Homeಕರ್ನಾಟಕಬಾಗಲಕೋಟೆ: ಲಿಂಗಾಯತ ಯುವತಿಯನ್ನು ಪ್ರೀತಿಸಿದ ಕುರುಬ ಯುವಕನಿಗೆ ಬೂಟು ನೆಕ್ಕಿಸಿದ ಪೊಲೀಸರು, ಜಾತಿವಾದಿಗಳು!

ಬಾಗಲಕೋಟೆ: ಲಿಂಗಾಯತ ಯುವತಿಯನ್ನು ಪ್ರೀತಿಸಿದ ಕುರುಬ ಯುವಕನಿಗೆ ಬೂಟು ನೆಕ್ಕಿಸಿದ ಪೊಲೀಸರು, ಜಾತಿವಾದಿಗಳು!

ಯುವಕನ ಕುಟುಂಬಕ್ಕೆ ಭೀಕರವಾಗಿ ಥಳಿಸಲಾಗಿದೆ. ಆ ಹುಡುಗಿಯನ್ನು ಬಿಡದಿದ್ದರೆ ನಿಮ್ಮನ್ನು ಕೊಲೆ ಮಾಡುತ್ತಾರೆಂದು ಪೊಲೀಸರೇ ಬೆದರಿಸಿದ್ದಾರೆ ಎಂದು ಆರೋಪಿಸಲಾಗಿದೆ.

- Advertisement -
- Advertisement -

ಲಿಂಗಾಯತ ಯುವತಿಯನ್ನು ಪ್ರೀತಿಸಿ ಮದುವೆಯಾದ ಕುರುಬ ಸಮುದಾಯದ ಯುವಕನಿಗೆ ಹಾಗೂ ಆತನ ಕುಟುಂಬಕ್ಕೆ ಪೊಲೀಸರು, ಜಾತಿವಾದಿಗಳು ಚಿತ್ರಹಿಂಸೆ ನೀಡಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.

ಪೊಲೀಸರು ಹಾಗೂ ಜಾತಿವಾದಿಗಳು ಸೇರಿಕೊಂಡು ಪೊಲೀಸ್ ಠಾಣೆಯಲ್ಲೇ ಸಂತ್ರಸ್ತ ಯುವಕನ ಕುಟುಂಬಕ್ಕೆ ಭೀಕರವಾಗಿ ಥಳಿಸಲಾಗಿದೆ, ಯುವಕನಿಗೆ ಬೂಟು ನೆಕ್ಕಿಸಲಾಗಿದೆ ಎಂಬ ಆರೋಪ ಬಂದಿದೆ.

ಬಾಗಲಕೋಟೆ ಜಿಲ್ಲೆ ಗದ್ದನಕೇರಿ ಗ್ರಾಮದ ಕುರುಬ ಸಮುದಾಯದ ಯುವಕ ಭೀರಪ್ಪ ಹಾಗೂ ಅದೇ ಗ್ರಾಮದ ಲಿಂಗಾಯತ ಸಮುದಾಯದ ಯುವತಿಯು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಇವರಿಬ್ಬರ ಪ್ರೀತಿಗೆ ಮೊದಲಿನಿಂದಲೂ ಯುವತಿಯ ಕುಟುಂಬದ ವಿರೋಧವಿತ್ತು ಎನ್ನಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಮೈಸೂರಿಗೆ ಬಂದು ಮದುವೆಯಾಗಿದ್ದ ಜೋಡಿಯನ್ನು ನಯವಾಗಿ ಬಾಗಲಕೋಟೆಗೆ ಕರೆಸಿಕೊಂಡ ಪೊಲೀಸರು, ಭೀಕರವಾಗಿ ಥಳಿಸಿದ್ದಾರೆ. ಠಾಣೆಯಲ್ಲಿ ಕೂಡಿಹಾಕಿ, ಜಾತಿವಾದಿಗಳೊಂದಿಗೆ ಸೇರಿ ಸಾಯುವಂತೆ ಹೊಡೆದಿದ್ದಾರೆ. ಬಾಯಲ್ಲಿ ಬೂಟು ಇಟ್ಟು ಹಿಂಸೆ ನೀಡಿದ್ದಾರೆ. ಇನ್ನೊಮ್ಮೆ ಹುಡುಗಿಯನ್ನು ನೋಡಿದರೆ ಸಾಯಿಸುತ್ತೇವೆ ಎಂದು ಧಮ್ಕಿ ಹಾಕಿದ್ದಾರೆ” ಎಂದು ಯುವಕ ತಿಳಿಸಿದ್ದಾರೆ.

