Homeಅಂಕಣಗಳುಪುಟಕ್ಕಿಟ್ಟ ಪುಟಗಳುಬೆಂಗಳೂರಿನ ಹುಟ್ಟು, ಒಬ್ಬರಿಂದ ಮತ್ತೊಬ್ಬರ ಕೈಬದಲಾದುದರ ರೋಚಕ ಇತಿಹಾಸ ತಿಳಿಯಲು ಈ ಪುಸ್ತಕ ಓದಿ

ಬೆಂಗಳೂರಿನ ಹುಟ್ಟು, ಒಬ್ಬರಿಂದ ಮತ್ತೊಬ್ಬರ ಕೈಬದಲಾದುದರ ರೋಚಕ ಇತಿಹಾಸ ತಿಳಿಯಲು ಈ ಪುಸ್ತಕ ಓದಿ

ಹೈದರ್ ಅಲಿ ಮರಾಠರ ದಾಳಿಗಳನ್ನು ಎದುರಿಸಲು ಕೆಂಪೇಗೌಡರು ಮಣ್ಣಿಂದ ಕಟ್ಟಿದ್ದ ಕೋಟೆಯನ್ನು ಕಲ್ಲಿನಿಂದ ಮರು ನಿರ್ಮಾಣ ಮಾಡಿದ ಮೇಲೆ ಇದು ಸೇನೆಯ ಕೇಂದ್ರವಾಯಿತು.

- Advertisement -
- Advertisement -

(ಇದು ಬೆಂಗಳೂರು ಮಿರರ್ ಪತ್ರಿಕೆಗಾಗಿ ಗೌರಿಲಂಕೇಶ್ 25, ಜುಲೈ 2016ರಲ್ಲಿ ಮಾಡಿದ ಪುಸ್ತಕ ವಿಮರ್ಶೆಯ ಭಾವಾನುವಾದ)

“ಭಾರತದ ಅರಸೊತ್ತಿಗೆಗಳ ರಾಜಕಾರಣದಲ್ಲಿ ಬೆಂಗಳೂರೊಂದು ಚದುರಂಗದಾಟದ ಕಾಯಿಯಂತಾಗಿದ್ದೇ ಒಂದು ಕುತೂಹಲಕರ ವಿಷಯ. ಕೆಂಪೇಗೌಡರು ನಿರ್ಮಿಸಿದರು. ಬಿಜಾಪುರದ ಸುಲ್ತಾನರಿದನ್ನು ಗೆದ್ದರು. ಮೊಘಲರು ಮಾರಿದರು. ಚಿಕ್ಕದೇವರಾಜ ಒಡೆಯರ್ ಕೊಂಡರು. ಇತಿಹಾಸದ ಭಿನ್ನ ಕಾಲಘಟ್ಟಗಳಲ್ಲಿ ಇದು ಶಹಾಜಿ ಭೋಸ್ಲೇ ಮತ್ತು ಹೈದರ್ ಅಲಿಯವರಿಗೆ ವ್ಯಕ್ತಿಗತವಾಗಿ ಗಳಿಸಿದ ಜಹಗೀರ್ ಆಗಿತ್ತು. ಬ್ರಿಟಿಷ್ ರಾಜ್ ಕಾಲದಲ್ಲಿ ಇಂಗ್ಲೆಂಡಿನ ಗಮನವಾಗಿತ್ತು,” ಇವು ಮೈಸೂರಿನ ರಾಜ್ಯಪಾಲರಾದ ಧರ್ಮವೀರರವರು ಎಂ ಫಜ್ಲುಲ್ ಬರೆದಿರುವ ‘ದ ಸೆಂಚುರೀಸ್’ ಪುಸ್ತಕದ ಮುನ್ನುಡಿಯಲ್ಲಿ ಹೇಳಿರುವ ಮಾತುಗಳು. ಫಜ್ಲುಲ್ ಅವರ ಬಗ್ಗೆ ಹೆಚ್ಚು ತಿಳಿದಿಲ್ಲದಿದ್ದರೂ, 1970ರಲ್ಲಿ ಪ್ರಕಟವಾದ (ಈಗ ಪ್ರತಿಗಳು ದೊರಕುತ್ತಿಲ್ಲ) ಈ ಪುಸ್ತಕ, ಬೃಹತ್ತಾಗಿ ಬೆಳೆಯುತ್ತಿರುವ, ಆಕರ್ಷಕವಾದ ಮತ್ತು ಬಹುಭಾಷಿಕ ನಗರವಾದ ಬೆಂಗಳೂರನ್ನು ತಿಳಿಯಲು ಓದಲೇಬೇಕಾದ ಪುಸ್ತಕ.

