ಉತ್ತರ ಪ್ರದೇಶದ ಲಖೀಂಪುರದಲ್ಲಿ 17 ಮತ್ತು 15ರ ಹರೆಯದ ಇಬ್ಬರು ದಲಿತ ಸಹೋದರಿಯರ ಶವ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಪೊಲೀಸರು ಆರು ಜನನ್ನು ಬಂಧಿಸಿದ್ದಾರೆ. ಸಹೋದರಿಯರಿಬ್ಬರ ಮೇಲೆ ಐವರು ಅತ್ಯಾಚಾರ ಎಸಗಿ, ಕೊಲೆ ಮಾಡಿ ನಂತರ ಮರಕ್ಕೆ ನೇಣು ಹಾಕಿದ್ದಾರೆ ಎಂದು ಪೊಲೀಸರು ಗುರುವಾರ ಹೇಳಿದ್ದಾರೆ.
ಬಂಧಿತರನ್ನು ಸುಹೇಲ್, ಜುನೈದ್, ಹಫೀಜುಲ್ ರೆಹಮಾನ್, ಕರಿಮುದ್ದೀನ್, ಆರಿಫ್ ಮತ್ತು ಗೌತಮ್ ಛೋಟು ಎಂದು ಗುರುತಿಸಲಾಗಿದೆ. ಬಾಲಕಿಯರನ್ನು ಕಬ್ಬಿನ ಗದ್ದೆಗೆ ಕರೆದೊಯ್ದು ಸುಹೇಲ್ ಮತ್ತು ಜುನೈದ್ ಅತ್ಯಾಚಾರವೆಸಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಸಂಜೀವ್ ಸುಮನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಬಾಲಕಿಯರು ಮದುವೆಗೆ ಒತ್ತಾಯಿಸಿದಾಗ, ದುಷ್ಕರ್ಮಿಗಳು ಅವರ ದುಪಟ್ಟಾದಿಂದ ಕತ್ತು ಹಿಸುಕಿ ಕೊಂದಿದ್ದಾರೆ. ನಂತರ ಘಟನಾ ಸ್ಥಳಕ್ಕೆ ಆಗಮಿಸಿದ ಕರೀಮುದ್ದೀನ್ ಮತ್ತು ಆರೀಫ್ ಕೊಲೆಯನ್ನು ಮುಚ್ಚಿಡಲು ಸಹಾಯ ಮಾಡಿದ್ದಾರೆ. “ಬಾಲಕಿಯರ ದೇಹವನ್ನು ಮರಕ್ಕೆ ನೇಣು ಹಾಕಿ ಇದು ಆತ್ಮಹತ್ಯೆ ಎಂದು ತೋರುವಂತೆ ಮಾಡಿದ್ದಾರೆ” ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
लखीमपुर खीरी में दलित बेटियों की हत्या और दुष्कर्म के आरोपी जुनैद से पुलिस की मुठभेड़, जूनैद को लगी गोली, 6 गिरफ्तार
युवती को बहला फुसला के खेत में ले गए, आरोपी परिवार के पडोसी हैं। सभी आरोपी आपस में दोस्त हैं,आरोपियों में जुनैद, सोहैल, आरिफ़,हफ़ीज़, करीमुद्दीन और छोटे हैं। pic.twitter.com/weqHDPbrSA
— आदित्य तिवारी / Aditya Tiwari (@aditytiwarilive) September 15, 2022
ಇದನ್ನೂ ಓದಿ: ಯುಪಿ: ಅಪ್ರಾಪ್ತ ದಲಿತ ಬಾಲಕಿಯರಿಬ್ಬರ ಶವ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ; ಅತ್ಯಾಚಾರ, ಕೊಲೆ ಎಂದ ಕುಟುಂಬ
“ಬಾಲಕಿಯರನ್ನು ದುಷ್ಕರ್ಮಿಗಳು ಅಪಹರಿಸಿರಲಿಲ್ಲ. ಸಹೋದರಿಯರು ಸುಹೇಲ್ ಮತ್ತು ಜುನೈದ್ ಅವರೊಂದಿಗೆ ಸ್ನೇಹಿತರಾಗಿದ್ದರಿಂದ, ಸ್ವಇಚ್ಛೆಯಿಂದ ಅವರೊಂದಿಗೆ ಬೈಕ್ನಲ್ಲಿ ತೆರಳಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ. “ತಮ್ಮ ಹೆಣ್ಣು ಮಕ್ಕಳನ್ನು ಮನೆಯಲ್ಲಿ ಇರುವಾಗ ಮೂವರು ದುಷ್ಕರ್ಮಿಗಳು ಅವರನ್ನು ಅಪಹರಣ ನಡೆಸಿದ್ದಾರೆ” ಎಂದು ಹತ್ಯೆಗೀಡಾದ ಬಾಲಕಿಯರ ತಾಯಿ ಆರೋಪಿಸಿದ್ದರು.
