Homeಕರ್ನಾಟಕಬಾಗಲಕೋಟೆ: ಲಿಂಗಾಯತ ಯುವತಿಯನ್ನು ಪ್ರೀತಿಸಿದ ಕುರುಬ ಯುವಕನಿಗೆ ಬೂಟು ನೆಕ್ಕಿಸಿದ ಪೊಲೀಸರು, ಜಾತಿವಾದಿಗಳು!

ಬಾಗಲಕೋಟೆ: ಲಿಂಗಾಯತ ಯುವತಿಯನ್ನು ಪ್ರೀತಿಸಿದ ಕುರುಬ ಯುವಕನಿಗೆ ಬೂಟು ನೆಕ್ಕಿಸಿದ ಪೊಲೀಸರು, ಜಾತಿವಾದಿಗಳು!

ಯುವಕನ ಕುಟುಂಬಕ್ಕೆ ಭೀಕರವಾಗಿ ಥಳಿಸಲಾಗಿದೆ. ಆ ಹುಡುಗಿಯನ್ನು ಬಿಡದಿದ್ದರೆ ನಿಮ್ಮನ್ನು ಕೊಲೆ ಮಾಡುತ್ತಾರೆಂದು ಪೊಲೀಸರೇ ಬೆದರಿಸಿದ್ದಾರೆ ಎಂದು ಆರೋಪಿಸಲಾಗಿದೆ.

- Advertisement -
- Advertisement -

ಲಿಂಗಾಯತ ಯುವತಿಯನ್ನು ಪ್ರೀತಿಸಿ ಮದುವೆಯಾದ ಕುರುಬ ಸಮುದಾಯದ ಯುವಕನಿಗೆ ಹಾಗೂ ಆತನ ಕುಟುಂಬಕ್ಕೆ ಪೊಲೀಸರು, ಜಾತಿವಾದಿಗಳು ಚಿತ್ರಹಿಂಸೆ ನೀಡಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.

ಪೊಲೀಸರು ಹಾಗೂ ಜಾತಿವಾದಿಗಳು ಸೇರಿಕೊಂಡು ಪೊಲೀಸ್ ಠಾಣೆಯಲ್ಲೇ ಸಂತ್ರಸ್ತ ಯುವಕನ ಕುಟುಂಬಕ್ಕೆ ಭೀಕರವಾಗಿ ಥಳಿಸಲಾಗಿದೆ, ಯುವಕನಿಗೆ ಬೂಟು ನೆಕ್ಕಿಸಲಾಗಿದೆ ಎಂಬ ಆರೋಪ ಬಂದಿದೆ.

ಬಾಗಲಕೋಟೆ ಜಿಲ್ಲೆ ಗದ್ದನಕೇರಿ ಗ್ರಾಮದ ಕುರುಬ ಸಮುದಾಯದ ಯುವಕ ಭೀರಪ್ಪ ಹಾಗೂ ಅದೇ ಗ್ರಾಮದ ಲಿಂಗಾಯತ ಸಮುದಾಯದ ಯುವತಿಯು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಇವರಿಬ್ಬರ ಪ್ರೀತಿಗೆ ಮೊದಲಿನಿಂದಲೂ ಯುವತಿಯ ಕುಟುಂಬದ ವಿರೋಧವಿತ್ತು ಎನ್ನಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಮೈಸೂರಿಗೆ ಬಂದು ಮದುವೆಯಾಗಿದ್ದ ಜೋಡಿಯನ್ನು ನಯವಾಗಿ ಬಾಗಲಕೋಟೆಗೆ ಕರೆಸಿಕೊಂಡ ಪೊಲೀಸರು, ಭೀಕರವಾಗಿ ಥಳಿಸಿದ್ದಾರೆ. ಠಾಣೆಯಲ್ಲಿ ಕೂಡಿಹಾಕಿ, ಜಾತಿವಾದಿಗಳೊಂದಿಗೆ ಸೇರಿ ಸಾಯುವಂತೆ ಹೊಡೆದಿದ್ದಾರೆ. ಬಾಯಲ್ಲಿ ಬೂಟು ಇಟ್ಟು ಹಿಂಸೆ ನೀಡಿದ್ದಾರೆ. ಇನ್ನೊಮ್ಮೆ ಹುಡುಗಿಯನ್ನು ನೋಡಿದರೆ ಸಾಯಿಸುತ್ತೇವೆ ಎಂದು ಧಮ್ಕಿ ಹಾಕಿದ್ದಾರೆ” ಎಂದು ಯುವಕ ತಿಳಿಸಿದ್ದಾರೆ.