ಒತ್ತೊತ್ತಾಗಿ ಬೆಳೆದಿರುವ ಕಾಡುಗಳಿಂದ ಮತ್ತು ಕುರುಚಲು ಕಳೆಗಳಿಂದ ತುಂಬಿದ್ದ ಈ ಪ್ರದೇಶವನ್ನು ಕೆಂಪೇಗೌಡರು ತಮ್ಮ ಕನಸಿನ ನಗರವನ್ನಾಗಿ ರೂಪಿಸಿದರು ಎಂಬುದೇನೋ ಎಲ್ಲರಿಗೂ ಗೊತ್ತು. ಆದರೆ, ಎತ್ತುಗಳು ನಮ್ಮ ಈ ನಗರದ ಮೊದಲ ದಾರಿಯನ್ನು ರೂಪಿಸಿದ್ದು ಎಂದು ಯಾರಿಗೆ ಊಹಿಸಲು ಸಾಧ್ಯ. ತಮ್ಮ ಜ್ಯೋತಿಷಿಗಳು ಗೊತ್ತುಪಡಿಸಿದ 1537ರ ಒಂದು ಶುಭ ಮುಂಜಾನೆಯಲ್ಲಿ ಗೌಡರು ಸಾಂಪ್ರದಾಯಿಕವಾಗಿ ನಿರ್ಮಾಣದ ಕೆಲಸವನ್ನು ಆರಂಭಿಸಿದ್ದರು. ನಗರದ ಹೃದಯಭಾಗವಾಗಿರುವ, ಈಗ ಯಾವುದನ್ನು ದೊಡ್ಡಪೇಟೆ ಚೌಕವೆನ್ನುತ್ತೇವೆಯೋ, ಅಲ್ಲಿ ಹಾಲು ಬಿಳುಪಿನ ನಾಲ್ಕು ಜೊತೆ ಎತ್ತುಗಳು, ಸಿಂಗರಿಸಿದ ನೇಗಿಲುಗಳಿಂದ ನಾಲ್ಕೂ ದಿಕ್ಕುಗಳಿಗೆ ಮುಖ ಮಾಡಿ ಚಲಿಸುತ್ತಾ ಉತ್ತಿದವು. ಹಾಗೆ ನಾಲ್ಕು ದಿಕ್ಕುಗಳಿಗೆ ಮುಖ ಮಾಡಿ ಉತ್ತಲ್ಪಟ್ಟ ಕೇಂದ್ರಭಾಗದಿಂದಲೇ ನಾಲ್ಕು ಮುಖ್ಯ ನಗರಗಳು ತಲೆಯೆತ್ತಿದವು. ಬೆಂಗಳೂರಿನ ಹಳೆಯ ರಸ್ತೆಗಳನ್ನು ಗಮನಿಸಿ. ಚಿಕ್ಕಪೇಟೆ ಮತ್ತು ದೊಡ್ಡಪೇಟೆಯ ರಸ್ತೆಗಳು ಪೂರ್ವದಿಂದ ಪಶ್ಚಿಮಕ್ಕೆ, ಹಲಸೂರು ಗೇಟಿಂದ ಸೊಂಡೇಕೊಪ್ಪ ಗೇಟಿಗಾದರೆ, ಉತ್ತರದಿಂದ ದಕ್ಷಿಣಕ್ಕೆ ಯಲಹಂಕ ಗೇಟಿನಿಂದ ಆನೇಕಲ್ ಗೇಟಿಗೆ ರಸ್ತೆಗಳಾದವು. ಈಗ ಇಕ್ಕಟ್ಟೆನಿಸುವ ದಾರಿಗಳು ಈಗಲೂ ಬೆಂಗಳೂರಿನ ಸದಾ ಚಟುವಟಿಕೆಯಿಂದ ಕೂಡಿರುವ ವಾಣಿಜ್ಯದ ಕೇಂದ್ರವಾಗಿವೆ.

ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ಕೆಂಪೇಗೌಡರು ಯಲಹಂಕದಲ್ಲಿದ್ದ ತಮ್ಮ ರಾಜಧಾನಿಯನ್ನು ಬೆಂಗಳೂರಿಗೆ ಬದಲಿಸಿ ಮಣ್ಣಿನ ಕೋಟೆಯನ್ನೂ ಕೂಡ ಕಟ್ಟಿಸಿದರು. ಆಗಲೇ ಇದು ಯಶಸ್ವೀ ವಾಣಿಜ್ಯ ನಗರಿಯಾಗಿ ಇವರ ಕೀರ್ತಿ ಹಬ್ಬಿತು. ಇದರಿಂದ ಪ್ರಭುಗಳು ತಾವು ಸಾಮಂತರೆಂಬುವ ಚೌಕಟ್ಟಿನಿಂದಾಚೆಗೂ ಒಂದು ಹೆಜ್ಜೆ ಇಟ್ಟರು. ಟಂಕಸಾಲೆಯನ್ನು ಸ್ಥಾಪಿಸಿ ತಾವೇ ವೀರಭದ್ರ ವರಹವೆಂದು ನಾಣ್ಯವನ್ನು ಚಲಾವಣೆಗೆ ತಂದರು. ಇದು ವಿಜಯನಗರದ ಆಗಿನ ಅರಸು ಸದಾಶಿವ ರಾಯನನ್ನು ಕೆರಳಿಸಿತು. ಇದು ಕೆಂಪೇಗೌಡರ ಬಂಧನಕ್ಕೆ ಕಾರಣವಾಗಿ ಐದು ವರ್ಷಗಳ ಕಾಲ ಕಾರಾಗೃಹದಲ್ಲಿರಬೇಕಾಯಿತು. ಸದಾಶಿವರಾಯನ ನಂತರ ಪಟ್ಟಕ್ಕೆ ಬಂದ ರಾಮರಾಯ. ಆಗ ಅಹಮದ್ ನಗರ, ಬಿಜಾಪುರ ಮತು ಗೋಲ್ಕಂಡದ ಅರಸರು ಒಟ್ಟಾಗಿ ವಿಜಯನಗರದ ಮೇಲೆ ದಾಳಿ ಮಾಡುವ ಭೀತಿಯಿಂದ ತಮ್ಮ ಅವರು ಖಜಾನೆಯನ್ನು ಹಿಗ್ಗಿಸಿಕೊಳ್ಳಬೇಕಾಗಿತ್ತು. ಹಾಗಾಗಿ ಭಾರೀ ಮೊತ್ತದ ಹಣವನ್ನು ಸಂದಾಯ ಮಾಡುವ ಷರತ್ತಿನ ಮೇಲೆ ಕೆಂಪೇಗೌಡರನ್ನು ಬಿಡುಗಡೆ ಮಾಡಿದರು.