ಇದನ್ನೂ ಓದಿರಿ: ಯುಪಿ: ಲಖಿಂಪುರಖೇರಿಯ ಅಪ್ರಾಪ್ತ ದಲಿತ ಸಹೋದರಿಯರ ಅತ್ಯಾಚಾರ, ಹತ್ಯೆ – 6 ಮಂದಿ ಬಂಧನ

ಯುವಕನಿಂದ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡು ವಾಪಸ್‌ ಕಳುಹಿಸಿದ್ದಾರೆ. ಇಷ್ಟಾದ ಮೇಲೆ ಕೊಲೆ ಮಾಡಿಯೇ ತೀರುತ್ತೇವೆ ಎಂದು ಹುಡುಗಿಯ ಕಡೆಯವರು ಮುಂದಾಗಿದ್ದಾರೆಂದು ತಿಳಿದುಬಂದಿದೆ. ಅಜ್ಞಾತ ಸ್ಥಳಕ್ಕೆ ಸೇರಿಕೊಂಡಿರುವ ಯುವಕ ಭೀರಪ್ಪ ಮಾಧ್ಯಮದೊಂದಿಗೆ ತಮ್ಮ ನೋವನ್ನು ಹಂಚಿಕೊಂಡಿರುವುದು ಹೀಗೆ:

“ನನ್ನನ್ನು ಪ್ರೀತಿಸಿದ ಕಾರಣಕ್ಕೆ ಹುಡುಗಿಯನ್ನು ಹೊಡೆಯುತ್ತಿದ್ದರು. ಬೇರೊಬ್ಬರೊಂದಿಗೆ ಮದುವೆ ಮಾಡಲು ಯೋಚಿಸಿದ್ದರು. ಆಕೆ ಸೂಸೈಡ್ ಮಾಡಿಕೊಳ್ಳಲು ಮುಂದಾಗಿದ್ದಳು. ನನಗೆ ಬೇರೆ ದಾರಿ ಇಲ್ಲದೆ ಮೈಸೂರಿಗೆ ಕರೆದುಕೊಂಡೆ ಹೋದೆ. ಎಂಜಿನಿಯರ್‌ ಆಗಿರುವ ನನ್ನ ಮಾವನ ಸಹಾಯದಿಂದ ಮದುವೆಯಾದೆ.”

“ನನ್ನದು ಕುರುಬ ಜಾತಿ. ಆಕೆಯದ್ದು ಲಿಂಗಾಯತ ಜಾತಿ. ರಿಜಿಸ್ಟ್ರಾರ್‌ ಮ್ಯಾರೇಜ್‌ ಆದೆವು. ನಾವು ವಾಪಸ್ ಹೋಗಲು ತಡ ಮಾಡಿದೆವು. ಆದರೆ ನನ್ನ ಸಂಬಂಧಿಕರನ್ನು ಬಾಗಲಕೋಟೆ ಗ್ರಾಮಾಂತರ ಠಾಣೆಗೆ ಕರೆತಂದು ಕೂಡಿಹಾಕಿದ್ದರು. ಜೀವ ಬೆದರಿಕೆ ನೀಡುತ್ತಿದ್ದರು. ವಕೀಲರ ಸಹಾಯದಿಂದ ಗ್ರಾಮಾಂತರ ಠಾಣೆಗೆ ಬಂದಾಗ ನನ್ನನ್ನು ಹೊಡೆದರು. ಬೂಟು ಕಾಲಲ್ಲಿ ಒದ್ದರು..”

“ಸ್ಟೇಷನ್‌ಗೆ ಸಂಬಂಧವಿಲ್ಲದವರೆಲ್ಲ ಥಳಿಸಿದರು. ನನ್ನ ಮಾವಂದಿರರಿಗೆ ಚಿತ್ರ ಹಿಂಸೆ ಕೊಟ್ಟರು. ಕಾಲು ತೊಡೆಯಲ್ಲಿರುವ ಕೂದಲನ್ನು ಕೈಯಲ್ಲೇ ಕಿತ್ತರು. ನನ್ನ ಮಾವ ಮೈಸೂರಿನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದಾರೆ. ಆ ಹುಡುಗಿಯನ್ನು ಮನೆಗೆ ಕಳುಹಿಸದಿದ್ದರೆ ನಿಮ್ಮ ಕೆಲಸಕ್ಕೆ ಕುತ್ತು ಬರುತ್ತದೆ ಎಂದು ಬೆದರಿಸಿದರು…”