ಇದನ್ನೂ ಓದಿರಿ: ಯುಪಿ: ಲಖಿಂಪುರಖೇರಿಯ ಅಪ್ರಾಪ್ತ ದಲಿತ ಸಹೋದರಿಯರ ಅತ್ಯಾಚಾರ, ಹತ್ಯೆ – 6 ಮಂದಿ ಬಂಧನ

ಯುವಕನಿಂದ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡು ವಾಪಸ್‌ ಕಳುಹಿಸಿದ್ದಾರೆ. ಇಷ್ಟಾದ ಮೇಲೆ ಕೊಲೆ ಮಾಡಿಯೇ ತೀರುತ್ತೇವೆ ಎಂದು ಹುಡುಗಿಯ ಕಡೆಯವರು ಮುಂದಾಗಿದ್ದಾರೆಂದು ತಿಳಿದುಬಂದಿದೆ. ಅಜ್ಞಾತ ಸ್ಥಳಕ್ಕೆ ಸೇರಿಕೊಂಡಿರುವ ಯುವಕ ಭೀರಪ್ಪ ಮಾಧ್ಯಮದೊಂದಿಗೆ ತಮ್ಮ ನೋವನ್ನು ಹಂಚಿಕೊಂಡಿರುವುದು ಹೀಗೆ:

“ನನ್ನನ್ನು ಪ್ರೀತಿಸಿದ ಕಾರಣಕ್ಕೆ ಹುಡುಗಿಯನ್ನು ಹೊಡೆಯುತ್ತಿದ್ದರು. ಬೇರೊಬ್ಬರೊಂದಿಗೆ ಮದುವೆ ಮಾಡಲು ಯೋಚಿಸಿದ್ದರು. ಆಕೆ ಸೂಸೈಡ್ ಮಾಡಿಕೊಳ್ಳಲು ಮುಂದಾಗಿದ್ದಳು. ನನಗೆ ಬೇರೆ ದಾರಿ ಇಲ್ಲದೆ ಮೈಸೂರಿಗೆ ಕರೆದುಕೊಂಡೆ ಹೋದೆ. ಎಂಜಿನಿಯರ್‌ ಆಗಿರುವ ನನ್ನ ಮಾವನ ಸಹಾಯದಿಂದ ಮದುವೆಯಾದೆ.”

“ನನ್ನದು ಕುರುಬ ಜಾತಿ. ಆಕೆಯದ್ದು ಲಿಂಗಾಯತ ಜಾತಿ. ರಿಜಿಸ್ಟ್ರಾರ್‌ ಮ್ಯಾರೇಜ್‌ ಆದೆವು. ನಾವು ವಾಪಸ್ ಹೋಗಲು ತಡ ಮಾಡಿದೆವು. ಆದರೆ ನನ್ನ ಸಂಬಂಧಿಕರನ್ನು ಬಾಗಲಕೋಟೆ ಗ್ರಾಮಾಂತರ ಠಾಣೆಗೆ ಕರೆತಂದು ಕೂಡಿಹಾಕಿದ್ದರು. ಜೀವ ಬೆದರಿಕೆ ನೀಡುತ್ತಿದ್ದರು. ವಕೀಲರ ಸಹಾಯದಿಂದ ಗ್ರಾಮಾಂತರ ಠಾಣೆಗೆ ಬಂದಾಗ ನನ್ನನ್ನು ಹೊಡೆದರು. ಬೂಟು ಕಾಲಲ್ಲಿ ಒದ್ದರು..”

“ಸ್ಟೇಷನ್‌ಗೆ ಸಂಬಂಧವಿಲ್ಲದವರೆಲ್ಲ ಥಳಿಸಿದರು. ನನ್ನ ಮಾವಂದಿರರಿಗೆ ಚಿತ್ರ ಹಿಂಸೆ ಕೊಟ್ಟರು. ಕಾಲು ತೊಡೆಯಲ್ಲಿರುವ ಕೂದಲನ್ನು ಕೈಯಲ್ಲೇ ಕಿತ್ತರು. ನನ್ನ ಮಾವ ಮೈಸೂರಿನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದಾರೆ. ಆ ಹುಡುಗಿಯನ್ನು ಮನೆಗೆ ಕಳುಹಿಸದಿದ್ದರೆ ನಿಮ್ಮ ಕೆಲಸಕ್ಕೆ ಕುತ್ತು ಬರುತ್ತದೆ ಎಂದು ಬೆದರಿಸಿದರು…”