ಹಿರಿಯ ಕೆಂಪೇಗೌಡರ ಮಗ ಇಮ್ಮಡಿ ಕೆಂಪೇಗೌಡರು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿದ್ದೇ ಅಲ್ಲದೇ ಪ್ರಖ್ಯಾತವಾದ ನಾಲ್ಕು ಗೋಪುರಗಳನ್ನು ಕಟ್ಟಿಸಿದರು. ಅವರು ಮಹಾನ್ ಯೋಧರಾಗಿದ್ದರೂ ಬಿಜಾಪುರ ಸುಲ್ತಾನರ ವಿರುದ್ಧವಾಗಿ ಹೋರಾಡಲಾಗಲಿಲ್ಲ. ಬಿಜಾಪುರದ ಸುಸಜ್ಜಿತ ಸೇನೆಯಿಂದ ಕೋಟೆಯ ದ್ವಾರಗಳನ್ನು ತೆರೆಯಲು ಒತ್ತಡ ತಂದಾಗ ವಿಧಿಯಿಲ್ಲದೇ ವಿಜಯಿಗಳಿಗೆ ಬೆಂಗಳೂರನ್ನು ಒಪ್ಪಿಸಿ ಮಾಗಡಿಗೆ ಸರಿಯಬೇಕಾಯಿತು.

ಕುತೂಹಲಕರವಾದ ಸಂಗತಿಯೆಂದರೆ, ಛತ್ರಪತಿ ಶಿವಾಜಿಯ ತಂದೆ ಶಹಜಿ ಭೋನ್‍ಸ್ಲೇ ಬಿಜಾಪುರ ಸೇನೆಯ ಮುಂದಾಳಾಗಿದ್ದವರು. ಶಹಜಿಯ ಶೌರ್ಯದಿಂದ ಸಂಪ್ರೀತನಾದ ಎರಡನೆಯ ಅಲಿ ಆದಿಲ್ ಷಾ ಬೆಂಗಳೂರನ್ನು ಜಹಗೀರಾಗಿ ಶಹಜಿಗೇ ಕೊಟ್ಟರು. ಇದರಿಂದಾಗಿ ಶಹಜಿಯ ಇಬ್ಬರು ಮಕ್ಕಳು ಶಿವಾಜಿ ಮತ್ತು ವೆಂಕೋಜಿ ಇಬ್ಬರೂ ಬೆಂಗಳೂರಲ್ಲಿ ಬೆಳೆದರು. ಶಹಜಿಯ ಮರಣಾನಂತರ ಶಿವಾಜಿಗೆ ಪುಣೆಯ ಭಾಗವೂ, ವೆಂಕೋಜಿಗೆ ಬೆಂಗಳೂರಿನ ಭಾಗವೂ ಲಭಿಸಿತು. ಸ್ವಯಂ ಸೇನಾನಿಯಾಗಿದ್ದ ವೆಂಕೋಜಿಯು ತಂಜಾವೂರನ್ನು ವಶಪಡಿಸಿಕೊಂಡು ತನ್ನ ಕೇಂದ್ರವನ್ನು ಅಲ್ಲಿಗೆ ವರ್ಗಾಯಿಸಲು ಆಲೋಚಿಸಿದರು. ತನ್ನ ತುಂಬಿದ ಕೈಗಳಿಂದಾಗಿ ಬೆಂಗಳೂರಿನ ಬಿರುಸಿನ ಚಟುವಟಿಕೆಗಳನ್ನು ನಿರ್ವಹಿಸುವ ಒತ್ತಡವನ್ನು ತಾಳದೇ ಇದನ್ನು ಚಿಕ್ಕದೇವರಾಜ ಒಡೆಯರಿಗೆ ಮೂರು ಲಕ್ಷ ರೂಪಾಯಿಗಳ ರಾಯಧನಕ್ಕೆ ಮಾರುವ ನಿರ್ಧಾರ ಮಾಡಿದರು.