“ಈ ಹಿಂದೆ ಆಕೆ ಎರಡು ಸಲ ಸೂಸೈಡ್ ಮಾಡಿಕೊಳ್ಳಲು ಹೋಗಿದ್ದಳು. ನನ್ನ ಬಿಟ್ಟು ಆಕೆ ಇರಲ್ಲ. ನಾನು ಆಕೆಯನ್ನು ಬಿಟ್ಟು ಇರಲ್ಲ. ಆಕೆಗೇನಾದರೂ ತೊಂದರೆಯಾದರೆ ನನ್ನನ್ನು ಬಂಧಿಸುತ್ತಾರೆ. ನನ್ನ ಮಾವನನ್ನು ಅರೆಸ್ಟ್ ವಾರೆಂಟ್ ಇಲ್ಲದೆಯೂ ಬಂಧಿಸಿ ಭೀಕರವಾಗಿ ಗಾಯಗೊಳಿಸಿದರು.”

“ಸ್ಟೇಷನ್‌ನಲ್ಲಿ ನಾಲ್ಕೈದು ದಿನ ಕೂಡಿಹಾಕಿದ್ದರು. ಲಿಪ್‌ಸ್ಟಿಕ್‌ ಕೊಡಿಸಲು ಸಹ ಯೋಗ್ಯತೆ ಇಲ್ಲದವನು ಶ್ರೀಮಂತ ಹುಡುಗಿಯನ್ನು ಮದುವೆಯಾಗಿದ್ದಾನೆ. ಆಕೆ ಎಂಬಿಬಿಎಸ್‌ ಮಾಡಲು ಒಂದು ಕೋಟಿ ಇಪ್ಪತ್ತು ಲಕ್ಷ ದುಡ್ಡು ಕಟ್ಟಿದ್ದೇವೆ. ಅದನ್ನು ಇಟ್ಟು ಹೊರಗಡೆ ಹೋಗಿ ಎಂದರು. ಹೀಗೆ ಹೇಳುವಾಗ ಇನ್ನು ನೀಟ್ ಫಲಿತಾಂಶವೇ ಬಂದಿರಲಿಲ್ಲ. ಹೀಗಿರುವಾಗ ಇವರು ಹೇಗೆ ಕೊಟ್ಟಿದ್ದರು?”

“ಸ್ಟೇಷನ್‌ಅನ್ನೇ ಅವರು ಮನೆ ಮಾಡಿಕೊಂಡಿದ್ದರು. ನಿನ್ನನ್ನು ಇವರೆಲ್ಲ ಸೇರಿ ಮರ್ಡರ್‌ ಮಾಡುತ್ತಾರೆ ಎಂದು ಪೊಲೀಸರೇ ಹೆದರಿಸಿದರು. ಸ್ಟೇಷನ್‌ ಹೊರಗಡೆ ಕಾಲಿಟ್ಟರೆ ನಿನ್ನ ಕೊಲ್ಲುತ್ತೇವೆ ಎಂದು ಐವತ್ತರಿಂ ಅರವತ್ತು ಜನ ನಿಂತಿದ್ದರು. ಹೊರಗಡೆ ಬಿಟ್ಟರೆ ಸಾಕು, ಎಲ್ಲರೂ ಸೇರಿ ನಿನ್ನನ್ನು ಕಡಿದು ಹಾಕುತ್ತಾರೆ. ಕೊಲೆ ಮಾಡುತ್ತಾರೆ ಎಂದು ಪೊಲೀಸರೇ ಗದರಿಸಿದರು…”

ಇದನ್ನೂ ಓದಿರಿ: ದಲಿತ ಮಕ್ಕಳ ಮೇಲೆ ಮುಂದುವರಿದ ದೌರ್ಜನ್ಯ: ಪ್ರಕರಣ 1, 2, 3, 4

“ಮದುವೆಯಾಗಿದ್ದಕ್ಕೆ ದಾಖಲೆ ಇದೆ. ಆಕೆ ಮನೆ ಬಿಟ್ಟು ಹೊರಗೆ ಬಂದಾಗ ಮಿಸ್ಸಿಂಗ್‌ ಕೇಸ್‌ ದಾಖಲಾಗಿತ್ತು. ಆದರೆ ಈಗ ನನ್ನ ಮೇಲೆ ಕಿಡ್ನಾಪ್‌ ಕೇಸ್‌ ಹಾಕಿದ್ದಾರೆ. ನನ್ನ ಮನೆಯ ಹನ್ನೊಂದು ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ನಾವು ದೂರು ಕೊಟ್ಟರೂ ಪೊಲೀಸರು ತೆಗೆದುಕೊಳ್ಳುವುದಿಲ್ಲ. ಸ್ಟೇಷನ್ನೇ ಅವರದಾಗಿದೆ. ನಮಗೆ ಯಾರೂ ಇಲ್ಲ. ನಮ್ಮನ್ನು ಮರ್ಡರ್‌ ಮಾಡಿಸಲಿದ್ದಾರೆ. ಇದಕ್ಕಿಂತ ನಾವೇ ಸೂಸೈಡ್‌ ಮಾಡಿಕೊಳ್ಳುವುದು ವಾಸಿ. ದಯವಿಟ್ಟು ನೀವಾದರೂ ಹೆಲ್ಪ್‌ ಮಾಡಿ…”