“ಈ ಹಿಂದೆ ಆಕೆ ಎರಡು ಸಲ ಸೂಸೈಡ್ ಮಾಡಿಕೊಳ್ಳಲು ಹೋಗಿದ್ದಳು. ನನ್ನ ಬಿಟ್ಟು ಆಕೆ ಇರಲ್ಲ. ನಾನು ಆಕೆಯನ್ನು ಬಿಟ್ಟು ಇರಲ್ಲ. ಆಕೆಗೇನಾದರೂ ತೊಂದರೆಯಾದರೆ ನನ್ನನ್ನು ಬಂಧಿಸುತ್ತಾರೆ. ನನ್ನ ಮಾವನನ್ನು ಅರೆಸ್ಟ್ ವಾರೆಂಟ್ ಇಲ್ಲದೆಯೂ ಬಂಧಿಸಿ ಭೀಕರವಾಗಿ ಗಾಯಗೊಳಿಸಿದರು.”

“ಸ್ಟೇಷನ್‌ನಲ್ಲಿ ನಾಲ್ಕೈದು ದಿನ ಕೂಡಿಹಾಕಿದ್ದರು. ಲಿಪ್‌ಸ್ಟಿಕ್‌ ಕೊಡಿಸಲು ಸಹ ಯೋಗ್ಯತೆ ಇಲ್ಲದವನು ಶ್ರೀಮಂತ ಹುಡುಗಿಯನ್ನು ಮದುವೆಯಾಗಿದ್ದಾನೆ. ಆಕೆ ಎಂಬಿಬಿಎಸ್‌ ಮಾಡಲು ಒಂದು ಕೋಟಿ ಇಪ್ಪತ್ತು ಲಕ್ಷ ದುಡ್ಡು ಕಟ್ಟಿದ್ದೇವೆ. ಅದನ್ನು ಇಟ್ಟು ಹೊರಗಡೆ ಹೋಗಿ ಎಂದರು. ಹೀಗೆ ಹೇಳುವಾಗ ಇನ್ನು ನೀಟ್ ಫಲಿತಾಂಶವೇ ಬಂದಿರಲಿಲ್ಲ. ಹೀಗಿರುವಾಗ ಇವರು ಹೇಗೆ ಕೊಟ್ಟಿದ್ದರು?”

“ಸ್ಟೇಷನ್‌ಅನ್ನೇ ಅವರು ಮನೆ ಮಾಡಿಕೊಂಡಿದ್ದರು. ನಿನ್ನನ್ನು ಇವರೆಲ್ಲ ಸೇರಿ ಮರ್ಡರ್‌ ಮಾಡುತ್ತಾರೆ ಎಂದು ಪೊಲೀಸರೇ ಹೆದರಿಸಿದರು. ಸ್ಟೇಷನ್‌ ಹೊರಗಡೆ ಕಾಲಿಟ್ಟರೆ ನಿನ್ನ ಕೊಲ್ಲುತ್ತೇವೆ ಎಂದು ಐವತ್ತರಿಂ ಅರವತ್ತು ಜನ ನಿಂತಿದ್ದರು. ಹೊರಗಡೆ ಬಿಟ್ಟರೆ ಸಾಕು, ಎಲ್ಲರೂ ಸೇರಿ ನಿನ್ನನ್ನು ಕಡಿದು ಹಾಕುತ್ತಾರೆ. ಕೊಲೆ ಮಾಡುತ್ತಾರೆ ಎಂದು ಪೊಲೀಸರೇ ಗದರಿಸಿದರು…”

ಇದನ್ನೂ ಓದಿರಿ: ದಲಿತ ಮಕ್ಕಳ ಮೇಲೆ ಮುಂದುವರಿದ ದೌರ್ಜನ್ಯ: ಪ್ರಕರಣ 1, 2, 3, 4

“ಮದುವೆಯಾಗಿದ್ದಕ್ಕೆ ದಾಖಲೆ ಇದೆ. ಆಕೆ ಮನೆ ಬಿಟ್ಟು ಹೊರಗೆ ಬಂದಾಗ ಮಿಸ್ಸಿಂಗ್‌ ಕೇಸ್‌ ದಾಖಲಾಗಿತ್ತು. ಆದರೆ ಈಗ ನನ್ನ ಮೇಲೆ ಕಿಡ್ನಾಪ್‌ ಕೇಸ್‌ ಹಾಕಿದ್ದಾರೆ. ನನ್ನ ಮನೆಯ ಹನ್ನೊಂದು ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ನಾವು ದೂರು ಕೊಟ್ಟರೂ ಪೊಲೀಸರು ತೆಗೆದುಕೊಳ್ಳುವುದಿಲ್ಲ. ಸ್ಟೇಷನ್ನೇ ಅವರದಾಗಿದೆ. ನಮಗೆ ಯಾರೂ ಇಲ್ಲ. ನಮ್ಮನ್ನು ಮರ್ಡರ್‌ ಮಾಡಿಸಲಿದ್ದಾರೆ. ಇದಕ್ಕಿಂತ ನಾವೇ ಸೂಸೈಡ್‌ ಮಾಡಿಕೊಳ್ಳುವುದು ವಾಸಿ. ದಯವಿಟ್ಟು ನೀವಾದರೂ ಹೆಲ್ಪ್‌ ಮಾಡಿ…”