ಬೆಂಗಳೂರಿನೊಂದಿಗೆ ಬಹಳ ಭಾವನಾತ್ಮಕ ಸಂಬಂಧವಿದ್ದ ಶಿವಾಜಿಗೆ ವೆಂಕೋಜಿಯ ಆಲೋಚನೆ ತಿಳಿದು ಭಲೇ ಕೋಪ ಬಂತು. ಬೆಂಗಳೂರನ್ನು ಮಾರದಿರಲು ತಮ್ಮ ಸೋದರನನ್ನು ಕೋರಿಕೊಂಡರು. ವೆಂಕೋಜಿ ಮತ್ತು ಒಡೆಯರ್ ನಡುವೆ ಮಾತುಕತೆಗಳು ನಡೆಯುತ್ತಿರುವಾಗಲೇ ಶಿವಾಜಿಯ ದೇಹಾಂತ್ಯವಾಯಿತು. ಮೊಘಲರು ಮತ್ತು ಮರಾಠರಿಬ್ಬರೂ ಬೆಂಗಳೂರನ್ನು ವಶಪಡಿಸಿಕೊಳ್ಳುವ ಇರಾದೆಯಲ್ಲಿದ್ದರು. ಆದರೆ, ಮರಾಠರ ದುರದೃಷ್ಟಕ್ಕೆ ಮೊಘಲರ ಸೇನೆ ಮುಂದಾಗಿ ಬಂತು ಮತ್ತು 1687ರಲ್ಲಿ ವೆಂಕೋಜಿಯನ್ನು ಪರಾಜಯಗೊಳಿಸಿತು.

ಹಸನ್ ಗುರುತಿಸುವಂತೆ ಕಾಸ್ಮಾಪಾಲಿಟನ್ (ಸಮದರ್ಶಿ ಅಥವಾ ವಿಶ್ವಪ್ರಜೆ) ಗುಣ ಈ ನಗರದ ಚರಿತ್ರೆಯಲ್ಲೇ ಬೇರುಬಿಟ್ಟಿದೆ. ಮೊಘಲರ ಅಧಿಕಾರಿಗಳು ಮತ್ತು ಯೋಧರು ಪುಶ್ತು, ಪಂಜಾಬಿ, ಗುಜರಾತಿ, ರಾಜಸ್ತಾನಿ, ಮೊಘಲಾಯಿ ಮತು ಪಾರ್ಸಿ ಭಾಷೆಗಳನ್ನು ಆಡುತ್ತಿದ್ದರು. ಸ್ಥಳೀಯರು ಮತ್ತು ಹೊರಗಿಂದ ಬಂದವರಿಗೆ ಸಂಪರ್ಕ ಭಾಷೆಯಾಗಿದ್ದದ್ದು ದಕ್ಷಿಣದಲ್ಲಿ ದಖನಿ ಎಂದು ಕರೆಯಿಸಿಕೊಳ್ಳಲ್ಪಡುವ ರೆಖ್ತಾ ಮತ್ತು ವಿಂಧ್ಯ ಪ್ರಾಂತ್ಯವನ್ನು ದಾಟಿ ರೂಪುಗೊಂಡಿದ್ದ ಉರ್ದು. ಮೊಘಲರು ಬೆಂಗಳೂರಿನಲ್ಲಿ ತಮ್ಮ ಚಟುವಟಿಕೆಗಳಲ್ಲಿ ನಿರತವಾಗಿರುವಾಗಲೇ ಒಡೆಯರ್ ತಮ್ಮ ಬೆಂಗಳೂರು ಕೊಳ್ಳುವ ಪ್ರಸ್ತಾಪವನ್ನು ಮತ್ತೆ ಮುಂದಿಟ್ಟರು. ಆಗ 1690ರಲ್ಲಿ ಮೊಘಲರು ಒಡೆಯರಿಗೆ, ಮೊದಲು ವೆಂಕೋಜಿಯ ಜೊತೆ ಮಾತಾಡಿದ್ದ ಮೊತ್ತಕ್ಕೇ ಮಾರಿದರು.

