನಗಾದ ನೋವು ಮತ್ಯಾರಿಗೂ ಆಗಬಾರದೆಂದು ಖಿನ್ನತೆಯ ವಿರುದ್ಧ ಸಮರ ಸಾರಿದ್ದಾರೆ.

ಕರ್ನಾಟಕದ ಕೊಪ್ಪಳ ಜಿಲ್ಲೆಗೂ ಬಂದು ಈ ಕುರಿತು ಅರಿವು ಮೂಡಿಸುತ್ತಿರುವ ಅವರು ಮಾನಸಿಕ ಖಿನ್ನತೆಯಿಂದ ಉಂಟಾಗುವ  ಆತ್ಮಹತ್ಯೆಗಳನ್ನು ತಡೆಯುವಲ್ಲಿ ಕೆಲಸ ಮಾಡುತ್ತಿದ್ದಾರೆ.

ಇದೇ ಮಾದರಿಯ ಚಿತ್ರ ಉಯರೆ..

ಇನ್ನು ಈ ವರ್ಷ ತೆರೆಕಂಡ ಮಲೆಯಾಳಂ ಸಿನೆಮಾ ಕೂಡ ಆಸಿಡ್‌ ದಾಳಿಗೊಳಗಾದ ಸಂತ್ರಸ್ತೆಯ ದಿಟ್ಟ ಹೋರಾಟವನ್ನು ಬಿಚ್ಚಿಡುತ್ತದೆ. ಪೈಲೆಟ್‌ ಆಗಿ ಆಕಾಸದಲ್ಲಿ ಹಕ್ಕಿಯ ರೀತಿ ಹಾರಬೇಕೆಂದು ಚಿಕ್ಕಂದಿನಿಂದ ಕನಸು ಕಾಣುವ ಹುಡುಗಿಗೆ ಆತನ ಪ್ರಿಯತಮೆನೆ ಕಲ್ಲು ಗುಂಡಿನ ಹಾಗೆ ಆಕೆಯ ಕಾಲಿಗೆ ಗಂಟು ಬಿದ್ದಿರುತ್ತಾನೆ.

ಪೈಲೆಟ್‌ ತರಬೇತಿಗಾಗಿ ಮುಂಬೈ ಸೇರುವ ಹುಡುಗಿ, ಆಕೆಯ ಬಗ್ಗೆ ಅನುಮಾನಿಸವು ಪ್ರಿಯತಮೆ, ಜೀವಕ್ಕಿಂತ ಹೆಚ್ಚು ಮಗಳನ್ನು ಪ್ರೀತಿಸುವ ಆಕೆಯ ತಂದೆ.. ಇವಿಷ್ಟರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಪ್ರಯತಮೆನೇ ಆಕೆಯ ಮೇಲೆ ಆಸಿಡ್‌ ಎರಚುತ್ತಾನೆ. ಆ ಮೂಲಕ ಆಕೆಯ ಕನಸುಗಳನ್ನು ಭಗ್ನಗೊಳಿಸಲು ಯತ್ನಿಸುತ್ತಾನೆ.

ಛಲಬಿಡದ ಆಕೆ ಪೈಲೆಟ್‌ ಆಗದಿದ್ದರೂ ಕೊನೆಗೆ ಗಗನಸಖಿಯಾಗುತ್ತಾಳೆ. ಆದರೆ ಆರೋಪಿ ಮಾತ್ರ ತನ್ನ ಕೃತ್ಯಕ್ಕೆ ಪಶ್ಚಾತಾಪ ಪಡದೇ ಆಕೆಗೆ ಮತ್ತೆ ತೊಂದರೆ ಕೊಟ್ಟು ಆ ಕೆಲಸದಿಂದಲೂ ಆಕೆಯನ್ನು ಬಿಡಿಸುತ್ತಾನೆ. ಅಲ್ಲಿಂದ ಹೋರಾಟ ಮುಂದುವರೆಸುವ ಆಕೆ ನ್ಯಾಯಾಲಯದಲ್ಲಿಯೂ ಗೆಲ್ಲುವುದು ಮತ್ತು ಸಂಕಷ್ಟದಲ್ಲಿ ಪೈಲೆಟ್‌ ಆಗಿ ಜನರನ್ನು ರಕ್ಷಿಸುವ ಮೂಲಕ ಜನಮನವನ್ನು ಗೆಲ್ಲುತ್ತಾಳೆ.

ಪಾರ್ವತಿ, ತೊವಿನೊ ಥಾಮಸ್‌, ಆಸಿಫ್‌ ಅಲಿ ಅಭಿನಯದ ಈ ಚಿತ್ರ ಅತ್ಯುತ್ತಮ ಸಂದೇಶ ಬೀರುವ ಚಿತ್ರವಾಗಿ ಎಲ್ಲರ ಮನಗೆದ್ದಿದೆ. ಅಲ್ಲಿನ ಹಾಡುಗಳು ಸಹ ಸ್ಪೂರ್ತಿಯುತವಾಗಿದೆ.