-ಎನ್ನುತ್ತಾ ಕಣ್ಣೀರು ಹಾಕುತ್ತಾರೆ ಭೀರಪ್ಪ.

ಹುಡುಗಿಯನ್ನು ಕಿಡ್ನಾಪ್ ಮಾಡಲಾಗಿದೆ ಎಂಬುದು ಕಪೋಲ ಕಲ್ಪಿತವೆನ್ನುವುದಕ್ಕೆ ಅವಕಾಶವಿದೆ. ತಾನು ಪ್ರೀತಿಸಿದ ಯುವಕನೊಂದಿಗೆ ಹೊರಬಂದ ಯುವತಿ, ವಿಡಿಯೊ ಕೂಡ ಬಿಡುಗಡೆ ಮಾಡಿದ್ದಾಳೆ. “ನಾನು ಸ್ವ-ಇಚ್ಛೆಯಿಂದ ಇಲ್ಲಿಗೆ ಬಂದಿದ್ದೇನೆ. ಬೇರೆಯವರನ್ನು ಮದುವೆಯಾಗು ಎಂದು ಮನೆಯಲ್ಲಿ ತುಂಬಾ ಟಾರ್ಚರ್‌ ಕೊಡುತ್ತಿದ್ದರು. ನಾನು ಇಷ್ಟಪಟ್ಟ ಹುಡುಗನನ್ನು ಮದುವೆಯಾಗಬೇಕೆಂದು ಇಲ್ಲಿಗೆ ಬಂದಿದ್ದೇನೆ. ಭೀರಪ್ಪನನ್ನು ಇಷ್ಟಪಡುತ್ತಿದ್ದೇನೆ” ಎಂದಿದ್ದಾರೆ.

ಯುವತಿಯ ಪತ್ರ

ತನ್ನ ಪ್ರೀತಿಯ ಬಗ್ಗೆ ಹಾಗೂ ತನ್ನ ಮನೆಯಿಂದ ಎದುರಿಸುತ್ತಿರುವ ಕಿರುಕುಳದ ಬಗ್ಗೆ ಯುವತಿ ಪೊಲೀಸರಿಗೆ ದೂರನ್ನು ಕಳುಹಿಸಿದ್ದರು. ಸ್ವ-ಇಚ್ಛೆಯಿಂದ ಮದುವೆಯಾಗಿರುವುದಾಗಿ ತಿಳಿಸಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಕರ್ನಾಟಕ ಸರಕಾರದ ವಿರೋಧ ಪಕ್ಷ ನಾಯಕ ಗೌರವಾನ್ವಿತ ಮಾನ್ಯ ಶ್ರೀ ಸಿದ್ದರಾಮಯ್ಯನವರಿಗೆ ಈ ವಿಷಯ ತಲುಪಲಿ

  2. ರಾಜ್ಯದಲ್ಲಿ ಈಗ ಜಾತೀಯತೆ ಮುಗಿಲು ಮುಟ್ಟುತ್ತಿದೆ. ಬಸವಣ್ಣನವರ ಅನುಯಾಯಿಗಳು ಬಸವ ತತ್ವವನ್ನು ಸಮಾದಿ ಮಾಡುತ್ತಿದ್ದಾರೆ. ಇನ್ನು ಪೊಲೀಸರು, “ನಾವಿರುವುದೇ ಪ್ರಬಲರ ರಕ್ಷಣೆಗೆ” ಎಂಬಂತೆ ವರ್ತಿಸುತ್ತಿದ್ದಾರೆ. ದೀನದಲಿತರನ್ನು ರಕ್ಷಣೆ ಮಾಡಬೇಕಾದ ಪೊಲೀಸರು ಅವರನ್ನೇ ಬಕ್ಷಣೆ ಮಾಡುತ್ತಿದ್ದಾರೆ. ಇದು ಕ್ರೂರ, ಅನ್ಯಾಯ.

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....