ಆರೋಪಿಗಲ್ಲಿ ಚೇತರಾಮ್ ಎಂಬವರ ಮಗನಾದ ಗೌತಮ್ ಛೋಟು ಬಾಲಕಿಯರ ನರೆ ಮನೆಯವನಾಗಿದ್ದು, ದುಷ್ಕರ್ಮಿಗಳಿಗೆ ಬಾಲಕಿಯರನ್ನು ಪರಿಚಯಿಸಲು ಸಹಾಯ ಮಾಡಿದ್ದನು ಎಂದು ಎನ್ಡಿಟಿವಿ ವರದಿ ಹೇಳಿದೆ.
ಬಂಧಿತರೆಲ್ಲರೂ ಪಕ್ಕದ ಗ್ರಾಮದವರಾಗಿದ್ದು, ಐವರನ್ನು ನಿನ್ನೆ ಬಂಧಿಸಲಾಗಿತ್ತು. ಒಬ್ಬನನ್ನು ಇಂದು ಬೆಳಗ್ಗೆ ಬಂಧಿಸುವಾಗ ಎನ್ಕೌಂಟರ್ ನಡೆಸಲಾಗಿದ್ದು, ಸಿಕ್ಕಿಬಿದ್ದಿದ್ದಾನೆ. “ಅಪರಾಧದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನು ನಾವು ಬಂಧಿಸಿದ್ದೇವೆ” ಎಂದು ಪೊಲೀಸ್ ಅಧಿಕಾರಿ ಸಂಜೀವ್ ಸುಮನ್ ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ: ದೆಹಲಿ ಬೀದಿಯಲ್ಲಿ ಮಹಿಳೆಯ ಕೂದಲು ಹಿಡಿದು ಹೊಟ್ಟೆಗೆ ಒದ್ದ ದುಷ್ಕರ್ಮಿ: FIR ದಾಖಲಿಸುವಂತೆ ಒತ್ತಾಯಿಸಿದ ಮಹಿಳಾ ಆಯೋಗದ ಅಧ್ಯಕ್ಷೆ
ಶವವಾಗಿ ಪತ್ತೆಯಾಗುವ ಮೂರು ಗಂಟೆಗಳ ಮೊದಲು ಅವರನ್ನು ಅಪಹರಿಸಲಾಗಿತ್ತು ಎಂದು ಬಾಲಕಿಯರ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ. ಮೂವರು ಯುವಕರು ತನ್ನ ಹೆಣ್ಣು ಮಕ್ಕಳನ್ನು ಮೋಟಾರ್ ಸೈಕಲ್ಗಳಲ್ಲಿ ಬಲವಂತವಾಗಿ ಕರೆದೊಯ್ದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಬಳಿಕ ಕುಟುಂಬದವರು ಕಬ್ಬಿನ ಗದ್ದೆ ಬಳಿಯ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕಿಯರ ಶವಗಳನ್ನು ಪತ್ತೆ ಮಾಡಿದ್ದಾರೆ. ಬಾಲಕಿಯರ ಶವ ತಮ್ಮ ದುಪಟ್ಟಾಗಳಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಯಾವುದೇ ಗಾಯಗಳಿರಲಿಲ್ಲ ಎಂದು ಎನ್ಡಿಟಿವಿ ವರದ ಮಾಡಿದೆ.