ಒಟ್ಟಿನಲ್ಲಿ ಈ ರೀತಿಯ ಸಮಾಜಮುಖಿ ಮತ್ತಷ್ಟು ಬರಲಿ. ಇದನ್ನು ನೋಡಿದ ಜನ ಅಲ್ಲಿನ ಸಂದೇಶಗಳನ್ನು ಅಳವಡಿಸಿಕೊಳ್ಳಲ್ಲಿ. ಹೆಣ್ಣು ಮಕ್ಕಳ ಮೇಲಿನ ಅಪರಾಧಗಳು ನಿಲ್ಲಲ್ಲಿ ಎಂಬುದು ನಮ್ಮ ಕಾಳಜಿ. ಆ ನಿಟ್ಟಿನಲ್ಲಿ ಚಿತ್ರತಂಡಕ್ಕೆ ಶುಭಕೋರೋಣ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...

ಕರೂರ್ ಕಾಲ್ತುಳಿತ ಮೃತರ ಕುಟುಂಬಸ್ಥರಿಗೆ ನೀಡಿದ್ದ ಸರ್ಕಾರಿ ಉದ್ಯೋಗವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಕರೂರ್ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಿದ್ದ ತಮಿಳುನಾಡು ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಈ ನೇಮಕಾತಿಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (PIL) ವಿಚಾರಣೆ...

ವಿದ್ಯಾರ್ಥಿಗಳ ಬಂಧನ: ಮತ್ತೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ‘ಕಾಕ್ರೋಚ್ ಜನತಾ ಪಾರ್ಟಿ’

ಪ್ರತಿಭಟನಾಕಾರರ ವಿರುದ್ಧ ಯಾವುದೇ ಪೋಲೀಸ್ ಕ್ರಮ ಕೈಗೊಳ್ಳುವುದಿಲ್ಲ ಎಂಬ ಒಪ್ಪಂದವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು 'ಕಾಕ್ರೋಚ್ ಜನತಾ ಪಾರ್ಟಿ' (CJP) ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಎಕ್ಸ್ (X) ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ...

ಜೆನ್ ಝೀ ಪೀಳಿಗೆಯ ಹೋರಾಟ ಮತ್ತು ಮುಂದಿನ ನಡೆ.!

NEET ಪರೀಕ್ಷೆಯ ಅಕ್ರಮ ಹಾಗೂ ಪೇಪರ್ ಸೋರಿಕೆ ವಿರುದ್ಧ 'ಜೆನ್ ಝೀ' (Gen Z) ಯುವ ಸಮೂಹ ನಡೆಸಿದ ಹೋರಾಟವು ಕೇವಲ ಒಂದು ತಾತ್ಕಾಲಿಕ ವಿದ್ಯಾರ್ಥಿ ಹೋರಾಟವಾಗಿ ಉಳಿದಿಲ್ಲ. ಇದು ಪ್ರಭುತ್ವದ ಅಹಂಕಾರವನ್ನು...

ಬಿಹಾರ| ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ಬಳಸಿದ ಪೊಲೀಸ್‌ ಕಾನ್‌ಸ್ಟೆಬಲ್ ಅಮಾನತು

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜುಲೈ 25 ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ರೈಫಲ್ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು...

ನಾಳೆ ನನ್ನ ಮಗನೂ ಮೋದಿ ವಿರುದ್ಧ ಮಾತನಾಡಬಹುದು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ

ಅಸ್ಸಾಂ ಸಚಿವರೊಬ್ಬರ ಮಗಳು ಗುವಾಹಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿರುವುದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ...

ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು: ಆರ್‌ಎಸ್‌ಎಸ್ ಸಿದ್ಧಾಂತವಾದಿ ಟಿ.ಜಿ. ಮೋಹನ್‌ದಾಸ್ ವಿಕೃತ ಹೇಳಿಕೆ

ನವದೆಹಲಿ: ಕೇಂದ್ರ ಸರ್ಕಾರದ ಶಿಕ್ಷಣ ನೀತಿಗಳು ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದ ಯುವಜನರ ವಿರುದ್ಧ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ‘ಪೆಲೆಟ್‌ ಗನ್’ ದಾಳಿ ದೃಢ; ನಿಯಮಾವಳಿಗಳನ್ನು ಉಲ್ಲಂಘಿಸಿ ಬಲಪ್ರಯೋಗ ನಡೆಸಿರುವ RAF

ನವದೆಹಲಿ: ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಕೇಂದ್ರದ ಸಶಸ್ತ್ರ ಪಡೆಗಳು ಎಸಗಿದ ದೌರ್ಜನ್ಯದ ಕರಾಳ ಮುಖ ಕೊನೆಗೂ ಅನಾವರಣಗೊಂಡಿದೆ. ಜುಲೈ 20ರಂದು ದೆಹಲಿಯ ಕನ್ಹಾಟ್ ಪ್ಲೇಸ್ ಪ್ರದೇಶದಲ್ಲಿ...

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...