-ಎನ್ನುತ್ತಾ ಕಣ್ಣೀರು ಹಾಕುತ್ತಾರೆ ಭೀರಪ್ಪ.

ಹುಡುಗಿಯನ್ನು ಕಿಡ್ನಾಪ್ ಮಾಡಲಾಗಿದೆ ಎಂಬುದು ಕಪೋಲ ಕಲ್ಪಿತವೆನ್ನುವುದಕ್ಕೆ ಅವಕಾಶವಿದೆ. ತಾನು ಪ್ರೀತಿಸಿದ ಯುವಕನೊಂದಿಗೆ ಹೊರಬಂದ ಯುವತಿ, ವಿಡಿಯೊ ಕೂಡ ಬಿಡುಗಡೆ ಮಾಡಿದ್ದಾಳೆ. “ನಾನು ಸ್ವ-ಇಚ್ಛೆಯಿಂದ ಇಲ್ಲಿಗೆ ಬಂದಿದ್ದೇನೆ. ಬೇರೆಯವರನ್ನು ಮದುವೆಯಾಗು ಎಂದು ಮನೆಯಲ್ಲಿ ತುಂಬಾ ಟಾರ್ಚರ್‌ ಕೊಡುತ್ತಿದ್ದರು. ನಾನು ಇಷ್ಟಪಟ್ಟ ಹುಡುಗನನ್ನು ಮದುವೆಯಾಗಬೇಕೆಂದು ಇಲ್ಲಿಗೆ ಬಂದಿದ್ದೇನೆ. ಭೀರಪ್ಪನನ್ನು ಇಷ್ಟಪಡುತ್ತಿದ್ದೇನೆ” ಎಂದಿದ್ದಾರೆ.

ಯುವತಿಯ ಪತ್ರ

ತನ್ನ ಪ್ರೀತಿಯ ಬಗ್ಗೆ ಹಾಗೂ ತನ್ನ ಮನೆಯಿಂದ ಎದುರಿಸುತ್ತಿರುವ ಕಿರುಕುಳದ ಬಗ್ಗೆ ಯುವತಿ ಪೊಲೀಸರಿಗೆ ದೂರನ್ನು ಕಳುಹಿಸಿದ್ದರು. ಸ್ವ-ಇಚ್ಛೆಯಿಂದ ಮದುವೆಯಾಗಿರುವುದಾಗಿ ತಿಳಿಸಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಕರ್ನಾಟಕ ಸರಕಾರದ ವಿರೋಧ ಪಕ್ಷ ನಾಯಕ ಗೌರವಾನ್ವಿತ ಮಾನ್ಯ ಶ್ರೀ ಸಿದ್ದರಾಮಯ್ಯನವರಿಗೆ ಈ ವಿಷಯ ತಲುಪಲಿ

  2. ರಾಜ್ಯದಲ್ಲಿ ಈಗ ಜಾತೀಯತೆ ಮುಗಿಲು ಮುಟ್ಟುತ್ತಿದೆ. ಬಸವಣ್ಣನವರ ಅನುಯಾಯಿಗಳು ಬಸವ ತತ್ವವನ್ನು ಸಮಾದಿ ಮಾಡುತ್ತಿದ್ದಾರೆ. ಇನ್ನು ಪೊಲೀಸರು, “ನಾವಿರುವುದೇ ಪ್ರಬಲರ ರಕ್ಷಣೆಗೆ” ಎಂಬಂತೆ ವರ್ತಿಸುತ್ತಿದ್ದಾರೆ. ದೀನದಲಿತರನ್ನು ರಕ್ಷಣೆ ಮಾಡಬೇಕಾದ ಪೊಲೀಸರು ಅವರನ್ನೇ ಬಕ್ಷಣೆ ಮಾಡುತ್ತಿದ್ದಾರೆ. ಇದು ಕ್ರೂರ, ಅನ್ಯಾಯ.

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...