ಚಿಕ್ಕದೇವರಾಜ ಒಡೆಯರ್ ಕೂಡಾ ಕೆಂಪೇಗೌಡರಂತೆ ಬೆಂಗಳೂರಿನ ಅಭಿವೃದ್ಧಿಗೆ ಹಾತೊರೆದರು. ಆದರೆ ಅವರ ಮರಣಾನಂತರ ತಮ್ಮ ನೆರೆಹೊರೆಯ ಪ್ರಾಂತ್ಯಗಳ ನಿರಂತರ ದಾಳಿ ಮತ್ತು ಕಿರುಕುಳಗಳಿಂದ ಮೈಸೂರು ಸೊರಗಿತು. ಆಗ ಮೈಸೂರು ಅರ್ಕಾಟಿನ ನವಾಬನಿಗೆ ನಾಲ್ಕು ಕೋಟಿಗಳ ಬಾಕಿಯನ್ನು ಸಲ್ಲಿಸಬೇಕಿತ್ತು, ಸಲಾಬತ್ ಜಂಗ್ 56 ಲಕ್ಷ ರೂಪಾಯಿಗಳನ್ನು ಕಸಿದುಕೊಂಡ. ಪೇಶ್ವೆ ಬಾಲಾಜಿ ರಾವ್ ಒತ್ತಾಯಪೂರ್ವಕವಾಗಿ 32 ಲಕ್ಷ ರೂಪಾಯಿಗಳನ್ನು ಪಡೆದರು. ಒಡೆಯರ್ ಅರಸೊತ್ತಿಗೆಯು ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುವಾಗ ನೆರವಿಗೆ ಬಂದಿದ್ದು ಪರಾಕ್ರಮಿ ಯೋಧ ಹೈದರ್ ಅಲಿ. ಮತ್ತೊಮ್ಮೆ ಮರಾಠ ಸೈನ್ಯ ಮೈಸೂರಿನ ಮೇಲೆ ದಾಳಿ ಮಾಡಿದಾಗ ಎದುರಿಸಿದ್ದು ಇದೇ ಹೈದರ್ ಅಲಿ. ತಮ್ಮ ಅರಸೊತ್ತಿಗೆಯನ್ನು ಕಾಪಾಡಿದ್ದಕ್ಕೆ ಸಂತುಷ್ಟಗೊಂಡ ಮೈಸೂರಿನ ಅರಸರು ಫತೇ ಹೈದರ್ ಬಹಾದ್ದೂರ್ ಎಂದು ಬಿರುದು ನೀಡಿ ಗೌರವಿಸಿ ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳನ್ನು ಜಹಗೀರಾಗಿ ನೀಡಿದರು. ಹೈದರ್ ಅಲಿ ಮರಾಠರ ದಾಳಿಗಳನ್ನು ಎದುರಿಸಲು ಕೆಂಪೇಗೌಡರು ಮಣ್ಣಿಂದ ಕಟ್ಟಿದ್ದ ಕೋಟೆಯನ್ನು ಕಲ್ಲಿನಿಂದ ಮರು ನಿರ್ಮಾಣ ಮಾಡಿದ ಮೇಲೆ ಇದು ಸೇನೆಯ ಕೇಂದ್ರವಾಯಿತು. ಶಸ್ತ್ರಾಸ್ತ್ರಗಳು ಮತ್ತು ಯುದ್ಧೋಪಕರಣಗಳ ತಯಾರಿಕೆಗಳಾಗತೊಡಗಿದವು.

ನಂತರ ಬಂದ ಬ್ರಿಟಿಷರು ಬೆಂಗಳೂರಿನ ಮಹತ್ವವನ್ನು ಅರಿತು ಅದನ್ನು ವಶಪಡಿಸಿಕೊಳ್ಳಲು ಯತ್ನಿಸಿದರು. ಮೊದಲಿನ ಪ್ರಯತ್ನಗಳು ವಿಫಲವಾದರೂ 1791ರಲ್ಲಿ ಮಾಡಿದ ಮಹಾಯುದ್ಧದಲ್ಲಿ ಬೆಂಗಳೂರನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ಸು ಸಾಧಿಸಿದರು. ಹಸನ್ ದಾಖಲಿಸುವಂತೆ ಈ ಯುದ್ಧ ಅದೆಷ್ಟು ಭೀಕರವಾಗಿತ್ತೆಂದರೆ ಕೋಟೆಯ ವಿಸ್ತಾರದ ಪ್ರದೇಶಗಳು ಮತ್ತು ಹಳೆಯ ಪಟ್ಟಣ ಜರ್ಜರಿತವಾಗಿ ಅಕ್ಷರಶಃ ಸ್ಮಶಾನವಾಗಿತ್ತು. ಆದರೆ ಒಂದು ವರ್ಷ ತಮ್ಮ ಅಧೀನದಲ್ಲಿಟ್ಟುಕೊಂಡಿದ್ದವರು ನಂತರ ಶ್ರೀರಂಗಪಟ್ಟಣದ ಸಂಧಾನದಂತೆ ಟಿಪ್ಪುವಿಗೆ ಮರಳಿ ನೀಡಬೇಕಾಯಿತು.

1799ನಲ್ಲಿ ಟಿಪ್ಪುವಿನ ಮರಣಾನಂತರ ಬೆಂಗಳೂರನ್ನು ಒಡೆಯರವರ ಅಧೀನಕ್ಕೆ ನೀಡಲಾಯಿತು. 1809ರಲ್ಲಿ ಬ್ರಿಟಿಷರು ಬೆಂಗಳೂರು ನಗರದಲ್ಲಿ ಸೇನೆಯ ದಂಡುಪ್ರದೇಶವನ್ನು (ಕಂಟೋನ್ಮೆಂಟ್) ನಿರ್ಮಿಸಿದರು. ಈ ದಂಡು ಪ್ರದೇಶ ವಿಸ್ತಾರವಾದಂತೆ ನಗರದ ಭಾಗವಾಗಿಬಿಟ್ಟಿತು. ಇಲ್ಲೊಂದು ವಿಲಕ್ಷಣ ಸನ್ನಿವೇಶವಿತ್ತು. ಅದೇನೆಂದರೆ, ಮೈಸೂರು ಮಹಾರಾಜರು ನಗರ ಭಾಗದ ಮುಖ್ಯಸ್ಥರಾದರೆ, ದಂಡುಪ್ರದೇಶದ ಯಜಮಾನಿಕೆ ಬ್ರಿಟಿಷರಲ್ಲಿಯೇ ಇತ್ತು. ಸ್ವಾತಂತ್ರ್ಯ ಹೋರಾಟವು ತೀವ್ರತೆಯನ್ನು ಪಡೆದುಕೊಳ್ಳುತ್ತಿದ್ದ ಸಮಯವದು. ಮಹಾರಾಜರು ದಂಡುಪ್ರದೇಶವೂ ತಮ್ಮ ಅಧಿಪತ್ಯಕ್ಕೇ ಒಳಪಡಬೇಕೆಂದು ಒತ್ತಾಯಿಸತೊಡಗಿದರು. ಭಾರತವು ಸ್ವಾತಂತ್ರ್ಯದ ಹೊಸ್ತಿಲಿನಲ್ಲಿರುವಾಗಲೇ 1947ನೇ ವರ್ಷದಲ್ಲೇ ಜುಲೈ 26ರಂದು ಬ್ರಿಟಿಷರು ದಂಡುಪ್ರದೇಶವನ್ನು ಮಹಾರಾಜರಿಗೆ ನೀಡಿದರು. ಎರಡು ವರ್ಷಗಳ ತರುವಾಯ, 1948ರಲ್ಲಿ ಕಂಟೋನ್ಮೆಂಟ್ ಪ್ರದೇಶವು ಬೆಂಗಳೂರು ನಗರದೊಳಗೇ ಸೇರಲ್ಪಟ್ಟು ಬೆಂಗಳೂರು ಮುನ್ಸಿಪಲ್ ಕಾರ್ಪೋರೇಶನ್ ರಚನೆಯಾಯಿತು.

ಇಲ್ಲಿಗೆ ಗೌರಿ ಲಂಕೇಶ್ ಪುಸ್ತಕದ ಬಗ್ಗೆ ಬರೆಯುವಲ್ಲಿ ಲೇಖನಿಗೆ ವಿರಾಮ ನೀಡುತ್ತಾರೆ.

175 ಪುಟಗಳ ಈ ಪುಸ್ತಕದಲ್ಲಿ ಎಂ ಫಜ್ಲುಲ್ ಹಸನ್ ಹಲವಾರು ಹಳೆಯ ಚಿತ್ರಗಳ ದಾಖಲೆಗಳನ್ನು ನೀಡುತ್ತಾರೆ. ಗವಿಗಂಗಾಧರೇಶ್ವರ ಸ್ವಾಮಿ ದೇವಸ್ಥಾನದಂತಹ ಐತಿಹಾಸಿಕ ಮಹತ್ವದ ಅನೇಕ ದೇವಾಲಯಗಳ ಚರಿತ್ರೆಯನ್ನೂ, ಬೆಂಗಳೂರಿನ ಪ್ರಖ್ಯಾತ ಕರಗವು ಮೈದಳೆದಿರುವುದನ್ನೂ ವಿವರಿಸುತ್ತಾರೆ. ಬೆಂಗಳೂರಿನ ಮುಖ್ಯ ಆಯುಕ್ತರ ಕಚೇರಿಗಳು ಮತ್ತು ಇತರ ಸಾರ್ವಜನಿಕ ಕಚೇರಿಗಳು ಸ್ಥಾಪಿತವಾಗಿ ಬೆಳೆದುಬಂದ ರೀತಿಯನ್ನು ವಿವರಿಸುತ್ತಾರೆ. ಬೆಂಗಳೂರು ಉದ್ಯಾನ ನಗರವಾಗಿರುವುದರ ಐತಿಹಾಸಿಕ ವಿವರಗಳೊಂದಿಗೆ ಪುಸ್ತಕವನ್ನು ಮುಗಿಸುತ್ತಾರೆ. ಒಟ್ಟಾರೆ ನಾವಿರುವ ನೆಲದ ಕತೆ ಅದೆಷ್ಟು ಥ್ರಿಲ್ ಆಗಿದೆ ಎಂದು ಪುಳಕಗೊಳ್ಳಲು ಪುಸ್ತಕ ಪ್ರೇರೇಪಿಸುತ್ತದೆ. ಜಯನಗರದ ಹಿಸ್ಟಾರಿಕಲ್ ಪಬ್ಲಿಕೇಶನ್ಸ್ 1970ರಲ್ಲಿ ಇದನ್ನು ಪ್ರಕಟಿಸಿದ್ದು ಸದ್ಯಕ್ಕೆ ಪ್ರತಿಗಳು ಸಿಗುವ ಅವಕಾಶದ ಬಗ್ಗೆ ತಿಳಿಯದು. ಆದರೆ Digital Rare Book ನ ರೇರ್ ಬುಕ್ ಸೊಸೈಟಿ ಆಫ್ ಇಂಡಿಯಾದ ಅಂತರ್ಜಾಲದಲ್ಲಿ ಪಿಡಿಎಫ್ ಡೌನ್ಲೋಡ್ ಮಾಡಿಕೊಂಡು ಇಡೀ ಪುಸ್ತಕ ಓದಬಹುದು.


ಇದನ್ನೂ ಓದಿ: ಪುಟಕಿಟ್ಟ ಪುಟಗಳು: ದಿವ್ಯ ಜೀವನಕೆ ಪ್ರವೇಶಿಕೆ ಎಂಬ ಆಪ್ತ ಸಮಾಲೋಚನೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...